Homeಚಳವಳಿಮದ್ಯದ ವಿರುದ್ಧ ಕದಲಿದ ಮಹಿಳೆಯರ ಪಾದಗಳು

ಮದ್ಯದ ವಿರುದ್ಧ ಕದಲಿದ ಮಹಿಳೆಯರ ಪಾದಗಳು

- Advertisement -
- Advertisement -

ಕೆ.ಪಿ.ಸುರೇಶ |

ಮದ್ಯ ನಿಷೇಧಕ್ಕೆ ಆಗ್ರಹಿಸಿ ಸಾವಿರಾರು ಮಹಿಳೆಯರು ಚಿತ್ರದುರ್ಗದಿಂದ ವಿಧಾನಸೌಧಕ್ಕೆ ಪಾದಯಾತ್ರೆ ಮಾಡುತ್ತಿದ್ದಾರೆ. ಇದೊಂದು ಚಾರಿತ್ರಿಕ ಬೆಳವಣಿಗೆ. ಆದರೆ ಈ ಬಗ್ಗೆ ನಮ್ಮ ರಾಜಕೀಯ ಪಕ್ಷಗಳಷ್ಟೇ ಅಲ್ಲ ಒಟ್ಟಾರೆ ನಾಗರಿಕ ಸಮಾಜದ ಪ್ರತಿಕ್ರಿಯೆ ನಿರಾಶಾದಾಯಕವಾಗಿದೆ.
ರಾಜಕೀಯ ಪಕ್ಷಗಳ ನಿಲುವು ನಿರೀಕ್ಷಿತ. ನಮ್ಮ ಸರಕಾರಗಳು ಈ ದುಡ್ಡಿನಿಂದಲೇ ನಡೆಯುವುದು ಎಂಬ ನಂಬಿಕೆ ಇವಕ್ಕಿದೆ. ಸರ್ಕಾರವೂ ಇದೊಂದು ಅನಿವಾರ್ಯ ಚಟವೆಂಬಂತೆ ಬಿಂಬಿಸಿದೆ. ಆದರೆ ಆರ್ಥಿಕ ವಿವರಗಳನ್ನು ನೋಡಿದರೆ ಸರ್ಕಾರಕ್ಕಿರುವ ಆದಾಯ ಸುಮಾರು 18 ಸಾವಿರ ಕೋಟಿ ಎಂದು ಅಂಕಿಅಂಶಗಳು ಹೇಳುತ್ತಿವೆ. ಈ ಮೊತ್ತ ಅಷ್ಟೇನೂ ದೊಡ್ಡದಲ್ಲ. ಎರಡು ದಶಕಗಳ ಮೊದಲು ಬೇರೆ ಸೇವಾ ತೆರಿಗೆಗಳೇ ಇಲ್ಲದ ಕಾಲದಲ್ಲಿ ಮದ್ಯದ ತೆರಿಗೆಯೇ ಪ್ರಮುಖ ಆದಾಯ ಮೂಲವಾಗಿತ್ತು ಎಂಬುದು ನಿಜ. ಆದರೆ ಪ್ರಸ್ತುತ ಇದು ಅಷ್ಟೇನೂ ನಿಜವಲ್ಲ. ಇಂದು ಇzರ ಪ್ರಾಮುಖ್ಯತೆ ಬೇರೆ ಕಾರಣಕ್ಕಾಗಿ ಇದೆ. ಈ ಮದ್ಯದ ಅಂಗಡಿ, ಬಾರುಗಳು ರಾಜಕೀಯ ನೇತಾರರ ನೆಚ್ಚಿನ ಕಾಳಧನದ ಮೂಲ. ಅಷ್ಟೇ ಅಲ್ಲ ಚುನಾವಣಾ ಕಾಲದಲ್ಲಿ ನೆಚ್ಚಿಕೊಳ್ಳಬಹುದಾದ ಸರಬರಾಜು ಮೂಲ.
ಮುಖ್ಯತಃ ಈ ಪಾದಯಾತ್ರೆ ನಮ್ಮ ಒಟ್ಟಾರೆ ಸಮಾಜದ ಪುರುಷಪ್ರಧಾನ ಉಡಾಫೆಯನ್ನು ಅನಾವರಣಗೊಳಿಸಲಿದೆ. ಶೇ. ಐವತ್ತರಷ್ಟು ಇರುವ ಮಹಿಳೆಯರು, ಮತ್ತದರ ಅರ್ಧದಷ್ಟಿರುವ ಮಕ್ಕಳನ್ನು ಬಿಟ್ಟರೆ ಉಳಿಯುವ ಶೇ.25 ಗಂಡಸರಲ್ಲಿ ಕುಡುಕರೆಷ್ಟು? ಪೂರಾ ಅಂದರೂ ಅವರೇನು ಬಹುಮತವಲ್ಲ. ಇದಿಷ್ಟೇ ಸಾಕು ಸರ್ಕಾರದ ಅಷಾಡಭೂತಿತನವನ್ನು ಬೆತ್ತಲೆಗೊಳಿಸಲು.
ಕುಡಿತದ ಸಾಮಜಿಕ ಆರ್ಥಿಕ ಮತ್ತು ಆರೊಗ್ಯದ ಮೇಲಿನ ದುಷ್ಪರಿಣಾಮಗಳ ಬಗ್ಗೆ ಹೊಸತೇನೂ ಹೇಳಬೇಕಿಲ್ಲ. ಒಂದು ದಿನ ಮುಸ್ಸಂಜೆ ಯಾವುದೇ ಊರಲ್ಲಿ ನಿಂತರೂ ಇದು ಕಾಣಿಸುತ್ತೆ.
ಆದರೂ ದೇಶದ ಪ್ರತಿಷ್ಠಿತ ನರ ಆರೋಗ್ಯ ಸಂಸ್ಥೆ ನಿಮ್ಹಾನ್ಸ್ ಇತ್ತೀಚೆಗೆ ಪ್ರಕಟಿಸಿರುವ ಅಧ್ಯಯನ ವರದಿ ಈ ಕೇಡಿನ ಪರಿಣಾಮಗಳ ಬಗ್ಗೆ ಛಳಿ ಹುಟ್ಟಿಸುವಂಥಾ ವಿವರಗಳನ್ನು ಮುಂದಿಟ್ಟಿದೆ.
ಭಾರತದಲ್ಲಿ ವರುಷಕ್ಕೆ 230 ಕೋಟಿ ಲೀಟರ್ ಮದ್ಯ ಉತ್ಪಾದನೆಯಾಗುತ್ತದೆ. ಅಂದರೆ ಸುಮಾರು ತಲಾ 2 ಲೀಟರ್!! ಹತ್ತು ವರುಷಗಳ ಹಿಂದೆಯೇ ಇದರಿಂದ ಬರುತ್ತಿದ್ದ ರಾಜಸ್ವ 40 ಸಾವಿರ ಕೋಟಿ. ಆದಾಯ ಎಲ್ಲಿಂದ ಬರುತ್ತಿದೆ ಎಂಬ ನೈತಿಕ ಪ್ರಶ್ನೆಯನ್ನು ಸರ್ಕಾರ ಎಂದೂ ತನಗೆ ತಾನೇ ಹಾಕಿಕೊಂಡಿಲ್ಲ.
ನಿಮ್ಹಾನ್ಸ್ ಅಧ್ಯಯನದ ಪ್ರಕಾರ ಶೇ. 30-35 ಗಂಡಸರು ಮದ್ಯಪಾನ ಮಾಡುತ್ತಾರೆ. ಶೇ.5ರಷ್ಟು ಮಹಿಳೆಯರೂ ಮದ್ಯಪಾನಿಗಳು.
ಆತಂಕ ಹುಟ್ಟಿಸುವ ಸಂಗತಿ ಎಂದರೆ ‘80ರ ದಶಕದಲ್ಲಿ ಮದ್ಯಪಾನ ಆರಂಭಿಸುವ ವಯಸ್ಸು 28 ಆಗಿತ್ತು. ಆದರೆ ಇದು 2007ರ ವೇಳೆಗೆ ಇದು 17ಕ್ಕಿಳಿದಿತ್ತು. ಇವರಲ್ಲಿ ಅರ್ಧಕ್ಕರ್ಧ ಮಂದಿ ಅಪಾಯಕಾರಿ ಮಟ್ಟದ ಕುಡಿತದ ಚಟ ಅಂಟಿಸಿಕೊಳ್ಳುತ್ತಾರೆ.
ಅಧ್ಯಯಯನಗಳ ಪ್ರಕಾರ ಕುಡಿತಕ್ಕಂಟಿದವರಲ್ಲಿ ಶೇ.20 ಮಂದಿ ಬೇಗನೆ ಸಾವನ್ನಪ್ಪುತ್ತಾರೆ. ಅಪಘಾತ, ಗಾಯಗಳೂ ಕುಡುಕರಿಗೇ ಜಾಸ್ತಿ. ಶೇ. 25ರಷ್ಟು ರಸ್ತೆ ಅಪಘಾತ ಮತ್ತು ಸಾವುಗಳು ಮದ್ಯ ಸಂಬಂಧೀ. ಮಹಿಳೆಯರು ಮತ್ತು ಮಕ್ಕಳ ಮೇಲಿನ ಕೌಟುಂಬಿಕ ಹಿಂಸೆಯ ಅರ್ಧಾಂಶ ಈ ಕುಡಿತದ ಕಾರಣಕ್ಕೆ ನಡೆಯುತ್ತಿರುತ್ತೆ. ಶೇ.25ರಷ್ಟು ಪಾಶ್ರ್ವವಾಯು ಪೀಡಿತರು ಮದ್ಯವ್ಯಸನಿಗಳಾಗಿದ್ದಾರೆ. ಲಿವರ್ ಕಾಯಿಲೆಯಂತೂ ಬಹುತೇಕ ಕುಡಿತದ ಪರಿಣಾಮದಿಂದಲೇ ಎಂಬುದೂ ಸಿದ್ಧವಾಗಿದೆ.
ಇದರ ಸಾಮಾಜಿಕ ಪರಿಣಾಮಗಳಲ್ಲಿ ಕೆಲಸಕ್ಕೆ ಗೈರು ಹಾಜರಾಗುವುದು, ಕುಂಠಿತ ಆರೋಗ್ಯ, ಮಕ್ಕಳಿಗೆ ಶಿಕ್ಷಣದಲ್ಲಾಗುವ ತೊಡಕು ಹೀಗೆ ಹತ್ತು ಹಲವು ಬಗೆಯ ವಿವರಗಳಿಗೆ ಅಧ್ಯಯನಗಳೇ ಬೇಕಿಲ್ಲ ತಾನೇ?
ಆರ್ಥಿಕವಾಗಿ, ಇದರ ಆದಾಯ ನೆಚ್ಚಿಕೊಂಡಿರುವ ಸರ್ಕಾರ ಎಂಥಾ ಮೂರ್ಖವಾಗಿದೆಯೆಂದರೆ ಒಂದು ಅಧ್ಯಯನದ ಪ್ರಕಾರ ಹೆಂಡದ ಆದಾಯ 20 ಸಾವಿರ ಕೋಟಿ ಇದ್ದರೆ, ಹೆಂಡದ ಪರಿಣಾಮದಿಂದ ಸರ್ಕಾರಕ್ಕೆ ಆರೋಗ್ಯ ವ್ಯವಸ್ಥೆ ಮತ್ತಿತರ ಕಾರಣಕ್ಕಾಗುವ ವೆಚ್ಚ 24 ಸಾವಿರ ಕೋಟಿ. (ಇದು 2004ರ ಲೆಕ್ಕಾಚಾರ!!).
ಇನ್ನಷ್ಟು ಆತಂಕಕಾರೀ ವಿವರಗಳು ನಿಮ್ಹಾನ್ಸ್ ಅಧ್ಯಯನದಲ್ಲಿದೆ. ಮುಖ್ಯವಾಗಿ ಕುಡಿತದಿಂದಾಗುವ ಆರೋಗ್ಯ, ಸಾಮಾಜಿಕ, ಕೌಟುಂಬಿಕ ಅನಾಹುತಗಳಿಗೆ ಸರ್ಕಾರ ತೆರುವ ಬೆಲೆ ಅದರಿಂದ ಹುಟ್ಟುವ ಆದಾಯಕ್ಕಿಂತ ಜಾಸ್ತಿ ಎಂಬುದು ಗಮನಾರ್ಹ. ಇಂಥಾ ವೈದ್ಯಕೀಯ ವೃತ್ತಿಪರ ಸಂಸ್ಥೆಗಳ ಸೂಚಿಗಳನ್ನು ಸರ್ಕಾರ ಗೌರವಿಸಿದ್ದಿಲ್ಲ. ಆದರೆ ತುಲನಾತ್ಮಕವಾಗಿ ಗಮನಿಸಿ:
ಒಂದು ಕೀಟನಾಶಕದ ಬಗ್ಗೆ ಅಥವಾ ಮ್ಯಾಗೀ ನೂಡಲ್ ಬಗ್ಗೆ ಸರ್ಕಾರದ ಸಂಸ್ಥೆಯೊಂದು ವರದಿ ಕೊಟ್ಟರೆ ಮಾಧ್ಯಮಗಳು ಕೋಲಾಹಲವೆಬ್ಬಿಸುತ್ತವೆ. ಒತ್ತಡ ಗುಂಪುಗಳು ಹೌಹಾರಿ ಸರ್ಕಾರದ ಮೇಲೆ ಒತ್ತಡ ತರುತ್ತವೆ. ನಿಷೇಧ ಸಹಿತ ಹತ್ತು ಹಲವು ಕ್ರಮಗಳನ್ನು ಸರ್ಕಾರ ಮಿಂಚಿನ ವೇಗದಲ್ಲಿ ಜರುಗಿಸುತ್ತದೆ.
ಹೆಂಡದ ಬಗ್ಗೆ ಮಾತ್ರಾ ಅತ್ತ ಪರಿಣಿತರ ಅಧ್ಯಯನ, ಇತ್ತ ಕಣ್ಣಿಗೇ ಗಿಡಿಯುವ ನಿತ್ಯ ವರದಿಗಳಿದ್ದರೂ ಸರ್ಕಾರ ಗಮನಿಸುವುದಿಲ್ಲ. ಏನಿದರ ಅರ್ಥ?
ಸೊಷಿಯಲ್ ಡ್ರಿಂಕಿಂಗ್ ಅಂತ ಒಂದಿದೆ. ಅಂದರೆ ಆಗೀಗ ಮೋಜಿಗಾಗಿ ಕುಡಿಯುವುದು. ಇದನ್ನು ತಡೆಯಲಾಗದು. ಮನುಷ್ಯನ ಆದಿಮ ವ್ಯಸನ ಇದು ಎಂದೆಲ್ಲಾ ವಾದ ಇದೆ. ಚಾರಿತ್ರಿಕವಾಗಿ ಗಮನಿಸಬೇಕಾದ್ದು ಭಾರತದಲ್ಲಿ ಆಧುನಿಕ ಪಾಶ್ಚಿಮಾತ್ಯ ರಸಾಯನ ಶಾಸ್ತ್ರದ ಉತ್ಪನ್ನಗಳು ಪ್ರವೇಶಿಸುವ ಮೊದಲು ನಮ್ಮಲ್ಲಿದ್ದ ಮದ್ಯದ ಅಲ್ಕೋಹಾಲ್ ಪ್ರಮಾಣ ಅಷ್ಟೇನೂ ಅಪಾಯಕಾರಿಯಾಗಿರಲಿಲ್ಲ. ಇಂದಿಗೂ ಆದಿವಾಸಿ ಪಂಗಡಗಳು ಬಿಡಿ, ನಮ್ಮ ಕೊಡಗು ಮಲೆನಾಡುಗಳಲ್ಲೂ ವಿಶಿಷ್ಟ ಮದ್ಯಗಳನ್ನು ತಯಾರಿಸುವುದಿದೆ. ಇವೆಲ್ಲಾ ತೀರಾ ಅಪಾಯಕಾರೀ ಮದ್ಯಸಾರದ ಪ್ರಮಾಣ ಹೊಂದಿಲ್ಲ.
ಆಧುನಿಕ ಮದ್ಯಗಳ ಪ್ರವೇಶ ಆಗಿದ್ದೇ ನಮ್ಮ ಪಾರಂಪರಿಕ ಗ್ರಾಮವಾಸಿಗಳು ಪಂಗಡಗಳೂ ಈ ಅಪಾಯಕಾರೀ ಅಲ್ಕೋಹಾಲ್ ಪ್ರಮಾಣವಿರುವ ಮದ್ಯಕ್ಕೆ ಶರಣಾಗಿದ್ದಾರೆ. ಇಂದಿಗೂ ಹಳ್ಳಿಗಳ ಕುಡುಕರನ್ನು ಕೇಳಿದರೆ ಕಂಟ್ರಿ ಸರಾಯಿ ಬಗ್ಗೆ ಮಾತಾಡುತ್ತಾರೆ.
ಇದರರ್ಥ ಇಷ್ಟೇ. ಈ ಚಟ ಕ್ರಮೇಣ ಎಲ್ಲಾ ಚಟಗಳಂತೆ ಹೆಚ್ಚು ಹೆಚ್ಚು ಪ್ರಮಾಣದ ಕುಡಿತವನ್ನು ಪ್ರೇರೇಪಿಸುತ್ತಾ ಹೋಗುತ್ತದೆ.
ಒಂದೆಡೆ ಗ್ರಾಮೀಣ ರೈತನ ಕೌಟುಂಬಿಕ ಆದಾಯ ದಿನಕ್ಕೆ ಕೇವಲ ರೂ.200 ಎಂದು ಮರುಗುವ ಸರ್ಕಾರ ಇದೇ ಕುಟುಂಬದ ಗಂಡಸೊಬ್ಬ ಈ ಮೊತ್ತವನ್ನು ಹೆಂಡಕ್ಕೆ ವ್ಯಯಿಸುವುದರ ಬಗ್ಗೆ ಗೊತ್ತಿದ್ದೂ ಮೌನ ತಾಳುತ್ತದೆ.
ಹಳ್ಳಿಯ ಗೂಡಂಗಡಿಗಳಲ್ಲೂ ಮದ್ಯ ಮಾರಾಟವಾಗುವುದು ಬಹಿರಂಗವಾಗಿದ್ದರೂ ಇಲಾಖೆಗಳಾಗಲೀ ಜನಪ್ರತಿನಿಧಿಗಳಾಗಲೀ ಈ ಬಗ್ಗೆ ಕ್ರಮಕೈಗೊಂಡ ಉದಾಹರಣೆ ಇದೆಯೇ?
ಅರ್ಥಾತ್ ಈ ಮದ್ಯ ಎಂಬುದು ಕೌಟುಂಬಿಕ ನೆಮ್ಮೆದಿ, ಆರೋಗ್ಯಕ್ಕೆ ಮಾರಕವಾಗಿದೆಯಷ್ಟೇ ಅಲ್ಲ, ನಮ್ಮ ಸಾರ್ವಜನಿಕ ಜೀವನವನ್ನು ಭ್ರಷ್ಟಗೊಳಿಸುವಲ್ಲೂ ಮಹತ್ವದ ಪಾತ್ರ ವಹಿಸಿದೆ.
ಈ ಹಿಂದೆ ಕರ್ನಾಟಕದ ಮಹತ್ವದ ಹೋರಾಟಗಳನ್ನೂ ಮಹಿಳೆಯರೇ ಮುನ್ನಡೆಸಿದ್ದರು ಎಂಬುದನ್ನು ನೆನಪಿಸಿಕೊಂಡರೆ ಈ ಪಾದಯಾತ್ರೆ ನಿರ್ಣಾಯಕವಾಗುವ ಲಕ್ಷಣ ಕಾಣಿಸುತ್ತಿದೆ. ನಾಳೆಗೇ ಈ ಮಹಿಳೆಯರು ಗೆಲ್ಲುತ್ತಾರೆಂಬ ಭ್ರಮೆ ಈ ಮಹಿಳೆಯರಿಗೂ ಇಲ್ಲ. ಆದರೆ ಮುಂಬರುವ ದಿನಗಳಲ್ಲಿ ಕಿರಗೂರಿನ ಗಯ್ಯಾಳಿಗಳು ಕಥೆಯಲ್ಲಿ ಸ್ಫೋಟವಾಗುವ ಆಕ್ರೋಶ ರಾಜ್ಯದ ಹಳ್ಳಿಹಳ್ಳಿಗಳಲ್ಲೂ ಮೊಳಕೆ ಒಡೆಯಲಿದೆ.
ಈಗ ಉಡಾಫೆ, ಕಿತಾಪತಿಯಲ್ಲಿ ಈ ಹೋರಾಟವನ್ನು ನೋಡುತ್ತಿರುವ ಪಕ್ಷಗಳಿಗೂ ಈ ಬಿಸಿ ತಟ್ಟಲಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಜಾನಪದ ಕಲಾವಿದ ಡಿಂಗ್ರಿ ನರಸಪ್ಪ, ಬೆಂಗಳೂರಿನ ಚಂದ್ರಮ್ಮ ಸೇರಿದಂತೆ ಐದು ಜನರಿಗೆ ಬಾಬು ಜಗಜೀವನ್‌ ರಾಮ್‌ ಪ್ರಶಸ್ತಿ

ಹಿರಿಯ ಜಾನಪದ ಕಲಾವಿದ ಡಿಂಗ್ರಿ ನರಸಪ್ಪ, ಬೆಂಗಳೂರಿನ ಚಂದ್ರಮ್ಮ ಸೇರಿದಂತೆ ಐದು ಜನ ಹಿರಿಯ ಸಾಧಕರು 2026ನೇ ಸಾಲಿನ ಬಾಬು ಜಗಜೀವನ್‌ ರಾಮ್‌ ಪ್ರಶಸ್ತಿಗೆ ಭಾಜನರಾಗಿದ್ದಾರೆ. ರಾಯಚೂರು ಜಿಲ್ಲೆಯ ಹಿರಿಯ ದಲಿತ ಹೋರಾಟಗಾರ...

ಗಾಜಾ; ಗೊಂಬೆಯೊಂದಿಗೆ ‘ಅಂತ್ಯಕ್ರಿಯೆ’ ಆಟ ಆಡುವ ಎಳೆಯ ಮಕ್ಕಳ ವಿಡಿಯೋ ವೈರಲ್; ಸುತ್ತಲಿನ ಘಟನೆಯನ್ನು ಪುನರಾವರ್ತಿಸುವ ಮಕ್ಕಳು

ಅಕ್ಟೋಬರ್ 2023 ರಲ್ಲಿ ಇಸ್ರೇಲಿ ಮಿಲಿಟರಿ ದಾಳಿಯನ್ನು ಪ್ರಾರಂಭಿಸಿದ ನಂತರ ಗಾಜಾದಿಂದ ದುಃಖಕರ ದೃಶ್ಯಗಳು ಹೊರಹೊಮ್ಮುತ್ತಿವೆ. ಇತ್ತೀಚಿನ ಒಂದು ಘಟನೆಯಲ್ಲಿ, ಚಿಕ್ಕ ಮಕ್ಕಳು ಅಂತ್ಯಕ್ರಿಯೆಗಾಗಿ ಗೊಂಬೆಯನ್ನು ಹೊತ್ತುಕೊಂಡು ಹೋಗುವುದನ್ನು ಕಾಣಬಹುದು - ಇದು ಅವರು...

ದೆಹಲಿ| ಆಳವಾದ ಚರಂಡಿಗೆ ಬಿದ್ದು ನೈರ್ಮಲ್ಯ ಕಾರ್ಮಿಕ ಸಾವು; ನ್ಯಾಯಕ್ಕೆ ಆಗ್ರಹಿಸಿದ ಮೃತನ ಕುಟುಂಬ

ಮಾರ್ಚ್ 30 ರಂದು ಪೂರ್ವ ದೆಹಲಿಯ ದಿಲ್ಶಾದ್ ಗಾರ್ಡನ್ ಪ್ರದೇಶದಲ್ಲಿ ಸುರಕ್ಷತಾ ಸಾಧನಗಳಿಲ್ಲದೆ ಆಳವಾದ ಚರಂಡಿ ಸ್ವಚ್ಛಗೊಳಿಸುವ ಸಮಯದಲ್ಲಿ ಯುವ ನೈರ್ಮಲ್ಯ ಕಾರ್ಮಿಕ ರಾಹುಲ್ ಎಂಬುವವರು ಸಾವನ್ನಪ್ಪಿದ್ದಾರೆ. ಮಧ್ಯಾಹ್ನ 2:00 ರ ಸುಮಾರಿಗೆ...

ನಿವೃತ್ತ ನ್ಯಾಯಮೂರ್ತಿ ಸಂತೋಷ್‌ ಹೆಗ್ಡೆ ಆಸ್ಪತ್ರೆಗೆ ದಾಖಲು; ಕಾರ್ಯಕ್ರಮದಲ್ಲಿ ಏಕಾಏಕಿ ಕುಸಿದು ಬಿದ್ದು ಅಸ್ವಸ್ಥ

ಬೆಂಗಳೂರು: ಕರ್ನಾಟಕದ ನಿವೃತ್ತ ಲೋಕಾಯುಕ್ತ ಎನ್‌.ಸಂತೋಷ್‌ ಹೆಗ್ಡೆ ಅವರ ಆರೋಗ್ಯದಲ್ಲಿ ಏರುಪೇರು ಉಂಟಾಗಿದ್ದು, ಭಾಷಣದ ವೇಳೆ ಕುಸಿದು ಬಿದ್ದು ಅಸ್ವಸ್ಥರಾಗಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಏಪ್ರಿಲ್ 4ರ, ಶುಕ್ರವಾರ ಬೆಂಗಳೂರಿನ ಕೊಂಡಜಿ ಬಸಪ್ಪ ಸಭಾಂಗಣದಲ್ಲಿ...

ಎಸ್‌ಎಸ್‌ಎಲ್‌ಸಿಯಲ್ಲಿ ತೃತೀಯ ಭಾಷೆಗೆ ಗ್ರೇಡ್: ನಿರ್ಧಾರ ಪರಿಶೀಲಿಸುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿದ ರಾಜ್ಯಪಾಲ ಗೆಹ್ಲೋಟ್ 

ಬೆಂಗಳೂರು: 10ನೇ ತರಗತಿ ಪರೀಕ್ಷೆಯಲ್ಲಿ ತೃತೀಯ ಭಾಷೆಯ ವಿಷಯಕ್ಕೆ ಅಂಕಗಳನ್ನು ಬದಲಿಸುವ ನಿರ್ಧಾರವನ್ನು ಮರುಪರಿಶೀಲಿಸುವಂತೆ ಕರ್ನಾಟಕ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ರಾಜ್ಯ ಸರ್ಕಾರವನ್ನು ಕೇಳಿದ್ದಾರೆ. ಸರ್ಕಾರವು ಈ ನಿರ್ಧಾರವನ್ನು "ಸಮಗ್ರವಾಗಿ ಪರಿಶೀಲಿಸಬೇಕು" ಎಂದು ಲೋಕಭವನವು...

ತಿರುಚ್ಚಿ ಪೂರ್ವದ ಪೆರಂಬೂರಿನಲ್ಲಿ ಟಿವಿಕೆ ಸಂಸ್ಥಾಪಕ ವಿಜಯ್ ಸಲ್ಲಿಸಿದ ಅಫಿಡವಿಟ್‌ಗಳಲ್ಲಿ ಹಲವು ವ್ಯತ್ಯಾಸಗಳಿರುವುದಾಗಿ ವರದಿ  

ಚೆನ್ನೈ: ನಟ ಮತ್ತು ಟಿವಿಕೆ ಸಂಸ್ಥಾಪಕ ವಿಜಯ್ ಸಲ್ಲಿಸಿದ ಎರಡು ಪ್ರತ್ಯೇಕ ಚುನಾವಣಾ ಅಫಿಡವಿಟ್‌ಗಳಲ್ಲಿ ವ್ಯತ್ಯಾಸಗಳು ಕಾಣಿಸಿಕೊಂಡಿದ್ದು, ವಿಧಾನಸಭಾ ಚುನಾವಣೆಗೆ ಮುನ್ನ ಕಾನೂನು ಮತ್ತು ರಾಜಕೀಯ ಪರಿಶೀಲನೆಗೆ ಅವಕಾಶ ನೀಡುವ ಸಾಧ್ಯತೆಯಿದೆ. ಪೆರಂಬೂರು ಮತ್ತು...

ಉತ್ತಮ್ ನಗರದಲ್ಲಿ ಶಾಂತಿ ಕಾಪಾಡುವಲ್ಲಿ ದೆಹಲಿ ಪೊಲೀಸರ ಪ್ರಯತ್ನಗಳನ್ನು ಶ್ಲಾಘಿಸಿದ ಎಪಿಸಿಆರ್

ಈದ್ ಅಲ್-ಫಿತರ್, ರಾಮ ನವಮಿ ಮತ್ತು ಹನುಮಾನ್ ಜಯಂತಿ ಸೇರಿದಂತೆ ಧಾರ್ಮಿಕ ಹಬ್ಬಗಳ ಆಚರಣೆಯ ಸಂದರ್ಭದಲ್ಲಿ ರಾಷ್ಟ್ರ ರಾಜಧಾನಿಯ ಉತ್ತಮ್ ನಗರ ಪ್ರದೇಶದಲ್ಲಿ ಶಾಂತಿ ಮತ್ತು ಭದ್ರತೆಯನ್ನು ಕಾಪಾಡಿದ್ದಕ್ಕಾಗಿ ನಾಗರಿಕ ಹಕ್ಕುಗಳ ರಕ್ಷಣಾ...

ದಲಿತ ಸಮುದಾಯಕ್ಕೆ ಕ್ಷಮೆಯಾಚಿಸಿದ ನೇಪಾಳದ ಹೊಸ ಸರ್ಕಾರ

ಪ್ರಧಾನಿ ಬಾಲೇಂದ್ರ ಶಾ ಅವರ ನೇಪಾಳದ ಹೊಸ ಸರ್ಕಾರದ 100 ಅಂಶಗಳ ಸುಧಾರಣಾ ಕಾರ್ಯಸೂಚಿಯಡಿಯಲ್ಲಿ, ಮುಂದಿನ 15 ದಿನಗಳ ಒಳಗೆ ದಲಿತರು ಮತ್ತು ಐತಿಹಾಸಿಕವಾಗಿ ಹೊರಗಿಡಲ್ಪಟ್ಟ ಇತರೆ ಸಮುದಾಯಗಳಿಗೆ 'ಔಪಚಾರಿಕ ಕ್ಷಮೆಯಾಚನೆ' ಕೇಳುವುದಾಗಿ...

‘ಯಾರು ಹೆದರುತ್ತಾನೋ ಅವನು ಸತ್ತಂತೆ’: ರಾಘವ್ ಛಡ್ಡಾಗೆ ತೀವ್ರವಾಗಿ ಪ್ರತಿಕ್ರಿಯೆ ನೀಡಿದ ಎಎಪಿ ನಾಯಕ ಸೌರಭ್ ಭಾರದ್ವಾಜ್ 

ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕ ಮತ್ತು ದೆಹಲಿ ಘಟಕದ ಮುಖ್ಯಸ್ಥ ಸೌರಭ್ ಭಾರದ್ವಾಜ್ ಅವರು ವೀಡಿಯೊ ಸಂದೇಶದಲ್ಲಿ ಆಪ್ ಸಂಸದ ರಾಘವ್ ಛಡ್ಡಾ ಅವರು ಸಂಸತ್ತಿನಲ್ಲಿ "ಸಾಫ್ಟ್ ಪಿಆರ್" ನಲ್ಲಿ ತೊಡಗಿದ್ದಾರೆ...

ಚಂಡೀಗಢ ಬಿಜೆಪಿ ಕಚೇರಿ ಸ್ಫೋಟ: ಪಂಜಾಬ್ ಕೌಂಟರ್ ಇಂಟೆಲಿಜೆನ್ಸ್ ಪಡೆಯಿಂದ ಇಬ್ಬರು ಶಂಕಿತರ ಮನೆಗಳ ಮೇಲೆ ದಾಳಿ

ಚಂಡೀಗಢದಲ್ಲಿರುವ ಪಂಜಾಬ್ ಬಿಜೆಪಿ ಕಚೇರಿಯ ಹೊರಗೆ ಸ್ಫೋಟ ನಡೆಸಿದ ಆರೋಪದ ಮೇಲೆ ಇಬ್ಬರು ಶಂಕಿತರ ಮನೆಗಳ ಮೇಲೆ  ಪಂಜಾಬ್ ಪೊಲೀಸರ ಗುಪ್ತಚರ ನಿಗ್ರಹ ದಳವು ಇಂದು ಮುಂಜಾನೆ ದಾಳಿ ನಡೆಸಿದೆ.  ರೋಪರ್ ಜಿಲ್ಲೆಯ ಮೊರಿಂಡಾ ಪ್ರದೇಶದ...