Homeಅಂಕಣಗಳುಮೋದಿಗೆ ಕೃಷ್ಣ ಪರಮಾತ್ಮನ 10 ಸಲಹೆಗಳು

ಮೋದಿಗೆ ಕೃಷ್ಣ ಪರಮಾತ್ಮನ 10 ಸಲಹೆಗಳು

- Advertisement -
- Advertisement -

ಮೂಲ: ರಾಘವ್ ಬೆಹ್ಲ್, ಕ್ವಿಂಟ್
ಅನುವಾದ: ರಾಜಶೇಖರ್ ಅಕ್ಕಿ |

2019 ಹತ್ತಿರಕ್ಕೆ ಬರುತ್ತಿದ್ದಂತೆ, ಪ್ರಧಾನಿ ಮೋದಿಯವರು ತಮ್ಮ ಸೋಲುಗಳ ಲೆಕ್ಕ ಹಾಕುತ್ತಿರಬಹುದು. ಕಳೆದ 18 ವರ್ಷಗಳಲ್ಲಿ ಒಂದೂ ಸಲ ಕಾಂಗ್ರೆಸ್ ಪಕ್ಷಕ್ಕೆ ಸೋಲದ ಮೋದಿ ಈಗ ಮೂರು ರಾಜ್ಯಗಳಲ್ಲಿ ಸೋಲ ನುಭವಿಸಿದ್ದಾರೆ. ನನಗೆ ವರ್ಷ 2000 ನೆನಪಾಗುತ್ತಿದೆ, ಆಗ ಮೋದಿಯ ರಾಜಕೀಯ ಗುರು ಅಟಲ್ ಬಿಹಾರಿ ವಾಜಪೇಯಿ ಪ್ರಧಾನಿಯಾಗಿದ್ದರು. ಹಾಗೂ ಅವರೂ ಕೂಡ ತಮ್ಮ ಅಧಿಕಾರದ ಅತ್ಯಂತ ಕೆಟ್ಟದಿನಗಳನ್ನೇ ಅನುಭವಿಸುತ್ತಿದ್ದರು; ಲೋಕಸಭೆ ಕೋಲಾಹಲದಲ್ಲಿತ್ತು, ಕಾಶ್ಮೀರ ನಿಯಂತ್ರಣದಲ್ಲಿರಲಿಲ್ಲ, ಪಾಕಿಸ್ತಾನ ತನ್ನ ಕರಾಳ ಅಶಿಸ್ತನ್ನು ಪ್ರದರ್ಶಿಸುತ್ತಿತ್ತು ಹಾಗೂ ರಾಮ ಮಂದಿರವನ್ನು ಬಲವಂತವಾಗಿ ನಿರ್ಮಿಸಲು ಗಟ್ಟಿಯಾದ ಕೂಗುಗಳು ಕೇಳಿಬರುತ್ತಿದ್ದವು. ನಿಜ, ನಮ್ಮ ಈ ಸಮಯಾತೀತ ದೇಶದಲ್ಲಿ ಸಮಯ, ಸಂಗತಿಗಳು ಬದಲಾಗುವುದಕ್ಕಿಂತ, ಬದಲಾಗದೇ ಉಳಿಯುವವೇ ಹಚ್ಚು.
ಈ ಎಲ್ಲವುಗಳಿಗೆ ಪ್ರತಿಕ್ರಿಯೆಯಾಗಿ ವಾಜಪೇಯಿ ಕೇರಳದ ಕುಮಾರಕೋಂ ರೆಸಾರ್ಟಿನಲ್ಲಿ ಠಿಕಾಣಿ ಹೂಡಿ ತಮ್ಮ ರಾಜಕೀಯ ‘ಆಲೋಚನೆ’ಗಳನ್ನು ಕಾವ್ಯದ ರೂಪದಲ್ಲಿ ಬರೆದರು. ಪ್ರಧಾನಿ ಮೋದಿಗೂ ಇಂತಹ ‘ಆಲೋಚನೆ’ಗಳನ್ನು ಕಾವ್ಯವಾಗಿಸುವ ಸಮಯ ಬಂದಿದೆ ಎಂದೆನಿಸುತ್ತಿದೆ.
ಮಹಾಭಾರತ ಯುದ್ಧದ ಸಮಯದಲ್ಲಿ ಭಗವಾನ್ ಕೃಷ್ಣ ಅರ್ಜುನನಿಗೆ ಉಪದೇಶ ನೀಡಿದ ಸ್ಥಳವಾದ ಕುರುಕ್ಷೇತ್ರದಲ್ಲಿಯೇ ಮೋದಿ ತನ್ನ ಟೆಂಟನ್ನು 31 ಡಿಸೆಂಬರ್‍ನ ಮಧ್ಯರಾತ್ರಿ ಹೂಡಬೇಕು. ಯಾರಿಗ್ಗೊತ್ತು, ಮೋದಿ ಕೂಡ ಅರ್ಜುನನಷ್ಟೇ ಅದೃಷ್ಟಶಾಲಿಯಾಗಿರಬಹುದು. ಭಗವಾನ್ ಕೃಷ್ಣ 2019ರ ಹೊಸ ಭಗವದ್ಗೀತೆಯ ಭಾಗವಾಗಿ, ಕೆಳಗೆ ಬರೆದಿರುವ ಹತ್ತು ಬೋಧೆಗಳನ್ನು ನೀಡಬಹುದು.

ಮೊದಲನೇ ಬೋಧನೆ: ನೀನು ಅತಿರೇಕವಿಲ್ಲದ, ನಡುಪಂಥೀಯ ರಾಜಕೀಯಕ್ಕೆ ಮುಖಮಾಡಬೇಕು.
ವಾಜಪೇಯಿ ಆಗ ಬರೆದಿದ್ದು, “ಕಲಹಕ್ಕೆ ಬದಲಾಗಿ ಸಂಧಾನ, ವಿರೋಧದ ಬದಲಿಗೆ ಮೈತ್ರಿ ಹಾಗೂ ತಿಕ್ಕಾಟದ ಬದಲಿಗೆ ಒಮ್ಮತ ಮತ್ತು ಸಹಕಾರದ ಕ್ರಮಗಳಲ್ಲಿ ಭಾರತದ ಸಾಮಥ್ರ್ಯ ಅಡಗಿದೆ ಹಾಗೂ (ನಮ್ಮ ಸರ್ಕಾರವು) ಇದನ್ನೇ ಬಯಸುತ್ತದೆ”
ದುರದೃಷ್ಟವಶಾತ್, ಮೋದಿಯ ಬಿಜೆಪಿಯು ನಡುಪಂಥೀಯ ಒಮ್ಮತವನ್ನು ಮುರಿದು ಹಾಕಿದೆ. ಇದರ ಮೂಲಸ್ವಭಾವ ಹಿಂದೂ-ಬಹುಪಕ್ಷೀಯತೆಯೆಡೆಗೇ ಇದೆ. ಇದು ಅತ್ಯಂತ ಸೂಕ್ಷ್ಮ ವಿಷಯಗಳಾದ ಮಿಲಿಟರಿ ಸಾಹಸಗಳನ್ನು, ಜಮ್ಮು ಕಾಶ್ಮೀರದ ಕ್ಷೋಭೆಯನ್ನು ಅತ್ಯಂತ ಸಂಕುಚಿತವಾದ ರಾಷ್ಟ್ರೀಯತೆಯ ವಿಷಯಗಳನ್ನಾಗಿ ಬದಲಿಸುತ್ತಿದೆ.
ಆದರೆ 2019ರಲ್ಲಿ ಇದು ವಾಜಪೇಯಿಯವರ ಸಂಧಾನ, ಮೈತ್ರಿ, ಒಮ್ಮತ ಮತ್ತು ಸಹಕಾರದೆಡೆಗೆ ಮರಳಬೇಕು.

ಎರಡನೇ ಬೋಧನೆ: ಪಂಡಿತ್ ನೆಹರು ಮತ್ತು ಇಂದಿರಾ ಗಾಂಧಿ ಇಂದು ಕಣದಲ್ಲಿಲ್ಲ ಎನ್ನುವುದನ್ನು ಒಪ್ಪಿಕೊಳ್ಳಬೇಕು.
ಮೋದಿ ಸೈನ್ಯದ ಕಾಲಾಳುಗಳು ತಮ್ಮ ಶಕ್ತಿಯನ್ನೆಲ್ಲ ಬಳಸಿ ಭಾರತದ ಎಲ್ಲಾ ವೈಫಲ್ಯಗಳಿಗೆ ನಾಲ್ಕು ದಶಕಗಳವರೆಗೆ ಆಳಿದ ‘ಕುಟುಂಬದ ಆಳ್ವಿಕೆ’ಯೇ ಕಾರಣವೆಂದು ಸಾಬೀತುಪಡಿಸಲು ಹೊಸ ಹೊಸ ಸುಳ್ಳುಗಳ ಅವಿಷ್ಕಾರದಲ್ಲಿ ತೊಡಗಿರುತ್ತಾರೆ.
ಆದರೆ ಮೋದಿ ಭಾರತದ ಶ್ರೇಷ್ಠತೆಯ ಬಗ್ಗೆ ಮಾತನಾಡಿದಾಗ – ಅದು ನ್ಯೂಕ್ಲಿಯರ್ ವಿಜ್ಞಾನದ ಬಗ್ಗೆಯಿರಲಿ, ಅಂತರಿಕ್ಷದ ಬಗ್ಗೆ ಇರಲಿ, ಕೈಗಾರಿಕೆಯಾಗಿರಲಿ ಅಥವಾ ಕೃಷಿಯಾಗಿರಲಿ – ಇವರ ಈ ಎದೆತಟ್ಟುವಿಕೆಯಲ್ಲಿ ಆ ‘ಕುಟುಂಬದ ಆಳ್ವಿಕೆ’ಯ ಕಾಲದಲ್ಲಿ ಆದ ಸಾಧನೆಗಳನ್ನೇ ಸಂಭ್ರಮಿಸುತ್ತಾರೆ.
ಅದೇನೇ ಇರಲಿ, ಪಂಡಿತ್ ನೆಹರು ಅವರು 1964ರಲ್ಲಿ ಹಾಗೂ ಇಂದಿರಾ ಗಾಂಧಿ 1984ರಲ್ಲಿ ತೀರಿಕೊಂಡರು ಎಂದು ನಮ್ಮ ಪ್ರಧಾನಮಂತ್ರಿಗೆ ಯಾರಾದರೂ ಹೇಳಬೇಕಿದೆ.

ಮೂರನೇ ಬೋಧನೆ: ರಾಮಮಂದಿರದ ಬಗ್ಗೆ ನಿಮ್ಮ ಮೌನವನ್ನು ಮುರಿಯುವಿರಿ
ಆಗ ವಾಜಪೇಯಿ ತನ್ನ ಸರಕಾರಕ್ಕೆ ಹೇಳಿದ್ದೇನೆಂದರೆ, “ನ್ಯಾಯಾಂಗದ ತೀರ್ಪು, ಅದೇನೇ ಆಗಿರಲಿ, ಅದನ್ನು ಅನುಷ್ಠಾನಗೊಳಿಸಲು ಸಂವಿಧಾನಾತ್ಮಕವಾಗಿ ಬದ್ಧರಾಗಿದ್ದೇವೆ ಹಾಗು ಒಪ್ಪಿಕೊಳ್ಳುತ್ತೇವೆ”
ಆದರೆ ಮೋದಿ ಅಡಿಯಲ್ಲಿ, ನ್ಯಾಯಾಂಗದ ತೀರ್ಪನ್ನು ರದ್ದು ಮಾಡಲು ಸುಗ್ರೀವಾಜ್ಞೆಯೊಂದನ್ನು ತರುವ ಭೀತಿ ಸೃಷ್ಟಿಯಾಗುತ್ತಿದೆ. ಮೋದಿ ಇಂತಹ ಯಾವುದೇ ರಾಜಕೀಯ-ಕಾನೂನಾತ್ಮಕ ದುಸ್ಸಾಹಸವನ್ನು ಮಾಡುವ ವಿಚಾರವನ್ನು ಕೈಬಿಡಬೇಕು.

ನಾಲ್ಕನೇ ಬೋಧನೆ: ನಿಮ್ಮ ಹಿಂಬಾಲಕರ ಹಿಂಸೆಯ ಬಗ್ಗೆ ತಾಳಿರುವ ಮೌನವನ್ನು ಮುರಿಯಬೇಕು.
ದೇಶದಲ್ಲಿ ಆಗುತ್ತಿರುವ ಗುಂಪು ಹತ್ಯೆ-ಮಾಬ್ ಲಿಂಚಿಂಗ್ ಬಗ್ಗೆ ಒಂದು ವಿಶೇಷ ತನಿಖಾ ದಳವನ್ನು ರಚಿಸಿ (ಎಸ್.ಐ.ಟಿ) ಇಂತಹ ಕೃತ್ಯಗಳನ್ನು ಮಾಡುವವರನ್ನು ಎಲ್ಲರಿಗೂ ಗೋಚರವಾಗುವಂತೆ ನ್ಯಾಯಾಸ್ಥಾನದಲ್ಲಿ ವಿಚಾರಣೆಗೊಳಿಸಬೇಕು. ಹಾಗೂ ಟ್ವಿಟರ್ ಸಾಮಾಜಿಕ ಜಾಲತಾಣಗಳಲ್ಲಿ ದ್ವೇಷವನ್ನು ಬಿತ್ತರಿಸುತ್ತಿರುವ ವ್ಯಕ್ತಿಗಳನ್ನು  ಸ್ವತಃ ತಾನೇ ಹಿಂಬಾಲಿಸುವುದನ್ನು ಕೂಡಲೇ ಬಿಡಬೇಕು.

ಐದನೇ ಬೋಧನೆ: ಈ ಗಣರಾಜ್ಯ (ರಿಪಬ್ಲಿಕ್)ದಲ್ಲಿ ನ್ಯಾಯಯುತವಾದ ಸಂವಾದಕ್ಕೆ ಅನುವು ಮಾಡಿಕೊಡಬೇಕು.
ತಮ್ಮ ಸಹಭಾಗಿ ಟಿವಿ ವಾಹಿನಿಗಳಲ್ಲಿ ಪ್ರತಿ ಸಂಜೆ ನಂಬಲಸಾಧ್ಯವಾದ ರೀತಿಯಲ್ಲಿ ಇವರ ವಕ್ತಾರರ ಮುಖಾಂತರ ನಡೆಯುತ್ತಿರುವ ಪ್ರಾಕ್ಸಿ ರಾಜಕೀಯ ಪ್ರಚಾರವನ್ನು ಈ ಕೂಡಲೇ ನಿಲ್ಲಿಸಬೇಕು.

ಆರನೇ ಬೋಧನೆ: ಸುಳ್ಳುಗಳನ್ನು ತುಂಬಿಸಿ ಇತಿಹಾಸವನ್ನು ತಿದ್ದುವುದನ್ನು, ಪುನರ್‍ರಚಿಸುವುದನ್ನು ನಿಲ್ಲಿಸಿ.
ಮೋದಿಯ ‘ಬುದ್ಧಿಜೀವಿ’ಗಳು ಇತಿಹಾಸವನ್ನು ತಿದ್ದುವುದನ್ನು ನಿಲ್ಲಿಸಬೇಕು; 16ನೇ ಶತಮಾನದಲ್ಲಿ ಆದ ಯುದ್ಧದಲ್ಲಿ ಅಕ್ಬರ್‍ನನ್ನು ಮಹಾರಾಣಾ ಪ್ರತಾಪ್ ಸೋಲಿಸಲಿಲ್ಲ ಎನ್ನುವುದನ್ನು ಒಪ್ಪಿಕೊಳ್ಳಬೇಕಿದೆ. ಸ್ವಾಮಿ ವಿವೇಕಾನಂದ ಅವರು ಎಂದೂ ಹಿಂದುತ್ವದ ಐಕಾನ್ ಆಗಿರಲಿಲ್ಲ; ಹಾಗೂ ಸರದಾರ್ ಪಟೇಲ್ ಅವರು ಎಂದೂ ಆರ್.ಎಸ್.ಎಸ್. ಕಾರ್ಯಕರ್ತರಾಗಿರಲಿಲ್ಲ ಎಂಬುದೇ ವಾಸ್ತವ. ಇದನ್ನು ಅರ್ಥ ಮಾಡಿಕೊಂಡು ಅದಕ್ಕೆ ತಕ್ಕಂತೆ ನಡೆದುಕೊಳ್ಳಬೇಕು.

ಏಳನೇ ಬೋಧನೆ: ವೂಡೂ ಆರ್ಥಿಕತೆಯ ಪ್ರಯೋಗವನ್ನು ಬಿಟ್ಟುಬಿಡಿ.
ಈಗ ಮಾಡುತ್ತಿರುವ ಫ್ಯಾಂಟಮ್ ಹೂಡಿಕೆಯನ್ನು (ಒಂದು ಸರಕಾರೀ ಸಂಸ್ಥೆ ಇನ್ನೊಂದು ಸರಕಾರೀ ಸಂಸ್ಥೆಯನ್ನು ಖರೀದಿಸಿ ತುಂಬಾ ವ್ಯವಹಾರ ನಡೆಯುತ್ತಿದೆ ಎಂಬ ಭ್ರಾಂತಿಯನ್ನು ಸೃಷ್ಟಿಸುವುದು) ಕೈಬಿಡಿ.
ನಿರುದ್ಯೋಗದ ಬಿಕ್ಕಟ್ಟಿನ ಪ್ರಶ್ನೆಗೆ ‘ಪಕೋಡಾ ಉದ್ಯೋಗ’ದ ಸಂಖ್ಯೆಗಳನ್ನು ಕಂಡುಹಿಡಿದು, ಅಥವಾ ಅದಕ್ಕೆ ಸಂಬಂಧಪಡದ ಮುದ್ರಾ ಮತ್ತು ಇ.ಪಿ.ಎಫ್. ಸಂಖ್ಯೆಗಳನ್ನು ಬಳಸಿ ಮೂಲಪ್ರಶ್ನೆಯಿಂದ ನುಣುಚಿಕೊಳ್ಳುವುದನ್ನು ನಿಲ್ಲಿಸಬೇಕು.
2014/15 ರಲ್ಲಿ ಮೋದಿ ತನ್ನ ರಾಜಕೀಯ ಅಧಿಕಾರದ ಉತ್ತುಂಗದಲ್ಲಿದ್ದಾಗ ಸಾರ್ವಜನಿಕ ಬ್ಯಾಂಕ್ ವಲಯವನ್ನು ಸರಿಪಡಿಸದೇ ಇರುವುದನ್ನು ಒಪ್ಪಿಕೊಳ್ಳಬೇಕು.

ಎಂಟನೇ ಬೋಧನೆ: ಬಿಕ್ಕಟ್ಟಿನಲ್ಲಿರುವ ರೈತರಿಗೆ ದುಪ್ಪಟ್ಟು ಆದಾಯ ಮತ್ತು ಹೆಚ್ಚಿನ ಎಮ್.ಎಸ್.ಪಿ(ಕನಿಷ್ಠ ಬೆಂಬಲ ಬೆಲೆ)ಗಳ ಲಾಲಿಪಾಪ್‍ಗಳಿಂದ ದಾರಿತಪ್ಪಿಸುವುದನ್ನು ಕೈಬಿಡಬೇಕು.
ಅದರ ಬದಲಿಗೆ, “ಒಂದು ಬಾರಿಯ ಸಾಲ ಪರಿಹಾರ”ದ ದಿಟ್ಟ ನೀತಿಯನ್ನು ರಚಿಸಿ, ಅದರೊಂದಿಗೆ ಆದಾಯ ವರ್ಗಾವಣೆ, ಗ್ರಾಮೀಣ ಸಂಪನ್ಮೂಲಗಳನ್ನು ಹೆಚ್ಚಿಸುವುದಕ್ಕೆ ಹೂಡಿಕೆ, ಗುತ್ತಿಗೆ ಕೃಷಿ, ಜಿ.ಎಮ್. ಬೆಳೆಗಳು ಹಾಗೂ ಆಹಾರ ಉದ್ಯಮಗಳೊಂದಿಗೆ ನೇರ ಸಂಯೋಜನೆ, ಇವೆಲ್ಲವುಗಳನ್ನೂ ಒಳಗೊಂಡ ನಿಜವಾದ ಕೃಷಿ ಸುಧಾರಣೆಗಳನ್ನು ತರಬೇಕು,
ಮಧ್ಯವರ್ತಿಗಳಿಗೇ ದೊಡ್ಡ ಆದಾಯವನ್ನು ಸೃಷ್ಟಿಸುವ, ಈಗ ಏಕಸ್ವಾಮ್ಯತೆಯನ್ನು ಹೊಂದಿರುವ ಮಾರುಕಟ್ಟೆ/ಮಂಡಿಗಳನ್ನು ನಾಶಮಾಡಬೇಕು.

ಒಂಬತ್ತನೇ ಬೋಧನೆ: ಮುಕ್ತ ಮಾರುಕಟ್ಟೆಗಳಲ್ಲಿ ನಿಜವಾದ ಶ್ರದ್ಧೆಯನ್ನು ತೋರಿಸಿ.
2019 ರಲ್ಲಿ ಮೋದಿಯು ಬೆಲೆ ನಿಯಂತ್ರಣಗಳನ್ನು ರದ್ದುಗೊಳಿಸಬೇಕು. ತೆರಿಗೆದಾರರಿಗೆ ಮತ್ತು ಏಂಜೆಲ್ ಹೂಡಿಕೆದಾರರಿಗೆ ಕಿರುಕುಳ ನೀಡುವುದನ್ನು ನಿಲ್ಲಿಸಬೇಕು, ಅಂತರರಾಷ್ಟ್ರೀಯ ನಿರ್ಣಯಗಳನ್ನು ಗೌರವಿಸಬೇಕು. ವಿದೇಶೀ ಹೂಡಿಕೆದಾರರ ಹಕ್ಕುಗಳನ್ನು ಗೌರವಿಸಬೇಕು, ಐ.ಎ.ಎಸ್ ಅಲ್ಲದ ನಿಯಂತ್ರಕರನ್ನು ನೇಮಕಾತಿ ಮಾಡಬೇಕು ಹಾಗೂ ನೋಟುರದ್ದತಿ ಮತ್ತು ಜಿ.ಎಸ್.ಟಿಯ ಡಬಲ್ ಹೊಡೆತದಿಂದ ಬಳಲುತ್ತಿರುವ ಸಣ್ಣ ಮತ್ತು ಮಧ್ಯಮ ಉದ್ದಿಮೆಗಳ ನೋವಿಗೆ ಸ್ಪಂದಿಸಬೇಕು.

ಹತ್ತನೇ ಬೋಧನೆ: ನಿಮ್ಮ ಪರಿವಾರದ ಸಂವಿಧಾನೇತರ ‘ಏಜೆನ್ಸಿಗಳು….’ ಮಾಡುತ್ತಿರುವ ಕತ್ತರಿಸುವ ಕೆಲಸಗಳನ್ನು ನಿಲ್ಲಿಸಿ
ಕೊನೆಯದಾಗಿ ಭಗವಾನ್ ಕೃಷ್ಣ ತನ್ನ ಆದೇಶವನ್ನು ಹೀಗೆ ಮುಕ್ತಾಯಗೊಳಿಸುತ್ತಾನೆ: ಎಲೈ ಬಿಜೆಪಿ ಆಡಳಿತಗಾರರಾ, ಹೋಗ್ರೋ, ಒಂಚೂರು ಹಾಸ್ಯಪ್ರಜ್ಞೆಯನ್ನು ಎಲ್ಲಿಂದಾದರೂ ತೊಗೊಂಬನ್ನಿ. ನಿಮ್ಮ ಒಂದು ಮುಗುಳ್ನಗೆ ರಾಜಕೀಯ ಎದುರಾಳಿಗಳನ್ನು ನಿಶ್ಯಸ್ತ್ರಗೊಳಿಸುವುದಕ್ಕೆ ದೊಡ್ಡ ಅಸ್ತ್ರವಾಗುತ್ತೆ. ಒಳ್ಳೇದಾಗಲಿ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮಗಳ ವಿಚ್ಛೇದನ: ಸಿಹಿ ಹಂಚಿ, ಮೆರವಣಿಗೆಯಲ್ಲಿ ಆಕೆಯನ್ನು ಮನೆಗೆ ಕರೆತಂದ ನೀವೃತ್ತ ನ್ಯಾಯಾದೀಶ ಮತ್ತು ಕುಟುಂಬ

ಮೀರತ್: ಕೌಟುಂಬಿಕ ನ್ಯಾಯಾಲಯದಲ್ಲಿ ಮಗಳ ವಿಚ್ಛೇದನ ಅಂತಿಮವಾದ ನಂತರ ಆಕೆಯನ್ನು ಡೋಲು, ನೃತ್ಯಗಳ ಮೆರವಣಿಗೆಯಲ್ಲಿ ಸಂಭ್ರಮದಿಂದ ತಂದೆ ಮನೆಗೆ ಕರೆತಂದ ಘಟನೆ ಮೀರನ್ ನಲ್ಲಿ ನಡೆದಿದೆ.  ಪೋಷಕರ ಬೆಂಬಲದ ಅಪರೂಪದ ಮತ್ತು ಹೃದಯಸ್ಪರ್ಶಿ ಪ್ರದರ್ಶನದಲ್ಲಿ,...

“ನೀನು ನಿಜವಾಗಿಯೂ ಅಂಬೇಡ್ಕರ್ ಮಗಳಾ ಎಂದು ತಿಳಿಯಲು ನಾವು ನಿನ್ನ ಡಿಎನ್‌ಎ ಟೆಸ್ಟ್ ಮಾಡುತ್ತೇವೆ” ದೆಹಲಿ ಸಭೆಯಲ್ಲಿ ದಲಿತ ಟ್ರಾನ್ಸ್ ಹೋರಾಟಗಾರ್ತಿ ಗ್ರೇಸ್ ಬಾನುಗೆ ಜಾತಿ ನಿಂದನೆ ಆರೋಪ

ಕೇಂದ್ರ ಸರ್ಕಾರದ ವಿವಾದಾತ್ಮಕ ಟ್ರಾನ್ಸ್‌ಜೆಂಡರ್ ವ್ಯಕ್ತಿಗಳ (ಹಕ್ಕುಗಳ ರಕ್ಷಣೆ) ತಿದ್ದುಪಡಿ ಕಾಯ್ದೆ, 2026ರ ವಿರುದ್ಧ ಕಳೆದ ಕೆಲ ವಾರಗಳಿಂದ ಇಡೀ ಟ್ರಾನ್ಸ್‌ಜೆಂಡರ್ ಮತ್ತು ಪ್ರಗತಿಪರ ಸಮುದಾಯ ಪ್ರತಿಭಟನೆ ನಡೆಸುತ್ತಿದೆ. ಈ ನಡುವೆ ಶುಕ್ರವಾರ...

‘ಮೋದಿ ಕ್ರಿಶ್ಚಿಯನ್ ಸಂಸ್ಥೆಗಳಲ್ಲಿ ಭಯ ಹುಟ್ಟಿಸಲು ಪ್ರಯತ್ನಿಸುತ್ತಿದ್ದಾರೆ’: ಎಫ್‌ಸಿಆರ್‌ಎ ತಿದ್ದುಪಡಿ ಕುರಿತು ಮಲ್ಲಿಕಾರ್ಜುನ ಖರ್ಗೆ

ಇಡುಕ್ಕಿ (ಕೇರಳ): ಸಾರ್ವಜನಿಕ ಮತ್ತು ಸಾಮಾಜಿಕ ಕಲ್ಯಾಣ ಕ್ಷೇತ್ರದಲ್ಲಿ ಕೆಲಸ ಮಾಡುವ ಕ್ರಿಶ್ಚಿಯನ್ ಸಂಸ್ಥೆಗಳು, ಎನ್‌ಜಿಒಗಳು ಮತ್ತು ನಾಗರಿಕ ಸಮಾಜದ ಮೇಲೆ ದಾಳಿ ಮಾಡಲು ಪ್ರಧಾನಿ ನರೇಂದ್ರ ಮೋದಿ ಎಫ್‌ಸಿಆರ್‌ಎ (ವಿದೇಶಿ ದೇಣಿಗೆ...

ವೈದ್ಯಕೀಯ, ತಾಂತ್ರಿಕ ಶಿಕ್ಷಣದಲ್ಲಿ ಎಸ್‌ಸಿ/ಎಸ್‌ಟಿ ಮೀಸಲಾತಿ ಹೆಚ್ಚಿಸಿದ ಒಡಿಶಾ ಸರ್ಕಾರ, ಒಬಿಸಿ ವಿದ್ಯಾರ್ಥಿಗಳಿಗೆ ಹೊಸ ಕೋಟಾ

ಮಹತ್ವದ ನಿರ್ಧಾರ ಕೈಗೊಂಡಿರುವ ಒಡಿಶಾ ಸರ್ಕಾರ, ವೈದ್ಯಕೀಯ, ಇಂಜಿನಿಯರಿಂಗ್ ಮತ್ತು ಇತರ ತಾಂತ್ರಿಕ ಹಾಗೂ ವೃತ್ತಿಪರ ಶಿಕ್ಷಣ ಕೋರ್ಸ್‌ಗಳಲ್ಲಿ ಪರಿಶಿಷ್ಟ ಪಂಗಡ (ಎಸ್‌ಟಿ), ಪರಿಶಿಷ್ಟ ಜಾತಿ (ಎಸ್‌ಸಿ) ಅಭ್ಯರ್ಥಿಗಳಿಗೆ ಮೀಸಲಾತಿಯನ್ನು ಗಣನೀಯವಾಗಿ ಹೆಚ್ಚಿಸಿದೆ....

ಶಾಲಾ ವಾರ್ಷಿಕೋತ್ಸವದಲ್ಲಿ ಲವಲವಿಕೆಯಿಂದ ಭಾಗವಹಿಸಿದ್ದ 6 ಮಕ್ಕಳು, ತಡರಾತ್ರಿ ಹೊತ್ತಿಗೆ ಶವವಾದರು : ಮಹಾರಾಷ್ಟ್ರದಲ್ಲೊಂದು ಹೃದಯ ವಿದ್ರಾವಕ ಘಟನೆ

ಶಾಲಾ ವಾರ್ಷಿಕೋತ್ಸವದಲ್ಲಿ ಬಹಳ ಉತ್ಸಾಹದಿಂದ ಭಾಗವಹಿಸಿದ್ದ ಆರು ಮಂದಿ ಮಕ್ಕಳು, ತಡ ರಾತ್ರಿ ಹೊತ್ತಿಗೆ ಶವವಾದ ಹೃದಯ ವಿದ್ರಾವಕ ಘಟನೆಯೊಂದು ಮಹಾರಾಷ್ಟ್ರದ ದಿಂಡೋರಿಯಲ್ಲಿ ಶುಕ್ರವಾರ (ಏ.3) ನಡೆದಿದೆ. ನಾಸಿಕ್‌ ನಗರದಿಂದ 20 ಕಿಲೋ...

ಕೇರಳ: ಕೊಲ್ಲಂನಲ್ಲಿ ಟಿವಿ ಚಾನೆಲ್ ಕಚೇರಿ ಮೇಲೆ ಸ್ಫೋಟಕ ವಸ್ತು ಎಸೆತ

ಕೊಲ್ಲಂ: ಇಲ್ಲಿನ ಟಿವಿ ಚಾನೆಲ್ ಒಂದರ ಕಚೇರಿಯ ಮೇಲೆ ಭಾನುವಾರ ಬೆಳಿಗ್ಗೆ ಸ್ಫೋಟಕ ವಸ್ತು ಎಸೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರ ಪ್ರಕಾರ, ಆ ಪ್ರದೇಶ ಮತ್ತು ಚಾನೆಲ್ ಕಚೇರಿಯ ಸಿಸಿಟಿವಿ ದೃಶ್ಯಗಳಲ್ಲಿ ಇಬ್ಬರು...

ಹತ್ಯೆಯಾದ ಇರಾನ್ ಕಮಾಂಡರ್ ಖಾಸಿಮ್ ಸುಲೈಮಾನಿ ಅವರ ಸೊಸೆ, ಮೊಮ್ಮಗಳನ್ನು ಬಂಧಿಸಿದ ಅಮೆರಿಕ

ನವದೆಹಲಿ: ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಶುಕ್ರವಾರ ತಮ್ಮ ಶಾಶ್ವತ ನಿವಾಸಿ ಸ್ಥಾನಮಾನವನ್ನು ರದ್ದುಗೊಳಿಸಿದ ನಂತರ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (ಐಆರ್‌ಜಿಸಿ) ನ ದಿವಂಗತ ನಾಯಕ ಖಾಸಿಮ್ ಸೊಲೈಮಾನಿ ಅವರ...

ಇರಾನ್ ಮೇಲೆ ಬೃಹತ್ ದಾಳಿ: ಹಲವು ಉನ್ನತ ನಾಯಕರನ್ನು ಕೊಲ್ಲಲಾಗಿದೆ ಎಂದು ವಿಡಿಯೋ ಹಂಚಿಕೊಂಡ ಟ್ರಂಪ್

ಟೆಹ್ರಾನ್ ಮೇಲೆ ನಡೆದ ದಾಳಿಯ ವೀಡಿಯೊವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಂಚಿಕೊಂಡಿದ್ದು, ಹಲವಾರು ಇರಾನ್ ಮಿಲಿಟರಿ ನಾಯಕರ ಸಾವಿಗೆ ಅದು ಕಾರಣ ಎಂದು ಹೇಳಿಕೊಂಡಿದ್ದಾರೆ. "ಟೆಹ್ರಾನ್‌ನಲ್ಲಿ ನಡೆದ ಈ ಬೃಹತ್ ದಾಳಿಯೊಂದಿಗೆ, ಇರಾನ್‌ನ...

ಅಸ್ಸಾಂ ಚುನಾವಣೆ : ನುಸುಳುಕೋರರಿಂದ ಯುವ ಕಲ್ಯಾಣಕ್ಕೆ ವರಸೆ ಬದಲಿಸಿದ ಬಿಜೆಪಿ

ಅಸ್ಸಾಂ ವಿಧಾನಸಭಾ ಚುನಾವಣೆಗೆ ನಾಲ್ಕು ದಿನಗಳು ಬಾಕಿ ಇರುವಾಗ ಬಿಜೆಪಿ ತನ್ನ ಪ್ರಚಾರದ ವರಸೆಯನ್ನು ಬದಲಿಸಿಕೊಂಡಿದೆ. ನುಸುಳುಕೋರರನ್ನು ಹೊರಹಾಕುತ್ತೇವೆ, ಅಕ್ರಮ ವಲಸೆಗೆ ಕಡಿವಾಣ ಹಾಕುತ್ತೇವೆಂದು ಅಬ್ಬರಿಸುತ್ತಿದ್ದ ಬಿಜೆಪಿಗರು, ಈಗ ನುಸುಳಕೋರರ ವಿಷಯವನ್ನು ಬದಿಗೊತ್ತಿದ್ದಾರೆ....

ಕುಡಿದ ಮತ್ತಿನಲ್ಲಿ ಕಾರು ಚಾಲನೆ: ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ 19ವರ್ಷದ ಯುವಕ ಸಾವು 

ಬೆಂಗಳೂರು: ಕುಡಿದ ಮತ್ತಿನಲ್ಲಿ ಹದಿಹರೆಯದ ಯುವಕನೊಬ್ಬ ಚಲಾಯಿಸುತ್ತಿದ್ದ ಕಾರು, 19 ವರ್ಷದ ಯುವಕನ ಮೋಟಾರ್ ಸೈಕಲ್‌ಗೆ ಡಿಕ್ಕಿ ಹೊಡೆದ ಪರಿಣಾಮ ಆತ ಸಾವನ್ನಪ್ಪಿದ್ದಾನೆ. ಮಲ್ಲೇಶಪಾಳ್ಯದ ಮಾರುತಿನಗರದ 10 ನೇ ಮುಖ್ಯ ರಸ್ತೆಯಲ್ಲಿ ಶುಕ್ರವಾರ ತಡರಾತ್ರಿ...