Homeಕರ್ನಾಟಕಒಂದು ಬಟನ್ ಒತ್ತಿದ್ರೆ ಇಡೀ ದೇಶವೇ ಅಲ್ಲೋಲ ಕಲ್ಲೋಲ ಆಗುತ್ತೆ ಎಂದು ಬೂಸಿ ಬಿಟ್ಟ ಸುವರ್ಣ...

ಒಂದು ಬಟನ್ ಒತ್ತಿದ್ರೆ ಇಡೀ ದೇಶವೇ ಅಲ್ಲೋಲ ಕಲ್ಲೋಲ ಆಗುತ್ತೆ ಎಂದು ಬೂಸಿ ಬಿಟ್ಟ ಸುವರ್ಣ ಟಿವಿ!

- Advertisement -
| ನಾನುಗೌರಿ ಡೆಸ್ಕ್ |
ಕಳೆದ ನಾಲ್ಕೈದು ವರ್ಷಗಳಿಂದ ಮಾಧ್ಯಮಗಳು ಬಿಜೆಪಿ ವಕ್ತಾರರಂತೆ ಕಾರ್ಯನಿರ್ವಹಿಸುತ್ತಿರುವುದು ಸರ್ವೇಸಾಮಾನ್ಯವಾಗೊ ಜಗಜ್ಜಾಹೀರಾಗಿರುವ ಸಂಗತಿ. ಅದರಲ್ಲೂ ಕನ್ನಡ ಮಾಧ್ಯಮಗಳಂತೂ ತಮಗೆ ಸರಿಸಾಟಿ ಯಾರು ಇಲ್ಲವೆಂಬಂತೆ ಮೋದಿಯ ಗುಣಗಾನ ಮಾಡುವುದಕ್ಕೆ ಪೈಪೋಟಿಗೆ ಬಿದ್ದಿವೆ. ಬೆಳಗ್ಗೆಯ ಸಮಯದಲ್ಲಿ ಸುಪ್ರಭಾತ, ಭಕ್ತಿದೇಗುಲಗಳಂತ ಮೌಢ್ಯತುಂಬುವ ಕಾರ್ಯಕ್ರಮ ಕೊಡುತ್ತಿದ್ದ ಮಾಧ್ಯಮಗಳು ಈಗ ಮೋದಿಯ ಮೌಢ್ಯವನ್ನು ತುಂಬಲು ಶುರುವಿಟ್ಟಿವೆ. ಇದರಲ್ಲಿ ಸುವರ್ಣ ಟಿವಿಯಂತೂ ಮೋದಿಯ ಹೆಸರನೇ ಜಪಿಸುವುದರಲ್ಲಿ ತಲ್ಲೀನವಾಗಿವೆ.
ಅಂದಹಾಗೆ ಮೊನ್ನೆ ಸುವರ್ಣ ನ್ಯೂಸ್‍ನಲ್ಲಿ ರಾತ್ರಿಯ ಸುವರ್ಣ ಫೋಕಸ್ ಕಾರ್ಯಕ್ರಮದ ಬಗ್ಗೆ ಬೆಳಗ್ಗೆ ಇಂದಲೇ ಜಾಹೀರಾತು ನೀಡಲು ಆರಂಭಿಸಿದ್ದರು. ಅಂತದ್ದೇನಿದೆ ಎಂದು ನೋಡಿದ್ರೆ ಅದರ ಟೈಟಲ್ ‘ಬಾಹುಬಲಿ ಮೋದಿ’ ಎಂದಿತ್ತು.
ಅಬ್ಬಾ… ನಮ್ ಪ್ರಧಾನಿ ಮೋದಿ ಏನಾದ್ರು ಬಾಹುಬಲಿ 3 ಸಿನಿಮಾ ಏನಾದ್ರು ಮಾಡಿದ್ದಾರ ಅಥವಾ ಬಂಡೆ ಮೇಲೆ ಮಲಗಿ ಯೋಗ ಮಾಡ್ತಿದ್ದೋರು ಆ ಬಂಡೆನೇನಾದ್ರು ಎತ್ತಿ ಹೆಗಲ ಮೇಲೆ ಇಟ್ಕೊಬಿಟ್ರಾ ಅಂತ ರಾತ್ರಿವರೆಗೆ ಕಾದು ನೋಡಿದ್ವಿ. ಅಲ್ಲಿ ನೋಡಿದ್ರ ಆ ವಿಷ್ಯಕ್ಕೂ ಮೋದಿಗೂ ಸಂಬಂಧನೇ ಇರಲಿಲ್ಲ. ಆದ್ರು ಮೋದಿ ಕಾರ್ಯಕ್ರಮದ ಹೀರೋ ಆಗಿದ್ದು ಸೋಜಿಗ.
ಆ ಕಾರ್ಯಕ್ರಮದ ವಿಷಯ ಬಾಹ್ಯಾಕಾಶ ಸಮರದ ಬಗ್ಗೆ ಇತ್ತು. ಒಂದು ಬಟನ್ ಒತ್ತಿದ್ರೆ ಇಡೀ ದೇಶವೇ ಅಲ್ಲೋಲ ಕಲ್ಲೋಲ ಆಗುತ್ತೆ. ಸೂಪರ್ ಸುಪ್ರಿಂ ರಾಷ್ಟ್ರಗಳಿಗೆ ಮೋದಿ ಹಾಕ್ತಿದ್ದಾರೆ ಚಾಲೆಂಜ್ ಎಂದೆಲ್ಲಾ ಬಿಲ್ಡಪ್ ಕೊಡಲಾಗುತ್ತಿತ್ತು. ನೋಡುಗರಲ್ಲಿ ಅದೆಂತಾ ಬಟನ್ ಇರಬಹುದು ಅದು, ಮೋದಿ ಏನಾದ್ರು ಕಂಡುಹಿಡಿದ್ರಾ ಎಂಬ ಕುತೂಹಲ ಕೆರಳಿಸಿತ್ತು.
ಮೊದಲನೆಯದಾಗಿ ಇಂದು ಎಲ್ಲಾ ದೇಶಗಳು ಯುದ್ಧ ಸಾಮಗ್ರಿಗಳಿಗೆ ಹೆಚ್ಚು ಹಣವನ್ನು ವ್ಯಯಿಸುತ್ತಿರುವುದು ಗೊತ್ತೇ ಇದೆ. ಅದರಲ್ಲಿ ಭಾರತವೂ ಒಂದು. ಭಾರತವು ಪ್ರಾನ್ಸ್, ರಷ್ಯಾದಂತಹ ದೇಶಗಳಿಂದ ಯುದ್ಧ ವಿಮಾನಗಳು, ತಂತ್ರಜ್ಞಾನಗಳನ್ನು ಪಡೆದುಕೊಳ್ಳುತ್ತಿದೆ. ಅಂತದ್ದೇ ವಿಮಾನ ಖರೀದಿಯ ಡೀಲ್‍ನಲ್ಲಿ ಮೋದಿ ಸಾಹೇಬರ ಪಾತ್ರ ಎಂತದ್ದು ಅಂತ ಇಡೀ ಜಗತ್ತೇ ನೋಡಿದೆ.
ಇತ್ತೀಚೆಗೆ ಯುದ್ದ ತಂತ್ರಜ್ಞಾನಗಳಲ್ಲೂ ಸಾಕಷ್ಟು ಬದಲಾವಣೆಗಳಾಗಿದ್ದು ಸಾವಿರಾರು ಕಿಲೋ ಮೀಟರ್ ದೂರದ ಸ್ಥಳಗಳಿಗೆ ತಾವಿರುವ ಜಾಗದಿಂದಲೇ ಬಾಂಬ್ ಉಡಾಯಿಸುವ ತಂತ್ರಜ್ಞಾನ ಬಂದು ವರ್ಷಗಳೇ ಕಳೆದಿವೆ. ಅಂತಹ ತಂತ್ರಜ್ಞಾನವನ್ನು ಭಾರತ ಕೂಡ ಪಡೆದುಕೊಂಡಿದೆ. ಇದರಲ್ಲಿ ಅಂತಹ ತಂತ್ರಜ್ಞಾನವನ್ನು ಕಂಡುಹಿಡಿದವರಿಗೆ ಅದರ ಕ್ರೆಡಿಟ್ ಕೊಡುವುದು ಸಾಮಾನ್ಯ. ಆದರೆ ಒಂದು ಬಟನ್ ಒತ್ತಿದ್ರೆ ಸಾಕು ಅಂತ ಹೇಳುವಾಗ ಅಲ್ಲಿ ಮೋದಿಯ ಪಾತ್ರವೇನೂ ಇಲ್ಲ. ಅದರ ಕ್ರೆಡಿಟ್ ಅಂತಹ ತಂತ್ರ ಸಂಶೋಧಿಸಿದವರಿಗೆ ಸೇರಿದ್ದು.
ಇನ್ನು ಸುಪ್ರಿಂ ರಾಷ್ಟ್ರಗಳಿಗೆ ಚಾಲೆಂಜ್ ಹಾಕ್ತಿದ್ದಾರೆ ಮೋದಿ ಎಂದು ಬೇರೆ ಹೇಳಲಾಗಿತ್ತು. ಇಂದಿಗೂ ನೆರೆ ರಾಷ್ಟ್ರಗಳಿಂದ ಯುದ್ದ ಅಸ್ತ್ರಗಳನ್ನ ಕೊಂಡುಕೊಳ್ಳುತ್ತಿರುವಾಗ, ಇಡೀ ವಿಶ್ವಕ್ಕೆ ಯುದ್ದಾಸ್ತ್ರಗಳನ್ನ ಸಪ್ಲೇ ಮಾಡುತ್ತಿರುವ ರಾಷ್ಟ್ರಗಳಲ್ಲಿ ಅಂತಹ ಅಸ್ತ್ರಗಳು ಅದೆಷ್ಟಿರಬಹುದು ಎಂಬ ಅರಿವೂ ಈ ಸುವರ್ಣ ಚಾನೆಲ್‍ನವರಿಗೆ ಇದ್ದಂತಿಲ್ಲ.
ಯುದ್ದ ವಿಚಾರ ನೋಡುವುದಾದರೆ ಅದರಲ್ಲಿ ಸೈನ್ಯದ ಪಾತ್ರದ ಮಹತ್ವದ್ದು, ಯುದ್ದ ಮಾಡಿ ಎಂದು ಹೇಳುವಷ್ಟು ಸುಲಭವಾಗಿ ಯುದ್ದ ಮಾಡಲು ಸಾಧ್ಯವಿಲ್ಲ. ಆದರೆ ಅಂತಹ ಯುದ್ದವನ್ನು ಗೆಲ್ಲುವ ಸೈನಿಕರಿಗೆ ಆ ಕಾರ್ಯಕ್ರಮದಲ್ಲಿ ಯಾವ ಕ್ರೆಡಿಟ್ಟೂ ಇರಲಿಲ್ಲ.
ಇಷ್ಟೆಲ್ಲಾ ಇದ್ದರೂ ಕೂಡ ಸುವರ್ಣ ಚಾನೆಲ್ ಮೋದಿಯೇ ಯುದ್ಧಭೂಮಿಯಲ್ಲಿ ನಿಂತು ಯುದ್ಧ ಮಾಡಿ ಗೆದ್ದಿರುವಂತೆ, ಮೋದಿಯೇ ಹೊಸ ತಂತ್ರಜ್ಞಾನವನ್ನು ಕಂಡುಹಿಡಿದಂತೆ ಮೋದಿಯ ಬಗ್ಗೆ ಬಿಲ್ಡಪ್ ಕೊಡುತ್ತಿರುವುದು ಸೈನ್ಯಕ್ಕೆ ಮಾಡುವ ಅವಮಾನವೂ ಹೌದು. ವಿಶ್ಲೇಷಣೆ, ಮೌಲ್ಯಮಾಪನ, ಪ್ರತಿಕಾ ನೀತಿಗಳನ್ನೇ ಮರೆತಿರುವ ಇಂತಹ ನ್ಯೂಸ್ ಚಾನೆಲ್‍ಗಳು ಇನ್ನೆಂಥಾ ಸುದ್ದಿಯನ್ನು ಬಿತ್ತರಿಸಲು ಸಾಧ್ಯ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. Super news from Nanu gouri it is an excellent news paper and it should cover all district of karnataka because other papers baise papers and TV channels…..

LEAVE A REPLY

Please enter your comment!
Please enter your name here

- Advertisment -

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧದ ಅವಿಶ್ವಾಸ ನಿರ್ಣಯಕ್ಕೆ ಸೋಲು

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧ ವಿರೋಧ ಪಕ್ಷಗಳು ಮಂಡಿಸಿದ್ದ ಅವಿಶ್ವಾಸ ನಿರ್ಣಯವು ಬುಧವಾರ (ಮಾ.11) ಧ್ವನಿ ಮತದ ಮೂಲಕ ತಿರಸ್ಕಾರಗೊಂಡಿದೆ. ಸದನದಲ್ಲಿ ವಿರೋಧ ಪಕ್ಷಗಳ ತೀವ್ರ ಗದ್ದಲ ಮತ್ತು ಘೋಷಣೆಗಳ ನಡುವೆಯೇ ಸ್ಪೀಕರ್...

ಉತ್ತರ ಪ್ರದೇಶ| ರಸ್ತೆ ಗುಂಡಿಗೆ ಇಳಿದ ಆಂಬ್ಯುಲೆನ್ಸ್; ಮರುಜೀವ ಪಡೆದ ಮೆದುಳು ನಿಷ್ಕ್ರಿಯಗೊಂಡಿದ್ದ ಮಹಿಳೆ!

ಉತ್ತರ ಪ್ರದೇಶದ ಬರೇಲಿಯ ಖಾಸಗಿ ಆಸ್ಪತ್ರೆಯೊಂದರ ವೈದ್ಯರು ಮೆದುಳು ನಿಷ್ಕ್ರಿಯ ಎಂದು ಘೋಷಿಸಿದ್ದು, ಮಹಿಳೆಯೊಬ್ಬರ ಮೃತದೇಹವನ್ನು ಅಂತ್ಯಕ್ರಿಯೆಗಾಗಿ ಮನೆಗೆ ಸಾಗಿಸುತ್ತಿದ್ದಾಗ ಆಂಬ್ಯುಲೆನ್ಸ್ ರಸ್ತೆಯ ಗುಂಡಿಗೆ ಇಳಿದ ನಂತರ ಆಕೆ ಜೀವಂತವಾಗಿರುವ ಲಕ್ಷಣಗಳು ಕಂಡುಬಂದು...

ಪಶ್ಚಿಮ ಏಷ್ಯಾ ಸಂಘರ್ಷ: ದುಬೈ ವಿಮಾನ ನಿಲ್ದಾಣದ ಮೇಲೆ ಇರಾನ್​ ಡ್ರೋನ್​ ದಾಳಿ; ಭಾರತೀಯ ಪ್ರಜೆ ಸೇರಿ ನಾಲ್ವರಿಗೆ ಗಾಯ

ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಇರಾನಿನ ಎರಡು ಡ್ರೋಣಗಳಿಂದ ದಾಳಿ ನಡೆದಿದೆ. ಈ ದಾಳಿಯಲ್ಲಿ ಓರ್ವ ಭಾರತೀಯ ಸೇರಿದಂತೆ ನಾಲ್ವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲಿನ ಸರ್ಕಾರದ ಪರವಾಗಿ ಪ್ರಕಟಣೆ ಹೊರಡಿಸಿರುವ...

ಜಾರ್ಖಂಡ್| ಆಂಬ್ಯುಲೆನ್ಸ್ ನಿರಾಕರಿಸಿದ ಆಸ್ಪತ್ರೆ ಸಿಬ್ಬಂದಿ; ಕಾರ್ಡ್‌ಬೋರ್ಡ್‌ನಲ್ಲಿ ಮಗುವಿನ ಶವ ಸಾಗಿಸಿದ ತಂದೆ

ಆಸ್ಪತ್ರೆ ಸಿಬ್ಬಂದಿ ಆಂಬ್ಯುಲೆನ್ಸ್ ನಿರಾಕರಿಸಿದ್ದರಿಂದ ಕೂಲಿಕಾರ ತಂದೆಯೊಬ್ಬ ಕಾರ್ಡ್‌ಬೋರ್ಡ್‌ನಲ್ಲಿ ಮಗುವಿನ ಶವ ಸಾಗಿಸಿರುವ ಹೃದಯವಿದ್ರಾವಕ ಘಟನೆಯೊಂದು ಜಾರ್ಖಂಡ್‌ನ ಪಶ್ಚಿಮ ಸಿಂಗ್ಭೂಮ್ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಕಳೆದ ಶನಿವಾರ ನಡೆದಿದೆ ಎನ್ನಲಾದ...

ಮಧುರಾಂತಕಂ ಬಳಿ 14 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ: ಪೋಕ್ಸೋ ಪ್ರಕರಣದಡಿ ಓರ್ವ ರೌಡಿ ಶೀಟರ್ ಬಂಧನ

ಚೆನ್ನೈ (ಚೆಂಗಲ್ಪಟ್ಟು): ಸೋಮವಾರ ರಾತ್ರಿ ಮಧುರಾಂಟಕಂ ಬಳಿಯ ಜಲಮೂಲದ ದಡದಲ್ಲಿ 14 ವರ್ಷದ ಬಾಲಕಿಯ ಮೇಲೆ ರೌಡಿ ಶೀಟರ್ ಮತ್ತು ಆತನ ಸಹಚರರು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ವರದಿಯಾಗಿದೆ. ಪ್ರಕರಣ ಸಂಬಂಧ ಪೋಕ್ಸೋ...

ಮುಸ್ಲಿಂ ಮಹಿಳೆಯರ ವಿರುದ್ಧದ ಷರಿಯಾ ಕಾನೂನಿಗೆ ಏಕರೂಪ ನಾಗರಿಕ ಸಂಹಿತೆ ಪರಿಹಾರ: ಸುಪ್ರೀಂ ಕೋರ್ಟ್

"ಮುಸ್ಲಿಂ ವೈಯಕ್ತಿಕ ಕಾನೂನಿನಡಿಯಲ್ಲಿ ತಾರತಮ್ಯದ ಆನುವಂಶಿಕ ನಿಬಂಧನೆಗಳನ್ನು ಪರಿಹರಿಸಲು ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಅತ್ಯಂತ ಪರಿಣಾಮಕಾರಿ ಪರಿಹಾರ ಎಂದು ಸುಪ್ರೀಂ ಕೋರ್ಟ್ ಮಂಗಳವಾರ (ಮಾ.20) ಹೇಳಿದೆ. ಮುಖ್ಯ ನ್ಯಾಯಮೂರ್ತಿ ಸೂರ್ಯ...

ಮುಂಬೈ: ಬಜೆಟ್ ಅಧಿವೇಶನದ ನಡುವೆ ವಿಧಾನ ಭವನದ ಬಳಿ ವ್ಯಕ್ತಿಯೊಬ್ಬನಿಂದ ಆತ್ಮಹತ್ಯೆಗೆ ಯತ್ನ: ವಶಕ್ಕೆ ಪಡೆದ ಪೊಲೀಸರು

ಮುಂಬೈ: ಮಾರ್ಚ್ 11, ಬುಧವಾರ ಮಹಾರಾಷ್ಟ್ರ ವಿಧಾನ ಭವನದ ಹೊರಗೆ ವ್ಯಕ್ತಿಯೊಬ್ಬರು ಆತ್ಮಾಹುತಿ ಮಾಡಿಕೊಳ್ಳಲು ಯತ್ನಿಸಿರುವುದಾಗಿ ವರದಿಯಾಗಿದೆ. ತಕ್ಷಣವೇ ಮುಂಬೈ ಪೊಲೀಸರು ಆತನನ್ನು ಬಂಧಿಸಿದ್ದಾರೆ.  2026 ರ ಮಹಾರಾಷ್ಟ್ರ ಬಜೆಟ್ ಅಧಿವೇಶನ ವಿಧಾನ ಭವನದಲ್ಲಿ...

ಕೋವಿಡ್ ಲಸಿಕೆ ಕೆಲ ಸಾವುಗಳಿಗೆ ಕಾರಣವಾಗಿದೆ ಎಂದು ಅಧಿಕೃತ ದತ್ತಾಂಶ ತೋರಿಸಿದೆ, ಸರ್ಕಾರ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಸಾಧ್ಯವಿಲ್ಲ : ಸುಪ್ರೀಂ ಕೋರ್ಟ್

ಸರ್ಕಾರದ ಅಧೀನದ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಮೂಲಕ ಕೋವಿಡ್ ಲಸಿಕೆಯನ್ನು ವಿತರಿಸಲಾಗಿದೆ. ಕೋವಿಡ್ ಲಸಿಕೆ ಪಡೆದ ಬಳಿಕ ಕೆಲ ಸಾವುಗಳು ಸಂಭವಿಸಿರುವುದನ್ನು ಅಧಿಕೃತ ದತ್ತಾಂಶಗಳೇ ದೃಢಪಡಿಸಿವೆ. ಹೀಗಿರುವಾಗ, ಲಸಿಕೆ ಹಾಕಿಸಿಕೊಂಡ ನಂತರ ಸಾವು...

ತಮಿಳುನಾಡು| ಪೊಲೀಸ್ ದೌರ್ಜನ್ಯದಿಂದ ಎರಡು ತಿಂಗಳಲ್ಲಿ ನಾಲ್ವರು ದಲಿತರು ಸಾವು

ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿರುವ ತಮಿಳುನಾಡಿನಲ್ಲಿ ಕಾನೂನು ಸುವ್ಯವಸ್ಥೆ ಹದಗೆಡುತ್ತಿರುವುದನ್ನು ಪ್ರತಿಬಿಂಬಿಸುವ ಆತಂಕಕಾರಿ ವಿಚಾರವೊಂದು ಮುನ್ನಲೆಗೆ ಬಂದಿದ್ದು, ಪೊಲೀಸ್ ಹಿಂಸಾಚಾರದಿಂದಾಗಿ ಎರಡು ತಿಂಗಳ ಅವಧಿಯಲ್ಲಿ ನಾಲ್ವರು ದಲಿತರು ಸಾವನ್ನಪ್ಪಿದ್ದಾರೆ. ಈ ಸಾವುಗಳಲ್ಲಿ, ಎರಡು ಪ್ರಕರಣಗಳನ್ನು...

ಪಶ್ಚಿಮ ಏಷ್ಯಾ ಸಂಘರ್ಷ| ಹಾರ್ಮುಜ್ ಜಲಸಂಧಿಯಲ್ಲಿ ಇರಾನಿನ 16 ಹಡಗುಗಳನ್ನು ನಾಶಪಡಿಸಿದ್ದಾಗಿ ವಿಡಿಯೋ ಹಂಚಿಕೊಂಡ ಅಮೆರಿಕ ಸೇನೆ

ಪಶ್ಚಿಮ ಏಷ್ಯಾದಿಂದ ತೈಲ ರಫ್ತನ್ನು ತಡೆಯಲು ಇರಾನ್ ಪ್ರಯತ್ನಿಸುತ್ತಿರುವುದರಿಂದ ಹಾರ್ಮುಜ್ ಜಲಸಂಧಿಯಲ್ಲಿ ಇರಾನಿನ 16 ಹಡಗುಗಳನ್ನು ನಾಶಪಡಿಸಿರುವುದಾಗಿ ಅಮೆರಿಕ ಸೇನೆ ಹೇಳಿಕೊಂಡಿದೆ.  ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಹಿಂದೆ ಇರಾನ್ ಜಲಸಂಧಿಯಲ್ಲಿ ಗಣಿಗಳನ್ನು...