Homeರಾಜಕೀಯರಾಫೇಲ್‌ನ ಜಡ್ಜ್ಮೆಂಟ್‌ನಲ್ಲಿ ತಪ್ಪು ನುಸುಳಿದೆ: ಕೇಂದ್ರ ಸರ್ಕಾರದಿಂದಲೇ ಅರ್ಜಿ ಸಲ್ಲಿಕೆ

ರಾಫೇಲ್‌ನ ಜಡ್ಜ್ಮೆಂಟ್‌ನಲ್ಲಿ ತಪ್ಪು ನುಸುಳಿದೆ: ಕೇಂದ್ರ ಸರ್ಕಾರದಿಂದಲೇ ಅರ್ಜಿ ಸಲ್ಲಿಕೆ

- Advertisement -
- Advertisement -

ಇದನ್ನು ತಮಾಷೆ ಎನ್ನುವುದೋ, ನಮ್ಮ ದೇಶ ತಲುಪಿರುವ ದುರಂತದ ಸ್ಥಿತಿ ಎನ್ನುವುದೋ ಹೇಳುವುದು ಕಷ್ಟ. ನಿನ್ನೆ ಸುಪ್ರೀಂಕೋರ್ಟಿನಲ್ಲಿ ರಾಫೇಲ್ ಡೀಲ್‌ಗೆ ಸಂಬಂಧಿಸಿದಂತೆ ‘ತಮಗೆ ವಿಜಯ, ಪ್ರತಿಪಕ್ಷ ಕ್ಷಮೆ ಕೇಳಬೇಕು’, ‘ಮೋದಿಗೆ ಕ್ಲೀನ್‌ಚಿಟ್’, ‘ರಾಫೇಲ್ ಡೀಲ್‌ನಲ್ಲಿ ಏನೂ ತಪ್ಪಿಲ್ಲ’ ಎಂದೆಲ್ಲಾ ಬಿಜೆಪಿ ಮತ್ತು ಅದರ ಪಟಾಲಂ ಹಾಗೂ ಗೋದಿ ಮೀಡಿಯಾಗಳು ಕೂಗಾಡಿದ್ದವು. ವಾಸ್ತವದಲ್ಲಿ ಕೋರ್ಟಿಗೆ ಹೋಗಿದ್ದದ್ದು ಪ್ರತಿಪಕ್ಷವಲ್ಲ; ಅವು ಜಂಟಿ ಸಂಸದೀಯ ಸಮಿತಿಯ ರಚನೆಗೆ ಒತ್ತಾಯಿಸಿದ್ದವು. ಸುಪ್ರೀಂಕೋರ್ಟ್ ಏನೂ ತಪ್ಪಾಗಿಲ್ಲ ಎಂದು ಹೇಳುವುದಕ್ಕಿಂತ ಹೆಚ್ಚಾಗಿ ತಾನು ಮಧ್ಯಪ್ರವೇಶ ಮಾಡಲು ಸಾಧ್ಯವಿಲ್ಲ ಎಂದು ಹೇಳಲೇ ಹೆಚ್ಚು ಒತ್ತು ಕೊಟ್ಟಿತ್ತು.

ಈಗ ನೋಡಿದರೆ, ‘ಆ ಜಡ್ಜ್ಮೆಂಟ್‌ನಲ್ಲಿ ತಪ್ಪು ನುಸುಳಿದೆ, ತಾನು ಸೀಲ್ ಮಾಡಿದ ಕವರ್‌ನಲ್ಲಿ ಹೇಳಿದ್ದ ವಾಕ್ಯಗಳ ಆಧಾರದಿಂದಲೇ ಈ ತಪ್ಪು ಆಗಿದೆ’ ಎಂದು ಸ್ವತಃ ಕೇಂದ್ರ ಸರ್ಕಾರವು ಇಂದು ಸುಪ್ರೀಂಕೋರ್ಟಿನಲ್ಲಿ ಅರ್ಜಿ ಸಲ್ಲಿಸಿದೆ. ಇದೇಕೆ ನಡೆಯಿತು ಎಂಬುದನ್ನು ನೋಡೋಣ.

ಈ ಡೀಲ್‌ಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟು ಹೇಳಿದ್ದು 3 ಅಂಶ.

1. ಬೆಲೆಯ ಕುರಿತು ತಾನೇನೂ ಹೇಳಲಾರೆ, ಅದು ಪರಿಣಿತರಿಗೆ ಬಿಟ್ಟಿದ್ದು.
2. ಆಫ್‌ಸೆಟ್ ಪಾರ್ಟ್ನರ್ (ಅಂದರೆ ಅನಿಲ್ ಅಂಬಾನಿಯನ್ನೇ ಡಸಾಲ್ಟ್ನವರು ತೆಗೆದುಕೊಂಡಿದ್ದು) ಆಯ್ದುಕೊಂಡಿದ್ದು ಎರಡು ಕಾರ್ಪೋರೇಟ್ ಕಂಪೆನಿಗಳ ನಡುವಿನ ವ್ಯವಹಾರ.
3. ನಿಯಮಗಳನ್ನು ಸರಿಯಾಗಿ ಪಾಲಿಸಿಯೇ ವ್ಯವಹಾರ ನಡೆದಿದೆ.

ಅಂದರೆ ಮೊದಲೆರಡು ವಿಚಾರಗಳಲ್ಲಿ ಸರಿ ತಪ್ಪು ಏನು ನಡೆದಿದೆ ಎಂದು ಕೋರ್ಟ್ ಏನೂ ಹೇಳಿಲ್ಲ; ಇದರಲ್ಲಿ ಮಧ್ಯಪ್ರವೇಶಿಸುವುದು ಆಗದು ಎಂದು ಹೇಳಿದೆ. ಆದರೆ, ನಿಯಮಗಳನ್ನು ಸರಿಯಾಗಿ ಪಾಲಿಸಲಾಗಿದೆ ಎಂಬ ಅಭಿಪ್ರಾಯಕ್ಕೆ ಬರಲು ಅದು ಮುಂದಿಟ್ಟ ಪ್ರಮುಖ ಅಂಶವೆಂದರೆ 25ನೇ ಪ್ಯಾರಾ.

ಅದರ ಪ್ರಕಾರ ಈ ವ್ಯವಹಾರದ ಕುರಿತು ಸಿಎಜಿ ಪರಿಶೀಲಿಸಿದೆ, ಅದನ್ನು ಸಂಸತ್ತಿನ ಲೆಕ್ಕಪತ್ರ ಸಮಿತಿಯು (ಪಿಎಸಿ) ಪರಿಶೀಲಿಸಿದೆ ಮತ್ತು ಪಾರ್ಲಿಮೆಂಟ್‌ನಲ್ಲಿ ಅದರ ಸಾರಾಂಶವು ಮಂಡನೆಯಾಗುವುದರ ಮೂಲಕ ಸಾರ್ವಜನಿಕರಿಗೂ ವಿಷಯ ತಿಳಿಯುತ್ತದೆ.

ಇದು ಹೊರಬಿದ್ದ ಕೂಡಲೇ ಸಂಸತ್ತಿನ ಲೆಕ್ಕಪತ್ರ ಸಮಿತಿಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರ ಜೊತೆ ರಾಹುಲ್‌ಗಾಂಧಿ ಪತ್ರಿಕಾಗೋಷ್ಠಿ ನಡೆಸಿದ್ದರು. ಅಂತಹದೊಂದು ವರದಿಯೇ ತಮ್ಮ ಸಮಿತಿಯ ಮುಂದೆ ಬಂದಿಲ್ಲ ಎಂದು ಖರ್ಗೆ ಸ್ಪಷ್ಟಪಡಿಸಿದ್ದರು.

ಅಷ್ಟೇ ಅಲ್ಲದೇ, ಸಿಎಜಿಯನ್ನು ಮತ್ತು ಸುಪ್ರೀಂಕೋರ್ಟಿಗೆ ಈ ಸುಳ್ಳು ಹೇಳಿದ ಅಟಾರ್ನಿ ಜನರಲ್‌ರನ್ನು ಸಮಿತಿಯ ಮುಂದೆ ಕರೆಸಲು, ಇತರ ಸದಸ್ಯರಿಗೂ ಕೇಳುತ್ತೇನೆ ಎಂದು ಖರ್ಗೆ ಗುಡುಗಿದ್ದರು. ಅಲ್ಲಿಗೆ ತಾವು ಸೀಲ್ಡ್ ಕವರ್‌ನಲ್ಲಿ ಸುಪ್ರೀಂಕೋರ್ಟಿಗೆ ಹೇಳಿದ್ದ ಸುಳ್ಳನ್ನು ಆದೇಶದಲ್ಲೂ ಕೋರ್ಟು ಬಿಚ್ಚಿಟ್ಟದ್ದರಿಂದ ಸಿಕ್ಕಿ ಹಾಕಿಕೊಂಡ ಕೇಂದ್ರ ಸರ್ಕಾರವು ಅಡಕತ್ತರಿಗೆ ಸಿಕ್ಕಿಬಿಟ್ಟಿತು. ಇನ್ನು ತಾನು ಪೂರ್ಣ ಸಿಕ್ಕಿಹಾಕಿಕೊಳ್ಳುತ್ತೇನೆ ಎಂದು ಅದಕ್ಕೆ ಗೊತ್ತಾಯಿತು.

ಹಾಗಾಗಿ ಇಂದು ಸ್ವತಃ ತಾನೇ ಅಫಿಡವಿಟ್ ಸಲ್ಲಿಸಿತು. ಅದರಲ್ಲಿ `ತಾನು ನೀಡಿದ ಮಾಹಿತಿಯಲ್ಲಿ ಇಂಗ್ಲಿಷಿನಲ್ಲಿ ವಿವರಿಸಿದ ವಾಕ್ಯಗಳಲ್ಲಿ ತಪ್ಪು ಅರ್ಥ ಉಂಟಾಗಿರಬಹುದು. ಸಾಮಾನ್ಯವಾಗಿ ಸಿಎಜಿ ವರದಿಯನ್ನು ಪಿಎಸಿ ಪರಿಶೀಲಿಸುತ್ತದೆ ಮತ್ತು ಸಾಮಾನ್ಯವಾಗಿ ಅದರ ಸಾರಾಂಶವು ಸಂಸತ್ತಿನಲ್ಲಿ ಮಂಡನೆಯಾಗುತ್ತದೆ ಎಂಬ ಅರ್ಥದಲ್ಲಿ ಹೇಳಿದ್ದೇ ಹೊರತು, ಈಗಾಗಲೇ ಸಲ್ಲಿಸಲಾಗಿದೆ ಎಂದಲ್ಲ’ ಎಂದು ಹೇಳಿಕೊಂಡಿದೆ.

ಅಂದರೆ ವಿಚಾರ ಸ್ಪಷ್ಟವಾಗಿದೆ. ಬಿಜೆಪಿ ಪಕ್ಷವು, ಈ ಡೀಲ್‌ನಲ್ಲಿ ನೇರವಾಗಿ ಭಾಗಿಯಾದ ನರೇಂದ್ರ ಮೋದಿಯವರನ್ನು ಬಚಾವು ಮಾಡಲು ಒಂದಾದ ಮೇಲೆ ಒಂದರಂತೆ ಸುಳ್ಳುಗಳನ್ನು ಹೇಳತೊಡಗಿದೆ. ಪ್ರತೀ ಸುಳ್ಳೂ ಅನುಮಾನಗಳನ್ನು ಗಟ್ಟಿ ಮಾಡಿದೆಯೇ ಹೊರತು ಎಲ್ಲಿಯೂ ಅನುಮಾನ ನಿವಾರಣೆಯಾಗುವಂತೆ ಆಗಿಲ್ಲ.

ಹೀಗಾಗಿ
1. ಸುದೀರ್ಘ ಇತಿಹಾಸವುಳ್ಳ ಎಚ್‌ಎಎಲ್‌ನಿಂದ ಕಿತ್ತುಕೊಂಡು ಅನಿಲ್ ಅಂಬಾನಿಗೆ ಕೊಟ್ಟಿದ್ದೇಕೆ?
2. ಅದನ್ನು ನೀಡಬೇಕಾಗಿ ಬಂದಿದ್ದು ಭಾರತದ ಪ್ರಧಾನಿಯ ಕೋರಿಕೆಯ ಮೇರೆಗೆ ಎಂಬ ಹೇಳಿಕೆಯು ಫ್ರಾನ್ಸ್ನಿಂದ ಬಂದಿದ್ದನ್ನು ನೀವು ಮುಚ್ಚಿಹಾಕಲು ಪ್ರಯತ್ನಿಸುತ್ತಿರುವುದೇಕೆ?
3. ಮೂರು ಪಟ್ಟು ಹೆಚ್ಚು ಬೆಲೆಗೆ ಕೊಂಡುಕೊಳ್ಳುತ್ತಿರುವುದೇಕೆ?
4. ಹಿಂದೆ ಭಾರತದಲ್ಲೇ ತಂತ್ರಜ್ಞಾನವನ್ನೂ ಪಡೆದುಕೊಂಡು ಮೇಕ್‌ಇನ್ ಇಂಡಿಯಾ ಮಾಡಲು ಆಗಿದ್ದ ಒಪ್ಪಂದ ಬಿಟ್ಟು ಈಗ ತಂತ್ರಜ್ಞಾನ ವರ್ಗಾವಣೆಯೂ ಇಲ್ಲದೇ ಹೋಗುವಂತಾಗಲು ಹೇಗೆ ಒಪ್ಪಿಕೊಂಡಿರಿ?
5. ರಕ್ಷಣಾ ಸಚಿವರನ್ನೂ ಒಳಗೊಂಡಂತೆ ಯಾರಿಗೂ ಗೊತ್ತಿಲ್ಲದ ವ್ಯವಹಾರವನ್ನು ಪ್ರಧಾನಿ ಕಾರ್ಯಾಲಯ ಮಾತ್ರ ದಿಢೀರ್ ಎಂದು ಮಾಡಿದ್ದು ಏಕೆ?

ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಸಿಗಬೇಕೆಂದರೆ ಜಂಟಿ ಸಂಸದೀಯ ಸಮಿತಿಯ ತನಿಖೆ ಅಥವಾ ಸುಪ್ರೀಂಕೋರ್ಟ್ ಉಸ್ತುವಾರಿಯಲ್ಲಿ ತನಿಖೆ ನಡೆಯಬೇಕಲ್ಲದೇ ಬೇರೆ ದಾರಿಯಿಲ್ಲ.

ಅದನ್ನು ಬಿಟ್ಟು ಮತ್ತಷ್ಟು ಮುಚ್ಚಿ ಹಾಕಲು ಹೊರಟರೆ, ‘ಚೌಕೀದಾರ್ ಚೋರ್ ಹೈ’ ಮಾತು ನಿಜವೆಂದು ಜನರು ಹೆಚ್ಚೆಚ್ಚು ನಂಬುತ್ತಾ ಹೋಗುತ್ತಾರೆ. ಬಿಜೆಪಿಯು ಜಂಟಿ ಸಂಸದೀಯ ಸಮಿತಿಗೆ ಒಪ್ಪಿಸಿ ಧೈರ್ಯವನ್ನು ಮೆರೆಯಬೇಕು. ಅದೊಂದೇ ಪರಿಹಾರ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬಂಗಾಳ ಎಸ್ಐಆರ್ ಪ್ರಕ್ರಿಯೆ: ಚುನಾವಣಾ ಆಯೋಗದ ಸಹಾಯಕ್ಕೆ ನ್ಯಾಯಾಂಗ ಅಧಿಕಾರಿಗಳನ್ನು ನೇಮಿಸಲು ಕಲ್ಕತ್ತಾ ಹೈಕೋರ್ಟ್‌ಗೆ ಸುಪ್ರೀಂ ಸೂಚನೆ

ನವದೆಹಲಿ: ಪಶ್ಚಿಮ ಬಂಗಾಳ ಸರ್ಕಾರ ಮತ್ತು ಚುನಾವಣಾ ಆಯೋಗದ ನಡುವೆ ಮತದಾರರ ಪಟ್ಟಿ ಶುದ್ಧೀಕರಣ ಅಭಿಯಾನಕ್ಕೆ ಸಂಬಂಧಿಸಿದಂತೆ ದುರದೃಷ್ಟಕರ ಆರೋಪದ ಆಟ ನಡೆಯುತ್ತಿದೆ ಎಂದು ಪ್ರತಿಕ್ರಿಯಿಸಿರುವ ಸುಪ್ರೀಂ ಕೋರ್ಟ್, ವಿಶೇಷ ತೀವ್ರ ಪರಿಷ್ಕರಣೆ...

ಬಾಲಿವುಡ್ ನಟ ರಣವೀರ್ ಸಿಂಗ್ ಗೆ ಬಿಷ್ಣೋಯಿ ಗ್ಯಾಂಗ್ ನಿಂದ ಜೀವಬೆದರಿಕೆ: ಅಮೆರಿಕಾ ನಂಬರ್ ನಿಂದ 10ಕೋಟಿ ರೂ. ಬೇಡಿಕೆ 

ಬಿಷ್ಣೋಯ್ ಗ್ಯಾಂಗ್ ಬಾಲಿವುಡ್ ನಟ ರಣವೀರ್ ಸಿಂಗ್ ಅವರಿಂದ 10 ಕೋಟಿ ರೂ.ಗೆ ಬೇಡಿಕೆ ಇಟ್ಟಿದೆ ಎನ್ನಲಾಗಿದೆ. ಅಮೆರಿಕದ ಸಂಖ್ಯೆಯಿಂದ ಬಂದ ವಾಯ್ಸ್ ನೋಟ್ ಮೂಲಕ ಬೆದರಿಕೆ ಹಾಕಲಾಗಿದೆ ಎಂದು ವರದಿಯಾಗಿದೆ. ಮುಂಬೈ ಪೊಲೀಸ್...

‘ರಾಜಿ ಮಾಡಿಕೊಂಡ ಪ್ರಧಾನಿ’: ಎಐ ಇಂಪ್ಯಾಕ್ಟ್ ಶೃಂಗಸಭೆಯಲ್ಲಿ ಯುವ ಕಾಂಗ್ರೆಸ್‌ ಕಾರ್ಯಕರ್ತರಿಂದ ಶರ್ಟ್‌ ಬಿಚ್ಚಿ ಪ್ರತಿಭಟನೆ

ಎಐ ಇಂಪ್ಯಾಕ್ಟ್ ಶೃಂಗಸಭೆಗೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿಯವರನ್ನು ಗುರಿಯಾಗಿಸಿಕೊಂಡು ಮತ್ತು ಪ್ರಧಾನಿ "ರಾಜಿ ಮಾಡಿಕೊಂಡಿದ್ದಾರೆ" ಎಂದು ಆರೋಪಿಸಿ ಭಾರತೀಯ ಯುವ ಕಾಂಗ್ರೆಸ್ ಕಾರ್ಯಕರ್ತರು ಶುಕ್ರವಾರ ಭಾರತ್ ಮಂಟಪದಲ್ಲಿ ಶರ್ಟ್ ಧರಿಸದೆ ಪ್ರತಿಭಟನೆ...

ಬಾಗಲಕೋಟೆ: ಶಿವಾಜಿ ಜಯಂತಿ ಮೆರವಣಿಗೆ ವೇಳೆ ಕಲ್ಲು ತೂರಾಟ, ಉದ್ವಿಗ್ನ ಪರಿಸ್ಥಿತಿ: ಫೆ.24ರವರೆಗೆ ನಿಷೇಧಾಜ್ಞೆ ಜಾರಿ

ಬಾಗಲಕೋಟೆಯಲ್ಲಿ ಗುರುವಾರ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿಯಂದು ನಡೆದ ಪ್ರತಿಮೆ ಮೆರವಣಿಗೆಯ ಸಂದರ್ಭದಲ್ಲಿ ಕಲ್ಲು ತೂರಾಟ ನಡೆದ ಘಟನೆ ವರದಿಯಾಗಿದೆ. ಹಳೆಯ ನಗರ ಪ್ರದೇಶದ ಪಂಕ ಮಸೀದಿ ಬಳಿ ಮೆರವಣಿಗೆ ಸಾಗುತ್ತಿದ್ದಾಗ ಈ...

ನಿಯಮಿತವಾಗಿ ಎಸ್‌ಸಿ/ಎಸ್‌ಟಿ ಕಾಯ್ದೆ ಕೋಶದ ಸಭೆ ನಡೆಸುತ್ತಿಲ್ಲ ಎಂದು ಆರೋಪಿಸಿದ ಮೇವಾನಿ; ಗುಜರಾತ್ ವಿಧಾನಸಭೆಯಲ್ಲಿ ಕಾಂಗ್ರೆಸ್- ಬಿಜೆಪಿ ನಡುವೆ ವಾಗ್ವಾದ

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯ್ದೆಯಡಿಯಲ್ಲಿ ರಚಿಸಲಾದ ರಾಜ್ಯ ಮೇಲ್ವಿಚಾರಣಾ ಕೋಶದ (ಎಸ್‌ಎಂಸಿ) ನಿಯಮಿತ ಸಭೆಗಳನ್ನು ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಕರೆಯುತ್ತಿಲ್ಲ ಎಂದು ವಡ್ಗಾಮ್‌ನ ಕಾಂಗ್ರೆಸ್ ಶಾಸಕ ಜಿಗ್ನೇಶ್...

ನೆಲಮಂಗಲದಲ್ಲಿ ಹಾಸಿಗೆ ಹಿಡಿದ ಪತಿಯ ಎದುರೇ 60ವರ್ಷದ ಮಹಿಳೆಯ ಕೊಲೆ; ಐದು ಗಂಟೆಗಳಲ್ಲಿ ಆರೋಪಿ ಬಂಧನ

ಬೆಂಗಳೂರು: ಬೆಂಗಳೂರು ಹೊರವಲಯ ನೆಲಮಂಗಲದ ಪೇಟೆ ಬೀದಿಯಲ್ಲಿ ವೀಲ್‌ಚೇರ್‌ನಲ್ಲಿ ಕುಳಿತಿದ್ದ ಗಂಡನ ಮುಂದೆಯೇ ಮಹಿಳೆಯೊಬ್ಬಳ ಕೊಲೆಯಾದ ಐದು ಗಂಟೆಗಳಲ್ಲಿ ನೆಲಮಂಗಲ ಪಟ್ಟಣ ಪೊಲೀಸರು 45 ವರ್ಷದ ದಿನಸಿ ಅಂಗಡಿ ಮಾಲೀಕನನ್ನು ಬಂಧಿಸಿದ್ದಾರೆ. ಫೆಬ್ರವರಿ...

‘ದಿ ಕೇರಳ ಸ್ಟೋರಿ 2’ ಚಿತ್ರ ನಿರ್ಮಾಪಕರು, ಸಿಬಿಎಫ್‌ಸಿ ಮಂಡಳಿಗೆ ನೋಟಿಸ್ ಜಾರಿ ಮಾಡಿದ ಕೇರಳ ಹೈಕೋರ್ಟ್

ಕೊಚ್ಚಿ: 'ದಿ ಕೇರಳ ಸ್ಟೋರಿ 2 - ಗೋಸ್ ಬಿಯಾಂಡ್' ಚಿತ್ರದ ಪ್ರಮಾಣೀಕರಣವನ್ನು ರದ್ದುಗೊಳಿಸುವಂತೆ ಮತ್ತು ಅದರ ಶೀರ್ಷಿಕೆಯ ಮರುಪರಿಶೀಲನೆ ಸೇರಿದಂತೆ ಮಾರ್ಪಾಡುಗಳಿಗೆ ನಿರ್ದೇಶನ ನೀಡಬೇಕೆಂದು ಕೋರಿ ಕಣ್ಣೂರು ಮೂಲದವರು ಸಲ್ಲಿಸಿದ ಅರ್ಜಿಯ...

ಚುನಾವಣಾ ಸಮಯದಲ್ಲಿ ಉಚಿತ ಕೊಡುಗೆಗಳ ಪ್ರವೃತ್ತಿ ಪ್ರಶ್ನಿಸಿದ ಸುಪ್ರೀಂ ಕೋರ್ಟ್

ರಾಜಕೀಯ ಪಕ್ಷಗಳು ಮತ್ತು ರಾಜ್ಯ ಸರ್ಕಾರಗಳು ಚುನಾವಣೆಗೆ ಮುನ್ನ "ಉಚಿತ ಕೊಡುಗೆಗಳ" ಜಾಹೀರಾತು ನೀಡುವ ಅಭ್ಯಾಸ ಹೆಚ್ಚುತ್ತಿರುವ ಬಗ್ಗೆ ಸುಪ್ರೀಂ ಕೋರ್ಟ್ ಗುರುವಾರ ಬಲವಾದ ಮೌಖಿಕ ಅವಲೋಕನಗಳನ್ನು ನೀಡಿದೆ. ವಿದ್ಯುತ್ (ತಿದ್ದುಪಡಿ) ನಿಯಮಗಳು, 2024...

ರಾಹುಲ್ ಗಾಂಧಿಗೆ ಕರ್ಣಿ ಸೇನೆಯಿಂದ ಜೀವ ಬೆದರಿಕೆ: ಬಿಜೆಪಿ-ಆರ್‌ಎಸ್‌ಎಸ್ ಜಾಲವೇ ‘ಗೋಡ್ಸೆ ಕಾರ್ಖಾನೆ’ ಎಂದ ಕಾಂಗ್ರೆಸ್

ನವದೆಹಲಿ: ಲೋಕಸಭಾ ಸ್ಪೀಕರ್ ಓಂ ಬಿರ್ಲಾ ವಿರುದ್ಧ ನಡೆದ ಪ್ರತಿಭಟನೆಗೆ ಸಂಬಂಧಿಸಿದಂತೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ಕರ್ಣಿ ಸೇನೆ ಜೀವ ಬೆದರಿಕೆ ಹಾಕಿದ್ದು, ಇದು "ಏಕಾಂಗಿ ಸ್ಫೋಟವಲ್ಲ"...

ಬಿಹಾರ| ವಿಧಾನಸಭೆಯಲ್ಲಿ ‘ತಂಬಾಕು’ ತಿಂದ ಉಪಮುಖ್ಯಮಂತ್ರಿ ಸಾಮ್ರಾಟ್ ಚೌಧರಿ

ಬಿಹಾರ ವಿಧಾನಸಭೆಯ ಬಜೆಟ್ ಅಧಿವೇಶನದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ಬಳಿಕ ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ವಿಡಿಯೋದಲ್ಲಿ, ಉಪಮುಖ್ಯಮಂತ್ರಿ ಹಾಗೂ ಹಿರಿಯ ಬಿಜೆಪಿ ನಾಯಕ ಸಾಮ್ರಾಟ್ ಚೌಧರಿ ಕಲಾಪದ ಸಮಯದಲ್ಲಿ ವಸ್ತುವೊಂದನ್ನು...