Homeರಾಜಕೀಯರಫೇಲ್: ಕೇಂದ್ರಕ್ಕೆ ಮುಳುವಾದ ಮುಚ್ಚಿದ ಲಕೋಟೆ ಮತ್ತು ಬಿಜೆಪಿಯ ದ್ವಂದ್ವ ನಿಲುವು

ರಫೇಲ್: ಕೇಂದ್ರಕ್ಕೆ ಮುಳುವಾದ ಮುಚ್ಚಿದ ಲಕೋಟೆ ಮತ್ತು ಬಿಜೆಪಿಯ ದ್ವಂದ್ವ ನಿಲುವು

- Advertisement -
- Advertisement -

ಏನಿದು ಮುಚ್ಚಿಟ್ಟ ಲಕೋಟೆ?
ಕೆಲವೊಮ್ಮೆ ಸಾರ್ವಜನಿಕವಾಗಿ ಬಹಿರಂಗಪಡಿಸಲಾಗದ ಸಂಗತಿಗಳನ್ನು ಕೋರ್ಟು ಮುಚ್ಚಿದ ಲಕೋಟೆಯಲ್ಲಿ ಕೊಡಲು ಕೇಳುತ್ತದೆ. ಅಥವಾ ಸರ್ಕಾರ ಯಾ ಕೇಸು ದಾಖಲಿಸಿದ ವಾದಿಯೇ ಅಂತಹ ಮುಚ್ಚಿದ ಲಕೋಟೆಯನ್ನು ಕೋರ್ಟಿಗೆ ನೀಡುತ್ತದೆ. ಈ ವಿಧಾನವನ್ನು ಒಪ್ಪುವುದೂ ಕಷ್ಟ. ಏಕೆಂದರೆ, ಅದೇ ಕೇಸಿನಲ್ಲಿ ಇರುವ ಎದುರುದಾರರಿಗೂ ನಿರಾಕರಿಸಲ್ಪಟ್ಟ ದಾಖಲೆಗಳು ನ್ಯಾಯಾಧೀಶರಿಗೆ ಮಾತ್ರ ಲಭ್ಯವಾಗುತ್ತದೆ. ಅಂತಿಮವಾಗಿ ನ್ಯಾಯಾಧೀಶರಿಗೆ ಲಭ್ಯವಾಗಿರುವ ‘ಪುರಾವೆ’ಗಳು ಸುಳ್ಳೂ ಇರಬಹುದು. ಅದರ ಕುರಿತು ತಮ್ಮ ವಿವರಣೆ ಹೇಳುವ ಅವಕಾಶವೂ ಎದುರುದಾರರಿಗಿಲ್ಲದೇ ತಪ್ಪು ತೀರ್ಪೂ ಸಹಾ ಬರಬಹುದು.
ಈ ಪ್ರಕರಣವು ಹಾಗೆಯೇ ಆಗಿರುವ ಎಲ್ಲಾ ಲಕ್ಷಣಗಳೂ ಇವೆ.

ತೀರ್ಪನ್ನು ತಿದ್ದುಪಡಿ ಮಾಡುವಂತೆ ಸುಪ್ರೀಂ ಕೋರ್ಟಿಗೆ ಕೇಂದ್ರ ಸಲ್ಲಿಸಿರುವ ಅಫಿಡವಿಟ್

ರಾಫೇಲ್ ಡೀಲ್‌ನಲ್ಲಿ ಮೂರು ಅಂಶಗಳು ಕೋರ್ಟಿನ ಮುಂದೆ ಇದ್ದವು. ಮೂಲ ಒಪ್ಪಂದಕ್ಕಿಂತ ಮೂರು ಪಟ್ಟು ಹೆಚ್ಚು ದರ ನೀಡಿ ಖರೀದಿ ಮಾಡಲು ಮೋದಿ ಸರ್ಕಾರ ಹೊರಟಿರುವುದು, ಈ ಡೀಲ್‌ನಲ್ಲಿ ಆಫ್‌ಸೆಟ್ ಪಾಲುದಾರನನ್ನಾಗಿ 7 ದಿನಗಳ ಹಿಂದಷ್ಟೇ ಹುಟ್ಟಿಕೊಂಡ ಅನಿಲ್ ಅಂಬಾನಿಯ ಕಂಪೆನಿಯನ್ನು ಒಳಗೊಂಡಿರುವುದು ಮತ್ತು ಸೂಕ್ತ ಪ್ರಕ್ರಿಯೆ ಅಳವಡಿಸದೇ ಖರೀದಿ ವ್ಯವಹಾರ ಒಪ್ಪಂದ ಮಾಡಿಕೊಂಡಿರುವುದು. ಮೊದಲೆರಡು ಅಂಶಗಳು ಯಾವುದೇ ಸರ್ಕಾರ ಅಥವಾ ಕಂಪೆನಿಯ ಆಂತರಿಕ ವ್ಯವಹಾರದಂತೆಯೂ ತೋರಬಹುದಾದ್ದರಿಂದ ಆ ಕುರಿತು ತಾನೇನೂ ಹೇಳಲು ಇಲ್ಲ ಎಂದು ನ್ಯಾಯಾಲಯವು ಹೇಳಬಹುದು; ಹೇಳಿದೆ. ಆದರೂ, ನ್ಯಾಯಾಲಯವು ಈ ಬಗ್ಗೆ ಖಚಿತವಾಗಿರಲು ಮುಚ್ಚಿದ ಲಕೋಟೆಯಲ್ಲಿ ವಿವರಗಳನ್ನು ಕೇಳಿತು. ಅದರಲ್ಲಿ ದರಗಳ ವಿವರದ ಜೊತೆಗೆ, ಸೂಕ್ತ ಪ್ರಕ್ರಿಯೆಯನ್ನು ಅಳವಡಿಸಿರುವ ಕುರಿತು ಸರ್ಕಾರವು ವಿವರಗಳನ್ನು ನೀಡಿತು.

ಅದರಲ್ಲೇ ಸಿಎಜಿಗೂ ವಿವರ ನೀಡಿದ್ದೇವೆ; ಸಿಎಜಿಯ ವರದಿಯನ್ನು ಪಿಎಸಿ (ಸಂಸತ್ತಿನ ಲೆಕ್ಕ ಪತ್ರಗಳ ಸಮಿತಿ)ಗೂ ಸಲ್ಲಿಸಲಾಗಿದೆ ಇತ್ಯಾದಿ ಸುಳ್ಳುಗಳನ್ನು ಸರ್ಕಾರವು ಹೇಳಿತು. ಬಹುಶಃ ಮುಚ್ಚಿದ ಲಕೋಟೆಯಲ್ಲಿನ ವಿವರಗಳನ್ನು ನ್ಯಾಯಾಲಯವು ತೀರ್ಪಿನಲ್ಲಿ ಉಲ್ಲೇಖಿಸಲಿಕ್ಕಿಲ್ಲ ಎಂದು ಸರ್ಕಾರದ ಆಲೋಚನೆಯಾಗಿರಬೇಕು. ಆದರೆ, ಸೂಕ್ತ ಪ್ರಕ್ರಿಯೆ ನಡೆದಿರುವುದು ತನಗೆ ಮನವರಿಕೆಯಾದ್ದರಿಂದಲೂ ‘ತಾನು ಮಧ್ಯಪ್ರವೇಶಿಸುವುದಿಲ್ಲ’ ಎಂದು ನ್ಯಾಯಾಲಯವು ಹೇಳಬಯಸಿತು. ಹಾಗಾಗಿ ಅದನ್ನು ತೀರ್ಪಿನಲ್ಲಿ ಉಲ್ಲೇಖಿಸಿಬಿಟ್ಟಿತು.

ಈ ಮೊಕದ್ದಮೆಯಲ್ಲಿ ಭಾಗಿಯಾಗಿರುವ ನ್ಯಾಯವಾದಿ ಪ್ರಶಾಂತ್‌ಭೂಷಣ್ ಅವರು ಮೊದಲಿಗೆ ಈ ವಿವರಗಳು ನಮಗೆ ಗೊತ್ತೇ ಇರಲಿಲ್ಲವಲ್ಲಾ ಎಂದು ಆಶ್ಚರ್ಯವ್ಯಕ್ತಪಡಿಸಿದರು. ನಂತರ ಆಶ್ಚರ್ಯವ್ಯಕ್ತಪಡಿಸುವ ಸರದಿ ಪಿಎಸಿ ಅಧ್ಯಕ್ಷರದ್ದಾಗಿತ್ತು. ಅಂತಹ ಯಾವ ವರದಿಯೂ ತಮಗೂ ಸಿಕ್ಕಿಲ್ಲವಲ್ಲಾ ಎಂದು ಅದರ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಹೇಳಿದ್ದಲ್ಲದೇ, ಸಿಎಜಿ ಮತ್ತು ಸುಪ್ರೀಂಕೋರ್ಟಿಗೆ ಸರ್ಕಾರದ ಪರವಾಗಿ ಸುಳ್ಳನ್ನು ಹೇಳಿದ ಅಟಾರ್ನಿ ಜನರಲ್ ಇಬ್ಬರನ್ನೂ ಪಿಎಸಿ ಕರೆಸುತ್ತದೆಂದು ಹೇಳಿದರು.

ಇಷ್ಟು ಸಣ್ಣ ವಿಚಾರ ಸರ್ಕಾರಕ್ಕೆ ಗೊತ್ತಿಲ್ಲದೇನಲ್ಲ. ಆದರೆ, ತಾನು ಮುಚ್ಚಿದ ಲಕೋಟೆಯಲ್ಲಿ ಕೊಟ್ಟ ಅಂಶವು ಹೊರಗೆ ಬರಲಾರದು ಎಂಬ ತಪ್ಪು ಲೆಕ್ಕಾಚಾರ ಅದರದ್ದಾಗಿತ್ತು. ಈಗ ಬೇರೆ ದಾರಿಯೇ ಇಲ್ಲ. ಹಾಗಾಗಿ ಸಿಎಜಿ ವರದಿಯನ್ನು ಸಾಮಾನ್ಯವಾಗಿ ಪಿಎಸಿ ಪರಿಶೀಲಿಸುತ್ತದೆ ಎಂದು ತಾನು ಹೇಳಬಯಸಿದ್ದೆ, ಅದು ಈಗಾಗಲೇ ಪರಿಶೀಲಿಸಿದೆ ಎಂಬರ್ಥದಲ್ಲಿ ಟೈಪಿಂಗ್ ಎಡವಟ್ಟು ಅಷ್ಟೇ ಎಂದು ಸುಪ್ರೀಂಕೋರ್ಟಿಗೆ ಅಫಿಡವಿಟ್ ಹಾಕಿದೆ.

ಒಂದು ವೇಳೆ ಇದನ್ನು ಟೈಪಿಂಗ್ ಎಡವಟ್ಟು ಎಂದೇ ಇಟ್ಟುಕೊಂಡರೆ, ಸಿಎಜಿ ಹಾಗೂ ಪಿಎಸಿ ಪರಿಶೀಲಿಸಿದ ಮೇಲೆ ಪ್ರಕ್ರಿಯೆಯ ಕುರಿತು ಆಕ್ಷೇಪಣೆ ಸಲ್ಲಿಸುವ ಅಗತ್ಯವಿಲ್ಲ ಎಂದು ಹೇಳಿದ್ದ ಸುಪ್ರೀಂಕೋರ್ಟು, ಈಗ ಅದರಲ್ಲಿ ಲೋಪವನ್ನು ಕಾಣಲೇಬೇಕು. ಆಗ ಕೇಂದ್ರ ಸರ್ಕಾರದ ಪರಿಸ್ಥಿತಿ ಏನಾಗುತ್ತದೆ ಎಂಬುದನ್ನು ನಾವು ಕಾದು ನೋಡಬೇಕಷ್ಟೇ.

ಅದೇನೇ ಇರಲಿ, ದೇಶದ ರಕ್ಷಣಾ ಇಲಾಖೆಗೆ ಸೇರಿದ ಇಂತಹ ದೊಡ್ಡ ಡೀಲ್‌ನ ಕುರಿತು ಇಷ್ಟೊಂದು ತಪ್ಪುಗಳ ನಡೆದಿರುವಾಗ, ಉನ್ನತ ಮಟ್ಟದ ತನಿಖೆ ಆಗದೇ ಹೋದರೆ ಅದಕ್ಕಿಂತ ದೊಡ್ಡ ದುರಂತ ಇನ್ನೊಂದಿರಲಾರದು.

ಜಂಟಿ ಸಂಸದೀಯ ಸಮಿತಿ: ಬಿಜೆಪಿಯ ದ್ವಂದ್ವ ನಿಲುವು

ಯುಪಿಎ ಅವಧಿಯ 2 ಜಿ ಸ್ಪೆಕ್ಟ್ರಂ ಹಗರಣ ಎಲ್ಲರಿಗೂ ಗೊತ್ತಿದೆ. ಆ ವಿಚಾರದಲ್ಲಿ ತನಿಖೆಯೂ ನಡೆಯಿತು; ಕೇಂದ್ರದಲ್ಲಿ ಮಂತ್ರಿಯಾಗಿದ್ದವರೊಬ್ಬರು ಜೈಲಿಗೂ ಹೋಗಿ ಬಂದರು. ಆ ಹಗರಣದ ಕುರಿತು ಜಂಟಿ ಸಂಸದೀಯ ಸಮಿತಿಯೇ ರಚನೆಯಾಗಬೇಕು ಎಂದು ಬಿಜೆಪಿಯು ಪಟ್ಟು ಹಿಡಿಯಿತು. ಆಗಿನ ಅದರ ಸರ್ವೋಚ್ಚ ನಾಯಕ ಎಲ್.ಕೆ.ಅಡ್ವಾಣಿಯವರ ನೇತೃತ್ವದಲ್ಲಿ ಪ್ರತಿಭಟನೆಗಳೂ ನಡೆದವು.

ಅದರ ನಂತರ ಭ್ರಷ್ಟಾಚಾರವೇ ಪ್ರಮುಖ ಇಶ್ಯೂ ಎಂದು ಬಿಜೆಪಿಯು ಹೇಳಿತು. ಎಲ್.ಕೆ.ಅಡ್ವಾಣಿಯವರು ದೇಶಾದ್ಯಂತ ಪ್ರವಾಸ ಹೊರಟರು. ಅಂತಹ ಒಂದು ಪ್ರವಾಸದ ಭಾಗವಾಗಿ ಬೆಂಗಳೂರಿನ ನ್ಯಾಷನಲ್ ಕಾಲೇಜಿನ ಮೈದಾನದಲ್ಲೂ ಒಂದು ಬೃಹತ್ ಸಭೆ ಆಯೋಜನೆಯಾಯಿತು. ಆ ಹೊತ್ತಿಗೆ ಜೈಲಿಗೆ ಹೋಗಿದ್ದ ಯಡಿಯೂರಪ್ಪನವರ ವಿಚಾರವನ್ನು ದೂರವಿಟ್ಟಿದ್ದಲ್ಲದೇ, ಯಡಿಯೂರಪ್ಪನವರ ಸಮೀಪವರ್ತಿಗಳನ್ನೂ ದೂರವಿಡಲಾಗಿತ್ತು.

ಅದೇನೇ ಇರಲಿ, ಜಂಟಿ ಸಂಸದೀಯ ಸಮಿತಿಯಿಂದ ಮಾತ್ರ ಇದರ ಸರಿಯಾದ ತನಿಖೆ ಸಾಧ್ಯ ಎಂದು ಆಗ ಬಿಜೆಪಿ ಹೇಳಿತ್ತು. ಈಗ ಖರ್ಗೆಯವರು ಅಧ್ಯಕ್ಷರಾಗಿರುವ ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿಯಿಂದ ಪರಿಶೀಲನೆ ಆಗಿದೆ ಎಂದು ಆಗ ಯುಪಿಎ ಸರ್ಕಾರವು ಹೇಳಿತ್ತು. ಆದರೆ, ಇವೆರಡರ ಪಾತ್ರ ಬೇರೆ ಬೇರೆಯಾಗಿದ್ದು, ಜೆಪಿಸಿ (ಜಂಟಿ ಸಂಸದೀಯ ಸಮಿತಿ)ಯೇ ಇದಕ್ಕೆ ಸರಿ ಎಂದು ಸುಷ್ಮಾ ಸ್ವರಾಜ್ ಟ್ವೀಟ್ ಮಾಡಿದ್ದರು.

‘ನಮ್ಮ ಬೇಡಿಕೆ – ಜೆಪಿಸಿ’ ಎಂದು ಹೇಳುವ ಪ್ಲಕಾರ್ಡ್ಗಳನ್ನು ಇಟ್ಟುಕೊಂಡು ಆಗ ಬಿಜೆಪಿ ದೊಡ್ಡ ಪ್ರತಿಭಟನೆ ನಡೆಸಿತ್ತು. ಈಗ ರಾಫೇಲ್ ಡೀಲ್‌ನ ವಿಚಾರದಲ್ಲಿ ಮಾತ್ರ ಜಂಟಿ ಸಂಸದೀಯ ಸಮಿತಿಯ ರಚನೆ ಸಾಧ್ಯವಿಲ್ಲ ಎಂದು ಆಡಳಿತ ಪಕ್ಷವಾದ ಬಿಜೆಪಿಯು ಪಟ್ಟು ಹಿಡಿದಿದೆ. ಅದರಲ್ಲೂ ನೇರವಾಗಿ ಪ್ರಧಾನಿ ನರೇಂದ್ರ ಮೋದಿಯವರೇ ಖುದ್ದಾಗಿ ಈ ಡೀಲ್‌ನಲ್ಲಿ ಭಾಗಿ ಎಂಬ ಆರೋಪವನ್ನು ಮಾಡಲಾಗಿದೆ ಹಾಗೂ ಮೇಲ್ನೋಟಕ್ಕೆ ಹಲವು ಅಂಶಗಳನ್ನು ಅದನ್ನು ಸಮರ್ಥಿಸುವಂತೆ ಇರುವಾಗ ಬಿಜೆಪಿಯ ಈ ಹಿಂದೇಟು ಅನುಮಾನಗಳನ್ನು ದೃಢೀಕರಿಸುತ್ತದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...