Homeಸಾಮಾಜಿಕಶೂನ್ಯ ಬಂಡವಾಳ-ಶೂನ್ಯ ಸರಕು-ಅಪಾರ ಲಾಭ!

ಶೂನ್ಯ ಬಂಡವಾಳ-ಶೂನ್ಯ ಸರಕು-ಅಪಾರ ಲಾಭ!

- Advertisement -
- Advertisement -

ಮಾನವ ಸಮಾಜದಲ್ಲಿ ಆರ್ಥಿಕ ವ್ಯವಸ್ಥೆ ಬೆಳೆದುಬಂದಂತೆಲ್ಲಾ ಬಂಡವಾಳ ಶಾಹಿ ವ್ಯವಸ್ಥೆ ಬಂತು. ಆಧುನಿಕ ವ್ಯಾಪಾರ ಸಂಸ್ಥೆಯೂ ಬಂತು. ನಾವು ಉದಾಹರಣೆಗೆ ಎಕ್ಸ್ ಎಂಬ ಒಂದು ಸಾರ್ವಜನಿಕ ಬಂಡವಾಳದ ಒಂದು ಕಂಪೆನಿಯನ್ನು ಊಹಿಸಿಕೊಳ್ಳೋಣ. ಅದರಲ್ಲಿ ಸಾವಿರಾರು ಹೂಡಿಕೆದಾರರ ಬಂಡವಾಳ ಇರುತ್ತದೆ. ಒಬ್ಬರಿಗೆ ಇನ್ನೊಬ್ಬರ ಪರಿಚಯ ಇರುವುದಿಲ್ಲ. ಅದಕ್ಕೆ ಅಧ್ಯಕ್ಷರಾಗಿ ಒಂದು ಆಡಳಿತ ಮಂಡಳಿ ಇರುತ್ತದೆ. ಅದರ ಮೇಲಿನ ನಂಬಿಕೆಯಿಂದ ಜನರು ಹಣ ಹೂಡುತ್ತಾರೆ. ಆದರೆ ಅದಕ್ಕೆ ಇರುವುದು ಕಾಲ್ಪನಿಕ ಕಾನೂನು ಬದ್ಧ ಅಸ್ತಿತ್ವ ಮಾತ್ರ ಇರುವುದು ದೈಹಿಕ ಅಸ್ತಿತ್ವ ಇರುವುದಿಲ್ಲ. ನಮ್ಮ ಈ ‘ಎಕ್ಸ್’ ಕಂಪೆನಿ ಕಾರು ಉತ್ಪಾದಿಸುತ್ತದೆ ಎನ್ನೋಣ. ನೀವು ಕೊಂಡ ಕಾರು ಸರಿಯಿಲ್ಲವಾದರೆ ನೀವು ಕಂಪೆನಿಯ ಮೇಲೆ ಕೇಸು ಹಾಕಬಹುದು ಅದರ ಅಧ್ಯಕ್ಷ ಅದಾನಿಯೋ, ಅಂಬಾನಿಯ ಮೇಲಲ್ಲ. ಆದರೆ ಅದಕ್ಕೆ ಕಾನೂನಿನ ಅಸ್ತಿತ್ವ ಮಾತ್ರ ಇರುವುದು!
ಉದಾಹರಣೆಗೆ ಈ ‘ಎಕ್ಸ್’ ಕಂಪೆನಿಯ ಎಲ್ಲಾ ಕಾರುಗಳು, ಕಾರ್ಖಾನೆಗಳು ನಾಶವಾದರೂ ‘ಎಕ್ಸ್’ ಕಂಪೆನಿ ಕಾನೂನು ಬದ್ಧವಾಗಿ ಅಸ್ತಿತ್ವದಲ್ಲಿ ಇರುತ್ತದೆ. ಅದೇ ಹೆಸರಲ್ಲಿ ಮುಂದೆ ಕಾರ್ಖಾನೆ ಸ್ಥಾಪಿಸಿ, ಕಾರುಗಳನ್ನು ಉತ್ಪಾದನೆ ಮಾಡಿ ಮಾರಲು ಸಾಧ್ಯವಿದೆ! ಅದನ್ನು ಸೂಕ್ಷ್ಮವಾಗಿ ಯೋಚಿಸೋಣ. ನಮ್ಮ ದೇವರು ಮತ್ತು ಧರ್ಮಗಳಿಗೂ ಇರುವುದು ‘ಸಾಮೂಹಿಕ ಕಲ್ಪನೆಯ ಅಸ್ತಿತ್ವ’ ಮಾತ್ರ! ಅವುಗಳನ್ನು ಪ್ರತ್ಯಕ್ಷವಾಗಿ ತೋರಿಸಲಾಗದು. ಈ ಸಾಮೂಹಿಕ ಕಾಲ್ಪನಿಕ ಅಸ್ತಿತ್ವ’ವನ್ನೇ ನಮ್ಮ ಜೋಯಿಸರುಗಳು ಬಂಡವಾಳ ಮಾಡಿಕೊಂಡಿದ್ದಾರೆ!
ಕಂಪೆನಿಗೆ ಭೌತಿಕ ಅಸ್ತಿತ್ವ ಇಲ್ಲದಿದ್ದರೂ ಅದರ ಕಾರ್ಖಾನೆಗಳು ಭೌತಿಕ ಉತ್ಪಾದನೆಗಳನ್ನು ತಯಾರಿಸುತ್ತವೆ, ಮಾರುತ್ತವೆ, ಮಾರುಕಟ್ಟೆಯ ಪರಿಸ್ಥಿತಿಯನ್ನು ಆಧರಿಸಿ ಲಾಭ ಮಾಡುತ್ತವೆ; ಇಲ್ಲವೇ ನಷ್ಟ ಭರಿಸುತ್ತವೆ. ಇದು ಆಹಾರ ನಿತ್ಯೋಪಯೋಗಿ ವಸ್ತುಗಳಿಗೆ ಅನ್ವಯಿಸುತ್ತದೆ. ಈಗ ಭೌತಿಕ ಅಸ್ತಿತ್ವ ಇಲ್ಲದ ಸೇವೆಗಳು ಹುಟ್ಟಿಕೊಂಡಿವೆ.
ಆದರೆ ಈ ಪುರೋಹಿತರು ನೋಡಿ-ವರ್ಷಾಂತರಗಳಿಂದ ಭೌತಿಕ ಅಸ್ತಿತ್ವವೇ ಇಲ್ಲದ ಕಾಲ್ಪನಿಕ ಸರಕುಗಳನ್ನು ಮಾರಿ ಲಾಭಗಳಿಸುತ್ತಿದ್ದಾರೆ. ಅದಕ್ಕೆ ಬಂಡವಾಳವನ್ನೂ ಅಂದರೆ ಸಾಮಗ್ರಿಗಳು, ದಕ್ಷಿಣೆ, ಫೀಸು ಇತರ ವೆಚ್ಚಗಳನ್ನು ಭಕ್ತರೇ ಭರಿಸಬೇಕು! ಪ್ರತೀ ಕಾರ್ಖಾನೆಯಲ್ಲಿ ಏನಾದರೂ ಉತ್ಪನ್ನ ಹುಟ್ಟುತ್ತದೆ. ಇವರ ಉತ್ಪನನ್ ಅಸ್ತಿತ್ವದಲ್ಲೇ ಇಲ್ಲದ ಪಾಪ, ಪುಣ್ಯ, ಪರಿಹಾರ, ಶ್ರೇಯಸ್ಸು ಮುಂತಾದ ಕಾಲ್ಪನಿಕ ಸರಕುಗಳೇ! ಇವನ್ನು ಅವರಿಗೆ ತೋರಿಸಲಾಗುವುದಿಲ್ಲ! ನಿಮಗೆ ನೋಡಲು ಆಗುವುದಿಲ್ಲ! ಕೇವಲ ಭ್ರಮಿಸಬಹುದು ಅಷ್ಟೇ!
ಉದಾಹರಣೆಗೆ ಯಾವುದೋ ಜೋಯಿಸರ ಮಾತು ಕೇಳಿ ನೀವು ಪೂಜೆ ಮಾಡಿಸಿದರೆನ್ನಿ. ಎಲ್ಲಾ ಸಾಮಗ್ರಿ, ವೆಚ್ಚ ನೀವೇ ಭರಿಸಬೇಕು. ಉತ್ಪನ್ನ? ನಿಮಗೆ ಏನು ಸಿಕ್ಕಿತು ಎಂಬುದನ್ನು ನೀವು ನೋಡಲು ಸಾಧ್ಯವೆ? ಆದರೆ ಜೋಯಿಸರಿಗೆ ಮಾತ್ರ ಭೌತಿಕವಾಗಿ ‘ಗಂಟು’ ಸಿಗುತ್ತದೆ.
ಈ ಕಾಲ್ಪನಿಕ ಸರಕುಗಳನ್ನು ನಮ್ಮ ಜೋಯಿಸರುಗಳು ಹೇಗೆ ಮಾರ್ಕೆಟ್ ಮಾಡುತ್ತಿದ್ದಾರೆ ನೋಡಿ. ನಮ್ಮ ನಂಬಿಕೆಯೇ ಇದಕ್ಕೆ ಆಧಾರ. ಪ್ರಧಾನಮಂತ್ರಿ ಬೇರೆಬೇರೆ ಖಾತೆಗಳನ್ನು ಬೇರೆಬೇರೆಯವರಿಗೆ ಹಂಚುವಂತೆ ಬೇರೆಬೇರೆ ದೇವರಿಗೆ ಹಂಚಿಬಿಟ್ಟಿದ್ದಾರೆ. ಸೃಷ್ಟಿ, ಪಾಲನೆ, ಲಯ ಒತ್ತಟ್ಟಿಗಿರಲಿ- ಧನ, ವಿದ್ಯೆ, ಸಂತಾನ ಇತ್ಯಾದಿಯಾಗಿ ನಿತ್ಯ ಜೀವನದ ವಿಷಯಗಳಿಗೂ ಒಬ್ಬೊಬ್ಬ ದೇವರು! ಹಣಕ್ಕೆ ಲಕ್ಷ್ಮಿ, ವಿದ್ಯೆಗೆ ಸರಸ್ವತಿ ಹೀಗೆ! ಇವರಲ್ಲಿ ಲಕ್ಷ್ಮಿಗಂತೂ ಹಲವಾರು ಖಾತೆಗಳು. ಧನಲಕ್ಷ್ಮಿ, ಧಾನ್ಯಲಕ್ಷ್ಮಿ, ವಿದ್ಯಾಲಕ್ಷ್ಮೀ, ಗೃಹಲಕ್ಷ್ಮೀ, ಸಂತಾನಲಕ್ಷ್ಮೀ ಮುಂತಾದ ಹೆಸರುಗಳಲ್ಲೇ ಇದು ಸ್ಪಷ್ಟವಾಗುತ್ತದೆ. ಆಸ್ತಿಕರ ಪಾಲಿಗೆ ದೇವರೊಬ್ಬನೆ-ಆತ ಪರಮಾತ್ಮ ಎಂದು ಘೋಷಿಸಿ, ದೇವರನ್ನು ನಿರಾಕಾರ-ನಿರ್ಗುಣ’ ಎಂದು ಸಾರಿದ ಧರ್ಮವೊಂದರಲ್ಲಿ ಲೆಕ್ಕಕ್ಕೆ ಸಿಗದಷ್ಟು ದೇವರನ್ನು ಸೃಷ್ಟಿಸಿ, ಅವರಿಗೆ ತಾವೇ ಒಂದೊಂದು ಕರ್ತವ್ಯವನ್ನು ಹೇರಿ, ಒಬ್ಬೊಬ್ಬರಿಗೆ ಒಂದೊಂದು ರೀತಿಯ ಪೂಜೆಗಳನ್ನು ಆವಿಷ್ಕರಿಸಿದ ಪುರೋಹಿತರಷ್ಟು ಬುದ್ಧಿವಂತರು, ಮಹಾ ವಿಜ್ಞಾನಿಗಳು ಪ್ರಪಂಚದಲ್ಲಿ ಬೇರಾರೂ ಇಲ್ಲ!
ವಿಜ್ಞಾನದ ಆವಿಷ್ಕಾರಗಳು! ‘ವರ್ಚುವಲ್ ವಲ್ರ್ಡ್’! ವಾವ್ ನಾವು, ನಮ್ಮ ಮಕ್ಕಳು ಮೊಬೈಲ್ ಫೋನಿನಲ್ಲಿ, ತಲೆಗೆ ಕಿರೀಟದಂತಹ ಕಿರೀಟ ಹಾಕ್ಕೊಂಡು, ಎಂತೆಂತೆಲ್ಲವನ್ನು ಅನುಭವಿಸಬಹುದು ಈ ಪ್ರಪಂಚವನ್ನೇ ಡ್ರಗ್ ಸೇವಕದಂತೆ ಮರೆಯಬಹುದು. ನಿಜವನ್ನು ಭ್ರಮೆಯಲ್ಲಿ ಕಾಣಬಹುದು. ಕಾರ್ಲ್‍ಮಾಕ್ರ್ಸ್ ಧರ್ಮವನ್ನು ಅಫೀಮು ಎಂದು ಕರೆದಾಗ ಅವನಿಗೆ ಏನಾದರೂ ಈ ರೀತಿ ಮುಂದಾಲೋಚನೆ ಇದ್ದಿರಬಹುದೆ? ಭಾರತದಲ್ಲಿ ಜಾತಿಪಾತಿ-ಚಪಾತಿ ಭಾರತದಲ್ಲಿ ಬಂಡವಾಳ ಇಲ್ಲದೆ, ಅವನ ಕಾಲಕ್ಕೇ ಬೆಳೆದಿರದ ಬಂಡವಾಳ ರಹಿತ ಶೋಷಣೆ ವ್ಯವಸ್ಥೆ ಇಲ್ಲಿ ಆಳವಾಗಿ ಬೇರೂರಿದೆ ಎಂದು ಕಾರ್ಲ್‍ಮಾಕ್ರ್ಸ್‍ಗೆ ಗೊತ್ತಿರಬಹುದೆ? ಹಾಂ! ಇಲ್ಲ!! ಅದಕ್ಕೆ ಹೇಳುವುದು-ಬ್ರಹ್ಮಜ್ಞಾನ-ಬ್ರಾಹ್ಮಣ ಸಂಜಾತರಿಗೆ(ಗೆಳೆಯರು ಕ್ಷಮಿಸಿ) ಮಾತ್ರ ಸಿಗುವಂತದ್ದು! ಅದರಿಂದಲೇ ಅವರು ಅತ್ಯಾಧುನಿಕ ವೈಜ್ಞಾನಿಕ, ಆರ್ಥಿಕ, ಪಾರಮಾರ್ಥಿಕ ಆವಿಷ್ಕಾರಗಳನ್ನು ಮಾಡಿದ್ದಾರೆ! ಅದನ್ನು ಶಿವನ ಸರ್ಜರಿ, ಅಣುಬಾಂಬ್-ಬ್ರಹ್ಮಾಸ್ತ್ರ-ಇತ್ಯಾದಿಯಾಗಿ ಸಾವಿರಾರು ರೀತಿಯಲ್ಲಿ ನಂಬಿದ್ದಾರೆ! ಯಾವುದೇ ರಾಕೆಟ್ ಹಾರಿಸಲು ಫ್ಯುಯೆಲ್-ಇಂಧನ ಬೇಕು. ಬಾಂಬ್ ತಯಾರಿಸಲೂ ಕೆಲವು ಮೂಲವಸ್ತುಗಳು-ಅಣುಬಾಂಬಿಗೆ ಕಾಲ್ಪನಿಕ ದೋಷಗಳೇ ಸಾಕು! ಬಂಡವಾಳ ನಿಮ್ಮದೇ! ಹೂವು-ಗೀವು-ಅದೂ-ಇದು! ನೀವು ಪ್ರಾನ್ಸ್-ಅಮೆರಿಕಾದ ಗುಲಾಮರಾಗಿರಬೇಕಾಗಿಲ್ಲ! ಅವರೇ ನಿಮಗೆ ರಿಡಕ್ಷನ್-ಕಮೀಷನ್ ಕೊಡುತ್ತಾರೆ! ಇಸ್ರೇಲನ್ನು ಮರೆಯದಿರಿ! ಕೇರಳ ಮಂತ್ರವಾದಿಗಳಂತೆ ಅವರೇ ಎಲ್ಲವನ್ನೂ ಮಾಡುತ್ತಾರೆ! ನೀವು ಸೂಟುಹಾಕಿ ಪೂಜೆಗೆ ಕುಳಿತರೆ ಪಡು! ನಾವು ಪೂಜೆಯಿಂದ ಮಳೆ ಬರಿಸಬಲ್ಲೆವು! ವಿನಾಶ ಮಾಡಬಲ್ಲೆವು! ದೇಶವನ್ನು ಬರೇ ಮಂತ್ರ ಯಾಗ ಹೋಮ ಹವನಗಳಿಂದ ನಿವಾರಿಸಬಲ್ಲೆವು! ಹೀಗೆ ಹೇಳುವ ಇವರಿಗೇ ನಮ್ಮ ಎಲ್ಲಾ ರಕ್ಷಣಾ ಬಜೆಟ್ ಕೊಟ್ಟುಬಿಡಿ! ಇವೆಲ್ಲವನ್ನೂ ನಂಬುವ ದೇಶ ರಾಜಕೀಯವಗಿ ಎಷ್ಟು ಪ್ರಬುದ್ಧವಾಗಿರಬಹುದು?
ವಿಜ್ಞಾನಿಗಳೇ ಜನಿವಾರಧಾರಿಗಳಾಗಿ-ಒಂದು ತಾವೇ ಸೃಷ್ಟಿಸಿದ ರಾಕೆಟನ್ನು ಉಡಾಯಿಸುವಾಗ ಒಂದು ಸರಳ ಪ್ರಾರ್ಥನೆ ಅಥವಾ ವಿಶ್ ಬಿಟ್ಟು, ಹೋಮ ಹವನಗಳನ್ನು ಮಾಡುವುದಾದರೆ, ಪುರಾಣಗಳ ಎಲ್ಲಾ ಆಗ್ನೇಯಾಸ್ತ್ರ ಬ್ರಹ್ಮಾಸ್ತ್ರಗಳನ್ನು ಹುಡುಕಲು ಬೊಮ್ಮನ್ ವಿಶ್ವವಿದ್ಯಾನಿಲಯ ತೆರೆಯಬಹುದು! ಸಂಶೋಧನೆಯ ಹಣ ವಿಜ್ಞಾನಿಗಳಿಗೆ ಯಾಕೆ ಹೋಗಬೇಕು? ಅದು ನಮ್ಮ ಜ್ಯೋತಿಷ್ಯದವರ ಪಾಲಲ್ಲವೇ? ಕರ್ನಾಟಕ ಸರಕಾರ ಇದಕ್ಕೆ ಮುಂದಾಗಬೇಕು!
ಎಲ್ಲಾ ಜ್ಯೋತಿಷಿಗಳನ್ನು ಒಟ್ಟು ಸೇರಿಸಿ ಒಂದು ಸವೇಶನ ಮಾಡಿಸಿ! ಭಾಗವಹಿಸಿದವರಿಗೆಲ್ಲಾ ಒಂದೊಂದು ಪಾರ್ಟಿಯ ಸರ್ಟಿಫಿಕೇಟ್ ಕೊಡಿ! ಲೈಸನ್ಸ್ ಅದತ್ಯವಿಲ್ಲ! ರಾಜ್ಯಕ್ಕೆ ದೇಶಕ್ಕೆ ಬೇಕಾದ ಎಲ್ಲಾ ಜ್ಯೋತಿಷ್ಯ ಕೇಳಿಕೊಳ್ಳಿ! ಎದಕ್ಕೆ ಯಡ್ಡಿ,ಚಡ್ಡಿ, ಸಿದ್ದು, ಕುಮ್ಮಿ, ಮೊದ್ದು, ಪಪ್ಪು, ಚಾ ಎಂದೇನೂ ಇಲ್ಲ! ಎಲ್ಲರೂ ಬಂದು ದೇವರ ಸರಕಾರವನ್ನು ‘ಜನರ ಸರಕಾರ’ ಮಾಡಿ!
ಇಷ್ಟೆಲ್ಲಾ ಹೇಳಿದರೂ ಜ್ಯೋತಿಷ್ಯವನ್ನು ನಂಬುವವರು ನಂಬುತ್ತಲೇ ಇರಲಿ! ಸರಕಾರವೇ ಈ ಬರವಣಿಗೆಯ ವಿರುದ್ಧ ನಿಂತು ಪೋಷಿಸುತ್ತಿರುವಾಗ-ಓಟು ಕೊಟ್ಟು ಗೆಲ್ಲಿಸುವ ಜನಸಾಮಾನ್ಯರು ಬದಲಾಗುತ್ತಾರೋ ನನಗೆ ಸಂಶಯ! ಈ ತನಕ ನನ್ನ ಪ್ರವರ ಓದಿದ್ದಕ್ಕೆ ಧನ್ಯವಾದ!
ಮುಂದೆ ‘ನ್ಯಾಯಪಥ’ ಅವಕಾಶ ಕೊಟ್ಟರೆ ಮತ್ತೆ ಭೇಟಿ!

– ನಿಖಿಲ್ ಕೋಲ್ಪೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...

ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು ಬಿಸಿಯೂಟ ಯೋಜನೆಯಿಂದ ಹೊರಕ್ಕೆ : ಸಂಸತ್ತಿಗೆ ತಿಳಿಸಿದ ಕೇಂದ್ರ

ಕಳೆದ ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು 'ಪ್ರಧಾನಮಂತ್ರಿ ಪೋಷಣ್ ಯೋಜನೆ'ಯಿಂದ (ಮಧ್ಯಾಹ್ನದ ಬಿಸಿಯೂಟ) ಹೊರ ಬಿದ್ದಿವೆ. 2020-21ರಲ್ಲಿ 11.19 ಲಕ್ಷ ಇದ್ದ ಶಾಲೆಗಳ ಸಂಖ್ಯೆ 2024-25ರಲ್ಲಿ 10.35ಕ್ಕೆ ಕುಸಿದಿದೆ ಎಂದು...

ಭೀಮಾ ಕೋರೆಗಾಂವ್ ಪ್ರಕರಣ: ಗೌತಮ್ ನವಲಖಾಗೆ ಜಾಮೀನಿನ ಮೇಲೆ ದೆಹಲಿಗೆ ತೆರಳಲು ಅನುಮತಿ ನೀಡಿದ ಬಾಂಬೆ ಹೈಕೋರ್ಟ್

ಭೀಮಾ ಕೋರೆಗಾಂವ್ ಯುಎಪಿಎ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಮಾನವ ಹಕ್ಕುಗಳ ಕಾರ್ಯಕರ್ತ ಗೌತಮ್ ನವಲಖಾ ಅವರಿಗೆ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ನವದೆಹಲಿಯಲ್ಲಿ ವಾಸಿಸಲು ಬಾಂಬೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ. ಆದಾಗಲೂ, ಮಾನವ...

ಕಾರವಾರ ನೌಕಾ ಪ್ರದೇಶದ ಸುತ್ತಮುತ್ತ ಆತಂಕ ಮೂಡಿಸಿದ ‘ಸೀಗಲ್‌’ ಪಕ್ಷಿ; ಚೀನಾ ನಿರ್ಮಿತ ಜಿಪಿಎಸ್ ಸಾಧನ ಪತ್ತೆ

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕರಾವಳಿ ಪ್ರದೇಶದ ಬಳಿ, ಸೂಕ್ಷ್ಮ ನೌಕಾ ವಲಯದ ಬಳಿ ಚೀನಾ ನಿರ್ಮಿತ ಜಿಪಿಎಸ್ ಟ್ರ್ಯಾಕಿಂಗ್ ಸಾಧನವೊಂದು 'ಸೀಗಲ್' (ಸಮುದ್ರಹಕ್ಕಿ) ಪಕ್ಷಿಗೆ ಅಳವಡಿಸಿರುವುದು ಕಂಡುಬಂದ ನಂತರ ಭದ್ರತಾ ಸಂಸ್ಥೆಗಳು...

ಅಣು ಶಕ್ತಿಯ ಖಾಸಗೀಕರಣ : ‘ಶಾಂತಿ’ ಮಸೂದೆಗೆ ಲೋಕಸಭೆ ಅಸ್ತು

ಭಾರತದ ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ವಲಯದ ಪ್ರವೇಶಕ್ಕೆ ದಾರಿ ಮಾಡಿಕೊಡುವ, 'ಭಾರತದ ಪ್ರಗತಿಗಾಗಿ ಅಣು ಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ) ಮಸೂದೆಯನ್ನು ಲೋಕಸಭೆ ಬುಧವಾರ (ಡಿ.17) ಅಂಗೀಕರಿಸಿತು. ವಿಪಕ್ಷಗಳ ಸದಸ್ಯರು...

ಮಾದಕ ದ್ರವ್ಯ ಸೇವನೆ, ಲೈಂಗಿಕ ಕಿರುಕುಳಕ್ಕೆ 3 ಲಕ್ಷ ರೂ. ದಂಡ ವಸೂಲಿ: ಬೆಂಗಳೂರಿನ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ​​ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಪಶ್ಚಿಮ ಬೆಂಗಳೂರಿನ ದೊಡ್ಡಬೆಲೆ ಬಳಿಯ ವಸತಿ ಸಂಕೀರ್ಣವೊಂದರ ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ವಿರುದ್ಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ನಿವಾಸಿಗಳಿಂದ ದಂಡ ವಸೂಲಿ ಮಾಡಿದ ಮತ್ತು ಅಪರಾಧಗಳನ್ನು ಮುಚ್ಚಿಟ್ಟ ಆರೋಪದ ಮೇಲೆ ಕುಂಬಳಗೋಡು...

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...