Homeಮುಖಪುಟಶೃಂಗಾರ-ಅಶ್ಲೀಲತೆ; ನಿರ್ಧರಿಸುವವರು ಯಾರು? ಒಟಿಟಿ/ಆನ್‌ಲೈನ್ ವೇದಿಕೆಗಳಲ್ಲಿ ಕಾಮಪ್ರಚೋದಕ ದೃಶ್ಯಗಳು ಹೆಚ್ಚಳವಾಗಿವೆಯೇ?

ಶೃಂಗಾರ-ಅಶ್ಲೀಲತೆ; ನಿರ್ಧರಿಸುವವರು ಯಾರು? ಒಟಿಟಿ/ಆನ್‌ಲೈನ್ ವೇದಿಕೆಗಳಲ್ಲಿ ಕಾಮಪ್ರಚೋದಕ ದೃಶ್ಯಗಳು ಹೆಚ್ಚಳವಾಗಿವೆಯೇ?

- Advertisement -
- Advertisement -

ಅಶ್ಲೀಲ ಚಿತ್ರಗಳನ್ನು ತಯಾರಿಸಿ, ಅವುಗಳನ್ನು ಪ್ರಸಾರ ಮಾಡಿದ ಆರೋಪದಲ್ಲಿ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಅವರ ಪತಿ, ಉದ್ಯಮಿ ರಾಜ್ ಕುಂದ್ರಾ ಬಂಧನವಾದ ಬಳಿಕ ದೇಶದಲ್ಲಿ ಹೆಚ್ಚಾದ ಚರ್ಚೆಯ ವಿಷಯ ಯಾವುದು ಶೃಂಗಾರ, ಯಾವುದು ಅಶ್ಲೀಲ ಎಂಬುದು. ನನ್ನ ಪತಿ ತಯಾರಿಸಿ ಪ್ರಸಾರ ಮಾಡಿರುವುದು ಶೃಂಗಾರದ ವಿಷಯಗಳನ್ನು ಅಶ್ಲೀಲ ಚಿತ್ರಗಳನ್ನಲ್ಲ ಎಂದು ಶಿಲ್ಪಾ ಶೆಟ್ಟಿ ಹೇಳಿದ್ದರು.

ಇನ್ನು ರಾಜ್ ಕುಂದ್ರಾ ಅವರಿಗೆ ಸಂಬಂಧಿಸಿದ ಆಪ್‌ಗಳಲ್ಲಿ ಇದ್ದ ವಿಡಿಯೋಗಳಲ್ಲಿ ನಟಿಸಿದ್ದ ನಟಿ ಗೆಹನಾ ವಶಿಷ್ಠ್ ಕೂಡ, ’ರಾಜ್ ಕುಂದ್ರಾರಿಗೆ ಸಂಬಂಧಿಸಿದ ಆಪ್ ಹಾಟ್‌ಶಾಟ್ಸ್‌ನಲ್ಲಿನ ವಿಷಯಗಳು ಶೃಂಗಾರಕ್ಕೆ ಸಂಬಂಧಿಸಿದ್ದವು. ಅವು ಅಶ್ಲೀಲ ಚಿತ್ರಗಳಲ್ಲ’ ಎಂದು ಹಲವು ಬಾರಿ ವಾದಿಸಿದ್ದಾರೆ. ಇನ್ನು ಒಂದು ಹೆಜ್ಜೆ ಮುಂದಕ್ಕೆ ಹೋಗಿದ್ದ ನಟಿ, ಸಾಮಾಜಿಕ ಜಾಲತಾಣದಲ್ಲಿ ಬೆತ್ತಲೆಯಾಗಿ ಲೈವ್ ಬಂದು ’ಈಗ ನಾನು ಅಶ್ಲೀಲವಾಗಿ ಕಾಣಿಸುತ್ತಿದ್ದೇನಾ’ ಎಂದು ಪ್ರಶ್ನಿಸಿದ್ದರು.

ರಾಜ್ ಕುಂದ್ರಾ ಅವರ ವಕೀಲರು ಹಾಗೂ ಪ್ರಕರಣದಲ್ಲಿ ಭಾಗಿಯಾಗಿರುವ ಸಹವರ್ತಿಗಳು ಇದುವರೆಗೆ ಹೇಳುತ್ತಾ ಬಂದಿರುವುದೇನೆಂದರೆ ಕುಂದ್ರಾ ಕಂಪೆನಿಗಳು, ಸಹವರ್ತಿಗಳು ಹಾಗೂ ಅವರ ಮೊಬೈಲ್ ಅಪ್ಲಿಕೇಶನ್ ಹಾಟ್‌ಶಾಟ್ಸ್‌ನಲ್ಲಿ ಅಶ್ಲೀಲತೆಯ ಕಂಟೆಂಟ್ ಉತ್ಪಾದನೆಯಲ್ಲಿ ಭಾಗಿಯಾಗಿಲ್ಲ. ಬದಲಿಗೆ ಕಾಮಪ್ರಚೋದಕ, ಶೃಂಗಾರ ಚಿತ್ರಗಳ ನಿರ್ಮಾಣ ಮಾಡಿರುವುದಾಗಿ ಅವರು ಸಮರ್ಥಿಸಿಕೊಂಡಿದ್ದಾರೆ.

ಆದರೆ, ಒಟಿಟಿ ಪ್ಲಾಟ್‌ಫಾರ್ಮ್‌ಗಳಲ್ಲಿನ ವೆಬ್ ಸಿರೀಸ್, ಹಲವು ಆನ್‌ಲೈನ್ ಅಪ್ಲಿಕೇಶನ್‌ಗಳಲ್ಲಿ ಬಿಡುಗಡೆಯಾಗುವ ಚಿತ್ರಗಳು, ವೆಬ್ ಸರಣಿಗಳ ಬಗ್ಗೆ ಯಾರು ಚಕಾರವೆತ್ತುತ್ತಿಲ್ಲ. ಲೈಂಗಿಕ ವಿಚಾರಗಳೇ ತುಂಬಿತುಳುಕುವ ಹಲವು ಆಪ್‌ಗಳು ಭಾರತದಲ್ಲಿವೆ. ಇವುಗಳಲ್ಲಿ ಇರುವ ವಿಷಯ ಅಶ್ಲೀಲವೇ-ಶೃಂಗಾರವೇ ಎಂಬುದನ್ನು ನಿರ್ಧರಿಸುವವರು ಯಾರು? ಇವು ಕಾಮಪ್ರಚೋದಕದ ದೃಶ್ಯಗಳು, ಅಶ್ಲೀಲತೆಯಲ್ಲ ಎಂದು ಈ ಪ್ಲಾಟ್ಫಾರ್ಮ್‌ಗಳು ಸಮರ್ಥಿಸಿಕೊಳ್ಳುತ್ತವೆ.

ALTbalaji ಎನ್ನುವ ಪ್ಲಾಟ್ಫಾರ್ಮ್ ಒಂದರಲ್ಲಿ ಪ್ರಸಾರವಾದ ’ಗಂಧೀ ಬಾತ್’ ಇಂತಹದ್ದೆ ಕಂಟೆಂಟ್ ಹೊತ್ತ ವೆಬ್ ಸಿರೀಸ್. ಇದು ಎಷ್ಟು ಜನಪ್ರಿಯವಾಯಿತೆಂದರೆ ಇದೇ ಹೆಸರಲ್ಲಿ 5 ಸಿರೀಸ್‌ಗಳು ಬಂದವು. ಬೈ ಸೆಕ್ಷುಯಲ್
ಕಥಾಹಂದರ ಹೊಂದಿದ್ದ ಈ ವೆಬ್ ಸಿರೀಸ್‌ನಲ್ಲಿ ನಟಿಸಿದ ಬಳಿಕ ತಮ್ಮ ಅಭಿಮಾನಿಗಳ ಸಂಖ್ಯೆಯು ಹೆಚ್ಚಾಯಿತು ಎಂದು ನಟಿ ಅನ್ವಿಶಿ ಜೈನ್ ಹೇಳಿಕೊಂಡಿದ್ದಾರೆ.

ಗಂಧೀ ಬಾತ್‌ನ ಯಶಸ್ಸು ಇಂತಹ ಪ್ಲಾಟ್ಫಾರ್ಮ್‌ಗಳಲ್ಲಿ ಒಂದು ಹೊಸ ಪ್ರಕಾರವನ್ನೇ ಹುಟ್ಟುಹಾಕಿತು. ಇದರ ಪರಿಣಾಮವಾಗಿ ಜನಪ್ರಿಯ Zee5 Mnn ಕೂಡ ’ವರ್ಜಿನ್ ಭಾಸ್ಕರ್’ ಎಂಬ ವೆಬ್ ಸಿರೀಸ್ ಆರಂಭಿಸಿತ್ತು. Voot ಒಟಿಟಿಯಲ್ಲಿ ’ಫೂ ಸೆ ಫ್ಯಾಂಟಸಿ’ ಎಂಬ ಸಿರೀಸ್ ಪ್ರಾರಂಭವಾಯಿತು. ಇವೆಲ್ಲವೂ ಒಳಗೊಂಡಿದ್ದು ಕಾಮಪ್ರಚೋದಕತೆಯನ್ನೇ. ಅಂದರೆ, ಇದು ಅಶ್ಲೀಲವಲ್ಲ ಎಂಬುದು ಈ ಪ್ಲಾಟ್ಫಾರ್ಮ್‌ಗಳ ವಾದವೂ ಕೂಡ.

ULLU ಪ್ಲಾಟ್ಫಾರ್ಮ್ ಕೂಡ ಇಂತಹದ್ದೆ ಕಂಟೆಂಟ್‌ಅನ್ನು ಹೆಚ್ಚು ಪ್ರಸಾರ ಮಾಡುತ್ತದೆ. ಭೋಜಪುರಿ, ಮರಾಠಿ ಮತ್ತು ಇತರ ಸ್ಥಳೀಯ ಭಾರತೀಯ ಭಾಷೆಗಳಲ್ಲಿ ಹಲವು ವೆಬ್ ಸಿರೀಸ್‌ಗಳನ್ನು ಬಿಡುಗಡೆ ಮಾಡಿದೆ. ’ಪಾಂಚಾಲಿ’, ’ಕಸಕ್’, ’ವುಲ್ಫ್ ಆಫ್ ಬಾಲಿವುಡ್’ ಕಾಮಪ್ರಚೋದಕತೆ ಕಥಾಹಂದರವನ್ನು ಹೊಂದಿರುವ ಧಾರಾವಾಹಿಗಳಾಗಿವೆ.

ಇವುಗಳ ಜನಪ್ರಿಯತೆ ಎಷ್ಟರಮಟ್ಟಿಗೆ ಬೆಳೆಯಿತೆಂದರೆ, ಹಲವಾರು ಮುಖ್ಯವಾಹಿನಿಯ ನಟರು ಕೂಡ ಈ ಬಗೆಯ ಕಾಮಪ್ರಚೋದಕ ಚಿತ್ರಗಳಲ್ಲಿ ನಟಿಸಲು ಆರಂಭಿಸಿದ್ದರು. ಉದಾಹರಣೆಗೆ, ಅಮೆಜಾನ್ ಪ್ರೈಮ್ ವಿಡಿಯೊದ ವೆಬ್ ಸಿರೀಸ್ ’ರಸ್ಬರಿ’ಯಲ್ಲಿ ನಟಿ ಸ್ವರಾ ಭಾಸ್ಕರ್ ನಟಿಸಿದ್ದಾರೆ, ಅಂಶುಮಾನ್ ಝಾ ’ಮಾಸ್ತರಂ’ನಲ್ಲಿ ನಟಿಸಿದ್ದಾರೆ, ನಟಿ ಅನುಪ್ರಿಯಾ ಗೋಯೆಂಕಾ ULLUವಿನಲ್ಲಿ ಬರುವ ’ಪಾಂಚಾಲಿ’ಯಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದರು. ಮಿನಿಸ್ಸಾ ಲಂಬಾ ’ಕಸಕ್’ನ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಶೃಂಗಾರದ ವಿಷಯವನ್ನೇ ಪ್ರಸಾರ ಮಾಡುವ ಈ ಆಪ್‌ಗಳ ಹೊರತಾಗಿಯೂ ಅಮೆಜಾನ್, ನೆಟ್‌ಫ್ಲಿಕ್ಸ್, ಹಾಟ್‌ಸ್ಟಾರ್, Zee5ನಂತಹ ಒಟಿಟಿಗಳಲ್ಲಿ ಪ್ರಸಾರವಾಗುವ ವೆಬ್ ಸಿರೀಸ್‌ಗಳಲ್ಲಿಯೂ ಇಂತಹ ವಿಷಯಗಳ ಕಂಟೆಂಟ್ ಹೇರಳವಾಗಿದೆ. ಸೆನ್ಸಾರ್ ಇಲ್ಲದ ದೃಶ್ಯಗಳಿಗೆ ಯಾವುದೇ ಬರವಿಲ್ಲ. ಕಲಾವಿದರು ಕೂಡ ಮೈಚಳಿ ಬಿಟ್ಟು ನಟಿಸುವುದನ್ನು ಈ ವೆಬ್ ಸಿರೀಸ್‌ಗಳಲ್ಲಿ ಕಾಣಬಹುದು. ಅದೆಲ್ಲವೂ ಕಾಮಪ್ರಚೋದಕ ಅಥವಾ ಶೃಂಗಾರದ ಕೆಟಗರಿಗೆ ಬಂದು ನಿಲ್ಲತ್ತವೆ. ಇದನ್ನೆಲ್ಲಾ ವ್ಯಾಖ್ಯಾನಿಸುವ ಒಂದು ಸೂಸ್ತವಾದ ಕಾನೂನು ಇಲ್ಲಿಲ್ಲ.

ಇಂತಹದ್ದೇ ಪ್ರಕರಣದಲ್ಲಿಯೇ ಒಂದು ಬಾರಿ ಜೈಲು ಸೇರಿ ಈಗ ರಾಜ್ ಕುಂದ್ರಾ ಪ್ರಕರಣದಲ್ಲಿ ಮತ್ತೆ ಕೇಸ್ ದಾಖಲಿಸಿಕೊಂಡಿರುವ ಗೆಹನಾ ವಶಿಷ್ಠ್ ನಮ್ಮ ದೇಶದಲ್ಲಿ ಯಾವುದು ಅಶ್ಲೀಲ, ಯಾವುದು ಪೋರ್ನ್, ಯಾವುದು ಕಾಮಪ್ರಚೋದಕ, ಯಾವುದು ಶೃಂಗಾರ ಎಂಬುವುದಕ್ಕೆ ಸರಿಯಾದ ವ್ಯಾಖ್ಯಾನವಿಲ್ಲ. ಇದರ ಬಗ್ಗೆ ಸರಿಯಾಗಿ ನಿಯಮಗಳನ್ನು ಮಾಡದೇ ನಮ್ಮ ಮೇಲೆ ಗೂಬೆ ಕೂರಿಸುವುದು ಸರಿಯಲ್ಲ ಎಂದು ವಾದಿಸಿದ್ದಾರೆ.

ಒಟಿಟಿ ಪ್ಲಾಟ್ಫಾರ್ಮ್‌ಗಳು ಭಾರತದಲ್ಲಿ ಕಠಿಣ ಸೆನ್ಸಾರ್ಶಿಪ್ ನಿಯಮಗಳಿಂದ ಸ್ವಾತಂತ್ರ್ಯವನ್ನು ಆನಂದಿಸುತ್ತಿರುವಾಗ, ಈ ವರ್ಷ ಫೆಬ್ರವರಿಯಲ್ಲಿ ಸರ್ಕಾರವು ಡಿಜಿಟಲ್ ಕಂಟೆಂಟ್ ಕಂಪ್ಲೇಂಟ್ ಕೌನ್ಸಿಲ್‌ಅನ್ನು (DCCC) ಸ್ಥಾಪಿಸಿದೆ. ಮಾರ್ಚ್‌ನಲ್ಲಿ, ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಈ ಉದ್ಯಮಕ್ಕೆ ಸ್ವಯಂ ಆಡಳಿತದ ಕೋಡ್-ಆಫ್-ಕಂಟೆಂಟ್‌ಅನ್ನು ಸ್ಥಾಪಿಸಲು ಒಂದು ಅಂತಿಮ ಸೂಚನೆಯನ್ನು ನೀಡಿತು. ಆದರೆ, ಹಲವಾರು ವೇದಿಕೆಗಳು ಇದನ್ನು ಪರಿಗಣಿಸಲು ಸಮಯವನ್ನು ಕೋರಿವೆ.

ಸುಪ್ರೀಂಕೋರ್ಟ್ ವಕೀಲರಾದ ಖುಶ್ಬೂ ಜೈನ್ ಹೇಳುವಂತೆ ಕೇಬಲ್ ಟೆಲಿವಿಷನ್ ಕಾಯ್ದೆ 1995ರ ಪ್ರಕಾರ ಟಿವಿಯಲ್ಲಿ ಅಶ್ಲೀಲ ದೃಶ್ಯಗಳ ಪ್ರಸಾರಕ್ಕೆ ನಿರ್ಬಂಧನೆ ಇದೆ. ಇಂತಹ ಚಿತ್ರಗಳನ್ನು ಇಲ್ಲವೇ ಸಂಬಂಧಿತ ವಿಷಯವನ್ನು ಪ್ರಸಾರ ಮಾಡಿದಲ್ಲಿ ಶಿಕ್ಷೆ ಹಾಗೂ ದಂಡಕ್ಕೆ ಒಳಗಾಗಬೇಕಾಗುತ್ತದೆ ಎಂದು ಜೈನ್ ವಿವರಿಸಿದ್ದಾರೆ.

ಆದರೆ ಆನ್‌ಲೈನ್ ಪೋರ್ಟಲ್‌ಗಳು ಎಗ್ಗಿಲ್ಲದೆ ಇಂತಹ ಚಿತ್ರಗಳನ್ನು ಪ್ರಸಾರ ಮಾಡುತ್ತಿದ್ದು, ಇವುಗಳನ್ನು ನಿಯಂತ್ರಿಸಲು ಅಥವಾ ನಿರ್ಬಂಧಿಸಲು ಯಾವುದೇ ಸೆನ್ಸಾರ್ ಬೋರ್ಡ್‌ಗಳಿಲ್ಲ ಎಂಬುದನ್ನು ತಿಳಿದುಕೊಂಡಿರುವುದರಿಂದಲೇ. ಹಾಗಾಗಿ ಅವುಗಳು ಏನನ್ನು ಬೇಕಾದರೂ ಪ್ರಸಾರ ಮಾಡಬಹುದು ಎಂಬ ಸ್ವಾತಂತ್ರ್ಯ ಹೊಂದಿವೆ ಎಂದು ಜೈನ್ ಅವರನ್ನು ಉಲ್ಲೇಖಿಸಿ ಇಂಡಿಯನ್ ಟೈಮ್ಸ್ ವರದಿ ಮಾಡಿತ್ತು.

ಸದ್ಯ ಕೇಂದ್ರ ಸರ್ಕಾರ ಜೂನ್ 17ರಂದು ಕೇಬಲ್ ಟೆಲಿವಿಷನ್ ಕಾಯ್ದೆ 1995ಕ್ಕೆ ತಿದ್ದುಪಡಿ ತಂದಿದೆ. ಕೇಬಲ್ ಟೆಲಿವಿಷನ್ ನೆಟ್‌ವರ್ಕ್ ನಿಯಮಗಳನ್ನು ಈ ಶಾಸನಾತ್ಮಕ ವ್ಯವಸ್ಥೆ ಒದಗಿಸಲು ತಿದ್ದುಪಡಿ ಮಾಡಲಾಗಿದೆ. ಇದು ಪಾರದರ್ಶಕವಾಗಿದ್ದು, ನಾಗರಿಕರಿಗೆ ಉಪಯುಕ್ತವಾಗಿದೆ. ಅದೇವೇಳೆ, ಪ್ರಸಾರಕರ ಸ್ವಯಂ ನಿಯಂತ್ರಣ ಕಾಯಿದೆಗಳನ್ನು ಕೇಂದ್ರ ಸರ್ಕಾರದಲ್ಲಿ ನೊಂದಾಯಿಸಲಾಗುವುದು ಎಂದು ವಾರ್ತಾ ಮತ್ತು ಪ್ರಸಾರ ಸಚಿವಾಲಯ ಹೇಳಿದೆ.

ದೇಶದಲ್ಲಿ ಅಶ್ಲೀಲ ಚಿತ್ರಗಳನ್ನು ವೀಕ್ಷಿಸುವುದು ಅಪರಾಧವಾಗಿಲ್ಲ. ಆದರೆ, ಅಶ್ಲೀಲ ಚಿತ್ರಗಳ ನಿರ್ಮಾಣ, ಪ್ರಸಾರ ಮಾಡುವುದು ಮತ್ತು ಇತರರೊಂದಿಗೆ ಹಂಚಿಕೊಳ್ಳುವುದು ತಪ್ಪು. ಆಗ ಮಾತ್ರ ವ್ಯಕ್ತಿಯನ್ನು ಬಂಧಿಸಲು ಸಾಧ್ಯವಿದೆ.

ಮಾಹಿತಿ ತಂತ್ರಜ್ಞಾನ ಕಾಯ್ದೆ 2000ದ ಸೆಕ್ಷನ್ 67ಎ ಹೇಳುವಂತೆ ಲೈಂಗಿಕ ಅಭಿವ್ಯಕ್ತಿ ಅಥವಾ
ನಡವಳಿಕೆಯನ್ನು ಹೊಂದಿರುವ ಯಾವುದೇ ವಿಷಯ-ವಸ್ತುವನ್ನು ಪ್ರಕಟಿಸುವುದು, ಪ್ರಸಾರ ಮಾಡುವುದು (ಯಾವುದೇ ಎಲೆಕ್ಟ್ರಾನಿಕ್ ರೂಪದಲ್ಲಿ ಪ್ರಸಾರ ಮಾಡಿದಾಗಿಯೂ) ಐದು ವರ್ಷಗಳ ಜೈಲು ಶಿಕ್ಷೆ ಹಾಗೂ 10 ಲಕ್ಷ ದಂಡವನ್ನು ವಿಧಿಸಲು ಸಾಧ್ಯವಿದೆ. ಹಾಗಾಗಿ ಅಶ್ಲೀಲ ಕಂಟೆಂಟ್ ಮಾರಾಟ ಮಾಡುವಾಗ ಅಥವಾ ವ್ಯಾಪಾರೀಕರಣದಲ್ಲಿ ಸಿಕ್ಕಿಬಿದ್ದರೆ ಜೈಲು ಹಾಗೂ ದಂಡ ಶಿಕ್ಷೆಯ ಸಾಧ್ಯತೆಯಿದೆ. ಆದರೆ, ಯಾವುದು ಅಶ್ಲೀಲ, ಯಾವುದು ಶೃಂಗಾರ ಎಂಬುದನ್ನು ವಿವರಿಸಲು ದೇಶದಲ್ಲಿ ಸರಿಯಾದ ಕಾನೂನುಗಳಿಲ್ಲದಿರುವುದು ಸಮಸ್ಯೆಯನ್ನು ಉಲ್ಬಣಗೊಳಿಸಿದೆ.

2018ರಲ್ಲಿ ಜನಪ್ರಿಯ ವಯಸ್ಕರ ತಾಣವಾದ ಪೋರ್ನ್‌ಹಬ್ ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ, ವಿಶ್ವದಲ್ಲಿ ಅಶ್ಲೀಲ ವಿಷಯಗಳ ಬಳಕೆಯಲ್ಲಿ ಭಾರತ ಮೂರನೇ ಸ್ಥಾನದಲ್ಲಿತ್ತು. ಆದರೆ, 2019ರಲ್ಲಿ ಅಶ್ಲೀಲ ವೆಬ್‌ಸೈಟ್‌ಗಳ ನಿಷೇಧ ಕಾರಣದಿಂದ ಮೂರನೇ ಸ್ಥಾನದಲ್ಲಿದ್ದ ಭಾರತ 15ನೇ ಸ್ಥಾನಕ್ಕೆ ಇಳಿದಿದೆ ಎಂದು ಈ ಸಂಸ್ಥೆ ಹೇಳಿದೆ.

ಕನ್ನಡದಲ್ಲಿ ಇನ್ನು ಒಟಿಟಿ, ಮೊಬೈಲ್ ಆಪ್‌ನಂತಹ ಮಾಧ್ಯಮಗಳು ಎಕ್ಸ್‌ಕ್ಲೂಸಿವ್ ಆಗಿ ಬರದ ಕಾರಣ ಇಂತಹ ವಿಷಯಾಧಾರಿತ ಚಿತ್ರಗಳು ಕಡಿಮೆ ಇವೆ ಎನ್ನಬಹುದು. ಆದರೆ ಡಬಲ್ ಮೀನಿಂಗ್ ಡೈಲಾಗ್‌ಗಳಿರುವ ಸಣ್ಣ ಸಣ್ಣ ಕಿರು ಚಿತ್ರಗಳು ಕನ್ನಡದಲ್ಲೂ ಪ್ರಸಾರವಾಗುತ್ತಿವೆ.

ಸೆಕ್ಸ್ ಕಂಟೆಂಟ್‌ಅನ್ನು ಟಿಆರ್‌ಪಿ, ಹಣ, ಅಭಿಮಾನಿಗಳು, ಆಫರ್‌ಗಳು, ಪ್ಲಾಟ್ಫಾರ್ಮ್‌ಗೆ ಟ್ರಾಫಿಕ್ ಹೆಚ್ಚು ಮಾಡುವ ಸಾಧನವಾಗಿ ಬಳಸಲಾಗುತ್ತಿದೆ. ವೆಬ್ ಸಿರೀಸ್‌ಗಳು, ಬಾಲಿವುಡ್‌ನ ಬಿ ಗ್ರೇಡ್ ಸಿನಿಮಾಗಳಲ್ಲಿ ಮಾತ್ರವಲ್ಲದೆ ಸುದ್ದಿ ವೆಬ್‌ಸೈಟ್‌ಗಳು ಕೂಡ ಇಂತಹ ಲೈಂಗಿಕಾಸಕ್ತಿಯ ವಿಷಯಗಳನ್ನು ನೀಡುತ್ತಿವೆ. ಕನ್ನಡದ ಸುದ್ದಿವಾಹಿನಿಗಳ ವೆಬ್ ಪೋರ್ಟಲ್‌ಗಳು, ಸುದ್ದಿ ಪತ್ರಿಕೆಗಳ ಪೋರ್ಟಲ್‌ಗಳು ಸೇರಿದಂತೆ ಇಂತಹ ವಿಷಯಗಳಿರುವ ಸುದ್ದಿ, ಚಿತ್ರಗಳು ಹೇರಳವಾಗಿ ಕಾಣಸಿಗುತ್ತವೆ. ಸುದ್ದಿ ಓದಲು ಬರುವ ನೋಟಿಫಿಕೇಷನ್‌ಗಿಂತ ರಾತ್ರಿಯ ಹೊತ್ತು ಇಂತಹ ವಿಷಯಗಳ ನೋಟಿಫಿಕೇಷನ್‌ಗಳು ಎಷ್ಟೋ ಮಂದಿಗೆ ಕಿರಿಕಿರಿ ಮಾಡಿದರೆ ಮತ್ತೆ ಕೆಲವರಲ್ಲಿ ಖುಷಿ ನೀಡುತ್ತದೆ.

ಪೂರ್ತಿ ನಗ್ನವಾಗಿ ಕಾಣಿಸಿಕೊಳ್ಳುವುದು ಅಶ್ಲೀಲವಾದರೇ, ದೇಹದ ಮೇಲೆ ತೆಳುವಾದ ಬಟ್ಟೆ ಹಾಕಿ ತೋರಿಸುವುದು ಶೃಂಗಾರ ಹೇಗಾಗುತ್ತದೆ? ಒಟ್ಟಾರೆ, ಯಾವುದು ಅಶ್ಲೀಲ, ಯಾವುದು ಶೃಂಗಾರ, ಯಾವುದು ಕಾಮಪ್ರಚೋದಕ ಎಂಬುದನ್ನು ನಿರ್ಧರಿಸುವವರು ಯಾರು ಎಂಬ ಪ್ರಶ್ನೆ ತಲೆದೋರುತ್ತದೆ. ಒಬ್ಬರ ದೃಷ್ಟಿಯಲ್ಲಿ ಶೃಂಗಾರ ಎನ್ನುವಂತಹದ್ದು ಮತ್ತೊಬ್ಬರ ದೃಷ್ಟಿಯಲ್ಲಿ ಅಶ್ಲೀಲ, ಕಾಮಪ್ರಚೋದಕವು ಆಗಿರಬಹುದು.


ಇದನ್ನೂ ಓದಿ: ಅಶ್ಲೀಲ ಚಿತ್ರ ಪ್ರಕರಣ: ಉದ್ಯಮಿ ರಾಜ್ ಕುಂದ್ರಾಗೆ ಮಧ್ಯಂತರ ಜಾಮೀನು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...