Homeರಾಜಕೀಯಸೋಲುವ ಭೀತಿಯಲ್ಲಿ ಇವಿಎಂ ಯಂತ್ರಗಳಿಗೇ ಕನ್ನ ಹಾಕಿತೇ ಬಿಜೆಪಿ?

ಸೋಲುವ ಭೀತಿಯಲ್ಲಿ ಇವಿಎಂ ಯಂತ್ರಗಳಿಗೇ ಕನ್ನ ಹಾಕಿತೇ ಬಿಜೆಪಿ?

- Advertisement -
- Advertisement -

ಇ.ವಿ.ಎಮ್ ಬಂದ ಹೊಸತರಲ್ಲಿ ಅದನ್ನು ಹ್ಯಾಕ್ ಮಾಡಲು ಸಾಧ್ಯವಿಲ್ಲ, ಮೊದಲು ನಡೆಯುತ್ತಿದ್ದ ಚುನಾವಣೆ ಪ್ರಕ್ರಿಯೆಗಿಂತ ಎಲೆಕ್ಟ್ರಾನಿಕ್ ಓಟಿಂಗ್ ಮಷೀನ್ (ಇವಿಎಮ್) ನಿಂದ ಡಿಜಟಲೀಕರಣಗೊಂಡು ಹೆಚ್ಚು ನಂಬಿಕಾರ್ಹವಾಗಿರುತ್ತದೆ ಎಂದು ಹೇಳಲಾಗುತ್ತಿತ್ತು. ಅದನ್ನು ಹ್ಯಾಕ್ ಮಾಡಲು ಸಾಧ್ಯವಿಲ್ಲ ಎನ್ನುವ ಮಾತುಗಳನ್ನು ಚುನಾವಣೆ ಆಯೋಗವು ಹೇಳುತ್ತಿತ್ತು. ಆದರೆ ಈಗ ಇವಿಎಮ್ ಮಷೀನುಗಳೆ ಮಾಯವಾಗಿ ಖಾಸಗಿ ಹೋಟೆಲ್ ಗಳಲ್ಲಿ, ಎಂ.ಎಲ್.ಎ ಗಳ ಮನೆಗಳಲ್ಲಿ ಪ್ರತ್ಯಕ್ಷವಾಗುತ್ತಿದೆ. ಈ ಹಿಂದೆ ಯಾವುದೇ ಪಕ್ಷಕ್ಕೆ ಮತ ಹಾಕಿದರೂ ಬಿಜೆಪಿಗೇ ಮತಗಳು ಹೋಗುತ್ತಿದ್ದವು ಎನ್ನುವ ಆರೋಪಗಳು ಕೇಳಿಬರುತ್ತಿದ್ದವು. ಚಲಾಯಿಸಿದ ಮತಗಳು ಅಧಿಕೃತವಾಗಿದೆ ಎಂದು ಖಾತ್ರಿ ಮಾಡಿಕೊಳ್ಳಲು ವಿವಿ ಪ್ಯಾಟ್ ವ್ಯವಸ್ಥೆಯನ್ನು ತರಲಾಯಿತು. ಮತದಾರರನ್ನು ಹ್ಯಾಕ್ ಮಾಡಲು ಸಾಧ್ಯವೇ ಇಲ್ಲ ಎಂದು ನಂಬಿಸಲಾಯಿತು. ಆದರೆ ಈಗ ಮಷೀನುಗಳೇ ಕಳ್ಳತನವಾಗುತ್ತಿವೆ. ಇಂತಹ ವಿಡಿಯೋಗಳು ಇದೀಗ ಸಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗುತ್ತಿದೆ. ಇಂತಹ ಕಳ್ಳತನಗಳಲ್ಲಿ ಈವರೆಗೂ ಬಿಜೆಪಿಗರ ಕೈವಾಡವಿರುವುದು ಮತ್ತೊಂದು ವಿಶೇಷವಾಗಿದೆ.

ಇದೇ ತಿಂಗಳ ಶುಕ್ರವಾರದಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ವಿಡಿಯೋದಲ್ಲಿ ರಾಜಸ್ಥಾನದ ಪಾಲಿ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಶಾಸಕ ಆಗಿರುವ ಗ್ಯಾನ್ ಚಂದ್ ಪಾರಾಖ್ ಅವರ ಮನೆಯಲ್ಲಿ ಇವಿಎಮ್ ಮಷೀನ್ ಗಳು ಸಿಕ್ಕಿದ್ದವು. ಸ್ಥಳೀಯ ವ್ಯಕ್ತಿಯೊಬ್ಬರು ಇದನ್ನು ವಿಡಿಯೋ ಮಾಡಿದ್ದರ ಪರಿಣಾಮವಾಗಿ ಈ ವಿಷಯ ಬೆಳಕಿದೆ ಬಂದಿದೆ. ಚುನಾವಣೆ ಆಯೋಗದ ಉಪ ಆಯುಕ್ತರಾದ ಸಂದೀಪ್ ಸಕ್ಸೇನ ಅವರು ಈ ಪ್ರಕರಣವನ್ನು ಒಪ್ಪಿಕೊಂಡಿದ್ದು ಇದರ ಮೇಲೆ ವಿಚಾರಣೆ ಮಾಡುವುದಾಗಿ ತಿಳಿಸಿದ್ದಾರೆ ಹಾಗೂ ಶಾಸಕರ ಮನೆಗೆ ಇವಿಎಮ್ ತಲುಪಿಸಿದ ಚುನಾವಣೆ ಅಧಿಕಾರಿಯನ್ನು ಅಮಾನತ್ತಿನಲ್ಲಿ ಇಟ್ಟಿರುವುದಾಗಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಇದೇ ರೀತಿಯಾದ 4 ಪ್ರಕರಣಗಳು ಮಧ್ಯಪ್ರದೇಶದಲ್ಲಿ ನಡೆದಿರುವುದು ವರದಿಯಾಗಿದೆ. ನವೆಂಬರ್ 27 ರಂದು ವೈರಲ್ ಆಗಿದ್ದ ಮತ್ತೊಂದು ವಿಡಿಯೋದಲ್ಲಿ ಸೋಹನ್ ಲಾಲ್ ಬಜಾಜ್ ಮತ್ತು ಮೂರು ಜನ ಚುನಾವಣಾಧಿಕಾರಿಗಳು ಇವಿಎಮ್ ಮಷೀನುಗಳನ್ನು ಮಧ್ಯಪ್ರದೇಶದ ಶಹಜಾಪುರ್ ಜಿಲ್ಲೆಯ ರಾಜ್ ಮಹಲ್ ಹೋಟೆಲ್ ನಲ್ಲಿ ಇರಿಸಿಕೊಂಡಿದ್ದರು. ಇದನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರದಲ್ಲಿ, ಈ ಮಷೀನುಗಳು ಕಾರ್ಯ ಮಾಡುತ್ತಿಲ್ಲ, ನಮಗೆ ಒಳ್ಳೆಯ ಭಧ್ರತಾ ಕೊಠಡಿಗಳು ಇಲ್ಲ ಎಂಬ ಕಾರಣಗಳನ್ನು ನೀಡಿ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡಿದ್ದಾರೆ.

ಮಧ್ಯಪ್ರದೇಶದ ಸಾಗರ್ ಜಿಲ್ಲೆಯ ಖುರಾಯ್ ನಗರದಲ್ಲಿಯೂ ಚುನಾವಣೆ ನಡೆದ 48 ಗಂಟೆಗಳ ನಂತರದಲ್ಲಿ ಒಂದು ಅನಧಿಕೃತ ಖಾಸಗಿ ವಾಹನದಲ್ಲಿ (ಖಾಸಗಿ ಶಾಲಾ ಬಸ್ ಎಂದು ಹೇಳಲಾಗುತ್ತಿದೆ) 34 ಇವಿಎಮ್ ಮಷೀನ್ ಗಳು ಬಂದವು ಎಂದು ವರದಿಯಾಗಿದೆ.

ಅಲ್ಲದೆ ಛತ್ತೀಸ್ಗಢದಲ್ಲಿ 3 ಇವಿಎಮ್ ಪ್ರಕರಣಗಳು ಜರುಗಿವೆ.

ಅದರಲ್ಲಿ ಈಗಷ್ಟೇ ಬಿಸಿ ಸುದ್ದಿಯಲ್ಲಿರುವುದು ಬಸ್ತಾರ್ ವಲಯದ ಜಗ್ದಲ್ಪುರ್ ನಲ್ಲಿ ಇವಿಎಂ ಮಷೀನುಗಳನ್ನು ಇರಿಸಿದ್ದ ಭಧ್ರತಾ ಕೊಠಡಿಯಲ್ಲಿ ಇಬ್ಬರು ಅನಧಿಕೃತ ವ್ಯಕ್ತಿಗಳು ಸಿಕ್ಕಿಬಿದ್ದಿರೋದು. ಪೊಲೀಸರ ಕೈಗೆ ಸಿಕ್ಕು ಬಂಧನದಲ್ಲಿರುವ ಇವರು ಎ.ಎನ್.ಐ ಟೀಟ್ ನ ಪ್ರಕಾರ ಪೊಲೀಸರು ಇವರು ಜಿಯೋ (ರಿಲಯಾನ್ಸ್) ಕಂಪನಿಯ ನೌಕರರು (ಇದೇ ಜಿಯೋ ಕಂಪನಿಯ ಜಾಹೀರಾತಿಗೆ ಫೋಜು ಕೊಡುವಷ್ಟರ ಮಟ್ಟಿಗೆ ನಮ್ಮ ಪ್ರಧಾನಿ ಮೋದಿಯವರು ಆ ಕಂಪನಿಯ ಮಾಲೀಕ ಅಂಬಾನಿಗೆ ಆಪ್ತ ಗೆಳೆಯರು ಅನ್ನೋದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು) ಎಂದು ತಿಳಿಸಿದ್ದಾರೆ ಎನ್ನಲಾಗಿದೆ. ಅಧಿಕೃತ ಗುರುತಿನ ಚೀಟಿ ಇಲ್ಲದೆ ಯಾರೂ ಒಳಗೆ ಪ್ರವೇಶ ಮಾಡಲು ಸಾಧ್ಯವಿಲ್ಲ. ಆದರೆ ಇವರು ಹೇಗೆ ಒಳಗೆ ಬಂದರು ಎಂದು ನಮಗೆ ತಿಳಿಯುತ್ತಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಭಧ್ರತಾ ಕೊಠಡಿಯಲ್ಲಿ ಭದ್ರತೆ ಒದಗಿಸುತ್ತಿದ್ದ ಇಬ್ಬರು ಪೊಲೀಸ್ ಅಧಿಕಾರಿಗಳನ್ನು ಅಮಾನತ್ತು ಮಾಡಲಾಗಿದೆ.

ಈ ಘಟನೆ ನಡೆಯುವ ಒಂದು ದಿನದ ಹಿಂದೆಯಷ್ಟೇ ಛತ್ತಿಸ್ಗಢದ ಬೆಮೆತಾರ ಕ್ಷೇತ್ರದಲ್ಲಿ ಬಿ.ಎಸ್.ಎಫ್. ಭದ್ರತಾ ಆಧಿಕಾರಿ ವಿಕ್ರಮ್ ಕುಮಾರ್ ಮೆಹ್ರ ಎಂಬ ವ್ಯಕ್ತಿ ಅನಧಿಕೃತವಾಗಿ ಇವಿಎಂ ಮಷೀನುಗಳನ್ನು ಇರಿಸಿದ್ದ ಭದ್ರತಾ ಕೊಠಡಿಯ ಬಳಿ ಲ್ಯಾಪ್ ಟಾಪ್ ಅನ್ನು ಬಳಸಿದ್ದರು. ವಿರೋಧಪಕ್ಷ ಇದನ್ನು ವಿರೋಧಿಸಿ ಪ್ರತಿಭಟಿಸಿದ ನಂತರವೆ ಅಧಿಕಾರಿಯನ್ನು ಅಮಾನತ್ತು ಮಾಡಿದ್ದಾರೆ.

ಅಲ್ಲದೆ ಧಾಮತಾರಿ ಕ್ಷೇತ್ರದಲ್ಲಿ ಇವಿಎಮ್ ಮಷೀನುಗಳ್ಳಿದ್ದ ಭಧ್ರತಾ ಕೊಠಡಿಯಲ್ಲಿ ಇಬ್ಬರು ಅನಧಿಕೃತ ವ್ಯಕ್ತಿಗಳು ಇದ್ದದ್ದು ವರದಿಯಾಗಿದೆ.

ಇದಲ್ಲದೆ ಭೂಪಾಲ್ ನಲ್ಲಿ ಭದ್ರತಾ ಕೊಠಡಿಯಲ್ಲಿ ಒಂದು ಗಂಟೆಗೂ ಹೆಚ್ಚು ಕಾಲ ಸಿಸಿ ಟಿವಿ ಕ್ಯಾಮರಾಗಳು ಆಫ್ ಆದ ಘಟನೆ ವರದಿಯಾಗಿದೆ.

ಒಟ್ಟಾರೆ ಮೊದಲಿಂದಲೂ ಇವಿಎಮ್ ವಿರೋಧಿಸಿ ಏಳುತ್ತಿರುವ ಪ್ರಶ್ನೆಗಳಿಗೆ ಪುಷ್ಠಿ ನೀಡುವಂತೆ ಈ ಮೇಲಿನ ಇತ್ತೀಚೆಗಿನ ಘಟನೆಗಳು ನಡೆಯುತ್ತಿವೆ. ಲೋಕ ಸಭಾ ಚುನಾವಣೆಗಳು ಹತ್ತಿರವಾಗುತ್ತಿರುವ ಸಂಧರ್ಭದಲ್ಲಿ ಇನ್ನಾದರು ಚುನಾವಣಾ ಆಯೋಗ ಇದರ ಬಗ್ಗೆ ಗಂಭೀರವಾಗಿ ಯೋಚಿಸಬೇಕಿದೆ. ಇದರ ಹಿಂದಿರುವ ದೊಡ್ಡ ಕೈಗಳನ್ನು ಬಯಲಿಗೆಳೆದು ಬಂಧಿಸಬೇಕಾಗಿದೆ. ಚುನಾವಣೆ ಆಯೋಗ-ಪೊಲೀಸ್ ಇಲಾಖೆ ಚಿಕ್ಕ ಕಳ್ಳರನ್ನು ಅಲ್ಲದೆ ದೊಡ್ಡ ಕಳ್ಳರನ್ನು ಬಂಧಿಸಿತ್ತಾರ ಎಂದು ಕಾದು ನೋಡಬೇಕಿದೆ. ಬಿಜೆಪಿಗಾಗಲಿ, ಮೋದಿಯವರಿಗಾಗಲಿ 2014ರಲ್ಲಿ ಇದ್ದ ಆತ್ಮವಿಶ್ವಾಸ 2019ರ ಚುನಾವಣೆಯ ಮೇಲೆ ಬಾರದಿರುವಂಥಾ ವಾತಾವರಣ ದೇಶದಲ್ಲಿ ಸೃಷ್ಟಿಯಾಗುತ್ತಿರುವ ಹೊತ್ತಿನಲ್ಲೇ ಇಂಥಾ ಇವಿಎಂ ಗೋಲ್ ಮಾಲ್ ಗಳು ಬಿಜೆಪಿ ಸುತ್ತಲೇ ದಟ್ಟೈಸುತ್ತಿಕೊಳ್ಳುತ್ತಿರೋದು ಜಸ್ಟ್ ಕಾಕತಾಳೀಯ ಅಂತ ಹೇಳೋದು ಕಷ್ಟ…..ಎಲ್ಲಾ ಕ್ಷೇತ್ರಗಳ ಎಲ್ಲಾ ಬೂತ್.ಗಳಲ್ಲೂ ಇಸು ನಡೆಯದೇ ಇರಬಹುದು. ಆದರೆ ಒಮ್ಮೆಗೇ ಇಷ್ಟು ಬೂತ್.ಗಳಲ್ಲಿ ಸಿಕ್ಕಿಹಾಕಿಕೊಂಡಿರುವುದು ಸಮಸ್ಯೆಯ ಗಂಭೀರತೆಯನ್ನು ತೋರಿಸುತ್ತದೆ. ಸೋಲಿನ ಭೀತಿಯ ಕಾರಣಕ್ಕೆ ಬಿಜೆಪಿ ಈ ಕೃತ್ಯಕ್ಕಿಳಿಯಿತಾ ಎಂಬ ಪ್ರಶ್ನೆಯೂ ಉದ್ಭವಿಸುತ್ತದೆ.

https://youtu.be/Rjr9VARzlWI

 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...