Homeಅಂಕಣಗಳುಗಾಂಧಿ, ನೆಹರೂ, ಪಟೇಲ್ ಬಾಂಧವ್ಯದ ಬಗ್ಗೆ ಮೋದಿಗೇನು ಗೊತ್ತು....

ಗಾಂಧಿ, ನೆಹರೂ, ಪಟೇಲ್ ಬಾಂಧವ್ಯದ ಬಗ್ಗೆ ಮೋದಿಗೇನು ಗೊತ್ತು….

- Advertisement -
- Advertisement -

ಎಸ್.ಎಸ್.ದೊರೆಸ್ವಾಮಿ |

ಪ್ರಧಾನಿ ಮೋದಿ ಗುಜರಾತಿನ ನಾಯಕರತ್ನಗಳಾದ ಮಹಾತ್ಮ ಗಾಂಧಿ, ಸರ್ದಾರ್ ವಲ್ಲಭಾಯಿ ಪಟೇಲ್ ಇಬ್ಬರಲ್ಲಿ ಒಬ್ಬರನ್ನು ಮರೆಸುವ ಕುತಂತ್ರ ಮಾಡುತ್ತಿರುವುದು ಮತ್ತು ಮತ್ತೊಬ್ಬರನ್ನು ತಮ್ಮ ಪ್ರತಿಷ್ಠೆ ಬೆಳೆಸಿಕೊಳ್ಳಲು ದುರುಪಯೋಗಪಡಿಸಿಕೊಳ್ಳುತ್ತಿರುವುದು ನಿಜಕ್ಕೂ ಹೇಯವಾದ ಕೆಲಸ.

ಮಹಾತ್ಮ ಗಾಂಧಿಯವರು ಜವಹರಲಾಲ್‌ರನ್ನು ಬೆಳೆಯಲು ಅವಕಾಶ ಮಾಡಿಕೊಟ್ಟು ಸರ್ದಾರ್ ಪಟೇಲರನ್ನು ಕಡೆಗಣಿಸಿದರು ಎಂಬ ಸುಳ್ಳು ಆಪಾದನೆ ಮೂಲಕ ಜನತೆಯ ಮೆಚ್ಚುಗೆ ಗಳಿಸಲು ಹಾಗೂ ಮತಗಳನ್ನು ಕಸಿಯಲು ಸಂಚು ಮಾಡಿದ್ದಾರೆ. ಗುಜರಾತ್‌ನಲ್ಲಿ ಪಟೇಲರ ಎತ್ತರ ಪ್ರತಿಮೆ ಸ್ಥಾಪಿಸಿದ್ದು ಕೂಡಾ ಇದರದೇ ಒಂದು ಭಾಗ.

ಇತಿಹಾಸದ ಕುರಿತು ಮೋದಿಯ ಹುಸಿಗಳನ್ನು ಅರ್ಥಮಾಡಿಕೊಳ್ಳಬೇಕೆಂದರೆ ನಾವು ಮೊದಲು ಗಾಂಧೀಜಿ, ನೆಹರು, ಪಟೇಲರ ಸಂಬಂಧ ಹೇಗಿತ್ತು ಎಂಬುದನ್ನು ಅರಿಯಬೇಕು. ಗಾಂಧೀಜಿ ಸೆರೆಮನೆಗೆ ಹೋದಾಗಲೆಲ್ಲ ವಲ್ಲಭಭಾಯಿ ಅವರ ಜೊತೆಗೇ ಇರುತ್ತಿದ್ದರು. ಸೆರೆಮನೆಯಲ್ಲಿ ಗಾಂಧೀಜಿಯವರ ನೆರವಿಗೆಂದು ಹಾಗೆ ಮಾಡುತ್ತಿದ್ದರು. ಹೀಗಾಗಿ ಅವರಿಬ್ಬರ ಸ್ನೇಹ-ಸಂಬಂಧ ಗಾಢವಾಗಿತ್ತು. ಸರ್ದಾರ್ ಪಟೇಲರ ಧೈರ್ಯ, ಸಾಹಸ, ರಾಜಕೀಯ ಚಾಣಾಕ್ಷತನ, ಹಿಡಿದ ಕೆಲಸ ಮುಗಿಸುವ ಛಲ ಎಲ್ಲದರ ಬಗ್ಗೆ ಗಾಂಧೀಜಿಗೆ ಅಪಾರ ಮೆಚ್ಚುಗೆಯಿತ್ತು.

ಸ್ವಾತಂತ್ರ್ಯ ಪ್ರಾಪ್ತವಾದ ಕೂಡಲೇ ಸ್ವತಂತ್ರ ಭಾರತದ ಆಡಳಿತ ನಡೆಸಲು ದಕ್ಷರಾದ ನಾಯಕರನ್ನು ಗಾಂಧೀಜಿಯವರು ಹುಡುಕಿಕೊಳ್ಳಬೇಕಾಗಿತ್ತು. ಜವಾಹರ್‌ಲಾಲ್ ನೆಹರು ಸ್ವಾತಂತ್ರ್ಯ ಪೂರ್ವದಲ್ಲೇ ಪಾಶ್ಚಿಮಾತ್ಯ ದೇಶಗಳಲ್ಲಿ ನಡೆಯುತ್ತಿದ್ದ ಅಂತರರಾಷ್ಟ್ರೀಯ ಸಮಾರಂಭಗಳಲ್ಲಿ, ಸೆಮಿನಾರ್‌ಗಳಲ್ಲಿ ಭಾಗವಹಿಸುತ್ತಿದ್ದರು. ಅಂದಿನ ವಿಶ್ವದ ಅನೇಕ ರಾಷ್ಟ್ರಗಳ ನಾಯಕರ ಸ್ನೇಹವನ್ನು ಬೆಳೆಸಿಕೊಂಡಿದ್ದರು. ಅಲ್ಲದೆ ನೆಹರು ಅಂತರಾಷ್ಟ್ರೀಯ ಸಮಸ್ಯೆಗಳ ಅಧ್ಯಯನ ಮಾಡಿದ್ದರು. ಇದೆಲ್ಲವನ್ನೂ ತಿಳಿದ ಗಾಂಧೀಜಿ ನೆಹರು ಅವರನ್ನು ಪ್ರಧಾನಿಯನ್ನಾಗಿ ಮಾಡಲು ಬಯಸಿದರು. ಬಿಗಿಯಾಗಿ ಆಡಳಿತ ನಡೆಸುವ ಸರ್ದಾರ್ ಪಟೇಲರ ದಕ್ಷತೆಯು ಹೊಸದಾಗಿ ರೂಪುಗೊಳ್ಳುತ್ತಿರುವ ಸ್ವದೇಶಿ ಸರ್ಕಾರದ ಕೈಬಲಗೊಳಿಸಲು ಅನಿವಾರ್ಯ ಎಂಬುದನ್ನರಿತೇ ಪಟೇಲರನ್ನು ಗೃಹಮಂತ್ರಿಯಾಗಿಸಬೇಕೆಂದು ಇಚ್ಛಿಸಿದರು.

ಅದಕ್ಕೆ ಕಾರಣವೂ ಇತ್ತು. ಭಾರತದಿಂದ ಟಿಸಿಲೊಡೆದು ಪಾಕಿಸ್ತಾನ ಎಂಬ ಹೊಸ ದೇಶ ಅಸ್ತಿತ್ವಕ್ಕೆ ಬಂದೊಡನೆ ಅಲ್ಲಿದ್ದ ಮುಸ್ಲಿಮೇತರರನ್ನು ಹೊರಗಟ್ಟುವ ಪ್ರಯತ್ನ ವ್ಯವಸ್ಥಿತವಾಗಿ ನಡೆಯಿತು. ಹಿಂದೂಗಳು, ಸಿಖ್ಖರು ಮುಂತಾದವರ ಆಸ್ತಿಗಳನ್ನು ವಶಪಡಿಸಿಕೊಳ್ಳುವುದು ಅವರ ಮೇಲೆ ದೌರ್ಜನ್ಯ ಮಾಡುವುದು, ಹೆಣ್ಣುಮಕ್ಕಳ ಮೇಲೆ ಅತ್ಯಾಚಾರ ಮಾಡುವುದು ಕ್ರೂರವಾಗಿ ನಡೆದುಕೊಳ್ಳುವುದು ಒಂದೇ ಸಮನೆ ನಡೆಯಿತು. ಇತ್ತ ಭಾರತದಲ್ಲೂ ಅಂತದ್ದೇ ಸನ್ನಿವೇಶಗಳು ಪ್ರತಿಫಲನಗೊಂಡವು. ದೌರ್ಜನ್ಯಕ್ಕೊಳಗಾದ ಈ ಜನ ಸಹಸ್ರಾರು ಸಂಖ್ಯೆಯಲ್ಲಿ ಜೀವ ಉಳಿಸಿಕೊಳ್ಳುವ ಏಕೈಕ ಕಾರಣಕ್ಕಾಗಿ ಪಾಕಿಸ್ತಾನದಿಂದ ಭಾರತದ ಕಡೆಗೆ, ಭಾರತದಿಂದ ಪಾಕಿಸ್ತಾನದ ಕಡೆಗೆ ಹರಿದಾಡಿದರು. ಹೀಗೆ ಭಾರತಕ್ಕೆ ಪ್ರವಾಹದೋಪಾದಿಯಲ್ಲಿ ಧಾವಿಸಿ ಬಂದ ಈ ನತದೃಷ್ಟರನ್ನು ಸಾಂತ್ವನಗೊಳಿಸುವುದು ಅವರಿಗೆ ನಿಲ್ಲಲು ನೆಲೆ ಕಲ್ಪಿಸುವುದು, ಊಟ ಉಪಚಾರಗಳ ಏರ್ಪಾಟು ಮಾಡುವುದು ಒಂದುಕಡೆಗಾದರೆ, ಭಾರತದಲ್ಲಿ ಹೊತ್ತಿ ಉರಿಯುತ್ತಿದ್ದ ಕೋಮುದಳ್ಳುರಿ ನಂದಿಸುವ ಕೆಲಸ ಮತ್ತೊಂದು ಕಡೆ ಏಕಕಾಲದಲ್ಲಿ ನಡೆಯಬೇಕಿತ್ತು. ನಿರಾಶ್ರಿತರೆಲ್ಲ ಬೆಂದು ಬೆಂಡಾದ ಜ್ವಾಲೆಯ ತುಣುಕುಗಳಂತೆ ಕಾಣುತ್ತಿದ್ದರು. ಅವರಲ್ಲಿ ಶಾಂತಿ ಮೂಡಿಸಿ ಅವರ ಉದ್ರೇಕ, ಉನ್ಮಾದಗಳನ್ನು ಸಹಿಸಿಕೊಂಡು ಅವರಿಗೆ ಸಾಂತ್ವನ ಹೇಳಿ ನಿಜ ಜೀವನಕ್ಕೆ ಅವರನ್ನು ತೊಡಗಿಸುವ ಮಹತ್ಕಾರ್ಯವನ್ನು ಜವಹರಲಾಲ್ ನೆಹರು ಮತ್ತು ಸರ್ದಾರ್ ಪಟೇಲರು ಬಹಳ ಯಶಸ್ವಿಯಾಗಿ ನಿರ್ವಹಿಸಿದರು. ಕುರುಕ್ಷೇತ್ರದಲ್ಲಿ ಈ ನಿರಾಶ್ರಿತರಿಗೆಲ್ಲ ಊಟ, ವಸತಿ, ವೈದ್ಯಕೀಯ ಸಹಾಯ, ರಕ್ಷಣೆ ಎಲ್ಲವನ್ನೂ ಒದಗಿಸಿಕೊಟ್ಟ ಕೀರ್ತಿ ಇವರಿಬ್ಬರು ಮಹಾನುಭಾವರಿಗೆ ಸಂದಾಯವಾಗಬೇಕು.

ಇಂಗ್ಲಿಷರು ಸ್ವಾತಂತ್ರ್ಯ ಘೋಷಿಸಿ ಹೋಗುವ ಮುನ್ನ ಭಾರತದಲ್ಲಿರುವ 562 ರಾಜ ಮಹಾರಾಜರು, ನವಾಬರು ಸ್ವತಂತ್ರ ರಾಜ್ಯಗಳನ್ನು ರಚಿಸಿಕೊಂಡು ಇರಬಹುದು ಎಂದು ಘೋಷಿಸಿ ಹೋಗಿದ್ದರು. ಸರ್ದಾರ್ ಪಟೇಲರು ಗೃಹ ಸಚಿವರಾಗಿ ಮಾಡಿದ ಮಹತ್ತರವಾದ ಕೆಲಸ ಎಂದರೆ ಈ ೫೬೨ ಸಂಸ್ಥಾನಗಳನ್ನೂ ಸ್ವತಂತ್ರ ಭಾರತದೊಳಗೆ ವಿಲೀನಮಾಡಿದ್ದು. ಆ ಮೂಲಕ ಸಾವಿರಾರು ವರ್ಷಗಳಿಂದ ಹೋಳುಹೋಳಾಗಿದ್ದ ಭಾರತವನ್ನು ಒಂದು ಆಡಳಿತ ಘಟಕವನ್ನಾಗಿ ರೂಪಿಸಿದರು. ಪ್ರಧಾನಿ ಜೊತೆ ಅವರಿಗೆ ಸಮನ್ವಯ ಇರದೇ ಹೋಗಿದ್ದರೆ ಇದು ಸಾಧ್ಯವಾಗುತ್ತಿತ್ತೇ?

ಜವಹರ್‌ಲಾಲ್ ನೆಹರು ವಿಶ್ವಶಾಂತಿ ಹಾಗೂ ನಿರ್ಲಿಪ್ತ ನೀತಿಗಳಿಗೆ ಹೆಸರಾದವರು. ವಿಶ್ವಶಾಂತಿ ನೆಲೆಸಬೇಕಾದರೆ ಎಲ್ಲ ರಾಷ್ಟ್ರಗಳೂ ಯುದ್ಧಗಳನ್ನು ನಿಷೇಧಿಸಬೇಕು, ರಾಷ್ಟ್ರರಾಷ್ಟ್ರಗಳಲ್ಲಿ ಸಖ್ಯ ಬೆಳೆಯಬೇಕು, ಒಂದು ರಾಷ್ಟ್ರದ ಕೊರತೆಯನ್ನು ಮತ್ತೊಂದು ರಾಷ್ಟ್ರ ನೀಗಬೇಕು ಎಂಬುದು ಜವಹರಲಾಲ್‌ರ ಧ್ಯೇಯವಾಗಿತ್ತು. ಅಮೆರಿಕ ಮುಂತಾದ ಎಲ್ಲ ಪ್ರಬಲ ರಾಷ್ಟ್ರಗಳೂ ಬಾಂಬುಗಳನ್ನು ತಯಾರಿಸಿ ಪೇರಿಸಿಡುವ ಕೆಲಸದಲ್ಲಿ ತೊಡಗಿದ್ದಾಗ ಭಾರತ ಬಾಂಬು ತಯಾರಿಕೆಗೆ ವಿರೋಧ ವ್ಯಕ್ತಪಡಿಸಿದ ಏಕೈಕ ರಾಷ್ಟ್ರ. Bomb is no detterant ಎಂದು ನೆಹರು ಘೋಷಣೆ ಮಾಡಿದರು.

ಜವಾಹರಲಾಲ್ ನೆಹರೂರವರ ಅಲಿಪ್ತ ನೀತಿ ಜಾಗತಿಕ ಮಟ್ಟದಲ್ಲಿ ಭಾರತಕ್ಕೆ ಮನ್ನಣೆ ತಂದುಕೊಟ್ಟಿತು. ಅವರ ಆಡಳಿತ ಕಾಲದಲ್ಲಿ ಅಮೆರಿಕ ಮತ್ತು ರಷ್ಯ ಎರಡು ಪ್ರತ್ಯೇಕ ಶಕ್ತಿ ಕೇಂದ್ರಗಳಾಗಿದ್ದವು. ಯಾವುದೇ ರಾಷ್ಟ್ರದ ನೆರವಿಗೆ ಯುದ್ಧದಲ್ಲಿ ಅಮೆರಿಕ ಕೈ ಜೋಡಿಸಿದರೆ ಅದರ ವಿರುದ್ಧ ಹೋರಾಡುವ ರಾಷ್ಟ್ರದ ನೆರೆವಿಗೆ ರಷ್ಯಾ ಧಾವಿಸುತ್ತಿತ್ತು. ಯುದ್ಧದಾಹಿ ರಾಷ್ಟ್ರಗಳು ಈ ಬಲಿಷ್ಠ ರಾಷ್ಟ್ರಗಳ ಬೆಂಬಲ ಕೋರುತ್ತಿದ್ದವು. ಜವಹರ್‌ಲಾಲ್ ನೆಹರೂರವರು ಈ ಸಂದರ್ಭದಲ್ಲಿ ಭಾರತ, ಅಮೆರಿಕ ಅಥವಾ ರಷ್ಯಾದ ಜೊತೆಗೆ ಸೇರಿಕೊಳ್ಳದೆ ತಟಸ್ಥ ರಾಷ್ಟ್ರವಾಗಿ ಉಳಿಯುವಂತೆ ನೋಡಿಕೊಂಡರು.

ಮೋದಿಯವರು ನೆಹರು, ಪಟೇಲರ ಅಧಿಕಾರದ ಅವಧಿಯ ಇತಿಹಾಸವನ್ನು ಓದಿಲ್ಲ. ಮನಸೋ ಇಚ್ಛೆ ಮಾತನಾಡಿ ನೆಹರು-ಪಟೇಲ್ ಇಬ್ಬರೂ ಶತ್ರುಗಳು; ಗಾಂಧೀಜಿಯವರು ಪಟೇಲರನ್ನು ಕಡೆಗಣಿಸಿದರು ಎನ್ನುವ ಸುಳ್ಳು ಆಪಾದನೆ ಮೂಲಕ ಈಗ ತಾವು ಸರ್ದಾರ್ ಪಟೇಲರಿಗೆ ಸಲ್ಲಬೇಕಾದ ಸ್ಥಾನವನ್ನು ಕೊಡಿಸಲು ಹೊರಟವರಂತೆ ನಡೆದುಕೊಳ್ಳುತ್ತಿದ್ದಾರೆ.

ಪ್ರಧಾನಿ ಮತ್ತು ಗೃಹಮಂತ್ರಿಯ ನಡುವೆ ತಾಳಮೇಳ ಇಲ್ಲದೇ ಹೋಗಿದ್ದರೆ, ವೈರತ್ವ ಮನೆ ಮಾಡಿಕೊಂಡಿದ್ದರೆ ಬ್ರಿಟೀಷರು ಕೋಮು ಬಾಣಲೆಯಲ್ಲಿ ಎಸೆದುಹೋಗಿದ್ದ ಭಾರತವನ್ನು ಮೇಲಕ್ಕೆತ್ತಿ ಪರಿಸ್ಥಿತಿಯನ್ನು ನಿಭಾಯಿಸಲು ಒಂದು ಅನನುಭವಿ ಸರ್ಕಾರಕ್ಕೆ ಸಾಧ್ಯವಾಗುತ್ತಿತ್ತೇ? ಸರ್ಕಾರದ ಒಳಗೇ ಆಂತರಿಕ ಸಂಘರ್ಷವಿದ್ದಿದ್ದರೆ ೫೨೬ ಪ್ರಾಂತ್ಯಗಳ ಮೇಲೆ ಹಿಡಿತ ಸಾಧಿಸಿ, ಭಾರತದಲ್ಲಿ ವಿಲೀನ ಮಾಡಿಸಲು ಸಾಧ್ಯವಿತ್ತೆ? ಇಂಥಾ ಸಾಮಾನ್ಯ ಜ್ಞಾನವೂ ಪ್ರಧಾನಿ ಮೋದಿಗಿಲ್ಲವೇ ಅಥವಾ ಇದ್ದೂ ಇಲ್ಲದಂತೆ ವರ್ತಿಸುತ್ತಿದ್ದಾರೆಯೇ..

ಈ ಎಲ್ಲ ಕಿತಾಪತಿಯ ಉದ್ದೇಶ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಗೆದ್ದು ಪ್ರಧಾನಿ ಹುದ್ದೆಯನ್ನು ಉಳಿಸಿಕೊಳ್ಳುವುದೇ ಆಗಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

“ಏಕರೂಪತೆಯು ಸಮಾನತೆಯಲ್ಲ”: 21 ಎನ್‌ಡಿಎ ಆಡಳಿತದ ರಾಜ್ಯಗಳಲ್ಲಿ ಯುಸಿಸಿ ಜಾರಿ ಕುರಿತ ಅಮಿತ್ ಶಾ ಘೋಷಣೆಗೆ ವಿಪಕ್ಷಗಳ ಕಿಡಿ

2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ನೇತೃತ್ವದ ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆಯನ್ನು (ಯುಸಿಸಿ) ಜಾರಿಗೊಳಿಸಲಾಗುವುದು ಎಂದು ಅಮಿತ್ ಶಾ ಘೋಷಿಸಿದ ಬೆನ್ನಲ್ಲೇ, ವಿಪಕ್ಷಗಳು ಬಿಜೆಪಿ ತನ್ನ...

ಉತ್ತರ ಪ್ರದೇಶ| ಫಿರೋಜಾಬಾದ್ ಖಾಕಿ ದೌರ್ಜನ್ಯ; ಪೊಲೀಸರ ಭೂಟು ಕಾಲಿನ ಒದೆತಕ್ಕೆ ಗರ್ಭಿಣಿ ಸಾವು

ಉತ್ತರ ಪ್ರದೇಶದ ಫಿರೋಜಾಬಾದ್‌ನ ಶಿಕೋಹಾಬಾದ್ ಪ್ರದೇಶದಲ್ಲಿ ಕಳ್ಳತನ ಪ್ರಕರಣದ ಶಂಕಿತ ಆರೋಪಿಯೊಬ್ಬನನ್ನು ಬಂಧಿಸಲು ಬಂದಿದ್ದ ಪೊಲೀಸರು ಆತನ ಗರ್ಭಿಣಿ ಹೆಂಡತಿಗೆ ಒದ್ದಿದ್ದರಿಂದ ಆಕೆ ಮೃತಪಟ್ಟಿದ್ದು, ಈ ಘಟನೆಗೆ ಸಂಬಂಧಿಸಿದಂತೆ ಇಬ್ಬರು ಸಬ್‌ಇನ್ಸ್‌ಪೆಕ್ಟರ್‌ಗಳು ಸೇರಿದಂತೆ...

ಕೋಲ್ಕತ್ತಾ | 48 ದಿನಗಳಿಂದ ಮುಸ್ಲಿಂ ಕಾಲೋನಿಗೆ ನೀರು ಬಂದ್ : ಬಿಜೆಪಿ ಸರ್ಕಾರದಿಂದ ದ್ವೇಷ ಸಾಧನೆ ಆರೋಪ

ಉತ್ತರ ಕೋಲ್ಕತ್ತಾದ ಕಾಶಿಪುರದ ಜ್ಯೋತಿನಗರ ಕಾಲೋನಿ ನಿವಾಸಿಗಳು ಕಳೆದ 48 ದಿನಗಳಿಂದ ಕುಡಿಯುವ ನೀರಿಗಾಗಿ ಹಾಹಾಕಾರಪಡುತ್ತಿದ್ದಾರೆ. ಇಲ್ಲಿನ ನೂರಾರು ಕುಟುಂಬಗಳಿಗೆ ನೀರಿನ ಮೂಲವಾಗಿರುವ ಐದು ಸಾರ್ವಜನಿಕ ನಲ್ಲಿಗಳು ಸಂಪೂರ್ಣವಾಗಿ ಒಣಗಿ ಹೋಗಿವೆ. ಇದರಿಂದಾಗಿ...

ಗುರುಗ್ರಾಮ| ಮಹಿಳಾ ಬೈಕರ್‌ಗೆ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಕಾರು ಚಾಲಕನ ಬಂಧನ

ಗುರುಗ್ರಾಮದಲ್ಲಿ ಮಹಿಳಾ ಸ್ಪೋರ್ಟ್ಸ್ ಬೈಕ್ ಸವಾರೆಗೆ ಕಾರಿನಿಂದ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ಚಾಲಕ ಕಲ್ಯಾಣ್ ಬೈನ್ಸ್ಲಾನನ್ನು ರಾಜಸ್ಥಾನದ ರಾಜ್‌ಗಢದಲ್ಲಿ ಮಂಗಳವಾರ ಬಂಧಿಸಲಾಗಿದೆ ಎಂದು ಗುರುಗ್ರಾಮ ಕಮಿಷನರ್ ಸಿಬಾಶ್ ಕಬೀರಾಜ್ ತಿಳಿಸಿದ್ದಾರೆ. ಈ...

ಸರ್ಕಾರ ಆಧಾರ್ ವ್ಯವಸ್ಥೆಯನ್ನು ನಂಬುವುದಾದರೆ, SIR‌ ತಪಾಸಣೆಗೂ ಇದನ್ನೇ ಬಳಸಲಿ: ಆರ್‌ ಎಸ್‌ ಶರ್ಮಾ ಸಲಹೆ

ಪ್ರಸ್ತುತ ಚರ್ಚೆಯಲ್ಲಿರುವ ಮತದಾರರ ಪಟ್ಟಿ ಪರಿಷ್ಕರಣೆ (SIR) ಮತ್ತು ದಾಖಲೆಗಳ ತಪಾಸಣೆ ಪ್ರಕ್ರಿಯೆಗೆ ಸಂಬಂಧಿಸಿದಂತೆ ಆಧಾರ್‌ ವ್ಯವಸ್ಥೆಯ ಮಾಜಿ ಮುಖ್ಯಸ್ಥ (UIDAI) ಶರ್ಮಾ ಅವರು ಮಹತ್ವದ ಸಲಹೆಯೊಂದನ್ನು ನೀಡಿದ್ದಾರೆ. ಪ್ರತಿ ಬಾರಿ ಸಾವಿರಾರು...

ಸೋಶಿಯಲ್ ಮೀಡಿಯಾಗಳಲ್ಲಿ ಅಪ್ರಾಪ್ತರಿಗೆ ಹೆಚ್ಚುತ್ತಿರುವ ಅಪಾಯ; ಲೈಂಗಿಕ ಶೋಷಣೆ ತಡೆಗೆ ಮೆಟಾದಿಂದ ಮಹತ್ವದ ನಿರ್ಧಾರ!

ಸಾಮಾಜಿಕ ಜಾಲತಾಣಗಳ ಬಳಕೆ ಯುವಜನರು ಮತ್ತು ಮಕ್ಕಳ ದೈನಂದಿನ ಬದುಕಿನ ಅವಿಭಾಜ್ಯ ಭಾಗವಾಗಿರುವ ಬೆನ್ನಲ್ಲೇ, ಆನ್‌ಲೈನ್‌ನಲ್ಲಿ ಮಕ್ಕಳ ಲೈಂಗಿಕ ಶೋಷಣೆ ಮತ್ತು ದೌರ್ಜನ್ಯಕ್ಕೆ ಸಂಬಂಧಿಸಿದ ಪ್ರಕರಣಗಳನ್ನು ಎದುರಿಸಲು ಮೆಟಾ ಮಹತ್ವದ ನಿರ್ಧಾರ ಕೈಗೊಂಡಿದೆ....

ಬೆಂಗಳೂರಿನ ಎನ್‌ಎಲ್‌ಎಸ್‌ಐಯು‌ನಲ್ಲಿ ಉಮರ್ ಖಾಲಿದ್ ಸಾಕ್ಷ್ಯಚಿತ್ರ ಪ್ರದರ್ಶನ; ಕೇಂದ್ರದ ಹಸ್ತಕ್ಷೇಪಕ್ಕೆ ಎಬಿವಿಪಿ ಮನವಿ

ಬೆಂಗಳೂರಿನಲ್ಲಿರುವ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯಲ್ಲಿ (ಎನ್‌ಎಲ್‌ಎಸ್‌ಐಯು‌) ಜೈಲಿನಲ್ಲಿರುವ ಹೋರಾಟಗಾರ ಉಮರ್ ಖಾಲಿದ್ ಕುರಿತಾದ ಸಾಕ್ಷ್ಯಚಿತ್ರದ ಪ್ರದರ್ಶನವನ್ನು ಕಾಯಂ ಆಗಿ ರದ್ದುಗೊಳಿಸಲು ಆರ್‌ಎಸ್ಎಸ್ ಸಂಯೋಜಿತ ವಿದ್ಯಾರ್ಥಿ ಸಂಘಟನೆ ಎಬಿವಿಪಿ ಕೇಂದ್ರ...

‘NAZA’ಗೆ ವೆನಿಸ್ ವಿಶೇಷ ಜ್ಯೂರಿ ಪ್ರಶಸ್ತಿ; ಸ್ವದೇಶ ಇಸ್ರೇಲ್‌ನ ಎಐ ಹತ್ಯಾಕಾಂಡ ಬಯಲಿಗೆಳೆದ ನಿರ್ದೇಶಕರಿಗೆ ಪೌರತ್ವ ಕಸಿಯುವ ಬೆದರಿಕೆ

ವೆನಿಸ್ ಚಲನಚಿತ್ರೋತ್ಸವದಲ್ಲಿ ವಿಶೇಷ ಜ್ಯೂರಿ ಪ್ರಶಸ್ತಿ ಗೆದ್ದ ‘NAZA’ ಸಾಕ್ಷ್ಯಚಿತ್ರದ ನಿರ್ದೇಶಕರ ವಿರುದ್ಧ ಇಸ್ರೇಲಿ ಸಂಸ್ಕೃತಿ ಸಚಿವ ಮಿಕಿ ಜೋಹರ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ‘ರಾಜ್ಯಕ್ಕೆ ದ್ರೋಹ’ ಎಸಗಿದ್ದಾರೆಂದು ಆರೋಪಿಸಿ ಅವರ ಇಸ್ರೇಲಿ...

ಕರ್ನಾಟಕದಲ್ಲಿ ಬರದ ಬರೆ; ನೀರು, ವಿದ್ಯುತ್‌ ಕೊರತೆ ಸಾಧ್ಯತೆ: ಸಿಎಂ ಡಿಕೆ ಶಿವಕುಮಾರ್‌ ಎಚ್ಚರಿಕೆ

ದುರ್ಬಲ ಮುಂಗಾರು ಹಾಗೂ ಮಳೆಯ ಕೊರತೆಯಿಂದ ಕರ್ನಾಟಕದಲ್ಲಿ ಬರ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುತ್ತಿದ್ದು, ಮುಂದಿನ ದಿನಗಳಲ್ಲಿ ರಾಜ್ಯವು ಕುಡಿಯುವ ನೀರು ಮತ್ತು ವಿದ್ಯುತ್‌ ಕೊರತೆಯನ್ನು ಎದುರಿಸುವ ಸಾಧ್ಯತೆಯಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌...

2,000 ರೂ.ವರೆಗಿನ UPI ಪಾವತಿಗೆ ಶುಲ್ಕವಿಲ್ಲ ಎಂದ ಕೇಂದ್ರ ಸರ್ಕಾರ

ಡಿಜಿಟಲ್ ಪಾವತಿ ಬಳಸುವ ಕೋಟ್ಯಂತರ ಸಾಮಾನ್ಯ ಜನರಿಗೆ ಕೇಂದ್ರ ಹಣಕಾಸು ಸಚಿವಾಲಯ ಮಹತ್ವದ ಸ್ಪಷ್ಟನೆ ನೀಡಿದ್ದು, 2,000 ರೂಪಾಯಿವರೆಗಿನ ಯುಪಿಐ (UPI) ವಹಿವಾಟುಗಳಿಗೆ ಯಾವುದೇ ರೀತಿಯ ಶುಲ್ಕ ವಿಧಿಸುವಂತಿಲ್ಲ ಎಂದು ಅಧಿಸೂಚನೆ ಹೊರಡಿಸಿದೆ....