Homeರಾಜಕೀಯಅಪರಾ-ತಪರಾ: ಅಕೌಂಟಿಗೆ ಹಣ ಮತ್ತು ಕೌಂಟ್‌ಲೆಸ್ ಸುಳ್ಳು

ಅಪರಾ-ತಪರಾ: ಅಕೌಂಟಿಗೆ ಹಣ ಮತ್ತು ಕೌಂಟ್‌ಲೆಸ್ ಸುಳ್ಳು

- Advertisement -
ಮಲ್ಲಿ |
2014ರ ಲೋಕಸಭಾ ಚುನಾವಣೆಯ ಪ್ರಚಾರದಿಂದ ಇಲ್ಲಿವರೆಗೆ ‘ಅಕೌಂಟಿಗೆ ರೊಕ್ಕ’ ಎಂಬುದನ್ನು ನರೇಂದ್ರ ಮೋದಿ ಬಡಬಡಿಸುತ್ತಲೇ ಬಂದಿದ್ದಾರೆ. ಈ ವಿಷಯದಲ್ಲಿ ಕೌಂಟ್‌ಲೆಸ್ (ಎಣಿಸಲಾಗದಷ್ಟು!) ಸುಳ್ಳುಗಳನ್ನು  ‘ಸಚ್ಚಾ’ ಪ್ರಧಾನಿ ಹೇಳುತ್ತಲೇ ಬಂದಿದ್ದು, ಆದರೆ 2016ರ ನಂತರ ಕಪ್ಪುಹಣದ ವಿಷಯವನ್ನು ಡ್ರಾಪ್ ಮಾಡಿಬಿಟ್ಟರು!
ಆದರೆ ಅಕೌಂಟು ಎಂಬ ಪದ ಮಾತ್ರ ಅವರ ನಾಲಿಗೆ ಮೇಲೆ ಸೀಟ್ ರಿಸರ್ವ್ ಮಾಡಿಕೊಂಡು ಕೂತು ಬಿಟ್ಟಿದೆ.
ಮೊದಲಿಗೆ, 2014ರ ಚುನಾವಣಾ ಪ್ರಚಾರದಲ್ಲಿ, ವಿದೇಶದಲ್ಲಿರುವ ಕಪ್ಪುಹಣ ವಾಪಸ್ ತರ್ತೇನೆ, ಎಲ್ಲರ ಅಕೌಂಟಿಗೂ ೧೫ ಲಕ್ಷ ಹಾಕ್ತೇನೆ ಎಂದರು.
* ಕಪ್ಪುಹಣ ತರೋದು ಗೋಲ್ವಾಲ್ಕರಾಣೆಗೂ ಸಾಧ್ಯವಿಲ್ಲ ಎಂದು ಅರಿವಾಯಿತು. ತಾವೂ ಗೆದ್ದಿದ್ದು ಅಂಥದೇ ಹಣದಿಂದ ಅಲ್ವಾ ಅಂತಾ ಆ ಹಣದ ಮೇಲೆ ಕರುಣೆ ಉಕ್ಕಿತು, ಅಂತಹ ಹಣದಾತರ ಸೇವೆ ಮಾಡಲು ಶುರು ಮಾಡಿದರು.
* ’15 ಲಕ್ಷ ಹಾಕಬೇಕು ಅನಕೊಂಡಿದ್ದೆ. ಆದರೆ ಈ ದೇಶದ ಕೋಟ್ಯಂತರ ಬಡವರಿಗೆ ಬ್ಯಾಂಕ್ ಅಕೌಂಟೇ ಇಲ್ಲ ಎಂಬುದು ಗೊತ್ತಾಗಿತು. ಅದಕ್ಕೇ ಜನಧನ್ ಅಕೌಂಟು ಆರಂಭಿಸಿದೆ…’ ಎಂದರು.
ಈ ಅಕೌಂಟುಗಳಿಗೆ ಝೀರೋ ಅಕೌಂಟು ಎಂದೂ ಕರೆಯಲಾಗುತ್ತಿದೆ. ಹೆಸರು ಸರಿಯಾಗಿಯೇ ಇದೆ.
* ‘ಡಿಜಿಟಲ್ ಇಂಡಿಯಾ’ ಶುರುವಾದ ಮೇಲೆ ಡಿಜಿಟಲ್ಲಾಗಿಯೇ ಹಣ ಟ್ರಾನ್ಸ್ಫರ್ ಮಾಡೋ ಯೋಚನೆ ಬಂತಂತೆ. ಅಂದರೆ ಮುಟ್ಟಲಾಗದ, ತಟ್ಟಲೂ ಆಗದ ಡಿಜಿಟಲ್ ಹಣ!
* ಈಗ 2019ರ ಚುನಾವಣೆ ಬಂತಲ್ಲ, ಸಣ್ಣ ರೈತರ ಅಕೌಂಟುಗಳಿಗೆ ಅದರಲ್ಲೂ ಝೀರೋ ಅಕೌಂಟುಗಳಿಗೆ ದಿನಕ್ಕೆ 15 ರೂ. ಹಾಕೋದಾಗಿ ರೀಲು ಬಿಟ್ರು. ‘15 ಲಕ್ಷ ರೂ.’ದಲ್ಲಿನ ಲಕ್ಷ ಅಲಕ್ಷ್ಯಕ್ಕೊಳಗಾದ ಕತೆ ಹೀಗಿದೆ ನೋಡಿ!
ಈಗ ತಮ್ಮ ಸ್ವಂತ 15 ರೂ.ನಲ್ಲಿ ಒಂದು ಚಾ ಕುಡಿದು, ಎಲೆ-ಅಡಿಕೆ-ಸುಣ್ಣ-ತಂಬಾಕು ತಿಂದು ಮೋದಿ ಮಕಕ್ಕ  ಉಗಿಯಲು ರೈತರಷ್ಟೇ ಅಲ್ಲ, ನಿರುದ್ಯೋಗಿ ಯುವ ಜನರೂ ರೆಡಿಯಾಗಿದ್ದಾರೆ.
ರೈತರ ಆದಾಯ ದ್ವಿಗುಣ ಆಗೇ ಬಿಟ್ಟಿದೆ!
ಮೋದಿ ಮತ್ತೆ ಮತ್ತೆ ಹೇಳುವುದು ರೈತರ ಆದಾಯವನ್ನು ದ್ವಿಗುಣ ಮಾಡ್ತೀವಿ ಅಂತಾ. ಆದರೆ ಆ ನಿಟ್ಟಿನಲ್ಲಿ ಯಾವ ಪ್ರಯತ್ನವನ್ನೂ ಮಾಡಲೇ ಇಲ್ಲ. ಆದರೆ ಒಂದರ್ಥದಲ್ಲಿ ಮೋದಿ ಕಾರಣದಿಂದಾಗಿ ರೈತರ ಆದಾಯ ದ್ವಿಗುಣಗೊಂಡಿದೆ:
ಉದಾಹರಣೆಗೆ: ಒಬ್ಬ ಸಣ್ಣ ರೈತನ ಸಾಲ ೫ ಲಕ್ಷ ಅಂತಾ ಇಟ್ಟುಕೊಳ್ಳಿ. ಅದನ್ನು ಹೀಗೂ ಹೇಳಬಹುದು: ‘ಆತನ/ಆಕೆಯ ಆದಾಯ  –5 ಲಕ್ಷ ರೂ (ಮೈನಸ್ 5 ಲಕ್ಷ ರೂ)’…..ಈಗ ಮೋದಿಯ  ಕೃಷಿ ವಿರೋಧಿ ನೀತಿಯಿಂದಾಗಿ ಆ ರೈತನ ಸಾಲ 10 ಲಕ್ಷಕ್ಕೆ ಏರಿದೆ. ಅಂದರೆ ಆ ರೈತನ ಆದಾಯ ಈಗ -10 ಲಕ್ಷ ರೂ!  ಆಯಿತಲ್ಲ ರೈತನ ಆದಾಯ ದ್ವಿಗುಣ!
                       ****
೨೦೧೪ರ ಚುನಾವಣಾ ಪ್ರಚಾರದಿಂದ ಇಲ್ಲಿವರೆಗೆ ಸುಳ್ಳುಗಳನ್ನೇ ಹೇಳುತ್ತ ಜನದ್ರೋಹಿ ಆಡಳಿತ ನೀಡಿದ, ಅಕೌಂಟೆಬಿಲಿಟಿಯೇ (ಹೊಣೆಗಾರಿಕೆ) ಇಲ್ಲದ ಈ ಮನುಷ್ಯನನ್ನು ಇನ್ನೂ ಹಾಡಿ ಹೊಗಳುವ ಭಕ್ತರಿದ್ದಾರಲ್ಲ, ಅವರಿನ್ನೂ ಮೋದಿಯ ಪೆಪ್ಪರಮೆಂಟು ಚೀಪುತ್ತಲೇ ಇದ್ದಾರೆ….
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬಿಹಾರ: ಪತಿಯನ್ನು ಹತ್ಯೆ ಮಾಡಿದ ಗುಂಪಿನಿಂದ ಬೆದರಿಕೆ; ಇಬ್ಬರು ಮಕ್ಕಳೊಂದಿಗೆ ವಿಷ ಸೇವಿಸಿದ ಮುಸ್ಲಿಂ ಮಹಿಳೆ ಸಾವು, ಮಕ್ಕಳ ಸ್ಥಿತಿ ಗಂಭೀರ

ಬಿಹಾರದ ರೋಹ್ತಾಸ್ ಜಿಲ್ಲೆಯ ಮುಸ್ಲಿಂ ಮಹಿಳೆಯೊಬ್ಬರು ಮಂಗಳವಾರ ತನ್ನ ಇಬ್ಬರು ಅಪ್ರಾಪ್ತ ಮಕ್ಕಳೊಂದಿಗೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.  ಪತಿಯನ್ನು ಅಮಾನುಷವಾಗಿ ಹಲ್ಲೆ ನಡೆಸಿ ಹತ್ಯೆ ಮಾಡಿದ್ದ ಆರೋಪಿಗಳಿಂದ ಬೆದರಿಕೆಗಳನ್ನು ತಾಳಲಾರದೆ...

ಅತ್ಯಾಚಾರ ಆರೋಪ: ಅಶೋಕ್ ಖರತ್ ಅವರ ಪುತ್ರನನ್ನು ವಿಚಾರಣೆಗಾಗಿ ವಶಕ್ಕೆ ಪಡೆದ ಎಸ್ಐಟಿ; ಪತ್ನಿಗಾಗಿ ಹುಡುಕಾಟ 

ನಾಸಿಕ್: ಅತ್ಯಾಚಾರ ಆರೋಪಿ ಸ್ವಯಂ ಘೋಷಿತ ದೇವಮಾನವ ಅಶೋಕ್ ಖರತ್ ವಿರುದ್ಧ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ), ನಾಸಿಕ್ ನಗರದಲ್ಲಿ ಆತನ ಮಗನನ್ನು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದು, ಆತನ ಪತ್ನಿಗಾಗಿಯೂ...

ಇರಾಕ್‌ : ಬಗ್ದಾದ್‌ನಲ್ಲಿ ಯುಎಸ್‌ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅಪಹರಣ

ಇರಾಕ್‌ ರಾಜಧಾನಿ ಬಗ್ದಾದ್‌ ನಗರದ ಅಲ್-ಸಾದೂನ್ ಬೀದಿಯಲ್ಲಿರುವ ಬಗ್ದಾದ್ ಹೋಟೆಲ್ ಬಳಿ ಅಮೆರಿಕದ ಪ್ರಶಸ್ತಿ ವಿಜೇತ ಸ್ವತಂತ್ರ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅವರನ್ನು ಮಂಗಳವಾರ (ಮಾ.31, 2026) ಅಪಹರಿಸಲಾಗಿದೆ ಎಂದು ವರದಿಯಾಗಿದೆ. ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ,...

ವಾಣಿಜ್ಯ ಎಲ್‌ಪಿಜಿ ದರ 195.50 ರೂ. ಏರಿಕೆ : ಜನ ಸಾಮಾನ್ಯರಿಗೆ ಗಾಯದ ಮೇಲೆ ಬರೆ

ಪಶ್ಚಿಮ ಏಷ್ಯಾ ಸಂಘರ್ಷದಿಂದಾಗಿ ಜಾಗತಿಕ ತೈಲ ಬೆಲೆಗಳು ಏರುತ್ತಿರುವ ನಡುವೆ, ವಾಣಿಜ್ಯ ಎಲ್‌ಪಿಜಿ ದರವನ್ನು ಬುಧವಾರ (ಏ.1) 195.50 ರೂ. ಹೆಚ್ಚಿಸಲಾಗಿದೆ. ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳ ಪ್ರಕಾರ, ಬೆಲೆ ಏರಿಕೆ ಬಳಿಕ...

ಕುಸಿಯುವುದರಲ್ಲಿ ರೂಪಾಯಿ ಮತ್ತು ಬಿಜೆಪಿ ವರ್ಚಸ್ಸಿನ ನಡುವೆ ತೀವ್ರ ಪೈಪೋಟಿಯಿದೆ : ಅಖಿಲೇಶ್ ಯಾದವ್ ವ್ಯಂಗ್ಯ

ಕುಸಿಯುವುದರಲ್ಲಿ ರೂಪಾಯಿ ಮತ್ತು ಬಿಜೆಪಿ ವರ್ಚಸ್ಸಿನ ನಡುವೆ ತೀವ್ರ ಪೈಪೋಟಿ ನಡೆಯುತ್ತಿದೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ವ್ಯಂಗ್ಯವಾಡಿದ್ದಾರೆ. ಬಿಜೆಪಿ ನಾಯಕರು ಹಾಗೂ ಅವರ ಸಹವರ್ತಿಗಳ ಭ್ರಷ್ಟಾಚಾರ ಮತ್ತು ದುರ್ನಡತೆಯ ಪ್ರಕರಣಗಳು...

ಅಂತರ್ಧರ್ಮೀಯ ‘ಲಿವ್-ಇನ್’ ಸಂಬಂಧ ಅಪರಾಧವಲ್ಲ: ಅಲಹಾಬಾದ್ ಹೈಕೋರ್ಟ್

ಅಂತರ್ಧರ್ಮೀಯ ಲಿವ್-ಇನ್ ಸಂಬಂಧವನ್ನು ನಿಷೇಧಿಸಲಾಗಿಲ್ಲ ಅಥವಾ ಯಾವುದೇ ಕಾನೂನಿನ ಅಡಿಯಲ್ಲಿ ಅಪರಾಧವಲ್ಲಎಂದು ತೀರ್ಪು ನೀಡಿರುವ ಅಲಹಾಬಾದ್ ಹೈಕೋರ್ಟ್, ಮಹಿಳೆಯ ಕುಟುಂಬದಿಂದ ಬೆದರಿಕೆ ಎದುರಿಸುತ್ತಿರುವ ದಂಪತಿಗಳಿಗೆ ರಕ್ಷಣೆ ನೀಡಿದೆ. ಸೋನ್‌ಭದ್ರಾದ ಕಾಜಲ್ ಪ್ರಜಾಪತಿ ಮತ್ತು ಅವರ...

‘ವೇತನ ಸಹಿತ ಪಿತೃತ್ವ ರಜೆಯನ್ನು ಕಾನೂನುಬದ್ಧಗೊಳಿಸಬೇಕು’; ರಾಜ್ಯಸಭೆಯಲ್ಲಿ ಎಎಪಿ ಸಂಸದ ರಾಘವ್ ಚಡ್ಡಾ ಒತ್ತಾಯ

ಭಾರತದಲ್ಲಿ ವೇತನ ಸಹಿತ ಪಿತೃತ್ವ ರಜೆಯನ್ನು ಕಾನೂನುಬದ್ಧ ಹಕ್ಕನ್ನಾಗಿ ಮಾಡಲು, ಹಂಚಿಕೆಯ ಆರೈಕೆ ಜವಾಬ್ದಾರಿಗಳನ್ನು ಒತ್ತಿಹೇಳಲು ಕಾನೂನನ್ನು ಜಾರಿಗೆ ತರಬೇಕೆಂದು ಎಎಪಿ ಸಂಸದ ರಾಘವ್ ಚಡ್ಡಾ ಒತ್ತಾಯಿಸಿದ್ದಾರೆ. ರಾಜ್ಯಸಭೆಯಲ್ಲಿ ಮಾತನಾಡಿದ ಅವರು, ತಂದೆ ಉದ್ಯೋಗ...

ಬಿಜೆಪಿ ಇತರ ರಾಜ್ಯಗಳ ಅಕ್ರಮ ಮತದಾರರನ್ನು ಸೇರಿಸುತ್ತಿದೆ : ಮಮತಾ ಬ್ಯಾನರ್ಜಿ ಆರೋಪ

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಂಗಳವಾರ (ಮಾ.31) ಬಿಜೆಪಿ ಬಿಹಾರ, ರಾಜಸ್ಥಾನ, ಹರಿಯಾಣ ಮತ್ತು ಉತ್ತರ ಪ್ರದೇಶದ ಅಕ್ರಮ ಮತದಾರರನ್ನು ರಾಜ್ಯದ ಮತದಾರರ ಪಟ್ಟಿಯಲ್ಲಿ ಸೇರಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು. ಪಶ್ಚಿಮ...

ಬಿಹಾರ: ವಿವಾಹಿತ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರಕ್ಕೆ ಯತ್ನ; ಹಲ್ಲೆ ಮಾಡಿ ವಿಡಿಯೋ ಹರಿಬಿಟ್ಟ ದುಷ್ಟರು: ಇಬ್ಬರ ಬಂಧನ 

ಬಿಹಾರದ ನಳಂದ ಜಿಲ್ಲೆಯಲ್ಲಿ ನಾಚಿಕೆಗೇಡಿನ ಮತ್ತು ಆತಂಕಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ನೂರ್ಸರಾಯ್ ಪೊಲೀಸ್ ಠಾಣೆ ವ್ಯಾಪ್ತಿಯ ಹಳ್ಳಿಯೊಂದರಲ್ಲಿ ಮೂವರು ಪುರುಷರು ವಿವಾಹಿತ ಮಹಿಳೆಯ ಮೇಲೆ ಸಾರ್ವಜನಿಕವಾಗಿ ಸಾಮೂಹಿಕ ಅತ್ಯಾಚಾರಕ್ಕೆ ಯತ್ನಿಸಿದ್ದಾರೆ. ದೌರ್ಜನ್ಯ ವಿರೋಧಿಸಿ...

‘ಹಿಂದುತ್ವ ಉಗ್ರವಾದವನ್ನು ಏಕೆ ನಿರ್ಲಕ್ಷಿಸಬೇಕು..?’; ಸಂಸತ್ತಿನಲ್ಲಿ ಪ್ರಶ್ನಿಸಿದ ರುಹುಲ್ಲಾ ಮೆಹದಿ

"ದೇಶದಲ್ಲಿ ಹೆಚ್ಚುತ್ತಿರುವ ಬಲಪಂಥೀಯ ಉಗ್ರವಾದವನ್ನು ನಿರ್ಲಕ್ಷಿಸಿ ಎಡಪಂಥೀಯ ಬೆದರಿಕೆಗಳ ಮೇಲೆ ಮಾತ್ರ ಗಮನಹರಿಸಲಾಗುತ್ತಿದೆ" ಎಂದು ಲೋಕಸಭೆಯಲ್ಲಿ ಜಮ್ಮು-ಕಾಶ್ಮೀರದ ಶ್ರೀನಗರ ಸಂಸದ ಆಗಾ ಸೈಯದ್ ರುಹುಲ್ಲಾ ಮೆಹದಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಮೇಲೆ...