Homeರಾಜಕೀಯಅಪರಾ-ತಪರಾ: ಅಕೌಂಟಿಗೆ ಹಣ ಮತ್ತು ಕೌಂಟ್‌ಲೆಸ್ ಸುಳ್ಳು

ಅಪರಾ-ತಪರಾ: ಅಕೌಂಟಿಗೆ ಹಣ ಮತ್ತು ಕೌಂಟ್‌ಲೆಸ್ ಸುಳ್ಳು

- Advertisement -
ಮಲ್ಲಿ |
2014ರ ಲೋಕಸಭಾ ಚುನಾವಣೆಯ ಪ್ರಚಾರದಿಂದ ಇಲ್ಲಿವರೆಗೆ ‘ಅಕೌಂಟಿಗೆ ರೊಕ್ಕ’ ಎಂಬುದನ್ನು ನರೇಂದ್ರ ಮೋದಿ ಬಡಬಡಿಸುತ್ತಲೇ ಬಂದಿದ್ದಾರೆ. ಈ ವಿಷಯದಲ್ಲಿ ಕೌಂಟ್‌ಲೆಸ್ (ಎಣಿಸಲಾಗದಷ್ಟು!) ಸುಳ್ಳುಗಳನ್ನು  ‘ಸಚ್ಚಾ’ ಪ್ರಧಾನಿ ಹೇಳುತ್ತಲೇ ಬಂದಿದ್ದು, ಆದರೆ 2016ರ ನಂತರ ಕಪ್ಪುಹಣದ ವಿಷಯವನ್ನು ಡ್ರಾಪ್ ಮಾಡಿಬಿಟ್ಟರು!
ಆದರೆ ಅಕೌಂಟು ಎಂಬ ಪದ ಮಾತ್ರ ಅವರ ನಾಲಿಗೆ ಮೇಲೆ ಸೀಟ್ ರಿಸರ್ವ್ ಮಾಡಿಕೊಂಡು ಕೂತು ಬಿಟ್ಟಿದೆ.
ಮೊದಲಿಗೆ, 2014ರ ಚುನಾವಣಾ ಪ್ರಚಾರದಲ್ಲಿ, ವಿದೇಶದಲ್ಲಿರುವ ಕಪ್ಪುಹಣ ವಾಪಸ್ ತರ್ತೇನೆ, ಎಲ್ಲರ ಅಕೌಂಟಿಗೂ ೧೫ ಲಕ್ಷ ಹಾಕ್ತೇನೆ ಎಂದರು.
* ಕಪ್ಪುಹಣ ತರೋದು ಗೋಲ್ವಾಲ್ಕರಾಣೆಗೂ ಸಾಧ್ಯವಿಲ್ಲ ಎಂದು ಅರಿವಾಯಿತು. ತಾವೂ ಗೆದ್ದಿದ್ದು ಅಂಥದೇ ಹಣದಿಂದ ಅಲ್ವಾ ಅಂತಾ ಆ ಹಣದ ಮೇಲೆ ಕರುಣೆ ಉಕ್ಕಿತು, ಅಂತಹ ಹಣದಾತರ ಸೇವೆ ಮಾಡಲು ಶುರು ಮಾಡಿದರು.
* ’15 ಲಕ್ಷ ಹಾಕಬೇಕು ಅನಕೊಂಡಿದ್ದೆ. ಆದರೆ ಈ ದೇಶದ ಕೋಟ್ಯಂತರ ಬಡವರಿಗೆ ಬ್ಯಾಂಕ್ ಅಕೌಂಟೇ ಇಲ್ಲ ಎಂಬುದು ಗೊತ್ತಾಗಿತು. ಅದಕ್ಕೇ ಜನಧನ್ ಅಕೌಂಟು ಆರಂಭಿಸಿದೆ…’ ಎಂದರು.
ಈ ಅಕೌಂಟುಗಳಿಗೆ ಝೀರೋ ಅಕೌಂಟು ಎಂದೂ ಕರೆಯಲಾಗುತ್ತಿದೆ. ಹೆಸರು ಸರಿಯಾಗಿಯೇ ಇದೆ.
* ‘ಡಿಜಿಟಲ್ ಇಂಡಿಯಾ’ ಶುರುವಾದ ಮೇಲೆ ಡಿಜಿಟಲ್ಲಾಗಿಯೇ ಹಣ ಟ್ರಾನ್ಸ್ಫರ್ ಮಾಡೋ ಯೋಚನೆ ಬಂತಂತೆ. ಅಂದರೆ ಮುಟ್ಟಲಾಗದ, ತಟ್ಟಲೂ ಆಗದ ಡಿಜಿಟಲ್ ಹಣ!
* ಈಗ 2019ರ ಚುನಾವಣೆ ಬಂತಲ್ಲ, ಸಣ್ಣ ರೈತರ ಅಕೌಂಟುಗಳಿಗೆ ಅದರಲ್ಲೂ ಝೀರೋ ಅಕೌಂಟುಗಳಿಗೆ ದಿನಕ್ಕೆ 15 ರೂ. ಹಾಕೋದಾಗಿ ರೀಲು ಬಿಟ್ರು. ‘15 ಲಕ್ಷ ರೂ.’ದಲ್ಲಿನ ಲಕ್ಷ ಅಲಕ್ಷ್ಯಕ್ಕೊಳಗಾದ ಕತೆ ಹೀಗಿದೆ ನೋಡಿ!
ಈಗ ತಮ್ಮ ಸ್ವಂತ 15 ರೂ.ನಲ್ಲಿ ಒಂದು ಚಾ ಕುಡಿದು, ಎಲೆ-ಅಡಿಕೆ-ಸುಣ್ಣ-ತಂಬಾಕು ತಿಂದು ಮೋದಿ ಮಕಕ್ಕ  ಉಗಿಯಲು ರೈತರಷ್ಟೇ ಅಲ್ಲ, ನಿರುದ್ಯೋಗಿ ಯುವ ಜನರೂ ರೆಡಿಯಾಗಿದ್ದಾರೆ.
ರೈತರ ಆದಾಯ ದ್ವಿಗುಣ ಆಗೇ ಬಿಟ್ಟಿದೆ!
ಮೋದಿ ಮತ್ತೆ ಮತ್ತೆ ಹೇಳುವುದು ರೈತರ ಆದಾಯವನ್ನು ದ್ವಿಗುಣ ಮಾಡ್ತೀವಿ ಅಂತಾ. ಆದರೆ ಆ ನಿಟ್ಟಿನಲ್ಲಿ ಯಾವ ಪ್ರಯತ್ನವನ್ನೂ ಮಾಡಲೇ ಇಲ್ಲ. ಆದರೆ ಒಂದರ್ಥದಲ್ಲಿ ಮೋದಿ ಕಾರಣದಿಂದಾಗಿ ರೈತರ ಆದಾಯ ದ್ವಿಗುಣಗೊಂಡಿದೆ:
ಉದಾಹರಣೆಗೆ: ಒಬ್ಬ ಸಣ್ಣ ರೈತನ ಸಾಲ ೫ ಲಕ್ಷ ಅಂತಾ ಇಟ್ಟುಕೊಳ್ಳಿ. ಅದನ್ನು ಹೀಗೂ ಹೇಳಬಹುದು: ‘ಆತನ/ಆಕೆಯ ಆದಾಯ  –5 ಲಕ್ಷ ರೂ (ಮೈನಸ್ 5 ಲಕ್ಷ ರೂ)’…..ಈಗ ಮೋದಿಯ  ಕೃಷಿ ವಿರೋಧಿ ನೀತಿಯಿಂದಾಗಿ ಆ ರೈತನ ಸಾಲ 10 ಲಕ್ಷಕ್ಕೆ ಏರಿದೆ. ಅಂದರೆ ಆ ರೈತನ ಆದಾಯ ಈಗ -10 ಲಕ್ಷ ರೂ!  ಆಯಿತಲ್ಲ ರೈತನ ಆದಾಯ ದ್ವಿಗುಣ!
                       ****
೨೦೧೪ರ ಚುನಾವಣಾ ಪ್ರಚಾರದಿಂದ ಇಲ್ಲಿವರೆಗೆ ಸುಳ್ಳುಗಳನ್ನೇ ಹೇಳುತ್ತ ಜನದ್ರೋಹಿ ಆಡಳಿತ ನೀಡಿದ, ಅಕೌಂಟೆಬಿಲಿಟಿಯೇ (ಹೊಣೆಗಾರಿಕೆ) ಇಲ್ಲದ ಈ ಮನುಷ್ಯನನ್ನು ಇನ್ನೂ ಹಾಡಿ ಹೊಗಳುವ ಭಕ್ತರಿದ್ದಾರಲ್ಲ, ಅವರಿನ್ನೂ ಮೋದಿಯ ಪೆಪ್ಪರಮೆಂಟು ಚೀಪುತ್ತಲೇ ಇದ್ದಾರೆ….
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪ್ರತಿಭಟನೆ ಭೀತಿ : ಸಿಜೆಐ ಸೂರ್ಯಕಾಂತ್ ಭಾಗವಹಿಸಬೇಕಿದ್ದ ಘಟಿಕೋತ್ಸವ ದಿಢೀರ್ ಮುಂದೂಡಿದ TISS

ಮುಂಬೈನ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸಸ್ (ಟಿಐಎಸ್‌ಎಸ್‌) ಸಂಸ್ಥೆಯು ಆಗಸ್ಟ್ 2ರಂದು ನಡೆಸಲು ನಿಗದಿಪಡಿಸಿದ್ದ ತನ್ನ 86ನೇ ವಾರ್ಷಿಕ ಘಟಿಕೋತ್ಸವವನ್ನು ದಿಢೀರ್ ಮುಂದೂಡಿದೆ. ಕ್ಯಾಂಪಸ್ ಭದ್ರತೆಯ ಬಗೆಗಿನ ಕಳವಳಗಳು ಮತ್ತು ವಿದ್ಯಾರ್ಥಿಗಳ...

ಪ್ರಧಾನಿಗಳೇ ನಿಮ್ಮ ರೀಲ್‌ಗಳನ್ನು ಅಂಧಭಕ್ತರು ಮೆಚ್ಚಬಹುದು, ಆದರೆ ಇತಿಹಾಸ ನಿಮ್ಮನ್ನು ಕ್ಷಮಿಸುವುದಿಲ್ಲ: ಬಿ.ಕೆ. ಹರಿಪ್ರಸಾದ್

ಪ್ರಧಾನಿ ನರೇಂದ್ರ ಮೋದಿ ಬಿಡುಗಡೆ ಮಾಡಿರುವ ಇತ್ತೀಚಿನ ವಿಡಿಯೋ (ರೀಲ್) ಕುರಿತು ಕಾಂಗ್ರೆಸ್ ಹಿರಿಯ ನಾಯಕ ಮತ್ತು ಕೆಪಿಸಿಸಿ ಅಧ್ಯಕ್ಷರಾದ ಬಿ.ಕೆ. ಹರಿಪ್ರಸಾದ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ತಾನು ಮಾಡಿದರೆ ರಾಜತಂತ್ರ, ಬೇರೆಯವರು...

ಪ್ರಧಾನಿ ಮೋದಿ ವಿರುದ್ಧ ನಿಂದನೆ: ನನಗೆ ಕೇವಲ 15 ವರ್ಷ ‘ಅನ್ಯರ ಪ್ರಭಾವಕ್ಕೆ ಒಳಗಾಗಿದ್ದೆ’ ಎಂದು ಕ್ಷಮೆ ಕೇಳಿದ ವಿದ್ಯಾರ್ಥಿನಿ ವಿಡಿಯೋ ವೈರಲ್

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿ ಭಾರಿ ಆಕ್ರೋಶಕ್ಕೆ ಗುರಿಯಾಗಿದ್ದ ಸಿಜೆಪಿ (CJP) ಪ್ರತಿಭಟನಾಕಾರ ಯುವತಿಯೊಬ್ಬಳು ಸೋಶಿಯಲ್ ಮೀಡಿಯಾದಲ್ಲಿ ಕ್ಷಮೆಯಾಚಿಸಿದ್ದಾಳೆ ಎನ್ನಲಾದ ವೀಡಿಯೊವೊಂದು ಹರಿದಾಡುತ್ತಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್...

ಸ್ಪೇನ್‌ಗೆ ನುಗ್ಗಿದ ಸಾವಿರಾರು ಮೊರಾಕನ್ನರು : ಬೃಹತ್ ವಲಸೆಯ ಹಿಂದೆ ಇಸ್ರೇಲ್ ಕುತಂತ್ರ?

ಮೊರಾಕೊದಿಂದ ಸ್ಪೇನ್‌ನ ಸಿಯುಟಾ ನಗರಕ್ಕೆ ಸಾವಿರಾರು ವಲಸಿಗರು ನುಗ್ಗಿದ ಬಿಕ್ಕಟ್ಟಿನ ಹಿಂದೆ ಇಸ್ರೇಲ್ ಕೈವಾಡವಿದೆ ಎಂಬ ಆರೋಪಗಳು ಕೇಳಿ ಬಂದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಇಸ್ರೇಲ್‌ನ ಕುತಂತ್ರ ಬುದ್ದಿಯ ಬಗ್ಗೆ ಭಾರೀ ಚರ್ಚೆಗಳು ನಡೆಯುತ್ತಿವೆ. ಇದೇ...

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...