Homeಅಂಕಣಗಳುಆಘಾತವಾಣಿ | `ಜೈಲೊಳಗೆ ಸ್ವೋಭುನಕ್ಕೆ ರೆಡಿ ಮಾಡಿ, ಆಮ್ಯಾಲೆ ನನ್ನ ಅರೆಸ್ಟ್ ಮಾಡ್ರುಲಾ’

ಆಘಾತವಾಣಿ | `ಜೈಲೊಳಗೆ ಸ್ವೋಭುನಕ್ಕೆ ರೆಡಿ ಮಾಡಿ, ಆಮ್ಯಾಲೆ ನನ್ನ ಅರೆಸ್ಟ್ ಮಾಡ್ರುಲಾ’

- Advertisement -
- Advertisement -
  • ಅಟ್ಯಾಕ್ ಹನ್ಮಂತ |

ನಮಸ್ಕಾರ ಆಘಾತವಾಣಿ ವಾರ್ತೆಗಳಿಗೆ ಸ್ವಾಗತ, ಓದುತ್ತಿರುವವರು ಅಟ್ಯಾಕ್ ಹನ್ಮಂತ.

ಕಣ್ಣಿಗೆ ಏನೇ ಕಂಡರೂ ಅದನ್ನು ಉದ್ಘಾಟನೆ ಮಾಡಿ ಪೋಟೋ ತಗೊಳ್ತೀನಿ ಅಂತ ಓಡೋಡಿ ಬರುವ ಮಾನ್ಯ ಪ್ರದ್ರಾನ ಮಂತ್ರಿ ‘ಪಕೋಡಪ್ಪ ಕುಂಡಾಲೇಂದ್ರ’ ಅವರು ಇತ್ತೀಚೆಗೆ ಒಂದು ವಿಶೇಷ ಉದ್ಘಾಟನೆಯಿಂದಾಗಿ ಮತ್ತೆ ಸುದ್ದಿಯಾಗಿದ್ದಾರೆ. ಉತ್ತರಪ್ರದೇಶದಲ್ಲಿ ಮಾಯಾವತಿ ಮತ್ತು ಅಖಿಲೇಶ್ ಯಾದವ್ ಇವರುಗಳು ಕಳೆದ ತಮ್ಮ ಅಧಿಕಾರಾವಧಿಯಲ್ಲಿ ದೆಹಲಿಗೆ ಹೊಂದಿಕೊಂಡಂತೆ ನೂರಾರು ಕಿಲೋಮೀಟರ್‍ಗಳ ಎಕ್ಸ್‍ಪ್ರೆಸ್ ಹೈವೇ ನಿರ್ಮಿಸಿದ್ದರು. ಅದನ್ನು ತಮ್ಮ ವೈಯಕ್ತಿಕ ಪ್ರಚಾರಕ್ಕೆ ಬಳಸಿಕೊಳ್ಳುವ ಪ್ರತಿಭೆಯ ಕೊರತೆಯಿಂದಾಗಿ ಹಾಲಿ ವಿಫಲ ರಾಜಕಾರಣಿಗಳಾಗಿದ್ದಾರೆ. ಆದರೆ ಪಕೋಡೇಂದ್ರನ ಬಹುಮುಖ ಪ್ರತಿಭೆಗೆ ಮತ್ತೊಂದು ತಾಜಾ ನಿದರ್ಶನ ಇದೀ ವರದಿಯಾಗಿದೆ.. ದೆಹಲಿಯಿಂದ ಮೀರತ್ ನಡುವೆ ಜುಜುಬಿ 9 ಕಿಲೋಮೀಟರ್ ಎಕ್ಸ್‍ಪ್ರೆಸ್ ಹೈವೇಯನ್ನು ನಿರ್ಮಿಸಿ ‘ನಾನೇ ಮಾಡಿದ್ದು, ನಾನೇ ನಾನೇ..’ ಎಂದು ಕೂಗಾಡಿ ಕಿರುಚಾಡಿ ಫೋಟೋ ತಗೆಸಿ ಪ್ರಚಾರ ಮಾಡಿ ಕೊಂಡಿದ್ದಾರೆ. ಇಂಥದೊಂದು ಚಿಲ್ಲರೆ ಸುದ್ದಿಗಾಗಿಯೇ ಕಾದು ಕುಳಿತಿದ್ದ ಮೀಡಿಯಾಗಳು ಮಂತ್ರಕ್ಕಿಂತ ಉಗುಳನ್ನೇ ಹೆಚ್ಚಾಗಿ ಖರ್ಚುಮಾಡಿ ತಮ್ಮ ಖಾಲಿತಲೆಯನ್ನು ಪ್ರದರ್ಶನಕ್ಕಿಟ್ಟಿರುವುದು ವರದಿಯಾಗಿದೆ. ಈ ಸುದ್ದಿಯಿಂದ ಉತ್ತೇಜಿತನಾದ ಜಡೇಮಾಯಸಂದ್ರದ ಹಾಸ್ಯನಟ ಗಜ್ಜೇಶ್ ಅವರು, ತಮ್ಮ ‘ಮನೆಯ ಶೌಚಾಲಯಕ್ಕೆ ಹಾಕಿಸಿರೋ ಹೊಸ ಟೈಲ್ಸ್‍ಗಳು ಮತ್ತು ತಮ್ಮೂರಿನಲ್ಲಿ ಹೊಸದಾಗಿ ಹಾಕಿರುವ ರಸ್ತೆಉಬ್ಬುಗಳನ್ನು ಉದ್ಘಾಟಿಸಲು ಕ್ಯಾಮೆರಾ ಸಮೇತ ತಾವು ಬರಲೇಬೇಕೆಂದು’ ಪ್ರದಾನಮಂತ್ರಿ ‘ಪಕೋಡೇಂದ್ರ’ ಅವರನ್ನು ಬೇಡಿಕೊಂಡಿದ್ದಾರೆಂದು ವರದಿಯಾಗಿದೆ.

* * * *

ದೇಶದ ಬ್ಯಾಂಕ್‍ಗಳಲ್ಲಿ ಬೇಕಾಬಿಟ್ಟಿ ಸಾಲ ಮಾಡಿ ದೇಶ ಬಿಟ್ಟು ಓಡಿಹೋಗಲು ಸನ್ಮಾನ್ಯ ‘ಕುಂಡಾಲೇಂದ್ರ’ ಅವರು ಶುರು ಮಾಡಿರುವ ‘ಕುಣ್ಕೊಂಡ್ ಬನ್ನಿ ದೋಚ್ಕೊಂಡ್ ಓಡಿ’ ಯೋಜನೆಯಡಿಯಲ್ಲಿ ಇಲ್ಲಿಯವರೆಗೆ 33 ಮಂದಿ ಕಾರ್ಪೊರೇಟ್ ಕಳ್ಳರು ತಾವು ಸಾಲ ಪಡೆದ ಬ್ಯಾಂಕುಗಳ ತಲೆಯನ್ನು ನುಣ್ಣಗೆ ಬೋಳಿಸಿ ದೇಶ ಬಿಟ್ಟು ಓಡಿ ಹೋಗಿರುವುದು ಹಳೆಯ ವಿಷಯ. ಈಗ ಈ ಯೋಜನೆಯಡಿಯಲ್ಲಿ ದೇಶಬಿಟ್ಟ ಮೊದಲಿಗರಾದ ಮಲ್ಯಪ್ಪನವರನ್ನು ಲಂಡನ್‍ನಿಂದ ವಾಪಸ್ಸು ಕಳಿಸಲು ಕುಂಡಾಲೇಂದ್ರ ಬ್ರಿಟನ್ ಸರ್ಕಾರವನ್ನು ಅಂಗಲಾಚಿ ಕೇಳಿಕೊಂಡಿದ್ದರು. ಇದಕ್ಕೆ ಮಲ್ಯಪ್ಪನವರು “ಇಂಡಿಯಾ ದೇಸುದ ಜೈಲ್‍ಗುಳಲ್ಲಿ ಸೊಳ್ಳೆಕಾಟ ಜ್ಯಾಸ್ತಿ, ನಿಂಬೆ ಶರ್ಬತ್ತಿನಷ್ಟು ಗಟ್ಟಿ ಸಾಂಬಾರ್ ಮಾಡ್ತಾರೆ, ಆಲೂಗಡ್ಡೆ ಪಲ್ಯುದ ಬದ್ಲು ಬೂಸ್ಟು ಹಿಡಿದ ಹಪ್ಪಳ ಕೊಡ್ತಾರೆ. ನಾನು ಇಂಥಾ ಇಂಡಿಯಾ ಜೈಲ್‍ಗುಳಿಗೆ ಹ್ವೋಗಲ್ಲ, ಮೊದ್ಲು ಆ ದೇಸುದ ಜೈಲುಗಳಲ್ಲಿ ಸಿಮ್ಮಿಂಗ್ ಫೂಲ್ ಕಟ್ಟುಸಿ, ತ್ರಿಬಲ್ ಬೆಡ್ರೂಂ ಜೈಲುಕ್ವಾಣೆಯೊಳಗೆ ನನ್ನ ಹೊಸ ಹೆಂಡ್ತಿ ಜ್ವತೆ ಶೋಭನ ಮಾಡ್ಕ್ಯನಕ್ಕೆ ಕುರ್ಲಾನ್ ಹಾಸಿಗೆ ವ್ಯವಸ್ಥೆ ಮಾಡಿ ಮುಗಿದ ಮ್ಯಾಲೆ ಬೇಕಾದ್ರೆ ನನ್ನುನ್ನ ಅರೆಸ್ಟು ಮಾಡಿ” ಎಂದು ಉತ್ತರಿಸಿದ್ದಾರಂತೆ. ಈ ಸಂಬಂಧ ಕುರ್ಲಾನ್ ಹಾಸಿಗೆಯ ಮೇಲೆ ಚೆಲ್ಲಲು ಮಲ್ಲಿಗೆಹೂವುಗಳ ಪೂರೈಕೆದಾರರರಿಗೆ ಕುಂಡಾಲೇಂದ್ರ ಟೆಂಡರ್ ಕರೆಯುತ್ತಾರಾ ಎಂದು ಜನರು ಕುಂಡೆ ಬಡಕೊಂಡು ನಗುತ್ತಿದ್ದಾರೆ ಎಂದು ವರದಿಯಾಗಿದೆ.

* * * *

ಇತ್ತೀಚೆಗೆ ವಿವಿಧ ರಾಜ್ಯಗಳಲ್ಲಿ ನಡೆದ ಉಪಚುನಾವಣೆಗಳಲ್ಲಿ ನೂರಾರು ಸಂಖ್ಯೆಯಲ್ಲಿ ಕೆಟ್ಟು ಕುಲಗೆಟ್ಟಿರುವ ಇವಿಎಂಗಳನ್ನು ಬಳಸಲಾಗಿದೆಯೆಂದು ಚುನಾವಣಾ ಅಭ್ಯರ್ಥಿಗಳು ಎಲೆಕ್ಷನ್ ಕಮಿಷನ್ನಿಗೆ ದೂರು ಕೊಟ್ಟಿದ್ದಾರೆ. ಈ ಸಂಬಂಧ ಉತ್ತರಿಸಿರುವ ಚುನಾವಣಾ ಆಯೋಗವು `ಆ ಸ್ಥಳಗಳಲ್ಲಿ ಟೆಂಪ್ರೇಚರ್ರು ಶ್ಯಾನೆ ಹೆಚ್ಚಾಗಿಹ್ವೋಗಿ ನಂ ಇವಿಎಂ ಮೆಷೀನುಗಳ ತಲೆಕೆಟ್ಟು, ಇದ್ದುಕ್ಕಿದ್ದಂತೆ ಹುಚ್ಚ್‍ನಾಯಿ ಕಚ್ಚುದಂಗೆ ಬಿಜೆಪಿಗೆ ವೋಟು ಹಾಕ್ತಾ ಕುಂತವೆ‘ ಎಂದೂ ವಿವರಣೆ ಕೊಟ್ಟಿದೆ. ವಾತಾವರಣದ ಉಷ್ಣಾಂಶ ಹೆಚ್ಚಾಗಿ ಮೊಬೈಲ್‍ಗಳು ಕೆಟ್ಟಿಲ್ಲ, ಕಂಪ್ಯೂಟರ್‍ಗಳು ಕೆಟ್ಟಿಲ್ಲ, ಟಿವಿ, ಮಿಕ್ಸಿ, ಟೇಪ್‍ರೆಕಾರ್ಡರಿನಂಥ ಎಲೆಕ್ಟ್ರಾನಿಕ್ ವಸ್ತುಗಳೂ ಕೆಟ್ಟ ಉದಾಹರಣೆಯಿಲ್ಲ. ಹೀಗಿರುವಾಗ ಇವಿಎಂಗಳು ಮಾತ್ರ ಉಷ್ಣಾಂಶಕ್ಕೆ ಹೆದರಿ ಯಾಕೆ ಉಚ್ಚೆ ಹುಯ್ದುಕೊಳ್ಳುತ್ತಿವೆ ಎಂಬ ಪ್ರಶ್ನೆ ಜನಸಾಮಾನ್ಯರನ್ನು ಕಾಡುತ್ತಿದೆ. ಇವನ್ನು ತಯಾರಿಸಿದ್ದು ಸರ್ಕಾರದ ಎಲೆಕ್ಟ್ರಾನಿಕ್ ಎಂಜಿನಿಯರ್‍ಗಳೋ ಅಥವ ಹಳೇಸೀಸ ಖಾಲಿ ಬಾಟ್ಲು ವ್ಯಾಪಾರಿಗಳೋ ಎಂದು ಜನರು ತಲೆ ಕೆರೆದುಕೊಳ್ಳುತ್ತಿದ್ದಾರೆ.

* * * *

ರೈತರ ಸಾಲ ಮನ್ನಾ ಮಾಡದಿದ್ರೆ ನಾವು ಕರ್ನಾಟಕ ಬಂದ್ ಮಾಡ್ತೀವಿ’ ಅಂತ ತಮ್ಮದೇ ತೊಡೆಯನ್ನು ತಟ್ಟಿಕೊಂಡು ಹೇಳಿದ ಧಡಿಯೂರಪ್ಪನವರು ನಂತರ ಕೈ ಪಕ್ಷವು ಕೋರ್ಟ್‍ಗೆ ಹೋಗಿ ಕೇಸಾಕ್ತೀವಿ ಎಂದು ಹೆದರಿಸಿದ ಮೇಲೆ.. ನಾನಂಗೆ ಹೇಳೇ ಇಲ್ಲ, ಮೋಸ್ಟ್ ಲಿ ನನ್ನ ಆತ್ಮ ದೇಹದಿಂದ ಪುಸುಕ್ ಅಂತ ಹೊರಬಂದು.. ಡೈಲಾಗ್ ಹೊಡೆದು ದಬುಕ್ ಅಂತ ಒಳಕ್ಕೆ ಹೋಗಿರಬೇಕು ಎಂದು ಪ್ಲೇಟ್ ಚೇಂಜ್ ಮಾಡಿಬಿಟ್ಟಿದ್ದರು. ಈ ಅವಾಂತರಗಳನ್ನು ಕಣ್ಣಾರೆ ಕಂಡ ಕರ್ನಾಟಕದ ಜನ ಬಂದನ್ನೇ ಬಂದ್ ಮಾಡಿ ಧಡಿಯೂರಪ್ಪನಿಗೆ ಮಣ್ಣುಮುಕ್ಕಿಸಿದ್ದಾರೆ. ಈ ಸಂದರ್ಭದಲ್ಲಿ ಮೈಸೂರಿನಲ್ಲಿ ವಿಶೇಷ ಚೇತನ ಮಾನಸಿಕ ಅಸ್ವಸ್ಥ ಪ್ರಪಾತ ಸಿಮ್ಮನನ್ನು ಅರೆಸ್ಟ್ ಮಾಡಿರುವ ಪೊಲೀಸರು.. ಸಿಮ್ಮನ ಎರಡೂ ಕಾಲುಗಳಿಗೆ ಹಗ್ಗ ಕಟ್ಟಿ, ಬಾಯಿಗೆ ಗೋಣಿಚೀಲ ತುರುಕಿ, ಎರಡೂ ಕಣ್ಣಿಗೆ ಪತಂಜಲಿ ಖಾರದಪುಡಿ ಎರಚಿ, ಫ್ಯಾನಿಗೆ ನೇತುಹಾಕಿ ನಾಯಿಗೆ ಹೊಡೆದಂತೆ ಇನ್ನೂ ಹೊಡೆದಿಲ್ಲವೆಂದು ವರದಿಯಾಗಿದೆ.

* * * *

ನಮ್ಮ ಪ್ರದ್ರಾನಮಂತ್ರಿ ಕುಂಡಾಲೇಂದ್ರ ವಿಶ್ವಬ್ಯಾಂಕಿನಿಂದ ನಯಾಪೈಸ ಸಾಲ ತೆಗೆದುಕೊಳ್ಳದೆ ಸರ್ಕಾರ ನಡೆಸುತ್ತಿದ್ದಾನೆಂದು ಮೋತಿಭಕ್ತರು ಊರಲ್ಲೆಲ್ಲ ಪುಂಗಿ ಊದುತ್ತಿರುವ ವರದಿಗಳು ವ್ಯಾಪಕವಾಗಿ ಕೇಳಿಬಂದಿವೆ. ಕೈಯಲ್ಲಿ ಪೊರಕೆ ಹಿಡಿದು, ಮುಖಕ್ಕೆ ಮೂರು ಇಂಚು ಮೇಕಪ್ಪು ರುಬ್ಬಿಕೊಂಡು ಟೊಯ್ಯಟೊಯ್ಯ ಎಂದು ಕಸಗುಡಿಸುವ ಡ್ರಾಮಾ ಮಾಡುತ್ತಿದ್ದ ಮೋತಿಜೀ, ಈ ಬಿಕನಾಸಿ ನಾಟಕವನ್ನು ಪತ್ರಿಕೆಗಳಲ್ಲಿ ಪ್ರಚಾರ ಮಾಡಲೂ ಸಹ ವಿಶ್ವಬ್ಯಾಂಕಿನಿಂದ ತಿರುಪೆ ಸಾಲ ತಂದಿದ್ದಾನೆಂದು ವಿಶ್ವಬ್ಯಾಂಕ್ ಮೂಲಗಳು ತಿಳಿಸಿವೆ. ಇಂಥಹ ಹಸಿಸುಳ್ಳುಗಳನ್ನೇ ಹೇಳುತ್ತ ತಿರುಗುತ್ತಿರುವ ಮೋತಿಜಿ ಮತ್ತು ಮೋತಿಭಕ್ತರನ್ನು ಜನರು ಅಟ್ಟಾಡಿಸಿಕೊಂಡು ಬಟ್ಟೆ ಹರಿದುಹೋಗುವಂತೆ ಬಡಿದು ನೆಲಕ್ಕೆ ಹಾಕಿ ತುಳಿಯಲು ಪ್ರಯತ್ನ ನಡೆಸಿರುವ ಘಟನೆ ಇನ್ನೂ ವರದಿಯಾಗಿಲ್ಲ.

* * * *

ಉತ್ತರಪ್ರದೇಶದ ಕಬ್ಬು ಬೆಳೆಯುವ ರೈತರಿಗೆ ಕೊಡಬೇಕಾದ 13 ಸಾವಿರ ಕೋಟಿ ಖರೀದಿ ಹಣವನ್ನು ಕೊಡದೆ ಮುಂಡಾ ಮೋಚಿರುವ ಜೋಗಿ ಪ್ಯಾದೇನಾತನ ಸರ್ಕಾರವು ಈ ಬಗ್ಗೆ ಪ್ರದ್ರಾನಮಂತ್ರಿಗೆ ಹಣಬಿಡುಗಡೆಗೆ ಕೇಳಿದಾಗ.. ಕುಂಡಾಲೇಂದ್ರನು..’ ಏನೂ ಹೆದರಬ್ಯಾಡ.. ಪಾಕಿಸ್ತಾನದಿಂದ ಸಕ್ಕರೆ ತರಿಸಿಕೊಂಡು ಉತ್ತರಪ್ರದೇಶದ ರೈತರ ಕಣ್ಣಿಗೆ ಮಣ್ಣುಸುಣ್ಣ ಎರಡನ್ನೂ ಮಿಕ್ಸ್ ಮಾಡಿ ಎರಚೋಣ’ಎಂದು ಭರವಸೆ ಕೊಟ್ಟಿದ್ದಾನೆ ಎಂದು ದೆಹಲಿಯಿಂದ ವರದಿ ಬಂದಿದೆ. ಅದರಂತೆ ಪಾಕಿಸ್ತಾನದಿಂದ 2 ಲಕ್ಷ ಟನ್ ಸಕ್ಕರೆ ಆಮದು ಮಾಡಿಕೊಂಡು ಉತ್ತರಪ್ರದೇಶದ ಕಬ್ಬುಬೆಳೆಗಾರರಿಗೆ ಈ ಅಲ್ಲಣ್ಣ-ಮಲ್ಲಣ್ಣ ಅಲಕ್ ಬುಲಕ್ ಜೋಡಿಯು ನಾಮ ಎಳೆದಿದೆ ಎಂದು ತಿಳಿದುಬಂದಿದೆ.
ಇಲ್ಲಿಗೆ ಆಘಾತವಾಣಿ ವಾರ್ತೆಗಳು ಮುಕ್ತಾಯವಾಯಿತು. ಮತ್ತೆ ಸಿಗೋಣ. ಬೈ ಟೇಕ್ ಕೇರ್..

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...

ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು ಬಿಸಿಯೂಟ ಯೋಜನೆಯಿಂದ ಹೊರಕ್ಕೆ : ಸಂಸತ್ತಿಗೆ ತಿಳಿಸಿದ ಕೇಂದ್ರ

ಕಳೆದ ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು 'ಪ್ರಧಾನಮಂತ್ರಿ ಪೋಷಣ್ ಯೋಜನೆ'ಯಿಂದ (ಮಧ್ಯಾಹ್ನದ ಬಿಸಿಯೂಟ) ಹೊರ ಬಿದ್ದಿವೆ. 2020-21ರಲ್ಲಿ 11.19 ಲಕ್ಷ ಇದ್ದ ಶಾಲೆಗಳ ಸಂಖ್ಯೆ 2024-25ರಲ್ಲಿ 10.35ಕ್ಕೆ ಕುಸಿದಿದೆ ಎಂದು...

ಭೀಮಾ ಕೋರೆಗಾಂವ್ ಪ್ರಕರಣ: ಗೌತಮ್ ನವಲಖಾಗೆ ಜಾಮೀನಿನ ಮೇಲೆ ದೆಹಲಿಗೆ ತೆರಳಲು ಅನುಮತಿ ನೀಡಿದ ಬಾಂಬೆ ಹೈಕೋರ್ಟ್

ಭೀಮಾ ಕೋರೆಗಾಂವ್ ಯುಎಪಿಎ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಮಾನವ ಹಕ್ಕುಗಳ ಕಾರ್ಯಕರ್ತ ಗೌತಮ್ ನವಲಖಾ ಅವರಿಗೆ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ನವದೆಹಲಿಯಲ್ಲಿ ವಾಸಿಸಲು ಬಾಂಬೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ. ಆದಾಗಲೂ, ಮಾನವ...

ಕಾರವಾರ ನೌಕಾ ಪ್ರದೇಶದ ಸುತ್ತಮುತ್ತ ಆತಂಕ ಮೂಡಿಸಿದ ‘ಸೀಗಲ್‌’ ಪಕ್ಷಿ; ಚೀನಾ ನಿರ್ಮಿತ ಜಿಪಿಎಸ್ ಸಾಧನ ಪತ್ತೆ

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕರಾವಳಿ ಪ್ರದೇಶದ ಬಳಿ, ಸೂಕ್ಷ್ಮ ನೌಕಾ ವಲಯದ ಬಳಿ ಚೀನಾ ನಿರ್ಮಿತ ಜಿಪಿಎಸ್ ಟ್ರ್ಯಾಕಿಂಗ್ ಸಾಧನವೊಂದು 'ಸೀಗಲ್' (ಸಮುದ್ರಹಕ್ಕಿ) ಪಕ್ಷಿಗೆ ಅಳವಡಿಸಿರುವುದು ಕಂಡುಬಂದ ನಂತರ ಭದ್ರತಾ ಸಂಸ್ಥೆಗಳು...

ಅಣು ಶಕ್ತಿಯ ಖಾಸಗೀಕರಣ : ‘ಶಾಂತಿ’ ಮಸೂದೆಗೆ ಲೋಕಸಭೆ ಅಸ್ತು

ಭಾರತದ ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ವಲಯದ ಪ್ರವೇಶಕ್ಕೆ ದಾರಿ ಮಾಡಿಕೊಡುವ, 'ಭಾರತದ ಪ್ರಗತಿಗಾಗಿ ಅಣು ಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ) ಮಸೂದೆಯನ್ನು ಲೋಕಸಭೆ ಬುಧವಾರ (ಡಿ.17) ಅಂಗೀಕರಿಸಿತು. ವಿಪಕ್ಷಗಳ ಸದಸ್ಯರು...

ಮಾದಕ ದ್ರವ್ಯ ಸೇವನೆ, ಲೈಂಗಿಕ ಕಿರುಕುಳಕ್ಕೆ 3 ಲಕ್ಷ ರೂ. ದಂಡ ವಸೂಲಿ: ಬೆಂಗಳೂರಿನ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ​​ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಪಶ್ಚಿಮ ಬೆಂಗಳೂರಿನ ದೊಡ್ಡಬೆಲೆ ಬಳಿಯ ವಸತಿ ಸಂಕೀರ್ಣವೊಂದರ ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ವಿರುದ್ಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ನಿವಾಸಿಗಳಿಂದ ದಂಡ ವಸೂಲಿ ಮಾಡಿದ ಮತ್ತು ಅಪರಾಧಗಳನ್ನು ಮುಚ್ಚಿಟ್ಟ ಆರೋಪದ ಮೇಲೆ ಕುಂಬಳಗೋಡು...

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...