Homeಅಂಕಣಗಳುಕನ್ನಡ ಸಾಹಿತ್ಯ ಪರಿಷತ್ ನಲ್ಲೊಬ್ಬ ಚೌಕಿದಾರ

ಕನ್ನಡ ಸಾಹಿತ್ಯ ಪರಿಷತ್ ನಲ್ಲೊಬ್ಬ ಚೌಕಿದಾರ

- Advertisement -
- Advertisement -

| ಹನುಮಂತ ಹಾಲಿಗೇರಿ |

ಕೊಳ್ಳೆಹೊಡೆಯುವವರ ಕೈಗೆ ದೇಶವನ್ನು ಕೊಟ್ಟುಬಿಟ್ಟು ನಾನು ದೇಶ ಕಾಯುವ ಚೌಕಿದಾರ ಅಂತ ಹೇಳ್ಕೊಂಡವನ ಟ್ರೋಲ್‍ಗಳನ್ನು ನಾವು ಕಳೆದ ಒಂದು ವಾರದಿಂದ ಗಮನಿಸುತ್ತಿದ್ದೇವೆ. ಅಂಥವನೇ ಇನ್ನೊಬ್ಬ ಚೌಕಿದಾರರಾದ ಮನು ಬಳಿಗಾರ್ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷಗಿರಿ ಖುರ್ಚಿಯಲ್ಲಿ ಕುಳಿತಿದ್ದಾರೆ. ಬಳಿಗಾರರು ಅಧ್ಯಕ್ಷರಾದ ಮೇಲೆ ಅವರ ಸರ್ವಾಧಿಕಾರದ ಸ್ವಯಂಕೃತ ತಪ್ಪುಗಳು ಒಂದೆರಡಲ್ಲ. ಈಗ ಸೂಕ್ಷ್ಮ ಸಂವೇದನೆಯ ಕವಯತ್ರಿ ರೂಪಾ ಹಾಸನ ಅವರು ಪರಿಷತ್ತಿನ ಅಜೀವ ಸದಸ್ಯತ್ವಕ್ಕೆ ನೀಡಿರುವ ರಾಜಿನಾಮೆ ಪಡೆದುಕೊಂಡು ಮತ್ತೊಮ್ಮೆ ಕನ್ನಡ ಸಾಂಸ್ಕೃತಿಕ ಜೀವಿಗಳಿಂದ ಗೇಲಿಗೊಳಗಾಗಿದ್ದಾರೆ.

ರೂಪಾ ಅವರು ರಾಜಿನಾಮೆ ನೀಡಿದರೆ ನಾನೇನು ಮಾಡಲಿ ಎಂದು ಅವರ ಆಪ್ತರ ಹತ್ತಿರ ಸಮರ್ಥಿಸಿಕೊಳ್ಳುತ್ತಿದ್ದಾರಂತೆ. `ಅವರೇನೋ ರಾಜಿನಾಮೆ ನೀಡಿದರು. ನೀವು ಕನ್ನಡ ಸಾಹಿತ್ಯ ಪರಿಷತ್ತಿಗೆ ಅಧ್ಯಕ್ಷ, ಯಾವುದನ್ನು ಸ್ವೀಕರಿಸಬೇಕು. ಯಾವುದನ್ನು ಸ್ವೀಕರಿಸಿಬಾರದು ಎಂಬ ಕಾಮನ್ ಸೆನ್ಸ್ ನಿನಗೆ ಇರಬೇಕಲ್ಲವೇ?’ ಎಂದು ಬಳಿಗಾರರ ಆಪ್ತರೇ ಹಿಂದೆಮುಂದೆ ಆಡಿಕೊಳ್ಳುತ್ತಿದ್ದಾರೆ.

ಅಷ್ಟಕ್ಕೂ ರೂಪಾ ಅವರೇನು ತಮ್ಮ ಸ್ವಾರ್ಥ ಸಾಧನೆಗಾಗಿ ರಾಜೀನಾಮೆ ನೀಡಿದವರಲ್ಲ. ಅವರ ರಾಜೀನಾಮೆಯ ಹಿಂದೆ ಕನ್ನಡ ಶಾಲೆಗಳ ಏಳ್ಗೆಯ ಕುರಿತು ಸರ್ಕಾರ ಮತ್ತು ಸಾಹಿತ್ಯ ಪರಿಷತ್ತುಗಳ ನಿರ್ಲಕ್ಷ್ಯದ ವಿರುದ್ಧದ ಪ್ರತಿರೋಧದ ದನಿ ಇತ್ತು. ಮನೆಯ ಯಜಮಾನ ದಾರಿ ತಪ್ಪಿದಾಗ ಅವನ ತಪ್ಪನ್ನು ಸರಿಪಡಿಸಿ ಸರಿ ದಾರಿಗೆ ತರುವ ಉದ್ದೇಶದಿಂದ ಕನ್ನಡ ಮನೆಯ ಹಿರಿಮಗಳಾಗಿ ರೂಪಾ ಅವರು ಈ ಪತ್ರವನ್ನು ಬರೆದಿದ್ದರೇನೋ, ರಾಜಿನಾಮೆಯನ್ನು ನೀಡಲೇಬೇಕೆಂಬ ಹಟವೇನು ಅವರಲ್ಲಿ ಇದ್ದಂತಿರಲಿಲ್ಲ. ಆದರೆ, ಬಳಿಗಾರರು ರೂಪಾ ಅವರ ಎತ್ತಿರುವ ಮುಖ್ಯ ಪ್ರಶ್ನೆಗಳಾವುದರ ಬಗ್ಗೆಯೂ ಕಿಂಚಿತ್ ಗಮನ ನೀಡದೇ ಆಯ್ತು ಬೀಡಮ್ಮ ಎನ್ನುವ ದುರಹಂಕಾರಿಯಂತೆ ರಾಜೀನಾಮೆ ಪತ್ರಕ್ಕೆ ಅಂಗೀಕಾರದ ಮುದ್ರೆ ಒತ್ತಿ ತಮ್ಮ ಉದ್ದಟತನ ಮೆರೆದಿದ್ದಾರೆ.

ರೂಪಾ ಹಾಸನ ಅವರು ಕಸಾಪದ ದುಂದುವೆಚ್ಚವನ್ನು ಮತ್ತು ಕನ್ನಡಪರ ನಿಷ್ಕಾಳಜಿಯನ್ನು ಪ್ರಶ್ನಿಸುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ಚಂಪಾ ಅವರು ಅಧ್ಯಕ್ಷರಾಗಿದ್ದಾಗಲೂ ಹೀಗೆಯೇ ಅಜೀವ ಸದಸ್ಯತ್ವಕ್ಕೆ ರಾಜೀನಾಮೆ ಪತ್ರವನ್ನು ಕಳಿಸಿದ್ದರು. ಆದರೆ, ಒಬ್ಬ ಹಿರಿಯ ಜೀವಪರ ಕಾಳಜಿಯ ಸಾಹಿತಿಯೂ ಆಗಿರುವ ಚಂಪಾ ಅವರು ರೂಪಾ ಅವರನ್ನು ಕರೆಸಿಕೊಂಡು “ನಿನ್ನ ಅಜೀವ ಸದಸ್ಯತ್ವದ ರಾಜೀನಾಮೆಯನ್ನು ಸ್ವೀಕರಿಸಲು ನಾನೇನು ಅಜೀವ ಅಧ್ಯಕ್ಷನೇ. ಇನ್ನೆರಡು ವರ್ಷ ಅಷ್ಟೆ ನನ್ನ ಆಟ. ನಾನೆ ಅಜೀವ ಅಧ್ಯಕ್ಷನಲ್ಲವೆಂದ ಮೇಲೆ ನಾನ್ಹೇಗೆ ನಿನ್ನ ರಾಜೀನಾಮೆ ತೆಗೆದುಕೊಳ್ಳಲಿಕ್ಕಾಗುತ್ತೆ, ಆಗೂದಿಲ್ಲ. ಆದ್ರೆ ನೀನು ಎತ್ತಿರುವ ಪ್ರಶ್ನೆಗಳೆಲ್ಲವೂ ಮೌಲಿಕವಾದವು. ಕನ್ನಡ ಶಾಲೆಗಳ ಮುಚ್ಚುತ್ತಿರುವುದನ್ನು ನಾನು ವಿರೋಧಿಸುತ್ತೇನೆ. ಸರಕಾರದೊಂದಿಗೆ ಈ ಬಗ್ಗೆ ಮಾತನಾಡುತ್ತೇನೆ” ಎಂದು ಸಮಾಧಾನ ಮಾಡಿ ಕಳಿಸಿದ್ದರಂತೆ. ಆದರೆ, ಬಳಿಗಾರರು ಮಾತ್ರ ರೂಪಾ ಅವರ ಯಾವ ಪ್ರಶ್ನೆಗಳಿಗೂ ತಲೆ ಕೆಡಿಸಿಕೊಳ್ಳದೆ ರಾಜೀನಾಮೆಯನ್ನು ಸ್ವೀಕರಿಸುವ ಮೂಲಕ ಕಸಾಪದ ಅಜೀವ ಅಧ್ಯಕ್ಷರಾದವರಂತೆ ವರ್ತಿಸಿದ್ದಾರೆ. ಅವರ ಅಧಿಕಾರ ದಾಹದ ಬಗ್ಗೆ ಗೊತ್ತಿರದ್ದೇನಿಲ್ಲ. ಮೂರು ವರ್ಷದ ಅವಧಿಯನ್ನು ಬೈಲಾ ತಿದ್ದುಪಡಿ ಮಾಡಿಸಿಕೊಂಡು ಐದು ವರ್ಷಕ್ಕೆ ಏರಿಸಿಕೊಂಡಿರುವ ಅವರು ಅಜೀವ ಅಧ್ಯಕ್ಷಗಿರಿಗೂ ಏನಾದ್ರೂ ಹುನ್ನಾರ ಮಾಡಿದ್ರೂ ಮಾಡುವವರೇ ಎಂದು ಅವರ ಪಟಾಲಮ್ಮಿನ ಬಳಗದವರೇ ಮಾತಾಡಿಕೊಳ್ಳುತ್ತಿದ್ದಾರೆ.

ಮನು ಬಳಿಗಾರರ ಸರ್ವಾಧಿಕಾರಿ ಉದ್ದಟತನಗಳು ಒಂದೆರಡಲ್ಲ ಮತ್ತು ಇದೇ ಮೊದಲಲ್ಲ. ಈ ಹಿಂದೆ ಹಿರಿಯರಾದ ಎಂ.ಎಂ.ಕಲ್ಬುರ್ಗಿಯವರು ಹತ್ಯೆಯಾದಾಗ, ಆ ಹತ್ಯೆಯನ್ನು ವಿರೋಧಿಸಿ ಯುವ ಬರಹಗಾರರು ಕಸಾಪದ ಅರಳು ಪ್ರಶಸ್ತಿಯನ್ನು ವಾಪಸ್ ಮಾಡಿ ಪ್ರತಿಭಟನೆ ಮಾಡಿದ್ದರು. ಆಗ ಇದೇ ಬಳಿಗಾರರು “ಈ ಹುಡುಗರು ಪ್ರಚಾರಕ್ಕಾಗಿ ಇಂಥ ಅಗ್ಗದ ಗಿಮಿಕ್ ಮಾಡುತ್ತಿದ್ದಾರೆ” ಎಂದು ಲೂಜುಲೂಜಾಗಿ ಮಾತನಾಡುವ ಮೂಲಕ ತಮ್ಮ ಮರ್ಯಾದೆ ಕಳೆದುಕೊಂಡಿದ್ದರು. ತಮ್ಮ ಅಧಿಕಾರದ ಅವಧಿ ಮುಗಿಯಲು ಬಂದಾಗ ಕಸಾಪದ ಬೈಲಾವನ್ನೇ ಬದಲಾಯಿಸಿ ಮೂರು ವರ್ಷದ ಅವಧಿಯನ್ನು ಐದು ವರ್ಷಕ್ಕೆ ಏರಿಸಿಕೊಂಡರು. ಬೈಲಾ ಬದಲಾಯಿಸಿ ಐದು ವರ್ಷ ಮಾಡಿದ್ದು ಕಾನೂನು ಪ್ರಕಾರ ತಪ್ಪೇನೂ ಅಲ್ಲ, ಆದರೆ, ನಿಮಗೆ ಆತ್ಮಸಾಕ್ಷಿ ಅನ್ನೋದಿದ್ರೆ ಈಗ ಖುರ್ಚಿಯಿಂದ ಕೆಳಗಿಳಿಯಿರಿ. ಮುಂದಿನ ಅಧಿಕಾರಾವಧಿಯ ಅಧ್ಯಕ್ಷರು ಬೇಕಾದರೆ ಐದು ವರ್ಷ ಖುರ್ಚಿಯಲ್ಲಿರಲಿ ಎಂಬ ಪ್ರಜ್ಞಾವಂತರ ಕೂಗಿಗೆ ಬಳಿಗಾರರು ಕಿವಿಗೊಡುತ್ತಲೇ ಇಲ್ಲ.

ಇನ್ನು ಇತ್ತೀಚೆಗೆ ಧಾರವಾಡದಲ್ಲಿ ನಡೆದ ಸಾಹಿತ್ಯ ಸಮ್ಮೇಳನದ ಅಧ್ವಾನಗಳಂತೂ ಒಂದೆರಡಲ್ಲ. ಆರಂಭದಲ್ಲೇ ಸುಮಂಗಲಿಯರಿಂದ ಪೂರ್ಣಕುಂಭ ಮೆರವಣಿಗೆ ಎಂಬ ಕಂದಾಚಾರದ ವಿರುದ್ಧ ರಾಜ್ಯಾದ್ಯಂತ ಪ್ರತಿರೋಧ ಬುಗಿಲೆದ್ದರೂ ತಮ್ಮ ನವರಂದ್ರಗಳನ್ನೆಲ್ಲ ಮುಚ್ಚಿಕೊಂಡಿದ್ದ ಈ ಬಳಿಗಾರ ಸಾಹೇಬರು ಕೊನೆ ಕ್ಷಣದಲ್ಲಿ  ತಾವು ಅಂದುಕೊಂಡು ಸುಮಂಗಲಿಯರ ಕುಂಭ ಮೆರವಣಿಗೆಯನ್ನು ನಡೆಸಿ ತಮ್ಮ ಹಟವನ್ನೇ ಸಾಧಿಸಿದರು.

ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಶೀಗ್ಲಿಯವರಾದ ಈ ಬಳಿಗಾರರ ಮೂಲತಃ ಗೌಡ್ಕಿ ಮನೆತನದಿಂದ ಬಂದವರು. ಆ ಜಮೀನ್ದಾರಿಕೆಯ ಪಳಿಯುಳಿಕೆಯೂ ಅವರ ನಡೆನುಡಿಗಳಲ್ಲಿ ಈಗಲೂ ಜೀವಂತವಾಗಿವೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿ ಉನ್ನತ ಅಧಿಕಾರದ ಹುದ್ದೆಗಳನ್ನು ಕೂಡ ಅದೇ ಗೌಡ್ಕಿ ಗತ್ತಿನಲ್ಲಿಯೇ ನಿಭಾಯಿಸಿದ್ದರು. ಕುಂತರೂ, ನಿಂತರೂ ಭಲೆ, ಭಲೆ ಎನ್ನುವ, ಬಹುಫರಾಕ್ ಹೇಳುವ ಬಾಲಬಡುಕರಿಗೆ ಮಾತ್ರ ಬಹುತೇಕ ಅನುದಾನ ಮತ್ತು ಅವಕಾಶಗಳನ್ನು ನೀಡಿದವರು. ಮುಂದೆ ಈ ಬಾಲಬಡುಕರೇ ಇವರನ್ನು ಕಸಾಪ ಚುನಾವಣೆಯಲ್ಲಿ ಗೆಲ್ಲಿಸುವಲ್ಲಿ ನೆರವಾದರು. ಕೆಲವು ಪ್ರಜ್ಞಾವಂತ ಹಿರಿಯರು ಕೂಡ ಬಳಿಗಾರರನ್ನು ಚುನಾವಣೆಯ ಸಂದರ್ಭದಲ್ಲಿ ಬೆಂಬಲಿಸಿದ್ದು ವಿಷಾದನೀಯ. ಯಾಕಾದ್ರೂ ಈ ಪುಣ್ಯಾತ್ಮನನ್ನು ಗೆಲ್ಲಿಸಿದೆವೋ ಎಂದು ಈಗ ಅವರೆಲ್ಲ ಮುಖ ಕಿವುಚಿತ್ತಿದ್ದಾರಂತೆ.

ಒಟ್ನಲ್ಲಿ ಈ ಮನುಷ್ಯ ಮನು`ಸ್ಮತಿ’ ಬಳಿಗಾರ್ ಕಸಾಪವವನ್ನು ವಸಾಹತು ಮಾಡಿಕೊಂಡಿದ್ದು ಮತ್ತೊಮ್ಮೆ ಸಾಬೀತಾಗಿದೆ. ಒಂಚೂರು ಸಾಹಿತ್ಯಿಕ ಸಂವೇದನೆ ಇದ್ದಿದ್ದರೆ, ಒಂದಿಷ್ಟು ಕನ್ನಡ ಪುಸ್ತಕಗಳನ್ನು ಓದಿಕೊಂಡಿದ್ದರೆ, ಬಹುಶಃ ಬಳಿಗಾರರು ಹೀಗೆ ಮಾಡುತ್ತಿರಲಿಲ್ಲವೇನೋ. ಈಗಲೂ ಕಾಲ ಮಿಂಚಿಲ್ಲ. ಸಾಂಸ್ಕೃತಿಕ ವಲಯದ ಪ್ರಜ್ಞಾವಂತರೆಲ್ಲರೂ ಒಟ್ಟಾಗಿ ನೀನು ನಿನ್ನ ದುರಾಡಳಿತವನ್ನು ಬಿಡದಿದ್ದರೆ ನಾವೆಲ್ಲರೂ ಸೇರಿ ಅಜೀವ ಸದಸ್ಯತ್ವಕ್ಕೆ ರಾಜಿನಾಮೆಯನ್ನು ನೀಡಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನು ನೀಡಿ ತಿದ್ದಬೇಕಿದೆ. ಇಲ್ಲದಿದ್ದರೆ ರೂಪಾ ಅವರ ರಾಜೀನಾಮೆ ಅರ್ಥ ಕಳೆದುಕೊಳ್ಳುತ್ತದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಚುನಾವಣಾ ಸಮಯದಲ್ಲಿ ಉಚಿತ ಕೊಡುಗೆಗಳ ಪ್ರವೃತ್ತಿ ಪ್ರಶ್ನಿಸಿದ ಸುಪ್ರೀಂ ಕೋರ್ಟ್

ರಾಜಕೀಯ ಪಕ್ಷಗಳು ಮತ್ತು ರಾಜ್ಯ ಸರ್ಕಾರಗಳು ಚುನಾವಣೆಗೆ ಮುನ್ನ "ಉಚಿತ ಕೊಡುಗೆಗಳ" ಜಾಹೀರಾತು ನೀಡುವ ಅಭ್ಯಾಸ ಹೆಚ್ಚುತ್ತಿರುವ ಬಗ್ಗೆ ಸುಪ್ರೀಂ ಕೋರ್ಟ್ ಗುರುವಾರ ಬಲವಾದ ಮೌಖಿಕ ಅವಲೋಕನಗಳನ್ನು ನೀಡಿದೆ. ವಿದ್ಯುತ್ (ತಿದ್ದುಪಡಿ) ನಿಯಮಗಳು, 2024...

ರಾಹುಲ್ ಗಾಂಧಿಗೆ ಕರ್ಣಿ ಸೇನೆಯಿಂದ ಜೀವ ಬೆದರಿಕೆ: ಬಿಜೆಪಿ-ಆರ್‌ಎಸ್‌ಎಸ್ ಜಾಲವೇ ‘ಗೋಡ್ಸೆ ಕಾರ್ಖಾನೆ’ ಎಂದ ಕಾಂಗ್ರೆಸ್

ನವದೆಹಲಿ: ಲೋಕಸಭಾ ಸ್ಪೀಕರ್ ಓಂ ಬಿರ್ಲಾ ವಿರುದ್ಧ ನಡೆದ ಪ್ರತಿಭಟನೆಗೆ ಸಂಬಂಧಿಸಿದಂತೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ಕರ್ಣಿ ಸೇನೆ ಜೀವ ಬೆದರಿಕೆ ಹಾಕಿದ್ದು, ಇದು "ಏಕಾಂಗಿ ಸ್ಫೋಟವಲ್ಲ"...

ಬಿಹಾರ| ವಿಧಾನಸಭೆಯಲ್ಲಿ ‘ತಂಬಾಕು’ ತಿಂದ ಉಪಮುಖ್ಯಮಂತ್ರಿ ಸಾಮ್ರಾಟ್ ಚೌಧರಿ

ಬಿಹಾರ ವಿಧಾನಸಭೆಯ ಬಜೆಟ್ ಅಧಿವೇಶನದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ಬಳಿಕ ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ವಿಡಿಯೋದಲ್ಲಿ, ಉಪಮುಖ್ಯಮಂತ್ರಿ ಹಾಗೂ ಹಿರಿಯ ಬಿಜೆಪಿ ನಾಯಕ ಸಾಮ್ರಾಟ್ ಚೌಧರಿ ಕಲಾಪದ ಸಮಯದಲ್ಲಿ ವಸ್ತುವೊಂದನ್ನು...

‘ಬೆದರಿಕೆ, ಚಿತ್ರಹಿಂಸೆ, ಅತ್ಯಾಚಾರ ‘: ಇಸ್ರೇಲ್‌ ಜೈಲಿನ ದೌರ್ಜನ್ಯ ಬಿಚ್ಚಿಟ್ಟ ಪ್ಯಾಲೆಸ್ತೀನ್ ಪತ್ರಕರ್ತರು

ಇಸ್ರೇಲ್ ಜೈಲುಗಳಲ್ಲಿ ಬಂಧಿತರಾಗಿರುವ ಪ್ಯಾಲೆಸ್ತೀನ್ ಪತ್ರಕರ್ತರು ತೀವ್ರವಾದ ದೌರ್ಜನ್ಯಗಳನ್ನು ಎದುರಿಸುತ್ತಿದ್ದಾರೆ ಎಂದು ಅಂತಾರಾಷ್ಟ್ರೀಯ ಪತ್ರಕರ್ತರ ರಕ್ಷಣಾ ಸಮಿತಿ (ಸಿಪಿಜೆ) ಹೇಳಿದೆ. ಬಂಧನದಿಂದ ಬಿಡುಗಡೆಯಾಗಿರುವ ಪತ್ರಕರ್ತರನ್ನು ಸಂದರ್ಶಿಸಿರುವ ಸಿಪಿಜೆ, ಜೈಲಿನಲ್ಲಿರುವ ಪತ್ರಕರ್ತರು ನಿರಂತರವಾಗಿ ದೈಹಿಕ...

ಪಾಕಿಸ್ತಾನದ ಕರಾಚಿಯಲ್ಲಿ ಶಂಕಿತ ಅನಿಲ ಸೋರಿಕೆ: ಮಕ್ಕಳು ಸೇರಿದಂತೆ 16 ಮಂದಿ ಸಾವು

ಕರಾಚಿ: ಪಾಕಿಸ್ತಾನದ ಕರಾಚಿಯಲ್ಲಿ ಗುರುವಾರ ಬೆಳಿಗ್ಗೆ ವಸತಿ ಕಟ್ಟಡವೊಂದರಲ್ಲಿ ಶಂಕಿತ ಅನಿಲ ಸೋರಿಕೆಯಿಂದಾಗಿ ಸ್ಫೋಟ ಸಂಭವಿಸಿ, ಮಕ್ಕಳು ಸೇರಿದಂತೆ ಕನಿಷ್ಠ 16 ಜನರು ಸಾವನ್ನಪ್ಪಿದ್ದು, 14 ಜನರು ಗಾಯಗೊಂಡಿದ್ದಾರೆ. "ಓಲ್ಡ್ ಸೋಲ್ಜರ್ ಬಜಾರ್...

ಮಹಾರಾಷ್ಟ್ರ| 10 ದಿನಗಳ ಮಗುವಿನೊಂದಿಗೆ 12 ನೇ ತರಗತಿ ಪರೀಕ್ಷೆ ಬರೆದ ಮಹಿಳೆ

ಮಹಾರಾಷ್ಟ್ರದ ನಾಂದೇಡ್ ನಗರದಲ್ಲಿ 12 ನೇ ತರಗತಿಯ ಮಹಾರಾಷ್ಟ್ರ ಬೋರ್ಡ್ ಪರೀಕ್ಷೆಗೆ ಹಾಜರಾದ ಮಹಿಳೆಯೊಬ್ಬರು ತನ್ನ 10 ದಿನಗಳ ಮಗುವನ್ನು ಪರೀಕ್ಷಾ ಕೇಂದ್ರಕ್ಕೆ ಕರೆತಂದಿದ್ದಾರೆ. ಮಹಿಳೆ ಪರೀಕ್ಷೆ ಬರೆಯುವ ಕಾರಣಕ್ಕೆ ಕೇಂದ್ರದ ವಿಶೇಷ...

ಒಡಿಶಾ| ದಲಿತರು ವಾಸಿಸುವ ಪ್ರದೇಶಕ್ಕೆ ಕುಡಿಯುವ ನೀರು-ವಿದ್ಯುತ್ ಸಂಪರ್ಕ ಕಡಿತ

ಒಡಿಶಾದ ಬಲಂಗೀರ್ ಜಿಲ್ಲೆಯಲ್ಲಿ ಜಾತಿ ಆಧಾರಿತ ತಾರತಮ್ಯವಿದೆ ಎಂದು ಸ್ಥಳೀಯ ನಿವಾಸಿಗಳು ಆರೋಪಿಸಿದ್ದಾರೆ. ಆದರೆ, ಗ್ರಾಮದ ಅಧಿಕಾರಿಯೊಬ್ಬರು ಈ ಅಡಚಣೆಗೆ ಸ್ಥಳೀಯ ಕಲಹ ಕಾರಣ ಎಂದು ಆರೋಪಿಸಿದ್ದಾರೆ. ಜಿಲ್ಲೆಯ ತುರೆಕೆಲಾ ಬ್ಲಾಕ್‌ನ ಡುಮೆರ್ಚುವಾನ್ ಗ್ರಾಮದಲ್ಲಿ...

ತಮಿಳುನಾಡು ವಿಧಾನಸಭಾ ಚುನಾವಣೆ: ಡಿಎಂಕೆ ನೇತೃತ್ವದ ಮೈತ್ರಿಕೂಟಕ್ಕೆ ಡಿಎಂಡಿಕೆ ಸೇರ್ಪಡೆ

ಚೆನ್ನೈ: ದಿವಂಗತ ನಟ ವಿಜಯಕಾಂತ್ ಅವರ ದೇಶೀಯ ಮುರ್ಪೋಕ್ಕು ದ್ರಾವಿಡ ಕಳಗಂ (ಡಿಎಂಡಿಕೆ) ಗುರುವಾರ ದ್ರಾವಿಡ ಮುನ್ನೇತ್ರ ಕಳಗಂ ನೇತೃತ್ವದ ಜಾತ್ಯತೀತ ಪ್ರಗತಿಪರ ಒಕ್ಕೂಟ (ಎಸ್‌ಪಿಎ)ವನ್ನು 21ವರ್ಷಗಳ ಅಸ್ತಿತ್ವದ ನಂತರ ಮೊದಲ ಬಾರಿಗೆ...

ಟ್ರಕ್ ಚಾಲಕ ರಸ್ತೆಯಲ್ಲಿ ನಮಾಝ್ ಮಾಡಿದ್ದರಿಂದ ಟ್ರಾಫಿಕ್ ಜಾಮ್ ಎಂದು ಸುಳ್ಳು ಸುದ್ದಿ ಪ್ರಸಾರ : ಝೀ ನ್ಯೂಸ್‌ಗೆ 1 ಲಕ್ಷ ರೂ. ದಂಡ

ಮುಸ್ಲಿಂ ವ್ಯಕ್ತಿಯೊಬ್ಬರು ನಮಾಝ್ ಮಾಡಲು ಹೆದ್ದಾರಿ ಮಧ್ಯೆ ಟ್ರಕ್‌ ನಿಲ್ಲಿಸಿದ್ದರಿಂದ ಟ್ರಾಫಿಕ್ ಜಾಮ್‌ ಉಂಟಾಗಿದೆ ಎಂದು ಸುಳ್ಳು ಸುದ್ದಿ ಹಬ್ಬಿದ ಝೀ ನ್ಯೂಸ್‌ ಚಾನೆಲ್‌ಗೆ ಸುದ್ದಿ ಪ್ರಸಾರಕರು ಮತ್ತು ಡಿಜಿಟಲ್ ಮಾನದಂಡಗಳ ಪ್ರಾಧಿಕಾರ(ಎನ್‌ಬಿಡಿಎಸ್‌ಎ)...

ಗುಜರಾತ್‌| ಜಾತಿ ಆಧಾರಿತ ಜಗಳದಲ್ಲಿ ದಲಿತ ಯುವಕನ ಮೇಲೆ ಚಾಕುವಿನಿಂದ ದಾಳಿ

ಶನಿವಾರ ತಡರಾತ್ರಿ ರಾಣಿಪ್‌ನಲ್ಲಿ ನಡೆದ ಸಣ್ಣ ಭಿನ್ನಾಭಿಪ್ರಾಯವೊಂದು ಹಿಂಸಾಚಾರಕ್ಕೆ ತಿರುಗಿದ್ದು, 25 ವರ್ಷದ ದಲಿತ ಯುವಕ ಸಾಹಿಲ್ ವಘೇಲಾ ಮೇಲೆ ಚಾಕುವಿನಿಂದ ಹಲ್ಲೆ ನಡೆಸಲಾಗಿದೆ. ಯುವಕ ಗಂಭೀರವಾಗಿ ಗಾಯಗೊಂಡಿದ್ದು, ಘಟನೆಯು ಈ ಪ್ರದೇಶದಲ್ಲಿ...