Homeಕರ್ನಾಟಕಕಾಂಗ್ರೆಸ್‍ಗೆ ಎಚ್ಚರ, ಪಕ್ಷ ಕಟ್ಟುವ ಫಜೀತಿ, ಸರ್ಕಾರದ ಉಳಿವಿಗಷ್ಟೇ ಮೈತ್ರಿ

ಕಾಂಗ್ರೆಸ್‍ಗೆ ಎಚ್ಚರ, ಪಕ್ಷ ಕಟ್ಟುವ ಫಜೀತಿ, ಸರ್ಕಾರದ ಉಳಿವಿಗಷ್ಟೇ ಮೈತ್ರಿ

- Advertisement -
| ಮಲ್ಲನಗೌಡರ್ |
ಮೇಲಿನ ತಲೆಬರಹದಷ್ಟೇ ಸಂಕೀರ್ಣವಾಗಿದೆ ರಾಜ್ಯದ ಸದ್ಯದ ರಾಜಕಾರಣ. ರಾಜ್ಯ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ನಡುವಿನ ಸ್ನೇಹ, ಮುನಿಸು, ಅಧಿಕಾರ ಪಾಲು, ಆಂತರಿಕ ಭಿನ್ನಮತ ಮತ್ತು ಪಕ್ಷಗಳ ಬಲವರ್ಧನೆ, ನಾಯಕರ ವೈಯಕ್ತಿಕ ಆಕಾಂಕ್ಷೆಗಳು- ಇವೆಲ್ಲವೂ ಸದ್ಯ ಮೇಲುನೋಟಕ್ಕೆ ಭಿನ್ನ ಆಯಾಮಗಳಂತೆ ಕಂಡು ಬಂದರೂ, ಇವೆಲ್ಲವೂ ಹಾಸು ಹೊಕ್ಕಾಗಿ ಒಂದರೊಳಗೊಂದು ಹೆಣೆದುಕೊಂಡಿವೆ. ಸದಾ ಅಧಿಕಾರ ಹಿಡಿಯುವ ಕಾರ್ಯಾಚರಣೆಯನ್ನು ಜೀವಂತವೇ ಇಟ್ಟಿರುವ ಬಿಜೆಪಿಗೆ, 25 ಸೀಟುಗಳ ದಿಗ್ವಿಜಯದ ನಂತರ ಹೈಕಮಾಂಡಿನಿಂದ ಬೆಂಬಲವೂ ಸಿಕ್ಕಂತಿದೆ. ಇಡೀ ರಾಜ್ಯದ ಬಹುಭಾಗದಲ್ಲಿ ನೀರಿನ ಕೊರತೆಯಿದೆ, ಮಳೆಯ ವಿಳಂಬದಿಂದಾಗಿ ಜೂನ್ ಮೂರನೇ ವಾರದಲ್ಲೂ ಬಿತ್ತನೆಯಾಗಿಲ್ಲ. ರಾಜಧಾನಿಯಲ್ಲಿ ಮಾತ್ರ ‘ಕುರ್ಚಿಗಾಗಿ ಕಾಳು ಹಾಕುವ’, ಕಾಲೆಳೆಯುವ ರಾಜಕಾರಣ ಎಗ್ಗಿಲ್ಲದೇ ಸಾಗಿದೆ.
ಸದ್ಯಕ್ಕೆ ಮುಖ್ಯ ಬೆಳವಣಿಗೆ ಎನಿಸಿದ್ದು ಎಐಸಿಸಿಯು ರಾಜ್ಯ ಕಾಂಗ್ರೆಸ್ ಪದಾಧಿಕಾರಿಗಳನ್ನು ವಿಸರ್ಜನೆ ಮಾಡಿರುವುದು. ಇದರ ಜೊತೆಗೇ ಮೈತ್ರಿ ಸರ್ಕಾರವನ್ನು ಮುಂದುವರೆಸಿಕೊಂಡು ಹೋಗಲು ಸೂಚಿಸಿರುವುದು. ಕಾಂಗ್ರೆಸ್ ಹೈಕಮಾಂಡಿನ ಈ ನಡೆಯಿಂದ ರಾಜ್ಯ ಕಾಂಗ್ರೆಸ್‍ನಲ್ಲಿ ಸಿದ್ದರಾಮಯ್ಯ ಪ್ರಾಬಲ್ಯ ಇನ್ನಷ್ಟು ಹೆಚ್ಚಿದೆ, ಹೆಚ್ಚಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಸಿದ್ದರಾಮಯ್ಯರ ಮಾತಿಗೆ ತಲೆದೂಗಿರುವ ಹೈಮಾಂಡ್ ಪಕ್ಷ ಕಟ್ಟುವ ಗಟ್ಟಿ ತೀರ್ಮಾನಕ್ಕೆ ಬಂದಿದೆ. ಅಧ್ಯಕ್ಷ ಮತ್ತು ಕಾರ್ಯಾಧ್ಯಕ್ಷರನ್ನು ಬಿಟ್ಟು ಎಲ್ಲ ಹಂತದ ಪದಾಧಿಕಾರಿಗಳಿಗೆ ಗೇಟ್ ತೋರಿಸಲಾಗಿದೆ. ದಶಕಗಳಿಂದ ಪಕ್ಷ ಸಂಘಟನೆ ಮಾಡದೇ ಬರೀ ಅಧಿಕಾರದ ಲಾಭ ಪಡೆಯುತ್ತಲೇ ಬಂದಿದ್ದ ಬಹುಪಾಲು ವಿಸರ್ಜಿತ ಪದಾಧಿಕಾರಿಗಳ ಜಾಗಕ್ಕೆ ನಿಷ್ಟಾವಂತ ಕಾರ್ಯಕರ್ತರನ್ನು ನೇಮಿಸುವ ಕೆಲಸ ನಿರಾಂತಕದ ವಿಷಯ ಅಲ್ಲವೇ ಅಲ್ಲ. ಇತ್ತ ಸಿದ್ದರಾಮಯ್ಯ ಪಕ್ಷ ಸಂಘಟನೆ ಜೊತೆಗೆ ತಮ್ಮ ಶಾಸಕರು ಬಿಜೆಪಿ ಆಮಿಷಕ್ಕೆ ಬೀಳದಂತೆ ತಡೆಯುವ, ಮೂಲ ಕಾಂಗ್ರೆಸ್ ನಾಯಕರ ಭಿನ್ನಮತವನ್ನು ತಡೆಯುವ ಜವಾಬ್ದಾರಿಗಳನ್ನು ತಾವೇ ಹೊತ್ತುಕೊಂಡು ಬಂದಿದ್ದಾರೆ.
ಮೈತ್ರಿಯಿಂದ ಕಾಂಗ್ರೆಸ್‍ಗೆ ನಷ್ಟ
ಇದನ್ನು ಹೈಕಮಾಂಡ್‍ಗೆ ಮನವರಿಕೆ ಮಾಡಿಕೊಳ್ಳುವಲ್ಲಿ ಸಿದ್ದರಾಮಯ್ಯ ಯಶಸ್ವಿಯಾಗಿದ್ದಾರೆ. ಲೋಕಸಭೆಯಲ್ಲಿ ಮೈತ್ರಿ ಕಾರಣದಿಂದಾಗಿಯೇ ಕಾಂಗ್ರೆಸ್‍ಗೆ ದೊಡ್ಡ ಹಿನ್ನಡೆ ಆಗಿದ್ದು ಮತ್ತು ಅದರ ಲಾಭ ಬಿಜೆಪಿಗೆ ಹೋಗಿದ್ದು ಸತ್ಯ. ಹೀಗಾಗಿ ಮೈತ್ರಿ ಸರ್ಕಾರವನ್ನು ಕಾಪಾಡಿಕೊಂಡೇ, ಪಕ್ಷ ಸಂಘಟನೆ ಮಾಡುವತ್ತ ಕಾಂಗ್ರೆಸ್ ಹೆಜ್ಜೆ ಇಟ್ಟಿದೆ. ಆದರೆ, ಬಿಜೆಪಿಯ ಆಪರೇಷನ್ ಕಮಲ ಮುಂದುವರೆದೇ ಇರುವ ಹೊತ್ತಿನಲ್ಲಿ ಕಾಂಗ್ರೆಸ್ ತನ್ನ ಭಿನ್ನಮತೀಯ ಶಾಸಕರನ್ನು ಉಳಿಸಿಕೊಳ್ಳುವ ಕಸರತ್ತನ್ನೂ ಮಾಡಬೇಕಿದೆ. ಸದ್ಯಕ್ಕೆ ದೇವೇಗೌಡ ಮತ್ತು ಕುಮಾರಸ್ವಾಮಿಯವರಿಗೆ ಸರ್ಕಾರ ಬೀಳದೇ ಇದ್ದರೆ ಸಾಕು ಎಂಬ ಗುರಿಯಷ್ಟೇ ಇರುವಂತಿದೆ.
ಬಿಜೆಪಿ ಹೈಕಮ್ಯಾಂಡ್‍ನಿಂದ ಯಡ್ಡಿಗೆ ಗ್ರೀನ್ ಸಿಗ್ನಲ್?
ಲೋಕಸಭಾ ಚುನಾವಣೆಯ ಗೆಲುವು ಸಿಕ್ಕ ತಕ್ಷಣ ಭಾರೀ ಬದಲಾವಣೆ ಆಗಲಿದೆ ಎಂಬ ನಿರೀಕ್ಷೆ ಎಲ್ಲರಲ್ಲೂ ಇತ್ತು. ಅದನ್ನು ಬಿಜೆಪಿ ನಾಯಕರು ಪದೇ ಪದೇ ಹೇಳಿಯೂ ಇದ್ದರು. ಆದರೆ, ಫಲಿತಾಂಶದ ನಂತರ ಅಂಥದ್ದೇನಕ್ಕೂ ಕೈ ಹಾಕಬೇಡಿ ಎಂದು ಹೈಕಮ್ಯಾಂಡ್ ಸೂಚಿಸಿದೆ ಎಂಬ ಮಾತನ್ನು ಸ್ವತಃ ಯಡಿಯೂರಪ್ಪ ಹೇಳಿದರು. ಕಾಂಗ್ರೆಸ್‍ನೊಳಗಿನಿಂದಲೇ ಸರ್ಕಾರ ಬೀಳಿಸುವ ಕೆಲಸ ನಡೆಯುವ ಸಾಧ್ಯತೆ ಇರುವಾಗ, ನಾವೇಕೆ ಕೆಟ್ಟ ಹೆಸರು ತಂದುಕೊಳ್ಳಬೇಕು ಎಂಬುದು ಬಿಜೆಪಿಯ ಇರಾದೆಯಾಗಿತ್ತು. ಆಪರೇಷನ್ ಮಾಡುವುದಕ್ಕಿಂತ ಚುನಾವಣೆಗೇ ಹೋದರೆ ಗೆಲುವು ಬಿಜೆಪಿಯದ್ದೇ ಎನ್ನುವ ಅನಿಸಿಕೆಯೂ ಆ ವಲಯಗಳಲ್ಲಿತ್ತು. ಹಾಗಾಗಿ ಕೆಡವುವುದಕ್ಕಿಂತ, ತಾನೇ ಬಿದ್ದು ಹೋಗಲಿ ಎಂದು ಕಾಯುವುದೇ ಸರಿ ಎಂಬುದು ಬಿಜೆಪಿಯ ನಾಯಕರ ತೀರ್ಮಾನವಾಗಿತ್ತು.
ಆದರೆ, ಅದಾಗಲಿಲ್ಲ. ಯಡಿಯೂರಪ್ಪನವರಿಗೂ ಸುಮ್ಮನೇ ಕೂರಲಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ, ‘ಆಪರೇಷನ್‍ಗೆ ಮುಂದಾಗಿ’ ಎಂಬ ಗ್ರೀನ್ ಸಿಗ್ನಲ್ ಬಂದಿದೆ ಎಂಬ ಸುದ್ದಿಗೆ ವಿಶೇಷ ಮಹತ್ವ ಬಂದಿದೆ. ಮಧ್ಯಂತರ ಚುನಾವಣೆ ಸದ್ಯಕ್ಕಂತೂ ಯಾರಿಗೂ ಬೇಡವಾಗಿದೆ. ಹಾಗಾಗಿ ಆಪರೇಷನ್ ನಡೆಯುವುದೇ ಲೇಸು ಎಂಬ ಪರಿಸ್ಥಿತಿ ಸದ್ಯಕ್ಕಿದೆ.
ಗ್ರಾಮ ವಾಸ್ತವ್ಯ ಜನಪ್ರಿಯತೆ ಮರಳಿ ಪಡೆಯುವುದಕ್ಕೋ, ಜನಪರ ಕೆಲಸ ಮಾಡುವುದಕ್ಕೋ?
ಕುಮಾರಸ್ವಾಮಿಯವರ ಮನೆ ಬಾಗಿಲಿಗೆ ಬರುವ ಜನರನ್ನು ಭೇಟಿ ಮಾಡುತ್ತಿದ್ದಾರಾದರೂ, ಅಧಿಕೃತ ಜನತಾದರ್ಶನವನ್ನು ನಡೆಸುತ್ತಿಲ್ಲ. ಗ್ರಾಮ ವಾಸ್ತವ್ಯವೂ ಇರುವುದಿಲ್ಲ ಎಂದು ಹೇಳಿದ್ದರು. ಆದರೀಗ, ಜನಪ್ರಿಯ ಕಾರ್ಯಕ್ರಮಗಳ ಮೊರೆ ಹೋಗುವುದು ಅನಿವಾರ್ಯವಾಗಿದೆ. ಬರದ ಬಿಸಿ ನಿವಾರಣೆಗೆ ಸರ್ಕಾರ ಪರಿಣಾಮಕಾರಿ ಕೆಲಸ ಮಾಡುವ ತುರ್ತಂತೂ ಈಗಿದೆ. ಆ ಮೂಲಕ ಜನರ ಹತ್ತಿರಕ್ಕೆ ಹೋಗುವ ಅವಕಾಶವೂ ಇದೆ. ಆದರೆ, ಅದನ್ನು ಮಾಡುತ್ತಾರಾ ಅಥವಾ ಪ್ರಚಾರವಷ್ಟೇ ನಡೆಯುತ್ತದಾ ಎಂಬುದನ್ನು ಕಾದು ನೋಡಬೇಕು.
ಸಿದ್ದರಾಮಯ್ಯನವರ ಡಬಲ್ ಕಷ್ಟ
ಮುಖ್ಯಮಂತ್ರಿಯಾಗಿ ಇಳಿದಿರುವ ಸಿದ್ದರಾಮಯ್ಯನವರಿಗೆ ಎರಡರಲ್ಲೊಂದು ಆಗಲೇಬೇಕು. ಒಂದೋ ಅಧಿಕಾರದಲ್ಲಿರಬೇಕು, ಇಲ್ಲವೇ ಜನನಾಯಕನಾಗಿ ಪ್ರತಿಷ್ಠಾಪನೆಯಾಗಬೇಕು. ಕುಮಾರಸ್ವಾಮಿಯವರನ್ನು ಇಳಿಸಿದರೂ, ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯನವರನ್ನು ಜೆಡಿಎಸ್‍ನವರು ಒಪ್ಪುವುದು ಸಾಧ್ಯವೇ ಇಲ್ಲ. ಇನ್ನು ಜನನಾಯಕನಾಗಬೇಕೆಂದರೆ ರಾಜ್ಯ ಪ್ರವಾಸ ಕೈಗೊಂಡು ಪಕ್ಷವನ್ನೂ ಸಂಘಟಿಸಲು ಬೆವರು ಹರಿಸಬೇಕು. ಆದರೆ, ರಾಜ್ಯದೆಲ್ಲೆಡೆ ಹೋದಾಗ, ದೂರದ ದೆಹಲಿ ಸರ್ಕಾರವನ್ನು ಟೀಕಿಸುವುದರಿಂದ ಪ್ರಯೋಜನವಿಲ್ಲ. ರಾಜ್ಯ ಸರ್ಕಾರವನ್ನು ಬಯ್ಯುವುದಿರಲಿ, ಹೊಗಳುತ್ತಾ, ಸಮರ್ಥಿಸುತ್ತಾ ಇರಬೇಕಾಗುತ್ತದೆ. ಹೀಗಾಗಿ ಏನು ಮಾಡುವುದೋ ಗೊತ್ತಾಗದೇ, ರಾಜ್ಯ ಸರ್ಕಾರವನ್ನು ಅಭದ್ರತೆಯಲ್ಲಿಡುತ್ತಲೇ, ತಮ್ಮ ಪ್ರಸ್ತುತತೆ ಉಳಿಸಿಕೊಳ್ಳುವ ಕಸರತ್ತಷ್ಟೇ ಮಾಡುತ್ತಿದ್ದಾರೆ. ಅದರಾಚೆಗೆ, ರಾಜ್ಯದ ಜನರ ಹಿತಾಸಕ್ತಿಯಿಂದ ವರ್ತಿಸುವ ಕಷ್ಟಕರವಾದ ಕೆಲಸ ಅವರಿಂದಾಗುತ್ತಿಲ್ಲ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಇರಾನಿಯನ್ನರು ಸ್ಮಾರ್ಟ್ ಚೆಸ್ ಆಡುತ್ತಿದ್ದು, ಟ್ರಂಪ್ ಭ್ರಮಾಲೋಕದಲ್ಲಿದ್ದಾರೆ..’; ಮಾಜಿ ರಾಜತಾಂತ್ರಿಕ ಅಧಿಕಾರಿ ಕೆ.ಪಿ. ಫ್ಯಾಬಿಯನ್

ಪ್ರಸ್ತುತ ನಡೆಯುತ್ತಿರುವ ಪಶ್ಚಿಮ ಏಷ್ಯಾ ಸಂಘರ್ಷದ ಬಗ್ಗೆ ಮಾತನಾಡಿದ ಭಾರತದ ಮಾಜಿ ರಾಯಭಾರಿ ಕೆ.ಪಿ. ಫ್ಯಾಬಿಯನ್, "ಇರಾನಿಯನ್ನರು ಸ್ಮಾರ್ಟ್ ಚೆಸ್ ಆಟವನ್ನು ಆಡುತ್ತಿದ್ದಾರೆ. ಆದರೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆಗಳು...

‘ನಾನು ಸಂಸತ್ತಿಗೆ ಹೋಗುವುದು ಗದ್ದಲ ಸೃಷ್ಟಿಸಲು ಅಲ್ಲ’ : ಎಎಪಿ ಆರೋಪಗಳನ್ನು ತಳ್ಳಿ ಹಾಕಿದ ರಾಘವ್ ಚಡ್ಡಾ

ತನ್ನ ವಿರುದ್ದ ಆಮ್‌ ಆದ್ಮಿ ಪಕ್ಷ (ಎಎಪಿ) ಮಾಡಿರುವ ಎಲ್ಲಾ ಆರೋಪಗಳನ್ನು ರಾಘವ್ ಚಡ್ಡಾ ಶನಿವಾರ (ಏ.4) ಅಲ್ಲಗಳೆದಿದ್ದು, "ಅವೆಲ್ಲವೂ ಸುಳ್ಳು ಮತ್ತು ಸಂಘಟಿತ ಅಭಿಯಾನದ ಭಾಗ" ಎಂದಿದ್ದಾರೆ. "ಸಂಸತ್ತಿನಲ್ಲಿ ನನ್ನ ಉದ್ದೇಶ...

ಎಡರಂಗದಲ್ಲಿ ಎಡಪಂಥೀಯರೇ ಇಲ್ಲ; ದ್ವೇಷ ಹರಡುವ ಜನರೊಂದಿಗೆ ಪಿಣರಾಯಿ ಪಾಲುದಾರಿಕೆ ಹೊಂದಿದ್ದಾರೆ: ರಾಹುಲ್ ಗಾಂಧಿ

ಕೇರಳ ವಿಧಾನಸಭಾ ಚುನಾವಣೆ ಪ್ರಚಾರವು ಅಂತಿಮ ಹಂತಕ್ಕೆ ತಲುಪುತ್ತಿದ್ದಂತೆ ತೀಕ್ಷ್ಣವಾದ ರಾಜಕೀಯ ದಾಳಿಯನ್ನು ಆರಂಭಿಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, "ಸಿಪಿಐ-ಎಂ ನೇತೃತ್ವದ ಎಡಪಕ್ಷವು ತನ್ನ ಸೈದ್ಧಾಂತಿಕ ತಿರುಳನ್ನು ಕಳೆದುಕೊಳ್ಳುತ್ತಿದೆ" ಎಂದು ಆರೋಪಿಸಿದ್ದಾರೆ. "ಎಲ್‌ಡಿಎಫ್...

ಬಿಜೆಪಿ ಟಿಕೆಟ್ ನಿರಾಕರಿಸಿಲ್ಲ, ನಾನೇ ಸ್ಪರ್ಧಿಸಲ್ಲ ಅಂದಿದ್ದೆ : ಅಣ್ಣಾಮಲೈ

"ವಿಧಾನಸಭಾ ಚುನಾವಣೆಗೆ ಬಿಜೆಪಿ ನನಗೆ ಟಿಕೆಟ್ ನಿರಾಕರಿಸಿಲ್ಲ, ನಾನೇ ಸ್ಪರ್ಧಿಸಲ್ಲ ಎಂದು ಮುಂಚಿತವಾಗಿ ಹೈಕಮಾಂಡ್‌ಗೆ ತಿಳಿಸಿದ್ದೆ" ಎಂದು ತಮಿಳುನಾಡು ಬಿಜೆಪಿಯ ಮಾಜಿ ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ ಹೇಳಿದ್ದಾರೆ. ಚೆನ್ನೈ ವಿಮಾನ ನಿಲ್ದಾಣದಲ್ಲಿ ಶನಿವಾರ...

ಸುರಕ್ಷಿತವಾಗಿ ಹಾರ್ಮುಜ್ ದಾಟಿದ 7ನೇ ಎಲ್‌ಪಿಜಿ ಹಡಗು; ಸರದಿಯಲ್ಲಿ ಕಾಯುತ್ತಿವೆ ಭಾರತದ 17 ಟ್ಯಾಂಕರ್‌ಗಳು

ಭಾರತದ ಧ್ವಜ ಹೊಂದಿದ್ದ ಮತ್ತೊಂದು ದ್ರವೀಕೃತ ಪೆಟ್ರೋಲಿಯಂ ಅನಿಲ (ಎಲ್‌ಪಿಜಿ) ಟ್ಯಾಂಕರ್, ಗ್ರೀನ್ ಸಾನ್ವಿ ಹೆಸರಿನ ಹಡಗು ಹಾರ್ಮುಜ್ ಜಲಸಂಧಿಯ ಪೂರ್ವಕ್ಕೆ ಯಶಸ್ವಿಯಾಗಿ ತಲುಪಿದೆ. ಹಡಗು ಟ್ರ್ಯಾಕಿಂಗ್ ದತ್ತಾಂಶದ ಪ್ರಕಾರ, ನಡೆಯುತ್ತಿರುವ ಪಶ್ಚಿಮ...

ಸಿಬಿಎಸ್‌ಇ ಹಿಂದಿ ಹೇರಿಕೆಯು ತ್ರಿಭಾಷಾ ಸೂತ್ರ ಜಾರಿಯ ‘ರಹಸ್ಯ ಕಾರ್ಯವಿಧಾನ’: ಸ್ಟಾಲಿನ್ ಆರೋಪ

ಸಿಬಿಎಸ್‌ಇ ಇತ್ತೀಚೆಗೆ ಅನಾವರಣಗೊಳಿಸಿದ ಪಠ್ಯಕ್ರಮ ಚೌಕಟ್ಟಿನ ಕುರಿತು ಮಾತನಾಡಿದ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್, "ಮೂರು ಭಾಷಾ ಸೂತ್ರ ಎಂದು ಕರೆಯಲ್ಪಡುವುದು ವಾಸ್ತವದಲ್ಲಿ ಹಿಂದಿ ಮಾತನಾಡದ ಪ್ರದೇಶಗಳಿಗೆ ಹಿಂದಿ ವಿಸ್ತರಿಸುವ ರಹಸ್ಯ ಕಾರ್ಯವಿಧಾನವಾಗಿದೆ"...

‘ತಿಂದ ಮನೆಗೆ ಕನ್ನ ಹಾಕುವುದು ತರವಲ್ಲ, ನಿಮ್ಮ ಅಧಿಕ ಪ್ರಸಂಗ ಕರ್ನಾಟಕದ ಜನತೆ ಒಪ್ಪುವುದಿಲ್ಲ’ : ರಾಜ್ಯಪಾಲರ ವಿರುದ್ಧ ಕರವೇ ಕಿಡಿ

ರಾಜ್ಯದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳಲ್ಲಿ ತೃತೀಯ ಭಾಷೆಗೆ ಗ್ರೇಡಿಂಗ್ ನೀಡುವ ಸರ್ಕಾರದ ನಿರ್ಧಾರವನ್ನು ಮರುಪರಿಶೀಲಿಸುವಂತೆ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿರುವ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ರಾಜ್ಯಾಧ್ಯಕ್ಷ...

‘ತಪ್ಪಾಗಿದೆ’ : ಕೇಂದ್ರ ಸರ್ಕಾರದ ಟ್ರಾನ್ಸ್‌ಜೆಂಡರ್‌ ವಿಧೇಯಕದ ಕುರಿತ ಟೀಕೆಗಳನ್ನು ಕೈಬಿಟ್ಟ ರಾಜಸ್ಥಾನ ಹೈಕೋರ್ಟ್

ಟ್ರಾನ್ಸ್‌ಜೆಂಡರ್ ಕಾಯ್ದೆ, 2019ರಲ್ಲಿ ಬದಲಾವಣೆಗಳನ್ನು ತರಲಿರುವ ಕೇಂದ್ರ ಸರ್ಕಾರದ ಟ್ರಾನ್ಸ್‌ಜೆಂಡರ್ ವ್ಯಕ್ತಿಗಳ (ಹಕ್ಕುಗಳ ರಕ್ಷಣೆ) ತಿದ್ದುಪಡಿ ವಿಧೇಯ, 2026ರ ಕುರಿತು ಈ ಹಿಂದೆ ಮಾಡಿದ್ದ ವಿಮರ್ಶಾತ್ಮಕ ಟಿಪ್ಪಣಿಗಳನ್ನು ರಾಜಸ್ಥಾನ ಹೈಕೋರ್ಟ್ ತೆಗೆದುಹಾಕಿದೆ ಎಂದು...

ಯುಸಿಸಿ ಜಾರಿ ನಂತರ ‘ಜನಸಂಖ್ಯಾ ನಿಯಂತ್ರಣ’ ಕಾನೂನಿಗೆ ಮುಂದಾದ ಉತ್ತರಾಖಂಡ ಬಿಜೆಪಿ ಸರ್ಕಾರ

ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಜಾರಿಗೆ ತಂದ ನಂತರ, ಉತ್ತರಾಖಂಡ ಸರ್ಕಾರ ಈಗ ಜನಸಂಖ್ಯಾ ನಿಯಂತ್ರಣ ಕಾನೂನನ್ನು ತರುವ ಬಗ್ಗೆ ಯೋಚಿಸುತ್ತಿದೆ ಎಂದು ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಶುಕ್ರವಾರ ಸೂಚಿಸಿದ್ದಾರೆ. ಪ್ರಸ್ತಾವಿತ ಕ್ರಮದ...

ಪಶ್ಚಿಮ ಬಂಗಾಳ| ಟಿಎಂಸಿ ನಾಯಕರ ಭದ್ರತೆಗೆ ಭಾರೀ ಪೊಲೀಸ್ ನಿಯೋಜನೆ; ಇಸಿಐ ಆಕ್ಷೇಪ

ರಾಜ್ಯದ ವಿವಿಧ ಹಂತಗಳಲ್ಲಿ ತೃಣಮೂಲ ಕಾಂಗ್ರೆಸ್ ನಾಯಕರಿಗೆ ವೈಯಕ್ತಿಕ ಭದ್ರತೆ ಒದಗಿಸಲು ಪಶ್ಚಿಮ ಬಂಗಾಳ ಪೊಲೀಸರು ಮತ್ತು ಕೋಲ್ಕತ್ತಾ ಪೊಲೀಸರು ನಿಯೋಜಿಸಿರುವ ಹೆಚ್ಚಿನ ಸಂಖ್ಯೆಯ ಸಿಬ್ಬಂದಿಯನ್ನು ಭಾರತೀಯ ಚುನಾವಣಾ ಆಯೋಗ (ಇಸಿಐ) ಗಂಭೀರವಾಗಿ...