Homeಕರ್ನಾಟಕಕಾಂಗ್ರೆಸ್‍ಗೆ ಎಚ್ಚರ, ಪಕ್ಷ ಕಟ್ಟುವ ಫಜೀತಿ, ಸರ್ಕಾರದ ಉಳಿವಿಗಷ್ಟೇ ಮೈತ್ರಿ

ಕಾಂಗ್ರೆಸ್‍ಗೆ ಎಚ್ಚರ, ಪಕ್ಷ ಕಟ್ಟುವ ಫಜೀತಿ, ಸರ್ಕಾರದ ಉಳಿವಿಗಷ್ಟೇ ಮೈತ್ರಿ

- Advertisement -
| ಮಲ್ಲನಗೌಡರ್ |
ಮೇಲಿನ ತಲೆಬರಹದಷ್ಟೇ ಸಂಕೀರ್ಣವಾಗಿದೆ ರಾಜ್ಯದ ಸದ್ಯದ ರಾಜಕಾರಣ. ರಾಜ್ಯ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ನಡುವಿನ ಸ್ನೇಹ, ಮುನಿಸು, ಅಧಿಕಾರ ಪಾಲು, ಆಂತರಿಕ ಭಿನ್ನಮತ ಮತ್ತು ಪಕ್ಷಗಳ ಬಲವರ್ಧನೆ, ನಾಯಕರ ವೈಯಕ್ತಿಕ ಆಕಾಂಕ್ಷೆಗಳು- ಇವೆಲ್ಲವೂ ಸದ್ಯ ಮೇಲುನೋಟಕ್ಕೆ ಭಿನ್ನ ಆಯಾಮಗಳಂತೆ ಕಂಡು ಬಂದರೂ, ಇವೆಲ್ಲವೂ ಹಾಸು ಹೊಕ್ಕಾಗಿ ಒಂದರೊಳಗೊಂದು ಹೆಣೆದುಕೊಂಡಿವೆ. ಸದಾ ಅಧಿಕಾರ ಹಿಡಿಯುವ ಕಾರ್ಯಾಚರಣೆಯನ್ನು ಜೀವಂತವೇ ಇಟ್ಟಿರುವ ಬಿಜೆಪಿಗೆ, 25 ಸೀಟುಗಳ ದಿಗ್ವಿಜಯದ ನಂತರ ಹೈಕಮಾಂಡಿನಿಂದ ಬೆಂಬಲವೂ ಸಿಕ್ಕಂತಿದೆ. ಇಡೀ ರಾಜ್ಯದ ಬಹುಭಾಗದಲ್ಲಿ ನೀರಿನ ಕೊರತೆಯಿದೆ, ಮಳೆಯ ವಿಳಂಬದಿಂದಾಗಿ ಜೂನ್ ಮೂರನೇ ವಾರದಲ್ಲೂ ಬಿತ್ತನೆಯಾಗಿಲ್ಲ. ರಾಜಧಾನಿಯಲ್ಲಿ ಮಾತ್ರ ‘ಕುರ್ಚಿಗಾಗಿ ಕಾಳು ಹಾಕುವ’, ಕಾಲೆಳೆಯುವ ರಾಜಕಾರಣ ಎಗ್ಗಿಲ್ಲದೇ ಸಾಗಿದೆ.
ಸದ್ಯಕ್ಕೆ ಮುಖ್ಯ ಬೆಳವಣಿಗೆ ಎನಿಸಿದ್ದು ಎಐಸಿಸಿಯು ರಾಜ್ಯ ಕಾಂಗ್ರೆಸ್ ಪದಾಧಿಕಾರಿಗಳನ್ನು ವಿಸರ್ಜನೆ ಮಾಡಿರುವುದು. ಇದರ ಜೊತೆಗೇ ಮೈತ್ರಿ ಸರ್ಕಾರವನ್ನು ಮುಂದುವರೆಸಿಕೊಂಡು ಹೋಗಲು ಸೂಚಿಸಿರುವುದು. ಕಾಂಗ್ರೆಸ್ ಹೈಕಮಾಂಡಿನ ಈ ನಡೆಯಿಂದ ರಾಜ್ಯ ಕಾಂಗ್ರೆಸ್‍ನಲ್ಲಿ ಸಿದ್ದರಾಮಯ್ಯ ಪ್ರಾಬಲ್ಯ ಇನ್ನಷ್ಟು ಹೆಚ್ಚಿದೆ, ಹೆಚ್ಚಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಸಿದ್ದರಾಮಯ್ಯರ ಮಾತಿಗೆ ತಲೆದೂಗಿರುವ ಹೈಮಾಂಡ್ ಪಕ್ಷ ಕಟ್ಟುವ ಗಟ್ಟಿ ತೀರ್ಮಾನಕ್ಕೆ ಬಂದಿದೆ. ಅಧ್ಯಕ್ಷ ಮತ್ತು ಕಾರ್ಯಾಧ್ಯಕ್ಷರನ್ನು ಬಿಟ್ಟು ಎಲ್ಲ ಹಂತದ ಪದಾಧಿಕಾರಿಗಳಿಗೆ ಗೇಟ್ ತೋರಿಸಲಾಗಿದೆ. ದಶಕಗಳಿಂದ ಪಕ್ಷ ಸಂಘಟನೆ ಮಾಡದೇ ಬರೀ ಅಧಿಕಾರದ ಲಾಭ ಪಡೆಯುತ್ತಲೇ ಬಂದಿದ್ದ ಬಹುಪಾಲು ವಿಸರ್ಜಿತ ಪದಾಧಿಕಾರಿಗಳ ಜಾಗಕ್ಕೆ ನಿಷ್ಟಾವಂತ ಕಾರ್ಯಕರ್ತರನ್ನು ನೇಮಿಸುವ ಕೆಲಸ ನಿರಾಂತಕದ ವಿಷಯ ಅಲ್ಲವೇ ಅಲ್ಲ. ಇತ್ತ ಸಿದ್ದರಾಮಯ್ಯ ಪಕ್ಷ ಸಂಘಟನೆ ಜೊತೆಗೆ ತಮ್ಮ ಶಾಸಕರು ಬಿಜೆಪಿ ಆಮಿಷಕ್ಕೆ ಬೀಳದಂತೆ ತಡೆಯುವ, ಮೂಲ ಕಾಂಗ್ರೆಸ್ ನಾಯಕರ ಭಿನ್ನಮತವನ್ನು ತಡೆಯುವ ಜವಾಬ್ದಾರಿಗಳನ್ನು ತಾವೇ ಹೊತ್ತುಕೊಂಡು ಬಂದಿದ್ದಾರೆ.
ಮೈತ್ರಿಯಿಂದ ಕಾಂಗ್ರೆಸ್‍ಗೆ ನಷ್ಟ
ಇದನ್ನು ಹೈಕಮಾಂಡ್‍ಗೆ ಮನವರಿಕೆ ಮಾಡಿಕೊಳ್ಳುವಲ್ಲಿ ಸಿದ್ದರಾಮಯ್ಯ ಯಶಸ್ವಿಯಾಗಿದ್ದಾರೆ. ಲೋಕಸಭೆಯಲ್ಲಿ ಮೈತ್ರಿ ಕಾರಣದಿಂದಾಗಿಯೇ ಕಾಂಗ್ರೆಸ್‍ಗೆ ದೊಡ್ಡ ಹಿನ್ನಡೆ ಆಗಿದ್ದು ಮತ್ತು ಅದರ ಲಾಭ ಬಿಜೆಪಿಗೆ ಹೋಗಿದ್ದು ಸತ್ಯ. ಹೀಗಾಗಿ ಮೈತ್ರಿ ಸರ್ಕಾರವನ್ನು ಕಾಪಾಡಿಕೊಂಡೇ, ಪಕ್ಷ ಸಂಘಟನೆ ಮಾಡುವತ್ತ ಕಾಂಗ್ರೆಸ್ ಹೆಜ್ಜೆ ಇಟ್ಟಿದೆ. ಆದರೆ, ಬಿಜೆಪಿಯ ಆಪರೇಷನ್ ಕಮಲ ಮುಂದುವರೆದೇ ಇರುವ ಹೊತ್ತಿನಲ್ಲಿ ಕಾಂಗ್ರೆಸ್ ತನ್ನ ಭಿನ್ನಮತೀಯ ಶಾಸಕರನ್ನು ಉಳಿಸಿಕೊಳ್ಳುವ ಕಸರತ್ತನ್ನೂ ಮಾಡಬೇಕಿದೆ. ಸದ್ಯಕ್ಕೆ ದೇವೇಗೌಡ ಮತ್ತು ಕುಮಾರಸ್ವಾಮಿಯವರಿಗೆ ಸರ್ಕಾರ ಬೀಳದೇ ಇದ್ದರೆ ಸಾಕು ಎಂಬ ಗುರಿಯಷ್ಟೇ ಇರುವಂತಿದೆ.
ಬಿಜೆಪಿ ಹೈಕಮ್ಯಾಂಡ್‍ನಿಂದ ಯಡ್ಡಿಗೆ ಗ್ರೀನ್ ಸಿಗ್ನಲ್?
ಲೋಕಸಭಾ ಚುನಾವಣೆಯ ಗೆಲುವು ಸಿಕ್ಕ ತಕ್ಷಣ ಭಾರೀ ಬದಲಾವಣೆ ಆಗಲಿದೆ ಎಂಬ ನಿರೀಕ್ಷೆ ಎಲ್ಲರಲ್ಲೂ ಇತ್ತು. ಅದನ್ನು ಬಿಜೆಪಿ ನಾಯಕರು ಪದೇ ಪದೇ ಹೇಳಿಯೂ ಇದ್ದರು. ಆದರೆ, ಫಲಿತಾಂಶದ ನಂತರ ಅಂಥದ್ದೇನಕ್ಕೂ ಕೈ ಹಾಕಬೇಡಿ ಎಂದು ಹೈಕಮ್ಯಾಂಡ್ ಸೂಚಿಸಿದೆ ಎಂಬ ಮಾತನ್ನು ಸ್ವತಃ ಯಡಿಯೂರಪ್ಪ ಹೇಳಿದರು. ಕಾಂಗ್ರೆಸ್‍ನೊಳಗಿನಿಂದಲೇ ಸರ್ಕಾರ ಬೀಳಿಸುವ ಕೆಲಸ ನಡೆಯುವ ಸಾಧ್ಯತೆ ಇರುವಾಗ, ನಾವೇಕೆ ಕೆಟ್ಟ ಹೆಸರು ತಂದುಕೊಳ್ಳಬೇಕು ಎಂಬುದು ಬಿಜೆಪಿಯ ಇರಾದೆಯಾಗಿತ್ತು. ಆಪರೇಷನ್ ಮಾಡುವುದಕ್ಕಿಂತ ಚುನಾವಣೆಗೇ ಹೋದರೆ ಗೆಲುವು ಬಿಜೆಪಿಯದ್ದೇ ಎನ್ನುವ ಅನಿಸಿಕೆಯೂ ಆ ವಲಯಗಳಲ್ಲಿತ್ತು. ಹಾಗಾಗಿ ಕೆಡವುವುದಕ್ಕಿಂತ, ತಾನೇ ಬಿದ್ದು ಹೋಗಲಿ ಎಂದು ಕಾಯುವುದೇ ಸರಿ ಎಂಬುದು ಬಿಜೆಪಿಯ ನಾಯಕರ ತೀರ್ಮಾನವಾಗಿತ್ತು.
ಆದರೆ, ಅದಾಗಲಿಲ್ಲ. ಯಡಿಯೂರಪ್ಪನವರಿಗೂ ಸುಮ್ಮನೇ ಕೂರಲಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ, ‘ಆಪರೇಷನ್‍ಗೆ ಮುಂದಾಗಿ’ ಎಂಬ ಗ್ರೀನ್ ಸಿಗ್ನಲ್ ಬಂದಿದೆ ಎಂಬ ಸುದ್ದಿಗೆ ವಿಶೇಷ ಮಹತ್ವ ಬಂದಿದೆ. ಮಧ್ಯಂತರ ಚುನಾವಣೆ ಸದ್ಯಕ್ಕಂತೂ ಯಾರಿಗೂ ಬೇಡವಾಗಿದೆ. ಹಾಗಾಗಿ ಆಪರೇಷನ್ ನಡೆಯುವುದೇ ಲೇಸು ಎಂಬ ಪರಿಸ್ಥಿತಿ ಸದ್ಯಕ್ಕಿದೆ.
ಗ್ರಾಮ ವಾಸ್ತವ್ಯ ಜನಪ್ರಿಯತೆ ಮರಳಿ ಪಡೆಯುವುದಕ್ಕೋ, ಜನಪರ ಕೆಲಸ ಮಾಡುವುದಕ್ಕೋ?
ಕುಮಾರಸ್ವಾಮಿಯವರ ಮನೆ ಬಾಗಿಲಿಗೆ ಬರುವ ಜನರನ್ನು ಭೇಟಿ ಮಾಡುತ್ತಿದ್ದಾರಾದರೂ, ಅಧಿಕೃತ ಜನತಾದರ್ಶನವನ್ನು ನಡೆಸುತ್ತಿಲ್ಲ. ಗ್ರಾಮ ವಾಸ್ತವ್ಯವೂ ಇರುವುದಿಲ್ಲ ಎಂದು ಹೇಳಿದ್ದರು. ಆದರೀಗ, ಜನಪ್ರಿಯ ಕಾರ್ಯಕ್ರಮಗಳ ಮೊರೆ ಹೋಗುವುದು ಅನಿವಾರ್ಯವಾಗಿದೆ. ಬರದ ಬಿಸಿ ನಿವಾರಣೆಗೆ ಸರ್ಕಾರ ಪರಿಣಾಮಕಾರಿ ಕೆಲಸ ಮಾಡುವ ತುರ್ತಂತೂ ಈಗಿದೆ. ಆ ಮೂಲಕ ಜನರ ಹತ್ತಿರಕ್ಕೆ ಹೋಗುವ ಅವಕಾಶವೂ ಇದೆ. ಆದರೆ, ಅದನ್ನು ಮಾಡುತ್ತಾರಾ ಅಥವಾ ಪ್ರಚಾರವಷ್ಟೇ ನಡೆಯುತ್ತದಾ ಎಂಬುದನ್ನು ಕಾದು ನೋಡಬೇಕು.
ಸಿದ್ದರಾಮಯ್ಯನವರ ಡಬಲ್ ಕಷ್ಟ
ಮುಖ್ಯಮಂತ್ರಿಯಾಗಿ ಇಳಿದಿರುವ ಸಿದ್ದರಾಮಯ್ಯನವರಿಗೆ ಎರಡರಲ್ಲೊಂದು ಆಗಲೇಬೇಕು. ಒಂದೋ ಅಧಿಕಾರದಲ್ಲಿರಬೇಕು, ಇಲ್ಲವೇ ಜನನಾಯಕನಾಗಿ ಪ್ರತಿಷ್ಠಾಪನೆಯಾಗಬೇಕು. ಕುಮಾರಸ್ವಾಮಿಯವರನ್ನು ಇಳಿಸಿದರೂ, ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯನವರನ್ನು ಜೆಡಿಎಸ್‍ನವರು ಒಪ್ಪುವುದು ಸಾಧ್ಯವೇ ಇಲ್ಲ. ಇನ್ನು ಜನನಾಯಕನಾಗಬೇಕೆಂದರೆ ರಾಜ್ಯ ಪ್ರವಾಸ ಕೈಗೊಂಡು ಪಕ್ಷವನ್ನೂ ಸಂಘಟಿಸಲು ಬೆವರು ಹರಿಸಬೇಕು. ಆದರೆ, ರಾಜ್ಯದೆಲ್ಲೆಡೆ ಹೋದಾಗ, ದೂರದ ದೆಹಲಿ ಸರ್ಕಾರವನ್ನು ಟೀಕಿಸುವುದರಿಂದ ಪ್ರಯೋಜನವಿಲ್ಲ. ರಾಜ್ಯ ಸರ್ಕಾರವನ್ನು ಬಯ್ಯುವುದಿರಲಿ, ಹೊಗಳುತ್ತಾ, ಸಮರ್ಥಿಸುತ್ತಾ ಇರಬೇಕಾಗುತ್ತದೆ. ಹೀಗಾಗಿ ಏನು ಮಾಡುವುದೋ ಗೊತ್ತಾಗದೇ, ರಾಜ್ಯ ಸರ್ಕಾರವನ್ನು ಅಭದ್ರತೆಯಲ್ಲಿಡುತ್ತಲೇ, ತಮ್ಮ ಪ್ರಸ್ತುತತೆ ಉಳಿಸಿಕೊಳ್ಳುವ ಕಸರತ್ತಷ್ಟೇ ಮಾಡುತ್ತಿದ್ದಾರೆ. ಅದರಾಚೆಗೆ, ರಾಜ್ಯದ ಜನರ ಹಿತಾಸಕ್ತಿಯಿಂದ ವರ್ತಿಸುವ ಕಷ್ಟಕರವಾದ ಕೆಲಸ ಅವರಿಂದಾಗುತ್ತಿಲ್ಲ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಸ್ತೆಗಳಲ್ಲಿ ಮುಕ್ತವಾಗಿ ಓಡಾಡುವುದು ಜನರ ಹಕ್ಕು: ಬೀದಿ ನಾಯಿಗಳ ದಯಾಮರಣಕ್ಕೂ ಸುಪ್ರೀಂ ಅಸ್ತು

ಸುಪ್ರೀಂ ಕೋರ್ಟ್ ಇಂದು (ಮೇ 19, ಮಂಗಳವಾರ) ಬೀದಿ ನಾಯಿಗಳ ನಿಯಂತ್ರಣ ಮತ್ತು ನಿರ್ವಹಣೆಗೆ ಸಂಬಂಧಿಸಿದ ಎಲ್ಲಾ ಅರ್ಜಿಗಳನ್ನು ವಜಾಗೊಳಿಸಿ ಮಹತ್ವದ ತೀರ್ಪು ನೀಡಿದೆ. ಸಾರ್ವಜನಿಕ ಸ್ಥಳಗಳಲ್ಲಿ ಬೀದಿ ನಾಯಿಗಳ ದಾಳಿಯಿಂದಾಗಿ ಸಾರ್ವಜನಿಕರು...

ಹರಿಯಾಣದ ಕಾರ್ಮಿಕ ನಾಯಕ ಅಜಿತ್ ಸಿಂಗ್ ಬಂಧನ ‘ಅಕ್ರಮ’ ಎಂದ ಕೋರ್ಟ್; ಜಾಮೀನು ಮಂಜೂರು

ಬೆಲ್ಸೋನಿಕಾ ಆಟೋ ಕಾಂಪೊನೆಂಟ್ ಇಂಡಿಯಾ ಎಂಪ್ಲಾಯೀಸ್ ಯೂನಿಯನ್‌ನ ಪ್ರಧಾನ ಕಾರ್ಯದರ್ಶಿ ಅಜಿತ್ ಸಿಂಗ್ ಅವರಿಗೆ ಗುರುಗ್ರಾಮ್ ಜಿಲ್ಲಾ ನ್ಯಾಯಾಲಯವು (ಮೇ 18) ಜಾಮೀನು ನೀಡಿದೆ. ಅವರು ಮಾನೇಸರ್ ಕೈಗಾರಿಕಾ ಪ್ರದೇಶದಲ್ಲಿ ಕಾರ್ಮಿಕರ ಪ್ರತಿಭಟನೆಗಳ...

ಉಮರ್, ಶಾರ್ಜೀಲ್‌ಗೆ ಜಾಮೀನು ನಿರಾಕರಿಸಿದ್ದಕ್ಕೆ ಆಕ್ಷೇಪ : ತನ್ನದೇ ಆದೇಶದ ಬಗ್ಗೆ ಸುಪ್ರೀಂ ಕೋರ್ಟ್ ಹೇಳಿದ್ದೇನು?

ದೆಹಲಿ ಗಲಭೆ (2020ರ ಪ್ರಕರಣ) ಹಿಂದಿನ ದೊಡ್ಡ ಮಟ್ಟದ ಪಿತೂರಿ ಆರೋಪದಲ್ಲಿ ಬಂಧಿತರಾಗಿರುವ ಉಮರ್ ಖಾಲಿದ್ ಮತ್ತು ಶಾರ್ಜೀಲ್ ಇಮಾಮ್ ಅವರಿಗೆ ಜಾಮೀನು ನಿರಾಕರಿಸಿ, 2026ರ ಜನವರಿಯಲ್ಲಿ ತನ್ನದೇ ಮತ್ತೊಂದು ದ್ವಿಸದಸ್ಯ ಪೀಠ...

ಮುತ್ತುರಾಜ್ ‘ರಾಜಕುಮಾರ್‍’ ಆದ ಕಥೆ

’ಬೇಡರ ಕಣ್ಣಪ್ಪ’ ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದ್ದ ಸಮಯದಲ್ಲಿ ಒಂದು ದಿನ ನಾನು ಅಂದಿನ ಪತ್ರಿಕೆಯಲ್ಲಿ ಚಿತ್ರಸುದ್ದಿಯನ್ನು ಓದುತ್ತಿದ್ದಾಗ ಗುಬ್ಬಿ ಕರ್ಣಾಟಕ ಸಂಸ್ಥೆಯವರು ನಿರ್ಮಿಸುತ್ತಿರುವ ಬೇಡರ ಕಣ್ಣಪ್ಪ ಚಿತ್ರ ಎಂದು ಸುದ್ದಿ ಪ್ರಾರಂಭವಾಗಿ...

ಬಂಗಾಳ ಎಸ್‌ಐಆರ್ ಅವಾಂತರ ಹಕ್ಕು ಕಳೆದುಕೊಂಡ ಮತದಾರ

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ದೇಶದಲ್ಲಿ ಪ್ರಸ್ತುತ ಚರ್ಚೆಯಲ್ಲಿರುವ ಪ್ರಮುಖ ವಿಚಾರ. ಹಲವು ಗೊಂದಲಗಳ ನಡುವೆ ಮೊದಲ ಹಂತದಲ್ಲಿ ಬಿಹಾರದಲ್ಲಿ ಎಸ್‌ಐಆರ್ ಪೂರ್ಣಗೊಳಿಸಿದ ಚುನಾವಣಾ ಆಯೋಗ, ನಂತರ ಅಲ್ಲಿ ವಿಧಾನಸಭಾ...

ಬಿಡದಿ ಟೌನ್‌ಶಿಪ್ ಭೂಸ್ವಾಧೀನ ಪ್ರಕ್ರಿಯೆ ರದ್ದುಗೊಳಿಸಲು ಸಂಯುಕ್ತ ಹೋರಾಟ ಕರ್ನಾಟಕ ಆಗ್ರಹ

ಫಲವತ್ತಾದ ಕೃಷಿ ಭೂಮಿ ನಾಶ ಮಾಡಿ ನಿರ್ಮಿಸಲು ಉದ್ದೇಶಿಸಿರುವ ಬಿಡದಿ ಟೌನ್‌ಶಿಪ್ ಯೋಜನೆ ರೈತ ವಿರೋಧಿ ಹಾಗೂ ಜೀವ ಪರಿಸರ ವ್ಯವಸ್ಥೆಗೆ ವಿನಾಶಕಾರಿ. ಇಂತಹ ಪರಿಸರ ವಿನಾಶದ ಯೋಜನೆಗೆ ನೀಡಿರುವ ಸಂಪುಟ ಅನುಮೋದನೆಯನ್ನು...

‘ಮನೆ ಕೊಡಿ ಇಲ್ಲಾ ಜೈಲಿಗಾದರೂ ಬಿಡಿ’ : ಬೀದಿಗೆ ಬಿದ್ದ ಕೋಗಿಲು ನಿರಾಶ್ರಿತರ ಅಳಲು

"ನಮಗೊಂದು ಸೂರು ಕೊಟ್ಟರೆ ಅದಕ್ಕೆ ಕಾರಣರಾದ ಎಲ್ಲರನ್ನೂ ಹರಸಿ ನೆಮ್ಮದಿಯಾಗಿ ಬದುಕುತ್ತೇವೆ. ಇಲ್ಲವಾದರೆ ನಮ್ಮನ್ನು ಜೈಲಿಗಾದರೂ ಹಾಕಿಬಿಡಿ. ಒಂದು ನೆಲೆ ಮತ್ತು ಮೂರು ಹೊತ್ತಿನ ಊಟವಾದರೂ ಸಿಗುತ್ತದೆ". ಇದು ಸರ್ಕಾರ ಮನೆ ಧ್ವಂಸ...

ಒಳಮೀಸಲಾತಿ ಜಾರಿ ಸರ್ಕಾರದ ಹೊಸ ಸೂತ್ರ

ಕರ್ನಾಟಕದಲ್ಲಿ ಒಳಮೀಸಲಾತಿಯ ’ಸದ್ದು-ಗುದ್ದು’ ಅವಿಭಜಿತ ಆಂಧ್ರಪ್ರದೇಶಕ್ಕಿಂತಲೂ ಹೆಚ್ಚಾಗಿದೆ. ಇದಕ್ಕೆ ಕಾರಣ ಪರಿಶಿಷ್ಟ ಜಾತಿಗಳೊಳಗಿನ ಮೇಲಾಟವೂ ಹೌದು, ಸರ್ಕಾರದ ಬೇಜವಾಬ್ದಾರಿ ನಡೆಗಳೂ ಹೌದು. ಆದರೆ ದಿನಾಂಕ: 24.04.2026ರಂದು ನಡೆದ ಸಚಿವ ಸಂಪುಟ ಸಭೆಯು ಒಳಮೀಸಲಾತಿ...

ಕೊರೋನಾ ಲಸಿಕೆ ಒಳಹೊರಗುಗಳ ಪರಾಮರ್ಶೆಯ ನೋಟ

ಮನುಷ್ಯನ ನೆನಪಿನ ಶಕ್ತಿ ಕಡಿಮೆ ಎಂದು ರಾಜಕಾರಣಿಗಳು, ಅಧಿಕಾರಿಗಳು ಸದಾ ಗುನುಗುತ್ತಿರುತ್ತಾರೆ. ಅದು ಜೀವ ಮತ್ತು ಜೀವನ ಕಳೆದುಕೊಂಡ ವಿಚಾರವನ್ನು ಕೂಡ ಬಹಳ ಬೇಗ ಮರೆವಿನ ತೊಟ್ಟಿಗೆ ತಳ್ಳಿ ಬಿಡುತ್ತದೆ.ಆದರೂ, ಮನುಷ್ಯ ಭೂಮಿಯ...

‘ಮಾವಿನ ಮರ’ ಕಂಡ ಕನಸು

ಪುಸ್ತಕ ಪರಿಚಯ ಸವಾಲಿನ ವಿಷಯ. ಅದರಲ್ಲೂ ಕವಿತೆಗಳ ಕುರಿತು ಮಾತನಾಡುವುದು ಇನ್ನೂ ಸವಾಲು. ಪ್ರತಿಯೊಂದು ಕವಿತೆಯೂ ತನ್ನ ಓದುಗರೊಂದಿಗೆ ಸಂವಾದಿಸುವ ಬಗೆ ವಿಭಿನ್ನವಾಗಿರುತ್ತದೆ. ಅದನ್ನು ಏಕರೂಪೀ ಪರಿಭಾಷೆಯಲ್ಲಿ ಮಂಡಿಸುವುದು ಸರಿಯಲ್ಲ. ’ಮಿಥಿಲೆಯ ಮಾವಿನ...