Homeಕರ್ನಾಟಕಕಾಂಗ್ರೆಸ್‍ಗೆ ಎಚ್ಚರ, ಪಕ್ಷ ಕಟ್ಟುವ ಫಜೀತಿ, ಸರ್ಕಾರದ ಉಳಿವಿಗಷ್ಟೇ ಮೈತ್ರಿ

ಕಾಂಗ್ರೆಸ್‍ಗೆ ಎಚ್ಚರ, ಪಕ್ಷ ಕಟ್ಟುವ ಫಜೀತಿ, ಸರ್ಕಾರದ ಉಳಿವಿಗಷ್ಟೇ ಮೈತ್ರಿ

- Advertisement -
| ಮಲ್ಲನಗೌಡರ್ |
ಮೇಲಿನ ತಲೆಬರಹದಷ್ಟೇ ಸಂಕೀರ್ಣವಾಗಿದೆ ರಾಜ್ಯದ ಸದ್ಯದ ರಾಜಕಾರಣ. ರಾಜ್ಯ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ನಡುವಿನ ಸ್ನೇಹ, ಮುನಿಸು, ಅಧಿಕಾರ ಪಾಲು, ಆಂತರಿಕ ಭಿನ್ನಮತ ಮತ್ತು ಪಕ್ಷಗಳ ಬಲವರ್ಧನೆ, ನಾಯಕರ ವೈಯಕ್ತಿಕ ಆಕಾಂಕ್ಷೆಗಳು- ಇವೆಲ್ಲವೂ ಸದ್ಯ ಮೇಲುನೋಟಕ್ಕೆ ಭಿನ್ನ ಆಯಾಮಗಳಂತೆ ಕಂಡು ಬಂದರೂ, ಇವೆಲ್ಲವೂ ಹಾಸು ಹೊಕ್ಕಾಗಿ ಒಂದರೊಳಗೊಂದು ಹೆಣೆದುಕೊಂಡಿವೆ. ಸದಾ ಅಧಿಕಾರ ಹಿಡಿಯುವ ಕಾರ್ಯಾಚರಣೆಯನ್ನು ಜೀವಂತವೇ ಇಟ್ಟಿರುವ ಬಿಜೆಪಿಗೆ, 25 ಸೀಟುಗಳ ದಿಗ್ವಿಜಯದ ನಂತರ ಹೈಕಮಾಂಡಿನಿಂದ ಬೆಂಬಲವೂ ಸಿಕ್ಕಂತಿದೆ. ಇಡೀ ರಾಜ್ಯದ ಬಹುಭಾಗದಲ್ಲಿ ನೀರಿನ ಕೊರತೆಯಿದೆ, ಮಳೆಯ ವಿಳಂಬದಿಂದಾಗಿ ಜೂನ್ ಮೂರನೇ ವಾರದಲ್ಲೂ ಬಿತ್ತನೆಯಾಗಿಲ್ಲ. ರಾಜಧಾನಿಯಲ್ಲಿ ಮಾತ್ರ ‘ಕುರ್ಚಿಗಾಗಿ ಕಾಳು ಹಾಕುವ’, ಕಾಲೆಳೆಯುವ ರಾಜಕಾರಣ ಎಗ್ಗಿಲ್ಲದೇ ಸಾಗಿದೆ.
ಸದ್ಯಕ್ಕೆ ಮುಖ್ಯ ಬೆಳವಣಿಗೆ ಎನಿಸಿದ್ದು ಎಐಸಿಸಿಯು ರಾಜ್ಯ ಕಾಂಗ್ರೆಸ್ ಪದಾಧಿಕಾರಿಗಳನ್ನು ವಿಸರ್ಜನೆ ಮಾಡಿರುವುದು. ಇದರ ಜೊತೆಗೇ ಮೈತ್ರಿ ಸರ್ಕಾರವನ್ನು ಮುಂದುವರೆಸಿಕೊಂಡು ಹೋಗಲು ಸೂಚಿಸಿರುವುದು. ಕಾಂಗ್ರೆಸ್ ಹೈಕಮಾಂಡಿನ ಈ ನಡೆಯಿಂದ ರಾಜ್ಯ ಕಾಂಗ್ರೆಸ್‍ನಲ್ಲಿ ಸಿದ್ದರಾಮಯ್ಯ ಪ್ರಾಬಲ್ಯ ಇನ್ನಷ್ಟು ಹೆಚ್ಚಿದೆ, ಹೆಚ್ಚಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಸಿದ್ದರಾಮಯ್ಯರ ಮಾತಿಗೆ ತಲೆದೂಗಿರುವ ಹೈಮಾಂಡ್ ಪಕ್ಷ ಕಟ್ಟುವ ಗಟ್ಟಿ ತೀರ್ಮಾನಕ್ಕೆ ಬಂದಿದೆ. ಅಧ್ಯಕ್ಷ ಮತ್ತು ಕಾರ್ಯಾಧ್ಯಕ್ಷರನ್ನು ಬಿಟ್ಟು ಎಲ್ಲ ಹಂತದ ಪದಾಧಿಕಾರಿಗಳಿಗೆ ಗೇಟ್ ತೋರಿಸಲಾಗಿದೆ. ದಶಕಗಳಿಂದ ಪಕ್ಷ ಸಂಘಟನೆ ಮಾಡದೇ ಬರೀ ಅಧಿಕಾರದ ಲಾಭ ಪಡೆಯುತ್ತಲೇ ಬಂದಿದ್ದ ಬಹುಪಾಲು ವಿಸರ್ಜಿತ ಪದಾಧಿಕಾರಿಗಳ ಜಾಗಕ್ಕೆ ನಿಷ್ಟಾವಂತ ಕಾರ್ಯಕರ್ತರನ್ನು ನೇಮಿಸುವ ಕೆಲಸ ನಿರಾಂತಕದ ವಿಷಯ ಅಲ್ಲವೇ ಅಲ್ಲ. ಇತ್ತ ಸಿದ್ದರಾಮಯ್ಯ ಪಕ್ಷ ಸಂಘಟನೆ ಜೊತೆಗೆ ತಮ್ಮ ಶಾಸಕರು ಬಿಜೆಪಿ ಆಮಿಷಕ್ಕೆ ಬೀಳದಂತೆ ತಡೆಯುವ, ಮೂಲ ಕಾಂಗ್ರೆಸ್ ನಾಯಕರ ಭಿನ್ನಮತವನ್ನು ತಡೆಯುವ ಜವಾಬ್ದಾರಿಗಳನ್ನು ತಾವೇ ಹೊತ್ತುಕೊಂಡು ಬಂದಿದ್ದಾರೆ.
ಮೈತ್ರಿಯಿಂದ ಕಾಂಗ್ರೆಸ್‍ಗೆ ನಷ್ಟ
ಇದನ್ನು ಹೈಕಮಾಂಡ್‍ಗೆ ಮನವರಿಕೆ ಮಾಡಿಕೊಳ್ಳುವಲ್ಲಿ ಸಿದ್ದರಾಮಯ್ಯ ಯಶಸ್ವಿಯಾಗಿದ್ದಾರೆ. ಲೋಕಸಭೆಯಲ್ಲಿ ಮೈತ್ರಿ ಕಾರಣದಿಂದಾಗಿಯೇ ಕಾಂಗ್ರೆಸ್‍ಗೆ ದೊಡ್ಡ ಹಿನ್ನಡೆ ಆಗಿದ್ದು ಮತ್ತು ಅದರ ಲಾಭ ಬಿಜೆಪಿಗೆ ಹೋಗಿದ್ದು ಸತ್ಯ. ಹೀಗಾಗಿ ಮೈತ್ರಿ ಸರ್ಕಾರವನ್ನು ಕಾಪಾಡಿಕೊಂಡೇ, ಪಕ್ಷ ಸಂಘಟನೆ ಮಾಡುವತ್ತ ಕಾಂಗ್ರೆಸ್ ಹೆಜ್ಜೆ ಇಟ್ಟಿದೆ. ಆದರೆ, ಬಿಜೆಪಿಯ ಆಪರೇಷನ್ ಕಮಲ ಮುಂದುವರೆದೇ ಇರುವ ಹೊತ್ತಿನಲ್ಲಿ ಕಾಂಗ್ರೆಸ್ ತನ್ನ ಭಿನ್ನಮತೀಯ ಶಾಸಕರನ್ನು ಉಳಿಸಿಕೊಳ್ಳುವ ಕಸರತ್ತನ್ನೂ ಮಾಡಬೇಕಿದೆ. ಸದ್ಯಕ್ಕೆ ದೇವೇಗೌಡ ಮತ್ತು ಕುಮಾರಸ್ವಾಮಿಯವರಿಗೆ ಸರ್ಕಾರ ಬೀಳದೇ ಇದ್ದರೆ ಸಾಕು ಎಂಬ ಗುರಿಯಷ್ಟೇ ಇರುವಂತಿದೆ.
ಬಿಜೆಪಿ ಹೈಕಮ್ಯಾಂಡ್‍ನಿಂದ ಯಡ್ಡಿಗೆ ಗ್ರೀನ್ ಸಿಗ್ನಲ್?
ಲೋಕಸಭಾ ಚುನಾವಣೆಯ ಗೆಲುವು ಸಿಕ್ಕ ತಕ್ಷಣ ಭಾರೀ ಬದಲಾವಣೆ ಆಗಲಿದೆ ಎಂಬ ನಿರೀಕ್ಷೆ ಎಲ್ಲರಲ್ಲೂ ಇತ್ತು. ಅದನ್ನು ಬಿಜೆಪಿ ನಾಯಕರು ಪದೇ ಪದೇ ಹೇಳಿಯೂ ಇದ್ದರು. ಆದರೆ, ಫಲಿತಾಂಶದ ನಂತರ ಅಂಥದ್ದೇನಕ್ಕೂ ಕೈ ಹಾಕಬೇಡಿ ಎಂದು ಹೈಕಮ್ಯಾಂಡ್ ಸೂಚಿಸಿದೆ ಎಂಬ ಮಾತನ್ನು ಸ್ವತಃ ಯಡಿಯೂರಪ್ಪ ಹೇಳಿದರು. ಕಾಂಗ್ರೆಸ್‍ನೊಳಗಿನಿಂದಲೇ ಸರ್ಕಾರ ಬೀಳಿಸುವ ಕೆಲಸ ನಡೆಯುವ ಸಾಧ್ಯತೆ ಇರುವಾಗ, ನಾವೇಕೆ ಕೆಟ್ಟ ಹೆಸರು ತಂದುಕೊಳ್ಳಬೇಕು ಎಂಬುದು ಬಿಜೆಪಿಯ ಇರಾದೆಯಾಗಿತ್ತು. ಆಪರೇಷನ್ ಮಾಡುವುದಕ್ಕಿಂತ ಚುನಾವಣೆಗೇ ಹೋದರೆ ಗೆಲುವು ಬಿಜೆಪಿಯದ್ದೇ ಎನ್ನುವ ಅನಿಸಿಕೆಯೂ ಆ ವಲಯಗಳಲ್ಲಿತ್ತು. ಹಾಗಾಗಿ ಕೆಡವುವುದಕ್ಕಿಂತ, ತಾನೇ ಬಿದ್ದು ಹೋಗಲಿ ಎಂದು ಕಾಯುವುದೇ ಸರಿ ಎಂಬುದು ಬಿಜೆಪಿಯ ನಾಯಕರ ತೀರ್ಮಾನವಾಗಿತ್ತು.
ಆದರೆ, ಅದಾಗಲಿಲ್ಲ. ಯಡಿಯೂರಪ್ಪನವರಿಗೂ ಸುಮ್ಮನೇ ಕೂರಲಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ, ‘ಆಪರೇಷನ್‍ಗೆ ಮುಂದಾಗಿ’ ಎಂಬ ಗ್ರೀನ್ ಸಿಗ್ನಲ್ ಬಂದಿದೆ ಎಂಬ ಸುದ್ದಿಗೆ ವಿಶೇಷ ಮಹತ್ವ ಬಂದಿದೆ. ಮಧ್ಯಂತರ ಚುನಾವಣೆ ಸದ್ಯಕ್ಕಂತೂ ಯಾರಿಗೂ ಬೇಡವಾಗಿದೆ. ಹಾಗಾಗಿ ಆಪರೇಷನ್ ನಡೆಯುವುದೇ ಲೇಸು ಎಂಬ ಪರಿಸ್ಥಿತಿ ಸದ್ಯಕ್ಕಿದೆ.
ಗ್ರಾಮ ವಾಸ್ತವ್ಯ ಜನಪ್ರಿಯತೆ ಮರಳಿ ಪಡೆಯುವುದಕ್ಕೋ, ಜನಪರ ಕೆಲಸ ಮಾಡುವುದಕ್ಕೋ?
ಕುಮಾರಸ್ವಾಮಿಯವರ ಮನೆ ಬಾಗಿಲಿಗೆ ಬರುವ ಜನರನ್ನು ಭೇಟಿ ಮಾಡುತ್ತಿದ್ದಾರಾದರೂ, ಅಧಿಕೃತ ಜನತಾದರ್ಶನವನ್ನು ನಡೆಸುತ್ತಿಲ್ಲ. ಗ್ರಾಮ ವಾಸ್ತವ್ಯವೂ ಇರುವುದಿಲ್ಲ ಎಂದು ಹೇಳಿದ್ದರು. ಆದರೀಗ, ಜನಪ್ರಿಯ ಕಾರ್ಯಕ್ರಮಗಳ ಮೊರೆ ಹೋಗುವುದು ಅನಿವಾರ್ಯವಾಗಿದೆ. ಬರದ ಬಿಸಿ ನಿವಾರಣೆಗೆ ಸರ್ಕಾರ ಪರಿಣಾಮಕಾರಿ ಕೆಲಸ ಮಾಡುವ ತುರ್ತಂತೂ ಈಗಿದೆ. ಆ ಮೂಲಕ ಜನರ ಹತ್ತಿರಕ್ಕೆ ಹೋಗುವ ಅವಕಾಶವೂ ಇದೆ. ಆದರೆ, ಅದನ್ನು ಮಾಡುತ್ತಾರಾ ಅಥವಾ ಪ್ರಚಾರವಷ್ಟೇ ನಡೆಯುತ್ತದಾ ಎಂಬುದನ್ನು ಕಾದು ನೋಡಬೇಕು.
ಸಿದ್ದರಾಮಯ್ಯನವರ ಡಬಲ್ ಕಷ್ಟ
ಮುಖ್ಯಮಂತ್ರಿಯಾಗಿ ಇಳಿದಿರುವ ಸಿದ್ದರಾಮಯ್ಯನವರಿಗೆ ಎರಡರಲ್ಲೊಂದು ಆಗಲೇಬೇಕು. ಒಂದೋ ಅಧಿಕಾರದಲ್ಲಿರಬೇಕು, ಇಲ್ಲವೇ ಜನನಾಯಕನಾಗಿ ಪ್ರತಿಷ್ಠಾಪನೆಯಾಗಬೇಕು. ಕುಮಾರಸ್ವಾಮಿಯವರನ್ನು ಇಳಿಸಿದರೂ, ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯನವರನ್ನು ಜೆಡಿಎಸ್‍ನವರು ಒಪ್ಪುವುದು ಸಾಧ್ಯವೇ ಇಲ್ಲ. ಇನ್ನು ಜನನಾಯಕನಾಗಬೇಕೆಂದರೆ ರಾಜ್ಯ ಪ್ರವಾಸ ಕೈಗೊಂಡು ಪಕ್ಷವನ್ನೂ ಸಂಘಟಿಸಲು ಬೆವರು ಹರಿಸಬೇಕು. ಆದರೆ, ರಾಜ್ಯದೆಲ್ಲೆಡೆ ಹೋದಾಗ, ದೂರದ ದೆಹಲಿ ಸರ್ಕಾರವನ್ನು ಟೀಕಿಸುವುದರಿಂದ ಪ್ರಯೋಜನವಿಲ್ಲ. ರಾಜ್ಯ ಸರ್ಕಾರವನ್ನು ಬಯ್ಯುವುದಿರಲಿ, ಹೊಗಳುತ್ತಾ, ಸಮರ್ಥಿಸುತ್ತಾ ಇರಬೇಕಾಗುತ್ತದೆ. ಹೀಗಾಗಿ ಏನು ಮಾಡುವುದೋ ಗೊತ್ತಾಗದೇ, ರಾಜ್ಯ ಸರ್ಕಾರವನ್ನು ಅಭದ್ರತೆಯಲ್ಲಿಡುತ್ತಲೇ, ತಮ್ಮ ಪ್ರಸ್ತುತತೆ ಉಳಿಸಿಕೊಳ್ಳುವ ಕಸರತ್ತಷ್ಟೇ ಮಾಡುತ್ತಿದ್ದಾರೆ. ಅದರಾಚೆಗೆ, ರಾಜ್ಯದ ಜನರ ಹಿತಾಸಕ್ತಿಯಿಂದ ವರ್ತಿಸುವ ಕಷ್ಟಕರವಾದ ಕೆಲಸ ಅವರಿಂದಾಗುತ್ತಿಲ್ಲ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಹೈದರಾಬಾದ್| ಎಕ್ಸ್‌ಪ್ರೆಸ್‌ವೇನಲ್ಲಿ ನೇಮಕಾತಿ ಪರೀಕ್ಷೆ ಓಎಂಆರ್ ಹಾಳೆಗಳು ಪತ್ತೆ: ತನಿಖೆಗೆ ಆದೇಶ

ನೇಮಕಾತಿ ಪರೀಕ್ಷೆಯ ಮೂಲ ಆಪ್ಟಿಕಲ್ ಮಾರ್ಕ್ ರೆಕಗ್ನಿಷನ್ (ಒಎಂಆರ್) ಹಾಳೆಗಳು ಹೈದರಾಬಾದ್‌ನ ರಸ್ತೆಬದಿಯಲ್ಲಿ ರಾಶಿ ರಾಶಿಯಾಗಿ ಬಿದ್ದಿರುವುದು ಕಂಡುಬಂದ ನಂತರ ತೆಲಂಗಾಣ ಸಾರ್ವಜನಿಕ ಸೇವಾ ಆಯೋಗ (ಟಿಜಿಪಿಎಸ್‌ಸಿ) ತನಿಖೆಗೆ ಆದೇಶಿಸಿದೆ. 2018 ರ ಹಾಸ್ಟೆಲ್...

ಕರೂರ್ ಕಾಲ್ತುಳಿತ ಮೃತರ ಕುಟುಂಬಸ್ಥರಿಗೆ ನೀಡಿದ್ದ ಸರ್ಕಾರಿ ಉದ್ಯೋಗವನ್ನು ರದ್ದುಗೊಳಿಸಿದ ಮದ್ರಾಸ್ ಹೈಕೋರ್ಟ್

ಕರೂರ್ ಕಾಲ್ತುಳಿತ ದುರಂತದಲ್ಲಿ ಮೃತಪಟ್ಟವರ ಕುಟುಂಬಸ್ಥರಿಗೆ ಸರ್ಕಾರಿ ಉದ್ಯೋಗ ನೀಡಿದ್ದ ತಮಿಳುನಾಡು ಸರ್ಕಾರದ ಆದೇಶವನ್ನು ಮದ್ರಾಸ್ ಹೈಕೋರ್ಟ್ ಸೋಮವಾರ ರದ್ದುಗೊಳಿಸಿದೆ. ಈ ನೇಮಕಾತಿಗಳನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ (PIL) ವಿಚಾರಣೆ...

ವಿದ್ಯಾರ್ಥಿಗಳ ಬಂಧನ: ಮತ್ತೆ ಪ್ರತಿಭಟನೆಯ ಎಚ್ಚರಿಕೆ ನೀಡಿದ ‘ಕಾಕ್ರೋಚ್ ಜನತಾ ಪಾರ್ಟಿ’

ಪ್ರತಿಭಟನಾಕಾರರ ವಿರುದ್ಧ ಯಾವುದೇ ಪೋಲೀಸ್ ಕ್ರಮ ಕೈಗೊಳ್ಳುವುದಿಲ್ಲ ಎಂಬ ಒಪ್ಪಂದವನ್ನು ಸಂಪೂರ್ಣವಾಗಿ ಉಲ್ಲಂಘಿಸಲಾಗಿದೆ ಎಂದು 'ಕಾಕ್ರೋಚ್ ಜನತಾ ಪಾರ್ಟಿ' (CJP) ರಾಷ್ಟ್ರೀಯ ವಕ್ತಾರ ಅಶುತೋಷ್ ರಂಕಾ ಎಕ್ಸ್ (X) ಸಾಮಾಜಿಕ ಜಾಲತಾಣದ ಪೋಸ್ಟ್‌ನಲ್ಲಿ...

ಜೆನ್ ಝೀ ಪೀಳಿಗೆಯ ಹೋರಾಟ ಮತ್ತು ಮುಂದಿನ ನಡೆ.!

NEET ಪರೀಕ್ಷೆಯ ಅಕ್ರಮ ಹಾಗೂ ಪೇಪರ್ ಸೋರಿಕೆ ವಿರುದ್ಧ 'ಜೆನ್ ಝೀ' (Gen Z) ಯುವ ಸಮೂಹ ನಡೆಸಿದ ಹೋರಾಟವು ಕೇವಲ ಒಂದು ತಾತ್ಕಾಲಿಕ ವಿದ್ಯಾರ್ಥಿ ಹೋರಾಟವಾಗಿ ಉಳಿದಿಲ್ಲ. ಇದು ಪ್ರಭುತ್ವದ ಅಹಂಕಾರವನ್ನು...

ಬಿಹಾರ| ವಿದ್ಯಾರ್ಥಿಗಳ ಪ್ರತಿಭಟನೆಯ ಸಮಯದಲ್ಲಿ ಎಕೆ-47 ಬಳಸಿದ ಪೊಲೀಸ್‌ ಕಾನ್‌ಸ್ಟೆಬಲ್ ಅಮಾನತು

ಬಿಹಾರದ ಸಿವಾನ್ ಜಿಲ್ಲೆಯಲ್ಲಿ ಜುಲೈ 25 ರಂದು ನಡೆದ ವಿದ್ಯಾರ್ಥಿಗಳ ಪ್ರತಿಭಟನೆಯ ಸಮಯದಲ್ಲಿ ಎಕೆ-47 ರೈಫಲ್ ಬಳಸಿರುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ ಪೊಲೀಸ್ ಕಾನ್‌ಸ್ಟೆಬಲ್ ಒಬ್ಬರನ್ನು ಅಮಾನತುಗೊಳಿಸಲಾಗಿದೆ ಎಂದು...

ನಾಳೆ ನನ್ನ ಮಗನೂ ಮೋದಿ ವಿರುದ್ಧ ಮಾತನಾಡಬಹುದು: ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ

ಅಸ್ಸಾಂ ಸಚಿವರೊಬ್ಬರ ಮಗಳು ಗುವಾಹಟಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡು, ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿರುವುದು ರಾಜ್ಯಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಈ ಘಟನೆಗೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ...

ವಿದ್ಯಾರ್ಥಿಗಳನ್ನು ಗುಂಡಿಕ್ಕಿ ಕೊಲ್ಲಬೇಕಿತ್ತು: ಆರ್‌ಎಸ್‌ಎಸ್ ಸಿದ್ಧಾಂತವಾದಿ ಟಿ.ಜಿ. ಮೋಹನ್‌ದಾಸ್ ವಿಕೃತ ಹೇಳಿಕೆ

ನವದೆಹಲಿ: ಕೇಂದ್ರ ಸರ್ಕಾರದ ಶಿಕ್ಷಣ ನೀತಿಗಳು ಹಾಗೂ ಪರೀಕ್ಷಾ ಅಕ್ರಮಗಳ ವಿರುದ್ಧ ದೆಹಲಿಯ ಜಂತರ್ ಮಂತರ್‌ನಲ್ಲಿ ಬೃಹತ್ ಪ್ರತಿಭಟನೆ ನಡೆಸಿ, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿದ್ದ ಯುವಜನರ ವಿರುದ್ಧ...

ಸಿಜೆಪಿ ಪ್ರತಿಭಟನೆ: ವಿದ್ಯಾರ್ಥಿಗಳ ಮೇಲೆ ‘ಪೆಲೆಟ್‌ ಗನ್’ ದಾಳಿ ದೃಢ; ನಿಯಮಾವಳಿಗಳನ್ನು ಉಲ್ಲಂಘಿಸಿ ಬಲಪ್ರಯೋಗ ನಡೆಸಿರುವ RAF

ನವದೆಹಲಿ: ತಮ್ಮ ಹಕ್ಕುಗಳಿಗಾಗಿ ಪ್ರಜಾಸತ್ತಾತ್ಮಕವಾಗಿ ಧ್ವನಿ ಎತ್ತುತ್ತಿದ್ದ ವಿದ್ಯಾರ್ಥಿ ಸಮುದಾಯದ ಮೇಲೆ ಕೇಂದ್ರದ ಸಶಸ್ತ್ರ ಪಡೆಗಳು ಎಸಗಿದ ದೌರ್ಜನ್ಯದ ಕರಾಳ ಮುಖ ಕೊನೆಗೂ ಅನಾವರಣಗೊಂಡಿದೆ. ಜುಲೈ 20ರಂದು ದೆಹಲಿಯ ಕನ್ಹಾಟ್ ಪ್ಲೇಸ್ ಪ್ರದೇಶದಲ್ಲಿ...

ಕೇವಲ ಪ್ರತಿಭಟಿಸಿದ್ದಕ್ಕೆ ವಿದ್ಯಾರ್ಥಿಗಳು ಜೈಲುಪಾಲು; ಗಂಗೆಯ ದೋಣಿಯಲ್ಲಿ ಬಿರಿಯಾನಿ ತಿಂದವರಿಗೂ ಸಿಗುತ್ತಿಲ್ಲ ಜಾಮೀನು : ನ್ಯಾಯಮೂರ್ತಿ ಉಜ್ಜಲ್ ಭುಯಾನ್ ಕಳವಳ

ಭಾರತದಲ್ಲಿ ಭಿನ್ನಾಭಿಪ್ರಾಯಗಳನ್ನು ಗೌರವಿಸುವ ಮತ್ತು ಅವುಗಳಿಗೆ ಅವಕಾಶ ನೀಡುವ ಸಾರ್ವಜನಿಕ ಸ್ಥಳಗಳು ಎಷ್ಟು ಕಡಿಮೆಯಾಗುತ್ತಿವೆ ಎಂದರೆ, ತಮ್ಮ ಹಕ್ಕುಗಳಿಗಾಗಿ ಪ್ರತಿಭಟಿಸುವ ವಿದ್ಯಾರ್ಥಿಗಳನ್ನು ಬಂಧಿಸಿ ಅವರಿಗೆ ಜಾಮೀನು ನಿರಾಕರಿಸಲಾಗುತ್ತಿದೆ ಎಂದು ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿ...

ಪ.ಬಂಗಾಳ: ನೂತನ ‘ಗೂಂಡಾ ಕಾಯ್ದೆ’ ಅಡಿ NEET ಪ್ರತಿಭಟನೆಯಲ್ಲಿ ಭಾಗಿಯಾದ 10 ಮುಸ್ಲಿಂ ಯುವಕರು ಸೇರಿದಂತೆ 11 ಜನರ ಬಂಧನ 

ಕೋಲ್ಕತ್ತಾ: ಕೇಂದ್ರದ ನರೇಂದ್ರ ಮೋದಿ ಸರ್ಕಾರದ ಶಿಕ್ಷಣ ಕ್ಷೇತ್ರದ ವೈಫಲ್ಯಗಳು ಹಾಗೂ ನೀಟ್-ಯುಜಿ (NEET-UG) ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣವನ್ನು ಖಂಡಿಸಿ ಶುಕ್ರವಾರ ಕೋಲ್ಕತ್ತಾದಲ್ಲಿ ನಡೆದ ಬೃಹತ್ ವಿದ್ಯಾರ್ಥಿ ಪ್ರತಿಭಟನೆಯು ತೀವ್ರ ರಾಜಕೀಯ...