Homeಮುಖಪುಟಏನಾಗಿದೆ ಈ ಮಠಾಧಿಪತಿಗಳಿಗೆ!?

ಏನಾಗಿದೆ ಈ ಮಠಾಧಿಪತಿಗಳಿಗೆ!?

- Advertisement -
- Advertisement -

ತಮ್ಮ ಜಾತಿ ಮೀಸಲಾತಿಗಾಗಿ, ಸಚಿವ ಸ್ಥಾನಕ್ಕಾಗಿ, ಮಠದ ಅನುದಾನಕ್ಕಾಗಿ ಬಾಯಿಬಾಯಿ ಬಿಡುವ ಮಠಾಧಿಪತಿಗಳು ದೇಶದಲ್ಲಿ ಭುಗಿಲೆದ್ದಿರುವ ಪೌರತ್ವ ಕಾಯ್ದೆ ತಿದ್ದುಪಡಿ ಕುರಿತು ಜನಪರವಾಗಿ ದನಿ ಎತ್ತದಿರುವುದು ಸಾಮಾಜಿಕ ದುರಂತವಲ್ಲವೇ?

ಧರ್ಮ ಮಾನವನನ್ನು ಸೃಷ್ಟಿಸಲಿಲ್ಲ. ಮಾನವ ಧರ್ಮವನ್ನು ಸೃಷ್ಟಿಸಿದ. ಧರ್ಮಗಳು ಬೆಳೆದಂತೆ ಧರ್ಮಗುರುಗಳು, ಮೌಲ್ವಿಗಳು, ಪಾದ್ರಿಗಳು, ಮೌಢ್ಯ ಕಂದಾಚಾರದ ಕಟ್ಟುಪಾಡುಗಳನ್ನು ಹೇರುತ್ತಾ ಬಂದರಲ್ಲದೆ ಯಾವಾಗ ಧರ್ಮ ರಾಜಕಾರಣದಲ್ಲಿ ಬೆರೆಯಿತೋ ಕೋಮುವಾದದ ರೂಪ ಪಡೆಯಿತು. ಏನಾಗಿದೆ ಕೆಲವು ಮಠಾಧೀಶರಿಗೆ? ತಮ್ಮ ಸ್ಥಾನಮಾನ ಪೀಠದ ಗೌರವವನ್ನು ಒತ್ತೆಯಿಟ್ಟು ತಮ್ಮ ತಮ್ಮ ಶಾಸಕರನ್ನು ಮಂತ್ರಿಗಳನ್ನಾಗಿ ಮಾಡಲು ಬಹಿರಂಗವಾಗಿಯೇ ಪ್ರಭಾವ ಬೀರುತ್ತಾ ಧಮಕಿಹಾಕುವ ಮಟ್ಟಕ್ಕೆ ಇಳಿದಿದ್ದಾರೆ. ತಮ್ಮ ಜಾತಿಗೆ ಇಷ್ಟೇ ಮೀಸಲಾತಿ ಕೊಡಬೇಕೆಂಬ ಹಕ್ಕೊತ್ತಾಯಕ್ಕಿಳಿಯುವುದು ಇಲ್ಲವಾದರೆ ನಮ್ಮ ಜಾತಿಯ ಮಂತ್ರಿಗಳು ಶಾಸಕರೆಲ್ಲರಿಂದ ರಾಜೀನಾಮೆ ಕೊಡಿಸಿದರೆ ಸರ್ಕಾರ ಉರುಳುತ್ತದೆಯೇ ಎಂಬ ಬಗ್ಗೆ ಅರಿವಿರಲಿ, ಎಂದೆಲ್ಲಾ ಪ್ರಶ್ನಿಸುವ ಅಧೋಗತಿಗೆ ಇಳಿಯುತ್ತಿದ್ದಾರೆ. ಯಾವುದೇ ಒಂದು ಜಾತಿಯಿಂದ ಯಾವ ರಾಜಕಾರಣಿಯೂ ಗೆಲ್ಲಲು ಸಾಧ್ಯವಿಲ್ಲವೆಂಬ ಪರಿವೇ ಇಲ್ಲದೆ ಗುಟುರುಹಾಕುವ ಇಂಥವರು ಮತದಾರರನ್ನು ಅಪಮಾನಿಸುತ್ತಿದ್ದಾರೆ. ಇದೆಲ್ಲಾ ಏಕೆ ಹೇಳಬೇಕಾಯಿತು ಎಂದರೆ ಇತ್ತೀಚೆಗೆ ಪಂಚಮಸಾಲಿ ಮಠಾಧೀಶರೊಬ್ಬರು ಬಹಿರಂಗವಾಗಿಯೇ ವೇದಿಕೆಯಲ್ಲಿ ನಮ್ಮವರು ಹದಿಮೂರು ಜನ ಶಾಸಕರಲ್ಲಿ ಮೂವರಿಗಾದರೂ ಸಚಿವ ಸ್ಥಾನ ಕೊಡಿ, ಇಲ್ಲವಾದರೆ ಕೆಳಗಿಳಿಯಬೇಕಾಗುತ್ತದೆಂದು ಮುಖ್ಯಮಂತ್ರಿಗೆ ಉರಿಗಣ್ಣು ಬಿಡುತ್ತಾ ಕೆಂಡಕಾರಿದ್ದನ್ನು ಮಾಧ್ಯಮಗಳು ತೋರಿಸಿವೆ. ಮರುದಿನದ ಸಭೆಯಲ್ಲಿ ವಾಲ್ಮೀಕಿ ಮಠದ ಸ್ವಾಮೀಜಿಯೊಬ್ಬರು ನಾವೂ ನಿಮ್ಮ ಬೆಂಬಲಕ್ಕಿದ್ದೇವೆಯೆಂದು ಬೆಂಬಲ ವ್ಯಕ್ತಪಡಿಸಿದರೆ, ಉಳಿದ ಮಠಾಧಿಪತಿಗಳು ಕಾವಿ ತೊಟ್ಟಿದ್ದೇವೆಂದು ಮರೆತು ಪರ ವಿರೋಧದ ಡಿಬೇಟ್‍ಗೆ ಇಳಿದಿರುವುದು ಧಾರ್ಮಿಕ ದುರಂತವಲ್ಲವೆ?

ಕುಂಚಿಟಿಗರ ಸ್ವಾಮಿಯ ನೇತೃತ್ವದಲ್ಲಿ ಕೆಲವು ಓಬಿಸಿಗಳ ಜೊತೆ ಮಾದಾರಪೀಠದ ಸ್ವಾಮಿಗಳು ಮುಖ್ಯಮಂತ್ರಿಗಳ ಧವಳಗಿರಿ ನಿವಾಸಕ್ಕೆ ತೆರಳಿ ಅವರ ಕಣ್ಣೊರೆಸಿ ಬೆಂಬಲಿಸಿ, ಸೆಡ್ಡು ಹೊಡೆದು ಹೊರ ಬಂದಿದ್ದಾರೆ. ಈ ಮಠಾಧಿಪತಿಗಳಿಗೇನಾಗಿದೆ? ಬಿಜೆಪಿ ಸರ್ಕಾರ ಬರುತ್ತಲೇ ಗುಂಪು ಕಟ್ಟಿಕೊಂಡು ಹೋಗಿ ನಮ್ಮ ಮಠಕ್ಕೆ ಇಷ್ಟೇ ಕೋಟಿ ಅನುದಾನ ಕೊಡಿರೆಂದು ವಸೂಲಿಗೆ ಇಳಿದು ಬಿಡುತ್ತಾರೆ. ಇದಕ್ಕೂ ಕಾರಣವಿಲ್ಲದಿಲ್ಲ ರಾಜಕಾರಣಿಗಳೂ ಅಷ್ಟೇ. ತಮ್ಮ ಗೆಲುವಿಗಾಗಿ ಜಾತಿ ಸ್ವಾಮಿಗಳ ಬೆನ್ನು ಬಿದ್ದು ಕೋಟಿಗಟ್ಟಲೆ ಕಾಣಿಕೆ ನೀಡಿ, ಮತಗಳನ್ನು ರಿಸರ್ವ್ ಮಾಡಿಸಿಕೊಳ್ಳಲು ಆರಂಭಿಸಿದ್ದರ ಫಲವೇ ಇದು. ನೀನನಗಿದ್ದರೆ ನಾನಿನಗೆ ಎಂಬಂತಹ ಒಡಂಬಡಿಕೆಯ ವ್ಯಾಪಾರ ನಡೆಯುತ್ತಿದೆ.

ಸಮ್ಮಿಶ್ರ ಸರ್ಕಾರವಿದ್ದಾಗಲೂ ಅಷ್ಟೇ. ನಮ್ಮ ಮುಖ್ಯಮಂತ್ರಿಯ ತಂಟೆಗೆ ಬಂದರೆ ಪರಿಣಾಮ ನೆಟ್ಟಗಿರಲ್ಲವೆಂದು ಆದಿಚುಂಚನಗಿರಿಯೇ ಗುಡುಗಿದ್ದುಂಟು. ಸಿದ್ಧರಾಮಯ್ಯನವರು ಸಿ.ಎಂ. ಆದಾಗ ಕಾಗಿನೆಲೆಯ ಮಠಾಧಿಪತಿಗಳು ರಕ್ಷಣೆಗೆ ಇಳಿದಿದ್ದುಂಟು. ರಾಜಕಾರಣದಲ್ಲಿ ಧರ್ಮಕಾರಣ ಬೆರೆತರೆ ಕೇಡಿಲ್ಲ. ಆದರೆ ಧರ್ಮದಲ್ಲಿ ರಾಜಕಾರಣ ಬೆರೆತರೆ ಒಳಿತಿಲ್ಲವೆಂಬುದು ಬಸವಣ್ಣನವರ ಕಾಲದಲ್ಲಿ ಸಾಬೀತಾಗಿದೆಯಾದರೂ ಅದರ ಬಗ್ಗೆ ರಾಜಕಾರಣಿಗಳು ಮಠಾಧೀಶರು ಮರೆತಂತೆ ಕಾಣುತ್ತಿದೆ. ಬಿಜೆಪಿ ಅಧಿಕಾರಕ್ಕೆ ಬಂದಾಗಲೆಲ್ಲಾ ಮಠಾಧಿಪತಿಗಳ ಕೊಲೆಸ್ಟ್ರಾಲ್ ಹೆಚ್ಚುತ್ತದೆ. ಸ್ವಾಮಿಗಳಾದರೂ ಘನತೆ ಹೆಚ್ಚಿಸಿಕೊಂಡಿದ್ದಾರೆಯೇ ಎಂದಾಲೋಚಿಸಿದರೆ ಕೆಲವರು ಜೈಲಿಗೆ ಹೋಗಿದ್ದಾರೆ. ಕೆಲವರ ಮೇಲಿನ ಅತ್ಯಾಚಾರದ ಕೇಸುಗಳು ಕೋರ್ಟಿನಲ್ಲಿ ಕೊಳೆಯುತ್ತಿವೆ. ಕೆಲವರು ನೆಲವನ್ನೇ ನುಂಗಿದ್ದಾರೆ. ಸ್ವಾಮೀಜಿಯೊಬ್ಬ ಉತ್ತರಪ್ರದೇಶದ ಮುಖ್ಯಮಂತ್ರಿಯಾಗಿ ಗೋದ್ರಾ ಪ್ರಕರಣವನ್ನು ಮರುಕಳಿಸುತ್ತಿದ್ದಾನೆ. ಉತ್ತರದಲ್ಲಿ ಯೋಗಪಟು ಬಾಬಾ ರಾಮ್‍ದೇವ್, ರವಿಶಂಕರ್ ಗುರೂಜಿ, ಜಗ್ಗಿ ವಾಸುದೇವ್ (ಇಲ್ಲಿನ ದಿವಂಗತ ಪೇಜಾವರಶ್ರೀಗಳಂತವರು) ಬಹಿರಂಗವಾಗಿಯೇ ಬಿಜೆಪಿಯ ಹಾಗೂ ಮೋದಿಯವರ ಬೆಂಬಲಕ್ಕೆ ನಿಂತವರು. ನೀವೆಲ್ಲಾ ರಾಜಕೀಯದಲ್ಲೇಕೆ ಮೂಗು ತೂರಿಸುವಿರಿ ಎಂದರೆ, ನನಗೊಬ್ಬರು ಸಮಜಾಯಿಷಿ ನೀಡಿದ್ದುಂಟು. ನಮ್ಮ ಸನಾತನ ಧರ್ಮ, ಪುರಾಣಗಳಲ್ಲೇ ಇದೆಲ್ಲಾ ನಡೆದು ಬಂದಿದೆ ಎನ್ನುತ್ತಾರೆ. ದೇವತೆಗಳಿಗೆ ವಸಿಷ್ಠ ಗುರುಗಳಾಗಿದ್ದರು, ರಾಕ್ಷಸರಿಗೆ ಶುಕ್ಲಾಚಾರ್ಯರು ಸಲಹೆ ನೀಡಿದ್ದುಂಟು. ಸಾಮಾನ್ಯ ಬಾಲಕ ಚಂದ್ರಗುಪ್ತನಿಗೆ ಚಾಣಕ್ಯ, ಸಳನನ್ನು ಹೋಯ್ಸಳನನ್ನಾಗಿಸಿದ್ದ ಸುದತ್ತ, ಹಕ್ಕಬುಕ್ಕರನ್ನು ಬೆಂಬಲಿಸಿದ ವಿದ್ಯಾರಣ್ಯ, ಗ್ರಾಮವಾಸಿ ಯುವಕ ಭರಮಣ್ಣನಾಯಕನಿಗೆ ಮಾರ್ಗದರ್ಶನವಿತ್ತು. ದೊರೆಪದವಿಗೇರಿಸಿದ ಮುರುಗೇಸ್ವಾಮಿಗಳನ್ನು ಉದಾಹರಿಸುತ್ತಾರೆ. ಇರಬಹುದು ಆದರೆ ಇವರೆಲ್ಲಾ ಗುರುಗಳಾಗಿ ಧರ್ಮಕಾರಣ ಮಾಡಿ ಪ್ರಜಾಹಿತ ಬಯಸಿದರೆ ವಿನಃ ರಾಜಕಾರಣ ಮಾಡಲಿಲ್ಲ. ಬಹುಮುಖ್ಯವಾಗಿ ಇವರಾರು ದೊರೆಯಾದವನ “ಜಾತಿಗೆ” ಸೇರಿದವರಲ್ಲವಾಗಿದ್ದರಿಂದಲೇ ಜಗದ್ಗುರುಗಳು ಎನಿಸಿಕೊಂಡರು. ಈಗಿರುವ ಎಲ್ಲರೂ ಜಾತಿ ಗುರುಗಳು, ಇರುವುವೆಲ್ಲಾ ಜಾತಿಮಠಗಳು ಎಂಬುದನ್ನು ಅವರುಗಳೇ ಸಾಬೀತು ಪಡಿಸುತ್ತಿದ್ದಾರೆ. ಹಿಂದಿನವರೆಲ್ಲಾ ಭಕ್ತಾಧಿಗಳ ನೆರವಿನಿಂದ ಮಠ ಕಟ್ಟಿ ಬೆಳೆಸಿದ್ದವರಾದ್ದರಿಂದ ಅವರಿಗೆ ಯಾರ ಹಂಗೂ ಇರಲಿಲ್ಲ. ಐಷಾರಾಮಿ ಮಠಗಳಲ್ಲಿದ್ದು, ಯಾವಾಗ ಸರ್ವ ಸಂಗ ಪರಿತ್ಯಾಗವನ್ನೇ ಮರೆತರೋ, ಕೋಟಿಗಟ್ಟಲೆ ಹಣಕ್ಕಾಗಿ ರಾಜಕಾರಣಿಗಳ ಎದುರು ಸಲಾಮ್ ಹೊಡೆದರೋ ಆಗಲೇ ಕಾವಿ ತನ್ನ ಕಿಮ್ಮತ್ತು ಕಳೆದುಕೊಂಡಿದೆ. ಖಾದಿಗಳ ಹಿಂದೆ ನಿಂತು ದರ್ಬಾರ್ ನಡೆಸುವ ಬದಲು, ತಮಗೆ ಬೇಕಾದವರನ್ನು ವಿವಿಧ ಪಕ್ಷಗಳಿಂದ ನಿಲ್ಲಿಸಿ, ಗೆಲ್ಲಿಸುವ ಪಡಿಪಾಟಲು ಬಿಟ್ಟು ಕಾವಿ ಕಿತ್ತೆಸೆದು ನೇರಾ ನೇರ ತಾವೇ ರಾಜಕೀಯಕ್ಕಿಳಿಯುವುದು ಇಬ್ಬಂದಿತನಕ್ಕಿಂತ ಮೇಲಲ್ಲವೇ? ತಮ್ಮ ಜಾತಿ ಮೀಸಲಾತಿಗಾಗಿ, ಸಚಿವಸ್ಥಾನಕ್ಕಾಗಿ, ಮಠದ ಅನುದಾನಕ್ಕಾಗಿ ಬಾಯಿ ಬಾಯಿ ಬಿಡುವ ಇವರುಗಳು ದೇಶದಲ್ಲಿ ಭುಗಿಲೆದ್ದಿರುವ ಪೌರತ್ವ ಕಾಯ್ದೆ ತಿದ್ದುಪಡಿ ಕುರಿತು ಜನಪರವಾಗಿ ದನಿ ಎತ್ತದಿರುವುದು ಸಾಮಾಜಿಕ ದುರಂತವಲ್ಲವೇ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಇರಾನ್‌ ಹಿಂಸಾಚಾರ : ಸಾವಿನ ಸಂಖ್ಯೆ 116ಕ್ಕೆ ಏರಿಕೆ

ಕಳೆದ ಎರಡು ವಾರಗಳಿಂದ ಇರಾನ್‌ನಲ್ಲಿ ನಡೆಯುತ್ತಿರುವ ಸರ್ಕಾರಿ ವಿರೋಧಿ ಪ್ರತಿಭಟನೆಗಳಲ್ಲಿ ಕನಿಷ್ಠ 116 ಜನರು ಸಾವನ್ನಪ್ಪಿದ್ದಾರೆ. ಅಧಿಕಾರಿಗಳು ಪ್ರತಿಭಟನಾ ನಿರತರ ಮೇಲೆ ಕಠಿಣ ಕ್ರಮದ ಎಚ್ಚರಿಕೆ ನೀಡಿದ್ದಾರೆ ಎಂದು ವರದಿಯಾಗಿದೆ. ಡಿಸೆಂಬರ್ 28ರಂದು ಪ್ರಾರಂಭವಾದ...

ಪಾಕಿಸ್ತಾನದ ಸಿಂಧ್‌ನಲ್ಲಿ 23 ವರ್ಷದ ಹಿಂದೂ ರೈತನನ್ನು ಗುಂಡಿಕ್ಕಿ ಕೊಂದ ಭೂಮಾಲೀಕರು 

ಕರಾಚಿ: ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ 23 ವರ್ಷದ ಹಿಂದೂ ರೈತನೊಬ್ಬ ತನ್ನ ಜಮೀನಿನಲ್ಲಿ ಆಶ್ರಯ ಮನೆ ನಿರ್ಮಿಸಿದ್ದಕ್ಕಾಗಿ ಆತನ ಮನೆ ಮಾಲೀಕರು ಗುಂಡಿಕ್ಕಿ ಕೊಂದಿದ್ದಾರೆ, ಇದು ಹಿಂದೂ ಸಮುದಾಯದಿಂದ ವ್ಯಾಪಕ ಪ್ರತಿಭಟನೆಗೆ ಎಂದು...

ದ್ವೇಷ ಭಾಷಣ ಮಸೂದೆ ರಾಜ್ಯಪಾಲರಿಂದ ತಿರಸ್ಕೃತವಾಗಿಲ್ಲ: ಸಿಎಂ ಸಿದ್ದರಾಮಯ್ಯ

ದ್ವೇಷ ಭಾಷಣ ಮಸೂದೆ ಸರ್ವಾನುಮತದಿಂದ ಅಂಗೀಕಾರವಾಗಿದ್ದು, ರಾಜ್ಯಪಾಲರು ಅದನ್ನು ವಾಪಸ್ ಕಳಿಸಿಲ್ಲ, ತಿರಸ್ಕರಿಸಿಲ್ಲ, ಅಂಕಿತವನ್ನೂ ಹಾಕಿಲ್ಲ. ಅವರು ಕರೆದಾಗ ಈ ಬಗ್ಗೆ ವಿವರಣೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಭಾನುವಾರ (ಜ.11) ಮಂಗಳೂರಿನಲ್ಲಿ...

ಐಸಿಸ್ ಗುರಿ ಮಾಡಿ ಸಿರಿಯಾ ಮೇಲೆ ವೈಮಾನಿಕ ದಾಳಿ ನಡೆಸಿದ ಅಮೆರಿಕ

ಸಿರಿಯಾದ ಇಸ್ಲಾಮಿಕ್ ಸ್ಟೇಟ್ (ಐಎಸ್) ಗುಂಪಿನ ತಾಣಗಳ ಮೇಲೆ ಅಮೆರಿಕ ಮತ್ತು ಅದರ ಪಾಲುದಾರ ಪಡೆಗಳು ದೊಡ್ಡ ಪ್ರಮಾಣದ ದಾಳಿಗಳನ್ನು ನಡೆಸಿವೆ ಎಂದು ಅಮೆರಿಕದ ಸೆಂಟ್ರಲ್ ಕಮಾಂಡ್ (ಸೆಂಟ್‌ಕಾಮ್) ಘೋಷಿಸಿದೆ. ಡಿಸೆಂಬರ್ 13ರಂದು ಸಿರಿಯಾದಲ್ಲಿ...

ವೆನೆಜುವೆಲಾದ ತೈಲ ಖರೀದಿಗೆ ಅಮೆರಿಕದ ಅನುಮತಿ ಪಡೆಯಲು ರಿಲಯನ್ಸ್ ಮಾತುಕತೆ : ವರದಿ

ಭಾರತದ ರಿಲಯನ್ಸ್ ಇಂಡಸ್ಟ್ರೀಸ್ ವೆನೆಜುವೆಲಾದ ಕಚ್ಚಾ ತೈಲ ಖರೀದಿಯನ್ನು ಪುನರಾರಂಭಿಸಲು ಅಮೆರಿಕದ ಅನುಮೋದನೆಯನ್ನು ಕೋರುತ್ತಿದೆ ಎಂದು ಈ ವಿಷಯದ ಬಗ್ಗೆ ಗೊತ್ತಿರುವ ಎರಡು ಮೂಲಗಳು ಶುಕ್ರವಾರ ತಿಳಿಸಿವೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್...

ಐ-ಪ್ಯಾಕ್‌ ಮೇಲೆ ದಾಳಿ | ಇಡಿ ಅಧಿಕಾರಿಗಳ ವಿರುದ್ಧ ತನಿಖೆ ಪ್ರಾರಂಭಿಸಿದ ಕೋಲ್ಕತ್ತಾ ಪೊಲೀಸರು : ಸುಪ್ರೀಂ ಕೋರ್ಟ್‌ನಲ್ಲಿ ಕೇವಿಯಟ್ ಸಲ್ಲಿಸಿದ ಪ. ಬಂಗಾಳ ಸರ್ಕಾರ

ಐ-ಪ್ಯಾಕ್ ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ ನಡೆಸಿದ ಸಂದರ್ಭದಲ್ಲಿ ದಾಖಲೆಗಳ ಕಳ್ಳತನದ ಆರೋಪದ ಮೇಲೆ ಕೋಲ್ಕತ್ತಾ ಪೊಲೀಸರು ಶನಿವಾರ (ಜ.10)...

ಟ್ರಂಪ್ ಸಂಚಿಗೆ ತಿರುಗೇಟು : ನಾವು ಯಾರ ಅಡಿಯಾಳಾಗಲು ಸಿದ್ದರಿಲ್ಲ ಎಂದ ಗ್ರೀನ್‌ಲ್ಯಾಂಡ್‌ನ ರಾಜಕೀಯ ಪಕ್ಷಗಳು

ವೆನೆಜುವೆಲಾ ಬಳಿಕ ಖನಿಜ-ಸಮೃದ್ಧ ಡ್ಯಾನಿಶ್ (ಡೆನ್ಮಾರ್ಕ್‌) ಸ್ವಾಯತ್ತ ಪ್ರದೇಶವಾದ ಗ್ರೀನ್‌ ಲ್ಯಾಂಡ್‌ ಮೇಲೆ ಬಲಪ್ರಯೋಗ ಮಾಡಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಯೋಜಿಸುತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗ್ರೀನ್‌ಲ್ಯಾಂಡ್‌ನ ರಾಜಕೀಯ ಪಕ್ಷಗಳು...

ಮತ್ತೆ ಒಂದಾದ ಎನ್‌ಸಿಪಿ ಬಣಗಳು : ಸುಪ್ರಿಯಾ ಸುಳೆ ಜೊತೆ ವೇದಿಕೆ ಹಂಚಿಕೊಂಡ ಅಜಿತ್ ಪವಾರ್, ಜಂಟಿ ಪ್ರಣಾಳಿಕೆ ಬಿಡುಗಡೆ

ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಮತ್ತು ಅವರ ಚಿಕ್ಕಪ್ಪ ಶರದ್ ಪವಾರ್ ನೇತೃತ್ವದ ಎನ್‌ಸಿಪಿ (ಎಸ್‌ಪಿ) ಶನಿವಾರ (ಜ.10) ಪುಣೆ ಮಹಾನಗರ ಪಾಲಿಕೆಗೆ ನಡೆಯಲಿರುವ ಚುನಾವಣೆಗೆ ಜಂಟಿ ಪ್ರಣಾಳಿಕೆಯನ್ನು ಬಿಡುಗಡೆ...

ಮಹಾರಾಷ್ಟ್ರ : ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿಯನ್ನು ಕೌನ್ಸಿಲರ್ ಮಾಡಿದ ಬಿಜೆಪಿ

ಬದ್ಲಾಪುರ ಲೈಂಗಿಕ ದೌರ್ಜನ್ಯ ಪ್ರಕರಣದ ಸಹ ಆರೋಪಿ ಮತ್ತು ಶಾಲೆಯೊಂದರ ಮಾಜಿ ಕಾರ್ಯದರ್ಶಿ ತುಷಾರ್ ಆಪ್ಟೆ ಎಂಬಾತನನ್ನು ಥಾಣೆ ಜಿಲ್ಲೆಯ ಕುಲ್ಗಾಂವ್-ಬದ್ಲಾಪುರ ಮುನ್ಸಿಪಲ್ ಕೌನ್ಸಿಲ್‌ಗೆ ಬಿಜೆಪಿ ನಾಮನಿರ್ದೇಶನ ಮಾಡಿದೆ. ಮುನ್ಸಿಪಲ್ ಕೌನ್ಸಿಲ್ ಅಧ್ಯಕ್ಷೆ ರುಚಿತಾ...

ಕಳ್ಳನೆಂದು ಸುಳ್ಳಾರೋಪ ಹೊರಿಸಿ ಜೈಲಿಗಟ್ಟಿದ ಪೊಲೀಸರು : ಸಂತ್ರಸ್ತಗೆ 14 ಲಕ್ಷ ರೂ. ಪರಿಹಾರ ನೀಡಲು ಕೋರ್ಟ್ ಆದೇಶ

ಕಳ್ಳನೆಂದು ಸುಳ್ಳಾರೋಪ ಹೊರಿಸಿ ಪೊಲೀಸರು ಜೈಲಿಗಟ್ಟಿದ ವ್ಯಕ್ತಿಗೆ 14 ಲಕ್ಷ ರೂಪಾಯಿ ಪರಿಹಾರ ಒದಗಿಸುವಂತೆ ಕೇರಳ ಸರ್ಕಾರಕ್ಕೆ ಹೈಕೋರ್ಟ್ ಆದೇಶಿಸಿದೆ. ಕಣ್ಣೂರು ಮೂಲದ ವಿ.ಕೆ ತಾಜುದ್ದೀನ್ ಕಾನೂನು ಹೋರಾಟದಲ್ಲಿ ಗೆದ್ದು ಪರಿಹಾರ ಪಡೆದ ವ್ಯಕ್ತಿ....