Homeಮುಖಪುಟಏನಾಗಿದೆ ಈ ಮಠಾಧಿಪತಿಗಳಿಗೆ!?

ಏನಾಗಿದೆ ಈ ಮಠಾಧಿಪತಿಗಳಿಗೆ!?

- Advertisement -
- Advertisement -

ತಮ್ಮ ಜಾತಿ ಮೀಸಲಾತಿಗಾಗಿ, ಸಚಿವ ಸ್ಥಾನಕ್ಕಾಗಿ, ಮಠದ ಅನುದಾನಕ್ಕಾಗಿ ಬಾಯಿಬಾಯಿ ಬಿಡುವ ಮಠಾಧಿಪತಿಗಳು ದೇಶದಲ್ಲಿ ಭುಗಿಲೆದ್ದಿರುವ ಪೌರತ್ವ ಕಾಯ್ದೆ ತಿದ್ದುಪಡಿ ಕುರಿತು ಜನಪರವಾಗಿ ದನಿ ಎತ್ತದಿರುವುದು ಸಾಮಾಜಿಕ ದುರಂತವಲ್ಲವೇ?

ಧರ್ಮ ಮಾನವನನ್ನು ಸೃಷ್ಟಿಸಲಿಲ್ಲ. ಮಾನವ ಧರ್ಮವನ್ನು ಸೃಷ್ಟಿಸಿದ. ಧರ್ಮಗಳು ಬೆಳೆದಂತೆ ಧರ್ಮಗುರುಗಳು, ಮೌಲ್ವಿಗಳು, ಪಾದ್ರಿಗಳು, ಮೌಢ್ಯ ಕಂದಾಚಾರದ ಕಟ್ಟುಪಾಡುಗಳನ್ನು ಹೇರುತ್ತಾ ಬಂದರಲ್ಲದೆ ಯಾವಾಗ ಧರ್ಮ ರಾಜಕಾರಣದಲ್ಲಿ ಬೆರೆಯಿತೋ ಕೋಮುವಾದದ ರೂಪ ಪಡೆಯಿತು. ಏನಾಗಿದೆ ಕೆಲವು ಮಠಾಧೀಶರಿಗೆ? ತಮ್ಮ ಸ್ಥಾನಮಾನ ಪೀಠದ ಗೌರವವನ್ನು ಒತ್ತೆಯಿಟ್ಟು ತಮ್ಮ ತಮ್ಮ ಶಾಸಕರನ್ನು ಮಂತ್ರಿಗಳನ್ನಾಗಿ ಮಾಡಲು ಬಹಿರಂಗವಾಗಿಯೇ ಪ್ರಭಾವ ಬೀರುತ್ತಾ ಧಮಕಿಹಾಕುವ ಮಟ್ಟಕ್ಕೆ ಇಳಿದಿದ್ದಾರೆ. ತಮ್ಮ ಜಾತಿಗೆ ಇಷ್ಟೇ ಮೀಸಲಾತಿ ಕೊಡಬೇಕೆಂಬ ಹಕ್ಕೊತ್ತಾಯಕ್ಕಿಳಿಯುವುದು ಇಲ್ಲವಾದರೆ ನಮ್ಮ ಜಾತಿಯ ಮಂತ್ರಿಗಳು ಶಾಸಕರೆಲ್ಲರಿಂದ ರಾಜೀನಾಮೆ ಕೊಡಿಸಿದರೆ ಸರ್ಕಾರ ಉರುಳುತ್ತದೆಯೇ ಎಂಬ ಬಗ್ಗೆ ಅರಿವಿರಲಿ, ಎಂದೆಲ್ಲಾ ಪ್ರಶ್ನಿಸುವ ಅಧೋಗತಿಗೆ ಇಳಿಯುತ್ತಿದ್ದಾರೆ. ಯಾವುದೇ ಒಂದು ಜಾತಿಯಿಂದ ಯಾವ ರಾಜಕಾರಣಿಯೂ ಗೆಲ್ಲಲು ಸಾಧ್ಯವಿಲ್ಲವೆಂಬ ಪರಿವೇ ಇಲ್ಲದೆ ಗುಟುರುಹಾಕುವ ಇಂಥವರು ಮತದಾರರನ್ನು ಅಪಮಾನಿಸುತ್ತಿದ್ದಾರೆ. ಇದೆಲ್ಲಾ ಏಕೆ ಹೇಳಬೇಕಾಯಿತು ಎಂದರೆ ಇತ್ತೀಚೆಗೆ ಪಂಚಮಸಾಲಿ ಮಠಾಧೀಶರೊಬ್ಬರು ಬಹಿರಂಗವಾಗಿಯೇ ವೇದಿಕೆಯಲ್ಲಿ ನಮ್ಮವರು ಹದಿಮೂರು ಜನ ಶಾಸಕರಲ್ಲಿ ಮೂವರಿಗಾದರೂ ಸಚಿವ ಸ್ಥಾನ ಕೊಡಿ, ಇಲ್ಲವಾದರೆ ಕೆಳಗಿಳಿಯಬೇಕಾಗುತ್ತದೆಂದು ಮುಖ್ಯಮಂತ್ರಿಗೆ ಉರಿಗಣ್ಣು ಬಿಡುತ್ತಾ ಕೆಂಡಕಾರಿದ್ದನ್ನು ಮಾಧ್ಯಮಗಳು ತೋರಿಸಿವೆ. ಮರುದಿನದ ಸಭೆಯಲ್ಲಿ ವಾಲ್ಮೀಕಿ ಮಠದ ಸ್ವಾಮೀಜಿಯೊಬ್ಬರು ನಾವೂ ನಿಮ್ಮ ಬೆಂಬಲಕ್ಕಿದ್ದೇವೆಯೆಂದು ಬೆಂಬಲ ವ್ಯಕ್ತಪಡಿಸಿದರೆ, ಉಳಿದ ಮಠಾಧಿಪತಿಗಳು ಕಾವಿ ತೊಟ್ಟಿದ್ದೇವೆಂದು ಮರೆತು ಪರ ವಿರೋಧದ ಡಿಬೇಟ್‍ಗೆ ಇಳಿದಿರುವುದು ಧಾರ್ಮಿಕ ದುರಂತವಲ್ಲವೆ?

ಕುಂಚಿಟಿಗರ ಸ್ವಾಮಿಯ ನೇತೃತ್ವದಲ್ಲಿ ಕೆಲವು ಓಬಿಸಿಗಳ ಜೊತೆ ಮಾದಾರಪೀಠದ ಸ್ವಾಮಿಗಳು ಮುಖ್ಯಮಂತ್ರಿಗಳ ಧವಳಗಿರಿ ನಿವಾಸಕ್ಕೆ ತೆರಳಿ ಅವರ ಕಣ್ಣೊರೆಸಿ ಬೆಂಬಲಿಸಿ, ಸೆಡ್ಡು ಹೊಡೆದು ಹೊರ ಬಂದಿದ್ದಾರೆ. ಈ ಮಠಾಧಿಪತಿಗಳಿಗೇನಾಗಿದೆ? ಬಿಜೆಪಿ ಸರ್ಕಾರ ಬರುತ್ತಲೇ ಗುಂಪು ಕಟ್ಟಿಕೊಂಡು ಹೋಗಿ ನಮ್ಮ ಮಠಕ್ಕೆ ಇಷ್ಟೇ ಕೋಟಿ ಅನುದಾನ ಕೊಡಿರೆಂದು ವಸೂಲಿಗೆ ಇಳಿದು ಬಿಡುತ್ತಾರೆ. ಇದಕ್ಕೂ ಕಾರಣವಿಲ್ಲದಿಲ್ಲ ರಾಜಕಾರಣಿಗಳೂ ಅಷ್ಟೇ. ತಮ್ಮ ಗೆಲುವಿಗಾಗಿ ಜಾತಿ ಸ್ವಾಮಿಗಳ ಬೆನ್ನು ಬಿದ್ದು ಕೋಟಿಗಟ್ಟಲೆ ಕಾಣಿಕೆ ನೀಡಿ, ಮತಗಳನ್ನು ರಿಸರ್ವ್ ಮಾಡಿಸಿಕೊಳ್ಳಲು ಆರಂಭಿಸಿದ್ದರ ಫಲವೇ ಇದು. ನೀನನಗಿದ್ದರೆ ನಾನಿನಗೆ ಎಂಬಂತಹ ಒಡಂಬಡಿಕೆಯ ವ್ಯಾಪಾರ ನಡೆಯುತ್ತಿದೆ.

ಸಮ್ಮಿಶ್ರ ಸರ್ಕಾರವಿದ್ದಾಗಲೂ ಅಷ್ಟೇ. ನಮ್ಮ ಮುಖ್ಯಮಂತ್ರಿಯ ತಂಟೆಗೆ ಬಂದರೆ ಪರಿಣಾಮ ನೆಟ್ಟಗಿರಲ್ಲವೆಂದು ಆದಿಚುಂಚನಗಿರಿಯೇ ಗುಡುಗಿದ್ದುಂಟು. ಸಿದ್ಧರಾಮಯ್ಯನವರು ಸಿ.ಎಂ. ಆದಾಗ ಕಾಗಿನೆಲೆಯ ಮಠಾಧಿಪತಿಗಳು ರಕ್ಷಣೆಗೆ ಇಳಿದಿದ್ದುಂಟು. ರಾಜಕಾರಣದಲ್ಲಿ ಧರ್ಮಕಾರಣ ಬೆರೆತರೆ ಕೇಡಿಲ್ಲ. ಆದರೆ ಧರ್ಮದಲ್ಲಿ ರಾಜಕಾರಣ ಬೆರೆತರೆ ಒಳಿತಿಲ್ಲವೆಂಬುದು ಬಸವಣ್ಣನವರ ಕಾಲದಲ್ಲಿ ಸಾಬೀತಾಗಿದೆಯಾದರೂ ಅದರ ಬಗ್ಗೆ ರಾಜಕಾರಣಿಗಳು ಮಠಾಧೀಶರು ಮರೆತಂತೆ ಕಾಣುತ್ತಿದೆ. ಬಿಜೆಪಿ ಅಧಿಕಾರಕ್ಕೆ ಬಂದಾಗಲೆಲ್ಲಾ ಮಠಾಧಿಪತಿಗಳ ಕೊಲೆಸ್ಟ್ರಾಲ್ ಹೆಚ್ಚುತ್ತದೆ. ಸ್ವಾಮಿಗಳಾದರೂ ಘನತೆ ಹೆಚ್ಚಿಸಿಕೊಂಡಿದ್ದಾರೆಯೇ ಎಂದಾಲೋಚಿಸಿದರೆ ಕೆಲವರು ಜೈಲಿಗೆ ಹೋಗಿದ್ದಾರೆ. ಕೆಲವರ ಮೇಲಿನ ಅತ್ಯಾಚಾರದ ಕೇಸುಗಳು ಕೋರ್ಟಿನಲ್ಲಿ ಕೊಳೆಯುತ್ತಿವೆ. ಕೆಲವರು ನೆಲವನ್ನೇ ನುಂಗಿದ್ದಾರೆ. ಸ್ವಾಮೀಜಿಯೊಬ್ಬ ಉತ್ತರಪ್ರದೇಶದ ಮುಖ್ಯಮಂತ್ರಿಯಾಗಿ ಗೋದ್ರಾ ಪ್ರಕರಣವನ್ನು ಮರುಕಳಿಸುತ್ತಿದ್ದಾನೆ. ಉತ್ತರದಲ್ಲಿ ಯೋಗಪಟು ಬಾಬಾ ರಾಮ್‍ದೇವ್, ರವಿಶಂಕರ್ ಗುರೂಜಿ, ಜಗ್ಗಿ ವಾಸುದೇವ್ (ಇಲ್ಲಿನ ದಿವಂಗತ ಪೇಜಾವರಶ್ರೀಗಳಂತವರು) ಬಹಿರಂಗವಾಗಿಯೇ ಬಿಜೆಪಿಯ ಹಾಗೂ ಮೋದಿಯವರ ಬೆಂಬಲಕ್ಕೆ ನಿಂತವರು. ನೀವೆಲ್ಲಾ ರಾಜಕೀಯದಲ್ಲೇಕೆ ಮೂಗು ತೂರಿಸುವಿರಿ ಎಂದರೆ, ನನಗೊಬ್ಬರು ಸಮಜಾಯಿಷಿ ನೀಡಿದ್ದುಂಟು. ನಮ್ಮ ಸನಾತನ ಧರ್ಮ, ಪುರಾಣಗಳಲ್ಲೇ ಇದೆಲ್ಲಾ ನಡೆದು ಬಂದಿದೆ ಎನ್ನುತ್ತಾರೆ. ದೇವತೆಗಳಿಗೆ ವಸಿಷ್ಠ ಗುರುಗಳಾಗಿದ್ದರು, ರಾಕ್ಷಸರಿಗೆ ಶುಕ್ಲಾಚಾರ್ಯರು ಸಲಹೆ ನೀಡಿದ್ದುಂಟು. ಸಾಮಾನ್ಯ ಬಾಲಕ ಚಂದ್ರಗುಪ್ತನಿಗೆ ಚಾಣಕ್ಯ, ಸಳನನ್ನು ಹೋಯ್ಸಳನನ್ನಾಗಿಸಿದ್ದ ಸುದತ್ತ, ಹಕ್ಕಬುಕ್ಕರನ್ನು ಬೆಂಬಲಿಸಿದ ವಿದ್ಯಾರಣ್ಯ, ಗ್ರಾಮವಾಸಿ ಯುವಕ ಭರಮಣ್ಣನಾಯಕನಿಗೆ ಮಾರ್ಗದರ್ಶನವಿತ್ತು. ದೊರೆಪದವಿಗೇರಿಸಿದ ಮುರುಗೇಸ್ವಾಮಿಗಳನ್ನು ಉದಾಹರಿಸುತ್ತಾರೆ. ಇರಬಹುದು ಆದರೆ ಇವರೆಲ್ಲಾ ಗುರುಗಳಾಗಿ ಧರ್ಮಕಾರಣ ಮಾಡಿ ಪ್ರಜಾಹಿತ ಬಯಸಿದರೆ ವಿನಃ ರಾಜಕಾರಣ ಮಾಡಲಿಲ್ಲ. ಬಹುಮುಖ್ಯವಾಗಿ ಇವರಾರು ದೊರೆಯಾದವನ “ಜಾತಿಗೆ” ಸೇರಿದವರಲ್ಲವಾಗಿದ್ದರಿಂದಲೇ ಜಗದ್ಗುರುಗಳು ಎನಿಸಿಕೊಂಡರು. ಈಗಿರುವ ಎಲ್ಲರೂ ಜಾತಿ ಗುರುಗಳು, ಇರುವುವೆಲ್ಲಾ ಜಾತಿಮಠಗಳು ಎಂಬುದನ್ನು ಅವರುಗಳೇ ಸಾಬೀತು ಪಡಿಸುತ್ತಿದ್ದಾರೆ. ಹಿಂದಿನವರೆಲ್ಲಾ ಭಕ್ತಾಧಿಗಳ ನೆರವಿನಿಂದ ಮಠ ಕಟ್ಟಿ ಬೆಳೆಸಿದ್ದವರಾದ್ದರಿಂದ ಅವರಿಗೆ ಯಾರ ಹಂಗೂ ಇರಲಿಲ್ಲ. ಐಷಾರಾಮಿ ಮಠಗಳಲ್ಲಿದ್ದು, ಯಾವಾಗ ಸರ್ವ ಸಂಗ ಪರಿತ್ಯಾಗವನ್ನೇ ಮರೆತರೋ, ಕೋಟಿಗಟ್ಟಲೆ ಹಣಕ್ಕಾಗಿ ರಾಜಕಾರಣಿಗಳ ಎದುರು ಸಲಾಮ್ ಹೊಡೆದರೋ ಆಗಲೇ ಕಾವಿ ತನ್ನ ಕಿಮ್ಮತ್ತು ಕಳೆದುಕೊಂಡಿದೆ. ಖಾದಿಗಳ ಹಿಂದೆ ನಿಂತು ದರ್ಬಾರ್ ನಡೆಸುವ ಬದಲು, ತಮಗೆ ಬೇಕಾದವರನ್ನು ವಿವಿಧ ಪಕ್ಷಗಳಿಂದ ನಿಲ್ಲಿಸಿ, ಗೆಲ್ಲಿಸುವ ಪಡಿಪಾಟಲು ಬಿಟ್ಟು ಕಾವಿ ಕಿತ್ತೆಸೆದು ನೇರಾ ನೇರ ತಾವೇ ರಾಜಕೀಯಕ್ಕಿಳಿಯುವುದು ಇಬ್ಬಂದಿತನಕ್ಕಿಂತ ಮೇಲಲ್ಲವೇ? ತಮ್ಮ ಜಾತಿ ಮೀಸಲಾತಿಗಾಗಿ, ಸಚಿವಸ್ಥಾನಕ್ಕಾಗಿ, ಮಠದ ಅನುದಾನಕ್ಕಾಗಿ ಬಾಯಿ ಬಾಯಿ ಬಿಡುವ ಇವರುಗಳು ದೇಶದಲ್ಲಿ ಭುಗಿಲೆದ್ದಿರುವ ಪೌರತ್ವ ಕಾಯ್ದೆ ತಿದ್ದುಪಡಿ ಕುರಿತು ಜನಪರವಾಗಿ ದನಿ ಎತ್ತದಿರುವುದು ಸಾಮಾಜಿಕ ದುರಂತವಲ್ಲವೇ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪ್ರತಿಭಟನೆಗೆ ಹೋಗುವ ಮಹಿಳೆಯರು ಗ್ಯಾಂಗ್‌ರೇಪ್‌ ಆನಂದಿಸುತ್ತಾರೆ ಎಂದಿದ್ದ ಟಿ.ಜಿ. ಮೋಹನ್‌ದಾಸ್‌ ವಿರುದ್ಧ ಎಫ್‌ಐಆರ್‌ ದಾಖಲು

ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿರುವವರ ಮೇಲೆ, ನನ್ನ ಕೈಯಲ್ಲಿ ಅಧಿಕಾರವಿದ್ದರೆ ಗುಂಡು ಹಾರಿಸುತ್ತಿದ್ದೆ ಎಂದು ಇತ್ತೀಚಿನ ಯೂಟ್ಯೂಬ್ ವೀಡಿಯೊದಲ್ಲಿ ಹೇಳಿಕೆ ನೀಡಿದ್ದ ಹಿಂದುತ್ವವಾದಿ ಚಿಂತಕ ಟಿ.ಜಿ. ಮೋಹನ್‌ದಾಸ್ ವಿರುದ್ಧ ತಿರುವನಂತಪುರಂ ಸಿಟಿ...

ಫ್ರಾನ್ಸ್‌ನಲ್ಲಿ ಕೆಲಸದ ಸಮಯ ಟ್ರ್ಯಾಕಿಂಗ್ ಲೋಪ: ಇನ್ಫೋಸಿಸ್‌ಗೆ ₹1.9 ಕೋಟಿ ದಂಡ: ನಾರಾಯಣಮೂರ್ತಿಯವರ ‘70 ಗಂಟೆ ಶ್ರಮ’ದ ಮಾದರಿ ಟ್ರೋಲ್

ಭಾರತೀಯ ಐಟಿ ರಫ್ತು ಸೇವಾ ರಂಗದ ಬೃಹತ್ ಸಂಸ್ಥೆಯಾದ ಇನ್ಫೋಸಿಸ್‌ಗೆ ಫ್ರಾನ್ಸ್‌ನಲ್ಲಿ ಹಿನ್ನಡೆಯಾಗಿದೆ. ಉದ್ಯೋಗಿಗಳ ಕೆಲಸದ ಸಮಯವನ್ನು ದಾಖಲಿಸುವ ವ್ಯವಸ್ಥೆಯಲ್ಲಿನ ನ್ಯೂನತೆಗಳು ಹಾಗೂ ಸ್ಥಳೀಯ ಕಾರ್ಮಿಕ ನಿಯಮಾವಳಿಗಳ ಪಾಲನೆಯಲ್ಲಿ ಕಂಡುಬಂದ ಲೋಪಗಳ ಹಿನ್ನೆಲೆಯಲ್ಲಿ...

ವೋಟರ್ ಐಡಿ, ಬ್ಯಾಂಕ್ ಪಾಸ್‌ಬುಕ್, ಆಧಾರ್, ಜಮೀನಿನ ಹಕ್ಕು ಪತ್ರ ಇದ್ದ ಮಾತ್ರಕ್ಕೆ ಭಾರತೀಯ ಪ್ರಜೆಯಾಗಲ್ಲ: ಕಲ್ಕತ್ತಾ ಹೈಕೋರ್ಟ್

ಆಧಾರ್ ಕಾರ್ಡ್, ಪಾನ್ ಕಾರ್ಡ್, ಮತದಾರರ ಗುರುತಿನ ಚೀಟಿ, ಬ್ಯಾಂಕ್ ಪಾಸ್‌ಬುಕ್ ಮತ್ತು ಪಿತ್ರಾರ್ಜಿತ ಜಮೀನಿನ ದಾಖಲೆಗಳು ಭಾರತೀಯ ಪೌರತ್ವವನ್ನು ನಿರೂಪಿಸಲು ಅಂತಿಮ ಅಥವಾ ನಿರ್ಣಾಯಕ ಪುರಾವೆಗಳಲ್ಲ ಎಂದು ಕಲ್ಕತ್ತಾ ಹೈಕೋರ್ಟ್ ಮಹತ್ವದ...

‘ನಿಮ್ಮ ಸಮಯ ಬಂದಿದೆ’: ಟೌನ್‌ಶಿಪ್ ಯೋಜನೆ ವಿರುದ್ಧದ ಪ್ರತಿಭಟನೆಗೆ 500 ದಿನ: ‘Gen-Z’ ಯುವಕರ ಬೆಂಬಲ ಕೋರಿದ ಬಿಡದಿ ರೈತರು

ಬೆಂಗಳೂರು: ಪ್ರಸ್ತಾವಿತ ಬಿಡದಿ ಟೌನ್‌ಶಿಪ್ ಯೋಜನೆ ವಿರುದ್ಧ ಕೃಷಿ ಭೂಮಿ ಉಳಿವಿಗಾಗಿ ನಡೆಯುತ್ತಿರುವ ರೈತರ ಸುದೀರ್ಘ ಹೋರಾಟವು ಇದೀಗ ಒಂದು ಪ್ರಮುಖ ಘಟ್ಟಕ್ಕೆ ಬಂದು ತಲುಪಿದೆ. ಭೂಸ್ವಾಧೀನದ ವಿರುದ್ಧ ಸತತವಾಗಿ ನಡೆಯುತ್ತಿರುವ ಈ...

ಕೊಡಗಿನ ಆದಿವಾಸಿ ಹಾಡಿಗಳಲ್ಲಿ ಎಸ್‌ಐಆರ್ ಅವ್ಯವಸ್ಥೆ : ಬಿಎಲ್‌ಒಗಳಿಗೆ ತರಬೇತಿಯ ಕೊರತೆ, ಇನ್ನೂ ತಲುಪದ ಗಣತಿ ಫಾರಂ

ಕರ್ನಾಟಕದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆ ಬಹಳ ಯಶಸ್ವಿಯಾಗಿ ನಡೆಯುತ್ತಿದೆ, ಮತದಾರರಿಗೆ ಎಲ್ಲಾ ರೀತಿಯ ಸಹಾಯಗಳನ್ನು ಒದಗಿಸಲಾಗುತ್ತಿದೆ ಎಂದು ರಾಜ್ಯ ಮುಖ್ಯ ಚುನಾವಣಾ ಆಯುಕ್ತ ಅನ್ಬುಕುಮಾರ್ ಅವರು ಪದೇ...

SIR: ಉಡುಪಿಯಲ್ಲಿ ಕರ್ತವ್ಯನಿರತ BLO ಮೇಲೆ ಹಲ್ಲೆಗೆತ್ನಿಸಿದ ಮಾಜಿ ಪಂಚಾಯತ್ ಅಧ್ಯಕ್ಷ, FIR ದಾಖಲು

ಚುನಾವಣಾ ಮತದಾರರ ಪಟ್ಟಿ ಪರಿಷ್ಕರಣೆ (SIR) ಕರ್ತವ್ಯದಲ್ಲಿದ್ದ ಅಂಗನವಾಡಿ ಕಾರ್ಯಕರ್ತೆ ಹಾಗೂ ಬಿಎಲ್‌ಒ (BLO) ಮಹಿಳೆ ಮೇಲೆ ಕರ್ತವ್ಯಕ್ಕೆ ಅಡ್ಡಿಪಡಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿ, ಕೊಲೆ ಬೆದರಿಕೆ ಹಾಕಿದ ಗಂಭೀರ ಆರೋಪ ಉಡುಪಿ...

ಕೋಟ್ಯಾಂತರ ವಿದ್ಯಾರ್ಥಿಗಳ ಭವಿಷ್ಯದ ಜೊತೆ NTA ಚೆಲ್ಲಾಟ: RTI ನಲ್ಲಿ ಬಯಲಾಯ್ತು NTA ಕರ್ಮಕಾಂಡ

ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (NTA) ಎನ್ನುವ ಈ ಸರ್ಕಾರಿ ಸಂಸ್ಥೆಯ ಮೇಲೆ ಪ್ರತಿವರ್ಷ ಕೋಟ್ಯಂತರ ವಿದ್ಯಾರ್ಥಿಗಳು ತಮ್ಮ ಭವಿಷ್ಯದ ಕನಸುಗಳನ್ನು ಇಟ್ಟುಕೊಳ್ಳುತ್ತಾರೆ. 2018ರಲ್ಲಿ ಸ್ಥಾಪನೆಯಾದ ದಿನದಿಂದ ಇಲ್ಲಿಯವರೆಗೆ ಎನ್‌ಟಿಎ ಸುಮಾರು 270ಕ್ಕೂ ಹೆಚ್ಚು...

ಬಾಗಲಕೋಟೆ: ಪತಿಯಿಂದ 23 ವರ್ಷದ ಪತ್ನಿಯ ಕ್ರೂರ ಕೊಲೆ, ಪೋಷಕರಿಗೆ ವೀಡಿಯೊ ಕರೆ ಮಾಡಿ ಮಗಳ ಸಾವು-ಬದುಕಿನ ಹೋರಾಟ ತೋರಿಸಿದ ವಿಕೃತ ಪತಿ

ಬಾಗಲಕೋಟೆ: ಪತಿಯೋರ್ವ ತನ್ನ 23 ವರ್ಷದ ಪತ್ನಿಯ ಮೇಲೆ ವಿವಾಹೇತರ ಅನೈತಿಕ ಸಂಬಂಧದ ಶಂಕೆ ವ್ಯಕ್ತಪಡಿಸಿ, ಆಕೆಯ ಮೇಲೆ ಮರದ ದಿಮ್ಮಿಯಿಂದ ಕ್ರೂರವಾಗಿ ಹಲ್ಲೆ ನಡೆಸಿ, ತದನಂತರ ನೇಣಿಗೆ ಬಿಗಿದು ಅತ್ಯಂತ ಅಮಾನವೀಯವಾಗಿ...

ಕಾನೂನು-ಸುವ್ಯವಸ್ಥೆಗೆ ವಿದ್ಯಾರ್ಥಿಗಳು ಸಮಸ್ಯೆಯಾಗುತ್ತಾರೆ ಎಂದು ಪರಿಗಣಿಸಿದ್ದು ಏಕೆ: ಅಭಿಷೇಕ್ ಬ್ಯಾನರ್ಜಿ

ರಾಷ್ಟ್ರ ರಾಜಧಾನಿ ದೆಹಲಿ ಮತ್ತು ದೆಶದಾದ್ಯಂತ ಕಾಕ್ರೋಚ್ ಜನತಾ ಪಕ್ಷದ (ಸಿಜೆಪಿ) ನೇತೃತ್ವದಲ್ಲಿ ನಡೆದ ಪ್ರತಿಭಟನೆಗಳ ಸಂದರ್ಭದಲ್ಲಿ ವಿದ್ಯಾರ್ಥಿಗಳ ಮೇಲೆ ನಡೆದ ಭಾರೀ ಪೊಲೀಸ್ ಬಲಪ್ರಯೋವನ್ನು ವಿಪಕ್ಷಗಳು ಇಂದು ಲೋಕಸಭೆಯಲ್ಲಿ ಖಂಡಿಸಿವೆ. ವಿದ್ಯಾರ್ಥಿಗಳ...

ಪಬ್ಲಿಕ್ ಟಿವಿ ನಿರೂಪಕ ಅರುಣ್ ಬಡಿಗೇರ್ ವಿರುದ್ದ ಮೈಸೂರಿನಲ್ಲಿ ದೂರು ದಾಖಲು

ಸಂವಿಧಾನಬದ್ಧ ಮೀಸಲಾತಿಯ ಕುರಿತು ಅತ್ಯಂತ ನಿಂದನಾತ್ಮಕ, ಅವಹೇಳನಕಾರಿ ಹಾಗೂ ಸಮಾಜದಲ್ಲಿ ದ್ವೇಷ ಪ್ರಚೋದಿಸುವ ರೀತಿಯ ಹೇಳಿಕೆ ನೀಡಿರುವ 'ಪಬ್ಲಿಕ್ ಟಿವಿ' ನಿರೂಪಕ ಅರುಣ್ ಬಡಿಗೇರ್ ವಿರುದ್ಧ ಮೈಸೂರಿನಲ್ಲಿ ಕಾನೂನು ಕ್ರಮಕ್ಕೆ ಆಗ್ರಹಿಸಿ ಪೊಲೀಸ್‌...