Homeರಾಜಕೀಯಪ್ರಿಯಾಂಕಾ ಕುಡಿದು ಅರಚಿದರಂತೆ: ಅಮಲೇರಿದ ‘ಭಕ್ತರ’ ಫೇಕ್ ಸ್ಟೋರಿ

ಪ್ರಿಯಾಂಕಾ ಕುಡಿದು ಅರಚಿದರಂತೆ: ಅಮಲೇರಿದ ‘ಭಕ್ತರ’ ಫೇಕ್ ಸ್ಟೋರಿ

- Advertisement -
- Advertisement -

ಪ್ರಿಯಾಂಕ ಗಾಂಧಿಯವರ ಅದಿಕೃತ ರಾಜಕೀಯ ಪ್ರವೇಶದ ಘೋಷಣೆಯ ನಂತರ, ವಿಕೃತ ಬುದ್ಧಿಯ ‘ಭಕ್ತರು’ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತ ಅವಹೇಳನ ಮಾಡಲು ಯತ್ನಿಸುತ್ತಿದ್ದಾರೆ. ಅದ್ಯ ಸಾಮಾಜಿಕ ಜಾಲತಾಣಗಳಲ್ಲಿ ಅಂತಹ ಒಂದು ವಿಡಿಯೋ ಹರಿದಾಡುತ್ತಿದ್ದು ಸುಳ್ಳನ್ನು ಕಕ್ಕುತ್ತ ಸಾಗಿದೆ.
ಮಿಥ್ಯ: ‘ಪಾನಮತ್ತ ನಾಯಕಿ ಕಾಂಗ್ರೆಸ್‍ಗೆ ಹೊಸ ಭರವಸೆ ಇರಬಹುದು, ಆದರೆ ಈ ದೇಶದ ಜನರಿಗಲ್ಲ’ ಎಂಬ ಕ್ಯಾಪ್ಸನ್‍ನೊಂದಿಗೆ ಪ್ರಿಯಾಂಕಾ ಗಾಂಧಿಯ ಒಂದು ವಿಡಿಯೋವನ್ನು ಫೇಸ್‍ಬುಕ್, ವ್ಯಾಟ್ಸಾಪ್, ಟ್ವಿಟರ್‍ಗಳಲ್ಲಿ ಅಮಲೇರಿದ ‘ಭಕ್ತರು’ ತೇಲಿಬಿಟ್ಟಿದ್ದಾರೆ. ‘humlog’ ಎನ್ನುವ ಫೇಸ್‍ಬುಕ್ ಈ ಸುದ್ದಿ ಮೂಲವಾಗಿದ್ದು, ಇದಕ್ಕೆ ಈಗ 98 ಸಾವಿರಕ್ಕೂ ಹೆಚ್ಚು ವ್ಯೂವ್‍ಗಳಿದ್ದು, 3,800ಕ್ಕೂ ಹೆಚ್ಚು ಸಲ ಶೇರ್ ಆಗಿದೆ.

ಹಮಲೋಗ್ ಫೇಸಬುಕ್ ಪೇಜ್‍ನ ವಿಕೃತ ಬುದ್ಧಿ

ವಿಮಲ್ ಶರ್ಮಾ ಎಂಬ ವ್ಯಕ್ತಿಯ ಫೇಸ್‍ಬುಕ್ ಪೇಜ್ ಕೂಡ ಇದನ್ನೇ ಹರಡುತ್ತ, ‘ಪ್ರತಿದಿನ ಸಂಜೆ ಕುಡಿಯುವವರ ಮೇಲೆ ಕಾಂಗ್ರೆಸ್‍ಗೆ ಭರವಸೆ ಇರಬಹುದು, ದೇಶದ ಜನರಿಗಲ್ಲ. ಒಬ್ಬ ಮದ್ಯವ್ಯಸನಿ ನಾಯಕಿಯಾಗಲು ಸಾಧ್ಯವಿಲ್ಲ….’ ಎಂದೆಲ್ಲ ಬರೆಯಲಾಗಿದೆ.
ಸತ್ಯ: ಇದು ವಿಕೃತ ಮನಸ್ಸಿನ ಬಲಪಂಥಿಯರ ಕೆಲಸವೇ ಎನ್ನುವುದರಲ್ಲಿ ಎರಡು ಮಾತೇ ಇಲ್ಲ. ಪ್ರಚಲಿತದಲ್ಲಿರುವ ವಿಡಿಯೋದಲ್ಲಿ ಪ್ರಿಯಾಂಕಾ ಗಾಂಧಿ ಸಿಟ್ಟಿನಿಂದ ಗದರಿದ್ದು ನಿಜ. ಆದರೆ, ಈ ವಿಡಿಯೋ 9 ತಿಂಗಳ ಹಳೆಯದಾಗಿದ್ದು, ಇದನ್ನು ಏಪ್ರಿಲ್ 18, 2018ರಂದು ಎಎನ್‍ಐ ಕೂಡ ಈ ವಿಡಿಯೋವನ್ನು ಟ್ವೀಟ್ ಮಾಡಿದ್ದು, ‘ಕ್ಯಾಂಡಲ್ ಲೈಟ್ ಪ್ರತಿಭಟನೆಯಲ್ಲಿ ಕೋಪಿತರಾದ ಪ್ರಿಯಾಂಕಾ ಗಾಂಧಿ’ ಎಂಬ ಕ್ಯಾಪ್ಸನ್ ನೀಡಲಾಗಿದ್ದು, ‘ಪರೆಸ್ಪರ ತಳ್ಳಾಡಬೇಡಿ. ನೀವು ಯಾವ ಕಾರಣಕ್ಕೆ ಇಲ್ಲಿ ಸೇರಿದ್ದಿರಿ ಎಂಬುದು ನಿಮಗೆ ಅರಿವಿರಲಿ. ನಿಮಗೆ ಸರಿಯಾಗಿ ವರ್ತಸಲಾಗದಿದ್ದರೆ ಮನೆಗೆ ಹೋಗಿ. ಈಗ ಎಲ್ಲರೂ ಅಲ್ಲಿವರೆಗೆ ಸಾಲಾಗಿ ಸಂಯಮದಿಂದ ನಡೆಯಿರಿ’ ಎಂದು ಗದರಿದರು ಎಂದು ವಿವರಿಸಲಾಗಿದೆ.
ಕಥುವಾ ಮತ್ತು ಉನ್ನಾವೊ ರೇಪ್ ಪ್ರಕರಣಗಳನ್ನು ಖಂಡಿಸಿ, ಕಾಂಗ್ರೆಸ್ ರಾಹುಲ್ ಗಾಂಧಿ ನೇತೃತ್ವದಲ್ಲಿ ಆಯೋಜಿಸಿದ್ದ ಮಧ್ಯರಾತ್ರಿಯ

ವಿಮಲ್ ಶರ್ಮಾ ಎನ್ನುವ ಕೊಳಕನ ಫೇಕ್ ಪೋಸ್ಟ್

ಕ್ಯಾಂಡಲ್ ಲೈಟ್ ಪ್ರತಿಭಟನೆಯಲ್ಲಿನ ಘಟನೆಯಿದು. ಆನರು ಏಕಾಏಕಿ ತಳ್ಳಾಟ ಆರಂಭಿಸಿದಾಗ, ಪ್ರಿಯಾಂಕಾ ಗಾಂಧಿ ಮೇಲಿನಂತೆ ಗದರಿದ್ದಾರೆ. ಈ ಘಟನೆಯನ್ನು ಇಂಡಿಯಾ ಟುದೇ, ಹಿಂದೂಸ್ತಾನ್ ಟೈಮ್ಸ್‍ಗಳು ಕೂಡ ವರದಿ ಮಾಡಿದ್ದವಲ್ಲದೇ ಜನರ ನೂಕಾಟ, ಕಿಡಿಗೇಡಿತನ ತಡೆಯಲು ಪೊಲೀಸರೂ ಶ್ರಮ ಪಡಬೇಕಾಗಿತು. ತಳ್ಳಾಟದಲ್ಲಿ ಪ್ರಿಯಾಂಕಾರ ಮಕ್ಕಳನ್ನೂ ನೂಕಲಾಗಿತ್ತು. ಪಾನಮತ್ತರಾಗಿದ್ದ ಕೆಲವರು ಬ್ಯಾರಿಕೇಡ್‍ಗಳನ್ನು ಕೀಳಲೂ ಯತ್ನಿಸಿದರು ಎಂದು ವರದಿ ಮಾಡಲಾಗಿತ್ತು.
ವಿಡಿಯೋ ವಿಳಾಸ: https://twitter.com/i/status/984515031621668864

ಇದು ಅಸಲಿ ಸತ್ಯ. ಆದರೆ ಕೊಳಕು ಬುದ್ಧಿಯ ಭಕ್ತರು ಈ ವಿಡಿಯೋಕ್ಕೆ ಅವಹೇಳನದ ಕ್ಯಾಪ್ಸನ್ ಹಾಕಿ ಸುಳ್ಳು ಕತೆಯನ್ನು ಹರಡತೊಡಗಿದ್ದಾರೆ. ಕರ್ನಾಟಕದಲ್ಲಿ ವಿಕೃತ ವಿಷಭಟ್ಟನೂ ಕೂಡ ಗೌರಿ ಲಂಕೇಶರ ಕೊಲೆಯ ನಂತೆ ಇದೇ ಮಾದರಿಯಲ್ಲಿ ತನ್ನ ಹಲ್ಕಾ ಬುದ್ಧಿ ತೋರಿಸಿದ್ದ. ಈಗ ಈತನನ್ನು ಹಂಪಿ ಕನ್ನಡ ವಿವಿ ಕಾರ್ಯಕ್ರಮಕ್ಕೆ ಬರದಂತೆ ಓಡಿಸಲಾಗಿದೆ.
ಪ್ರಿಯಾಂಕಾ ಕುರಿತ ಮೇಲಿನ ಫೇಕ್‍ಸ್ಟೋರಿಯನ್ನು ಅಲ್ಟ್‍ನ್ಯೂಸ್, ಡೆಬ್‍ಕೂಪ್, ಬಿಬಿಸಿ (ಹಿಂದಿ)ಗಳು ಬಸ್ರ್ಟ್ ಮಾಡಿದ್ದು ‘ಭಕ್ತರ’ ವಿತಂಡ ಬುದ್ದಿಯನ್ನು ತೆರೆದು ಇಟ್ಟಿವೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...