Homeಮುಖಪುಟಪ್ರಿಯಾಂಕಾ ವರ್ಸಸ್ ಮೋದಿ : ಸಿನೀಮಿಯ ಸಂಘರ್ಷ ಮತ್ತು ದೂರದೃಷ್ಟಿ

ಪ್ರಿಯಾಂಕಾ ವರ್ಸಸ್ ಮೋದಿ : ಸಿನೀಮಿಯ ಸಂಘರ್ಷ ಮತ್ತು ದೂರದೃಷ್ಟಿ

- Advertisement -
- Advertisement -

| ನೀಲಗಾರ |

ಅಲಹಾಬಾದ್‍ನಿಂದ ವಾರಣಾಸಿಗೆ ಗಂಗಾನದಿಯಲ್ಲಿ ದೋಣಿ ಪಯಣಿಸಿದ್ದು ಕೇವಲ 100 ಕಿ.ಮೀ.ಗಳಷ್ಟೇ ಆಗಿರಲಿಲ್ಲ. ಅದು ಭಾರತದ ರಾಜಕಾರಣದಲ್ಲಿ ಆದ ಬಹುಮುಖ್ಯ ಪ್ರಯಾಣವಾಗಿತ್ತು. ಅಲ್ಲಿನ ಫೋಟೋಗಳನ್ನು ನೋಡಿದರೆ ಅದು ಸುಲಭಕ್ಕೆ ಅರ್ಥವಾಗುತ್ತದೆ. ಆದರೆ, ಅದರ ಹಿಂದೆ ಇನ್ನೂ ಅನೇಕ ಮಹತ್ವದ ಸಂಗತಿಗಳಿವೆ.

  1. ಅಲಹಾಬಾದ್‍ನಿಂದ ಪ್ರಯಾಣ ಆರಂಭಿಸುವ ಮುನ್ನ ಆಕೆ ತಂಗಿದ್ದು, ಸ್ವರಾಜ್ ಭವನದಲ್ಲಿ. ಅದು ಜವಹರಲಾಲ್ ನೆಹರೂ ಅವರ ಮನೆ. ಅದೇ ಮನೆಯಲ್ಲಿ ಇಂದಿರಾಗಾಂಧಿ ಹುಟ್ಟಿದ್ದು. ಅಷ್ಟೇ ಅಲ್ಲದೇ, ಅದೇ ಸ್ವರಾಜ್ ಭವನದಲ್ಲಿ ಭಾರತದ ಸ್ವಾತಂತ್ರ್ಯ ಸಂಗ್ರಾಮದ ಬಹುಮುಖ್ಯ ತೀರ್ಮಾನಗಳನ್ನು ತೆಗೆದುಕೊಳ್ಳಲಾಗಿತ್ತು. ಸ್ವತಂತ್ರ ಸಂಗ್ರಾಮದ ಪರಂಪರೆಯನ್ನು ನಮಗಿಂತ ಹೆಚ್ಚು ಯಾರು ತಮ್ಮದೆಂದುಕೊಳ್ಳಲು ಸಾಧ್ಯ ಎಂಬ ಸಂದೇಶ ರವಾನಿಸುವ ಉದ್ದೇಶ ಅವರಿಗಿತ್ತೋ ಇಲ್ಲವೋ ಗೊತ್ತಿಲ್ಲ. ಏಕೆಂದರೆ ಆ ದಿನ ಪ್ರಿಯಾಂಕಾ ಮಾಡಿದ ಟ್ವೀಟ್‍ನಲ್ಲಿ ಅಜ್ಜಿ ಇಂದಿರಾಗಾಂಧಿಯ ವಾರಸುದಾರಿಕೆಯನ್ನು ಹೊತ್ತುಕೊಳ್ಳುವ ಮಾತುಗಳಿದ್ದವು. ‘ಸ್ವರಾಜ್ ಭವನದ ಅಂಗಳದಲ್ಲಿ ಕುಳಿತರೆ ನನ್ನ ಅಜ್ಜಿ ಹುಟ್ಟಿದ ಕೊಠಡಿ ಕಾಣುತ್ತಿದೆ. ನನ್ನಜ್ಜಿ ಮಲಗುವ ಮುನ್ನ ನನಗೆ ಜೋನ್ ಆಫ್ ಆರ್ಕ್ ಕಥೆಗಳನ್ನು ಹೇಳಿ, ಭಯ ಬಿಟ್ಟು ಧೈರ್ಯಶಾಲಿಯಾಗು ಎಲ್ಲವೂ ಸರಿ ಹೋಗಿಬಿಡುತ್ತದೆ ಎಂದು ಹೇಳುತ್ತಿದ್ದಳು’ ಎಂಬ ಟ್ವೀಟ್ ಅದು.

  1. ತ್ರಿವೇಣಿ ಸಂಗಮದಲ್ಲಿ ಪೂಜೆ ಸಲ್ಲಿಸಿ ಹೊರಟ ಪ್ರಿಯಾಂಕಾ, ವಿದ್ಯಾರ್ಥಿಗಳೊಂದಿಗೆ ‘ಬೋಟ್ ಪೆ ಚರ್ಚಾ’ ಮಾಡಿದರು. ಇದರಲ್ಲಿ ಮೋದಿ ನಡೆಸಿದ ಈವೆಂಟ್‍ನ ಪುನರಾವರ್ತನೆ ಅಲ್ಲದೇ ಇನ್ನೇನೂ ಹೆಚ್ಚುಗಾರಿಕೆ ಇರಲಿಲ್ಲ.
  2. ಆದರೆ, ಬಡೇ ಹನುಮಾನ್ ದೇವಸ್ಥಾನದಿಂದ ಆರಂಭಿಸಿ ಕಾಶಿಯ ವಿಶ್ವನಾಥ ದೇವಸ್ಥಾನದಲ್ಲಿ ನಡೆಸಿದ ಪೂಜೆಯವರೆಗೆ ಎಲ್ಲಾ ಕಡೆ ಕಾಂಗ್ರೆಸ್ ಪ್ರದರ್ಶಿಸಲಿಚ್ಛಿಸುತ್ತಿರುವ ‘ಧಾರ್ಮಿಕ ಒಲವಿನ’ ಪ್ರದರ್ಶನ ಇದ್ದೇ ಇತ್ತು. ಗಂಗಾ ಆರತಿಯೂ ಸೇರಿ ಇವೆಲ್ಲಾ ಆಚರಣೆಗಳು ಮೋದಿ ಅಥವಾ ರಾಹುಲ್ ಗಾಂಧಿಯ ಭಕ್ತಿ ಪ್ರದರ್ಶನಕ್ಕಿಂತ ಸಹಜವಾಗಿದ್ದವು. ರಾಹುಲ್ ಇದನ್ನು ತೋರಿಕೆಗೆ ಮಾಡುವಂತೆ, ಮೋದಿ ಅಹಂಕಾರದಿಂದ ಪ್ರದರ್ಶನಕ್ಕಾಗಿ ಮಾಡುವಂತೆ ಕಾಣುವ ಭಕ್ತಿ, ಆಚರಣೆಗಳು, ಪ್ರಿಯಾಂಕಾ ಮಾಡಿದಾಗ ಸಹಜ ಭಕ್ತಿಯಂತೆ ಕಾಣುತ್ತಿದ್ದವು. 3 ದಿನಗಳ ಪ್ರಯಾಣದಲ್ಲಿ ಮಧ್ಯೆ ಒಮ್ಮೆ ದರ್ಗಾಗೂ ಹೋಗಿದ್ದದ್ದು ಗಮನೀಯವಾದುದು.
  3. ಅಷ್ಟೇನೂ ದೊಡ್ಡದಲ್ಲದ, ಐಷಾರಾಮಿ ಸೌಲಭ್ಯಗಳಿಲ್ಲದ ಮತ್ತು ತ್ರಿವರ್ಣದ ಖಾದಿ ಬಟ್ಟೆಗಳಿಂದ ಸಿಂಗರಿಸಲ್ಪಟ್ಟಿದ್ದ ಬೋಟಿನಲ್ಲಿ ಪ್ರಿಯಾಂಕಾ ಪಯಣಿಸಿದರು. ನಿಧಾನಕ್ಕೆ ಜನರು ಇದನ್ನು ಮೋದಿ ಪಯಣಿಸಿದ ಸೀ ಪ್ಲೇನ್ ಜೊತೆ ಹೋಲಿಸಬಹುದು.
  4. ಈ ಅವಧಿಯಲ್ಲೇ ಬಂದ ಹೋಳಿ ಹಬ್ಬವನ್ನು ಪ್ರಿಯಾಂಕಾ ಅಲ್ಲಿನ ಸಾಮಾನ್ಯ ಜನರ ಜೊತೆ ಸೇರಿ ಆಚರಿಸಿದರು.
  5. ಅಂತಿಮವಾಗಿ ವಾರಣಾಸಿ ತಲುಪಿದ ನಂತರ ದೇವಸ್ಥಾನಗಳ ಭೇಟಿಯ ನಂತರ ನಡೆಸಿದ ಸಾರ್ವಜನಿಕ ಸಭೆಯಲ್ಲಿ ಪ್ರಿಯಾಂಕಾ ಮಾತಾಡಿದ್ದು ಮೋದಿಯವರು ತಮ್ಮ ಕ್ಷೇತ್ರಕ್ಕೆ ಕೊಟ್ಟಿದ್ದ ಭರವಸೆಗಳ ಕುರಿತು. ಅದರ ಪಟ್ಟಿಯನ್ನು ಇಟ್ಟುಕೊಂಡು ಅತ್ಯಂತ ಸರಳವಾಗಿ ಜನರ ಜೊತೆ ಸಂಭಾಷಣೆಯನ್ನು ಶುರು ಮಾಡಿದರು. ‘ಇದೇನು?’, ‘ಇದು ಮೋದಿಯವರು ಕೊಟ್ಟಿದ್ದ ಭರವಸೆಗಳು’, ‘ಇದು ಈಡೇರಿದೆಯಾ?’ “ಇಲ್ಲಾ”, ‘ಇದು?’ “ಇಲ್ಲಾ”, ‘ಇದು’ “ಅದೂ ಇಲ್ಲ”. ಮಾತಾಡುತ್ತಿರುವುದು ಎದುರಿಗಿರುವ ಕೆಲವು ಸಾವಿರ ಜನರಿಗಾದರೂ, ಅದು ಉತ್ತರ ಪ್ರದೇಶಕ್ಕೆ ಕೊಡಬೇಕಾದ ಸಂದೇಶ ಕೊಡುತ್ತದೆಂಬುದು ಆಕೆಗೆ ಗೊತ್ತಿತ್ತು.
  6. ಎಲ್ಲಕ್ಕಿಂತ ಮುಖ್ಯವಾಗಿ, ಮೇಲಿನ ಫೋಟೋದಲ್ಲಿರುವಂತೆ, ದೇವರ ತಿಲಕ ಮತ್ತು ವಿಭೂತಿಯನ್ನು ಹಚ್ಚಿಕೊಂಡು ಪ್ರಿಯಾಂಕಾ ವೇದಿಕೆಯ ಮೇಲೆ ಆಸೀನವಾಗಿದ್ದು. ಜೊತೆಗೆ ಕೊರಳಿಗೆ ರುದ್ರಾಕ್ಷಿ ಮಾಲೆಗಳು. ಅದೇ ವೇಷದಲ್ಲೇ ವೇದಿಕೆಯ ಭಾಷಣವನ್ನೂ ಮಾಡಿದ್ದು. ಇಂತಹ ವೇಷವನ್ನು ಮೊದಲು ಹಾಕಿದ್ದು ಮೋದಿ. ಆಗ, ದೇಶದ ಗಣನೀಯ ಸಂಖ್ಯೆಯ ಜನರ ಪುಣ್ಯಕ್ಷೇತ್ರದಿಂದ ಒಬ್ಬ ಹೊಸ ಸಮರ್ಥ ಸಾಧು ಮೇಲೆದ್ದು ಬಂದಂತೆ ಕಾಣಲು ಬೇಕಾದ ಕೊರಿಯೋಗ್ರಫಿ ನಡೆದಿತ್ತು. ಈಗ? ಈಗ ಸಿನೆಮಾಗಳಲ್ಲಿ ಕಾಣುವಂತಹ ಒಂದು ಸೀನ್ ಸೃಷ್ಟಿಸಲಾಗಿದೆ. ಧರ್ಮದ ಸೋಗಿನಲ್ಲಿ ವಂಚಿಸುವ ದುಷ್ಟನೊಬ್ಬನನ್ನು ಸಂಹರಿಸಲು ಎಳೆಯ ಬಾಲಕಿಯೊಬ್ಬಳು ದೈವ ಕೃಪೆಯನ್ನು ಪಡೆದುಕೊಂಡು ಎದುರು ನಿಂತರೆ ಹೇಗಿರುತ್ತೋ ಆ ರೀತಿಯ ಸೀನ್. ಪ್ರಿಯಾಂಕಾ ವೇದಿಕೆಯ ಮಧ್ಯಭಾಗದಲ್ಲಿ ಕೂತು ಆಶೀರ್ವದಿಸುವಂತೆ ಒಮ್ಮೆ ಕೈ ಮುಂದೆ ಮಾಡುತ್ತಾರೆ. ಅದು ಕಾಂಗ್ರೆಸ್ಸಿನ ಚಿಹ್ನೆಯೆಂಬುದೂ ಕಾರಣವಿರಬಹುದು. ಆದರೆ, ಆಕೆಯಲ್ಲಿ ದುರ್ಗೆ, ಕಾಳಿ ಇತ್ಯಾದಿಗಳನ್ನು ಸಾಮಾನ್ಯ ಜನರು ಕಾಣುವ ಸಾಧ್ಯತೆ ಇದೆ.
  7. ಭಾರತದ ರಾಜಕಾರಣದಲ್ಲಿ ಇಂತಹ ಇನ್ನೂ ಏನೇನನ್ನು ನಾವು ನೋಡಬೇಕಾಗುತ್ತೋ ಗೊತ್ತಿಲ್ಲ. ಆದರೆ, ಇಲ್ಲಿನ ಚುನಾವಣೆಗಳ ರಂಗನ್ನು ವಿಪರೀತವಾಗಿ ಏರಿಸಿದ ನರೇಂದ್ರ ಮೋದಿಗೆ ಅದೇ ರೀತಿಯಲ್ಲಿ ಹೋಳಿ ಎರಚುವ ಸಾಮಥ್ರ್ಯ ನಮಗೂ ಇದೆ ಎಂದು ವಿರೋಧ ಪಕ್ಷವು ತೋರಿಸುತ್ತಿದೆ. ಅಂತಹ ಮುಖಾಮುಖಿಯಲ್ಲಿ ರಾಹುಲ್‍ಗಿಂತ ಪ್ರಿಯಾಂಕಾಗೆ ಹೆಚ್ಚಿನ ಸಾಧ್ಯತೆಗಳಿವೆ ಎಂಬುದನ್ನು ಈ ‘ಗಂಗಾಪಯಣ’ ತೋರಿಸಿದೆ.
  8. ಹಾಗೆ ನೋಡಿದರೆ ರಾಹುಲ್‍ಗಾಂಧಿ ರೈತರ ಸಂಕಷ್ಟ, ನಿರುದ್ಯೋಗ, ರಾಫೇಲ್ ಭ್ರಷ್ಟಾಚಾರ ಇತ್ಯಾದಿ ಅಸಲಿ ಸಂಗತಿಗಳ ಕುರಿತು ಮಾತನಾಡುತ್ತಿರುವುದಕ್ಕೇ ಹೆಚ್ಚಿನ ಮಹತ್ವ ಇರಬೇಕಿತ್ತು. ಆದರೆ, ರಾಜಕಾರಣವು ಒಂದು ಜನರ ಮನಸ್ಸಿನ ಮೇಲೆ ಪರಿಣಾಮ ಬೀರುವ ವಿವಿಧ ಸಿನೀಮಿಯ ದೃಶ್ಯಗಳಿಂದ ಜನರನ್ನು ಮರುಳುಗೊಳಿಸುವ ಆಟವಾಡುತ್ತದೆ. ಇಂತಹ ಬಿಂಬಗಳು ಬಹುಬೇಗನೇ ಅಸಲಿ ಸಮಸ್ಯೆಗಳನ್ನು ಮಸುಕುಗೊಳಿಸುತ್ತವೆ. ಅದೇನೇ ಇರಲಿ, ಈ ಆಟದಲ್ಲಿ ಪ್ರಿಯಾಂಕಾ ಪ್ರವೇಶದಿಂದ ಮೋದಿ ಭಕ್ತ ಪಡೆಯು ಗಲಿಬಿಲಿಗೊಳ್ಳುವುದರಲ್ಲಿ ಸಂಶಯವಿಲ್ಲ.
  9. ಇಂದಿಗೆ 10 ವರ್ಷಗಳ ನಂತರ ಎಲ್ಲರೂ ಹೌದಲ್ಲಾ ಎಂದುಕೊಳ್ಳಬಹುದಾದ ಇನ್ನೊಂದು ಸಂಗತಿಯಿದೆ. ಈ ಚುನಾವಣೆಯಲ್ಲಿ ಕಾಂಗ್ರೆಸ್‍ಗೆ ಉತ್ತರ ಪ್ರದೇಶದಲ್ಲಿ ಹೆಚ್ಚಿನ ಸೀಟು ಗಳಿಕೆ ಆಗಲಾರದು. ಪ್ರಿಯಾಂಕಾ ಗಾಂಧಿಯ ರಾಜಕೀಯ ಪ್ರವೇಶವು ಕಾಂಗ್ರೆಸ್ ಪಕ್ಷದ ದೀರ್ಘಕಾಲಿಕ ಹೂಡಿಕೆಯಾಗಿದೆ. 1990ಕ್ಕೆ ಮುಂಚೆ ಉತ್ತರ ಪ್ರದೇಶದ ಮೇಲೆ ಇಟ್ಟುಕೊಂಡಿದ್ದ ಹಿಡಿತವೇ ಆ ಪಕ್ಷಕ್ಕೆ ದೇಶವನ್ನಾಳುವ ಶಕ್ತಿ ತಂದುಕೊಡುತ್ತಿತ್ತು. ಉತ್ತರ ಪ್ರದೇಶದ ಮುಖ್ಯಮಂತ್ರಿ ವಿ.ಪಿ.ಸಿಂಗ್ ನಂತರ ರಾಜೀವ್‍ಗಾಂಧಿ ಸಂಪುಟದಿಂದ ಹೊರನಡೆದ ಮೇಲೆ ಅದು ಕುಸಿಯಿತು. ಅಲ್ಲಿಂದ ಇಲ್ಲಿಯವರೆಗೆ ಕಾಂಗ್ರೆಸ್ ಮತ್ತೆ ಅಲ್ಲಿ ಅಧಿಕಾರಕ್ಕೆ ಬಂದಿಲ್ಲ. ವಿ.ಪಿ.ಸಿಂಗರ ನಂತರ ಬಿಜೆಪಿ, ಎಸ್‍ಪಿ, ಬಿಎಸ್‍ಪಿಗಳ ನಡುವಿನ ಸಂಘರ್ಷದಲ್ಲಿ ಕಾಂಗ್ರೆಸ್ ಮಂಕಾಗುತ್ತಾ ಬಂದಿತ್ತು. ಮರಳಿ ಉತ್ತರ ಪ್ರದೇಶ ಪಡೆದುಕೊಳ್ಳಲು ಬೇಕಾದ ಬಲವಾದ ಅಸ್ತ್ರವಾಗಿ ಪ್ರಿಯಾಂಕಾರನ್ನು ರಂಗಕ್ಕಿಳಿಸಲಾಗಿದೆ. ಈ ಸದ್ಯ ರಂಗಪ್ರವೇಶವಂತೂ ಯಶಸ್ವಿಯಾಗಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...

ಕೊಲ್ಕತ್ತಾದ 26 ಲಕ್ಷ ಮತದಾರರ ಹೆಸರು 2002 ರ ಪಟ್ಟಿಗೆ ಹೊಂದಿಕೆಯಾಗುತ್ತಿಲ್ಲ: ಮುಖ್ಯ ಚುನಾವಣಾ ಅಧಿಕಾರಿ

ಕೋಲ್ಕತ್ತಾ ಮತ್ತು ಸುತ್ತಮುತ್ತಲಿನ ಹಲವಾರು ವಿಧಾನಸಭಾ ಕ್ಷೇತ್ರಗಳ ಮತದಾರರ ಹೆಸರುಗಳು 2002 ರ ಮತದಾರರ ಪಟ್ಟಿಯಲ್ಲಿರುವ ನಮೂದುಗಳಿಗೆ ಹೊಂದಿಕೆಯಾಗುತ್ತಿಲ್ಲ ಎಂದು ಮುಖ್ಯ ಚುನಾವಣಾ ಅಧಿಕಾರಿ ಮನೋಜ್ ಕುಮಾರ್ ಅಗರ್ವಾಲ್ ಕಚೇರಿಯ ಅಧಿಕಾರಿಗಳು ತಿಳಿಸಿದ್ದಾರೆ...

ಮೊದಲ ಪತ್ನಿಗೆ ಮುಸ್ಲಿಂ ಪತಿ ಜೀವನಾಂಶ ನಿರಾಕರಿಸುವಂತಿಲ್ಲ: ಕೇರಳ ಹೈಕೋರ್ಟ್

ಎರಡನೇ ಪತ್ನಿಯ ಮೇಲಿನ ಆರ್ಥಿಕ ಜವಾಬ್ದಾರಿ ಕುರಿತ ಮಹತ್ವದ ತೀರ್ಪಿನಲ್ಲಿ, ಮುಸ್ಲಿಂ ಪುರುಷನು ತನ್ನ ಮೊದಲ ಪತ್ನಿಗೆ ಜೀವನಾಂಶ ಪಾವತಿಸುವುದನ್ನು ತಪ್ಪಿಸಲು ಸಾಧ್ಯವಿಲ್ಲ ಎಂದು ಕೇರಳ ಹೈಕೋರ್ಟ್ ಹೇಳಿದೆ. ಎಲ್ಲ ಪತ್ನಿಯರನ್ನು ಸಮಾನವಾಗಿ...

ಆಸ್ಪತ್ರೆಗಳು ಕಡ್ಡಾಯವಾಗಿ ದರಪಟ್ಟಿ ಪ್ರದರ್ಶಿಸಬೇಕು, ಹಣ ಪಾವತಿಸದ ಕಾರಣ ತುರ್ತು ಆರೈಕೆ ನಿರಾಕರಿಸುವಂತಿಲ್ಲ : ಕಾನೂನು ಎತ್ತಿ ಹಿಡಿದ ಹೈಕೋರ್ಟ್

ಕೇರಳ ವೈದ್ಯಕೀಯ ಸಂಸ್ಥೆಗಳ ಕಾಯ್ದೆ ಮತ್ತು ನಿಬಂಧನೆಗಳನ್ನು ಎತ್ತಿಹಿಡಿದ ಹೈಕೋರ್ಟ್‌ನ ಏಕ ಸದಸ್ಯ ಪೀಠದ ಆದೇಶದ ವಿರುದ್ಧ ಭಾರತೀಯ ವೈದ್ಯಕೀಯ ಸಂಘ (ಐಎಂಎ) ಮತ್ತು ಕೇರಳ ಖಾಸಗಿ ಆಸ್ಪತ್ರೆಗಳ ಸಂಘ ಸಲ್ಲಿಸಿದ್ದ ಮೇಲ್ಮನವಿಗಳನ್ನು...

ಎಸ್‌ಐಆರ್‌ನ ನಿಜವಾದ ಉದ್ದೇಶ ಎನ್‌ಆರ್‌ಸಿ : ಮಮತಾ ಬ್ಯಾನರ್ಜಿ

ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆಯ (ಎಸ್‌ಐಆರ್‌) ಹಿಂದಿನ ಕೇಂದ್ರ ಸರ್ಕಾರದ ನಿಜವಾದ ಉದ್ದೇಶ ರಾಷ್ಟ್ರೀಯ ನಾಗರಿಕರ ನೋಂದಣಿ (ಎನ್‌ಆರ್‌ಸಿ) ಮಾಡುವುದು ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬುಧವಾರ (ನವೆಂಬರ್...