Homeಮುಖಪುಟಪ್ರಿಯಾಂಕಾ ವರ್ಸಸ್ ಮೋದಿ : ಸಿನೀಮಿಯ ಸಂಘರ್ಷ ಮತ್ತು ದೂರದೃಷ್ಟಿ

ಪ್ರಿಯಾಂಕಾ ವರ್ಸಸ್ ಮೋದಿ : ಸಿನೀಮಿಯ ಸಂಘರ್ಷ ಮತ್ತು ದೂರದೃಷ್ಟಿ

- Advertisement -
- Advertisement -

| ನೀಲಗಾರ |

ಅಲಹಾಬಾದ್‍ನಿಂದ ವಾರಣಾಸಿಗೆ ಗಂಗಾನದಿಯಲ್ಲಿ ದೋಣಿ ಪಯಣಿಸಿದ್ದು ಕೇವಲ 100 ಕಿ.ಮೀ.ಗಳಷ್ಟೇ ಆಗಿರಲಿಲ್ಲ. ಅದು ಭಾರತದ ರಾಜಕಾರಣದಲ್ಲಿ ಆದ ಬಹುಮುಖ್ಯ ಪ್ರಯಾಣವಾಗಿತ್ತು. ಅಲ್ಲಿನ ಫೋಟೋಗಳನ್ನು ನೋಡಿದರೆ ಅದು ಸುಲಭಕ್ಕೆ ಅರ್ಥವಾಗುತ್ತದೆ. ಆದರೆ, ಅದರ ಹಿಂದೆ ಇನ್ನೂ ಅನೇಕ ಮಹತ್ವದ ಸಂಗತಿಗಳಿವೆ.

  1. ಅಲಹಾಬಾದ್‍ನಿಂದ ಪ್ರಯಾಣ ಆರಂಭಿಸುವ ಮುನ್ನ ಆಕೆ ತಂಗಿದ್ದು, ಸ್ವರಾಜ್ ಭವನದಲ್ಲಿ. ಅದು ಜವಹರಲಾಲ್ ನೆಹರೂ ಅವರ ಮನೆ. ಅದೇ ಮನೆಯಲ್ಲಿ ಇಂದಿರಾಗಾಂಧಿ ಹುಟ್ಟಿದ್ದು. ಅಷ್ಟೇ ಅಲ್ಲದೇ, ಅದೇ ಸ್ವರಾಜ್ ಭವನದಲ್ಲಿ ಭಾರತದ ಸ್ವಾತಂತ್ರ್ಯ ಸಂಗ್ರಾಮದ ಬಹುಮುಖ್ಯ ತೀರ್ಮಾನಗಳನ್ನು ತೆಗೆದುಕೊಳ್ಳಲಾಗಿತ್ತು. ಸ್ವತಂತ್ರ ಸಂಗ್ರಾಮದ ಪರಂಪರೆಯನ್ನು ನಮಗಿಂತ ಹೆಚ್ಚು ಯಾರು ತಮ್ಮದೆಂದುಕೊಳ್ಳಲು ಸಾಧ್ಯ ಎಂಬ ಸಂದೇಶ ರವಾನಿಸುವ ಉದ್ದೇಶ ಅವರಿಗಿತ್ತೋ ಇಲ್ಲವೋ ಗೊತ್ತಿಲ್ಲ. ಏಕೆಂದರೆ ಆ ದಿನ ಪ್ರಿಯಾಂಕಾ ಮಾಡಿದ ಟ್ವೀಟ್‍ನಲ್ಲಿ ಅಜ್ಜಿ ಇಂದಿರಾಗಾಂಧಿಯ ವಾರಸುದಾರಿಕೆಯನ್ನು ಹೊತ್ತುಕೊಳ್ಳುವ ಮಾತುಗಳಿದ್ದವು. ‘ಸ್ವರಾಜ್ ಭವನದ ಅಂಗಳದಲ್ಲಿ ಕುಳಿತರೆ ನನ್ನ ಅಜ್ಜಿ ಹುಟ್ಟಿದ ಕೊಠಡಿ ಕಾಣುತ್ತಿದೆ. ನನ್ನಜ್ಜಿ ಮಲಗುವ ಮುನ್ನ ನನಗೆ ಜೋನ್ ಆಫ್ ಆರ್ಕ್ ಕಥೆಗಳನ್ನು ಹೇಳಿ, ಭಯ ಬಿಟ್ಟು ಧೈರ್ಯಶಾಲಿಯಾಗು ಎಲ್ಲವೂ ಸರಿ ಹೋಗಿಬಿಡುತ್ತದೆ ಎಂದು ಹೇಳುತ್ತಿದ್ದಳು’ ಎಂಬ ಟ್ವೀಟ್ ಅದು.

  1. ತ್ರಿವೇಣಿ ಸಂಗಮದಲ್ಲಿ ಪೂಜೆ ಸಲ್ಲಿಸಿ ಹೊರಟ ಪ್ರಿಯಾಂಕಾ, ವಿದ್ಯಾರ್ಥಿಗಳೊಂದಿಗೆ ‘ಬೋಟ್ ಪೆ ಚರ್ಚಾ’ ಮಾಡಿದರು. ಇದರಲ್ಲಿ ಮೋದಿ ನಡೆಸಿದ ಈವೆಂಟ್‍ನ ಪುನರಾವರ್ತನೆ ಅಲ್ಲದೇ ಇನ್ನೇನೂ ಹೆಚ್ಚುಗಾರಿಕೆ ಇರಲಿಲ್ಲ.
  2. ಆದರೆ, ಬಡೇ ಹನುಮಾನ್ ದೇವಸ್ಥಾನದಿಂದ ಆರಂಭಿಸಿ ಕಾಶಿಯ ವಿಶ್ವನಾಥ ದೇವಸ್ಥಾನದಲ್ಲಿ ನಡೆಸಿದ ಪೂಜೆಯವರೆಗೆ ಎಲ್ಲಾ ಕಡೆ ಕಾಂಗ್ರೆಸ್ ಪ್ರದರ್ಶಿಸಲಿಚ್ಛಿಸುತ್ತಿರುವ ‘ಧಾರ್ಮಿಕ ಒಲವಿನ’ ಪ್ರದರ್ಶನ ಇದ್ದೇ ಇತ್ತು. ಗಂಗಾ ಆರತಿಯೂ ಸೇರಿ ಇವೆಲ್ಲಾ ಆಚರಣೆಗಳು ಮೋದಿ ಅಥವಾ ರಾಹುಲ್ ಗಾಂಧಿಯ ಭಕ್ತಿ ಪ್ರದರ್ಶನಕ್ಕಿಂತ ಸಹಜವಾಗಿದ್ದವು. ರಾಹುಲ್ ಇದನ್ನು ತೋರಿಕೆಗೆ ಮಾಡುವಂತೆ, ಮೋದಿ ಅಹಂಕಾರದಿಂದ ಪ್ರದರ್ಶನಕ್ಕಾಗಿ ಮಾಡುವಂತೆ ಕಾಣುವ ಭಕ್ತಿ, ಆಚರಣೆಗಳು, ಪ್ರಿಯಾಂಕಾ ಮಾಡಿದಾಗ ಸಹಜ ಭಕ್ತಿಯಂತೆ ಕಾಣುತ್ತಿದ್ದವು. 3 ದಿನಗಳ ಪ್ರಯಾಣದಲ್ಲಿ ಮಧ್ಯೆ ಒಮ್ಮೆ ದರ್ಗಾಗೂ ಹೋಗಿದ್ದದ್ದು ಗಮನೀಯವಾದುದು.
  3. ಅಷ್ಟೇನೂ ದೊಡ್ಡದಲ್ಲದ, ಐಷಾರಾಮಿ ಸೌಲಭ್ಯಗಳಿಲ್ಲದ ಮತ್ತು ತ್ರಿವರ್ಣದ ಖಾದಿ ಬಟ್ಟೆಗಳಿಂದ ಸಿಂಗರಿಸಲ್ಪಟ್ಟಿದ್ದ ಬೋಟಿನಲ್ಲಿ ಪ್ರಿಯಾಂಕಾ ಪಯಣಿಸಿದರು. ನಿಧಾನಕ್ಕೆ ಜನರು ಇದನ್ನು ಮೋದಿ ಪಯಣಿಸಿದ ಸೀ ಪ್ಲೇನ್ ಜೊತೆ ಹೋಲಿಸಬಹುದು.
  4. ಈ ಅವಧಿಯಲ್ಲೇ ಬಂದ ಹೋಳಿ ಹಬ್ಬವನ್ನು ಪ್ರಿಯಾಂಕಾ ಅಲ್ಲಿನ ಸಾಮಾನ್ಯ ಜನರ ಜೊತೆ ಸೇರಿ ಆಚರಿಸಿದರು.
  5. ಅಂತಿಮವಾಗಿ ವಾರಣಾಸಿ ತಲುಪಿದ ನಂತರ ದೇವಸ್ಥಾನಗಳ ಭೇಟಿಯ ನಂತರ ನಡೆಸಿದ ಸಾರ್ವಜನಿಕ ಸಭೆಯಲ್ಲಿ ಪ್ರಿಯಾಂಕಾ ಮಾತಾಡಿದ್ದು ಮೋದಿಯವರು ತಮ್ಮ ಕ್ಷೇತ್ರಕ್ಕೆ ಕೊಟ್ಟಿದ್ದ ಭರವಸೆಗಳ ಕುರಿತು. ಅದರ ಪಟ್ಟಿಯನ್ನು ಇಟ್ಟುಕೊಂಡು ಅತ್ಯಂತ ಸರಳವಾಗಿ ಜನರ ಜೊತೆ ಸಂಭಾಷಣೆಯನ್ನು ಶುರು ಮಾಡಿದರು. ‘ಇದೇನು?’, ‘ಇದು ಮೋದಿಯವರು ಕೊಟ್ಟಿದ್ದ ಭರವಸೆಗಳು’, ‘ಇದು ಈಡೇರಿದೆಯಾ?’ “ಇಲ್ಲಾ”, ‘ಇದು?’ “ಇಲ್ಲಾ”, ‘ಇದು’ “ಅದೂ ಇಲ್ಲ”. ಮಾತಾಡುತ್ತಿರುವುದು ಎದುರಿಗಿರುವ ಕೆಲವು ಸಾವಿರ ಜನರಿಗಾದರೂ, ಅದು ಉತ್ತರ ಪ್ರದೇಶಕ್ಕೆ ಕೊಡಬೇಕಾದ ಸಂದೇಶ ಕೊಡುತ್ತದೆಂಬುದು ಆಕೆಗೆ ಗೊತ್ತಿತ್ತು.
  6. ಎಲ್ಲಕ್ಕಿಂತ ಮುಖ್ಯವಾಗಿ, ಮೇಲಿನ ಫೋಟೋದಲ್ಲಿರುವಂತೆ, ದೇವರ ತಿಲಕ ಮತ್ತು ವಿಭೂತಿಯನ್ನು ಹಚ್ಚಿಕೊಂಡು ಪ್ರಿಯಾಂಕಾ ವೇದಿಕೆಯ ಮೇಲೆ ಆಸೀನವಾಗಿದ್ದು. ಜೊತೆಗೆ ಕೊರಳಿಗೆ ರುದ್ರಾಕ್ಷಿ ಮಾಲೆಗಳು. ಅದೇ ವೇಷದಲ್ಲೇ ವೇದಿಕೆಯ ಭಾಷಣವನ್ನೂ ಮಾಡಿದ್ದು. ಇಂತಹ ವೇಷವನ್ನು ಮೊದಲು ಹಾಕಿದ್ದು ಮೋದಿ. ಆಗ, ದೇಶದ ಗಣನೀಯ ಸಂಖ್ಯೆಯ ಜನರ ಪುಣ್ಯಕ್ಷೇತ್ರದಿಂದ ಒಬ್ಬ ಹೊಸ ಸಮರ್ಥ ಸಾಧು ಮೇಲೆದ್ದು ಬಂದಂತೆ ಕಾಣಲು ಬೇಕಾದ ಕೊರಿಯೋಗ್ರಫಿ ನಡೆದಿತ್ತು. ಈಗ? ಈಗ ಸಿನೆಮಾಗಳಲ್ಲಿ ಕಾಣುವಂತಹ ಒಂದು ಸೀನ್ ಸೃಷ್ಟಿಸಲಾಗಿದೆ. ಧರ್ಮದ ಸೋಗಿನಲ್ಲಿ ವಂಚಿಸುವ ದುಷ್ಟನೊಬ್ಬನನ್ನು ಸಂಹರಿಸಲು ಎಳೆಯ ಬಾಲಕಿಯೊಬ್ಬಳು ದೈವ ಕೃಪೆಯನ್ನು ಪಡೆದುಕೊಂಡು ಎದುರು ನಿಂತರೆ ಹೇಗಿರುತ್ತೋ ಆ ರೀತಿಯ ಸೀನ್. ಪ್ರಿಯಾಂಕಾ ವೇದಿಕೆಯ ಮಧ್ಯಭಾಗದಲ್ಲಿ ಕೂತು ಆಶೀರ್ವದಿಸುವಂತೆ ಒಮ್ಮೆ ಕೈ ಮುಂದೆ ಮಾಡುತ್ತಾರೆ. ಅದು ಕಾಂಗ್ರೆಸ್ಸಿನ ಚಿಹ್ನೆಯೆಂಬುದೂ ಕಾರಣವಿರಬಹುದು. ಆದರೆ, ಆಕೆಯಲ್ಲಿ ದುರ್ಗೆ, ಕಾಳಿ ಇತ್ಯಾದಿಗಳನ್ನು ಸಾಮಾನ್ಯ ಜನರು ಕಾಣುವ ಸಾಧ್ಯತೆ ಇದೆ.
  7. ಭಾರತದ ರಾಜಕಾರಣದಲ್ಲಿ ಇಂತಹ ಇನ್ನೂ ಏನೇನನ್ನು ನಾವು ನೋಡಬೇಕಾಗುತ್ತೋ ಗೊತ್ತಿಲ್ಲ. ಆದರೆ, ಇಲ್ಲಿನ ಚುನಾವಣೆಗಳ ರಂಗನ್ನು ವಿಪರೀತವಾಗಿ ಏರಿಸಿದ ನರೇಂದ್ರ ಮೋದಿಗೆ ಅದೇ ರೀತಿಯಲ್ಲಿ ಹೋಳಿ ಎರಚುವ ಸಾಮಥ್ರ್ಯ ನಮಗೂ ಇದೆ ಎಂದು ವಿರೋಧ ಪಕ್ಷವು ತೋರಿಸುತ್ತಿದೆ. ಅಂತಹ ಮುಖಾಮುಖಿಯಲ್ಲಿ ರಾಹುಲ್‍ಗಿಂತ ಪ್ರಿಯಾಂಕಾಗೆ ಹೆಚ್ಚಿನ ಸಾಧ್ಯತೆಗಳಿವೆ ಎಂಬುದನ್ನು ಈ ‘ಗಂಗಾಪಯಣ’ ತೋರಿಸಿದೆ.
  8. ಹಾಗೆ ನೋಡಿದರೆ ರಾಹುಲ್‍ಗಾಂಧಿ ರೈತರ ಸಂಕಷ್ಟ, ನಿರುದ್ಯೋಗ, ರಾಫೇಲ್ ಭ್ರಷ್ಟಾಚಾರ ಇತ್ಯಾದಿ ಅಸಲಿ ಸಂಗತಿಗಳ ಕುರಿತು ಮಾತನಾಡುತ್ತಿರುವುದಕ್ಕೇ ಹೆಚ್ಚಿನ ಮಹತ್ವ ಇರಬೇಕಿತ್ತು. ಆದರೆ, ರಾಜಕಾರಣವು ಒಂದು ಜನರ ಮನಸ್ಸಿನ ಮೇಲೆ ಪರಿಣಾಮ ಬೀರುವ ವಿವಿಧ ಸಿನೀಮಿಯ ದೃಶ್ಯಗಳಿಂದ ಜನರನ್ನು ಮರುಳುಗೊಳಿಸುವ ಆಟವಾಡುತ್ತದೆ. ಇಂತಹ ಬಿಂಬಗಳು ಬಹುಬೇಗನೇ ಅಸಲಿ ಸಮಸ್ಯೆಗಳನ್ನು ಮಸುಕುಗೊಳಿಸುತ್ತವೆ. ಅದೇನೇ ಇರಲಿ, ಈ ಆಟದಲ್ಲಿ ಪ್ರಿಯಾಂಕಾ ಪ್ರವೇಶದಿಂದ ಮೋದಿ ಭಕ್ತ ಪಡೆಯು ಗಲಿಬಿಲಿಗೊಳ್ಳುವುದರಲ್ಲಿ ಸಂಶಯವಿಲ್ಲ.
  9. ಇಂದಿಗೆ 10 ವರ್ಷಗಳ ನಂತರ ಎಲ್ಲರೂ ಹೌದಲ್ಲಾ ಎಂದುಕೊಳ್ಳಬಹುದಾದ ಇನ್ನೊಂದು ಸಂಗತಿಯಿದೆ. ಈ ಚುನಾವಣೆಯಲ್ಲಿ ಕಾಂಗ್ರೆಸ್‍ಗೆ ಉತ್ತರ ಪ್ರದೇಶದಲ್ಲಿ ಹೆಚ್ಚಿನ ಸೀಟು ಗಳಿಕೆ ಆಗಲಾರದು. ಪ್ರಿಯಾಂಕಾ ಗಾಂಧಿಯ ರಾಜಕೀಯ ಪ್ರವೇಶವು ಕಾಂಗ್ರೆಸ್ ಪಕ್ಷದ ದೀರ್ಘಕಾಲಿಕ ಹೂಡಿಕೆಯಾಗಿದೆ. 1990ಕ್ಕೆ ಮುಂಚೆ ಉತ್ತರ ಪ್ರದೇಶದ ಮೇಲೆ ಇಟ್ಟುಕೊಂಡಿದ್ದ ಹಿಡಿತವೇ ಆ ಪಕ್ಷಕ್ಕೆ ದೇಶವನ್ನಾಳುವ ಶಕ್ತಿ ತಂದುಕೊಡುತ್ತಿತ್ತು. ಉತ್ತರ ಪ್ರದೇಶದ ಮುಖ್ಯಮಂತ್ರಿ ವಿ.ಪಿ.ಸಿಂಗ್ ನಂತರ ರಾಜೀವ್‍ಗಾಂಧಿ ಸಂಪುಟದಿಂದ ಹೊರನಡೆದ ಮೇಲೆ ಅದು ಕುಸಿಯಿತು. ಅಲ್ಲಿಂದ ಇಲ್ಲಿಯವರೆಗೆ ಕಾಂಗ್ರೆಸ್ ಮತ್ತೆ ಅಲ್ಲಿ ಅಧಿಕಾರಕ್ಕೆ ಬಂದಿಲ್ಲ. ವಿ.ಪಿ.ಸಿಂಗರ ನಂತರ ಬಿಜೆಪಿ, ಎಸ್‍ಪಿ, ಬಿಎಸ್‍ಪಿಗಳ ನಡುವಿನ ಸಂಘರ್ಷದಲ್ಲಿ ಕಾಂಗ್ರೆಸ್ ಮಂಕಾಗುತ್ತಾ ಬಂದಿತ್ತು. ಮರಳಿ ಉತ್ತರ ಪ್ರದೇಶ ಪಡೆದುಕೊಳ್ಳಲು ಬೇಕಾದ ಬಲವಾದ ಅಸ್ತ್ರವಾಗಿ ಪ್ರಿಯಾಂಕಾರನ್ನು ರಂಗಕ್ಕಿಳಿಸಲಾಗಿದೆ. ಈ ಸದ್ಯ ರಂಗಪ್ರವೇಶವಂತೂ ಯಶಸ್ವಿಯಾಗಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...