Homeಮುಖಪುಟಪ್ರಿಯಾಂಕಾ ವರ್ಸಸ್ ಮೋದಿ : ಸಿನೀಮಿಯ ಸಂಘರ್ಷ ಮತ್ತು ದೂರದೃಷ್ಟಿ

ಪ್ರಿಯಾಂಕಾ ವರ್ಸಸ್ ಮೋದಿ : ಸಿನೀಮಿಯ ಸಂಘರ್ಷ ಮತ್ತು ದೂರದೃಷ್ಟಿ

- Advertisement -
- Advertisement -

| ನೀಲಗಾರ |

ಅಲಹಾಬಾದ್‍ನಿಂದ ವಾರಣಾಸಿಗೆ ಗಂಗಾನದಿಯಲ್ಲಿ ದೋಣಿ ಪಯಣಿಸಿದ್ದು ಕೇವಲ 100 ಕಿ.ಮೀ.ಗಳಷ್ಟೇ ಆಗಿರಲಿಲ್ಲ. ಅದು ಭಾರತದ ರಾಜಕಾರಣದಲ್ಲಿ ಆದ ಬಹುಮುಖ್ಯ ಪ್ರಯಾಣವಾಗಿತ್ತು. ಅಲ್ಲಿನ ಫೋಟೋಗಳನ್ನು ನೋಡಿದರೆ ಅದು ಸುಲಭಕ್ಕೆ ಅರ್ಥವಾಗುತ್ತದೆ. ಆದರೆ, ಅದರ ಹಿಂದೆ ಇನ್ನೂ ಅನೇಕ ಮಹತ್ವದ ಸಂಗತಿಗಳಿವೆ.

  1. ಅಲಹಾಬಾದ್‍ನಿಂದ ಪ್ರಯಾಣ ಆರಂಭಿಸುವ ಮುನ್ನ ಆಕೆ ತಂಗಿದ್ದು, ಸ್ವರಾಜ್ ಭವನದಲ್ಲಿ. ಅದು ಜವಹರಲಾಲ್ ನೆಹರೂ ಅವರ ಮನೆ. ಅದೇ ಮನೆಯಲ್ಲಿ ಇಂದಿರಾಗಾಂಧಿ ಹುಟ್ಟಿದ್ದು. ಅಷ್ಟೇ ಅಲ್ಲದೇ, ಅದೇ ಸ್ವರಾಜ್ ಭವನದಲ್ಲಿ ಭಾರತದ ಸ್ವಾತಂತ್ರ್ಯ ಸಂಗ್ರಾಮದ ಬಹುಮುಖ್ಯ ತೀರ್ಮಾನಗಳನ್ನು ತೆಗೆದುಕೊಳ್ಳಲಾಗಿತ್ತು. ಸ್ವತಂತ್ರ ಸಂಗ್ರಾಮದ ಪರಂಪರೆಯನ್ನು ನಮಗಿಂತ ಹೆಚ್ಚು ಯಾರು ತಮ್ಮದೆಂದುಕೊಳ್ಳಲು ಸಾಧ್ಯ ಎಂಬ ಸಂದೇಶ ರವಾನಿಸುವ ಉದ್ದೇಶ ಅವರಿಗಿತ್ತೋ ಇಲ್ಲವೋ ಗೊತ್ತಿಲ್ಲ. ಏಕೆಂದರೆ ಆ ದಿನ ಪ್ರಿಯಾಂಕಾ ಮಾಡಿದ ಟ್ವೀಟ್‍ನಲ್ಲಿ ಅಜ್ಜಿ ಇಂದಿರಾಗಾಂಧಿಯ ವಾರಸುದಾರಿಕೆಯನ್ನು ಹೊತ್ತುಕೊಳ್ಳುವ ಮಾತುಗಳಿದ್ದವು. ‘ಸ್ವರಾಜ್ ಭವನದ ಅಂಗಳದಲ್ಲಿ ಕುಳಿತರೆ ನನ್ನ ಅಜ್ಜಿ ಹುಟ್ಟಿದ ಕೊಠಡಿ ಕಾಣುತ್ತಿದೆ. ನನ್ನಜ್ಜಿ ಮಲಗುವ ಮುನ್ನ ನನಗೆ ಜೋನ್ ಆಫ್ ಆರ್ಕ್ ಕಥೆಗಳನ್ನು ಹೇಳಿ, ಭಯ ಬಿಟ್ಟು ಧೈರ್ಯಶಾಲಿಯಾಗು ಎಲ್ಲವೂ ಸರಿ ಹೋಗಿಬಿಡುತ್ತದೆ ಎಂದು ಹೇಳುತ್ತಿದ್ದಳು’ ಎಂಬ ಟ್ವೀಟ್ ಅದು.

  1. ತ್ರಿವೇಣಿ ಸಂಗಮದಲ್ಲಿ ಪೂಜೆ ಸಲ್ಲಿಸಿ ಹೊರಟ ಪ್ರಿಯಾಂಕಾ, ವಿದ್ಯಾರ್ಥಿಗಳೊಂದಿಗೆ ‘ಬೋಟ್ ಪೆ ಚರ್ಚಾ’ ಮಾಡಿದರು. ಇದರಲ್ಲಿ ಮೋದಿ ನಡೆಸಿದ ಈವೆಂಟ್‍ನ ಪುನರಾವರ್ತನೆ ಅಲ್ಲದೇ ಇನ್ನೇನೂ ಹೆಚ್ಚುಗಾರಿಕೆ ಇರಲಿಲ್ಲ.
  2. ಆದರೆ, ಬಡೇ ಹನುಮಾನ್ ದೇವಸ್ಥಾನದಿಂದ ಆರಂಭಿಸಿ ಕಾಶಿಯ ವಿಶ್ವನಾಥ ದೇವಸ್ಥಾನದಲ್ಲಿ ನಡೆಸಿದ ಪೂಜೆಯವರೆಗೆ ಎಲ್ಲಾ ಕಡೆ ಕಾಂಗ್ರೆಸ್ ಪ್ರದರ್ಶಿಸಲಿಚ್ಛಿಸುತ್ತಿರುವ ‘ಧಾರ್ಮಿಕ ಒಲವಿನ’ ಪ್ರದರ್ಶನ ಇದ್ದೇ ಇತ್ತು. ಗಂಗಾ ಆರತಿಯೂ ಸೇರಿ ಇವೆಲ್ಲಾ ಆಚರಣೆಗಳು ಮೋದಿ ಅಥವಾ ರಾಹುಲ್ ಗಾಂಧಿಯ ಭಕ್ತಿ ಪ್ರದರ್ಶನಕ್ಕಿಂತ ಸಹಜವಾಗಿದ್ದವು. ರಾಹುಲ್ ಇದನ್ನು ತೋರಿಕೆಗೆ ಮಾಡುವಂತೆ, ಮೋದಿ ಅಹಂಕಾರದಿಂದ ಪ್ರದರ್ಶನಕ್ಕಾಗಿ ಮಾಡುವಂತೆ ಕಾಣುವ ಭಕ್ತಿ, ಆಚರಣೆಗಳು, ಪ್ರಿಯಾಂಕಾ ಮಾಡಿದಾಗ ಸಹಜ ಭಕ್ತಿಯಂತೆ ಕಾಣುತ್ತಿದ್ದವು. 3 ದಿನಗಳ ಪ್ರಯಾಣದಲ್ಲಿ ಮಧ್ಯೆ ಒಮ್ಮೆ ದರ್ಗಾಗೂ ಹೋಗಿದ್ದದ್ದು ಗಮನೀಯವಾದುದು.
  3. ಅಷ್ಟೇನೂ ದೊಡ್ಡದಲ್ಲದ, ಐಷಾರಾಮಿ ಸೌಲಭ್ಯಗಳಿಲ್ಲದ ಮತ್ತು ತ್ರಿವರ್ಣದ ಖಾದಿ ಬಟ್ಟೆಗಳಿಂದ ಸಿಂಗರಿಸಲ್ಪಟ್ಟಿದ್ದ ಬೋಟಿನಲ್ಲಿ ಪ್ರಿಯಾಂಕಾ ಪಯಣಿಸಿದರು. ನಿಧಾನಕ್ಕೆ ಜನರು ಇದನ್ನು ಮೋದಿ ಪಯಣಿಸಿದ ಸೀ ಪ್ಲೇನ್ ಜೊತೆ ಹೋಲಿಸಬಹುದು.
  4. ಈ ಅವಧಿಯಲ್ಲೇ ಬಂದ ಹೋಳಿ ಹಬ್ಬವನ್ನು ಪ್ರಿಯಾಂಕಾ ಅಲ್ಲಿನ ಸಾಮಾನ್ಯ ಜನರ ಜೊತೆ ಸೇರಿ ಆಚರಿಸಿದರು.
  5. ಅಂತಿಮವಾಗಿ ವಾರಣಾಸಿ ತಲುಪಿದ ನಂತರ ದೇವಸ್ಥಾನಗಳ ಭೇಟಿಯ ನಂತರ ನಡೆಸಿದ ಸಾರ್ವಜನಿಕ ಸಭೆಯಲ್ಲಿ ಪ್ರಿಯಾಂಕಾ ಮಾತಾಡಿದ್ದು ಮೋದಿಯವರು ತಮ್ಮ ಕ್ಷೇತ್ರಕ್ಕೆ ಕೊಟ್ಟಿದ್ದ ಭರವಸೆಗಳ ಕುರಿತು. ಅದರ ಪಟ್ಟಿಯನ್ನು ಇಟ್ಟುಕೊಂಡು ಅತ್ಯಂತ ಸರಳವಾಗಿ ಜನರ ಜೊತೆ ಸಂಭಾಷಣೆಯನ್ನು ಶುರು ಮಾಡಿದರು. ‘ಇದೇನು?’, ‘ಇದು ಮೋದಿಯವರು ಕೊಟ್ಟಿದ್ದ ಭರವಸೆಗಳು’, ‘ಇದು ಈಡೇರಿದೆಯಾ?’ “ಇಲ್ಲಾ”, ‘ಇದು?’ “ಇಲ್ಲಾ”, ‘ಇದು’ “ಅದೂ ಇಲ್ಲ”. ಮಾತಾಡುತ್ತಿರುವುದು ಎದುರಿಗಿರುವ ಕೆಲವು ಸಾವಿರ ಜನರಿಗಾದರೂ, ಅದು ಉತ್ತರ ಪ್ರದೇಶಕ್ಕೆ ಕೊಡಬೇಕಾದ ಸಂದೇಶ ಕೊಡುತ್ತದೆಂಬುದು ಆಕೆಗೆ ಗೊತ್ತಿತ್ತು.
  6. ಎಲ್ಲಕ್ಕಿಂತ ಮುಖ್ಯವಾಗಿ, ಮೇಲಿನ ಫೋಟೋದಲ್ಲಿರುವಂತೆ, ದೇವರ ತಿಲಕ ಮತ್ತು ವಿಭೂತಿಯನ್ನು ಹಚ್ಚಿಕೊಂಡು ಪ್ರಿಯಾಂಕಾ ವೇದಿಕೆಯ ಮೇಲೆ ಆಸೀನವಾಗಿದ್ದು. ಜೊತೆಗೆ ಕೊರಳಿಗೆ ರುದ್ರಾಕ್ಷಿ ಮಾಲೆಗಳು. ಅದೇ ವೇಷದಲ್ಲೇ ವೇದಿಕೆಯ ಭಾಷಣವನ್ನೂ ಮಾಡಿದ್ದು. ಇಂತಹ ವೇಷವನ್ನು ಮೊದಲು ಹಾಕಿದ್ದು ಮೋದಿ. ಆಗ, ದೇಶದ ಗಣನೀಯ ಸಂಖ್ಯೆಯ ಜನರ ಪುಣ್ಯಕ್ಷೇತ್ರದಿಂದ ಒಬ್ಬ ಹೊಸ ಸಮರ್ಥ ಸಾಧು ಮೇಲೆದ್ದು ಬಂದಂತೆ ಕಾಣಲು ಬೇಕಾದ ಕೊರಿಯೋಗ್ರಫಿ ನಡೆದಿತ್ತು. ಈಗ? ಈಗ ಸಿನೆಮಾಗಳಲ್ಲಿ ಕಾಣುವಂತಹ ಒಂದು ಸೀನ್ ಸೃಷ್ಟಿಸಲಾಗಿದೆ. ಧರ್ಮದ ಸೋಗಿನಲ್ಲಿ ವಂಚಿಸುವ ದುಷ್ಟನೊಬ್ಬನನ್ನು ಸಂಹರಿಸಲು ಎಳೆಯ ಬಾಲಕಿಯೊಬ್ಬಳು ದೈವ ಕೃಪೆಯನ್ನು ಪಡೆದುಕೊಂಡು ಎದುರು ನಿಂತರೆ ಹೇಗಿರುತ್ತೋ ಆ ರೀತಿಯ ಸೀನ್. ಪ್ರಿಯಾಂಕಾ ವೇದಿಕೆಯ ಮಧ್ಯಭಾಗದಲ್ಲಿ ಕೂತು ಆಶೀರ್ವದಿಸುವಂತೆ ಒಮ್ಮೆ ಕೈ ಮುಂದೆ ಮಾಡುತ್ತಾರೆ. ಅದು ಕಾಂಗ್ರೆಸ್ಸಿನ ಚಿಹ್ನೆಯೆಂಬುದೂ ಕಾರಣವಿರಬಹುದು. ಆದರೆ, ಆಕೆಯಲ್ಲಿ ದುರ್ಗೆ, ಕಾಳಿ ಇತ್ಯಾದಿಗಳನ್ನು ಸಾಮಾನ್ಯ ಜನರು ಕಾಣುವ ಸಾಧ್ಯತೆ ಇದೆ.
  7. ಭಾರತದ ರಾಜಕಾರಣದಲ್ಲಿ ಇಂತಹ ಇನ್ನೂ ಏನೇನನ್ನು ನಾವು ನೋಡಬೇಕಾಗುತ್ತೋ ಗೊತ್ತಿಲ್ಲ. ಆದರೆ, ಇಲ್ಲಿನ ಚುನಾವಣೆಗಳ ರಂಗನ್ನು ವಿಪರೀತವಾಗಿ ಏರಿಸಿದ ನರೇಂದ್ರ ಮೋದಿಗೆ ಅದೇ ರೀತಿಯಲ್ಲಿ ಹೋಳಿ ಎರಚುವ ಸಾಮಥ್ರ್ಯ ನಮಗೂ ಇದೆ ಎಂದು ವಿರೋಧ ಪಕ್ಷವು ತೋರಿಸುತ್ತಿದೆ. ಅಂತಹ ಮುಖಾಮುಖಿಯಲ್ಲಿ ರಾಹುಲ್‍ಗಿಂತ ಪ್ರಿಯಾಂಕಾಗೆ ಹೆಚ್ಚಿನ ಸಾಧ್ಯತೆಗಳಿವೆ ಎಂಬುದನ್ನು ಈ ‘ಗಂಗಾಪಯಣ’ ತೋರಿಸಿದೆ.
  8. ಹಾಗೆ ನೋಡಿದರೆ ರಾಹುಲ್‍ಗಾಂಧಿ ರೈತರ ಸಂಕಷ್ಟ, ನಿರುದ್ಯೋಗ, ರಾಫೇಲ್ ಭ್ರಷ್ಟಾಚಾರ ಇತ್ಯಾದಿ ಅಸಲಿ ಸಂಗತಿಗಳ ಕುರಿತು ಮಾತನಾಡುತ್ತಿರುವುದಕ್ಕೇ ಹೆಚ್ಚಿನ ಮಹತ್ವ ಇರಬೇಕಿತ್ತು. ಆದರೆ, ರಾಜಕಾರಣವು ಒಂದು ಜನರ ಮನಸ್ಸಿನ ಮೇಲೆ ಪರಿಣಾಮ ಬೀರುವ ವಿವಿಧ ಸಿನೀಮಿಯ ದೃಶ್ಯಗಳಿಂದ ಜನರನ್ನು ಮರುಳುಗೊಳಿಸುವ ಆಟವಾಡುತ್ತದೆ. ಇಂತಹ ಬಿಂಬಗಳು ಬಹುಬೇಗನೇ ಅಸಲಿ ಸಮಸ್ಯೆಗಳನ್ನು ಮಸುಕುಗೊಳಿಸುತ್ತವೆ. ಅದೇನೇ ಇರಲಿ, ಈ ಆಟದಲ್ಲಿ ಪ್ರಿಯಾಂಕಾ ಪ್ರವೇಶದಿಂದ ಮೋದಿ ಭಕ್ತ ಪಡೆಯು ಗಲಿಬಿಲಿಗೊಳ್ಳುವುದರಲ್ಲಿ ಸಂಶಯವಿಲ್ಲ.
  9. ಇಂದಿಗೆ 10 ವರ್ಷಗಳ ನಂತರ ಎಲ್ಲರೂ ಹೌದಲ್ಲಾ ಎಂದುಕೊಳ್ಳಬಹುದಾದ ಇನ್ನೊಂದು ಸಂಗತಿಯಿದೆ. ಈ ಚುನಾವಣೆಯಲ್ಲಿ ಕಾಂಗ್ರೆಸ್‍ಗೆ ಉತ್ತರ ಪ್ರದೇಶದಲ್ಲಿ ಹೆಚ್ಚಿನ ಸೀಟು ಗಳಿಕೆ ಆಗಲಾರದು. ಪ್ರಿಯಾಂಕಾ ಗಾಂಧಿಯ ರಾಜಕೀಯ ಪ್ರವೇಶವು ಕಾಂಗ್ರೆಸ್ ಪಕ್ಷದ ದೀರ್ಘಕಾಲಿಕ ಹೂಡಿಕೆಯಾಗಿದೆ. 1990ಕ್ಕೆ ಮುಂಚೆ ಉತ್ತರ ಪ್ರದೇಶದ ಮೇಲೆ ಇಟ್ಟುಕೊಂಡಿದ್ದ ಹಿಡಿತವೇ ಆ ಪಕ್ಷಕ್ಕೆ ದೇಶವನ್ನಾಳುವ ಶಕ್ತಿ ತಂದುಕೊಡುತ್ತಿತ್ತು. ಉತ್ತರ ಪ್ರದೇಶದ ಮುಖ್ಯಮಂತ್ರಿ ವಿ.ಪಿ.ಸಿಂಗ್ ನಂತರ ರಾಜೀವ್‍ಗಾಂಧಿ ಸಂಪುಟದಿಂದ ಹೊರನಡೆದ ಮೇಲೆ ಅದು ಕುಸಿಯಿತು. ಅಲ್ಲಿಂದ ಇಲ್ಲಿಯವರೆಗೆ ಕಾಂಗ್ರೆಸ್ ಮತ್ತೆ ಅಲ್ಲಿ ಅಧಿಕಾರಕ್ಕೆ ಬಂದಿಲ್ಲ. ವಿ.ಪಿ.ಸಿಂಗರ ನಂತರ ಬಿಜೆಪಿ, ಎಸ್‍ಪಿ, ಬಿಎಸ್‍ಪಿಗಳ ನಡುವಿನ ಸಂಘರ್ಷದಲ್ಲಿ ಕಾಂಗ್ರೆಸ್ ಮಂಕಾಗುತ್ತಾ ಬಂದಿತ್ತು. ಮರಳಿ ಉತ್ತರ ಪ್ರದೇಶ ಪಡೆದುಕೊಳ್ಳಲು ಬೇಕಾದ ಬಲವಾದ ಅಸ್ತ್ರವಾಗಿ ಪ್ರಿಯಾಂಕಾರನ್ನು ರಂಗಕ್ಕಿಳಿಸಲಾಗಿದೆ. ಈ ಸದ್ಯ ರಂಗಪ್ರವೇಶವಂತೂ ಯಶಸ್ವಿಯಾಗಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ವೆಟ್ಟುವಂ’ ಪಾ.ರಂಜಿತ್ ಅವರ ಅದ್ಭುತ ಅಪೋಕಲಿಪ್ಟಿಕ್ ಆಕ್ಷನ್ ಸಿನಿಮಾ: ರಂಗನಾಥ್ ಆರ್. ವಿ

ತಮಿಳಿನ ಖ್ಯಾತ ನಿರ್ದೇಶಕ ಪಾ.ರಂಜಿತ್ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ 'ವೆಟ್ಟುವಂ' ಚಿತ್ರವನ್ನು 'ಲರ್ನ್ ಆಂಡ್ ಟೀಚ್ ಪ್ರೊಡಕ್ಷನ್' ಸಂಸ್ಥೆಯ ಸಹಯೋಗದೊಂದಿಗೆ, ಪಾ.ರಂಜಿತ್ ಅವರ 'ನೀಲಂ ಪ್ರೊಡಕ್ಷನ್ಸ್' ನಿರ್ಮಿಸಿದೆ. ಈ ಚಿತ್ರದ ಜಗತ್ತನ್ನು ಪರಿಚಯಿಸುವ...

SIR ಮೋಸ: ಅಗತ್ಯಬಿದ್ದರೆ ಕಾಂಗ್ರೆಸ್‌ನಿಂದ ಕಾನೂನು ಹೋರಾಟ ಬಿ.ಕೆ. ಹರಿಪ್ರಸಾದ್ ಎಚ್ಚರಿಕೆ

ಕರ್ನಾಟಕದಲ್ಲಿ ಪ್ರಸ್ತುತ ನಡೆಯುತ್ತಿರುವ 2026ರ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಭಾರಿ ಪ್ರಮಾಣದ ತಾಂತ್ರಿಕ ಲೋಪಗಳು, ಅಂಕಿಅಂಶಗಳ ವ್ಯತ್ಯಾಸ ಹಾಗೂ ಮತದಾರರ ಪಟ್ಟಿಗೆ ಸಂಬಂಧಿಸಿದಂತೆ ಸ್ಪಷ್ಟತೆಯ ಕೊರತೆ ಎದ್ದುಕಾಣುತ್ತಿದೆ ಎಂದು...

ವಿಚಾರಣೆಯಿಲ್ಲದೆ ಆರು ವರ್ಷ ಜೈಲುವಾಸ: ಉಮರ್ ಖಾಲಿದ್ ಹೋರಾಟದ ಹಾದಿ

ಸೆಪ್ಟೆಂಬರ್ 13, 2020 ರಂದು, ಮಾನವ ಹಕ್ಕುಗಳ ಯುವ ಕಾರ್ಯಕರ್ತ ಉಮರ್ ಖಾಲಿದ್ ಅವರನ್ನು ದೇಶದ ರಾಜಧಾನಿಯಲ್ಲಿ ಗುರಿಯಾಗಿಸಿಕೊಳ್ಳಲಾಯಿತು. ವಿಚಾರಣೆಯೇ ಇಲ್ಲದೆ ಅವರು ಜೈಲಿನಲ್ಲಿ ಆರು ವರ್ಷಗಳನ್ನು ಪೂರೈಸಿದ್ದಾರೆ. ಸರ್ಕಾರದ ವಿರುದ್ಧದ ರಾಜಕೀಯ...

ಕನ್ವರ್ ಯಾತ್ರೆ ವೇಳೆ 18 ದ್ವೇಷ ಘಟನೆಗಳು: ಮುಸ್ಲಿಮರು, ಅವರ ವ್ಯಾಪಾರಗಳನ್ನು ಗುರಿಯಾಗಿಸಿಕೊಂಡ ಪ್ರಕರಣಗಳೇ ಹೆಚ್ಚು; APCR ವರದಿ

ನವದೆಹಲಿ: 2026ರ ಕನ್ವರ್ ಯಾತ್ರೆಯ 13 ದಿನಗಳ ಅವಧಿಯಲ್ಲಿ ಹಿಂಸಾಚಾರ, ಬಲವಂತ, ತಾರತಮ್ಯ, ಆರ್ಥಿಕ ಬಹಿಷ್ಕಾರ ಹಾಗೂ ಸಾರ್ವಜನಿಕ ಅಶ್ಲೀಲ ವರ್ತನೆಗೆ ಸಂಬಂಧಿಸಿದ ಕನಿಷ್ಠ 18 ಘಟನೆಗಳು ವರದಿಯಾಗಿವೆ ಎಂದು ನಾಗರಿಕ ಹಕ್ಕುಗಳ...

ಸಿಐಟಿಯು ಕಾನೂನು ಹೋರಾಟಕ್ಕೆ ಮೊದಲ ಜಯ: ಕನಿಷ್ಠ ವೇತನ ತಡೆಹಿಡಿದಿದ್ದ ಸರ್ಕಾರದ ಮೂರು ಸುತ್ತೋಲೆಗಳಿಗೆ ಹೈಕೋರ್ಟ್ ತಡೆ

ಸರ್ಕಾರಿ ಇಲಾಖೆಗಳು ಮತ್ತು ಸ್ಥಳೀಯ ಸಂಸ್ಥೆಗಳಲ್ಲಿ ಕೆಲಸ ಮಾಡುವ ಲಕ್ಷಾಂತರ ಕಾರ್ಮಿಕರ ಹೊಸ ಕನಿಷ್ಠ ವೇತನವನ್ನು ತಡೆಹಿಡಿದಿದ್ದ ಸರ್ಕಾರದ ನಿರ್ಧಾರಕ್ಕೆ ಹೈಕೋರ್ಟ್ ಬ್ರೇಕ್ ಹಾಕಿದೆ. ಹೊಸ ವೇತನ ನೀಡುವುದನ್ನು ಅಮಾನತಿನಲ್ಲಿಟ್ಟಿದ್ದ ಸರ್ಕಾರದ ಮೂರು...

ಟಿಎಂಸಿ ಹೆಸರು, ಚಿಹ್ನೆ ಫ್ರೀಜ್: ಮಮತಾ ಬ್ಯಾನರ್ಜಿಗೆ ‘ಫುಟ್‌ಬಾಲ್ ಪ್ಲೇಯರ್’, ಬಂಡಾಯ ಬಣಕ್ಕೆ ‘ಲಕೋಟೆ’ ಚಿಹ್ನೆ ನೀಡಿದ ಚುನಾವಣಾ ಆಯೋಗ

ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಮೂಲ ಹೆಸರು ಮತ್ತು ಸಾಂಪ್ರದಾಯಿಕ 'ಹೂವು-ಹುಲ್ಲು' ಚಿಹ್ನೆಯನ್ನು ಮುಟ್ಟುಗೋಲು (ಫ್ರೀಜ್) ಹಾಕಿದ ನಂತರ, ಭಾರತೀಯ ಚುನಾವಣಾ ಆಯೋಗವು ಶುಕ್ರವಾರ ಎರಡೂ ಎದುರಾಳಿ ಬಣಗಳಿಗೆ ಪ್ರತ್ಯೇಕ ಮಧ್ಯಂತರ ಹೆಸರು...

‘ರೋಹಿತ್ ವೇಮುಲಾ ಸ್ಥಿತಿ ನನಗೆ ಬಾರದಿರಲಿ..’; ವಿದೇಶದಲ್ಲಿ ಕಷ್ಟಕ್ಕೆ ಸಿಲುಕಿದ ತಮಿಳುನಾಡಿನ ದಲಿತ ಸಂಶೋಧಕ

ಮಲೇಷ್ಯಾದಲ್ಲಿ ಪಿಎಚ್‌ಡಿ ವ್ಯಾಸಂಗ ಮಾಡುತ್ತಿರುವ ತಮಿಳುನಾಡಿನ ದಲಿತ ಸಂಶೋಧನಾ ವಿದ್ಯಾರ್ಥಿ ಭಾರತಿ ದಾಸನ್ ರಾಮನ್, ತಮಿಳುನಾಡು ಸರ್ಕಾರದ ಸಾಮಾಜಿಕ ನ್ಯಾಯ ಇಲಾಖೆಯು ನನ್ನನ್ನು ಗುರಿಯಾಗಿಸಿಕೊಂಡಿದೆ ಎಂದು ಆರೋಪಿಸಿದ್ದಾರೆ ಎಂದು 'ದಿ ನ್ಯೂಸ್‌ ಮಿನಿಟ್'...

DUSU ಚುನಾವಣೆ: ಮತದಾನ ಆರಂಭ; ವಿಜಯೋತ್ಸವ ಮೆರವಣಿಗೆಗೆ ದೆಹಲಿ ಹೈಕೋರ್ಟ್ ತಡೆ

ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘದ (DUSU) 2026-27ನೇ ಸಾಲಿನ ಚುನಾವಣೆಗೆ ಶುಕ್ರವಾರ (ಸೆ.18) ಮತದಾನ ಆರಂಭವಾಗಿದೆ. ಬೆಳಗಿನ ಅವಧಿಯ ಕಾಲೇಜುಗಳ ವಿದ್ಯಾರ್ಥಿಗಳಿಗೆ ಬೆಳಿಗ್ಗೆ 8:30ರಿಂದ ಮಧ್ಯಾಹ್ನ 1ರವರೆಗೆ ಹಾಗೂ ಸಂಜೆ ಕಾಲೇಜುಗಳ ವಿದ್ಯಾರ್ಥಿಗಳಿಗೆ...

ಕರಾವಳಿ ಇತಿಹಾಸದಲ್ಲೇ ಪ್ರಥಮ: ಮಂಗಳೂರಿನಲ್ಲಿ ಸಿಎಂ ‘ಡಿ.ಕೆ ಶಿವಕುಮಾರ್’ ನೇತೃತ್ವದಲ್ಲಿ ರಾಜ್ಯ ಸಚಿವ ಸಂಪುಟ ಸಭೆ

ಕರಾವಳಿ ಕರ್ನಾಟಕದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ರಾಜ್ಯ ಸಚಿವ ಸಂಪುಟ (Cabinet) ಸಭೆಯು ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಪಡೀಲ್‌ನಲ್ಲಿರುವ ನೂತನ 'ಪ್ರಜಾ ಸೌಧ'ದಲ್ಲಿ (ಜಿಲ್ಲಾಡಳಿತ ಸೌಧ) ಶುಕ್ರವಾರ ವಿಜೃಂಭಣೆಯಿಂದ ಆರಂಭವಾಗಿದೆ....

ಟಿಎಂಸಿ ಹೆಸರು, ಚಿಹ್ನೆ ಬಳಕೆಗೆ ತಡೆ: ಚುನಾವಣಾ ಆಯೋಗದ ಆದೇಶ ‘ಕಾನೂನಿಗೆ ವಿರುದ್ಧ’ ಎಂದ ಮಮತಾ ಬಣ, ಆದೇಶ ಸ್ವಾಗತಿಸಿದ ಬಂಡಾಯ ಪಾಳಯ 

ಕೊಲ್ಕತ್ತಾ: ಪಶ್ಚಿಮ ಬಂಗಾಳದ ಆಡಳಿತ ರಾಜಕಾರಣದಲ್ಲಿ ಪ್ರಮುಖ ಶಕ್ತಿಯಾಗಿರುವ ತೃಣಮೂಲ ಕಾಂಗ್ರೆಸ್‌ (ಟಿಎಂಸಿ)ಯ ಆಂತರಿಕ ಬಿಕ್ಕಟ್ಟು ಇದೀಗ ಪಕ್ಷದ ಹೆಸರು ಮತ್ತು ಚುನಾವಣಾ ಚಿಹ್ನೆಯ ಮೇಲಿನ ಹಕ್ಕಿನ ಸಂಘರ್ಷವಾಗಿ ತೀವ್ರಗೊಂಡಿದೆ. ಟಿಎಂಸಿಯ ಎರಡು...