Homeಮುಖಪುಟಪ್ರಿಯಾಂಕಾ ವರ್ಸಸ್ ಮೋದಿ : ಸಿನೀಮಿಯ ಸಂಘರ್ಷ ಮತ್ತು ದೂರದೃಷ್ಟಿ

ಪ್ರಿಯಾಂಕಾ ವರ್ಸಸ್ ಮೋದಿ : ಸಿನೀಮಿಯ ಸಂಘರ್ಷ ಮತ್ತು ದೂರದೃಷ್ಟಿ

- Advertisement -
- Advertisement -

| ನೀಲಗಾರ |

ಅಲಹಾಬಾದ್‍ನಿಂದ ವಾರಣಾಸಿಗೆ ಗಂಗಾನದಿಯಲ್ಲಿ ದೋಣಿ ಪಯಣಿಸಿದ್ದು ಕೇವಲ 100 ಕಿ.ಮೀ.ಗಳಷ್ಟೇ ಆಗಿರಲಿಲ್ಲ. ಅದು ಭಾರತದ ರಾಜಕಾರಣದಲ್ಲಿ ಆದ ಬಹುಮುಖ್ಯ ಪ್ರಯಾಣವಾಗಿತ್ತು. ಅಲ್ಲಿನ ಫೋಟೋಗಳನ್ನು ನೋಡಿದರೆ ಅದು ಸುಲಭಕ್ಕೆ ಅರ್ಥವಾಗುತ್ತದೆ. ಆದರೆ, ಅದರ ಹಿಂದೆ ಇನ್ನೂ ಅನೇಕ ಮಹತ್ವದ ಸಂಗತಿಗಳಿವೆ.

  1. ಅಲಹಾಬಾದ್‍ನಿಂದ ಪ್ರಯಾಣ ಆರಂಭಿಸುವ ಮುನ್ನ ಆಕೆ ತಂಗಿದ್ದು, ಸ್ವರಾಜ್ ಭವನದಲ್ಲಿ. ಅದು ಜವಹರಲಾಲ್ ನೆಹರೂ ಅವರ ಮನೆ. ಅದೇ ಮನೆಯಲ್ಲಿ ಇಂದಿರಾಗಾಂಧಿ ಹುಟ್ಟಿದ್ದು. ಅಷ್ಟೇ ಅಲ್ಲದೇ, ಅದೇ ಸ್ವರಾಜ್ ಭವನದಲ್ಲಿ ಭಾರತದ ಸ್ವಾತಂತ್ರ್ಯ ಸಂಗ್ರಾಮದ ಬಹುಮುಖ್ಯ ತೀರ್ಮಾನಗಳನ್ನು ತೆಗೆದುಕೊಳ್ಳಲಾಗಿತ್ತು. ಸ್ವತಂತ್ರ ಸಂಗ್ರಾಮದ ಪರಂಪರೆಯನ್ನು ನಮಗಿಂತ ಹೆಚ್ಚು ಯಾರು ತಮ್ಮದೆಂದುಕೊಳ್ಳಲು ಸಾಧ್ಯ ಎಂಬ ಸಂದೇಶ ರವಾನಿಸುವ ಉದ್ದೇಶ ಅವರಿಗಿತ್ತೋ ಇಲ್ಲವೋ ಗೊತ್ತಿಲ್ಲ. ಏಕೆಂದರೆ ಆ ದಿನ ಪ್ರಿಯಾಂಕಾ ಮಾಡಿದ ಟ್ವೀಟ್‍ನಲ್ಲಿ ಅಜ್ಜಿ ಇಂದಿರಾಗಾಂಧಿಯ ವಾರಸುದಾರಿಕೆಯನ್ನು ಹೊತ್ತುಕೊಳ್ಳುವ ಮಾತುಗಳಿದ್ದವು. ‘ಸ್ವರಾಜ್ ಭವನದ ಅಂಗಳದಲ್ಲಿ ಕುಳಿತರೆ ನನ್ನ ಅಜ್ಜಿ ಹುಟ್ಟಿದ ಕೊಠಡಿ ಕಾಣುತ್ತಿದೆ. ನನ್ನಜ್ಜಿ ಮಲಗುವ ಮುನ್ನ ನನಗೆ ಜೋನ್ ಆಫ್ ಆರ್ಕ್ ಕಥೆಗಳನ್ನು ಹೇಳಿ, ಭಯ ಬಿಟ್ಟು ಧೈರ್ಯಶಾಲಿಯಾಗು ಎಲ್ಲವೂ ಸರಿ ಹೋಗಿಬಿಡುತ್ತದೆ ಎಂದು ಹೇಳುತ್ತಿದ್ದಳು’ ಎಂಬ ಟ್ವೀಟ್ ಅದು.

  1. ತ್ರಿವೇಣಿ ಸಂಗಮದಲ್ಲಿ ಪೂಜೆ ಸಲ್ಲಿಸಿ ಹೊರಟ ಪ್ರಿಯಾಂಕಾ, ವಿದ್ಯಾರ್ಥಿಗಳೊಂದಿಗೆ ‘ಬೋಟ್ ಪೆ ಚರ್ಚಾ’ ಮಾಡಿದರು. ಇದರಲ್ಲಿ ಮೋದಿ ನಡೆಸಿದ ಈವೆಂಟ್‍ನ ಪುನರಾವರ್ತನೆ ಅಲ್ಲದೇ ಇನ್ನೇನೂ ಹೆಚ್ಚುಗಾರಿಕೆ ಇರಲಿಲ್ಲ.
  2. ಆದರೆ, ಬಡೇ ಹನುಮಾನ್ ದೇವಸ್ಥಾನದಿಂದ ಆರಂಭಿಸಿ ಕಾಶಿಯ ವಿಶ್ವನಾಥ ದೇವಸ್ಥಾನದಲ್ಲಿ ನಡೆಸಿದ ಪೂಜೆಯವರೆಗೆ ಎಲ್ಲಾ ಕಡೆ ಕಾಂಗ್ರೆಸ್ ಪ್ರದರ್ಶಿಸಲಿಚ್ಛಿಸುತ್ತಿರುವ ‘ಧಾರ್ಮಿಕ ಒಲವಿನ’ ಪ್ರದರ್ಶನ ಇದ್ದೇ ಇತ್ತು. ಗಂಗಾ ಆರತಿಯೂ ಸೇರಿ ಇವೆಲ್ಲಾ ಆಚರಣೆಗಳು ಮೋದಿ ಅಥವಾ ರಾಹುಲ್ ಗಾಂಧಿಯ ಭಕ್ತಿ ಪ್ರದರ್ಶನಕ್ಕಿಂತ ಸಹಜವಾಗಿದ್ದವು. ರಾಹುಲ್ ಇದನ್ನು ತೋರಿಕೆಗೆ ಮಾಡುವಂತೆ, ಮೋದಿ ಅಹಂಕಾರದಿಂದ ಪ್ರದರ್ಶನಕ್ಕಾಗಿ ಮಾಡುವಂತೆ ಕಾಣುವ ಭಕ್ತಿ, ಆಚರಣೆಗಳು, ಪ್ರಿಯಾಂಕಾ ಮಾಡಿದಾಗ ಸಹಜ ಭಕ್ತಿಯಂತೆ ಕಾಣುತ್ತಿದ್ದವು. 3 ದಿನಗಳ ಪ್ರಯಾಣದಲ್ಲಿ ಮಧ್ಯೆ ಒಮ್ಮೆ ದರ್ಗಾಗೂ ಹೋಗಿದ್ದದ್ದು ಗಮನೀಯವಾದುದು.
  3. ಅಷ್ಟೇನೂ ದೊಡ್ಡದಲ್ಲದ, ಐಷಾರಾಮಿ ಸೌಲಭ್ಯಗಳಿಲ್ಲದ ಮತ್ತು ತ್ರಿವರ್ಣದ ಖಾದಿ ಬಟ್ಟೆಗಳಿಂದ ಸಿಂಗರಿಸಲ್ಪಟ್ಟಿದ್ದ ಬೋಟಿನಲ್ಲಿ ಪ್ರಿಯಾಂಕಾ ಪಯಣಿಸಿದರು. ನಿಧಾನಕ್ಕೆ ಜನರು ಇದನ್ನು ಮೋದಿ ಪಯಣಿಸಿದ ಸೀ ಪ್ಲೇನ್ ಜೊತೆ ಹೋಲಿಸಬಹುದು.
  4. ಈ ಅವಧಿಯಲ್ಲೇ ಬಂದ ಹೋಳಿ ಹಬ್ಬವನ್ನು ಪ್ರಿಯಾಂಕಾ ಅಲ್ಲಿನ ಸಾಮಾನ್ಯ ಜನರ ಜೊತೆ ಸೇರಿ ಆಚರಿಸಿದರು.
  5. ಅಂತಿಮವಾಗಿ ವಾರಣಾಸಿ ತಲುಪಿದ ನಂತರ ದೇವಸ್ಥಾನಗಳ ಭೇಟಿಯ ನಂತರ ನಡೆಸಿದ ಸಾರ್ವಜನಿಕ ಸಭೆಯಲ್ಲಿ ಪ್ರಿಯಾಂಕಾ ಮಾತಾಡಿದ್ದು ಮೋದಿಯವರು ತಮ್ಮ ಕ್ಷೇತ್ರಕ್ಕೆ ಕೊಟ್ಟಿದ್ದ ಭರವಸೆಗಳ ಕುರಿತು. ಅದರ ಪಟ್ಟಿಯನ್ನು ಇಟ್ಟುಕೊಂಡು ಅತ್ಯಂತ ಸರಳವಾಗಿ ಜನರ ಜೊತೆ ಸಂಭಾಷಣೆಯನ್ನು ಶುರು ಮಾಡಿದರು. ‘ಇದೇನು?’, ‘ಇದು ಮೋದಿಯವರು ಕೊಟ್ಟಿದ್ದ ಭರವಸೆಗಳು’, ‘ಇದು ಈಡೇರಿದೆಯಾ?’ “ಇಲ್ಲಾ”, ‘ಇದು?’ “ಇಲ್ಲಾ”, ‘ಇದು’ “ಅದೂ ಇಲ್ಲ”. ಮಾತಾಡುತ್ತಿರುವುದು ಎದುರಿಗಿರುವ ಕೆಲವು ಸಾವಿರ ಜನರಿಗಾದರೂ, ಅದು ಉತ್ತರ ಪ್ರದೇಶಕ್ಕೆ ಕೊಡಬೇಕಾದ ಸಂದೇಶ ಕೊಡುತ್ತದೆಂಬುದು ಆಕೆಗೆ ಗೊತ್ತಿತ್ತು.
  6. ಎಲ್ಲಕ್ಕಿಂತ ಮುಖ್ಯವಾಗಿ, ಮೇಲಿನ ಫೋಟೋದಲ್ಲಿರುವಂತೆ, ದೇವರ ತಿಲಕ ಮತ್ತು ವಿಭೂತಿಯನ್ನು ಹಚ್ಚಿಕೊಂಡು ಪ್ರಿಯಾಂಕಾ ವೇದಿಕೆಯ ಮೇಲೆ ಆಸೀನವಾಗಿದ್ದು. ಜೊತೆಗೆ ಕೊರಳಿಗೆ ರುದ್ರಾಕ್ಷಿ ಮಾಲೆಗಳು. ಅದೇ ವೇಷದಲ್ಲೇ ವೇದಿಕೆಯ ಭಾಷಣವನ್ನೂ ಮಾಡಿದ್ದು. ಇಂತಹ ವೇಷವನ್ನು ಮೊದಲು ಹಾಕಿದ್ದು ಮೋದಿ. ಆಗ, ದೇಶದ ಗಣನೀಯ ಸಂಖ್ಯೆಯ ಜನರ ಪುಣ್ಯಕ್ಷೇತ್ರದಿಂದ ಒಬ್ಬ ಹೊಸ ಸಮರ್ಥ ಸಾಧು ಮೇಲೆದ್ದು ಬಂದಂತೆ ಕಾಣಲು ಬೇಕಾದ ಕೊರಿಯೋಗ್ರಫಿ ನಡೆದಿತ್ತು. ಈಗ? ಈಗ ಸಿನೆಮಾಗಳಲ್ಲಿ ಕಾಣುವಂತಹ ಒಂದು ಸೀನ್ ಸೃಷ್ಟಿಸಲಾಗಿದೆ. ಧರ್ಮದ ಸೋಗಿನಲ್ಲಿ ವಂಚಿಸುವ ದುಷ್ಟನೊಬ್ಬನನ್ನು ಸಂಹರಿಸಲು ಎಳೆಯ ಬಾಲಕಿಯೊಬ್ಬಳು ದೈವ ಕೃಪೆಯನ್ನು ಪಡೆದುಕೊಂಡು ಎದುರು ನಿಂತರೆ ಹೇಗಿರುತ್ತೋ ಆ ರೀತಿಯ ಸೀನ್. ಪ್ರಿಯಾಂಕಾ ವೇದಿಕೆಯ ಮಧ್ಯಭಾಗದಲ್ಲಿ ಕೂತು ಆಶೀರ್ವದಿಸುವಂತೆ ಒಮ್ಮೆ ಕೈ ಮುಂದೆ ಮಾಡುತ್ತಾರೆ. ಅದು ಕಾಂಗ್ರೆಸ್ಸಿನ ಚಿಹ್ನೆಯೆಂಬುದೂ ಕಾರಣವಿರಬಹುದು. ಆದರೆ, ಆಕೆಯಲ್ಲಿ ದುರ್ಗೆ, ಕಾಳಿ ಇತ್ಯಾದಿಗಳನ್ನು ಸಾಮಾನ್ಯ ಜನರು ಕಾಣುವ ಸಾಧ್ಯತೆ ಇದೆ.
  7. ಭಾರತದ ರಾಜಕಾರಣದಲ್ಲಿ ಇಂತಹ ಇನ್ನೂ ಏನೇನನ್ನು ನಾವು ನೋಡಬೇಕಾಗುತ್ತೋ ಗೊತ್ತಿಲ್ಲ. ಆದರೆ, ಇಲ್ಲಿನ ಚುನಾವಣೆಗಳ ರಂಗನ್ನು ವಿಪರೀತವಾಗಿ ಏರಿಸಿದ ನರೇಂದ್ರ ಮೋದಿಗೆ ಅದೇ ರೀತಿಯಲ್ಲಿ ಹೋಳಿ ಎರಚುವ ಸಾಮಥ್ರ್ಯ ನಮಗೂ ಇದೆ ಎಂದು ವಿರೋಧ ಪಕ್ಷವು ತೋರಿಸುತ್ತಿದೆ. ಅಂತಹ ಮುಖಾಮುಖಿಯಲ್ಲಿ ರಾಹುಲ್‍ಗಿಂತ ಪ್ರಿಯಾಂಕಾಗೆ ಹೆಚ್ಚಿನ ಸಾಧ್ಯತೆಗಳಿವೆ ಎಂಬುದನ್ನು ಈ ‘ಗಂಗಾಪಯಣ’ ತೋರಿಸಿದೆ.
  8. ಹಾಗೆ ನೋಡಿದರೆ ರಾಹುಲ್‍ಗಾಂಧಿ ರೈತರ ಸಂಕಷ್ಟ, ನಿರುದ್ಯೋಗ, ರಾಫೇಲ್ ಭ್ರಷ್ಟಾಚಾರ ಇತ್ಯಾದಿ ಅಸಲಿ ಸಂಗತಿಗಳ ಕುರಿತು ಮಾತನಾಡುತ್ತಿರುವುದಕ್ಕೇ ಹೆಚ್ಚಿನ ಮಹತ್ವ ಇರಬೇಕಿತ್ತು. ಆದರೆ, ರಾಜಕಾರಣವು ಒಂದು ಜನರ ಮನಸ್ಸಿನ ಮೇಲೆ ಪರಿಣಾಮ ಬೀರುವ ವಿವಿಧ ಸಿನೀಮಿಯ ದೃಶ್ಯಗಳಿಂದ ಜನರನ್ನು ಮರುಳುಗೊಳಿಸುವ ಆಟವಾಡುತ್ತದೆ. ಇಂತಹ ಬಿಂಬಗಳು ಬಹುಬೇಗನೇ ಅಸಲಿ ಸಮಸ್ಯೆಗಳನ್ನು ಮಸುಕುಗೊಳಿಸುತ್ತವೆ. ಅದೇನೇ ಇರಲಿ, ಈ ಆಟದಲ್ಲಿ ಪ್ರಿಯಾಂಕಾ ಪ್ರವೇಶದಿಂದ ಮೋದಿ ಭಕ್ತ ಪಡೆಯು ಗಲಿಬಿಲಿಗೊಳ್ಳುವುದರಲ್ಲಿ ಸಂಶಯವಿಲ್ಲ.
  9. ಇಂದಿಗೆ 10 ವರ್ಷಗಳ ನಂತರ ಎಲ್ಲರೂ ಹೌದಲ್ಲಾ ಎಂದುಕೊಳ್ಳಬಹುದಾದ ಇನ್ನೊಂದು ಸಂಗತಿಯಿದೆ. ಈ ಚುನಾವಣೆಯಲ್ಲಿ ಕಾಂಗ್ರೆಸ್‍ಗೆ ಉತ್ತರ ಪ್ರದೇಶದಲ್ಲಿ ಹೆಚ್ಚಿನ ಸೀಟು ಗಳಿಕೆ ಆಗಲಾರದು. ಪ್ರಿಯಾಂಕಾ ಗಾಂಧಿಯ ರಾಜಕೀಯ ಪ್ರವೇಶವು ಕಾಂಗ್ರೆಸ್ ಪಕ್ಷದ ದೀರ್ಘಕಾಲಿಕ ಹೂಡಿಕೆಯಾಗಿದೆ. 1990ಕ್ಕೆ ಮುಂಚೆ ಉತ್ತರ ಪ್ರದೇಶದ ಮೇಲೆ ಇಟ್ಟುಕೊಂಡಿದ್ದ ಹಿಡಿತವೇ ಆ ಪಕ್ಷಕ್ಕೆ ದೇಶವನ್ನಾಳುವ ಶಕ್ತಿ ತಂದುಕೊಡುತ್ತಿತ್ತು. ಉತ್ತರ ಪ್ರದೇಶದ ಮುಖ್ಯಮಂತ್ರಿ ವಿ.ಪಿ.ಸಿಂಗ್ ನಂತರ ರಾಜೀವ್‍ಗಾಂಧಿ ಸಂಪುಟದಿಂದ ಹೊರನಡೆದ ಮೇಲೆ ಅದು ಕುಸಿಯಿತು. ಅಲ್ಲಿಂದ ಇಲ್ಲಿಯವರೆಗೆ ಕಾಂಗ್ರೆಸ್ ಮತ್ತೆ ಅಲ್ಲಿ ಅಧಿಕಾರಕ್ಕೆ ಬಂದಿಲ್ಲ. ವಿ.ಪಿ.ಸಿಂಗರ ನಂತರ ಬಿಜೆಪಿ, ಎಸ್‍ಪಿ, ಬಿಎಸ್‍ಪಿಗಳ ನಡುವಿನ ಸಂಘರ್ಷದಲ್ಲಿ ಕಾಂಗ್ರೆಸ್ ಮಂಕಾಗುತ್ತಾ ಬಂದಿತ್ತು. ಮರಳಿ ಉತ್ತರ ಪ್ರದೇಶ ಪಡೆದುಕೊಳ್ಳಲು ಬೇಕಾದ ಬಲವಾದ ಅಸ್ತ್ರವಾಗಿ ಪ್ರಿಯಾಂಕಾರನ್ನು ರಂಗಕ್ಕಿಳಿಸಲಾಗಿದೆ. ಈ ಸದ್ಯ ರಂಗಪ್ರವೇಶವಂತೂ ಯಶಸ್ವಿಯಾಗಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ದಲಿತ ವಿದ್ಯಾರ್ಥಿನಿ ಕೊಲೆ ಪ್ರಕರಣ: ಪ್ರತಿಭಟನಾಕಾರರ ಮೇಲೆ ಪೊಲೀಸ್ ಲಾಠಿಚಾರ್ಜ್; ಯೋಗಿ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ

ನವದೆಹಲಿ: ಜುಲೈ 8 ರಂದು ಮೀರತ್‌ನಲ್ಲಿ ನಡೆದ ದಲಿತ ವಿದ್ಯಾರ್ಥಿನಿಯ ಹತ್ಯೆಯನ್ನು ಖಂಡಿಸಿ ಪ್ರತಿಭಟನೆ ನಡೆಸುತ್ತಿದ್ದ ದಲಿತ ಕಾರ್ಯಕರ್ತರು ಮತ್ತು ಮೃತರ ಕುಟುಂಬ ಸದಸ್ಯರ ಮೇಲೆ ಉತ್ತರ ಪ್ರದೇಶ ಪೊಲೀಸರು ಭೀಕರ ಹಲ್ಲೆ,...

ಒಮಾನ್ ಕರಾವಳಿಯಲ್ಲಿ ಮತ್ತೊಂದು ಹಡಗಿನ ಮೇಲೆ ದಾಳಿ: ಭಾರತೀಯ ಪ್ರಜೆ ನಾಪತ್ತೆ, 10 ಜನರ ರಕ್ಷಣೆ: ವಿದೇಶಾಂಗ ಸಚಿವಾಲಯ ಮಾಹಿತಿ

ನವದೆಹಲಿ: ಜುಲೈ 12 ರಂದು ಒಮಾನ್ ಕರಾವಳಿಯ ಅಂತರರಾಷ್ಟ್ರೀಯ ಜಲಮಾರ್ಗದಲ್ಲಿ ಸಾಗುತ್ತಿದ್ದ ‘ಜಿಎಫ್‌ಎಸ್ ಗ್ಯಾಲಕ್ಸಿ’ (GFS Galaxy) ಎಂಬ ವಾಣಿಜ್ಯ ಹಡಗಿನ ಮೇಲೆ ನಡೆದ ದಾಳಿಯನ್ನು ಭಾರತ ಸರ್ಕಾರ ತೀವ್ರವಾಗಿ ಖಂಡಿಸಿದೆ. ಭೀಕರ...

SIR ಪ್ರಕ್ರಿಯೆಯಲ್ಲಿ ಎಐ ಬಳಕೆ, ಭಾರೀ ಪ್ರಮಾಣದಲ್ಲಿ ಮತದಾರರ ಹೆಸರು ಡಿಲೀಟ್ : ಕಳವಳ ವ್ಯಕ್ತಪಡಿಸಿದ ವಿಶ್ವಸಂಸ್ಥೆಯ ವಿಶೇಷ ವರದಿಗಾರರು

ಭಾರತೀಯ ಚುನಾವಣಾ ಆಯೋಗ (ಇಸಿಐ) ಕೈಗೊಂಡ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆಯು (ಎಸ್‌ಐಆರ್) ವ್ಯಾಪಕ ಪ್ರಮಾಣದಲ್ಲಿ ಮತದಾರರ ಹೆಸರುಗಳ ಅಳಿಸುವಿಕೆಗೆ ಕಾರಣವಾಗಿದೆ ಮತ್ತು ಇದು ಮುಸ್ಲಿಮರು ಹಾಗೂ ಇತರ ಅಲ್ಪಸಂಖ್ಯಾತ ಸಮುದಾಯಗಳ...

ಮಹಾರಾಷ್ಟ್ರ: ನಂದೂರ್ಬಾರ್‌ನ ಸರ್ಕಾರಿ ಹಾಸ್ಟೆಲ್‌ನಲ್ಲಿ ಕಲುಷಿತ ಆಹಾರ ಸೇವಿಸಿ 40 ವಿದ್ಯಾರ್ಥಿಗಳು ಅಸ್ವಸ್ಥ; ತೀವ್ರಗೊಂಡ ತನಿಖೆ 

ನಂದೂರ್ಬಾರ್ (ಮಹಾರಾಷ್ಟ್ರ): ಮಹಾರಾಷ್ಟ್ರದ ನಂದೂರ್ಬಾರ್ ಜಿಲ್ಲೆಯ ಶಹಾಡಾ ತಾಲೂಕಿನಲ್ಲಿರುವ ಸರ್ಕಾರಿ ಸಮಾಜ ಕಲ್ಯಾಣ ಇಲಾಖೆಯ ವಸತಿನಿಲಯದಲ್ಲಿ ಶಂಕಿತ ವಿಷಪೂರಿತ ಆಹಾರ ಸೇವಿಸಿ ಸುಮಾರು 40 ವಿದ್ಯಾರ್ಥಿಗಳು ತೀವ್ರವಾಗಿ ಅಸ್ವಸ್ಥಗೊಂಡಿರುವ ಕಳವಳಕಾರಿ ಘಟನೆ ವರದಿಯಾಗಿದೆ.  ಹಾಸ್ಟೆಲ್‌ನಲ್ಲಿ...

ಇರಾನ್‌ನ 140 ಸ್ಥಳಗಳನ್ನು ಗುರಿಯಾಗಿಸಿ ಅಮೆರಿಕದಿಂದ ದಾಳಿ : ಬಹ್ರೇನ್, ಕತಾರ್, ಯುಎಇ ಮೇಲೆ ಇರಾನ್‌ನಿಂದ ಪ್ರತಿದಾಳಿ

ಹಾರ್ಮುಝ್ ಜಲಸಂಧಿಯಲ್ಲಿ ಇರಾನ್ ನಡೆಸಿದ ದಾಳಿಯಿಂದಾಗಿ ಸರಕು ಸಾಗಣೆ ಹಡಗೊಂದು ಹೊತ್ತಿ ಉರಿದು, ಅದರಲ್ಲಿದ್ದ ಸಿಬ್ಬಂದಿ ಹಡಗು ಬಿಟ್ಟು ಹೊರಡುವಂತಾಗಿತ್ತು. ಈ ಘಟನೆಯನ್ನು ಖಂಡಿಸಿ ಅಮೆರಿಕ ಭಾನುವಾರ (ಜು.12) ಮುಂಜಾನೆ ಇರಾನ್ ಮೇಲೆ...

31 ವರ್ಷಗಳ ಹಳೇ ಸಾಲ ತೀರಿಸಲು 1200 ಕಿ.ಮೀ ಪ್ರಯಾಣಿಸಿದ ಕೇರಳದ ಇಸ್ಮಾಯಿಲ್

"ನನ್ನ ಕಣ್ಣುಗಳಿಂದ ಆನಂದಬಾಷ್ಪಗಳು ಉದುರಿದವು. ನನ್ನ ಮನಸ್ಸಿಗೆ ಅದೆಷ್ಟು ನೆಮ್ಮದಿ ಸಿಕ್ಕಿತೆಂದರೆ, ಅದನ್ನು ವಿವರಿಸಲು ಪದಗಳೇ ಸಾಲದು. ಆತನಿಗೂ ಅಷ್ಟೇ ದೊಡ್ಡ ಸಮಾಧಾನ." ಹೀಗೆ ಭಾವುಕರಾಗಿ ನುಡಿಯುತ್ತಾರೆ ಮೊಹಮ್ಮದ್ ಇಸ್ಮಾಯಿಲ್. 1995ರಲ್ಲಿ ಸೌದಿ...

ಬಂಡಾಯದ ಬಳಿಕ ಟಿಎಂಸಿಗೆ ಮತ್ತೊಂದು ಸವಾಲು : ಪಕ್ಷದ ಬ್ಯಾಂಕ್ ಖಾತೆಗಳು ಫ್ರೀಝ್

ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಮೂರು ಬ್ಯಾಂಕ್ ಖಾತೆಗಳಲ್ಲಿರುವ 440 ಕೋಟಿ ರೂಪಾಯಿ ಹಣವನ್ನು ಭಾಗಶಃ ಬಳಸಲು ಕಲ್ಕತ್ತಾ ಹೈಕೋರ್ಟ್ ಅನುಮತಿ ನೀಡಿದ ಮರುದಿನವೇ, ಪಶ್ಚಿಮ ಬಂಗಾಳ ಪೊಲೀಸರು...

ಮಂದಿರ ನಿರ್ಮಾಣದ ಕ್ರೆಡಿಟ್‌ಗೆ ಇದ್ದ ಯಜಮಾನಿಕೆ, ಕೊಳ್ಳೆ ಹೊಡೆದಾಗ ಯಾಕಿಲ್ಲ ಸೇವಕರೇ?

ಬಾಲರಾಮನ ಪ್ರಾಣಪ್ರತಿಷ್ಠಾಪನೆಗೆ ಮುನ್ನ ಪ್ರಧಾನಿಯವರು 11 ದಿನಗಳ ಕಾಲ ಕಠಿಣ ಉಪವಾಸ ವ್ರತ ಆಚರಿಸಿದ್ದರು, ಕೇವಲ ಎಳನೀರು ಕುಡಿದರು, ನೆಲದ ಮೇಲೆ ಮಲಗಿದರು ಎಂದು ಇಡೀ ದೇಶಕ್ಕೆ ಸಾರಲಾಗಿತ್ತು. ಅಯೋಧ್ಯೆಯಿಂದ ಹೊಸ ಕಾಲದ...

‘ಫ್ರೀ ಪ್ಯಾಲೆಸ್ತೀನ್’ ಘೋಷಣೆಯನ್ನು ತಮಾಷೆ ಮಾಡಿದ ಸೈಫ್ ಅಲಿ ಖಾನ್ – ನಿರೂಪಕಿ ಅನುಪಮಾ ಚೋಪ್ರಾ

ಸ್ಪ್ಯಾನಿಷ್ ನಟ ಜೇವಿಯರ್ ಬಾರ್ಡೆಮ್ ಅವರ "ಫ್ರೀ ಪ್ಯಾಲೆಸ್ತೀನ್" ಹೇಳಿಕೆ ಕುರಿತು ಸೈಫ್ ಅಲಿ ಖಾನ್ ಮತ್ತು ಚಲನಚಿತ್ರ ಪತ್ರಕರ್ತೆ ಅನುಪಮಾ ಚೋಪ್ರಾ ನಗುತ್ತಿರುವ ಕ್ಲಿಪ್ ಆನ್‌ಲೈನ್‌ನಲ್ಲಿ ವೈರಲ್ ಆಗಿದ್ದು, ನಟನ ಅಸೂಕ್ಷ್ಮ...

ತೆಲಂಗಾಣ : ಪೋಕ್ಸೋ ಪ್ರಕರಣದ ಆರೋಪಿಯಿಂದ ಸಂತ್ರಸ್ತೆ ಸೇರಿ 6 ಜನರ ಹತ್ಯೆ

ಪೋಕ್ಸೋ ಪ್ರಕರಣದ ಆರೋಪಿಯೊಬ್ಬ ಸಂತ್ರಸ್ತೆ ಸೇರಿದಂತೆ ಒಟ್ಟು ಆರು ಜನರನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಶಾಬಾದ್ ಮಂಡಲದಲ್ಲಿ ಶುಕ್ರವಾರ (ಜು.10) ರಾತ್ರಿ ನಡೆದಿದೆ. 28 ವರ್ಷ ವಯಸ್ಸಿನ...