Homeಮುಖಪುಟಗಂಭೀರ ಸವಾಲುಗಳತ್ತ ದೃಷ್ಟಿಹರಿಸದ ಬಜೆಟ್

ಗಂಭೀರ ಸವಾಲುಗಳತ್ತ ದೃಷ್ಟಿಹರಿಸದ ಬಜೆಟ್

- Advertisement -
- Advertisement -

| ಪ್ರಭಾತ್ ಪಟ್ನಾಯಕ್ |
ವಿಶ್ರಾಂತ ಅರ್ಥಶಾಸ್ತ್ರ ಪ್ರಾಧ್ಯಾಪಕರು
ಜೆಎನ್‍ಯೂ, ದೆಹಲಿ

ಕನ್ನಡಕ್ಕೆ: | ಅನಿಲ್ ಚಿಕ್ಕದಾಳವಟ್ಟ |
ಕೃಪೆ -ಸಾಕ್ಷಿ ದಿನ ಪತ್ರಿಕೆ

ಅರ್ಥಶಾಸ್ತ್ರವನ್ನು ಎನ್‍ಡಿಎ ಸರ್ಕಾರ ಎಂದಿಗೂ ಪ್ರಬಲವಾದ ಅಂಶವಾಗಿ ಭಾವಿಸಿಯೇ ಇಲ್ಲ. ಮೊದಲ ಸಲ ಆಡಳಿತದಲ್ಲಿ ಅದು ತಂದ ನಿರ್ಣಾಯಕ ಆವೃತ್ತಿಗಳು ನೋಟುರದ್ದತಿ, ಜಿಎಸ್ಟಿ ಎಷ್ಟು ವಿನಾಶಕಾರಿಯಾಗಿ ಪರಿಣಮಿಸಿವೆಯೋ ಎಲ್ಲರಿಗೂ ಗೊತ್ತಿದೆ. ಆದ್ದರಿಂದ 2019-20 ಕೇಂದ್ರ ಬಡ್ಜೆಟ್ ನಮಗೆ ಏನೋ ತಂದುಕೊಡುತ್ತದೆಂದು ಭಾವಿಸುವುದು ಅರ್ಥರಹಿತ. ಇಂತಹ ಸಂದರ್ಭದಲ್ಲಿಯೂ ಸಹ ದೇಶದ ಅರ್ಥವ್ಯವಸ್ಥೆ ಎದುರಿಸುತ್ತಿರುವ ತೀವ್ರ ಸಮಸ್ಯೆಗಳನ್ನು ಹೇಗೆ ಪರಿಷ್ಕರಿಸಬೇಕು ಎನ್ನುವ ಸ್ಪೂರ್ತಿಯೂ ಸಹ ಕೇಂದ್ರ ಬಡ್ಜೆಟ್‍ನಲ್ಲಿ ಕೊರತೆಯಾಗಿರುವುದು ನೋಡಿದರೆ ಆಶ್ಚರ್ಯವಾಗುತ್ತಿದೆ. ಆರ್ಥಿಕ ಚಟುವಟಿಕೆ ನಿಧಾನಿಸಿರುವುದು, ವ್ಯವಸಾಯರಂಗದ ಬಿಕ್ಕಟ್ಟು, ತೀವ್ರಸ್ಥಾಯಿಯ ನಿರುದ್ಯೋಗ, ವಿದೇಶಿ ಮೌಲ್ಯಮಾಪನಗಳ ಹೊರೆಯಂತಹ ಗಂಭೀರ ಸಮಸ್ಯೆಗಳ ಮೇಲೆ ಕೂಡ ಬಡ್ಜೆಟ್ ದೊಡ್ಡದಾಗಿ ದೃಷ್ಟಿ ಕೇಂದ್ರಿಕರಿಸಿದ ಹಾಗಿಲ್ಲ.

ಮುಖ್ಯವಾಗಿ ಆದಾಯ ಬೆಳವಣಿಗೆಯ ದರ ಕಡಿಮೆಯಾಗುತ್ತಿದೆ. ಆರ್ಥಿಕ ಚಟುವಟಿಕೆ ಕಡಿಮೆಯಾಗಿರುವುದು ಒಂದು ಕಾರಣವಾಗಿಯೂ, ಕಳಪೆಮಟ್ಟದ ಜಿಎಸ್ಟಿ ವಸೂಲಿಗಳು ಪ್ರಧಾನ ಕಾರಣ. 2018-19ಕ್ಕಾಗಿ ತಿದ್ದುಪಡಿಯ ಸಂಗ್ರಹ ಅಂದಾಜನ್ನು ಪ್ರಸ್ತುತ ಆರ್ಥಿಕ ಮಂತ್ರಿ ಉಲ್ಲೇಖಿಸಿದ್ದಾರೆ. ಇವು ಕಳೆದ ವರ್ಷದ ಬಡ್ಜೆಟ್ ಅಂದಾಜಿಗೆ ಹತ್ತಿರದಲ್ಲಿವೆ. ಆದರೆ ಹೊಸದಾಗಿ ಸಿಎಜಿ ಪ್ರಕಟಿಸಿದ ಅಂಕಿಅಂಶಗಳಿಗಿಂತ ಇವು ಸ್ವಲ್ಪ ಹೆಚ್ಚಾಗಿ ಇರುವುದು ಗಮನಾರ್ಹ. ಸಿಎಜಿ ವರದಿಯ ಪ್ರಕಾರ 2018-19 ವರ್ಷದಲ್ಲಿ ಕೇಂದ್ರ ಸರ್ಕಾರ ಬಡ್ಜೆಟ್ ಅಂದಾಜನ್ನು ಹೋಲಿಸಿದರೆ ಜಿಎಸ್‍ಟಿ ಆದಾಯದಲ್ಲಿ ರೂ1.6 ಲಕ್ಷ ಕೋಟಿ ಕಡಿಮೆ ನಮೂದಾಗಿದೆ. ಇನ್ನು 1019-20 ಆರ್ಥಿಕ ವರ್ಷದಲ್ಲಿ ಪರಿಸ್ಥಿತಿ ಇನ್ನೂ ಉತ್ತಮವಾಗಿ ಇರುತ್ತದೆಂದು ಆಶಾಭಾವನೆ ವ್ಯಕ್ತಪಡಿಸಿದರೂ ಸಹ ವಾಸ್ತವದಲ್ಲಿ ಹಾಗೆ ಕಾಣಿಸುತ್ತಿಲ್ಲ.

ಬಡ್ಜೆಟ್ ಪ್ರಕಾರ ಮಾಡಿದ ವೆಚ್ಚದಲ್ಲಿಯೂ ಸಹ ಬೆಳವಣಿಗೆ ಕಾಣಿಸುತ್ತಿಲ್ಲ. ಒಟ್ಟು ವೆಚ್ಚ, ಪ್ರಜೆಗಳ ಮೇಲೆ ಪ್ರಭಾವಿಸುತ್ತಿರುವ ವಲಯಗಳಲ್ಲಿ ಇಟ್ಟಂತಹ ವೆಚ್ಚದ ವಿಷಯದಲ್ಲಿಯೂ ಸಹ ಬೆಳವಣಿಗೆ ಕಾಣಿಸುತ್ತಿಲ್ಲ. ಬಹಳಷ್ಟು ಬೆಳೆದ ವೆಚ್ಚಗಳು ಸಾಧಾರಣ ಜಿಡಿಪಿಯಲ್ಲಿ ಅಂದಾಜು ಮಾಡಿದ ದರದ ಪ್ರಕಾರವಾಗಿಯೇ ನಡೆಯುತ್ತಾ ಬಂದಿವೆ. ಮತ್ತಷ್ಟು ಆಸಕ್ತಿಕರವಾದ ವಿಷಯವೇನೆಂದರೆ ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗಕ್ಕೆ ಆಹಾರ ಯೋಜನೆ ವಿಷಯದಲ್ಲಿ 2018-19ಕ್ಕಾಗಿ ಮಾರ್ಪಡಿಸಿದ ನಿರಿಕ್ಷೆಗಳಿಂದ ಹೋಲಿಸಿದರೆ ಇಳಿಮುಖವಾಗಿದೆ. ದೇಶವ್ಯಾಪ್ತಿಯಾಗಿ ತೀವ್ರವಾದ ನಿರುದ್ಯೋಗ ಸಮಸ್ಯೆ ಆವರಿಸಿರುವ ಸಮಯದಲ್ಲಿಯೇ ಉದ್ಯೋಗಕ್ಕೆ ಆಹಾರ ಯೋಜನೆ ಹಿಮ್ಮುಖಗೊಳಿಸುವುದು ಪ್ರಮಾದದ ಘಂಟೆ ಮೊಳಗುಸುತ್ತಿದೆ.

ಮಾಡಿದ ವ್ಯಯಗಳಿಗೆ ಸಂಬಂಧಿಸಿದ ಅಂಕಿಅಂಶಗಳು ಕೂಡ 2018-19ಕ್ಕಾಗಿ ತಿದ್ದುಪಡಿ ಮಾಡಿದ ಅಂದಾಜುಗಳ ಆಧಾರದ ಮೇಲೆ ಎಂಬೆಂಡಿಂಗ್ ಮಾಡಲಾಗಿದೆ. ಮಾರ್ಪಡಿಸಿದ ಅಂದಾಜುಗಳಿಗಿಂತ ವಾಸ್ತವ ಅಂದಾಜು ಇಳಿಮುಖ ಹಿಡಿದಿದ್ದರಿಂದ 2019-20ರಲ್ಲಿ ಕೂಡ ಈ ಪತನ ಮುಂದುವರೆಯುತ್ತಿದೆ ಎಂದು ಸ್ಪಷ್ಟವಾಗುತ್ತಿದೆ. ಜಾಗತೀಕರಣದ ಹಿನ್ನಲೆಯಲ್ಲಿ ಅಂತಾರಾಷ್ಟ್ರೀಯ ವಿತ್ತಿಯ ವ್ಯವಸ್ಥೆಯ ಒತ್ತಡಗಳನ್ನು ಸಂತೃಪ್ತಿಗೊಳಿಸಬೇಕಿದೆ ಎಂದು ಎನ್‍ಡಿಎ ಭಾವಿಸುತ್ತಿರುವುದರಿಂದ ಅಂದಾಜು ಮಾಡಿದ ಈ ವ್ಯಯಗಳನ್ನಾದರೂ ಕೇಂದ್ರಸರ್ಕಾರ ಖರ್ಚುಮಾಡಲಾಗುತ್ತದೆಯಾ ಎನ್ನುವುದೇ ಸಂದೇಹ. ಜೋರಾಗುತ್ತಿರುವ ನಿರುತ್ಸಾಹ ಕಾರ್ಮೋಡಗಳ ಪರಿಸ್ಥಿತಿಗಳಲ್ಲಿ ವ್ಯಯಕ್ಕೆ ಸಂಬಂಧಿಸಿದಂತೆ ಹಾಕಿಕೊಂಡಿರುವ ಗುರಿಗಳನ್ನೂ ಸಹ ಮುಂದುವರೆಸಬೇಕಿರುವದು ಕಷ್ಟವೇ ಆಗಬಹುದು.

ಈ ಪರಿಸ್ಥಿತಿಯಲ್ಲಿ ದೇಶಕ್ಕೆ ಅವಶ್ಯಕತೆ ಇರುವುದು ಆದಾಯ, ಖರ್ಚುಗಳ ಅಂಕಿ ಅಂಶಗಳನ್ನು ತೋರಿಸುವ ಬಡ್ಜೆಟ್ ಮೇಲೆ ಕೇವಲ ಚರ್ಚೆಯಲ್ಲ. ಹಣಕಾಸು ವ್ಯವಸ್ಥೆಯನ್ನು ತ್ವರಿತಗೊಳಿಸಿ ಹೆಚ್ಚುವರಿ ಆದಾಯ ಮೂಲಗಳನ್ನು ತಕ್ಷಣವೇ ದೃಷ್ಟಿ ಸಾಧಿಸಬೇಕಿದೆ. ಆದರೆ ಈ ಧಾಟಿಯಲ್ಲಿ ಎಂತಹ ಸೃಜನಾತ್ಮಕ ಆಲೋಚನೆಗಳನ್ನು ತೆಗೆದುಕೊಳ್ಳಲು ಎನ್‍ಡಿಎ ಸರ್ಕಾರ ತಿರಸ್ಕರಿಸುವುದು ಗಮನಾರ್ಹ. ಪ್ರಸ್ತುತ ಕೇಂದ್ರಕ್ಕೆ ಬರುತ್ತಿರುವ ಆದಾಯದ ಟ್ರೆಂಡ್ಸಿಯನ್ನು ಭವಿಷ್ಯತ್ತಿಗೂ ಕೂಡ ಮುನ್ಸೂಚನೆಯಾಗಿ ಹಾಗೇ ಪ್ರಸ್ತಾಪಿಸುವುದು ಹೊರತುಪಡಿಸಿದರೆ ಹೊಸ ಬಡ್ಜೆಟ್ ದೊಡ್ಡದಾಗಿ ಮಾಡಿದ್ದೇನಿಲ್ಲ.

ಈ ಬಾರಿ ಬಡ್ಜೆಟ್ಟಿನಲ್ಲಿ ಗಮನಾರ್ಹವಾಗಿ ಗುರುತಿಸಬೇಕಾದ ವಿಷಯವೇನೆಂದರೆ ಸಂಪತ್ತಿನ ಮೇಲಿನ ತೆರಿಗೆ ಏರಿಸಿದ್ದು. ದೇಶದಲ್ಲಿನ ಬಿಲೇನಿಯರ್‍ಗಳ ಒಟ್ಟು ಆದಾಯ ರೂ.560 ಲಕ್ಷ ಕೋಟಿ ಎಂದು ಅಂದಾಜು. ಇವರ ಮೇಲೆ ಕನಿಷ್ಟ 1%ರಷ್ಟು ಸಂಪತ್ತಿನ ಮೇಲಿನ ತೆರಿಗೆ ಏರಿಸಿದರೂ ಸರಿ ಕೇಂದ್ರ ಸರ್ಕಾರಕ್ಕೆ ರೂ.5.6 ಲಕ್ಷ ಕೋಟಿ ಆದಾಯ ಬರುವ ಅವಕಾಶ ಇದೆ. ಇನ್ನು ಅವರ ಉತ್ತರಾಧಿಕಾರ ಆಸ್ತಿಗಳ ಮೇಲೆ ಕೂಡ ತೆರೆಗೆ ಹೆಚ್ಚಿಸಿದ್ದಾರೆ ಮತ್ತೂ ರೂ.9.3 ಲಕ್ಷ ಕೋಟಿ ಆದಾಯ ಬರುವ ಅವಕಾಶವಿದೆ. ಈ ಎರಡು ರೀತಿಯ ತೆರಿಗೆಗಳನ್ನು ದೇಶಿಯ ಬಿಲೇನಿಯರ್‍ಗಳ ಮೇಲೆ ವಿಧಿಸಿದ್ದಾದರೆ ರೂ.15 ಲಕ್ಷ ಕೋಟಿ ಆದಾಯ ಕೇಂದ್ರ ಖಜಾನೆಗೆ ಬಂದು ಸೇರಲಿದೆ. ದೇಶದಲ್ಲಿ ಕಣ್ಮರೆಯಾಗುತ್ತಿರುವ ಕಲ್ಯಾಣ ಯೋಜನೆಗಳಿಗೆ ಈ ಭಾರಿ ಮೊತ್ತ ಸ್ವಲ್ಪ ಜೀವ ನೀಡುವ ಅವಕಾಶವಿದೆ. ಇಷ್ಟು ಆದಾಯ ಬಂದಿದ್ದೇ ಆದರೆ, ಪ್ರತಿ ಭಾರತಿಯನಿಗೆ ಐದು ಪ್ರಾಥಮಿಕ ಹಕ್ಕುಗಳನ್ನು ಖಾತರಿಪಡಿಸಬಹುದು. ಅವು ಏನೆಂದರೆ ಆಹಾರ ಹಕ್ಕು, ಉದ್ಯೋಗ ಹಕ್ಕು , ಪದವಿ ಪೂರ್ವ ತರಗತಿಗಳ ವರೆಗೂ ಗುಣಮಟ್ಟದ ಶಿಕ್ಷಣವನ್ನು ಹೊಂದುವ ಹಕ್ಕು, ಸರ್ಕಾರ ನಿರ್ವಹಿಸುವ ರಾಷ್ಟ್ರೀಯ ಅರೋಗ್ಯ ಸೇವೆಯ ಮೂಲಕ ಗುಣಮಟ್ಟದ ಆರೋಗ್ಯ ಸಂರಕ್ಷಣೆಯ ಹಕ್ಕು, ವೃದ್ಯಾಪ್ಯದಲ್ಲಿ ಇರುವ ಪ್ರತಿಯೊಬ್ಬರಿಗೂ ತಿಂಗಳಿಗೆ 2000 ರೂಪಾಯಿಗಳ ವೃದ್ಧಾಪ್ಯ ವೇತನ (ಈಗ ತಿಂಗಳಿಗೆ ಕೇವಲ 200ರೂ ಮಾತ್ರವೇ ಕೊಡುತ್ತಿದ್ದಾರೆ) ಹಕ್ಕಿನೊಂದಿಗೆ ಅಂಗವಿಕಲರಿಗೆ ಪ್ರಯೋಜನಗಳು ಸಹ ಕಲ್ಪಿಸಬಹದು.

ನಿಜಕ್ಕೂ, ಬಡ್ಜೆಟ್ ಮಂಡಿಸುವ ಮುನ್ನ, ಸಂಪತ್ತಿನ ಮೇಲೆ ಉತ್ತರಾಧೀಕಾರಿತ್ವದ ತೆರಿಗೆ ವಿಧಿಸುತ್ತಾರೆಂದು ಭಾವಿಸಿದ್ದಾರೆ. ಆಶ್ಚರ್ಯಕರವಾಗಿ ಪ್ರಸ್ತುತ ಬಡ್ಜೆಟ್ ಅದರ ಪ್ರಸ್ತಾವನೆ ಕೂಡ ತರಲಿಲ್ಲ. ಮತ್ತೊಂದು ಕಡೆ, ವಿದೇಶಿ ಪ್ರತ್ಯಕ್ಷ ಹೂಡಿಕೆಗಳ ಬಗ್ಗೆ ಉದುರಿಸುತ್ತಿದ್ದಾರೆ. ಹೊಸ ಬಡ್ಜೆಟ್‍ನಲ್ಲಿ ಏನಾದರೂ ಕಾರ್ಯತಂತ್ರದ ಅಂಶ ಇದೆಯೆಂದರೆ, ದೇಶದಲ್ಲಿನ ಎಪ್.ಡಿ.ಐಗಳನ್ನು ಆಕರ್ಷಿಸುವುದು ಮಾತ್ರವೇ. ಇದು ಸಹ ಕಾರ್ಮಿಕರ ಹಕ್ಕುಗಳನ್ನು ಹತ್ತಿಕ್ಕುವುದು, ಭೂಮಿಯನ್ನು ಇನ್ನಷ್ಟು ಸುಲಭವಾಗಿ ಸ್ವಾಧೀನಪಡಿಸಿಕೊಳ್ಳುವ ಮೂಲಕ ಜಾರಿಯಾಗುತ್ತದೆ. ಈ ರೀತಿಯಾದ ಅಭಿವೃದ್ಧಿ ಸಾಧಿಸುವುದೇ ಆದರೆ ನಿರುದ್ಯೋಗ ಸಮಸ್ಯೆ ಮತ್ತಷ್ಟು ಹೆಚ್ಚಾಗಲು ದಾರಿಯಾಗುತ್ತದೆ. ಸರ್ಕಾರ ತಾನೇ ಖರ್ಚು ಮಾಡುವುದು, ಸರ್ಕಾರಿ ಕಲ್ಯಾಣ ಯೋಜನೆಗಳಗೆ ಅನುದಾನ ಭರಿಸುವುದು ಎನ್ನುವ ಅಂಶಗಳನ್ನು ದೇಶದ ಆರ್ಥಿಕ ವ್ಯವಸ್ಥೆ ಚಾಲಕ ಶಕ್ತಿಯಾಗಿ ಬದಲಿಸುವ ಬದಲಾಗಿ ವಿದೇಶಿ ನೇರ ಹೂಡಿಕೆಗಳಿಗೆ ಮತ್ತಷ್ಟು ಬಾಗಿಲು ವಿಶಾಲವಾಗಿ ತೆಗೆಯುವುದು ಎನ್ನುವುದು ಜನಸಾಮಾನ್ಯರ ಮೇಲೆ ಸರ್ಕಾರ ಆಯುಧವಾಗಿ ಮಾರ್ಪಡುತ್ತದೆ. ಜಾಗತಿಕ ಆರ್ಥಿಕ ವ್ಯವಸ್ಥೆ ನಿಧಾನಗತಿಗೆ ಜಾರುತ್ತಿರುವ ವೇಳೆ, ಬಹುರಾಷ್ಟ್ರೀಯಾ ಸಂಸ್ಥೆಗಳು ಆಯಾ ದೇಶಗಳಲ್ಲಿ ಹೂಡಿಕೆ ಮಾಡುವುದಕ್ಕೆ ಆಸಕ್ತಿ ಕಳೆದುಕೊಳ್ಳುತ್ತಿರುವ ಸಮಯದಲ್ಲಿ ಸರ್ಕಾರವೇ ಖರ್ಚುಮಾಡುವುದರ ಮೂಲಕ ಅಭಿವೃದ್ಧಿಯನ್ನು ಮುಂದಕ್ಕೆ ತೆಗೆದುಕೊಂಡು ಹೋಗುವುದು ಜನೋಪಯೋಗಿ ಕಾರ್ಯಗಳಿಗೆ ಪ್ರಾಧಾನ್ಯತೆ ಕೊಟ್ಟ ಹಾಗೆ ಆಗುತ್ತದೆ. ನರೇಂದ್ರ ಮೋದಿ ಪ್ರತಿಷ್ಟಾತ್ಮಕವಾಗಿ ತೆಗೆದುಕೊಂಡು ಬಂದ ಮೇಕ್ ಇನ್ ಇಂಡಿಯಾ ನಿನಾದದ ಗುರಿಯೇ ಇದು. ಆದರೆ ಆ ದಾರಿಯಲ್ಲಿ ಕಳೆದ ಐದು ವರ್ಷಗಳಲ್ಲಿ ಕೇಂದ್ರ ಸರ್ಕಾರ ಎಲ್ಲಿಯವರೆಗೂ ನಡೆಯಿತು?

ಕೇಂದ್ರ ಸರ್ಕಾರ ಕೆಲವು ಸಿಹಿ ಮಾತುಗಳನ್ನು ಹೇಳುತ್ತಾ ಸ್ವಲ್ಪಮಟ್ಟಿಗೆ ಹೂಡಿಕೆಗಳನ್ನು ತರಲಾಗಿದೆಯೆಂದು ಹೇಳಿಕೊಳ್ಳುವುದು ನಿಜವೆಂದು ಭಾವಿಸಿದರೂ ಸಹ. ಅದು ಕಳೆದ ಐದು ವರ್ಷಗಳಲ್ಲಿ ಎಷ್ಟು ಉದ್ಯೋಗಗಳನ್ನು ಸೃಷ್ಟಿ ಮಾಡಿದೆ ಎಂಬುದು ಪ್ರಶ್ನೆ. ಒಂದು ಕಡೆ ಬಹುರಾಷ್ಟ್ರೀಯ ಕಂಪನಿಗಳು, ಮತ್ತೊಂದು ಕಡೆ ದೇಸೀಯ ದೊಡ್ಡ ವಾಣಿಜ್ಯೋದ್ಯಮಿಗಳು ಸಾಧಿಸಿದ ಬೆಳವಣಿಗೆಯ ದರ ಅಧಿಕವಾಗಿದೆಯೆಂದು ಪ್ರಚಾರ ನಡೆಯುತ್ತಿದ್ದರೂ, ಏರಿಸಿ ಹೇಳುತ್ತಿರುವ ಇಂತಹ ಭಾರಿ ಜಿಡಿಪಿ ದರಗಳು ಸಹ ದೇಶದ ಶ್ರಮಜೀವಿ ವರ್ಗಕ್ಕೆ ಅವಶ್ಯವಾದ ಸಹಜವಾದ ಉದ್ಯೋಗಗಳನ್ನು ಬೆಳೆಸಲಾಗದಿರುವುದು ಗಮನಾರ್ಹ. ಈ ರೀತಿಯಾದ ಬೆಳವಣಿಗೆಯ ಧೋರಣೆಗಳಿಂದ ದೇಸೀಯ ನಿರುದ್ಯೋಗ ಸಮಸ್ಯೆಯನ್ನು ತೊಲಗಿಸುತ್ತೇವೆಂದು ಹೇಳುವುದು ಸಂಪೂರ್ಣವಾಗಿ ಅವಸ್ತಾವಿಕತೆಯೇ ಆಗುತ್ತದೆ. ಇದೆಲ್ಲಾ ಎಲ್ಲರಿಗೂ ಅನುಭವವೇದ್ಯವಾದ ವಿಷಯವೇ ಆದರೂ ಮೋದಿ ಸರ್ಕಾರವು ಸಹ ಮಧ್ಯಯುಗದ ಪ್ರಾನ್ಸ್ ಬರ್ಬನ್ ರಾಜರುಗಳ ಹಾಗೆ ‘ ಕಲಿತದ್ದೂ ಇಲ್ಲ..ಮರೆತುಹೋಗಿದ್ದು ಇಲ್ಲ’ ಎನ್ನುವ ಧೋರಣೆಯಲ್ಲಿ ನಿಂತಿರುವುದು ವಿಶೇಷ.

ಹಣಕಾಸು ಮಂತ್ರಿ ನಿರ್ಮಲಾ ಸೀತಾರಾಮನ್ ಮಂಡಿಸಿದ ಹೊಸ ಬಡ್ಜೆಟ್‍ನಲ್ಲಿ ಸೇರಿಸಿರುವ ಎರಡು ಅಂಶಗಳು ಭವಿಷ್ಯತ್ತಿನಲ್ಲಿ ತೀವ್ರ ಪರಿಣಾಮಗಳಿಗೆ ದಾರಿಯಾಗಲಿದೆ. ಒಂದು, ಸರ್ಕಾರ ಸಾಲಗಳಿಗಾಗಿ ಅಂತಾರಾಷ್ಟ್ರೀಯ ದ್ರವ್ಯ ಮಾರುಕಟ್ಟೆಗಳನ್ನು ಸಂಪರ್ಕಿಸಿರುವುದು, ಇದರ ಹಿಂದೆ ಯಾವುದೇ ಅಮೂಲ್ಯವಾದ ಕಾರಣವು ಸಹ ಕಾಣಿಸುತ್ತಿಲ್ಲ. ಏಕೆಂದರೆ ಸರ್ಕಾರದ ಸಾಲಗಳ ಮೇಲೆ ಮಿತಿ ಎನ್ನುವುದು ದ್ರವ್ಯಕೊರತೆಯ ಮೇಲೆ ಸ್ವಯಂ ಉಂಟುಮಾಡಿದ ಸಿಲಿಂಗ್ ಮೇಲೆ ಆಧಾರಪಟ್ಟಿರುತ್ತದೆಯೇ ಹೊರತು ದೇಶದ ಮಾರುಕಟ್ಟೆಯಲ್ಲಿ ಸಾಲಗಳನ್ನು ಸಾಧಿಸದ ಸರ್ಕಾರದ ಅಸಮರ್ಥತೆಯ ಮೇಲೆ ಆಧಾರಪಟ್ಟಿರುವುದಿಲ್ಲ. ಸರ್ಕಾರ ವಿದೇಶಗಳಿಂದ ಸಾಲಗಳಿಗೆ ಪ್ರಯತ್ನಿಸುವ ಬೆಳವಣಿಗೆಯೆಂದರೆ , ಭಾರತ ಸರ್ಕಾರದ ಮೇಲೆ ಅಂತಾರಾಷ್ಟ್ರೀಯ ದ್ರವ್ಯಸಂಸ್ಥೆಗಳ ಹಿಡಿತವನ್ನು ಮತ್ತಷ್ಟು ಹೆಚ್ಚಿಸುವುದೇ ಆಗುತ್ತದೆ ಎಂದು ಮರೆಯುವ ಹಾಗಿಲ್ಲ. ಇಂತಹ ಹಿನ್ನಲೆಯಲ್ಲಿ ಸಾಲಗಳನ್ನು ತರುವುದರಲ್ಲಿ ಅವುಗಳನ್ನು ತೀರಿಸುವುದರಲ್ಲಿ ಏನಾದರೂ ವಿಳಂಬವಾದರೆ ದೇಶದ ಮೇಲೆ ನಿರಂಕುಶವಾಗಿ ಮಿತವ್ಯಯವನ್ನು ಹೇರುವುದಕ್ಕೆ ಅವಕಾಶವಿರುತ್ತದೆ ಮತ್ತು ಬಡ್ಜೆಟ್ ವಿದೇಶಿ ಮಾರಕ ಮಾರುಕಟ್ಟೆಯನ್ನು ದ್ರವ್ಯ ಮಾರುಕಟ್ಟೆಯ ಜೊತೆ ಜೋಡಿಸಲಾಗಿದೆ. ಇದರಿಂದ ರೂಪಾಯಿ ಕುಸಿತ ಮತ್ತಷ್ಟು ಬೆಳೆದು ಸರ್ಕಾರ ಸಾಲದಹೊರೆ ಗಗನ ಮುಟ್ಟುತ್ತದೆ. ಅಂತಿಮವಾಗಿ ಕೇಂದ್ರ ಸರ್ಕಾರ ವಿದೇಶಿ ಒತ್ತಡಗಳಿಗೆ ಪೂರ್ತಿಯಾಗಿ ಒಳಗೊಳ್ಳಬೇಕಾದ ಪರಿಸ್ಥಿತಿ ಏರ್ಪಡದಿರುವುದಿಲ್ಲ.

ಇನ್ನು ಎರಡನೇ ಅಂಶ ಒಕ್ಕೂಟ ತತ್ವಕ್ಕೆ ಸೇರಿದ್ದು. ಜಿಎಸ್ಟಿಯನ್ನು ತನಗೆ ತಾನು ಭಾರತ ಸಂವಿಧಾನದೊಳಗಡೆ ಒಕ್ಕೂಟ ಕಾನೂನಿನ ಮೇಲೆ ಮಾಡಿದ ಭಾರಿ ದಾಳಿಯೆಂದು ಹೇಳಬೇಕು. ರಾಜ್ಯ ಸರ್ಕಾರಗಳು ಯಾವುದೇ ವಿವೇಚನೆ ಇಲ್ಲದೆ ಈ ಒಂದು ದೇಶ ಒಂದೆ ತೆರಿಗೆ ವಿಧಾನವನ್ನು ಕುರುಡಾಗಿ ಅನುಮೋದಿಸಿವೆ. ಆದರೆ ಆಶಿಸಿದ ಆದಾಯದಲ್ಲಿ ಜಿಎಸ್ಟಿ ವಿಫಲವಾಗಿರುವದು ರಾಜ್ಯ ಸರ್ಕಾರದ ಆದಾಯದ ಮೇಲೆ ಧಾರುಣ ಪ್ರಭಾವ ಬೀರಿದೆ. ಇದಕ್ಕೂ ಮಿಗಿಲಾಗಿ ಪ್ರಸ್ತುತ ಕೇಂದ್ರ ಬಡ್ಜೆಟ್‍ನಲ್ಲಿ, ಕೇಂದ್ರಸರ್ಕಾರ ತನ್ನ ಆದಾಯವನ್ನು ಏರಿಸಿಕೊಳ್ಳುವುದಕ್ಕಾಗಿ ಸೆಸ್ಸುಗಳು,ಸರ್ಚಾರ್ಜುಗಳನ್ನು ನವೀಕೃತಗೊಳಿಸಿದೆ. ಅಂದರೆ ಹೀಗೆ ಗಳಿಸಿದ ಆದಾಯದಲ್ಲಿ ರಾಜ್ಯ ಸರ್ಕಾರಗಳಿಗೆ ಮಾತ್ರ ಪಾಲು ಇರುವುದಿಲ್ಲ. ಒಂದು ಮಾತಿನಲ್ಲಿ ಹೇಳುವುದಾದರೆ ಆರ್ಥಿಕ ಮೂಲಗಳನ್ನು ಕೇಂದ್ರ ಸರ್ಕಾರ ತನ್ನ ಕಪಿಮುಷ್ಟಿಯಲ್ಲಿ ಇಟ್ಟುಕೊಳ್ಳುವುದಕ್ಕಾಗಿ ಇದು ಸಲೀಸಾಗಿ ಉಪಯೋಗವಾಗಲಿದೆ. ಇದು ತುಂಬಾ ಅಪಾಯಕರವಾದ ಪರಿಣಾಮ. ಏಕೆಂದರೆ ರಾಜ್ಯಗಳು ಒಂದು ಮೂಲೆಗೆ ತಳ್ಳಲ್ಪಟ್ಟು ಕೇಂದ್ರದ ಸಹಾಯಕ್ಕಾಗಿ ಬೇಡುವಂತಾಗುತ್ತದೆ. ಕೇಂದ್ರವು ಸಹ ತನಗೆ ಅನುಕೂಲಕರವಾಗಿರುವ ರಾಜ್ಯಗಳಿಗೆ ಪ್ರೋತ್ಸಾಹ ನೀಡುವುದು, ವಿರೋಧಿಯಾಗಿರುವ ರಾಜ್ಯ ಸರ್ಕಾರಗಳನ್ನು ಉಪೇಕ್ಷಿಸುವುದು ರೂಢಿ ಮಾಡಿಕೊಳ್ಳುವ ಸ್ಥಿತಿ ಉಂಟಾಗುತ್ತದೆ. ಭಾರತ ಒಕ್ಕೂಟ ತತ್ವಕ್ಕೆ, ಪ್ರಜಾಪ್ರಭುತ್ವಕ್ಕೆ ಇದು ಕೊಡಲಿ ಪೆಟ್ಟಾಗುತ್ತದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಐ-ಪ್ಯಾಕ್ ಮೇಲೆ ಇಡಿ ದಾಳಿ: ಕೋಲ್ಕತ್ತಾದಲ್ಲಿ ಮಮತಾ ಪ್ರತಿಭಟನೆ: ಅಮಿತ್ ಶಾ ಕಚೇರಿಯ ಹೊರಗೆ ಪ್ರತಿಭಟಿಸುತ್ತಿದ್ದ ಟಿಎಂಸಿ ಶಾಸಕರ ಬಂಧನ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ನಡೆಸಿದ...

ಮಹಾರಾಷ್ಟ್ರ ಜಲ್ನಾ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಸ್ಪರ್ಧೆ!

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಆರೋಪಿ ಶ್ರೀಕಾಂತ್ ಪಂಗಾರ್ಕರ್ ಮುಂಬರುವ ಜಲ್ನಾ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ ಎಂಬ ಸುದ್ದಿ  ಹಲವು ರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗಿದೆ.  ಗೌರಿ ಲಂಕೇಶ್ ಹತ್ಯೆ ಸೇರಿದಂತೆ...

‘ಮೋದಿ ಟ್ರಂಪ್‌ಗೆ ಕರೆ ಮಾಡದ ಕಾರಣ ಭಾರತ-ಯುಎಸ್ ವ್ಯಾಪಾರ ಒಪ್ಪಂದ ನಡೆಯಲಿಲ್ಲ’: ಹೊವಾರ್ಡ್ ಲುಟ್ನಿಕ್ 

ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಸರಿಯಾದ ಸಮಯಕ್ಕೆ ಕರೆ ಮಾಡದ ಕಾರಣ ಭಾರತದೊಂದಿಗಿನ ವ್ಯಾಪಾರ ಒಪ್ಪಂದ ನಡೆಯಲಿಲ್ಲ ಎಂದು ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್...

‘ರೈಲ್ವೆ ಸಚಿವಾಲಯವನ್ನು ವೈಯಕ್ತಿಕ ಆಸ್ತಿಯಾಗಿ ಬಳಸಿಕೊಳ್ಳಲಾಗಿದೆ’: ಲಾಲು ಮತ್ತು ಕುಟುಂಬದ ವಿರುದ್ಧ ದೆಹಲಿ ನ್ಯಾಯಾಲಯ ಆರೋಪ

ನವದೆಹಲಿ: ಉದ್ಯೋಗಕ್ಕಾಗಿ ಭೂಮಿ ಹಗರಣದಲ್ಲಿ ಆರ್‌ಜೆಡಿ ಮುಖ್ಯಸ್ಥ ಮತ್ತು ಮಾಜಿ ರೈಲ್ವೆ ಸಚಿವ ಲಾಲು ಪ್ರಸಾದ್ ಯಾದವ್, ಅವರ ಕುಟುಂಬದ ಸದಸ್ಯರು ಮತ್ತು ಇತರರ ವಿರುದ್ಧ ದೆಹಲಿ ನ್ಯಾಯಾಲಯ ಗಂಭೀರ ಆರೋಪಗಳನ್ನು ಮಾಡಿದೆ.  ಯಾದವ್...

‘ಕೇರಳದ ಮಲಯಾಳಂ ಮಸೂದೆಯನ್ನು ವಿರೋಧಿಸಲು ಸಾಧ್ಯವಿರುವ ಎಲ್ಲವನ್ನೂ ಮಾಡುತ್ತೇವೆ’: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಕನ್ನಡ ಮಾಧ್ಯಮ ಶಾಲೆಗಳಲ್ಲಿಯೂ ಮಲಯಾಳಂ ಅನ್ನು ಪ್ರಥಮ ಭಾಷೆಯನ್ನಾಗಿ ಮಾಡುವ ಕೇರಳದ ಪ್ರಸ್ತಾವಿತ ಕಾನೂನನ್ನು ವಿರೋಧಿಸಲು ಕರ್ನಾಟಕ "ಸಾಧ್ಯವಾದಷ್ಟು ಪ್ರಯತ್ನಿಸುತ್ತದೆ" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.   ಪ್ರಸ್ತಾವಿತ ಮಲಯಾಳಂ ಭಾಷಾ ಮಸೂದೆಯು "ಕೇರಳದ...

ಜಾರ್ಖಂಡ್‌ನಲ್ಲಿ ಮತ್ತೊಂದು ಗುಂಪುಹತ್ಯೆ: ದನ ಕಳ್ಳತನದ ಶಂಕೆಯಲ್ಲಿ ಮುಸ್ಲಿಂ ವ್ಯಕ್ತಿಯನ್ನು ಥಳಿಸಿ ಕೊಂದ ಗುಂಪು

ಜಾರ್ಖಂಡ್‌ನ ಗೊಡ್ಡಾ ಜಿಲ್ಲೆಯಲ್ಲಿ ಬುಧವಾರ ದನಗಳನ್ನು ಕದ್ದಿದ್ದಾನೆ ಎಂಬ ಶಂಕೆಯಲ್ಲಿ 45 ವರ್ಷದ ಮುಸ್ಲಿಂ ವ್ಯಕ್ತಿಯನ್ನು ಅಪರಿಚಿತ ಜನರ ಗುಂಪೊಂದು ಹೊಡೆದು ಕೊಂದಿದೆ ಎಂದು ಪಿಟಿಐ ವರದಿ ಮಾಡಿದೆ. ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ...

ನ್ಯಾಷನಲ್ ಹೆರಾಲ್ಡ್ ಜಾಹೀರಾತು ವಿವಾದ: ಹಣಕಾಸಿನ ದಾಖಲೆ ಕೇಳಿ ಡಿಕೆ ಸಹೋದರರಿಗೆ ನೋಟಿಸ್  

ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರದಿಂದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಬೇರೆ ಯಾವುದೇ ರಾಷ್ಟ್ರೀಯ ದಿನಪತ್ರಿಕೆಗಿಂತ ಹೆಚ್ಚಿನ ಜಾಹೀರಾತು ನಿಧಿ ದೊರೆತಿದೆ ಎಂದು ವರದಿಯಾಗಿದೆ, ಇದು ಸಾರ್ವಜನಿಕ ಹಣದ ಬಳಕೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ....

ಬಿಹಾರ: ಸರ್ಕಾರಿ ಶಾಲಾ ಶಿಕ್ಷಕರಿಗೆ ಬೀದಿ ನಾಯಿಗಳನ್ನು ಎಣಿಸುವ ಹೆಚ್ಚುವರಿ ಕರ್ತವ್ಯ ವಹಿಸಿದ ಪುರಸಭೆ  

ಪಾಟ್ನಾ: ಸುಪ್ರೀಂ ಕೋರ್ಟ್ ಬೀದಿ ನಾಯಿಗಳ ವಿಚಾರದಲ್ಲಿ ಮಹತ್ವದ ಆದೇಶ ನೀಡಿದೆ. ಸಾರ್ವಜನಿಕ ರಸ್ತೆಗಳು, ಬೀದಿಗಳು ಬೀದಿನಾಯಿ ಮುಕ್ತವಾಗಿರಬೇಕು ಎಂದು ಹೇಳಿದೆ. ಆದರೆ ಈ ಆದೇಶ ಸರ್ಕಾರಿ ಶಾಲಾ ಶಿಕ್ಷಕರ ಪಾಲಿಗೆ ದೊಡ್ಡ...

ಮಮತಾ ಬ್ಯಾನರ್ಜಿಯ ರಾಜಕೀಯ ಸಲಹಾ ಸಂಸ್ಥೆ ಐ-ಪ್ಯಾಕ್, ಅದರ ಮುಖ್ಯಸ್ಥ ಪ್ರತೀಕ್ ಜೈನ್ ಮನೆ ಮೇಲೆ ಇಡಿ ದಾಳಿ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ...

ಉತ್ತರಪ್ರದೇಶ: ಕಬ್ಬಿನ ಗದ್ದೆಯಲ್ಲಿ ಸುಟ್ಟ, ಅರೆನಗ್ನ ಮಹಿಳೆಯ ಮೃತದೇಹ ಪತ್ತೆ: ಅತ್ಯಾಚಾರ ಮಾಡಿ ಬೆಂಕಿ ಹಚ್ಚಿರುವ ಶಂಕೆ

ಹಾಪುರ್: ಉತ್ತರ ಪ್ರದೇಶದ ಹಾಪುರ್ ಜಿಲ್ಲೆಯಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದ್ದು, ಬಹದ್ದೂರ್‌ಗಢ ಪೊಲೀಸ್ ಠಾಣೆ ವ್ಯಾಪ್ತಿಯ ಲಹಾದ್ರಾ ಗ್ರಾಮದ ಇಟ್ಟಿಗೆ ಗೂಡುಗಳ ಹಿಂದಿನ ಕಬ್ಬಿನ ಗದ್ದೆಯಲ್ಲಿ ಸುಮಾರು 30 ವರ್ಷ ವಯಸ್ಸಿನ...