Homeಅಂಕಣಗಳುದೇಶವನ್ನು ಕಾಡುತ್ತಿರುವ ಎರಡನೇ ಅತಿ ಪ್ರಮುಖ ಸಮಸ್ಯೆಗೆ ಗಮನ ಹರಿಸದಿದ್ದರೆ ಮೊದಲನೇ ಸಮಸ್ಯೆಯು ಪರಿಹಾರವೂ ನಿಷ್ಫಲವಾದೀತು

ದೇಶವನ್ನು ಕಾಡುತ್ತಿರುವ ಎರಡನೇ ಅತಿ ಪ್ರಮುಖ ಸಮಸ್ಯೆಗೆ ಗಮನ ಹರಿಸದಿದ್ದರೆ ಮೊದಲನೇ ಸಮಸ್ಯೆಯು ಪರಿಹಾರವೂ ನಿಷ್ಫಲವಾದೀತು

ಬೆಂಗಳೂರಿನಲ್ಲಿ ಬೀಳುತ್ತಿರುವ ಮಳೆ-ಗಾಳಿಗೆ ಮರಗಳು ಉರುಳಿ ಬೀಳುತ್ತಿವೆ. ಅಷ್ಟೆಲ್ಲಾ ಮಳೆ ಬಿದ್ದರೂ ಧಗೆ ಆರದೇ ಜನರು ಕೂಲರ್‍ಗಳ ಮೊರೆ ಹೋಗುತ್ತಿದ್ದಾರೆ.

- Advertisement -
- Advertisement -

ಬೆಂಗಳೂರಿನಲ್ಲಿ ಬೀಳುತ್ತಿರುವ ಮಳೆ-ಗಾಳಿಗೆ ಮರಗಳು ಉರುಳಿ ಬೀಳುತ್ತಿವೆ. ಅಷ್ಟೆಲ್ಲಾ ಮಳೆ ಬಿದ್ದರೂ ಧಗೆ ಆರದೇ ಜನರು ಕೂಲರ್‍ಗಳ ಮೊರೆ ಹೋಗುತ್ತಿದ್ದಾರೆ. ನಿನ್ನೆ ಸಂಜೆ (ಏ.27), ಬೆಂಗಳೂರಿನ ಉಷ್ಣತೆ 30 ಡಿಗ್ರಿ ಇದ್ದರೆ, ಮೈಸೂರಿನದ್ದು 29 ಡಿಗ್ರಿ ಇತ್ತು. ಆದರೆ, ಮೈಸೂರಿನ ಉಷ್ಣತೆ ತೋರಿದ ಗೂಗಲ್ (But it feels like 31 degree) 31 ಡಿಗ್ರಿ ಥರ ಭಾಸವಾಗುತ್ತದೆ ಎಂದಿತ್ತು. ಹೈದ್ರಾಬಾದ್ ಕರ್ನಾಟಕದಲ್ಲಿ 40ರ ಆಸುಪಾಸು ಇರುತ್ತದೆ. ಶಿವಮೊಗ್ಗವು ಬಳ್ಳಾರಿಯನ್ನು ಮೀರಿಸುವಷ್ಟು ಬಿಸಿಯಾಗಿ ಎಷ್ಟೋ ವರ್ಷಗಳಾಗಿವೆ.

ಇವೆಲ್ಲವೂ ಮಳೆ ಮತ್ತು ಉಷ್ಣಾಂಶದ ವಿಚಾರವಾಯಿತು.

ಬೆಂಗಳೂರಿನಲ್ಲಿ 1990ರ ಹೊತ್ತಿಗೆ ಬೋರ್‍ವೆಲ್ ಹಾಕಿಸಿದವರಲ್ಲಿ 100 ಅಡಿಗಳೊಳಗೇ ಎಲ್ಲರಿಗೂ ನೀರು ಸಿಗುತ್ತಿತ್ತು. ಈಗ ಕತ್ರಿಗುಪ್ಪೆಯ ಸುತ್ತ 1000 ಅಡಿಯವರೆಗೆ ಕೊರೆಸುತ್ತಿದ್ದಾರೆ. ಇನ್ನು ಒಣ ಬಯಲುಸೀಮೆಯ ಗತಿ ಏನೇನಾಗಿರಬಹುದು?

ಬೆಂಗಳೂರಿನ ದಾಹ ತೀರಿಸುವ ಮತ್ತು ಅದರೊಂದಿಗೆ ಅಕ್ಕಪಕ್ಕದ ಜಿಲ್ಲೆಗಳಿಗೂ ನೀರು ಹರಿಸುವ (ಗಮನಿಸಿ ಅಕ್ಕಪಕ್ಕದ ಜಿಲ್ಲೆಗಳು ಮೊದಲ ಆದ್ಯತೆಯಲ್ಲ) ಉದ್ದೇಶದೊಂದಿಗೆ ಎತ್ತಿನಹೊಳೆ, ಲಿಂಗನಮಕ್ಕಿಯಿಂದ ನೀರು ಇತ್ಯಾದಿ ಪ್ರಸ್ತಾಪಗಳು ಸರ್ಕಾರದ ಮುಂದೆ ಬಂದವು. ಇದೀಗ ಎತ್ತಿನಹೊಳೆ ಇನ್ನೇನು ಬಂದೇ ಬಿಟ್ಟಿತು ಎನ್ನುತ್ತಿದ್ದಾರೆ. ಎಲ್ಲರಿಗೂ ಗೊತ್ತಿದೆ. ಅದು ಸಮಸ್ಯೆಯ ಸಣ್ಣ ತುಣುಕನ್ನಷ್ಟೇ ಬಗೆಹರಿಸಲು ಹೋಗಿ, ಬೇರೆ ಬೇರೆ ರೀತಿಯ ಬಿಕ್ಕಟ್ಟುಗಳಿಗೆ ದಾರಿ ಮಾಡಿಕೊಡಲಿದೆ.

ಇದನ್ನು ಅತ್ಯಂತ ದೊಡ್ಡ ಸಮಸ್ಯೆ ಎಂದು ಹೇಳಬಾರದೇಕೆ ಎಂದು ಜಲಕಾರ್ಯಕರ್ತರು ಕೇಳಬಹುದು. ಆದರೆ, ಇಂತಹ ಹಲವು ಬೃಹತ್ ಸಮಸ್ಯೆಗಳಿಗೆ ಕಾರಣವಾದ ಸರ್ಕಾರದ ನೀತಿ ಮತ್ತು ಸಮಾಜದ ರೀತಿಗಳೇ ಪ್ರಧಾನ ಕಾರಣ ಎಂದು ಹೇಳುವವರೂ ಇರುತ್ತಾರೆ. ಇಂದು ದೇಶದಲ್ಲಿ ಮನುಷ್ಯ ಸಮುದಾಯವನ್ನೇ ಸೀಳಲು ಹೊರಟಿರುವ ಬಲಪಂಥೀಯ ಪಡೆಯೇ ಪ್ರಧಾನ ಸಮಸ್ಯೆ, ಮಿಕ್ಕಿದ್ದೆಲ್ಲಾ ನಂತರ ನೋಡೋಣ ಎಂದು ಹೇಳುವವರು ಇರಬಹುದು. ಹೀಗಾಗಿ ಇದನ್ನು ಎರಡನೇ ಅತೀ ದೊಡ್ಡ ಸಮಸ್ಯೆ ಎಂದು ಹೇಳಲಾಗಿದೆ.

ಒಂದಂತೂ ಸ್ಪಷ್ಟ ಇತರ ಬೃಹತ್ ಸಮಸ್ಯೆಗಳನ್ನು ಪರಿಹರಿಸಿಕೊಂಡು ಇದಕ್ಕೆ ಬರೋಣ ಎನ್ನುವವರೆಗೆ ನೀರು ಚಿಮ್ಮುತ್ತಲೇ ಇರುವುದಿಲ್ಲ. ಮತ್ತಷ್ಟು ಪಾತಾಳಕ್ಕೆ ಇಳಿಯುವ ನೀರು ಮತ್ತು ಮೇಲೇರಲಿರುವ ಉಷ್ಣತೆ ಎಲ್ಲಾ ಪಂಥೀಯರನ್ನೂ ಸುಡದೇ ಬಿಡುವುದಿಲ್ಲ. ಇದುವರೆಗೆ ನಮ್ಮ ನಾಡು ಕಂಡರಿಯದ ರೀತಿಯ ಸಮಸ್ಯೆಗಳಿಗೆ ಅದು ದೂಡಲಿದೆ. ಮೊಟ್ಟ ಮೊದಲ ಬಾರಿಗೆ ಈ ಪರಿಯಾಗಿ ಬೆಳೆದು ನಿಂತಿರುವ ಬಲಪಂಥೀಯ ವಿಷ ದೇಶವನ್ನು ಹೇಗೆಲ್ಲಾ ಕಾಡಲಿದೆ ಎಂಬುದನ್ನು, ಅನುಭವಿಸಿಯೇ ಅರಿತುಕೊಳ್ಳಬೇಕೋ ಇದೂ ಸಹಾ ಹಾಗೆಯೇ ಇರುತ್ತದೆ.

ಒಂದೇ ವ್ಯತ್ಯಾಸವೆಂದರೆ, ಬಿಜೆಪಿಗೆ ವೋಟು ಹಾಕಿರುವವರು, ಕಾಂಗ್ರೆಸ್‍ಗೆ, ಕಮ್ಯುನಿಸ್ಟರಿಗೆ ಓಟು ಹಾಕಿರುವವರು, ಓಟೇ ಹಾಕದವರು ಎಲ್ಲರನ್ನೂ ಇದು ಸಮಾನವಾಗಿ ಕಾಡಲಿದೆ. ಧಾರ್ಮಿಕರು, ನಾಸ್ತಿಕರು ಎಲ್ಲರನ್ನೂ ಪ್ರಕೃತಿಯ ಈ ಪ್ರಕೋಪ ಆತಂಕಕ್ಕೆ ದೂಡಲಿದೆ. ಧರ್ಮಸ್ಥಳದ ಕಡೆಯಿಂದ ನೀರನ್ನು ಪೂರ್ವಕ್ಕೆ ಹರಿಸಿಬಿಡಬಹುದು ಎಂಬ ಆತಂಕ ಅಲ್ಲಿನ ಜನರನ್ನು ಕಾಡಿತ್ತು. ಹಾಗಾಗಿ ನೇತ್ರಾವತಿ ತಿರುವಿಗೆ ಅಥವಾ ಎತ್ತಿನಹೊಳೆಗೆ ಧರ್ಮಸ್ಥಳದ ವೀರೇಂದ್ರ ಹೆಗಡೆಯವರದ್ದೂ ವಿರೋಧವಿತ್ತು. ಹೀಗಾಗಿ ಅವರ ಮನವೊಲಿಸಲು, ಸಾಧ್ಯವಾಗದಿದ್ದರೆ ಅವರನ್ನೂ ಧಿಕ್ಕರಿಸಲು ಬಯಲುಸೀಮೆಯಲ್ಲಿ ಭಾಷಣಗಳಾಗಿವೆ.

ವಿಪರ್ಯಾಸವೆಂದರೆ, ಈ ಬೇಸಿಗೆಯಲ್ಲಿ ಬೆಂಗಳೂರಿನಿಂದ ಕ್ಯಾನ್‍ಗಟ್ಟಲೇ ನೀರನ್ನು ಧರ್ಮಸ್ಥಳಕ್ಕೇ ಕೊಂಡೊಯ್ದು ಕೊಟ್ಟ ಭಕ್ತರಿದ್ದಾರೆ. ಈ ನೀರು ಬೆಂಗಳೂರಿಗೆ ಎಲ್ಲಿಂದ ಬರುತ್ತದೆ? ಎಲ್ಲೆಲ್ಲಿಂದ ಬರುತ್ತದೋ ಅಲ್ಲಿನ ಜನರು, ರೈತರು, ಜಾನುವಾರುಗಳ ಪರಿಸ್ಥಿತಿ ಏನಿದೆ? ಅಂತಿಮವಾಗಿ ರಾಜ್ಯದೆಲ್ಲೆಡೆಗೂ ನೀರು ಪಶ್ಚಿಮ ಘಟ್ಟದಿಂದ ಸಿಗುತ್ತದಾ? ಎಲ್ಲಿಯೂ ಸಿಗದೇ ಇದ್ದರೆ ಏನು ಮಾಡುವುದು? ಈ ಪ್ರಶ್ನೆಗಳನ್ನು ಯಾರು ಯಾರಿಗೆ ಹಾಕಬೇಕು? ನೀರು ಸಿಗಬೇಕೆಂದರೆ ಈ ಪ್ರಶ್ನೆಗಳೂ ಮತ್ತು ಅವುಗಳಿಗೆ ಉತ್ತರಗಳು ಎರಡೂ ಬೇಕು.

ಸರ್ಕಾರದ ಮಟ್ಟದಲ್ಲಿ ದೊಡ್ಡದಾಗಿ ಏನೂ ಆಗದು ಎಂದು ಖಚಿತವಾಗಿರುವವರು ತಮ್ಮದೇ ರೀತಿಯ ಪ್ರಯತ್ನವನ್ನು ನಡೆಸಿದ್ದಾರೆ. ಹಿಂದೇ ಇಲ್ಲೇ ಬರೆದಿದ್ದಂತೆ, ಅಂತಹದೊಂದು ಪ್ರಯತ್ನವು ತುಮಕೂರು ಜಿಲ್ಲೆಯಲ್ಲಿ ನಡೆಸಲಾಯಿತು.
ಚುನಾವಣೆ ಮುಗಿದು ಫಲಿತಾಂಶ ಬರುವ ಮುಂಚೆ ಸಿರಾದ ಸಮತಾ ವಿದ್ಯಾಲಯದಲ್ಲಿ (ಅಂದರೆ ಮೇ 17, 18 & 19ರಂದು) ಜಲಕಾರ್ಯಕರ್ತರ ತರಬೇತಿಗೆ ರಾಜೇಂದ್ರ ಸಿಂಗ್ ಬಂದು ಹೋದರು. ಜೂನ್ 8ರಂದು ಪರಿಸರದ ಕುರಿತ ಕಾಳಜಿಯಿಂದ ಹಳೇಬೀಡಿನಲ್ಲೊಂದು ಸಮಾವೇಶ ಆಯೋಜನೆಯಾಗಿದೆ. ಹಾಸನ ಜಿಲ್ಲೆಯಲ್ಲಿ ಈಗಾಗಲೇ ಅತ್ಯುತ್ತಮ ಕೆಲಸ ಮಾಡುತ್ತಿರುವವರು ಸೇರಿಕೊಂಡು ಅದನ್ನು ಸಂಘಟನೆ ಮಾಡುತ್ತಿದ್ದಾರೆ.

ಇಂತಹ ಎಲ್ಲಾ ಪ್ರಯತ್ನಗಳಿಗೂ ನಮಗೆ ಸಾಧ್ಯವಾದ ರೀತಿಯಲ್ಲಿ ಕೈ ಜೋಡಿಸುವುದು ನಮ್ಮೆಲ್ಲರ ಕರ್ತವ್ಯವಾಗಬೇಕೆಂದು ಪತ್ರಿಕೆ ಬಯಸುತ್ತದೆ. ಅದರ ಜೊತೆ ಜೊತೆಗೇ ಸರ್ಕಾರದ ಮೇಲೆ ಒತ್ತಡ ತರುವ ಪ್ರಯತ್ನವೂ ಸಾಗಬೇಕು. ಬಯಲುಸೀಮೆಯವರು ಮತ್ತು ಘಟ್ಟದ ಆಸುಪಾಸಿನಲ್ಲಿರುವವರು ಸಮಾನ ಆಶಯ ಕಾಳಜಿಗಳಿಂದ ಚರ್ಚಿಸಿ ಒಂದೇ ನಿಲುವಿಗೆ ತಲುಪಬೇಕು. ಅದಾಗದಿದ್ದಲ್ಲಿ ಕ್ಯಾನ್‍ನಲ್ಲಿ ನೀರು ತೆಗೆದುಕೊಂಡು ಹೋಗಲೂ ನೀರು ಸಿಗದೇ ಹೋಗುವ ಸಾಧ್ಯತೆಯಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. Here you have not taught about uneven and unscientific development of industrial pollution in term’s of water, smoke, notice, and waist, at the same time vehicles pollution effects on environment, it is to viewed universally.

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...