Homeಸಾಮಾಜಿಕಮಂಗಳೂರು ಯೂನಿವರ್ಸಿಟಿ ಮಂಗಳ ಗಂಗೋತ್ರಿಯಲ್ಲಿ ಗಂಡಾಗುಂಡಿ

ಮಂಗಳೂರು ಯೂನಿವರ್ಸಿಟಿ ಮಂಗಳ ಗಂಗೋತ್ರಿಯಲ್ಲಿ ಗಂಡಾಗುಂಡಿ

- Advertisement -
- Advertisement -

ಮಂಗಳೂರು ವಿಶ್ವವಿದ್ಯಾಲಯಕ್ಕೆ “ಮಂಗಳ ಗಂಗೋತ್ರಿ” ಎಂಬ ಚಂದದ ಹೆಸರಿಡಲಾಗಿದೆ ವಿಕಟ ವ್ಯಂಗ್ಯವೆಂದರೆ, ಈ ಯೂನಿವರ್ಸಿಟಿ ಶುದ್ಧ ಅವ್ಯವಹಾರ, ಅಕ್ರಮ, ಅನ್ಯಾಯ, ಅನಾಚಾರದ ಗಂಗೋತ್ರಿಯಂತಾಗಿ ಅದ್ಯಾವುದೋ ಕಾಲವಾಗಿ ಹೋಗಿದೆ! ಇಲ್ಲಿಗೆ ಉಪಕುಲಪತಿಗಳಾಗಿ ವಕ್ಕರಿಸುವ ಭೂಪರಿಲ್ಲ ಸಿಕ್ಕóಷ್ಟು ಸ್ವಾಹಾ ಮಾಡುವ ಹಿಡನ್ ಅಜೆಂಡಾ ಇಟ್ಟುಕೊಂಡೇ ಬರುತ್ತಿದ್ದಾರೆ. ಹೀಗಾಗಿ ಮಂಗಳೂರು ವಿಶÀ್ವವಿದ್ಯಾಲಯ ಒಂದಲ್ಲ ಒಂದು ಬುರ್ನಾಸ್ ಭಾನ್ಗಡಿಯ ಸುದ್ದಿಗೀಡಾಗುತ್ತಲೇ ಇದೆ. ಈ ಪರಿಯ ಕವರ್iಕಾಂಡ, ಕಾಮಕತೆಗಳೆಲ್ಲವೂ ಲೋಕ ಪ್ರಸಿದ್ದ! ಮಂಗಳ ಗಂಗೋತ್ರಿಯಲ್ಲಾಗುವುದು ಕೋಟಿಗಳ ಲೆಕ್ಕದ ಬಿಲ್ ವಿದ್ಯೆ!! ಕಾಮಗಾರಿ, ನೇಮಕಾತಿ, ಖರೀದಿಯಲ್ಲಿ ಘನಘೋರ ಭ್ರಷ್ಟಾಚಾರ ನಡೆಯುತ್ತಿರುವ ಮಂಗಳೂರು ಯೂನಿವರ್ಸಿಟಿಯಲ್ಲಿ ಉಪನ್ಯಾಸಕಿಯರ, ವಿದ್ಯಾರ್ಥಿನಿಯರ ಲೈಂಗಿಕ ಶೋಷಣೆ ನಿತ್ಯಕರ್ಮದಂತಾಗಿದೆ.
ಅಂಕಪಟ್ಟಿ ಹಗರಣ 2007 ರಲ್ಲಿ ನಡೆದಾಗ ಅಲ್ಲೋಲಕಲ್ಲೋಲವೇ ಮಂಗಳ ಗಂಗೋತ್ರಿಯಲ್ಲಾಗಿತ್ತು! ಅದನ್ನು ಮರೆಯದ ಚರ್ಚೆಯ ಸಂಗತಿಯಾಗಿ ಇದೆಯೇ ವಿನಾಃ ನಿಷ್ಠುರ ತನಿಖೆ ಎಂಬುದಾಗಲೇ ಇಲ್ಲ. ಅಂದು ಎಬಿವಿಪಿಯ ರಣಧೀರ ಕಂಠೀರವನಾಗಿದ್ದ ಇಂದಿನ ಬೆಳ್ತಂಗಡಿಯ ಚೆಡ್ಡಿ ಶಾಸಕ ಹರೀಶ್‍ರೈ ಆ ಹಗರಣದ ಫಲಾನುಭವಿಗಳಲ್ಲಿ ಒಬ್ಬ!! ಮಂಗಳೂರು ವಿವಿಯಲ್ಲಿ ಆಕಾಡೆಮಿಕ್ ವಾತಾವರಣದ ಬದಲು ಸ್ವಚ್ಛಂದ ಮೋಜಿನ ಮೂಡ್ ನೆಲೆನಿಂತಿದ್ದೆ. ಸಂಘ ಪರಿವಾರದ ಹಾವಳಿಯಂತೂ ಹೇಳತೀರದು. ಸಿದ್ದು ಕಾಲಾವಧಿಯಲ್ಲಿ ಉಪಕುಲಪತಿಯಾಗಿ ನೇಮಕವಾಗಿದ್ದ ಭೈರಪ್ಪ ವಾರ್ಸಿಟಿಯ ಶೆಕ್ಷಣಿಕ ಸುಧಾರಣೆಗೆ ತಲೆಕೆಡಿಸಿಕೊಳ್ಳಲೇ ಇಲ್ಲ. ಆತ ಎಲ್ಲೆಲ್ಲಿ ಎಷ್ಟೆಷ್ಟು ಗುಳುಂ ಮಾಡಲು ಸಾಧ್ಯವೆಂದು ತಲಾಸ್ ನಡೆಸಿ ಹೊಟ್ಟೆತುಂಬ ಉಂಡು ಎದ್ದು ಹೋಗಿದ್ದಾರೆ. ಈ ಭೈರಪ್ಪ ಮಂಗಳ ಗಂಗೋತ್ರಿಯಿಂದ ತೊಲಗಿ ಆದಿಚುಂಚನಗಿರಿ ಶೆಕ್ಷಣಿಕ ಸಾಮ್ರಾಜ್ಯದ ಪ್ರೋಚಾನ್ಸಲರ್ ಆಗಿ ಅಮರಿಕೊಂಡು ತಿಂಗಳೆರಡು ಗತಿಸಿದರೂ ಆತನ ಗೋಲ್‍ಮಾಲ್ ಲೀಲೆಗಳ ಆವಾಜ್ ಮಾತ್ರ ಇವತ್ತಿಗೂ ನಿಂತಿಲ್ಲ…………
ಯಾರ್ಯಾರ ದೌರ್ಬಲ್ಯ ಎಂತೆಂಥದೆಂದು ಕರಾರುವಾಕ್ಕಾಗಿ ಕಂಡುಹಿಡಿದು ಆ ಚೋರ ಚಂಡಾಲರನ್ನು ತನ್ನ ಮನೋಗಡಕ್ಕೆ ಬಳಸಿಕೊಳುವ ಕಲೆ ಕರಗತ ಮಾಡಿಕೊಂಡಿದ್ದ ಭೈರಪ್ಪ ಸಾಹೇಬರು ತನಗೆ ವಿಸಿಯಾಗಿ ಪ್ರಾತಿಷ್ಠಾಪಿಸಿದ್ದ ಕಾಂಗ್ರೆಸಿಗರಷ್ಟೇ ಆದÀರಿಂದ ಬಿಜೆಪಿಗರನ್ನು ನೋಡಿಕೊಳ್ಳುತ್ತಿದ್ದರು ಕೇಸರಿ ಕಿತಾಪತಿಗಾರರ ಆಡ್ಡೆಯಂತಾಗಿರುವ ಮಂಗಳೂರಲ್ಲಿ ಬಿಜೆಪಿ ಪರಿವಾರಿಗರ ಯಶಸ್ವಿಯಾಗಿ ನಿಭಾಯಿಸಿದ್ದ ಭೈರಪ್ಪ ವಿವಿಯನ್ನು ಮಾವನ ಮನೆಯಿಂದ ಬಂದ ಬಳುವಳಿಯಂತೆ ದರ್ಬಾರು ನಡೆಸುತ್ತಿದ್ದರು! ತನ್ನ ರಣ ಹಸಿವು ಅರ್ಥ ಮಾಡಿಕೊಂಡವರ ವಿವಿಯ ಆಯಕಟ್ಟಿನ ಜಾಗದಲ್ಲಿ ನಿಭಾಯಿಸಿದ್ದ ಈ ವಿಸಿ ತನ್ನ ಒಣ ಸೈದ್ದಾಂತಿಕತೆ, ಸ್ವಪ್ರತಿಷ್ಠೆ ಮತ್ತು ಹಣದ ಹಪಾಹಪಿಗೆ ತಕ್ಕಂತೆ ಆಡಳಿತ ನಡೆಸಿಕೊಂಡಿದ್ದರು!!
ಪ್ರತಿ ವರ್ಷ ಪ್ರಶ್ನೆ ಪತ್ರಿಕೆ ಸೋರಿಕೆಯಾಗುವುದು ಮಂಗಳೂರು ವಿವಿಯ ಸಂಪ್ರದಾಯ ಎಂಬಂತಾಗಿದೆ! ಭೈರಪ್ಪನ ಪರ್ವದಲ್ಲಿ ಪ್ರಶ್ನೆ ಪತ್ರಿಕೆ ಬಹಿರಂಗವಾದಾಗ ದೊಡ್ಡ ಗದ್ದಲವೂ ಆಗಿತ್ತು. ಪ್ರಶ್ನೆಪತ್ರಿಕೆ ಸೋರಿಕೆ ಮಾಡುವ ವ್ಯವಸ್ಥಿತ ಜಾಲದಲ್ಲಿ ವೀಸಿ ಸಾಹೇಬರೂ ಇದ್ದಾರೆಂಬ ಪುಕಾರುಗಳು ಎದ್ದಿದ್ದವು. ತುಂಬ ನಾಜೂಕಾಗಿ ಪ್ರಕರಣ ನಿಭಾಯಿಸಿದ ವಿಸಿ ಭೈರಪ್ಪ ಎಲ್ಲಾ ಮುಚ್ಚಿಹಾಕಿ ಬಚಾವಾದರು. ಅಂಕಪಟ್ಟಿ ಅಕ್ರಮದಲ್ಲಂತೂ ಬಹುಕೋಟಿ ವ್ಯವಹಾರ ರಾಜಾರೋಷವಾಗೇ ನಡೆದುಹೋಗಿದೆ. ಇದರಲ್ಲಿ ವಿಸಿ ಸಾಹೇಬರಿಗೆ ದೊಡ್ಡದೊಂದು ಪಾಲು ದಕ್ಕಿದೆಯೆಂದು ಯೂನಿವರ್ಸಿಟಿಯ ಕಂಬ-ಕಂಬವೂ ಪಿಸುಗುಡುತ್ತದೆ. ಕೆಎಸ್‍ಓಯು ಯುಜಿಸಿ ಮಾನ್ಯತೆ ಕಳೆದುಕೊಂಡಿತು. ಈ ಕೆಎಸ್‍ಓಯು ಮತ್ತು ದೂರಶಿಕ್ಷಣ ನಿರ್ದೇಶನಾಲಯವನ್ನು ದುಡ್ಡು ಮಾಡುವ ಅಡ್ಡೆಯಂತಾಗಿಸಲಾಯಿತು. ಕಾಸು ಕೊಟ್ಟವರಿಗೆಲ್ಲಾ ಪದವಿ ರಾತ್ರಿ ಬೆಳಗಾಗುವುದರಲ್ಲಿ ಮಂಗಳಗಂಗೋತ್ರಿಯಲ್ಲಿ ಸಲೀಸಾಗಿ ಸಿಗುತ್ತಿದೆ.
ಮಂಗಳ ಗಂಗೋತ್ರಿಯ ಅಷ್ಟೂ ಅವ್ಯವಹಾರ ತಾಯಿಬೇರು ಖರೀದಿ ಕಮಿಟಿ(ಪರ್ಚೆಸ್ ಕಮಿಟಿ) ವೀಸಿ ಕಣ್ಗಾವಲಿನಲ್ಲಿರುವ ಈ ಕಮಿಟಿಯಲ್ಲಿ ಡೀನ್‍ಗಳೆಲ್ಲ ಇರುತ್ತಾರೆ. ಇಲ್ಲಾಗುವ ಖೋಟಾ ಖರೀದಿ, ಕಮಿಷನ್, ಕಿಕ್‍ಬ್ಯಾಕ್‍ಗಳು ಲಕ್ಷದ ಲೆಕ್ಕದಲ್ಲೇ ಇರುತ್ತದೆ! ಖರೀದಿಗಳು ಕೊಟ್ಯಾಂತರ ರೂಪಾಯಿಗಳಾದರೆ ಲಫಡಾ ಲಕ್ಷಾಂತರ ರೂಪಾಯಿಗಳದು. ಪೀಠೋಪಕರಣ, ಎಲೆಕ್ಟ್ರಿಕಲ್ ಸಾಮಾನು, ಕಂಪ್ಯೂಟರ್ ಮುಂತಾದ ವಸ್ತು ಕೊಳ್ಳುವಾಗ ವಿಪರೀತ ಬೆಲೆ ನಮೂದಿಸಿ ಪರ್ಸೆಂಟೇಜ್ ಹೊಡೆಯುವುದು ಸದ್ರಿ ವಾರ್ಸಿಟಿ ವಾಡಿಕೆ. ಈ ಕಮಾಯಿ ಭೈರಪ್ಪನ ಟೀಮು ಹಗಲೂ-ಇರುಳೂ ನಡೆಸಿ ದುಂಡಗಾಗಿದೆ. ಈ ಪರ್ಚೆಸ್ ಪರಾಕ್ರಮದ ಸರಿಯಾದ ತನಿಖೆ ನಡೆದರೆ ಭೈರಪ್ಪ ಅಂಡ್‍ಕೋದ ಲೂಟಿ ಲೆಕ್ಕಸಿಗುತ್ತದೆ. ಆ ತಾಕತ್ತು ಉನ್ನತ ಶಿಕ್ಷಣ ಸಚಿವ ಜಿ.ಟಿ. ದೇವೇಗೌಡರಿಗಿದೆಯಾ? ಸ್ವಜಾತಿ ಬಂಧುವಾದ ಭೈರಪ್ಪರ ಮುಟ್ಟುವ ಮನಸ್ಸು ಮಂತ್ರಿ ದೇವೇಗೌಡರಿಗಿಲ್ಲ ಎಂದು ವಾರ್ಸಿಟಿಯ ಮಂದಿ ಮುಸಿಮುಸಿ ನಗುತ್ತಾರೆ.
ವಿಸಿ ಭೈರಪ್ಪರ ಡಬ್ಬಲ್ ವೆಂಚರ್ ಎಂದೇ ಕುಖ್ಯಾತವಾಗಿದೆ ವಿವಿಯಲ್ಲಿ ಬೇಕಾಬಿಟ್ಟಿಯಾಗಿ ಅಳವಡಿಸಿರುವ ಸಿಸಿ ಕ್ಯಾಮರಾ ಮತ್ತು ಸೋಲಾರ್ ಹಗರಣಗಳು!! ಎರಡೂ ಕೋಟಿ ಕರಾಮತ್ತೇ. ಸೋಲಾರ್ ಗುತ್ತಿಗೆ ಕಡಿಮೆ ಮೊತ್ತದ ಬಿಡ್‍ದಾರನ ಬದಲಿಗೆ ದೊಡ್ಡ ಬಿಡ್‍ದಾರನಿಗೆ ಭೈರಪ್ಪರ ಗ್ಯಾಂಗು ದಯಪಾಲಿಸಿದೆ. ಇದರಲ್ಲಿ ಲಕ್ಷಾಂತರ ಕಮಿಷನ್ ಪಡೆದಿರುವ ವೀಸಿ ಬಳಗ ಬರೊಬ್ಬರಿ ನಾಲ್ಕು ಕೋಟಿ ರೂಪಾಯಿಗಳ ಸಿಸಿ ಕ್ಯಾಮರಾ ಅಳವಡಿಕೆಯಲ್ಲಿ ಬುದ್ಧಿಪೂರ್ವಕವಾಗೇ ಟೆಂಡರ್ ನಿಯಮ ಧಿಕ್ಕರಿಸಿದೆ. ಯಾವುದೇ ಟೆಂಡರ್ ಇಲ್ಲದೆ ಮುಗುಮ್ಮಾಗಿ ಆಗಿ ನಡೆದಿರುವ ಈ ಸಿಸಿಕ್ಯಾಮರಾ ಅಳವಡಿಕೆ ಕಾಮಗಾರಿ ವೀಸಿ ಭೈರಪ್ಪರ ದೆಸೆಯನ್ನೇ ಬದಲಿಸಿದೆ!
ಗುತ್ತಿಗೆ ಆಧಾರದಲ್ಲಿ ನೇಮಕಾತಿಯಾಗುವ ದುರ್ಬಲರ ಸಂಬಳಕ್ಕೂ ನಾಲಿಗೆ ಚಾಚುವ ಭೈರಪ್ಪರ ಬಣದ ಚಾಳಿ ಮಂಗಳೂರು ವಿವಿ ವ್ಯಾಪ್ತಿಯ ಅಷ್ಟೂ ಶಿಕ್ಷಣ ಸಂಸ್ಥೆಗಳಲ್ಲಿ ಸುಪ್ರಸಿದ್ಧ!! ಸೆಕ್ಯೂರಿಟಿ, ಸಿಫಾಯಿ, ಅಟೆಂಡರ್, ಗುಮಾಸ್ತರಂಥ ಸಣ್ಣ-ಪುಟ್ಟ ಕರ್ಮಚಾರಿಗಳನ್ನು ವಿವಿಯಲ್ಲಿ ಗುತ್ತಿಗೆಯಲ್ಲಿ ತೆಗೆದುಕೊಳ್ಳಲಾಗಿದೆ. ಇವರಿಗೆಲ್ಲಾ ಅಬ್ಬಬ್ಬಾ ಎಂದರೆ ಏಳೆಂಟು ಸಾವಿರ ರೂಪಾಯಿ ಪಗಾರು ಕೊಡಲಾಗುತ್ತಿದೆ. ಆದರೆ ಇವರ ಹೆಸರಲ್ಲಿ ಹದಿನೈದು ಸಾವಿರದಿಂದ ಇಪ್ಪತ್ತೈದು ಸಾವಿರ ರೂಪಾಯಿಗಳ ತನಕ ಖರ್ಚು ಹಾಕಲಾಗಿದೆಯಂತೆ. ವ್ಯತ್ಯಾಸದ ಕಾಸು ಎಲ್ಲಿ ಹೋಗಿದೆ ಎಂಬುದು ಭೈರಪ್ಪರಿಗೆ ಮಾತ್ರ ಗೊತ್ತಿದೆ! ಪೆವಿಲಿಯನ್ ಮತ್ತು ಕಟ್ಟಡಗಳ ನಿರ್ಮಾಣದಲ್ಲಿ ಕೋಟಿ-ಕೋಟಿ ನಾಯಿ-ನರಿ ಪಾಲಾಗಿದೆ ಎಂಬ ಆರೋಪಗಳಿವೆ. ಒಟ್ಟಿನಲ್ಲಿ ವಿವಿ ದುಡ್ಡಲ್ಲಿ ವಿಸಿಯಾಗಿದ್ದ ಭೈರಪ್ಪ ಭರ್ಜರಿ ಯಲ್ಲಮ್ಮನ ಜಾತ್ರೆ ಮಾಡಿಹೋಗಿದ್ದಾರೆ.
ಮಂಗಳಗಂಗೋತ್ರಿಯ ಮತ್ತೊಂದು ಮಗ್ಗುಲಲ್ಲಿ ಅವ್ಯವಹಾರ-ಅಕ್ರಮಗಳಷ್ಟೇ ಬಿರುಸಾಗಿ ಕಾಮಕಾಂಡವೂ ನಡೆದಿದೆ. ಉಪನ್ಯಾಸಕರ ವೃತ್ತಿಗೆ ನಾಲಾಯಕ್ ಆಗಿರುವವರೆಲ್ಲ ಅಮಾಯಕ ವಿದ್ಯಾರ್ಥಿನಿಯರ ನಡುವೆ ಅನಾಹುತಕಾರಿಗಳಂತೆ ಅಂಡಲೆಯುತ್ತಿದ್ದಾರೆ. ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗದ ಸಹಾಯಕ ಅಧ್ಯಾಪಕ ಡಾ|| ಉಮೇಶ್‍ನಾಯ್ಕ್ ಲ್ಯಾಬ್ ಮತ್ತು ಲೈಬ್ರರಿಯಲ್ಲಿ ಹುಡುಗಿಯರ ಜತೆ ಅಸಹ್ಯವಾಗಿ ವರ್ತಿಸುತ್ತಾನೆಂಬ ಗುಲ್ಲೆದ್ದಿದೆ. ಮರೈನ್ ಬಾಯಲಾಜಿ ವಿದ್ಯಾರ್ಥಿಯೊಬ್ಬ ವಿದ್ಯಾರ್ಥಿನಿಯರ ಶೌಚಾಲಯದಲ್ಲಿ ಮೊಬೈಲ್ ಕ್ಯಾಮರಾ ಇಟ್ಟು ಸಿಕ್ಕಿಬಿದ್ದಿದ್ದ. ಡಾ|| ಸುಜಾತ ಎಂಬ ಉಪನ್ಯಾಸಕಿ ತನಗೆ ಸಹೋದ್ಯೋಗಿ ಪ್ರೊಫೆಸರ್ ಡಾ|| ರಶೀದ್ ಲೈಂಗಿಕ ಕಿರುಕುಳ ನೀಡುತ್ತಿದ್ದನೆಂದು ಡೆತ್‍ನೋಟ್ ಬರೆದಿಟ್ಟು ಸಾವಿಗೆ ಶರಣಾಗಿದ್ದಳು. ಬರೋಬ್ಬರಿ ಒಂಭತ್ತು ವರ್ಷ ಆಕೆಗೆ ರಶೀದ್ ಪೀಡಿಸುತ್ತಿದ್ದನಂತೆ. ಈ ಕಾಮಕತೆಗಳು ಮಂಗಳಗಂಗೋತ್ರಿ ಹೆಣ್ಣು ಕು¯ಕ್ಕೆ ಸುರಕ್ಷಿತವಲ್ಲ ಎಂಬ ಸಂದೇಶ ಕಳಿಸಿದೆ. ಅನಾಚಾರ-ಅವ್ಯವಹಾರ-ಅಕಾಡಮಿಕ್ ಪರಿಸರಕ್ಕೆ ಗಂಡಾಂತರಿಕಾರಿಯಾದ ಕುಕೃತ್ಯಗಳು ಒಂದರ ಹಿಂದೊಂದರಂತೆ ನಡೆದರೂ ಯಾವುದೂ ಸರಿಯಾದ ತನಿಖೆಗೆ ಒಳಪಡದೆ ಘಟಿಂಗರು ಪಾರಮ್ಯ ಮೆರೆಯುತ್ತಿದ್ದಾರೆ.
ಮಂಗಳ ಗಂಗೋತ್ರಿಯನ್ನು ಹಳಿಗೆ ತರುವ ಕೆಲಸ ಉನ್ನತ ಶಿಕ್ಷಣ ಮಂತ್ರಿ ಜಿ.ಟಿ. ದೇವೇಗೌಡರ ಕೈಲಿ ಸಾಧ್ಯವಾ? ಆ ಖಾತೆ ನಿಭಾಯಿಸುವ ಧೈರ್ಯ ತನಗಿಲ್ಲವೆಂಬ ಕೀಳಮೆಯ ದೇವೇಗೌಡರಿದ್ದಾರೆ. ಹಾಗಾಗಿ ವಿವಿ ಕುಲಾಧಿಪತಿಯಾಗಿರುವ ರಾಜ್ಯಪಾಲ ವಾಲಾ ಮೂಗು ತೂರಿಸುವ ಮೋದಲೇ ಸಿಎಂ ಕುಮ್ಮಿ ಎಚ್ಚೆತ್ತುಕೊಳ್ಳುವರಾ?!

– ವರದಿಗಾರ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಭಾರತದಲ್ಲಿ 12 ಸಾವಿರ ಉದ್ಯೋಗಿಗಳನ್ನು ವಜಾಗೊಳಿಸಿದ ಒರಾಕಲ್ : ಜಾಗತಿಕವಾಗಿ 30 ಸಾವಿರ ಜನರ ಕೆಲಸಕ್ಕೆ ಕುತ್ತು

ಐಟಿ ದೈತ್ಯ ಒರಾಕಲ್ ಜಾಗತಿಕ ಮಟ್ಟದಲ್ಲಿ ಸುಮಾರು 30,000 ಉದ್ಯೋಗಿಗಳನ್ನು ವಜಾಗೊಳಿಸಲು ನಿರ್ಧರಿಸಿದ್ದು, ಇದು ಭಾರತದ ಮೇಲೂ ತೀವ್ರ ಪರಿಣಾಮ ಬೀರಿದೆ. ವರದಿಗಳ ಪ್ರಕಾರ, ಭಾರತವೊಂದರಲ್ಲೇ ಸುಮಾರು 12,000 ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಲಾಗಿದೆ. ಕಂಪನಿಯು ತನ್ನ ಒಟ್ಟು ಉದ್ಯೋಗಿಳ...

ಗೋವಾ ನೈಟ್‌ಕ್ಲಬ್ ಬೆಂಕಿ ಪ್ರಕರಣ: ಮಾಲೀಕರಾದ ಸೌರಭ್ ಲೂತ್ರಾ, ಗೌರವ್ ಲೂತ್ರಾ ಸಹೋದರರಿಗೆ ಜಾಮೀನು

ಪಣಜಿ: ಕಳೆದ ಡಿಸೆಂಬರ್‌ನಲ್ಲಿ 25 ಜನರ ಸಾವಿಗೆ ಕಾರಣವಾದ ವಿನಾಶಕಾರಿ ಬೆಂಕಿ ಪ್ರಕರಣಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಬಿರ್ಚ್ ಬೈ ರೋಮಿಯೋ ಲೇನ್ ನೈಟ್‌ಕ್ಲಬ್‌ನ ಮಾಲೀಕರಾದ ಸೌರಭ್ ಲೂತ್ರಾ ಮತ್ತು ಗೌರವ್ ಲೂತ್ರಾ ಅವರಿಗೆ...

ಲೈಂಗಿಕ ದೌರ್ಜನ್ಯ ಆರೋಪ: ಮಲಯಾಳಂ ಚಲನಚಿತ್ರ ನಿರ್ದೇಶಕ ರಂಜಿತ್ ಬಾಲಕೃಷ್ಣನ್ 14 ದಿನಗಳ ನ್ಯಾಯಾಂಗ ಬಂಧನಕ್ಕೆ 

ಕೇರಳ: ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮಲಯಾಳಂ ನಿರ್ದೇಶಕ ಮತ್ತು ನಿರ್ಮಾಪಕ ರಂಜಿತ್ ಬಾಲಕೃಷ್ಣನ್ ಅವರನ್ನು ಬುಧವಾರ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಪ್ರಸ್ತುತ ಅವರನ್ನು ಎರ್ನಾಕುಲಂ ಸಬ್ ಜೈಲಿನಲ್ಲಿ ಇರಿಸಲಾಗಿದೆ.  ಜನವರಿ...

ಫಾರ್ಮ್–6 ವಿವಾದ : ಕೋಲ್ಕತ್ತಾದ ಚುನಾವಣಾಧಿಕಾರಿ ಕಚೇರಿ ಮುಂದೆ ಟಿಎಂಸಿ -ಬಿಜೆಪಿ ಕಾರ್ಯಕರ್ತರ ನಡುವೆ ಘರ್ಷಣೆ

ಮತದಾರರ ಪಟ್ಟಿಗೆ ಹೊಸದಾಗಿ ಹೆಸರುಗಳನ್ನು ಸೇರಿಸುವ ನಮೂನೆ -6 (ಫಾರ್ಮ್ -6) ವಿಚಾರದಲ್ಲಿ ಕೋಲ್ಕತ್ತಾದ ಮುಖ್ಯ ಚುನಾವಣಾಧಿಕಾರಿ ಕಚೇರಿ ಮುಂದೆ ಮಂಗಳವಾರ (ಮಾ. 31) ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮತ್ತು ಬಿಜೆಪಿ ಕಾರ್ಯಕರ್ತರ...

‘ಶೀಘ್ರದಲ್ಲೇ ಹೊರಡುತ್ತೇನೆ’: ‘2-3 ವಾರಗಳಲ್ಲಿ’ ಇರಾನ್ ಮೇಲಿನ ಯುದ್ಧ ಕೊನೆಗೊಳಿಸುವ ಬಗ್ಗೆ ಸುಳಿವು ನೀಡಿದ ಅಮೆರಿಕ ಅಧ್ಯಕ್ಷ ಟ್ರಂಪ್ 

ವಾಷಿಂಗ್ಟನ್ ಡಿಸಿ: ಜಾಗತಿಕ ಇಂಧನ ಮಾರುಕಟ್ಟೆಗಳನ್ನು ಅಸ್ತವ್ಯಸ್ತಗೊಳಿಸಿರುವ ಒಂದು ತಿಂಗಳ ಕಾಲ ನಡೆದ ಯುದ್ಧದ ಸಂಭಾವ್ಯ ಅಂತ್ಯದ ಬಗ್ಗೆ ಸುಳಿವು ನೀಡುವ ಮೂಲಕ, ಮುಂದಿನ ಎರಡು ಮೂರು ವಾರಗಳ ಮೊದಲೇ ಇರಾನ್ ವಿರುದ್ಧದ...

ದೊಡ್ಡಬಳ್ಳಾಪುರದಲ್ಲಿ ಭೂ ಸ್ವಾಧೀನ ವಿರೋಧಿ ಹೋರಾಟ : ಕೆಐಎಡಿಬಿ ವಿರುದ್ಧ ಬೀದಿಗಿಳಿದ ಜನ

ದೇವನಹಳ್ಳಿ ಬಳಿಕ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಭೂ ಸ್ವಾಧೀನ ವಿರೋಧಿ ಹೋರಾಟ ಪ್ರಾರಂಭಗೊಂಡಿದೆ. ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ದಿ ಮಂಡಳಿ (ಕೆಐಎಡಿಬಿ) ವಿರುದ್ಧ ಜನರು ಬೀದಿಗಿಳಿದಿದ್ದಾರೆ. ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡಬೆಳವಂಗಲ...

ಬಿಹಾರ: ಪತಿಯನ್ನು ಹತ್ಯೆ ಮಾಡಿದ ಗುಂಪಿನಿಂದ ಬೆದರಿಕೆ; ಇಬ್ಬರು ಮಕ್ಕಳೊಂದಿಗೆ ವಿಷ ಸೇವಿಸಿದ ಮುಸ್ಲಿಂ ಮಹಿಳೆ ಸಾವು, ಮಕ್ಕಳ ಸ್ಥಿತಿ ಗಂಭೀರ

ಬಿಹಾರದ ರೋಹ್ತಾಸ್ ಜಿಲ್ಲೆಯ ಮುಸ್ಲಿಂ ಮಹಿಳೆಯೊಬ್ಬರು ಮಂಗಳವಾರ ತನ್ನ ಇಬ್ಬರು ಅಪ್ರಾಪ್ತ ಮಕ್ಕಳೊಂದಿಗೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.  ಪತಿಯನ್ನು ಅಮಾನುಷವಾಗಿ ಹಲ್ಲೆ ನಡೆಸಿ ಹತ್ಯೆ ಮಾಡಿದ್ದ ಆರೋಪಿಗಳಿಂದ ಬೆದರಿಕೆಗಳನ್ನು ತಾಳಲಾರದೆ...

ಅತ್ಯಾಚಾರ ಆರೋಪ: ಅಶೋಕ್ ಖರತ್ ಅವರ ಪುತ್ರನನ್ನು ವಿಚಾರಣೆಗಾಗಿ ವಶಕ್ಕೆ ಪಡೆದ ಎಸ್ಐಟಿ; ಪತ್ನಿಗಾಗಿ ಹುಡುಕಾಟ 

ನಾಸಿಕ್: ಅತ್ಯಾಚಾರ ಆರೋಪಿ ಸ್ವಯಂ ಘೋಷಿತ ದೇವಮಾನವ ಅಶೋಕ್ ಖರತ್ ವಿರುದ್ಧ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ), ನಾಸಿಕ್ ನಗರದಲ್ಲಿ ಆತನ ಮಗನನ್ನು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದು, ಆತನ ಪತ್ನಿಗಾಗಿಯೂ...

ಇರಾಕ್‌ : ಬಗ್ದಾದ್‌ನಲ್ಲಿ ಯುಎಸ್‌ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅಪಹರಣ

ಇರಾಕ್‌ ರಾಜಧಾನಿ ಬಗ್ದಾದ್‌ ನಗರದ ಅಲ್-ಸಾದೂನ್ ಬೀದಿಯಲ್ಲಿರುವ ಬಗ್ದಾದ್ ಹೋಟೆಲ್ ಬಳಿ ಅಮೆರಿಕದ ಪ್ರಶಸ್ತಿ ವಿಜೇತ ಸ್ವತಂತ್ರ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅವರನ್ನು ಮಂಗಳವಾರ (ಮಾ.31, 2026) ಅಪಹರಿಸಲಾಗಿದೆ ಎಂದು ವರದಿಯಾಗಿದೆ. ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ,...

ವಾಣಿಜ್ಯ ಎಲ್‌ಪಿಜಿ ದರ 195.50 ರೂ. ಏರಿಕೆ : ಜನ ಸಾಮಾನ್ಯರಿಗೆ ಗಾಯದ ಮೇಲೆ ಬರೆ

ಪಶ್ಚಿಮ ಏಷ್ಯಾ ಸಂಘರ್ಷದಿಂದಾಗಿ ಜಾಗತಿಕ ತೈಲ ಬೆಲೆಗಳು ಏರುತ್ತಿರುವ ನಡುವೆ, ವಾಣಿಜ್ಯ ಎಲ್‌ಪಿಜಿ ದರವನ್ನು ಬುಧವಾರ (ಏ.1) 195.50 ರೂ. ಹೆಚ್ಚಿಸಲಾಗಿದೆ. ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳ ಪ್ರಕಾರ, ಬೆಲೆ ಏರಿಕೆ ಬಳಿಕ...