Homeಸಾಮಾಜಿಕಮಂಗಳೂರು ಯೂನಿವರ್ಸಿಟಿ ಮಂಗಳ ಗಂಗೋತ್ರಿಯಲ್ಲಿ ಗಂಡಾಗುಂಡಿ

ಮಂಗಳೂರು ಯೂನಿವರ್ಸಿಟಿ ಮಂಗಳ ಗಂಗೋತ್ರಿಯಲ್ಲಿ ಗಂಡಾಗುಂಡಿ

- Advertisement -
- Advertisement -

ಮಂಗಳೂರು ವಿಶ್ವವಿದ್ಯಾಲಯಕ್ಕೆ “ಮಂಗಳ ಗಂಗೋತ್ರಿ” ಎಂಬ ಚಂದದ ಹೆಸರಿಡಲಾಗಿದೆ ವಿಕಟ ವ್ಯಂಗ್ಯವೆಂದರೆ, ಈ ಯೂನಿವರ್ಸಿಟಿ ಶುದ್ಧ ಅವ್ಯವಹಾರ, ಅಕ್ರಮ, ಅನ್ಯಾಯ, ಅನಾಚಾರದ ಗಂಗೋತ್ರಿಯಂತಾಗಿ ಅದ್ಯಾವುದೋ ಕಾಲವಾಗಿ ಹೋಗಿದೆ! ಇಲ್ಲಿಗೆ ಉಪಕುಲಪತಿಗಳಾಗಿ ವಕ್ಕರಿಸುವ ಭೂಪರಿಲ್ಲ ಸಿಕ್ಕóಷ್ಟು ಸ್ವಾಹಾ ಮಾಡುವ ಹಿಡನ್ ಅಜೆಂಡಾ ಇಟ್ಟುಕೊಂಡೇ ಬರುತ್ತಿದ್ದಾರೆ. ಹೀಗಾಗಿ ಮಂಗಳೂರು ವಿಶÀ್ವವಿದ್ಯಾಲಯ ಒಂದಲ್ಲ ಒಂದು ಬುರ್ನಾಸ್ ಭಾನ್ಗಡಿಯ ಸುದ್ದಿಗೀಡಾಗುತ್ತಲೇ ಇದೆ. ಈ ಪರಿಯ ಕವರ್iಕಾಂಡ, ಕಾಮಕತೆಗಳೆಲ್ಲವೂ ಲೋಕ ಪ್ರಸಿದ್ದ! ಮಂಗಳ ಗಂಗೋತ್ರಿಯಲ್ಲಾಗುವುದು ಕೋಟಿಗಳ ಲೆಕ್ಕದ ಬಿಲ್ ವಿದ್ಯೆ!! ಕಾಮಗಾರಿ, ನೇಮಕಾತಿ, ಖರೀದಿಯಲ್ಲಿ ಘನಘೋರ ಭ್ರಷ್ಟಾಚಾರ ನಡೆಯುತ್ತಿರುವ ಮಂಗಳೂರು ಯೂನಿವರ್ಸಿಟಿಯಲ್ಲಿ ಉಪನ್ಯಾಸಕಿಯರ, ವಿದ್ಯಾರ್ಥಿನಿಯರ ಲೈಂಗಿಕ ಶೋಷಣೆ ನಿತ್ಯಕರ್ಮದಂತಾಗಿದೆ.
ಅಂಕಪಟ್ಟಿ ಹಗರಣ 2007 ರಲ್ಲಿ ನಡೆದಾಗ ಅಲ್ಲೋಲಕಲ್ಲೋಲವೇ ಮಂಗಳ ಗಂಗೋತ್ರಿಯಲ್ಲಾಗಿತ್ತು! ಅದನ್ನು ಮರೆಯದ ಚರ್ಚೆಯ ಸಂಗತಿಯಾಗಿ ಇದೆಯೇ ವಿನಾಃ ನಿಷ್ಠುರ ತನಿಖೆ ಎಂಬುದಾಗಲೇ ಇಲ್ಲ. ಅಂದು ಎಬಿವಿಪಿಯ ರಣಧೀರ ಕಂಠೀರವನಾಗಿದ್ದ ಇಂದಿನ ಬೆಳ್ತಂಗಡಿಯ ಚೆಡ್ಡಿ ಶಾಸಕ ಹರೀಶ್‍ರೈ ಆ ಹಗರಣದ ಫಲಾನುಭವಿಗಳಲ್ಲಿ ಒಬ್ಬ!! ಮಂಗಳೂರು ವಿವಿಯಲ್ಲಿ ಆಕಾಡೆಮಿಕ್ ವಾತಾವರಣದ ಬದಲು ಸ್ವಚ್ಛಂದ ಮೋಜಿನ ಮೂಡ್ ನೆಲೆನಿಂತಿದ್ದೆ. ಸಂಘ ಪರಿವಾರದ ಹಾವಳಿಯಂತೂ ಹೇಳತೀರದು. ಸಿದ್ದು ಕಾಲಾವಧಿಯಲ್ಲಿ ಉಪಕುಲಪತಿಯಾಗಿ ನೇಮಕವಾಗಿದ್ದ ಭೈರಪ್ಪ ವಾರ್ಸಿಟಿಯ ಶೆಕ್ಷಣಿಕ ಸುಧಾರಣೆಗೆ ತಲೆಕೆಡಿಸಿಕೊಳ್ಳಲೇ ಇಲ್ಲ. ಆತ ಎಲ್ಲೆಲ್ಲಿ ಎಷ್ಟೆಷ್ಟು ಗುಳುಂ ಮಾಡಲು ಸಾಧ್ಯವೆಂದು ತಲಾಸ್ ನಡೆಸಿ ಹೊಟ್ಟೆತುಂಬ ಉಂಡು ಎದ್ದು ಹೋಗಿದ್ದಾರೆ. ಈ ಭೈರಪ್ಪ ಮಂಗಳ ಗಂಗೋತ್ರಿಯಿಂದ ತೊಲಗಿ ಆದಿಚುಂಚನಗಿರಿ ಶೆಕ್ಷಣಿಕ ಸಾಮ್ರಾಜ್ಯದ ಪ್ರೋಚಾನ್ಸಲರ್ ಆಗಿ ಅಮರಿಕೊಂಡು ತಿಂಗಳೆರಡು ಗತಿಸಿದರೂ ಆತನ ಗೋಲ್‍ಮಾಲ್ ಲೀಲೆಗಳ ಆವಾಜ್ ಮಾತ್ರ ಇವತ್ತಿಗೂ ನಿಂತಿಲ್ಲ…………
ಯಾರ್ಯಾರ ದೌರ್ಬಲ್ಯ ಎಂತೆಂಥದೆಂದು ಕರಾರುವಾಕ್ಕಾಗಿ ಕಂಡುಹಿಡಿದು ಆ ಚೋರ ಚಂಡಾಲರನ್ನು ತನ್ನ ಮನೋಗಡಕ್ಕೆ ಬಳಸಿಕೊಳುವ ಕಲೆ ಕರಗತ ಮಾಡಿಕೊಂಡಿದ್ದ ಭೈರಪ್ಪ ಸಾಹೇಬರು ತನಗೆ ವಿಸಿಯಾಗಿ ಪ್ರಾತಿಷ್ಠಾಪಿಸಿದ್ದ ಕಾಂಗ್ರೆಸಿಗರಷ್ಟೇ ಆದÀರಿಂದ ಬಿಜೆಪಿಗರನ್ನು ನೋಡಿಕೊಳ್ಳುತ್ತಿದ್ದರು ಕೇಸರಿ ಕಿತಾಪತಿಗಾರರ ಆಡ್ಡೆಯಂತಾಗಿರುವ ಮಂಗಳೂರಲ್ಲಿ ಬಿಜೆಪಿ ಪರಿವಾರಿಗರ ಯಶಸ್ವಿಯಾಗಿ ನಿಭಾಯಿಸಿದ್ದ ಭೈರಪ್ಪ ವಿವಿಯನ್ನು ಮಾವನ ಮನೆಯಿಂದ ಬಂದ ಬಳುವಳಿಯಂತೆ ದರ್ಬಾರು ನಡೆಸುತ್ತಿದ್ದರು! ತನ್ನ ರಣ ಹಸಿವು ಅರ್ಥ ಮಾಡಿಕೊಂಡವರ ವಿವಿಯ ಆಯಕಟ್ಟಿನ ಜಾಗದಲ್ಲಿ ನಿಭಾಯಿಸಿದ್ದ ಈ ವಿಸಿ ತನ್ನ ಒಣ ಸೈದ್ದಾಂತಿಕತೆ, ಸ್ವಪ್ರತಿಷ್ಠೆ ಮತ್ತು ಹಣದ ಹಪಾಹಪಿಗೆ ತಕ್ಕಂತೆ ಆಡಳಿತ ನಡೆಸಿಕೊಂಡಿದ್ದರು!!
ಪ್ರತಿ ವರ್ಷ ಪ್ರಶ್ನೆ ಪತ್ರಿಕೆ ಸೋರಿಕೆಯಾಗುವುದು ಮಂಗಳೂರು ವಿವಿಯ ಸಂಪ್ರದಾಯ ಎಂಬಂತಾಗಿದೆ! ಭೈರಪ್ಪನ ಪರ್ವದಲ್ಲಿ ಪ್ರಶ್ನೆ ಪತ್ರಿಕೆ ಬಹಿರಂಗವಾದಾಗ ದೊಡ್ಡ ಗದ್ದಲವೂ ಆಗಿತ್ತು. ಪ್ರಶ್ನೆಪತ್ರಿಕೆ ಸೋರಿಕೆ ಮಾಡುವ ವ್ಯವಸ್ಥಿತ ಜಾಲದಲ್ಲಿ ವೀಸಿ ಸಾಹೇಬರೂ ಇದ್ದಾರೆಂಬ ಪುಕಾರುಗಳು ಎದ್ದಿದ್ದವು. ತುಂಬ ನಾಜೂಕಾಗಿ ಪ್ರಕರಣ ನಿಭಾಯಿಸಿದ ವಿಸಿ ಭೈರಪ್ಪ ಎಲ್ಲಾ ಮುಚ್ಚಿಹಾಕಿ ಬಚಾವಾದರು. ಅಂಕಪಟ್ಟಿ ಅಕ್ರಮದಲ್ಲಂತೂ ಬಹುಕೋಟಿ ವ್ಯವಹಾರ ರಾಜಾರೋಷವಾಗೇ ನಡೆದುಹೋಗಿದೆ. ಇದರಲ್ಲಿ ವಿಸಿ ಸಾಹೇಬರಿಗೆ ದೊಡ್ಡದೊಂದು ಪಾಲು ದಕ್ಕಿದೆಯೆಂದು ಯೂನಿವರ್ಸಿಟಿಯ ಕಂಬ-ಕಂಬವೂ ಪಿಸುಗುಡುತ್ತದೆ. ಕೆಎಸ್‍ಓಯು ಯುಜಿಸಿ ಮಾನ್ಯತೆ ಕಳೆದುಕೊಂಡಿತು. ಈ ಕೆಎಸ್‍ಓಯು ಮತ್ತು ದೂರಶಿಕ್ಷಣ ನಿರ್ದೇಶನಾಲಯವನ್ನು ದುಡ್ಡು ಮಾಡುವ ಅಡ್ಡೆಯಂತಾಗಿಸಲಾಯಿತು. ಕಾಸು ಕೊಟ್ಟವರಿಗೆಲ್ಲಾ ಪದವಿ ರಾತ್ರಿ ಬೆಳಗಾಗುವುದರಲ್ಲಿ ಮಂಗಳಗಂಗೋತ್ರಿಯಲ್ಲಿ ಸಲೀಸಾಗಿ ಸಿಗುತ್ತಿದೆ.
ಮಂಗಳ ಗಂಗೋತ್ರಿಯ ಅಷ್ಟೂ ಅವ್ಯವಹಾರ ತಾಯಿಬೇರು ಖರೀದಿ ಕಮಿಟಿ(ಪರ್ಚೆಸ್ ಕಮಿಟಿ) ವೀಸಿ ಕಣ್ಗಾವಲಿನಲ್ಲಿರುವ ಈ ಕಮಿಟಿಯಲ್ಲಿ ಡೀನ್‍ಗಳೆಲ್ಲ ಇರುತ್ತಾರೆ. ಇಲ್ಲಾಗುವ ಖೋಟಾ ಖರೀದಿ, ಕಮಿಷನ್, ಕಿಕ್‍ಬ್ಯಾಕ್‍ಗಳು ಲಕ್ಷದ ಲೆಕ್ಕದಲ್ಲೇ ಇರುತ್ತದೆ! ಖರೀದಿಗಳು ಕೊಟ್ಯಾಂತರ ರೂಪಾಯಿಗಳಾದರೆ ಲಫಡಾ ಲಕ್ಷಾಂತರ ರೂಪಾಯಿಗಳದು. ಪೀಠೋಪಕರಣ, ಎಲೆಕ್ಟ್ರಿಕಲ್ ಸಾಮಾನು, ಕಂಪ್ಯೂಟರ್ ಮುಂತಾದ ವಸ್ತು ಕೊಳ್ಳುವಾಗ ವಿಪರೀತ ಬೆಲೆ ನಮೂದಿಸಿ ಪರ್ಸೆಂಟೇಜ್ ಹೊಡೆಯುವುದು ಸದ್ರಿ ವಾರ್ಸಿಟಿ ವಾಡಿಕೆ. ಈ ಕಮಾಯಿ ಭೈರಪ್ಪನ ಟೀಮು ಹಗಲೂ-ಇರುಳೂ ನಡೆಸಿ ದುಂಡಗಾಗಿದೆ. ಈ ಪರ್ಚೆಸ್ ಪರಾಕ್ರಮದ ಸರಿಯಾದ ತನಿಖೆ ನಡೆದರೆ ಭೈರಪ್ಪ ಅಂಡ್‍ಕೋದ ಲೂಟಿ ಲೆಕ್ಕಸಿಗುತ್ತದೆ. ಆ ತಾಕತ್ತು ಉನ್ನತ ಶಿಕ್ಷಣ ಸಚಿವ ಜಿ.ಟಿ. ದೇವೇಗೌಡರಿಗಿದೆಯಾ? ಸ್ವಜಾತಿ ಬಂಧುವಾದ ಭೈರಪ್ಪರ ಮುಟ್ಟುವ ಮನಸ್ಸು ಮಂತ್ರಿ ದೇವೇಗೌಡರಿಗಿಲ್ಲ ಎಂದು ವಾರ್ಸಿಟಿಯ ಮಂದಿ ಮುಸಿಮುಸಿ ನಗುತ್ತಾರೆ.
ವಿಸಿ ಭೈರಪ್ಪರ ಡಬ್ಬಲ್ ವೆಂಚರ್ ಎಂದೇ ಕುಖ್ಯಾತವಾಗಿದೆ ವಿವಿಯಲ್ಲಿ ಬೇಕಾಬಿಟ್ಟಿಯಾಗಿ ಅಳವಡಿಸಿರುವ ಸಿಸಿ ಕ್ಯಾಮರಾ ಮತ್ತು ಸೋಲಾರ್ ಹಗರಣಗಳು!! ಎರಡೂ ಕೋಟಿ ಕರಾಮತ್ತೇ. ಸೋಲಾರ್ ಗುತ್ತಿಗೆ ಕಡಿಮೆ ಮೊತ್ತದ ಬಿಡ್‍ದಾರನ ಬದಲಿಗೆ ದೊಡ್ಡ ಬಿಡ್‍ದಾರನಿಗೆ ಭೈರಪ್ಪರ ಗ್ಯಾಂಗು ದಯಪಾಲಿಸಿದೆ. ಇದರಲ್ಲಿ ಲಕ್ಷಾಂತರ ಕಮಿಷನ್ ಪಡೆದಿರುವ ವೀಸಿ ಬಳಗ ಬರೊಬ್ಬರಿ ನಾಲ್ಕು ಕೋಟಿ ರೂಪಾಯಿಗಳ ಸಿಸಿ ಕ್ಯಾಮರಾ ಅಳವಡಿಕೆಯಲ್ಲಿ ಬುದ್ಧಿಪೂರ್ವಕವಾಗೇ ಟೆಂಡರ್ ನಿಯಮ ಧಿಕ್ಕರಿಸಿದೆ. ಯಾವುದೇ ಟೆಂಡರ್ ಇಲ್ಲದೆ ಮುಗುಮ್ಮಾಗಿ ಆಗಿ ನಡೆದಿರುವ ಈ ಸಿಸಿಕ್ಯಾಮರಾ ಅಳವಡಿಕೆ ಕಾಮಗಾರಿ ವೀಸಿ ಭೈರಪ್ಪರ ದೆಸೆಯನ್ನೇ ಬದಲಿಸಿದೆ!
ಗುತ್ತಿಗೆ ಆಧಾರದಲ್ಲಿ ನೇಮಕಾತಿಯಾಗುವ ದುರ್ಬಲರ ಸಂಬಳಕ್ಕೂ ನಾಲಿಗೆ ಚಾಚುವ ಭೈರಪ್ಪರ ಬಣದ ಚಾಳಿ ಮಂಗಳೂರು ವಿವಿ ವ್ಯಾಪ್ತಿಯ ಅಷ್ಟೂ ಶಿಕ್ಷಣ ಸಂಸ್ಥೆಗಳಲ್ಲಿ ಸುಪ್ರಸಿದ್ಧ!! ಸೆಕ್ಯೂರಿಟಿ, ಸಿಫಾಯಿ, ಅಟೆಂಡರ್, ಗುಮಾಸ್ತರಂಥ ಸಣ್ಣ-ಪುಟ್ಟ ಕರ್ಮಚಾರಿಗಳನ್ನು ವಿವಿಯಲ್ಲಿ ಗುತ್ತಿಗೆಯಲ್ಲಿ ತೆಗೆದುಕೊಳ್ಳಲಾಗಿದೆ. ಇವರಿಗೆಲ್ಲಾ ಅಬ್ಬಬ್ಬಾ ಎಂದರೆ ಏಳೆಂಟು ಸಾವಿರ ರೂಪಾಯಿ ಪಗಾರು ಕೊಡಲಾಗುತ್ತಿದೆ. ಆದರೆ ಇವರ ಹೆಸರಲ್ಲಿ ಹದಿನೈದು ಸಾವಿರದಿಂದ ಇಪ್ಪತ್ತೈದು ಸಾವಿರ ರೂಪಾಯಿಗಳ ತನಕ ಖರ್ಚು ಹಾಕಲಾಗಿದೆಯಂತೆ. ವ್ಯತ್ಯಾಸದ ಕಾಸು ಎಲ್ಲಿ ಹೋಗಿದೆ ಎಂಬುದು ಭೈರಪ್ಪರಿಗೆ ಮಾತ್ರ ಗೊತ್ತಿದೆ! ಪೆವಿಲಿಯನ್ ಮತ್ತು ಕಟ್ಟಡಗಳ ನಿರ್ಮಾಣದಲ್ಲಿ ಕೋಟಿ-ಕೋಟಿ ನಾಯಿ-ನರಿ ಪಾಲಾಗಿದೆ ಎಂಬ ಆರೋಪಗಳಿವೆ. ಒಟ್ಟಿನಲ್ಲಿ ವಿವಿ ದುಡ್ಡಲ್ಲಿ ವಿಸಿಯಾಗಿದ್ದ ಭೈರಪ್ಪ ಭರ್ಜರಿ ಯಲ್ಲಮ್ಮನ ಜಾತ್ರೆ ಮಾಡಿಹೋಗಿದ್ದಾರೆ.
ಮಂಗಳಗಂಗೋತ್ರಿಯ ಮತ್ತೊಂದು ಮಗ್ಗುಲಲ್ಲಿ ಅವ್ಯವಹಾರ-ಅಕ್ರಮಗಳಷ್ಟೇ ಬಿರುಸಾಗಿ ಕಾಮಕಾಂಡವೂ ನಡೆದಿದೆ. ಉಪನ್ಯಾಸಕರ ವೃತ್ತಿಗೆ ನಾಲಾಯಕ್ ಆಗಿರುವವರೆಲ್ಲ ಅಮಾಯಕ ವಿದ್ಯಾರ್ಥಿನಿಯರ ನಡುವೆ ಅನಾಹುತಕಾರಿಗಳಂತೆ ಅಂಡಲೆಯುತ್ತಿದ್ದಾರೆ. ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗದ ಸಹಾಯಕ ಅಧ್ಯಾಪಕ ಡಾ|| ಉಮೇಶ್‍ನಾಯ್ಕ್ ಲ್ಯಾಬ್ ಮತ್ತು ಲೈಬ್ರರಿಯಲ್ಲಿ ಹುಡುಗಿಯರ ಜತೆ ಅಸಹ್ಯವಾಗಿ ವರ್ತಿಸುತ್ತಾನೆಂಬ ಗುಲ್ಲೆದ್ದಿದೆ. ಮರೈನ್ ಬಾಯಲಾಜಿ ವಿದ್ಯಾರ್ಥಿಯೊಬ್ಬ ವಿದ್ಯಾರ್ಥಿನಿಯರ ಶೌಚಾಲಯದಲ್ಲಿ ಮೊಬೈಲ್ ಕ್ಯಾಮರಾ ಇಟ್ಟು ಸಿಕ್ಕಿಬಿದ್ದಿದ್ದ. ಡಾ|| ಸುಜಾತ ಎಂಬ ಉಪನ್ಯಾಸಕಿ ತನಗೆ ಸಹೋದ್ಯೋಗಿ ಪ್ರೊಫೆಸರ್ ಡಾ|| ರಶೀದ್ ಲೈಂಗಿಕ ಕಿರುಕುಳ ನೀಡುತ್ತಿದ್ದನೆಂದು ಡೆತ್‍ನೋಟ್ ಬರೆದಿಟ್ಟು ಸಾವಿಗೆ ಶರಣಾಗಿದ್ದಳು. ಬರೋಬ್ಬರಿ ಒಂಭತ್ತು ವರ್ಷ ಆಕೆಗೆ ರಶೀದ್ ಪೀಡಿಸುತ್ತಿದ್ದನಂತೆ. ಈ ಕಾಮಕತೆಗಳು ಮಂಗಳಗಂಗೋತ್ರಿ ಹೆಣ್ಣು ಕು¯ಕ್ಕೆ ಸುರಕ್ಷಿತವಲ್ಲ ಎಂಬ ಸಂದೇಶ ಕಳಿಸಿದೆ. ಅನಾಚಾರ-ಅವ್ಯವಹಾರ-ಅಕಾಡಮಿಕ್ ಪರಿಸರಕ್ಕೆ ಗಂಡಾಂತರಿಕಾರಿಯಾದ ಕುಕೃತ್ಯಗಳು ಒಂದರ ಹಿಂದೊಂದರಂತೆ ನಡೆದರೂ ಯಾವುದೂ ಸರಿಯಾದ ತನಿಖೆಗೆ ಒಳಪಡದೆ ಘಟಿಂಗರು ಪಾರಮ್ಯ ಮೆರೆಯುತ್ತಿದ್ದಾರೆ.
ಮಂಗಳ ಗಂಗೋತ್ರಿಯನ್ನು ಹಳಿಗೆ ತರುವ ಕೆಲಸ ಉನ್ನತ ಶಿಕ್ಷಣ ಮಂತ್ರಿ ಜಿ.ಟಿ. ದೇವೇಗೌಡರ ಕೈಲಿ ಸಾಧ್ಯವಾ? ಆ ಖಾತೆ ನಿಭಾಯಿಸುವ ಧೈರ್ಯ ತನಗಿಲ್ಲವೆಂಬ ಕೀಳಮೆಯ ದೇವೇಗೌಡರಿದ್ದಾರೆ. ಹಾಗಾಗಿ ವಿವಿ ಕುಲಾಧಿಪತಿಯಾಗಿರುವ ರಾಜ್ಯಪಾಲ ವಾಲಾ ಮೂಗು ತೂರಿಸುವ ಮೋದಲೇ ಸಿಎಂ ಕುಮ್ಮಿ ಎಚ್ಚೆತ್ತುಕೊಳ್ಳುವರಾ?!

– ವರದಿಗಾರ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...