Homeಅಂಕಣಗಳುನೀರ ನಡೆ | ಡಾ : ವಿನಯಾ ಒಕ್ಕುಂದಹಿಂಸೆಯೆಂಬುದು ಹಾದಿ ಹಾಡು

ಹಿಂಸೆಯೆಂಬುದು ಹಾದಿ ಹಾಡು

- Advertisement -
- Advertisement -

ಇತ್ತೀಚಿನ ದಿನಮಾನಗಳು ಮನುಷ್ಯ ಸಮಾಜದಲ್ಲಿ ಹಬ್ಬುತ್ತಿರುವ ಹಿಂಸಾರತಿಗೆ ಪುರಾವೆಗಳಾಗುತ್ತಿವೆ ಆವತ್ತು, ದಾಂಡೇಲಿಯ ನಟ್ಟನಡುರಸ್ತೆ ಮನುಷ್ಯ ರಕ್ತವನ್ನು ಹೊಯ್ದುಕೊಂಡು ಜಿಗುಟಾದ, ಕಮಟು ವಾಸನೆಯ ಬೆಳಗು- ಕಾಲೇಜಿಗೆ ಬಂದ ಮಕ್ಕಳ ಮುಖವನ್ನು ತಡಕಾಡಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತ ಚಲಾಯಿಸುವ ನಿರ್ಣಯಾತ್ಮಕ ಅಧಿಕಾರವನ್ನು ಪಡೆದ ‘ದೊಡ್ಡ ಮಕ್ಕಳಿವರು’. ಇವರು ಸಮಾಜದ ನಡೆ-ನೀತಿಗಳನ್ನು ಸ್ಪಷ್ಟವಾಗಿ ಪ್ರತಿಫಲಿಸುವ ಕನ್ನಡಿಗಳು. ಹಾಗಾಗಿ ಇವರನ್ನು ‘ನನ್ನ ವಿಶ್ವವಿದ್ಯಾಲಯ’ಗಳು ಎಂದು ತಿಳಿಯುವುದು. ಈ ಮಕ್ಕಳಲ್ಲಿ ವಿಶೇಷವಾಗಿ ಹೆಣ್ಣುಮಕ್ಕಳಲ್ಲಿ ಒಂದಿಷ್ಟು ಭಯ, ಅಚ್ಚರಿಗಳಿದ್ದ ಹಾಗಿತ್ತು. ಆದರೆ ಬಹುಪಾಲು ಹುಡುಗರು ಅದೆಂಥದೋ ಅವ್ಯಕ್ತ ಥ್ರಿಲ್‍ನಲ್ಲಿದ್ದರು. ಅದು ಖಂಡಿತ, ಮಜ ಉಡಾಯಿಸುವ ಸಂತಸವನ್ನು ವ್ಯಕ್ತಿಸುವ ಭಾವವಾಗಿರಲಿಲ್ಲ. ಆದರದು ಜೀವಕಲಕಿದ ವಿಷಾದವೂ ಆಗಿರಲಿಲ್ಲ. ಕಾಗೆಯೊಂದು ಸತ್ತುಬಿದ್ದರೆ, ಜೊತೆ ಕಾಗೆಗಳು ಕಾ ಕಾ ಎಂದು ವಾತಾವರಣವನ್ನು ಕಲಕಿಬಿಡುತ್ತವಲ್ಲ… ಅಂತಹ ಯಾವ ಗದ್ದಲವೂ ಅವರ ಮನಸ್ಸಿನಾಳದಲ್ಲಿರಲಿಲ್ಲ. ಆ ನಂತರದ ಪಿಸುಗುಡುವ ಮಾತುಗಳಲ್ಲಿ, ಕೊಲೆಯ ಕಾರಣವನ್ನು ತಿಳಿಯುವ, ಹೇಳುವ ಅವಸರವಿತ್ತು. ಅದು ಕೊಲೆಯ ಸಮರ್ಥನೆಯಾಗಿ ಅನುವಾದಗೊಳ್ಳುತ್ತಿತ್ತು. ವ್ಯಕ್ತಿಯೊಬ್ಬನ ಆರ್ಥಿಕ-ಸಾಮಾಜಿಕ-ಕಾನೂನಾತ್ಮಕ ದುಂದಾವರ್ತನೆಗಳಿದ್ದರೆ ಅದಕ್ಕೆ ಕೊಲೆಯನ್ನು ಪರಿಹಾರೋಪಾಯ ಎಂದು ರೂಪಿಸಬಹುದೇ ಎಂಬ ಪ್ರಶ್ನೆಯನ್ನು ಕೇಳಿಕೊಳ್ಳಲು ಸಿದ್ಧರಿರಲಿಲ್ಲ. ಅನ್ಯಾಯವೊಂದು ನಡೆದಿದೆ ಎಂದಾದರೆ, ಅದನ್ನು ಎದುರಿಸುವ ಸರಿದಾರಿಗಳಿಲ್ಲವೆ? ಪ್ರಜಾಪ್ರಭುತ್ವ ವ್ಯವಸ್ಥೆಯು ಕೊಡಮಾಡಿದ ಸೌಲಭ್ಯ ಹಾಗೂ ಹಕ್ಕುಬಾಧ್ಯತೆಗಳ ಫಲಾನುಭವಿಗಳಾದ ವಿದ್ಯಾರ್ಥಿಗಳಿಗೆ, ಕಾನೂನನ್ನು ಕೈಗೆತ್ತಿಕೊಳ್ಳುವುದು ಸಾಮಾಜಿಕ ಅನ್ಯಾಯ ಅಲ್ಲವೇ, ಎಂಬ ಪ್ರಶ್ನೆ ಕಾಡುತ್ತಿರಲಿಲ್ಲ. ಇನ್ನೂ ಅವರ ಮನಸ್ಸನ್ನು ಎಬ್ಬಿದರೆ ಅಲ್ಲಿ, ಕೊಲೆಗಾರನ ಬಗ್ಗೆ ಅನುಕಂಪ ಮತ್ತು ಮೆಚ್ಚುಗೆಯ ಬೀಜಗಳಿದ್ದಂತಿತ್ತು. ಹೌದು, ಅನ್ಯಾಯವನ್ನು ಎದುರಿಸಲು ಸ್ವತಃ ಕಾನೂನನ್ನು ತರಾಟೆಗೆ ತೆಗೆದುಕೊಳ್ಳುವ ‘ಹಿರೋಯಿಸಂ’ನ ಕಲ್ಪಿತವನ್ನು ಸಿನಿಮಾಗಳಂತಹ ಮನರಂಜನಾ ಉದ್ಯಮಗಳು ಧಾರಾಳವಾಗಿ ಉಣಬಡಿಸುತ್ತವೆ. ಅದನ್ನು ಉಂಡುಟ್ಟು ಬೆಳೆದವರು ಪ್ರತಿಯೊಂದು ಹಿಂಸೆಯೂ ಸ್ವಸಮರ್ಥನೆಯ ಪೋಷಾಕು ತೊಟ್ಟಿರುತ್ತದೆನ್ನುವುದನ್ನು ಗ್ರಹಿಸುವುದು ಕಷ್ಟ. ತೀರಾ ಇತ್ತೀಚೆಗೆ ಬಯಲುಸೀಮೆಯ ಸಣ್ಣ ಪಟ್ಟಣವೊಂದರಲ್ಲಿ ವ್ಯಕ್ತಿಯೊಬ್ಬ ಹೆಂಡತಿಯನ್ನು ಶಂಕಿಸಿ ಕೊಲೆಗೈದು ನೆತ್ತರು ಬಸಿಯುತ್ತಿರುವ ರುಂಡವನ್ನು ಕೈಯಲ್ಲಿ ಹಿಡಿದು ಪೊಲೀಸ್ ಸ್ಟೇಷನ್ನಿಗೆ ಶರಣಾದ ಸುದ್ದಿ ಪ್ರಕಟವಾಗಿತ್ತು. ಕೊಲೆಯಾದ ಮತ್ತು ಕೊಲೆಗೈದವರ ನ್ಯಾಯ-ಅನ್ಯಾಯ, ಶೀಲ-ಅಶ್ಲೀಲಗಳ ನಿರೂಪಗಳು ಬೇರೆಬೇರೆಯೇ ಇದ್ದೀತು. ಆದರೆ ಆತನ ಧೈರ್ಯಕ್ಕೆ ಯುವಜನಾಂಗ ಬೇಸ್ತುಬಿದ್ದ ಹಾಗಿತ್ತು. ನ್ಯಾಯಕ್ಕಿರುವ ಬಹುಸಾಧ್ಯತೆಗಳ ಬೇರನ್ನು ಹೀಗೆ ಕತ್ತರಿಸುತ್ತಿದ್ದೇವೆ.
ದೇಶವೀಗ ಹಿಂಸಾರತಿಯಲ್ಲಿ ನಿರತವಾಗಿದೆ. ಜಾತಿಉಲ್ಲಂಘನೆಯನ್ನು ಒಪ್ಪಿಕೊಳ್ಳದ ಮೂಲಭೂತವಾದ, ಮರ್ಯಾದಾ ಹತ್ಯೆಯ ರೂಪ ಪಡೆದಿದೆ. ಕೋಮುವಾದ ಎಂಬ ಜನಾಂಗೀಯ ಭೇದವು ಆಹಾರವನ್ನು, ಆಚರಣೆಯನ್ನು, ಸೌಹಾರ್ದತೆಯನ್ನು ನೆಪ ಮಾಡಿಕೊಂಡು ನಿರ್ಲಜ್ಜವಾದ ಹತ್ಯಾಕಾಂಡಗಳನ್ನು ನಡೆಸಿದೆ. ಈಗ ಅದರ ಮುಂದುವರಿಕೆಯು ಶಂಕಿತರ ಮೇಲಿನ ಗುಂಪುದಾಳಿಯ ವಿರೂಪವನ್ನು ಪಡೆದಿದೆ. ಸಾಮಾಜಿಕ ಜಾಲತಾಣಗಳಲ್ಲಿ ದೇಶದ ಸುಶಿಕ್ಷಿತ ನಾಗರಿಕರೆನ್ನಿಸಿಕೊಂಡವರು ಉದ್ದೇಶಪೂರ್ವಕವಾಗಿಯೇ ಸುಳ್ಳು ಸುದ್ದಿಗಳನ್ನು ಹರಡುತ್ತಾರೆ.ಇಂತಹ ಸುದ್ದಿಗಳಿಗೆ, ಅವುಗಳ ಕ್ರಿಯಾತ್ಮಕ ಚಟುವಟಿಕೆಗಳಿಗೆ ಜನರು ಕ್ಷಣಾರ್ಧದಲ್ಲಿ ಸೇರಿಬಿಡುತ್ತಾರೆ. ಶಂಕೆಯೊಂದೇ ಕಾರಣವಾಗಿ, ಬಡಪಾಯಿ ಜೀವಗಳು ಮನುಷ್ಯಕ್ರೌರ್ಯದ ದಾಖಲೆಗಳಾಗಿ ನರಳಿ ಸಾಯುತ್ತವೆ. ದೇಶದಾದ್ಯಂತ ಮರಮರಳಿ ಇಂತಹ ಘಟನೆಗಳು ನಡೆದವು. ಮೇಲ್ನೋಟಕ್ಕೆ ಇವು ಜನರ ಸಹಜ ಆಕ್ರೋಶದ ಆಕಸ್ಮಿಕಗಳು ಎಂಬಂತೆ ಕಾಣುತ್ತವೆ. ಆದರೆ ವಸ್ತುಸ್ಥಿತಿ ಇಷ್ಟು ಸರಳವಾಗಿಲ್ಲ. ಅಕಾರಣವಾಗಿ ಮರಣ ಹೊಂದಿದ ಜೀವಗಳ ಹಿನ್ನೆಲೆಯಲ್ಲಿ ನೋಡಿದಾಗ-ಹಲ್ಲೆಗೀಡಾದ ಬಹುತೇಕರು ದಲಿತರು, ಮುಸ್ಲಿಮರು, ಮಹಿಳೆಯರು ಮತ್ತು ಬಡವರು ಎಂಬುದು ಸಾಮಾಜಿಕ ಆಕ್ರೋಶವು ಯಾರತ್ತ ಮತ್ತು ಯಾಕೆ ಹೊರಳಿದೆಯೆಂದು ಖಚಿತಪಡಿಸುತ್ತಿದೆ. ಇವರಲ್ಲದೆ, ಸಮಾಜದ ಹರಕು ಹೊಲಿಯಲು ತಮ್ಮ ಜೀವವನ್ನು ದಾರವಾಗಿ ಪೋಣಿಸುತ್ತಿರುವವರ ಮೇಲಿನ ಹಲ್ಲೆ-ಹತ್ಯೆಗಳು ಈ ಹಿಂಸೋನ್ಮಾದದ ಮತ್ತೊಂದು ಮಾದರಿಗಳು. ಸ್ವಾಮಿ ಅಗ್ನಿವೇಶ್ ಮೇಲೆ ನಡೆದ ಹಲ್ಲೆ ಇಂತಹ ಇತ್ತೀಚಿನ ನಿದರ್ಶನ. ಇಂತಹ ದಾಳಿಗಳನ್ನು ತಡೆಯಬಹುದಾದ, ತಪ್ಪಿತಸ್ಥರನ್ನು ಶಿಕ್ಷಿಸಬೇಕಾದ ಕಾನೂನು ಪಾಲಕರು ತೋರುತ್ತಿರುವ ಅಸಡ್ಡೆ ಕೂಡ ಗಾಬರಿ ಬೀಳಿಸುವಂತಿದೆ. ತಮ್ಮ ಮೇಲೆ ಹಲ್ಲೆ ನಡೆದ 18 ದಿನಗಳ ನಂತರವೂ ಹಲ್ಲೆಗಾರರು ಯಾರು ಎಂಬ ಸರಿಯಾದ ಅಂದಾಜು ಇದ್ದರೂ ಅವರನ್ನು ಬಂಧಿಸಲಾಗಿಲ್ಲ ಎಂದು ಪ್ರತಿಭಟಿಸಿ ಸ್ವಾಮಿ ಅಗ್ನಿವೇಶ ಸುಪ್ರಿಂಕೋರ್ಟಿನ ಮೊರೆ ಹೋಗಲಿದ್ದಾರೆ. ಕಾನೂನು ಪಾಲಕರ ಕರ್ತವ್ಯಲೋಪವು ಬರಿಯ ಅಸಡ್ಡೆಯಿಂದ ನಡೆಯುವುದಿಲ್ಲ. ಅದರ ಬೆನ್ನಿಗೆ ಕಾನೂನು ರೂಪಿಸಿದ ಶಾಸಕಾಂಗದ ರಾಜಕಾರಣದ ದಾಳಗಳಿರುತ್ತವೆ. ನಾಗರಿಕರು ಕಾನೂನು ಕೈಗೆತ್ತಿಕೊಳ್ಳುವುದನ್ನು ಒಪ್ಪಲಾಗದು ಎಂದು ಸುಪ್ರೀಂಕೋರ್ಟು ಜುಲೈ 17 ರಂದು ಎಚ್ಚರಿಸಿದೆ. ಆದರೆ…
ಅಧಿಕಾರ ರಾಜಕಾರಣವೇ, ಹಿಂಸೋನ್ಮಾದದ ನೇರ ಹೊಣೆಯಾಗಿದೆ. ಸಾಮಾಜಿಕ ಸಹಜೀವನವನ್ನು ಛಿದ್ರಗೊಳಿಸುವುದು ರಾಜಕಾರಣಿಗಳಿಂದ ಮುಲಾಜಿಲ್ಲದಂತೆ ನಡೆಯುತ್ತಿದೆ. ನಮ್ಮದೇ ರಾಜ್ಯದ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ ಅವರು- ತಾನೇನಾದರೂ ಗೃಹಮಂತ್ರಿಯಾದರೆ, ಬುದ್ಧಿಜೀವಿಗಳನ್ನು ನಿಲ್ಲಿಸಿ ಗುಂಡು ಹಾಕಿಸುತ್ತಿದ್ದೆ- ಎಂದು ಭವಿಷ್ಯತ್ತಿನ ಹಿಟ್ಲರ್‍ತನವನ್ನು ಹೇಳಿಕೊಂಡರು. ತಮ್ಮ ಕ್ಷೇತ್ರದ ಕಾರ್ಪೊರೇಟರುಗಳಿಗೆ, ನೀವು ಟೊಪ್ಪಿಗೆಯವರು, ಬುರ್ಖಾದವರ ಪರವಾಗಿ ಕೆಲಸ ಮಾಡಬೇಡಿ, ಹಿಂದೂಗಳ ಪರವಾಗಿ ಕೆಲಸ ಮಾಡಿರಿ- ಎಂದು ಫರ್ಮಾನು ಹೊರಡಿಸಿದರು. ಶಾಸಕರು, ಸಂಸದರು ಹೀಗೆ ತಮ್ಮನ್ನು ಒಂದುಜಾತಿ-ಧರ್ಮದ ಹುರಿಯಾಳುಗಳು ಎನ್ನುವಂತೆ ಬಿಂಬಿಸಿಕೊಳ್ಳಲು ಅವರಿಗೆ ಯಾವುದೇ ಮುಜುಗರವಿಲ್ಲದ ವಾತಾವರಣ, ತಡೆಯುವವರಿಲ್ಲದ ಪರಿಸ್ಥಿತಿ ಖಂಡಿತವಾಗಿಯೂ ಮತೀಯ ಅರಾಜಕತೆಯೇ ಆಗಿದೆ. ಸಮಾಜವು ಜಾತಿ, ಧರ್ಮ, ವರ್ಗಗಳಲ್ಲಿ ಛಿದ್ರವಾಗುವುದರಿಂದಲೇ ಹಿಂಸಾಪ್ರವೃತ್ತಿ ತೀವ್ರಗೊಳ್ಳುತ್ತದೆ. ನಮ್ಮವರು, ನಮ್ಮವರಲ್ಲದವರು- ಎಂಬ ಒಡಕಿನ ಭಾಷೆ ಬಲುಬೇಗ ಮನದಟ್ಟಾಗುತ್ತದೆ. ಈ ನಂಬಿಕೆಯ ಆಧಾರದಲ್ಲಿ ಒಡೆಯುವುದನ್ನು ಕಾನೂನುಬದ್ಧಗೊಳಿಸಲಾಗುತ್ತದೆ. ಬಡ ದಮನಿತ ಸಮುದಾಯಗಳು ಅಕಾರಣ ಆರೋಪಿಗಳಾಗುತ್ತಾರೆ. ರೊಹಿಂಗ್ಯಾ ಮುಸ್ಲಿಮರ ಕಥನದಂತೆಯೇ, ಭಾರತದಲ್ಲೀಗ ಬಾಂಗ್ಲಾ ನುಸುಳುಕೋರರ ಅಧ್ಯಾಯ ಪ್ರಾರಂಭವಾಗಿದೆ. ಇಲ್ಲಿಯೇ ಜನಿಸಿ, ಇಲ್ಲಿಯೇ ಬದುಕಿ, ಬದುಕಿಗೆ ನೆಲೆಯರಸುತ್ತಿರುವ ಬಡವರನ್ನು ದೇಶದ್ರೋಹಿಗಳೆಂದು, ಉಗ್ರಗಾಮಿಗಳೆಂದು, ದಂಗೆಕೋರರೆಂದು ಬಿಂಬಿಸಲಾಗುತ್ತಿದೆ. ಸಾಮಾಜಿಕ ಆತಂಕದ ಎಲ್ಲ ಬೆಳವಣಿಗೆಗಳೂ ಇವರಿಂದಲೇ ಸಂಭವಿಸಿದ್ದೆಂದು ನಂಬಿಸಲಾಗುತ್ತದೆ. ಮಾಧ್ಯಮಗಳು ಈ ಊಹಾಪೋಹಗಳನ್ನೇ ಕಲ್ಪಿತವಾಗಿಸಿ, ಕೂಗುಮಾರಿಯಂತೆ ಕೂಗುತ್ತವೆ. ದ್ರೋಹಿಗಳೆಂಬ ನಂಬಿಕೆಯನ್ನು ಉತ್ಪಾದಿಸುತ್ತವೆ. ಜನರ ವಿಚಾರ ಸಾಧ್ಯತೆಯನ್ನು ಬೇರೊಂದು ನೆಲೆಯಲ್ಲಿ ಮುನ್ನಡೆಸುವುದರಿಂದ; ವಲಸೆ-ವಲಸಿಗರ ಪ್ರಶ್ನೆಯ ಚರಿತ್ರೆಯನ್ನಾಗಲೀ ಭಾರತೀಯರು ಅಮೆರಿಕಾದಂತಹ ದೇಶದ ರಾಜಕೀಯ ತೀರ್ಮಾನಕ್ಕೆ ಬೆಲೆ ತೆತ್ತಬೇಕಾದ ಕಾಲ ಹತ್ತಿರದಲ್ಲಿಯೇ ಇದೆಯೆಂಬ ವಿಸ್ತರಣೆಯನ್ನಾಗಲೀ ಗಮನಿಸುವ ಪುರುಸೊತ್ತು ಒದಗುವುದಿಲ್ಲ. ಜಾತಿ-ಧರ್ಮಗಳಿಗೆ ಅಂಟಿಕೊಂಡ ಮನಸ್ಸಿಗೆ ನ್ಯಾಯ-ಅನ್ಯಾಯಗಳ ವೈರುಧ್ಯಗಳು ಗೋಚರಿಸುವುದಿಲ್ಲ. ಅಪರಾಧಕೃತ್ಯದಲ್ಲಿ ಅರೆಸ್ಟಾದ ಆರೋಪಿಯನ್ನು ಸೃಷ್ಟಿಸಿದ ಸಮಕಾಲೀನ ದುರಂತಗಳನ್ನು ಪ್ರಶ್ನಿಸಬೇಕಾದ, ಅದರ ವಿರುದ್ಧ ಸಂಘಟಿತರಾಗಬೇಕಿದ್ದ ಜನರು, ಯೋಚನಾ ಸಾಮಥ್ರ್ಯವನ್ನು ಕಳೆದುಕೊಂಡವರ ಹಾಗೆ ‘ಆರೋಪಿ ನಮ್ಮಜಾತಿಯವನು, ಆದ್ದರಿಂದ ಆರೋಪಿಯಲ್ಲ’ ಎಂದು ವಾದಿಸುತ್ತಿದ್ದಾರೆ, ಬೀದಿಗಿಳಿಯುತ್ತಿದ್ದಾರೆ. ತಮ್ಮ ಮಕ್ಕಳು ನಿರಪರಾಧಿಗಳು ಅವರ ಪರವಾಗಿ ಹಿಂದೂ ಸಂಘಟನೆಗಳು ವಕೀಲರನ್ನಿಟ್ಟು ವಾದಿಸುತ್ತವೆ- ಎಂದು ಒಪ್ಪಿಕೊಳ್ಳುವ ಹಿರಿಯರು; ಗುಣ-ಸ್ವಭಾವಗಳು ಜಾತಿವಾಚಕಗಳು ಎಂದು ನಂಬುವವರು- ತಮ್ಮ ಕಣ್ಣೆದುರೇ ನಡೆಯುತ್ತಿರುವ ಅಪಾಯವನ್ನು ಕಾಣಲಾರರು. ಯಾರು ತಮ್ಮ ಕೌಟುಂಬಿಕ ಸ್ವಾಸ್ಥ್ಯವನ್ನು ಲೂಟಿಗೈದವರು- ಎಂಬುದನ್ನು ತಿಳಿಯಲಾರದಷ್ಟು ಮುಗ್ಧತೆಯನ್ನು ತೋರುತ್ತಾರೆ. ಹಿಂಸೆಯೀಗ ದಶಾವತಾರವನ್ನೆತ್ತಿದೆ. ಅದರ ಮೈತುಂಬ ಕಣ್ಣು, ಬಾಯಿಗಳೆದ್ದಿವೆ. ಬಿಹಾರದ ಹಾಸ್ಟೆಲ್ಲಿನ ಬಡ-ಎಳೆಯ ಹೆಣ್ಣುಮಕ್ಕಳ ದೇಹವನ್ನು ಹುರಿದು ಮುಕ್ಕಿದ ಕರಾಳ ಹಿಂಸೆಯು, ಹೆಣ್ಣುಮಕ್ಕಳಿಗೆ ಹಾಸ್ಟೆಲ್ ಸುರಕ್ಷಿತವಲ್ಲ; ಮದುವೆಯೊಂದೇ ಸುರಕ್ಷಿತ- ಎಂಬ ಭಾವನೆಯನ್ನು ಬಲಿಸುತ್ತದೆ ಎಂದಾದರೆ ಸಂವಹನದ ಯಾವ ಸಾಧ್ಯತೆಯನ್ನು ಆಯ್ದುಕೊಂಡೇವು?
ಚೋಮನದುಡಿಯಲ್ಲಿ, ಚೋಮನ ಗುಡಿಸಲಲ್ಲಿ ದನದ ಮಾಂಸದೂಟದ ಪ್ರಸಂಗ ಬಂದೊಡನೆ ‘ಶ್ಶೀ’ ಎಂದು ತನ್ನ ಜಾತಿನಿಷ್ಠೆಯನ್ನು ಪ್ರಕಟಪಡಿಸುವ ಹುಡುಗಿಯರು ಬೇರೆಲ್ಲ ವಿಷಯದಲ್ಲಿ ಬೆಳ್ಳಿಯಂಥವರೇ. ಭಿತ್ತಿ ಪತ್ರಿಕೆಗೆ ಬರಹ ಕೇಳಿದರೆ, ಗೋಮಾತೆಯ ಮಹತ್ವವನ್ನು ಬರೆದು ತರುವವರಿಗೆ, ಇಂದಿನ ಪತ್ರಿಕೆಯಲ್ಲಿ ನಿಮ್ಮನ್ನು ಸತಾಯಿಸಿದ ಸುದ್ದಿ ಯಾವುದು? ಎಂದು ಕೇಳಿದರೆ ಮೌನವಾಗುವ; ಏನು ಓದಿದಿರಿ? ಎಂದರೆ ಸಿನಿಮಾದ,ಕ್ರೀಡೆಯ ಸುದ್ದಿಯನ್ನು ಹೇಳುವ ‘ದೊಡ್ಡ ಮಕ್ಕಳನ್ನು’ ವರ್ತಮಾನದ ಕುದಿ ಕುಲುಮೆಯ ಸ್ಪರ್ಶಕ್ಕೆ ತರುವ ಹಾದಿ ಕಾಣದೆ ಕಂಗಾಲಾಗುತ್ತೇನೆ. ಅವರ ಕಣ್ಣೊಳಗೆ ಆಗಾಗ ಹಿಂಸಾರತಿಯ ಉನ್ಮತ್ತ ಎಳೆಯೊಂದು ಹಾರಾಡಿದಂತಾಗಿ ದಿಕ್ಕೆಡುತ್ತಿದ್ದೇನೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪ್ರಧಾನಿ ಮೋದಿ ವಿರುದ್ಧ ನಿಂದನೆ: ನನಗೆ ಕೇವಲ 15 ವರ್ಷ ‘ಅನ್ಯರ ಪ್ರಭಾವಕ್ಕೆ ಒಳಗಾಗಿದ್ದೆ’ ಎಂದು ಕ್ಷಮೆ ಕೇಳಿದ ವಿದ್ಯಾರ್ಥಿನಿ ವಿಡಿಯೋ ವೈರಲ್

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿ ಭಾರಿ ಆಕ್ರೋಶಕ್ಕೆ ಗುರಿಯಾಗಿದ್ದ ಸಿಜೆಪಿ (CJP) ಪ್ರತಿಭಟನಾಕಾರ ಯುವತಿಯೊಬ್ಬಳು ಸೋಶಿಯಲ್ ಮೀಡಿಯಾದಲ್ಲಿ ಕ್ಷಮೆಯಾಚಿಸಿದ್ದಾಳೆ ಎನ್ನಲಾದ ವೀಡಿಯೊವೊಂದು ಹರಿದಾಡುತ್ತಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್...

ಸ್ಪೇನ್‌ಗೆ ನುಗ್ಗಿದ ಸಾವಿರಾರು ಮೊರಾಕನ್ನರು : ಬೃಹತ್ ವಲಸೆಯ ಹಿಂದೆ ಇಸ್ರೇಲ್ ಕುತಂತ್ರ?

ಮೊರಾಕೊದಿಂದ ಸ್ಪೇನ್‌ನ ಸಿಯುಟಾ ನಗರಕ್ಕೆ ಸಾವಿರಾರು ವಲಸಿಗರು ನುಗ್ಗಿದ ಬಿಕ್ಕಟ್ಟಿನ ಹಿಂದೆ ಇಸ್ರೇಲ್ ಕೈವಾಡವಿದೆ ಎಂಬ ಆರೋಪಗಳು ಕೇಳಿ ಬಂದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಇಸ್ರೇಲ್‌ನ ಕುತಂತ್ರ ಬುದ್ದಿಯ ಬಗ್ಗೆ ಭಾರೀ ಚರ್ಚೆಗಳು ನಡೆಯುತ್ತಿವೆ. ಇದೇ...

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....