Homeಸಾಮಾಜಿಕಮಂಗಳೂರು ಯೂನಿವರ್ಸಿಟಿ ಮಂಗಳ ಗಂಗೋತ್ರಿಯಲ್ಲಿ ಗಂಡಾಗುಂಡಿ

ಮಂಗಳೂರು ಯೂನಿವರ್ಸಿಟಿ ಮಂಗಳ ಗಂಗೋತ್ರಿಯಲ್ಲಿ ಗಂಡಾಗುಂಡಿ

- Advertisement -
- Advertisement -

ಮಂಗಳೂರು ವಿಶ್ವವಿದ್ಯಾಲಯಕ್ಕೆ “ಮಂಗಳ ಗಂಗೋತ್ರಿ” ಎಂಬ ಚಂದದ ಹೆಸರಿಡಲಾಗಿದೆ ವಿಕಟ ವ್ಯಂಗ್ಯವೆಂದರೆ, ಈ ಯೂನಿವರ್ಸಿಟಿ ಶುದ್ಧ ಅವ್ಯವಹಾರ, ಅಕ್ರಮ, ಅನ್ಯಾಯ, ಅನಾಚಾರದ ಗಂಗೋತ್ರಿಯಂತಾಗಿ ಅದ್ಯಾವುದೋ ಕಾಲವಾಗಿ ಹೋಗಿದೆ! ಇಲ್ಲಿಗೆ ಉಪಕುಲಪತಿಗಳಾಗಿ ವಕ್ಕರಿಸುವ ಭೂಪರಿಲ್ಲ ಸಿಕ್ಕóಷ್ಟು ಸ್ವಾಹಾ ಮಾಡುವ ಹಿಡನ್ ಅಜೆಂಡಾ ಇಟ್ಟುಕೊಂಡೇ ಬರುತ್ತಿದ್ದಾರೆ. ಹೀಗಾಗಿ ಮಂಗಳೂರು ವಿಶÀ್ವವಿದ್ಯಾಲಯ ಒಂದಲ್ಲ ಒಂದು ಬುರ್ನಾಸ್ ಭಾನ್ಗಡಿಯ ಸುದ್ದಿಗೀಡಾಗುತ್ತಲೇ ಇದೆ. ಈ ಪರಿಯ ಕವರ್iಕಾಂಡ, ಕಾಮಕತೆಗಳೆಲ್ಲವೂ ಲೋಕ ಪ್ರಸಿದ್ದ! ಮಂಗಳ ಗಂಗೋತ್ರಿಯಲ್ಲಾಗುವುದು ಕೋಟಿಗಳ ಲೆಕ್ಕದ ಬಿಲ್ ವಿದ್ಯೆ!! ಕಾಮಗಾರಿ, ನೇಮಕಾತಿ, ಖರೀದಿಯಲ್ಲಿ ಘನಘೋರ ಭ್ರಷ್ಟಾಚಾರ ನಡೆಯುತ್ತಿರುವ ಮಂಗಳೂರು ಯೂನಿವರ್ಸಿಟಿಯಲ್ಲಿ ಉಪನ್ಯಾಸಕಿಯರ, ವಿದ್ಯಾರ್ಥಿನಿಯರ ಲೈಂಗಿಕ ಶೋಷಣೆ ನಿತ್ಯಕರ್ಮದಂತಾಗಿದೆ.
ಅಂಕಪಟ್ಟಿ ಹಗರಣ 2007 ರಲ್ಲಿ ನಡೆದಾಗ ಅಲ್ಲೋಲಕಲ್ಲೋಲವೇ ಮಂಗಳ ಗಂಗೋತ್ರಿಯಲ್ಲಾಗಿತ್ತು! ಅದನ್ನು ಮರೆಯದ ಚರ್ಚೆಯ ಸಂಗತಿಯಾಗಿ ಇದೆಯೇ ವಿನಾಃ ನಿಷ್ಠುರ ತನಿಖೆ ಎಂಬುದಾಗಲೇ ಇಲ್ಲ. ಅಂದು ಎಬಿವಿಪಿಯ ರಣಧೀರ ಕಂಠೀರವನಾಗಿದ್ದ ಇಂದಿನ ಬೆಳ್ತಂಗಡಿಯ ಚೆಡ್ಡಿ ಶಾಸಕ ಹರೀಶ್‍ರೈ ಆ ಹಗರಣದ ಫಲಾನುಭವಿಗಳಲ್ಲಿ ಒಬ್ಬ!! ಮಂಗಳೂರು ವಿವಿಯಲ್ಲಿ ಆಕಾಡೆಮಿಕ್ ವಾತಾವರಣದ ಬದಲು ಸ್ವಚ್ಛಂದ ಮೋಜಿನ ಮೂಡ್ ನೆಲೆನಿಂತಿದ್ದೆ. ಸಂಘ ಪರಿವಾರದ ಹಾವಳಿಯಂತೂ ಹೇಳತೀರದು. ಸಿದ್ದು ಕಾಲಾವಧಿಯಲ್ಲಿ ಉಪಕುಲಪತಿಯಾಗಿ ನೇಮಕವಾಗಿದ್ದ ಭೈರಪ್ಪ ವಾರ್ಸಿಟಿಯ ಶೆಕ್ಷಣಿಕ ಸುಧಾರಣೆಗೆ ತಲೆಕೆಡಿಸಿಕೊಳ್ಳಲೇ ಇಲ್ಲ. ಆತ ಎಲ್ಲೆಲ್ಲಿ ಎಷ್ಟೆಷ್ಟು ಗುಳುಂ ಮಾಡಲು ಸಾಧ್ಯವೆಂದು ತಲಾಸ್ ನಡೆಸಿ ಹೊಟ್ಟೆತುಂಬ ಉಂಡು ಎದ್ದು ಹೋಗಿದ್ದಾರೆ. ಈ ಭೈರಪ್ಪ ಮಂಗಳ ಗಂಗೋತ್ರಿಯಿಂದ ತೊಲಗಿ ಆದಿಚುಂಚನಗಿರಿ ಶೆಕ್ಷಣಿಕ ಸಾಮ್ರಾಜ್ಯದ ಪ್ರೋಚಾನ್ಸಲರ್ ಆಗಿ ಅಮರಿಕೊಂಡು ತಿಂಗಳೆರಡು ಗತಿಸಿದರೂ ಆತನ ಗೋಲ್‍ಮಾಲ್ ಲೀಲೆಗಳ ಆವಾಜ್ ಮಾತ್ರ ಇವತ್ತಿಗೂ ನಿಂತಿಲ್ಲ…………
ಯಾರ್ಯಾರ ದೌರ್ಬಲ್ಯ ಎಂತೆಂಥದೆಂದು ಕರಾರುವಾಕ್ಕಾಗಿ ಕಂಡುಹಿಡಿದು ಆ ಚೋರ ಚಂಡಾಲರನ್ನು ತನ್ನ ಮನೋಗಡಕ್ಕೆ ಬಳಸಿಕೊಳುವ ಕಲೆ ಕರಗತ ಮಾಡಿಕೊಂಡಿದ್ದ ಭೈರಪ್ಪ ಸಾಹೇಬರು ತನಗೆ ವಿಸಿಯಾಗಿ ಪ್ರಾತಿಷ್ಠಾಪಿಸಿದ್ದ ಕಾಂಗ್ರೆಸಿಗರಷ್ಟೇ ಆದÀರಿಂದ ಬಿಜೆಪಿಗರನ್ನು ನೋಡಿಕೊಳ್ಳುತ್ತಿದ್ದರು ಕೇಸರಿ ಕಿತಾಪತಿಗಾರರ ಆಡ್ಡೆಯಂತಾಗಿರುವ ಮಂಗಳೂರಲ್ಲಿ ಬಿಜೆಪಿ ಪರಿವಾರಿಗರ ಯಶಸ್ವಿಯಾಗಿ ನಿಭಾಯಿಸಿದ್ದ ಭೈರಪ್ಪ ವಿವಿಯನ್ನು ಮಾವನ ಮನೆಯಿಂದ ಬಂದ ಬಳುವಳಿಯಂತೆ ದರ್ಬಾರು ನಡೆಸುತ್ತಿದ್ದರು! ತನ್ನ ರಣ ಹಸಿವು ಅರ್ಥ ಮಾಡಿಕೊಂಡವರ ವಿವಿಯ ಆಯಕಟ್ಟಿನ ಜಾಗದಲ್ಲಿ ನಿಭಾಯಿಸಿದ್ದ ಈ ವಿಸಿ ತನ್ನ ಒಣ ಸೈದ್ದಾಂತಿಕತೆ, ಸ್ವಪ್ರತಿಷ್ಠೆ ಮತ್ತು ಹಣದ ಹಪಾಹಪಿಗೆ ತಕ್ಕಂತೆ ಆಡಳಿತ ನಡೆಸಿಕೊಂಡಿದ್ದರು!!
ಪ್ರತಿ ವರ್ಷ ಪ್ರಶ್ನೆ ಪತ್ರಿಕೆ ಸೋರಿಕೆಯಾಗುವುದು ಮಂಗಳೂರು ವಿವಿಯ ಸಂಪ್ರದಾಯ ಎಂಬಂತಾಗಿದೆ! ಭೈರಪ್ಪನ ಪರ್ವದಲ್ಲಿ ಪ್ರಶ್ನೆ ಪತ್ರಿಕೆ ಬಹಿರಂಗವಾದಾಗ ದೊಡ್ಡ ಗದ್ದಲವೂ ಆಗಿತ್ತು. ಪ್ರಶ್ನೆಪತ್ರಿಕೆ ಸೋರಿಕೆ ಮಾಡುವ ವ್ಯವಸ್ಥಿತ ಜಾಲದಲ್ಲಿ ವೀಸಿ ಸಾಹೇಬರೂ ಇದ್ದಾರೆಂಬ ಪುಕಾರುಗಳು ಎದ್ದಿದ್ದವು. ತುಂಬ ನಾಜೂಕಾಗಿ ಪ್ರಕರಣ ನಿಭಾಯಿಸಿದ ವಿಸಿ ಭೈರಪ್ಪ ಎಲ್ಲಾ ಮುಚ್ಚಿಹಾಕಿ ಬಚಾವಾದರು. ಅಂಕಪಟ್ಟಿ ಅಕ್ರಮದಲ್ಲಂತೂ ಬಹುಕೋಟಿ ವ್ಯವಹಾರ ರಾಜಾರೋಷವಾಗೇ ನಡೆದುಹೋಗಿದೆ. ಇದರಲ್ಲಿ ವಿಸಿ ಸಾಹೇಬರಿಗೆ ದೊಡ್ಡದೊಂದು ಪಾಲು ದಕ್ಕಿದೆಯೆಂದು ಯೂನಿವರ್ಸಿಟಿಯ ಕಂಬ-ಕಂಬವೂ ಪಿಸುಗುಡುತ್ತದೆ. ಕೆಎಸ್‍ಓಯು ಯುಜಿಸಿ ಮಾನ್ಯತೆ ಕಳೆದುಕೊಂಡಿತು. ಈ ಕೆಎಸ್‍ಓಯು ಮತ್ತು ದೂರಶಿಕ್ಷಣ ನಿರ್ದೇಶನಾಲಯವನ್ನು ದುಡ್ಡು ಮಾಡುವ ಅಡ್ಡೆಯಂತಾಗಿಸಲಾಯಿತು. ಕಾಸು ಕೊಟ್ಟವರಿಗೆಲ್ಲಾ ಪದವಿ ರಾತ್ರಿ ಬೆಳಗಾಗುವುದರಲ್ಲಿ ಮಂಗಳಗಂಗೋತ್ರಿಯಲ್ಲಿ ಸಲೀಸಾಗಿ ಸಿಗುತ್ತಿದೆ.
ಮಂಗಳ ಗಂಗೋತ್ರಿಯ ಅಷ್ಟೂ ಅವ್ಯವಹಾರ ತಾಯಿಬೇರು ಖರೀದಿ ಕಮಿಟಿ(ಪರ್ಚೆಸ್ ಕಮಿಟಿ) ವೀಸಿ ಕಣ್ಗಾವಲಿನಲ್ಲಿರುವ ಈ ಕಮಿಟಿಯಲ್ಲಿ ಡೀನ್‍ಗಳೆಲ್ಲ ಇರುತ್ತಾರೆ. ಇಲ್ಲಾಗುವ ಖೋಟಾ ಖರೀದಿ, ಕಮಿಷನ್, ಕಿಕ್‍ಬ್ಯಾಕ್‍ಗಳು ಲಕ್ಷದ ಲೆಕ್ಕದಲ್ಲೇ ಇರುತ್ತದೆ! ಖರೀದಿಗಳು ಕೊಟ್ಯಾಂತರ ರೂಪಾಯಿಗಳಾದರೆ ಲಫಡಾ ಲಕ್ಷಾಂತರ ರೂಪಾಯಿಗಳದು. ಪೀಠೋಪಕರಣ, ಎಲೆಕ್ಟ್ರಿಕಲ್ ಸಾಮಾನು, ಕಂಪ್ಯೂಟರ್ ಮುಂತಾದ ವಸ್ತು ಕೊಳ್ಳುವಾಗ ವಿಪರೀತ ಬೆಲೆ ನಮೂದಿಸಿ ಪರ್ಸೆಂಟೇಜ್ ಹೊಡೆಯುವುದು ಸದ್ರಿ ವಾರ್ಸಿಟಿ ವಾಡಿಕೆ. ಈ ಕಮಾಯಿ ಭೈರಪ್ಪನ ಟೀಮು ಹಗಲೂ-ಇರುಳೂ ನಡೆಸಿ ದುಂಡಗಾಗಿದೆ. ಈ ಪರ್ಚೆಸ್ ಪರಾಕ್ರಮದ ಸರಿಯಾದ ತನಿಖೆ ನಡೆದರೆ ಭೈರಪ್ಪ ಅಂಡ್‍ಕೋದ ಲೂಟಿ ಲೆಕ್ಕಸಿಗುತ್ತದೆ. ಆ ತಾಕತ್ತು ಉನ್ನತ ಶಿಕ್ಷಣ ಸಚಿವ ಜಿ.ಟಿ. ದೇವೇಗೌಡರಿಗಿದೆಯಾ? ಸ್ವಜಾತಿ ಬಂಧುವಾದ ಭೈರಪ್ಪರ ಮುಟ್ಟುವ ಮನಸ್ಸು ಮಂತ್ರಿ ದೇವೇಗೌಡರಿಗಿಲ್ಲ ಎಂದು ವಾರ್ಸಿಟಿಯ ಮಂದಿ ಮುಸಿಮುಸಿ ನಗುತ್ತಾರೆ.
ವಿಸಿ ಭೈರಪ್ಪರ ಡಬ್ಬಲ್ ವೆಂಚರ್ ಎಂದೇ ಕುಖ್ಯಾತವಾಗಿದೆ ವಿವಿಯಲ್ಲಿ ಬೇಕಾಬಿಟ್ಟಿಯಾಗಿ ಅಳವಡಿಸಿರುವ ಸಿಸಿ ಕ್ಯಾಮರಾ ಮತ್ತು ಸೋಲಾರ್ ಹಗರಣಗಳು!! ಎರಡೂ ಕೋಟಿ ಕರಾಮತ್ತೇ. ಸೋಲಾರ್ ಗುತ್ತಿಗೆ ಕಡಿಮೆ ಮೊತ್ತದ ಬಿಡ್‍ದಾರನ ಬದಲಿಗೆ ದೊಡ್ಡ ಬಿಡ್‍ದಾರನಿಗೆ ಭೈರಪ್ಪರ ಗ್ಯಾಂಗು ದಯಪಾಲಿಸಿದೆ. ಇದರಲ್ಲಿ ಲಕ್ಷಾಂತರ ಕಮಿಷನ್ ಪಡೆದಿರುವ ವೀಸಿ ಬಳಗ ಬರೊಬ್ಬರಿ ನಾಲ್ಕು ಕೋಟಿ ರೂಪಾಯಿಗಳ ಸಿಸಿ ಕ್ಯಾಮರಾ ಅಳವಡಿಕೆಯಲ್ಲಿ ಬುದ್ಧಿಪೂರ್ವಕವಾಗೇ ಟೆಂಡರ್ ನಿಯಮ ಧಿಕ್ಕರಿಸಿದೆ. ಯಾವುದೇ ಟೆಂಡರ್ ಇಲ್ಲದೆ ಮುಗುಮ್ಮಾಗಿ ಆಗಿ ನಡೆದಿರುವ ಈ ಸಿಸಿಕ್ಯಾಮರಾ ಅಳವಡಿಕೆ ಕಾಮಗಾರಿ ವೀಸಿ ಭೈರಪ್ಪರ ದೆಸೆಯನ್ನೇ ಬದಲಿಸಿದೆ!
ಗುತ್ತಿಗೆ ಆಧಾರದಲ್ಲಿ ನೇಮಕಾತಿಯಾಗುವ ದುರ್ಬಲರ ಸಂಬಳಕ್ಕೂ ನಾಲಿಗೆ ಚಾಚುವ ಭೈರಪ್ಪರ ಬಣದ ಚಾಳಿ ಮಂಗಳೂರು ವಿವಿ ವ್ಯಾಪ್ತಿಯ ಅಷ್ಟೂ ಶಿಕ್ಷಣ ಸಂಸ್ಥೆಗಳಲ್ಲಿ ಸುಪ್ರಸಿದ್ಧ!! ಸೆಕ್ಯೂರಿಟಿ, ಸಿಫಾಯಿ, ಅಟೆಂಡರ್, ಗುಮಾಸ್ತರಂಥ ಸಣ್ಣ-ಪುಟ್ಟ ಕರ್ಮಚಾರಿಗಳನ್ನು ವಿವಿಯಲ್ಲಿ ಗುತ್ತಿಗೆಯಲ್ಲಿ ತೆಗೆದುಕೊಳ್ಳಲಾಗಿದೆ. ಇವರಿಗೆಲ್ಲಾ ಅಬ್ಬಬ್ಬಾ ಎಂದರೆ ಏಳೆಂಟು ಸಾವಿರ ರೂಪಾಯಿ ಪಗಾರು ಕೊಡಲಾಗುತ್ತಿದೆ. ಆದರೆ ಇವರ ಹೆಸರಲ್ಲಿ ಹದಿನೈದು ಸಾವಿರದಿಂದ ಇಪ್ಪತ್ತೈದು ಸಾವಿರ ರೂಪಾಯಿಗಳ ತನಕ ಖರ್ಚು ಹಾಕಲಾಗಿದೆಯಂತೆ. ವ್ಯತ್ಯಾಸದ ಕಾಸು ಎಲ್ಲಿ ಹೋಗಿದೆ ಎಂಬುದು ಭೈರಪ್ಪರಿಗೆ ಮಾತ್ರ ಗೊತ್ತಿದೆ! ಪೆವಿಲಿಯನ್ ಮತ್ತು ಕಟ್ಟಡಗಳ ನಿರ್ಮಾಣದಲ್ಲಿ ಕೋಟಿ-ಕೋಟಿ ನಾಯಿ-ನರಿ ಪಾಲಾಗಿದೆ ಎಂಬ ಆರೋಪಗಳಿವೆ. ಒಟ್ಟಿನಲ್ಲಿ ವಿವಿ ದುಡ್ಡಲ್ಲಿ ವಿಸಿಯಾಗಿದ್ದ ಭೈರಪ್ಪ ಭರ್ಜರಿ ಯಲ್ಲಮ್ಮನ ಜಾತ್ರೆ ಮಾಡಿಹೋಗಿದ್ದಾರೆ.
ಮಂಗಳಗಂಗೋತ್ರಿಯ ಮತ್ತೊಂದು ಮಗ್ಗುಲಲ್ಲಿ ಅವ್ಯವಹಾರ-ಅಕ್ರಮಗಳಷ್ಟೇ ಬಿರುಸಾಗಿ ಕಾಮಕಾಂಡವೂ ನಡೆದಿದೆ. ಉಪನ್ಯಾಸಕರ ವೃತ್ತಿಗೆ ನಾಲಾಯಕ್ ಆಗಿರುವವರೆಲ್ಲ ಅಮಾಯಕ ವಿದ್ಯಾರ್ಥಿನಿಯರ ನಡುವೆ ಅನಾಹುತಕಾರಿಗಳಂತೆ ಅಂಡಲೆಯುತ್ತಿದ್ದಾರೆ. ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗದ ಸಹಾಯಕ ಅಧ್ಯಾಪಕ ಡಾ|| ಉಮೇಶ್‍ನಾಯ್ಕ್ ಲ್ಯಾಬ್ ಮತ್ತು ಲೈಬ್ರರಿಯಲ್ಲಿ ಹುಡುಗಿಯರ ಜತೆ ಅಸಹ್ಯವಾಗಿ ವರ್ತಿಸುತ್ತಾನೆಂಬ ಗುಲ್ಲೆದ್ದಿದೆ. ಮರೈನ್ ಬಾಯಲಾಜಿ ವಿದ್ಯಾರ್ಥಿಯೊಬ್ಬ ವಿದ್ಯಾರ್ಥಿನಿಯರ ಶೌಚಾಲಯದಲ್ಲಿ ಮೊಬೈಲ್ ಕ್ಯಾಮರಾ ಇಟ್ಟು ಸಿಕ್ಕಿಬಿದ್ದಿದ್ದ. ಡಾ|| ಸುಜಾತ ಎಂಬ ಉಪನ್ಯಾಸಕಿ ತನಗೆ ಸಹೋದ್ಯೋಗಿ ಪ್ರೊಫೆಸರ್ ಡಾ|| ರಶೀದ್ ಲೈಂಗಿಕ ಕಿರುಕುಳ ನೀಡುತ್ತಿದ್ದನೆಂದು ಡೆತ್‍ನೋಟ್ ಬರೆದಿಟ್ಟು ಸಾವಿಗೆ ಶರಣಾಗಿದ್ದಳು. ಬರೋಬ್ಬರಿ ಒಂಭತ್ತು ವರ್ಷ ಆಕೆಗೆ ರಶೀದ್ ಪೀಡಿಸುತ್ತಿದ್ದನಂತೆ. ಈ ಕಾಮಕತೆಗಳು ಮಂಗಳಗಂಗೋತ್ರಿ ಹೆಣ್ಣು ಕು¯ಕ್ಕೆ ಸುರಕ್ಷಿತವಲ್ಲ ಎಂಬ ಸಂದೇಶ ಕಳಿಸಿದೆ. ಅನಾಚಾರ-ಅವ್ಯವಹಾರ-ಅಕಾಡಮಿಕ್ ಪರಿಸರಕ್ಕೆ ಗಂಡಾಂತರಿಕಾರಿಯಾದ ಕುಕೃತ್ಯಗಳು ಒಂದರ ಹಿಂದೊಂದರಂತೆ ನಡೆದರೂ ಯಾವುದೂ ಸರಿಯಾದ ತನಿಖೆಗೆ ಒಳಪಡದೆ ಘಟಿಂಗರು ಪಾರಮ್ಯ ಮೆರೆಯುತ್ತಿದ್ದಾರೆ.
ಮಂಗಳ ಗಂಗೋತ್ರಿಯನ್ನು ಹಳಿಗೆ ತರುವ ಕೆಲಸ ಉನ್ನತ ಶಿಕ್ಷಣ ಮಂತ್ರಿ ಜಿ.ಟಿ. ದೇವೇಗೌಡರ ಕೈಲಿ ಸಾಧ್ಯವಾ? ಆ ಖಾತೆ ನಿಭಾಯಿಸುವ ಧೈರ್ಯ ತನಗಿಲ್ಲವೆಂಬ ಕೀಳಮೆಯ ದೇವೇಗೌಡರಿದ್ದಾರೆ. ಹಾಗಾಗಿ ವಿವಿ ಕುಲಾಧಿಪತಿಯಾಗಿರುವ ರಾಜ್ಯಪಾಲ ವಾಲಾ ಮೂಗು ತೂರಿಸುವ ಮೋದಲೇ ಸಿಎಂ ಕುಮ್ಮಿ ಎಚ್ಚೆತ್ತುಕೊಳ್ಳುವರಾ?!

– ವರದಿಗಾರ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪ್ರತಿಭಟನೆ ಭೀತಿ : ಸಿಜೆಐ ಸೂರ್ಯಕಾಂತ್ ಭಾಗವಹಿಸಬೇಕಿದ್ದ ಘಟಿಕೋತ್ಸವ ದಿಢೀರ್ ಮುಂದೂಡಿದ TISS

ಮುಂಬೈನ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸಸ್ (ಟಿಐಎಸ್‌ಎಸ್‌) ಸಂಸ್ಥೆಯು ಆಗಸ್ಟ್ 2ರಂದು ನಡೆಸಲು ನಿಗದಿಪಡಿಸಿದ್ದ ತನ್ನ 86ನೇ ವಾರ್ಷಿಕ ಘಟಿಕೋತ್ಸವವನ್ನು ದಿಢೀರ್ ಮುಂದೂಡಿದೆ. ಕ್ಯಾಂಪಸ್ ಭದ್ರತೆಯ ಬಗೆಗಿನ ಕಳವಳಗಳು ಮತ್ತು ವಿದ್ಯಾರ್ಥಿಗಳ...

ಪ್ರಧಾನಿಗಳೇ ನಿಮ್ಮ ರೀಲ್‌ಗಳನ್ನು ಅಂಧಭಕ್ತರು ಮೆಚ್ಚಬಹುದು, ಆದರೆ ಇತಿಹಾಸ ನಿಮ್ಮನ್ನು ಕ್ಷಮಿಸುವುದಿಲ್ಲ: ಬಿ.ಕೆ. ಹರಿಪ್ರಸಾದ್

ಪ್ರಧಾನಿ ನರೇಂದ್ರ ಮೋದಿ ಬಿಡುಗಡೆ ಮಾಡಿರುವ ಇತ್ತೀಚಿನ ವಿಡಿಯೋ (ರೀಲ್) ಕುರಿತು ಕಾಂಗ್ರೆಸ್ ಹಿರಿಯ ನಾಯಕ ಮತ್ತು ಕೆಪಿಸಿಸಿ ಅಧ್ಯಕ್ಷರಾದ ಬಿ.ಕೆ. ಹರಿಪ್ರಸಾದ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ತಾನು ಮಾಡಿದರೆ ರಾಜತಂತ್ರ, ಬೇರೆಯವರು...

ಪ್ರಧಾನಿ ಮೋದಿ ವಿರುದ್ಧ ನಿಂದನೆ: ನನಗೆ ಕೇವಲ 15 ವರ್ಷ ‘ಅನ್ಯರ ಪ್ರಭಾವಕ್ಕೆ ಒಳಗಾಗಿದ್ದೆ’ ಎಂದು ಕ್ಷಮೆ ಕೇಳಿದ ವಿದ್ಯಾರ್ಥಿನಿ ವಿಡಿಯೋ ವೈರಲ್

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿ ಭಾರಿ ಆಕ್ರೋಶಕ್ಕೆ ಗುರಿಯಾಗಿದ್ದ ಸಿಜೆಪಿ (CJP) ಪ್ರತಿಭಟನಾಕಾರ ಯುವತಿಯೊಬ್ಬಳು ಸೋಶಿಯಲ್ ಮೀಡಿಯಾದಲ್ಲಿ ಕ್ಷಮೆಯಾಚಿಸಿದ್ದಾಳೆ ಎನ್ನಲಾದ ವೀಡಿಯೊವೊಂದು ಹರಿದಾಡುತ್ತಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್...

ಸ್ಪೇನ್‌ಗೆ ನುಗ್ಗಿದ ಸಾವಿರಾರು ಮೊರಾಕನ್ನರು : ಬೃಹತ್ ವಲಸೆಯ ಹಿಂದೆ ಇಸ್ರೇಲ್ ಕುತಂತ್ರ?

ಮೊರಾಕೊದಿಂದ ಸ್ಪೇನ್‌ನ ಸಿಯುಟಾ ನಗರಕ್ಕೆ ಸಾವಿರಾರು ವಲಸಿಗರು ನುಗ್ಗಿದ ಬಿಕ್ಕಟ್ಟಿನ ಹಿಂದೆ ಇಸ್ರೇಲ್ ಕೈವಾಡವಿದೆ ಎಂಬ ಆರೋಪಗಳು ಕೇಳಿ ಬಂದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಇಸ್ರೇಲ್‌ನ ಕುತಂತ್ರ ಬುದ್ದಿಯ ಬಗ್ಗೆ ಭಾರೀ ಚರ್ಚೆಗಳು ನಡೆಯುತ್ತಿವೆ. ಇದೇ...

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...