Homeಚಳವಳಿಮದ್ಯದ ವಿರುದ್ಧ ಕದಲಿದ ಮಹಿಳೆಯರ ಪಾದಗಳು

ಮದ್ಯದ ವಿರುದ್ಧ ಕದಲಿದ ಮಹಿಳೆಯರ ಪಾದಗಳು

- Advertisement -
- Advertisement -

ಕೆ.ಪಿ.ಸುರೇಶ |

ಮದ್ಯ ನಿಷೇಧಕ್ಕೆ ಆಗ್ರಹಿಸಿ ಸಾವಿರಾರು ಮಹಿಳೆಯರು ಚಿತ್ರದುರ್ಗದಿಂದ ವಿಧಾನಸೌಧಕ್ಕೆ ಪಾದಯಾತ್ರೆ ಮಾಡುತ್ತಿದ್ದಾರೆ. ಇದೊಂದು ಚಾರಿತ್ರಿಕ ಬೆಳವಣಿಗೆ. ಆದರೆ ಈ ಬಗ್ಗೆ ನಮ್ಮ ರಾಜಕೀಯ ಪಕ್ಷಗಳಷ್ಟೇ ಅಲ್ಲ ಒಟ್ಟಾರೆ ನಾಗರಿಕ ಸಮಾಜದ ಪ್ರತಿಕ್ರಿಯೆ ನಿರಾಶಾದಾಯಕವಾಗಿದೆ.
ರಾಜಕೀಯ ಪಕ್ಷಗಳ ನಿಲುವು ನಿರೀಕ್ಷಿತ. ನಮ್ಮ ಸರಕಾರಗಳು ಈ ದುಡ್ಡಿನಿಂದಲೇ ನಡೆಯುವುದು ಎಂಬ ನಂಬಿಕೆ ಇವಕ್ಕಿದೆ. ಸರ್ಕಾರವೂ ಇದೊಂದು ಅನಿವಾರ್ಯ ಚಟವೆಂಬಂತೆ ಬಿಂಬಿಸಿದೆ. ಆದರೆ ಆರ್ಥಿಕ ವಿವರಗಳನ್ನು ನೋಡಿದರೆ ಸರ್ಕಾರಕ್ಕಿರುವ ಆದಾಯ ಸುಮಾರು 18 ಸಾವಿರ ಕೋಟಿ ಎಂದು ಅಂಕಿಅಂಶಗಳು ಹೇಳುತ್ತಿವೆ. ಈ ಮೊತ್ತ ಅಷ್ಟೇನೂ ದೊಡ್ಡದಲ್ಲ. ಎರಡು ದಶಕಗಳ ಮೊದಲು ಬೇರೆ ಸೇವಾ ತೆರಿಗೆಗಳೇ ಇಲ್ಲದ ಕಾಲದಲ್ಲಿ ಮದ್ಯದ ತೆರಿಗೆಯೇ ಪ್ರಮುಖ ಆದಾಯ ಮೂಲವಾಗಿತ್ತು ಎಂಬುದು ನಿಜ. ಆದರೆ ಪ್ರಸ್ತುತ ಇದು ಅಷ್ಟೇನೂ ನಿಜವಲ್ಲ. ಇಂದು ಇzರ ಪ್ರಾಮುಖ್ಯತೆ ಬೇರೆ ಕಾರಣಕ್ಕಾಗಿ ಇದೆ. ಈ ಮದ್ಯದ ಅಂಗಡಿ, ಬಾರುಗಳು ರಾಜಕೀಯ ನೇತಾರರ ನೆಚ್ಚಿನ ಕಾಳಧನದ ಮೂಲ. ಅಷ್ಟೇ ಅಲ್ಲ ಚುನಾವಣಾ ಕಾಲದಲ್ಲಿ ನೆಚ್ಚಿಕೊಳ್ಳಬಹುದಾದ ಸರಬರಾಜು ಮೂಲ.
ಮುಖ್ಯತಃ ಈ ಪಾದಯಾತ್ರೆ ನಮ್ಮ ಒಟ್ಟಾರೆ ಸಮಾಜದ ಪುರುಷಪ್ರಧಾನ ಉಡಾಫೆಯನ್ನು ಅನಾವರಣಗೊಳಿಸಲಿದೆ. ಶೇ. ಐವತ್ತರಷ್ಟು ಇರುವ ಮಹಿಳೆಯರು, ಮತ್ತದರ ಅರ್ಧದಷ್ಟಿರುವ ಮಕ್ಕಳನ್ನು ಬಿಟ್ಟರೆ ಉಳಿಯುವ ಶೇ.25 ಗಂಡಸರಲ್ಲಿ ಕುಡುಕರೆಷ್ಟು? ಪೂರಾ ಅಂದರೂ ಅವರೇನು ಬಹುಮತವಲ್ಲ. ಇದಿಷ್ಟೇ ಸಾಕು ಸರ್ಕಾರದ ಅಷಾಡಭೂತಿತನವನ್ನು ಬೆತ್ತಲೆಗೊಳಿಸಲು.
ಕುಡಿತದ ಸಾಮಜಿಕ ಆರ್ಥಿಕ ಮತ್ತು ಆರೊಗ್ಯದ ಮೇಲಿನ ದುಷ್ಪರಿಣಾಮಗಳ ಬಗ್ಗೆ ಹೊಸತೇನೂ ಹೇಳಬೇಕಿಲ್ಲ. ಒಂದು ದಿನ ಮುಸ್ಸಂಜೆ ಯಾವುದೇ ಊರಲ್ಲಿ ನಿಂತರೂ ಇದು ಕಾಣಿಸುತ್ತೆ.
ಆದರೂ ದೇಶದ ಪ್ರತಿಷ್ಠಿತ ನರ ಆರೋಗ್ಯ ಸಂಸ್ಥೆ ನಿಮ್ಹಾನ್ಸ್ ಇತ್ತೀಚೆಗೆ ಪ್ರಕಟಿಸಿರುವ ಅಧ್ಯಯನ ವರದಿ ಈ ಕೇಡಿನ ಪರಿಣಾಮಗಳ ಬಗ್ಗೆ ಛಳಿ ಹುಟ್ಟಿಸುವಂಥಾ ವಿವರಗಳನ್ನು ಮುಂದಿಟ್ಟಿದೆ.
ಭಾರತದಲ್ಲಿ ವರುಷಕ್ಕೆ 230 ಕೋಟಿ ಲೀಟರ್ ಮದ್ಯ ಉತ್ಪಾದನೆಯಾಗುತ್ತದೆ. ಅಂದರೆ ಸುಮಾರು ತಲಾ 2 ಲೀಟರ್!! ಹತ್ತು ವರುಷಗಳ ಹಿಂದೆಯೇ ಇದರಿಂದ ಬರುತ್ತಿದ್ದ ರಾಜಸ್ವ 40 ಸಾವಿರ ಕೋಟಿ. ಆದಾಯ ಎಲ್ಲಿಂದ ಬರುತ್ತಿದೆ ಎಂಬ ನೈತಿಕ ಪ್ರಶ್ನೆಯನ್ನು ಸರ್ಕಾರ ಎಂದೂ ತನಗೆ ತಾನೇ ಹಾಕಿಕೊಂಡಿಲ್ಲ.
ನಿಮ್ಹಾನ್ಸ್ ಅಧ್ಯಯನದ ಪ್ರಕಾರ ಶೇ. 30-35 ಗಂಡಸರು ಮದ್ಯಪಾನ ಮಾಡುತ್ತಾರೆ. ಶೇ.5ರಷ್ಟು ಮಹಿಳೆಯರೂ ಮದ್ಯಪಾನಿಗಳು.
ಆತಂಕ ಹುಟ್ಟಿಸುವ ಸಂಗತಿ ಎಂದರೆ ‘80ರ ದಶಕದಲ್ಲಿ ಮದ್ಯಪಾನ ಆರಂಭಿಸುವ ವಯಸ್ಸು 28 ಆಗಿತ್ತು. ಆದರೆ ಇದು 2007ರ ವೇಳೆಗೆ ಇದು 17ಕ್ಕಿಳಿದಿತ್ತು. ಇವರಲ್ಲಿ ಅರ್ಧಕ್ಕರ್ಧ ಮಂದಿ ಅಪಾಯಕಾರಿ ಮಟ್ಟದ ಕುಡಿತದ ಚಟ ಅಂಟಿಸಿಕೊಳ್ಳುತ್ತಾರೆ.
ಅಧ್ಯಯಯನಗಳ ಪ್ರಕಾರ ಕುಡಿತಕ್ಕಂಟಿದವರಲ್ಲಿ ಶೇ.20 ಮಂದಿ ಬೇಗನೆ ಸಾವನ್ನಪ್ಪುತ್ತಾರೆ. ಅಪಘಾತ, ಗಾಯಗಳೂ ಕುಡುಕರಿಗೇ ಜಾಸ್ತಿ. ಶೇ. 25ರಷ್ಟು ರಸ್ತೆ ಅಪಘಾತ ಮತ್ತು ಸಾವುಗಳು ಮದ್ಯ ಸಂಬಂಧೀ. ಮಹಿಳೆಯರು ಮತ್ತು ಮಕ್ಕಳ ಮೇಲಿನ ಕೌಟುಂಬಿಕ ಹಿಂಸೆಯ ಅರ್ಧಾಂಶ ಈ ಕುಡಿತದ ಕಾರಣಕ್ಕೆ ನಡೆಯುತ್ತಿರುತ್ತೆ. ಶೇ.25ರಷ್ಟು ಪಾಶ್ರ್ವವಾಯು ಪೀಡಿತರು ಮದ್ಯವ್ಯಸನಿಗಳಾಗಿದ್ದಾರೆ. ಲಿವರ್ ಕಾಯಿಲೆಯಂತೂ ಬಹುತೇಕ ಕುಡಿತದ ಪರಿಣಾಮದಿಂದಲೇ ಎಂಬುದೂ ಸಿದ್ಧವಾಗಿದೆ.
ಇದರ ಸಾಮಾಜಿಕ ಪರಿಣಾಮಗಳಲ್ಲಿ ಕೆಲಸಕ್ಕೆ ಗೈರು ಹಾಜರಾಗುವುದು, ಕುಂಠಿತ ಆರೋಗ್ಯ, ಮಕ್ಕಳಿಗೆ ಶಿಕ್ಷಣದಲ್ಲಾಗುವ ತೊಡಕು ಹೀಗೆ ಹತ್ತು ಹಲವು ಬಗೆಯ ವಿವರಗಳಿಗೆ ಅಧ್ಯಯನಗಳೇ ಬೇಕಿಲ್ಲ ತಾನೇ?
ಆರ್ಥಿಕವಾಗಿ, ಇದರ ಆದಾಯ ನೆಚ್ಚಿಕೊಂಡಿರುವ ಸರ್ಕಾರ ಎಂಥಾ ಮೂರ್ಖವಾಗಿದೆಯೆಂದರೆ ಒಂದು ಅಧ್ಯಯನದ ಪ್ರಕಾರ ಹೆಂಡದ ಆದಾಯ 20 ಸಾವಿರ ಕೋಟಿ ಇದ್ದರೆ, ಹೆಂಡದ ಪರಿಣಾಮದಿಂದ ಸರ್ಕಾರಕ್ಕೆ ಆರೋಗ್ಯ ವ್ಯವಸ್ಥೆ ಮತ್ತಿತರ ಕಾರಣಕ್ಕಾಗುವ ವೆಚ್ಚ 24 ಸಾವಿರ ಕೋಟಿ. (ಇದು 2004ರ ಲೆಕ್ಕಾಚಾರ!!).
ಇನ್ನಷ್ಟು ಆತಂಕಕಾರೀ ವಿವರಗಳು ನಿಮ್ಹಾನ್ಸ್ ಅಧ್ಯಯನದಲ್ಲಿದೆ. ಮುಖ್ಯವಾಗಿ ಕುಡಿತದಿಂದಾಗುವ ಆರೋಗ್ಯ, ಸಾಮಾಜಿಕ, ಕೌಟುಂಬಿಕ ಅನಾಹುತಗಳಿಗೆ ಸರ್ಕಾರ ತೆರುವ ಬೆಲೆ ಅದರಿಂದ ಹುಟ್ಟುವ ಆದಾಯಕ್ಕಿಂತ ಜಾಸ್ತಿ ಎಂಬುದು ಗಮನಾರ್ಹ. ಇಂಥಾ ವೈದ್ಯಕೀಯ ವೃತ್ತಿಪರ ಸಂಸ್ಥೆಗಳ ಸೂಚಿಗಳನ್ನು ಸರ್ಕಾರ ಗೌರವಿಸಿದ್ದಿಲ್ಲ. ಆದರೆ ತುಲನಾತ್ಮಕವಾಗಿ ಗಮನಿಸಿ:
ಒಂದು ಕೀಟನಾಶಕದ ಬಗ್ಗೆ ಅಥವಾ ಮ್ಯಾಗೀ ನೂಡಲ್ ಬಗ್ಗೆ ಸರ್ಕಾರದ ಸಂಸ್ಥೆಯೊಂದು ವರದಿ ಕೊಟ್ಟರೆ ಮಾಧ್ಯಮಗಳು ಕೋಲಾಹಲವೆಬ್ಬಿಸುತ್ತವೆ. ಒತ್ತಡ ಗುಂಪುಗಳು ಹೌಹಾರಿ ಸರ್ಕಾರದ ಮೇಲೆ ಒತ್ತಡ ತರುತ್ತವೆ. ನಿಷೇಧ ಸಹಿತ ಹತ್ತು ಹಲವು ಕ್ರಮಗಳನ್ನು ಸರ್ಕಾರ ಮಿಂಚಿನ ವೇಗದಲ್ಲಿ ಜರುಗಿಸುತ್ತದೆ.
ಹೆಂಡದ ಬಗ್ಗೆ ಮಾತ್ರಾ ಅತ್ತ ಪರಿಣಿತರ ಅಧ್ಯಯನ, ಇತ್ತ ಕಣ್ಣಿಗೇ ಗಿಡಿಯುವ ನಿತ್ಯ ವರದಿಗಳಿದ್ದರೂ ಸರ್ಕಾರ ಗಮನಿಸುವುದಿಲ್ಲ. ಏನಿದರ ಅರ್ಥ?
ಸೊಷಿಯಲ್ ಡ್ರಿಂಕಿಂಗ್ ಅಂತ ಒಂದಿದೆ. ಅಂದರೆ ಆಗೀಗ ಮೋಜಿಗಾಗಿ ಕುಡಿಯುವುದು. ಇದನ್ನು ತಡೆಯಲಾಗದು. ಮನುಷ್ಯನ ಆದಿಮ ವ್ಯಸನ ಇದು ಎಂದೆಲ್ಲಾ ವಾದ ಇದೆ. ಚಾರಿತ್ರಿಕವಾಗಿ ಗಮನಿಸಬೇಕಾದ್ದು ಭಾರತದಲ್ಲಿ ಆಧುನಿಕ ಪಾಶ್ಚಿಮಾತ್ಯ ರಸಾಯನ ಶಾಸ್ತ್ರದ ಉತ್ಪನ್ನಗಳು ಪ್ರವೇಶಿಸುವ ಮೊದಲು ನಮ್ಮಲ್ಲಿದ್ದ ಮದ್ಯದ ಅಲ್ಕೋಹಾಲ್ ಪ್ರಮಾಣ ಅಷ್ಟೇನೂ ಅಪಾಯಕಾರಿಯಾಗಿರಲಿಲ್ಲ. ಇಂದಿಗೂ ಆದಿವಾಸಿ ಪಂಗಡಗಳು ಬಿಡಿ, ನಮ್ಮ ಕೊಡಗು ಮಲೆನಾಡುಗಳಲ್ಲೂ ವಿಶಿಷ್ಟ ಮದ್ಯಗಳನ್ನು ತಯಾರಿಸುವುದಿದೆ. ಇವೆಲ್ಲಾ ತೀರಾ ಅಪಾಯಕಾರೀ ಮದ್ಯಸಾರದ ಪ್ರಮಾಣ ಹೊಂದಿಲ್ಲ.
ಆಧುನಿಕ ಮದ್ಯಗಳ ಪ್ರವೇಶ ಆಗಿದ್ದೇ ನಮ್ಮ ಪಾರಂಪರಿಕ ಗ್ರಾಮವಾಸಿಗಳು ಪಂಗಡಗಳೂ ಈ ಅಪಾಯಕಾರೀ ಅಲ್ಕೋಹಾಲ್ ಪ್ರಮಾಣವಿರುವ ಮದ್ಯಕ್ಕೆ ಶರಣಾಗಿದ್ದಾರೆ. ಇಂದಿಗೂ ಹಳ್ಳಿಗಳ ಕುಡುಕರನ್ನು ಕೇಳಿದರೆ ಕಂಟ್ರಿ ಸರಾಯಿ ಬಗ್ಗೆ ಮಾತಾಡುತ್ತಾರೆ.
ಇದರರ್ಥ ಇಷ್ಟೇ. ಈ ಚಟ ಕ್ರಮೇಣ ಎಲ್ಲಾ ಚಟಗಳಂತೆ ಹೆಚ್ಚು ಹೆಚ್ಚು ಪ್ರಮಾಣದ ಕುಡಿತವನ್ನು ಪ್ರೇರೇಪಿಸುತ್ತಾ ಹೋಗುತ್ತದೆ.
ಒಂದೆಡೆ ಗ್ರಾಮೀಣ ರೈತನ ಕೌಟುಂಬಿಕ ಆದಾಯ ದಿನಕ್ಕೆ ಕೇವಲ ರೂ.200 ಎಂದು ಮರುಗುವ ಸರ್ಕಾರ ಇದೇ ಕುಟುಂಬದ ಗಂಡಸೊಬ್ಬ ಈ ಮೊತ್ತವನ್ನು ಹೆಂಡಕ್ಕೆ ವ್ಯಯಿಸುವುದರ ಬಗ್ಗೆ ಗೊತ್ತಿದ್ದೂ ಮೌನ ತಾಳುತ್ತದೆ.
ಹಳ್ಳಿಯ ಗೂಡಂಗಡಿಗಳಲ್ಲೂ ಮದ್ಯ ಮಾರಾಟವಾಗುವುದು ಬಹಿರಂಗವಾಗಿದ್ದರೂ ಇಲಾಖೆಗಳಾಗಲೀ ಜನಪ್ರತಿನಿಧಿಗಳಾಗಲೀ ಈ ಬಗ್ಗೆ ಕ್ರಮಕೈಗೊಂಡ ಉದಾಹರಣೆ ಇದೆಯೇ?
ಅರ್ಥಾತ್ ಈ ಮದ್ಯ ಎಂಬುದು ಕೌಟುಂಬಿಕ ನೆಮ್ಮೆದಿ, ಆರೋಗ್ಯಕ್ಕೆ ಮಾರಕವಾಗಿದೆಯಷ್ಟೇ ಅಲ್ಲ, ನಮ್ಮ ಸಾರ್ವಜನಿಕ ಜೀವನವನ್ನು ಭ್ರಷ್ಟಗೊಳಿಸುವಲ್ಲೂ ಮಹತ್ವದ ಪಾತ್ರ ವಹಿಸಿದೆ.
ಈ ಹಿಂದೆ ಕರ್ನಾಟಕದ ಮಹತ್ವದ ಹೋರಾಟಗಳನ್ನೂ ಮಹಿಳೆಯರೇ ಮುನ್ನಡೆಸಿದ್ದರು ಎಂಬುದನ್ನು ನೆನಪಿಸಿಕೊಂಡರೆ ಈ ಪಾದಯಾತ್ರೆ ನಿರ್ಣಾಯಕವಾಗುವ ಲಕ್ಷಣ ಕಾಣಿಸುತ್ತಿದೆ. ನಾಳೆಗೇ ಈ ಮಹಿಳೆಯರು ಗೆಲ್ಲುತ್ತಾರೆಂಬ ಭ್ರಮೆ ಈ ಮಹಿಳೆಯರಿಗೂ ಇಲ್ಲ. ಆದರೆ ಮುಂಬರುವ ದಿನಗಳಲ್ಲಿ ಕಿರಗೂರಿನ ಗಯ್ಯಾಳಿಗಳು ಕಥೆಯಲ್ಲಿ ಸ್ಫೋಟವಾಗುವ ಆಕ್ರೋಶ ರಾಜ್ಯದ ಹಳ್ಳಿಹಳ್ಳಿಗಳಲ್ಲೂ ಮೊಳಕೆ ಒಡೆಯಲಿದೆ.
ಈಗ ಉಡಾಫೆ, ಕಿತಾಪತಿಯಲ್ಲಿ ಈ ಹೋರಾಟವನ್ನು ನೋಡುತ್ತಿರುವ ಪಕ್ಷಗಳಿಗೂ ಈ ಬಿಸಿ ತಟ್ಟಲಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...