Homeಮುಖಪುಟಮಳೆನೀರು ಕೊಯ್ಲು, ಕೆರೆ ಪುನರುಜ್ಜೀವನ ಮುಂತಾದುವು ಯಾರಿಗೂ ಬೇಕಿಲ್ಲ ಯಾಕೆ?

ಮಳೆನೀರು ಕೊಯ್ಲು, ಕೆರೆ ಪುನರುಜ್ಜೀವನ ಮುಂತಾದುವು ಯಾರಿಗೂ ಬೇಕಿಲ್ಲ ಯಾಕೆ?

- Advertisement -
- Advertisement -

| ಹೇಮಲತಾ ಶೆಣೈ, ಬೆಂಗಳೂರು |

ಕರ್ನಾಟಕದ ನಗರಗಳ ನೀರಿನ ಬವಣೆಗೆ ಪರಿಹಾರ ಕಂಡುಕೊಳ್ಳುವಲ್ಲಿ ಸರ್ಕಾರ ಗೆಲ್ಲುವ ಲಕ್ಷಣ ಕಾಣುತ್ತಿಲ್ಲ. ಯಾಕೆಂದರೆ ಅಳಿದುಳಿದ ಕೆರೆಗಳನ್ನು ಅಭಿವೃದ್ಧಿಪಡಿಸುವುದು, ಮಳೆನೀರು ಕೊಯ್ಲಿನ ಮೂಲಕ ನೀರು ಸಂಗ್ರಹ ಇತ್ಯಾದಿ ನಮಗೆ ಎಟಕುವಂತಹದನ್ನು ಮಾಡಬೇಕೆನ್ನುವ ತಜ್ಞರ ಮಾತು ಅಧಿಕಾರಸ್ಥರ ಕಿವಿಯೊಳಗೆ ಹೋಗುವುದೇ ಇಲ್ಲ. ನದಿ ತಿರುವು, ನದಿ ಜೋಡಣೆ, ಮೋಡ ಬಿತ್ತನೆಯಂತಹ ದೊಡ್ಡ ಖರ್ಚಿನ ಬಾಬತ್ತುಗಳು ಮಾತ್ರ ಅವರಿಗೆ ಆಕರ್ಷಕವಾಗಿ ಕಾಣುತ್ತವೆ. ನೇತ್ರಾವತಿಯಲ್ಲಿ ನೀರು ಕಡಿಮೆಯಾಗಿ ಒಣಗಲು ಶುರುವಾಗಿದ್ದರೂ – ಈ ಬೇಸಿಗೆಯಲ್ಲಿ ನೀರಿನ ತೀವ್ರ ಕೊರತೆಯ ಕಾರಣ ಧರ್ಮಸ್ಥಳದ ಯಾತ್ರಾರ್ಥಿಗಳಿಗೆ ತಮ್ಮ ಪ್ರವಾಸವನ್ನು ಕೆಲ ದಿನ ಮುಂದೂಡಲು ದೇವಸ್ಥಾನದ ಆಡಳಿತಾಧಿಕಾರಿಗಳೇ ಮನವಿ ಮಾಡಿದ್ದನ್ನು ಸ್ಮರಿಸಬಹುದು – ಅಧಿಕಾರಸ್ಥರು ಈಗಲೂ ‘ನೇತ್ರಾವತಿ ತಿರುವು ಯೋಜನೆ’ಯ ಮಾತನ್ನೇ ಆಡುತ್ತಿದ್ದಾರೆ.

ಬೆಂಗಳೂರಿನ ಜನಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಿದೆ. ಹೊಟ್ಟೆಪಾಡಿಗಾಗಿ ಮತ್ತು ನೀರಿನ ಕೊರತೆಯಿಂದಾಗಿ ಹಳ್ಳಿಗಾಡಿನಿಂದ, ನಮ್ಮದೇ ರಾಜ್ಯದ ಬೇರೆಬೇರೆ ಭಾಗಗಳಿಂದ ಮಾತ್ರವಲ್ಲದೆ ನಾನಾ ರಾಜ್ಯಗಳಿಂದಲೂ ಅಸಂಖ್ಯಾತ ಜನರು ಬೆಂಗಳೂರನ್ನು ಆಶ್ರಯಿಸಿ ಬರುತ್ತಲೇ ಇದ್ದಾರೆ.

ಬೆಂಗಳೂರಿನ ನೀರಿನ ಬವಣೆ ನಿವಾರಣೆಗೆ ತಜ್ಞರ ಸಲಹೆಯೆಂದರೆ ಮಳೆನೀರು ಸಂಗ್ರಹ – ಒಂದು, ಕೆರೆಗಳಲ್ಲಿ ಹೂಳೆತ್ತಿ ಅಭಿವೃದ್ಧಿಪಡಿಸಿ ನೀರು ಸಂಗ್ರಹ; ಎರಡು, ಕಟ್ಟಡಗಳಲ್ಲಿ ಮಳೆನೀರು ಕೊಯ್ಲು. ಇದರಿಂದ ಸಾಕಷ್ಟು ನೀರು ಭೂಮಿಯಲ್ಲಿ ಇಂಗಿ ಜಲಮಟ್ಟ ಮೇಲೇರಿ ಬಾವಿ-ಬೋರ್‍ವೆಲ್‍ಗಳಲ್ಲೂ ನೀರು ಬರುತ್ತದೆ. ಇದು ಅನಿವಾರ್ಯ. ಇಷ್ಟರಲ್ಲಾಗಲೇ ಕೆರೆಗಳ ಹೂಳೆತ್ತಿ ಅಭಿವೃದ್ಧಿಪಡಿಸಿ ಮಳೆನೀರು ಸಂಗ್ರಹಕ್ಕೆ ಸಿದ್ಧವಾಗಿರಬೇಕಿದ್ದ ಕೆರೆಗಳು ಹಾಗೇ ಇದ್ದಾವೆ.

ಜನಪ್ರತಿನಿಧಿಗಳಿಗೆ ತಮ್ಮ ಏರಿಯದ ಕೆರೆಗಳನ್ನು ನೀರಿನ ಸಂಗ್ರಹಕ್ಕೆ ಸಿದ್ಧ ಮಾಡುವ ತರಾತುರಿಯೇ ಇಲ್ಲ. ಕೋರ್ಟು ಎಷ್ಟು ಚಾಟಿ ಬೀಸಿದರೂ ಇವರ ದಪ್ಪ ಚರ್ಮಕ್ಕೆ ನಾಟುವುದೇ ಇಲ್ಲ. ಯಾಕಿದು ಹೀಗೆ? ಕೆರೆ ಜಾಗ ಒತ್ತುವರಿ ಮಾಡಿಕೊಂಡಿರುವ ಪ್ರಭಾವಿಗಳು-ಬಲಾಢ್ಯರಿಂದ ಅದನ್ನು ಬಿಡಿಸಿಕೊಳ್ಳಬೇಕಾಗುತ್ತೆ, ಅದು ಇವರಿಗೆ ಬೇಡವಾಗಿದೆಯಾ?

ಹಲವೆಡೆ ಏರಿಯದ ಜನರು ಸೇರಿ ತಾವೇ ದುರಸ್ತಿ, ಹೂಳೆತ್ತುವುದು ಮಾಡಿಕೊಂಡಿದ್ದಾರೆ. ಯುವ ಸಾಫ್ಟ್‍ವೇರ್ ಇಂಜಿನಿಯರ್ ಒಬ್ಬರು ತಮ್ಮ ಖರ್ಚಿನಿಂದಲೇ ಕೆರೆಗಳನ್ನು ರಿಪೇರಿ ಮಾಡಿಸುತ್ತಿರುವುದು, ಜನಾನುರಾಗಿ ವ್ಯಕ್ತಿಯೊಬ್ಬರು ಎಷ್ಟೋ ಬಾವಿ ತೋಡಿಸುವ ಪಣ ತೊಟ್ಟು ತಮ್ಮಷ್ಟಕ್ಕೆ ಆ ಕೆಲಸ ಮಾಡುತ್ತಿರುವುದು ಇವೆಲ್ಲ ಪತ್ರಿಕೆಗಳಲ್ಲಿ ವರದಿಯಾಗುತ್ತಿರುತ್ತವೆ; ಇಷ್ಟು ದಿನ ಬಂದ ಮಳೆಗೆ ಅವೆಲ್ಲ ತುಂಬಿವೆ. ಆದರೆ ಜನಪ್ರತಿನಿಧಿಗಳು-ಅಧಿಕಾರಸ್ತರು ಇಂತಹ ಕೆಲಸ ಮಾಡಿಸಿದ್ದನ್ನು ಓದಿದ್ದು ನೆನಪಿಲ್ಲ! ಇನ್ನೂ ಕೆಲವು ಕೆರೆಗಳು ರಿಪೇರಿ ಆಗಿ ನೀರು ಸಂಗ್ರಹಿಸಲಿ ಎಂಬ ಕಾರಣಕ್ಕೋ ಎಂಬಂತೆ ನಮ್ಮ ಮುಂಗಾರು ನಾಕ್ನಾಕೇ ದಿನ ಹಿಂದೆ ಸರಿಯುತ್ತಿದೆ.

ಇನ್ನು, ಕಟ್ಟಡಗಳಲ್ಲಿ ಮಳೆನೀರು ಕೊಯ್ಲಿನ ವಿಚಾರಕ್ಕೆ ಬಂದರೆ, ಜನರು ಯಾಕೋ ಆ ಬಗ್ಗೆ ಕಾಳಜಿನೇ ವಹಿಸುತ್ತಿಲ್ಲ. ಹೊಸ ಕಟ್ಟಡಗಳಲ್ಲಿ ಮಳೆನೀರು ಕೊಯ್ಲಿನ ವ್ಯವಸ್ಥೆಯನ್ನು ಸರಕಾರ ಕಡ್ಡಾಯಗೊಳಿಸಿ ಕಾಯ್ದೆ ಮಾಡಿ ತನ್ನ ‘ಕರ್ತವ್ಯ ಪೂರೈಸಿ’ ಹಲವು ವರ್ಷಗಳೇ ಸಂದುವು. ಆದರೆ ಬೇಕಾದಷ್ಟು ಬಹುಮಹಡಿ ವಸತಿ ಸಮುಚ್ಚಯಗಳು, ಸರಕಾರಿ ಕಟ್ಟಡಗಳಲ್ಲೇ ಇದನ್ನು ಅಳವಡಿಸಿಲ್ಲ. ಅವರು ಅದಕ್ಕಾಗಿ ದಂಡ ಕಟ್ಟುತ್ತಾರೆ ಹೊರತು ಮಳೆನೀರು ಕೊಯ್ಲು ಮಾಡುತ್ತಿಲ್ಲ. ಯಾಕೆ?

ಮಿಕ್ಕ ರಾಜ್ಯಗಳಲ್ಲಿ ಇದೆಲ್ಲ ಹೇಗೆ ನಡೆಯುತ್ತಿದೆ? ನೆರೆ ರಾಜ್ಯ ತಮಿಳುನಾಡಿನಲ್ಲಿ ಜಯಲಲಿತಾ ಸಿಎಂ ಆಗಿದ್ದಾಗ ಎಷ್ಟು ಕಟ್ಟುನಿಟ್ಟಾಗಿ ಮತ್ತು ಕ್ರಮಬದ್ಧ ವೃತ್ತಿಪರತೆಯಿಂದ ಈ ಕೆಲಸ ಮಾಡಿಸುತ್ತಿದ್ದರೆಂದರೆ, ಮನೆ ಕಟ್ಟುವ ಪರವಾನಗಿ ಬೇಕಿರುವವರಿಂದ ಸರಕಾರ ಅಥವಾ ಸಂಬಂಧಿತ ಸ್ಥಳೀಯ ಆಡಳಿತಗಳೇ ಮಳೆನೀರು ಕೊಯ್ಲಿನ ವ್ಯವಸ್ಥೆಗೆ ನಿಗದಿತ ಹಣ ಕಟ್ಟಿಸಿಕೊಂಡು ಅದರ ವ್ಯವಸ್ಥೆ ಮಾಡುವಂತೆ ಕಡ್ಡಾಯ ಮಾಡಲಾಗಿತ್ತು. ಹಾಗೆಯೇ ಬ್ಯಾಂಕಿನಿಂದ ಕೃಷಿ ಸಾಲ ಬೇಕಿದ್ದಲ್ಲಿ ಕೃಷಿ ಹೊಂಡ ನಿರ್ಮಿಸಲೇ ಬೇಕಿತ್ತು. ನಮ್ಮಲ್ಲೇಕೆ ಇಂತಹ ಕ್ರಮಗಳನ್ನು ಕಟ್ಟುನಿಟ್ಟಾಗಿ ಅಳವಡಿಸುವುದಿಲ್ಲ?

ಬಹುಮಹಡಿ ಕಟ್ಟಡಗಳ ಹಾಗೂ ದೊಡ್ಡದೊಡ್ಡ ಮನೆಗಳ ನಿವಾಸಿಗಳು ಎಂದಾದರೂ ನೀರಿಗಾಗಿ ಕೊಡ ಹಿಡಿದು ಕ್ಯೂ ನಿಲ್ಲುವುದು ಇದೆಯಾ? ಇಲ್ಲ. ಆ ಮನೆಗಳ ಸಂಪುಗಳೆಲ್ಲ ರಾತ್ರಿಯೇ ತುಂಬಿ ನೀರೆಲ್ಲ ಹರಿದುಹೋಗುತ್ತಿರುತ್ತದೆ. ಆದ್ದರಿಂದಲೇ ಅವರಿಗೆ ನೀರು ಕೊಯ್ಲಿನ ಜರೂರತ್ತು ಕಾಣುತ್ತಿಲ್ಲ. [ನಾವು ವಾಸ ಇರುವ ಕಟ್ಟಡದಲ್ಲಿ ಮಳೆನೀರು ಕೊಯ್ಲಿನಿಂದ ಬೋರ್‍ವೆಲ್‍ಗೆ ನೀರು ಮರುಪೂರಣ ವ್ಯವಸ್ಥೆಯಿದೆ. ಆದರೆ ನಮ್ಮ ಪಕ್ಕದ ಕಟ್ಟಡದಲ್ಲಿ ಆ ವ್ಯವಸ್ಥೆ ಮಾಡಿರಲಿಲ್ಲ. ಅವರ ಬೋರ್‍ವೆಲ್ ಬತ್ತಿಹೋಗಿ, ಟ್ಯಾಂಕರ್ ನೀರು ಸಹ ಸಾಕಾಗದೆ, ಮಾಲೀಕರು ನಿವಾಸಿಗಳಿಗೆ ನೀರಿನ ‘ರೇಶನ್’ ಅಳವಡಿಸಿದ್ದಾರೆ. ಹೀಗಾದ ನಂತರ ಈಗ ಮಳೆನೀರು ಕೊಯ್ಲಿನ ವ್ಯವಸ್ಥೆ ಮಾಡಿದ್ದಾರೆ; ಆದರೆ ಆ ನಂತರ ಮಳೆಯೇ ಬಂದಿಲ್ಲ ಇನ್ನೂ!]

ಆದ್ದರಿಂದ ಮಳೆನೀರು ಸಂಗ್ರಹ ಸುಗಮವಾಗಿ ಆಗಬೇಕೆಂದರೆ ಬರೀ ದಂಡ ಕಟ್ಟಿಸಿಕೊಳ್ಳುವುದಲ್ಲ. ದುಡ್ಡಿನಿಂದ ನೀರು ಉತ್ಪಾದನೆ ಆಗುವುದಿಲ್ಲ! ಮನೆ ನಿರ್ಮಾಣದ ಪರವಾನಗಿ ಕೊಡುವಾಗಲೇ ಮಳೆನೀರು ಕೊಯ್ಲಿಗೆ ದುಡ್ಡು ಕಟ್ಟಿಸಿಕೊಂಡು ಅಥಾರಿಟಿಗಳೇ ಅದನ್ನು ನಿರ್ಮಿಸುವ ವ್ಯವಸ್ಥೆಯಾಗಬೇಕು; ಅಥವಾ ಮಳೆನೀರು ಕೊಯ್ಲಿನ ವ್ಯವಸ್ಥೆ ಮಾಡದಿದ್ದರೆ ಅವರಿಗೆ ನೀರು ಪೂರೈಕೆಯನ್ನು ಬಂದ್ ಮಾಡುವ ನಿಬಂಧನೆಯೊಂದಿಗೇನೇ ಪರವಾನಗಿ ಕೊಡಬೇಕು ಮತ್ತು ಇದನ್ನು ಕಟ್ಟುನಿಟ್ಟಾಗಿ ಜಾರಿ ಮಾಡಬೇಕು.

ಈಗಾಗಲೇ ಬಹಳ ತಡವಾಗಿದೆ. ಈ ವರ್ಷದ ಬೇಸಿಗೆಯಲ್ಲಿ ಬೆಂಗಳೂರಿನ ಅದೆಷ್ಟೋ ಸಣ್ಣದೊಡ್ಡ ಬಹುಮಹಡಿ ಕಟ್ಟಡಗಳಲ್ಲಿನ ಬೋರ್‍ವೆಲ್‍ಗಳು ಒಣಗಿಹೋಗಿ ಟ್ಯಾಂಕರ್ ನೀರಿಗಾಗಿ ಪರದಾಡುವ ದೃಷ್ಯ ಕಾಮನ್ ಆಗಿತ್ತು. ಒಂದು ವೇಳೆ ಟ್ಯಾಂಕರುಗಳಿಗೇ ನೀರು ಸಿಗದೆ ಹೋದರೆ? ಧರ್ಮಸ್ಥಳ, ಉಡುಪಿ, ಸುಬ್ರಮಣ್ಯ, ಕೊಲ್ಲೂರು ಮುಂತಾದ ಪ್ರಖ್ಯಾತ ಯಾತ್ರಾಸ್ಥಳಗಳಲ್ಲೆಲ್ಲ ನೀರಿಗಾಗಿ ಹಾಹಾಕಾರದಂಥ ಪರಿಸ್ಥಿತಿ ನಿರ್ಮಾಣವಾಗಿದ್ದು ಜನರಿಗೂ ಅಧಿಕಾರಸ್ತರಿಗೂ ಎಚ್ಚರಿಕೆಯ ಗಂಟೆಯಾಗಬೇಕಿದೆ. ಮಳೆನೀರು ಸಂಗ್ರಹವನ್ನು ಗರಿಷ್ಠ ಪ್ರಮಾಣಕ್ಕೆ ಮಾಡಿರೆಂಬ ನಮ್ಮ ಜಲತಜ್ಞರ ಸಲಹೆಯನ್ನು ಎಲ್ಲರೂ ಪಾಲಿಸಿದರೆ ಮಾತ್ರ ಉಳಿಗಾಲ ಎಂದು ಅನ್ನಿಸುತ್ತಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...