Homeಮುಖಪುಟಮಳೆನೀರು ಕೊಯ್ಲು, ಕೆರೆ ಪುನರುಜ್ಜೀವನ ಮುಂತಾದುವು ಯಾರಿಗೂ ಬೇಕಿಲ್ಲ ಯಾಕೆ?

ಮಳೆನೀರು ಕೊಯ್ಲು, ಕೆರೆ ಪುನರುಜ್ಜೀವನ ಮುಂತಾದುವು ಯಾರಿಗೂ ಬೇಕಿಲ್ಲ ಯಾಕೆ?

- Advertisement -
- Advertisement -

| ಹೇಮಲತಾ ಶೆಣೈ, ಬೆಂಗಳೂರು |

ಕರ್ನಾಟಕದ ನಗರಗಳ ನೀರಿನ ಬವಣೆಗೆ ಪರಿಹಾರ ಕಂಡುಕೊಳ್ಳುವಲ್ಲಿ ಸರ್ಕಾರ ಗೆಲ್ಲುವ ಲಕ್ಷಣ ಕಾಣುತ್ತಿಲ್ಲ. ಯಾಕೆಂದರೆ ಅಳಿದುಳಿದ ಕೆರೆಗಳನ್ನು ಅಭಿವೃದ್ಧಿಪಡಿಸುವುದು, ಮಳೆನೀರು ಕೊಯ್ಲಿನ ಮೂಲಕ ನೀರು ಸಂಗ್ರಹ ಇತ್ಯಾದಿ ನಮಗೆ ಎಟಕುವಂತಹದನ್ನು ಮಾಡಬೇಕೆನ್ನುವ ತಜ್ಞರ ಮಾತು ಅಧಿಕಾರಸ್ಥರ ಕಿವಿಯೊಳಗೆ ಹೋಗುವುದೇ ಇಲ್ಲ. ನದಿ ತಿರುವು, ನದಿ ಜೋಡಣೆ, ಮೋಡ ಬಿತ್ತನೆಯಂತಹ ದೊಡ್ಡ ಖರ್ಚಿನ ಬಾಬತ್ತುಗಳು ಮಾತ್ರ ಅವರಿಗೆ ಆಕರ್ಷಕವಾಗಿ ಕಾಣುತ್ತವೆ. ನೇತ್ರಾವತಿಯಲ್ಲಿ ನೀರು ಕಡಿಮೆಯಾಗಿ ಒಣಗಲು ಶುರುವಾಗಿದ್ದರೂ – ಈ ಬೇಸಿಗೆಯಲ್ಲಿ ನೀರಿನ ತೀವ್ರ ಕೊರತೆಯ ಕಾರಣ ಧರ್ಮಸ್ಥಳದ ಯಾತ್ರಾರ್ಥಿಗಳಿಗೆ ತಮ್ಮ ಪ್ರವಾಸವನ್ನು ಕೆಲ ದಿನ ಮುಂದೂಡಲು ದೇವಸ್ಥಾನದ ಆಡಳಿತಾಧಿಕಾರಿಗಳೇ ಮನವಿ ಮಾಡಿದ್ದನ್ನು ಸ್ಮರಿಸಬಹುದು – ಅಧಿಕಾರಸ್ಥರು ಈಗಲೂ ‘ನೇತ್ರಾವತಿ ತಿರುವು ಯೋಜನೆ’ಯ ಮಾತನ್ನೇ ಆಡುತ್ತಿದ್ದಾರೆ.

ಬೆಂಗಳೂರಿನ ಜನಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಿದೆ. ಹೊಟ್ಟೆಪಾಡಿಗಾಗಿ ಮತ್ತು ನೀರಿನ ಕೊರತೆಯಿಂದಾಗಿ ಹಳ್ಳಿಗಾಡಿನಿಂದ, ನಮ್ಮದೇ ರಾಜ್ಯದ ಬೇರೆಬೇರೆ ಭಾಗಗಳಿಂದ ಮಾತ್ರವಲ್ಲದೆ ನಾನಾ ರಾಜ್ಯಗಳಿಂದಲೂ ಅಸಂಖ್ಯಾತ ಜನರು ಬೆಂಗಳೂರನ್ನು ಆಶ್ರಯಿಸಿ ಬರುತ್ತಲೇ ಇದ್ದಾರೆ.

ಬೆಂಗಳೂರಿನ ನೀರಿನ ಬವಣೆ ನಿವಾರಣೆಗೆ ತಜ್ಞರ ಸಲಹೆಯೆಂದರೆ ಮಳೆನೀರು ಸಂಗ್ರಹ – ಒಂದು, ಕೆರೆಗಳಲ್ಲಿ ಹೂಳೆತ್ತಿ ಅಭಿವೃದ್ಧಿಪಡಿಸಿ ನೀರು ಸಂಗ್ರಹ; ಎರಡು, ಕಟ್ಟಡಗಳಲ್ಲಿ ಮಳೆನೀರು ಕೊಯ್ಲು. ಇದರಿಂದ ಸಾಕಷ್ಟು ನೀರು ಭೂಮಿಯಲ್ಲಿ ಇಂಗಿ ಜಲಮಟ್ಟ ಮೇಲೇರಿ ಬಾವಿ-ಬೋರ್‍ವೆಲ್‍ಗಳಲ್ಲೂ ನೀರು ಬರುತ್ತದೆ. ಇದು ಅನಿವಾರ್ಯ. ಇಷ್ಟರಲ್ಲಾಗಲೇ ಕೆರೆಗಳ ಹೂಳೆತ್ತಿ ಅಭಿವೃದ್ಧಿಪಡಿಸಿ ಮಳೆನೀರು ಸಂಗ್ರಹಕ್ಕೆ ಸಿದ್ಧವಾಗಿರಬೇಕಿದ್ದ ಕೆರೆಗಳು ಹಾಗೇ ಇದ್ದಾವೆ.

ಜನಪ್ರತಿನಿಧಿಗಳಿಗೆ ತಮ್ಮ ಏರಿಯದ ಕೆರೆಗಳನ್ನು ನೀರಿನ ಸಂಗ್ರಹಕ್ಕೆ ಸಿದ್ಧ ಮಾಡುವ ತರಾತುರಿಯೇ ಇಲ್ಲ. ಕೋರ್ಟು ಎಷ್ಟು ಚಾಟಿ ಬೀಸಿದರೂ ಇವರ ದಪ್ಪ ಚರ್ಮಕ್ಕೆ ನಾಟುವುದೇ ಇಲ್ಲ. ಯಾಕಿದು ಹೀಗೆ? ಕೆರೆ ಜಾಗ ಒತ್ತುವರಿ ಮಾಡಿಕೊಂಡಿರುವ ಪ್ರಭಾವಿಗಳು-ಬಲಾಢ್ಯರಿಂದ ಅದನ್ನು ಬಿಡಿಸಿಕೊಳ್ಳಬೇಕಾಗುತ್ತೆ, ಅದು ಇವರಿಗೆ ಬೇಡವಾಗಿದೆಯಾ?

ಹಲವೆಡೆ ಏರಿಯದ ಜನರು ಸೇರಿ ತಾವೇ ದುರಸ್ತಿ, ಹೂಳೆತ್ತುವುದು ಮಾಡಿಕೊಂಡಿದ್ದಾರೆ. ಯುವ ಸಾಫ್ಟ್‍ವೇರ್ ಇಂಜಿನಿಯರ್ ಒಬ್ಬರು ತಮ್ಮ ಖರ್ಚಿನಿಂದಲೇ ಕೆರೆಗಳನ್ನು ರಿಪೇರಿ ಮಾಡಿಸುತ್ತಿರುವುದು, ಜನಾನುರಾಗಿ ವ್ಯಕ್ತಿಯೊಬ್ಬರು ಎಷ್ಟೋ ಬಾವಿ ತೋಡಿಸುವ ಪಣ ತೊಟ್ಟು ತಮ್ಮಷ್ಟಕ್ಕೆ ಆ ಕೆಲಸ ಮಾಡುತ್ತಿರುವುದು ಇವೆಲ್ಲ ಪತ್ರಿಕೆಗಳಲ್ಲಿ ವರದಿಯಾಗುತ್ತಿರುತ್ತವೆ; ಇಷ್ಟು ದಿನ ಬಂದ ಮಳೆಗೆ ಅವೆಲ್ಲ ತುಂಬಿವೆ. ಆದರೆ ಜನಪ್ರತಿನಿಧಿಗಳು-ಅಧಿಕಾರಸ್ತರು ಇಂತಹ ಕೆಲಸ ಮಾಡಿಸಿದ್ದನ್ನು ಓದಿದ್ದು ನೆನಪಿಲ್ಲ! ಇನ್ನೂ ಕೆಲವು ಕೆರೆಗಳು ರಿಪೇರಿ ಆಗಿ ನೀರು ಸಂಗ್ರಹಿಸಲಿ ಎಂಬ ಕಾರಣಕ್ಕೋ ಎಂಬಂತೆ ನಮ್ಮ ಮುಂಗಾರು ನಾಕ್ನಾಕೇ ದಿನ ಹಿಂದೆ ಸರಿಯುತ್ತಿದೆ.

ಇನ್ನು, ಕಟ್ಟಡಗಳಲ್ಲಿ ಮಳೆನೀರು ಕೊಯ್ಲಿನ ವಿಚಾರಕ್ಕೆ ಬಂದರೆ, ಜನರು ಯಾಕೋ ಆ ಬಗ್ಗೆ ಕಾಳಜಿನೇ ವಹಿಸುತ್ತಿಲ್ಲ. ಹೊಸ ಕಟ್ಟಡಗಳಲ್ಲಿ ಮಳೆನೀರು ಕೊಯ್ಲಿನ ವ್ಯವಸ್ಥೆಯನ್ನು ಸರಕಾರ ಕಡ್ಡಾಯಗೊಳಿಸಿ ಕಾಯ್ದೆ ಮಾಡಿ ತನ್ನ ‘ಕರ್ತವ್ಯ ಪೂರೈಸಿ’ ಹಲವು ವರ್ಷಗಳೇ ಸಂದುವು. ಆದರೆ ಬೇಕಾದಷ್ಟು ಬಹುಮಹಡಿ ವಸತಿ ಸಮುಚ್ಚಯಗಳು, ಸರಕಾರಿ ಕಟ್ಟಡಗಳಲ್ಲೇ ಇದನ್ನು ಅಳವಡಿಸಿಲ್ಲ. ಅವರು ಅದಕ್ಕಾಗಿ ದಂಡ ಕಟ್ಟುತ್ತಾರೆ ಹೊರತು ಮಳೆನೀರು ಕೊಯ್ಲು ಮಾಡುತ್ತಿಲ್ಲ. ಯಾಕೆ?

ಮಿಕ್ಕ ರಾಜ್ಯಗಳಲ್ಲಿ ಇದೆಲ್ಲ ಹೇಗೆ ನಡೆಯುತ್ತಿದೆ? ನೆರೆ ರಾಜ್ಯ ತಮಿಳುನಾಡಿನಲ್ಲಿ ಜಯಲಲಿತಾ ಸಿಎಂ ಆಗಿದ್ದಾಗ ಎಷ್ಟು ಕಟ್ಟುನಿಟ್ಟಾಗಿ ಮತ್ತು ಕ್ರಮಬದ್ಧ ವೃತ್ತಿಪರತೆಯಿಂದ ಈ ಕೆಲಸ ಮಾಡಿಸುತ್ತಿದ್ದರೆಂದರೆ, ಮನೆ ಕಟ್ಟುವ ಪರವಾನಗಿ ಬೇಕಿರುವವರಿಂದ ಸರಕಾರ ಅಥವಾ ಸಂಬಂಧಿತ ಸ್ಥಳೀಯ ಆಡಳಿತಗಳೇ ಮಳೆನೀರು ಕೊಯ್ಲಿನ ವ್ಯವಸ್ಥೆಗೆ ನಿಗದಿತ ಹಣ ಕಟ್ಟಿಸಿಕೊಂಡು ಅದರ ವ್ಯವಸ್ಥೆ ಮಾಡುವಂತೆ ಕಡ್ಡಾಯ ಮಾಡಲಾಗಿತ್ತು. ಹಾಗೆಯೇ ಬ್ಯಾಂಕಿನಿಂದ ಕೃಷಿ ಸಾಲ ಬೇಕಿದ್ದಲ್ಲಿ ಕೃಷಿ ಹೊಂಡ ನಿರ್ಮಿಸಲೇ ಬೇಕಿತ್ತು. ನಮ್ಮಲ್ಲೇಕೆ ಇಂತಹ ಕ್ರಮಗಳನ್ನು ಕಟ್ಟುನಿಟ್ಟಾಗಿ ಅಳವಡಿಸುವುದಿಲ್ಲ?

ಬಹುಮಹಡಿ ಕಟ್ಟಡಗಳ ಹಾಗೂ ದೊಡ್ಡದೊಡ್ಡ ಮನೆಗಳ ನಿವಾಸಿಗಳು ಎಂದಾದರೂ ನೀರಿಗಾಗಿ ಕೊಡ ಹಿಡಿದು ಕ್ಯೂ ನಿಲ್ಲುವುದು ಇದೆಯಾ? ಇಲ್ಲ. ಆ ಮನೆಗಳ ಸಂಪುಗಳೆಲ್ಲ ರಾತ್ರಿಯೇ ತುಂಬಿ ನೀರೆಲ್ಲ ಹರಿದುಹೋಗುತ್ತಿರುತ್ತದೆ. ಆದ್ದರಿಂದಲೇ ಅವರಿಗೆ ನೀರು ಕೊಯ್ಲಿನ ಜರೂರತ್ತು ಕಾಣುತ್ತಿಲ್ಲ. [ನಾವು ವಾಸ ಇರುವ ಕಟ್ಟಡದಲ್ಲಿ ಮಳೆನೀರು ಕೊಯ್ಲಿನಿಂದ ಬೋರ್‍ವೆಲ್‍ಗೆ ನೀರು ಮರುಪೂರಣ ವ್ಯವಸ್ಥೆಯಿದೆ. ಆದರೆ ನಮ್ಮ ಪಕ್ಕದ ಕಟ್ಟಡದಲ್ಲಿ ಆ ವ್ಯವಸ್ಥೆ ಮಾಡಿರಲಿಲ್ಲ. ಅವರ ಬೋರ್‍ವೆಲ್ ಬತ್ತಿಹೋಗಿ, ಟ್ಯಾಂಕರ್ ನೀರು ಸಹ ಸಾಕಾಗದೆ, ಮಾಲೀಕರು ನಿವಾಸಿಗಳಿಗೆ ನೀರಿನ ‘ರೇಶನ್’ ಅಳವಡಿಸಿದ್ದಾರೆ. ಹೀಗಾದ ನಂತರ ಈಗ ಮಳೆನೀರು ಕೊಯ್ಲಿನ ವ್ಯವಸ್ಥೆ ಮಾಡಿದ್ದಾರೆ; ಆದರೆ ಆ ನಂತರ ಮಳೆಯೇ ಬಂದಿಲ್ಲ ಇನ್ನೂ!]

ಆದ್ದರಿಂದ ಮಳೆನೀರು ಸಂಗ್ರಹ ಸುಗಮವಾಗಿ ಆಗಬೇಕೆಂದರೆ ಬರೀ ದಂಡ ಕಟ್ಟಿಸಿಕೊಳ್ಳುವುದಲ್ಲ. ದುಡ್ಡಿನಿಂದ ನೀರು ಉತ್ಪಾದನೆ ಆಗುವುದಿಲ್ಲ! ಮನೆ ನಿರ್ಮಾಣದ ಪರವಾನಗಿ ಕೊಡುವಾಗಲೇ ಮಳೆನೀರು ಕೊಯ್ಲಿಗೆ ದುಡ್ಡು ಕಟ್ಟಿಸಿಕೊಂಡು ಅಥಾರಿಟಿಗಳೇ ಅದನ್ನು ನಿರ್ಮಿಸುವ ವ್ಯವಸ್ಥೆಯಾಗಬೇಕು; ಅಥವಾ ಮಳೆನೀರು ಕೊಯ್ಲಿನ ವ್ಯವಸ್ಥೆ ಮಾಡದಿದ್ದರೆ ಅವರಿಗೆ ನೀರು ಪೂರೈಕೆಯನ್ನು ಬಂದ್ ಮಾಡುವ ನಿಬಂಧನೆಯೊಂದಿಗೇನೇ ಪರವಾನಗಿ ಕೊಡಬೇಕು ಮತ್ತು ಇದನ್ನು ಕಟ್ಟುನಿಟ್ಟಾಗಿ ಜಾರಿ ಮಾಡಬೇಕು.

ಈಗಾಗಲೇ ಬಹಳ ತಡವಾಗಿದೆ. ಈ ವರ್ಷದ ಬೇಸಿಗೆಯಲ್ಲಿ ಬೆಂಗಳೂರಿನ ಅದೆಷ್ಟೋ ಸಣ್ಣದೊಡ್ಡ ಬಹುಮಹಡಿ ಕಟ್ಟಡಗಳಲ್ಲಿನ ಬೋರ್‍ವೆಲ್‍ಗಳು ಒಣಗಿಹೋಗಿ ಟ್ಯಾಂಕರ್ ನೀರಿಗಾಗಿ ಪರದಾಡುವ ದೃಷ್ಯ ಕಾಮನ್ ಆಗಿತ್ತು. ಒಂದು ವೇಳೆ ಟ್ಯಾಂಕರುಗಳಿಗೇ ನೀರು ಸಿಗದೆ ಹೋದರೆ? ಧರ್ಮಸ್ಥಳ, ಉಡುಪಿ, ಸುಬ್ರಮಣ್ಯ, ಕೊಲ್ಲೂರು ಮುಂತಾದ ಪ್ರಖ್ಯಾತ ಯಾತ್ರಾಸ್ಥಳಗಳಲ್ಲೆಲ್ಲ ನೀರಿಗಾಗಿ ಹಾಹಾಕಾರದಂಥ ಪರಿಸ್ಥಿತಿ ನಿರ್ಮಾಣವಾಗಿದ್ದು ಜನರಿಗೂ ಅಧಿಕಾರಸ್ತರಿಗೂ ಎಚ್ಚರಿಕೆಯ ಗಂಟೆಯಾಗಬೇಕಿದೆ. ಮಳೆನೀರು ಸಂಗ್ರಹವನ್ನು ಗರಿಷ್ಠ ಪ್ರಮಾಣಕ್ಕೆ ಮಾಡಿರೆಂಬ ನಮ್ಮ ಜಲತಜ್ಞರ ಸಲಹೆಯನ್ನು ಎಲ್ಲರೂ ಪಾಲಿಸಿದರೆ ಮಾತ್ರ ಉಳಿಗಾಲ ಎಂದು ಅನ್ನಿಸುತ್ತಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಇರಾನ್ ಮೇಲೆ ದಾಳಿ : ಅಮೆರಿಕ ವಿಮಾನಗಳಿಗೆ ತನ್ನ ವಾಯುಪ್ರದೇಶ ಮುಚ್ಚಿದ ಸ್ಪೇನ್

ಇರಾನ್ ಮೇಲಿನ ದಾಳಿಗಳಲ್ಲಿ ಭಾಗಿಯಾಗಿರುವ ಅಮೆರಿಕದ ವಿಮಾನಗಳಿಗೆ ಸ್ಪೇನ್ ತನ್ನ ವಾಯುಪ್ರದೇಶವನ್ನು ನಿರ್ಬಂಧಿಸಿದೆ ಎಂದು ರಕ್ಷಣಾ ಸಚಿವೆ ಮಾರ್ಗರಿಟಾ ರೋಬಲ್ಸ್ (ಮಾ.30) ಸೋಮವಾರ ತಿಳಿಸಿದ್ದಾರೆ. ಜಂಟಿಯಾಗಿ ನಿರ್ವಹಿಸುವ ಸೇನಾ ನೆಲೆಗಳನ್ನು ಬಳಸಲು ಈ...

ಜನಗಣತಿ-2027 : ‘ಸ್ಥಿರ’ ಲಿವ್-ಇನ್ ಜೋಡಿಗೆ ವೈವಾಹಿಕ ಸ್ಥಾನಮಾನ

ತಮ್ಮ ಸಂಬಂಧ 'ಸ್ಥಿರ' ಎಂದು ಹೇಳಿಕೊಳ್ಳುವ ಲಿವ್-ಇನ್ ಜೋಡಿಗಳನ್ನು 2027ರ ಜನಗಣತಿಯಲ್ಲಿ ವಿವಾಹಿತ ದಂಪತಿಯೆಂದು ಪರಿಗಣಿಸಲಾಗುತ್ತದೆ ಎಂದು ವರದಿಯಾಗಿದೆ. ಜನಗಣತಿ ವೆಬ್‌ಸೈಟ್‌ನ FAQ (ಪದೇ ಪದೇ ಕೇಳಲಾಗುವ ಪ್ರಶ್ನೆಗಳು) ವಿಭಾಗದಲ್ಲಿ ಈ ಬಗ್ಗೆ ಸ್ಪಷ್ಟನೆ...

ಉನ್ನತ ಸಾಂಸ್ಥಿಕ ಹುದ್ದೆಗಳಲ್ಲಿ ‘ಬಹುಜನ’ ಪ್ರಾತಿನಿಧ್ಯದ ಕೊರತೆ: ವ್ಯವಸ್ಥಿತ ತಾರತಮ್ಯದ ರೂಪ ಎಂದ ರಾಹುಲ್ ಗಾಂಧಿ 

ಉನ್ನತ ಸಂಸ್ಥೆಗಳ ಹಿರಿಯ ನಾಯಕತ್ವದಲ್ಲಿ "ಬಹುಜನ" ಸಮುದಾಯಗಳಿಗೆ ಪ್ರಾತಿನಿಧ್ಯದ ಕೊರತೆಯಿದೆ ಎಂದು ರಾಹುಲ್ ಗಾಂಧಿ ಸೋಮವಾರ ಆರೋಪಿಸಿದ್ದಾರೆ. ಇದು ವ್ಯವಸ್ಥಿತ ತಾರತಮ್ಯದ ಒಂದು ರೂಪವಾಗಿದ್ದು ಅದನ್ನು ಪರಿಹರಿಸಬೇಕು ಎಂದು ಹೇಳಿದ್ದಾರೆ.  ಲೋಕಸಭೆಯ ವಿರೋಧ ಪಕ್ಷದ...

ಗಾಯಗಳ ತೀವ್ರತೆಯಿಂದಾಗಿ ನೌಕಾಪಡೆಯ ಮುಖ್ಯಸ್ಥ ತಂಗ್ಸಿರಿ ಸಾವನ್ನಪ್ಪಿದ್ದಾರೆ: ದೃಢಪಡಿಸಿದ ಇರಾನ್

ತಾನು ನಡೆಸಿದ ದಾಳಿಯಿಂದ ಇರಾನ್‌ ನೌಕಾಪಡೆಯ ರಿಯರ್ ಅಡ್ಮಿರಲ್ ಅಲಿರೆಜಾ ತಂಗ್ಸಿರಿ ಸಾವನ್ನಪ್ಪಿದ್ದಾರೆ ಎಂದು ಕಳೆದ ಗುರುವಾರ (ಮಾ.26) ಇಸ್ರೇಲ್ ಹೇಳಿಕೊಂಡಿತ್ತು. ಸುದ್ದಿ ಖಷಿತಪಡಿಸಿರುವ ಇರಾನ್, ದಾಳಿಯಿಂದ ಸಂಭವಿಸಿದ ತೀವ್ರ ಗಾಯಗಳಿಂದ ತಂಗ್ಸಿರಿ...

ಬಹುಭಾಷಾ ನಟ ಪ್ರಕಾಶ್ ರಾಜ್‌ ತಾಯಿ ಸ್ವರ್ಣಲತಾ ನಿಧನ

ಬಹುಭಾಷಾ ನಟ ಪ್ರಕಾಶ್ ರಾಜ್ ಅವರ ತಾಯಿ ಸ್ವರ್ಣಲತಾ ಅವರು ತಮ್ಮ 86 ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಅವರು ವಯೋಸಹಜ ಅನಾರೋಗ್ಯದಿಂದ ಸಾವನ್ನಪ್ಪಿದ್ದಾರೆ. ನಟ ಪ್ರಕಾಶ್‌ ರಾಜ್‌ ಅವರು ತಮ್ಮ ತಾಯಿಯೊಂದಿಗೆ ಇದ್ದ...

ಮುಂಬೈ: ಸ್ವ-ಘೋಷಿತ ದೇವಮಾನವ ಅಶೋಕ್ ಖರತ್ ವಿರುದ್ಧ ಆಕ್ರೋಶ: ದಾದರ್‌ನಲ್ಲಿ ಮೂಢನಂಬಿಕೆ ವಿರೋಧಿ ಅಭಿಯಾನ

ಮುಂಬೈ: ಸ್ವಯಂ ಘೋಷಿತ ದೇವಮಾನವ ಅಶೋಕ್ ಖರತ್ ಅವರ ಚಟುವಟಿಕೆಗಳ ಸುತ್ತ ವ್ಯಾಪಕ ಆಕ್ರೋಶ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ, ವಿವೇಕ್ ಜಾಗರ್ ಉಪಕ್ರಮದಡಿಯಲ್ಲಿ ಮಹಾರಾಷ್ಟ್ರ ಅಂಧಾಶ್ರದ್ಧ ನಿರ್ಮೂಲನ ಸಮಿತಿ (MANS) ಮಹಾರಾಷ್ಟ್ರ ಘಟಕವು ಭಾನುವಾರ...

ನೋಟಿಸ್ ನೀಡದೆ ಮಸೀದಿ ಬಂದ್; ಉತ್ತರ ಪ್ರದೇಶ ಸರ್ಕಾರವನ್ನು ಪ್ರಶ್ನಿಸಿದ ಅಲಹಾಬಾದ್ ಹೈಕೋರ್ಟ್

ಪೂರ್ವ ಸೂಚನೆ ನೀಡದೆ ಅಥವಾ ಮಾಲೀಕರಿಗೆ ವಿಚಾರಣೆಗೆ ಅವಕಾಶ ನೀಡದೆ ಪ್ರಾರ್ಥನಾ ಸ್ಥಳಕ್ಕೆ ಬೀಗ ಹಾಕಬಹುದೇ ಎಂಬ ಬಗ್ಗೆ ವಿವರಣೆ ನೀಡಬೇಕು ಎಂದು ಅಲಹಾಬಾದ್ ಹೈಕೋರ್ಟ್ ಉತ್ತರ ಪ್ರದೇಶ ಸರ್ಕಾರವನ್ನು ಕೇಳಿದೆ. ಮುಜಫರ್‌ನಗರದಲ್ಲಿ ಮಸೀದಿಯನ್ನು...

ಬಿಜು ಪಟ್ನಾಯಕ್ ಕುರಿತು ಹೇಳಿಕೆ : ಬಿಜೆಪಿ ಸಂಸದ ನಿಶಿಕಾಂತ್ ದುಬೆ ವಿರುದ್ಧ ತೀವ್ರ ಆಕ್ರೋಶ

ಒಡಿಶಾದ ಮಾಜಿ ಮುಖ್ಯಮಂತ್ರಿ ಬಿಜು ಪಟ್ನಾಯಕ್ ಅವರ ಕುರಿತು ಬಿಜೆಪಿ ಸಂಸದ ನಿಶಿಕಾಂತ್ ದುಬೆ ನೀಡಿರುವ ಹೇಳಿಕೆಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ. ದುಬೆ ನೇತೃತ್ವದ ಸಂವಹನ ಮತ್ತು ಐಟಿ ಕುರಿತ ಸಂಸದೀಯ ಸ್ಥಾಯಿ...

ಮುರ್ಷಿದಾಬಾದ್ ರಾಮನವಮಿ ಹಿಂಸಾಚಾರ; ಆರ್‌ಎಸ್‌ಎಸ್ ನಾಯಕ ಸೇರಿದಂತೆ 30 ಜನರ ಬಂಧನ

ಮಾರ್ಚ್ 27 ರಂದು ಮುರ್ಷಿದಾಬಾದ್ ಜಿಲ್ಲೆಯ ಜಂಗಿಪುರ ಉಪವಿಭಾಗದ ರಘುನಾಥಗಂಜ್‌ನಲ್ಲಿ ನಡೆದ ರಾಮನವಮಿ ಮೆರವಣಿಗೆ ಹಿಂಸಾಚಾರಕ್ಕೆ ತಿರುಗಿದ ನಂತರ ಸುಮಾರು 30 ಜನರು ಗಾಯಗೊಂಡರು. ಈ ಘಟನೆಯು ವ್ಯಾಪಕ ಉದ್ವಿಗ್ನತೆಗೆ ಕಾರಣವಾಗಿದ್ದು, ಅಂಗಡಿ...

ದೆಹಲಿ ಗಲಭೆ ಪ್ರಕರಣ: ಮಧ್ಯಂತರ ಜಾಮೀನು ಅವಧಿ ಅಂತ್ಯ; ಇಂದು ತಿಹಾರ್ ಜೈಲಿಗೆ ಮರಳಲಿರುವ ಶಾರ್ಜೀಲ್ ಇಮಾಮ್

2020 ರ ಈಶಾನ್ಯ ದೆಹಲಿ ಗಲಭೆಯ ಹಿಂದಿನ ದೊಡ್ಡ ಪಿತೂರಿ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ನ್ಯಾಯಾಲಯವು ನೀಡಿದ್ದ 10 ದಿನಗಳ ಮಧ್ಯಂತರ ಜಾಮೀನು ಅವಧಿ ಮುಗಿದ ಹಿನ್ನೆಲೆಯಲ್ಲಿ ವಿದ್ಯಾರ್ಥಿ ಕಾರ್ಯಕರ್ತ ಶಾರ್ಜೀಲ್ ಇಮಾಮ್...