Homeಅಂಕಣಗಳುಸಂಪಾದಕೀಯ | ಕಂಡದ್ದು ಕಂಡಹಾಗೆಯುಜಿಸಿ ರದ್ಧತಿ ಎಂಬುದು ಉನ್ನತ ಶಿಕ್ಷಣವನ್ನು ಕೇಂದ್ರೀಕೃತ ವ್ಯವಸ್ಥೆಗೆ ತರುವ ಹುನ್ನಾರ

ಯುಜಿಸಿ ರದ್ಧತಿ ಎಂಬುದು ಉನ್ನತ ಶಿಕ್ಷಣವನ್ನು ಕೇಂದ್ರೀಕೃತ ವ್ಯವಸ್ಥೆಗೆ ತರುವ ಹುನ್ನಾರ

- Advertisement -
- Advertisement -

ಸಾರ್ವಜನಿಕ ಉತ್ಪಾದನೆ ಮತ್ತು ಸೇವಾಕ್ಷೇತ್ರಗಳನ್ನು ಖಾಸಗೀಕರಣಗೊಳಿಸುವುದರಿಂದ ಮಾತ್ರ ದೇಶದಲ್ಲಿ ಶೀಘ್ರಗತಿಯ ಅಭಿವೃದ್ಧಿಯನ್ನು ತರಬಹುದೆಂಬ ನವಉದಾರೀಕರಣದ ನೀತಿ ಜಾರಿಗೆ ಬಂದಾಗಿನಿಂದಲೂ ಶಿಕ್ಷಣ ಅದರಲ್ಲೂ ಉನ್ನತ ಶಿಕ್ಷಣ ಹಳಿತಪ್ಪುತ್ತಾ ಬಂದಿದೆ. ಈ ನೀತಿಯ ಭಾಗವಾಗಿ ಶಿಕ್ಷಣ ಕ್ಷೇತ್ರವನ್ನು ಮೆರಿಟ್ ಮತ್ತು ನಾನ್ ಮೆರಿಟ್ ಎಂಬ ಎರಡು ಭಾಗವನ್ನಾಗಿ ವಿಂಗಡಿಸಲಾಯಿತು. ಇದರ ಪ್ರಕಾರ ನಾನ್‌ಮೆರಿಟ್ ಗುಂಪಿನಲ್ಲಿರುವ ಎಲ್ಲಾ ಕ್ಷೇತ್ರಗಳಲ್ಲೂ ಖಾಸಗೀಕರಣವನ್ನು ತರುವ ಪ್ರಯತ್ನ ಮೊದಲಾಯಿತು. ಉನ್ನತ ಶಿಕ್ಷಣವನ್ನೂ ನಾನ್‌ಮೆರಿಟ್ ಕ್ಷೇತ್ರಕ್ಕೆ ಸೇರಿಸಿದ್ದರಿಂದ ಆರ್ಥಿಕ ಅನುದಾನವನ್ನು ಹಂತಹಂತವಾಗಿ ಕಡಿತಗೊಳಿಸಿಕೊಂಡು ಬರಲಾಯಿತು. ಇದರಿಂದ ಖಾಸಗೀ ಉದ್ಯಮಿಗಳು ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಬಂಡವಾಳ ಹೂಡಲು ಸಾಧ್ಯವಾಗುತ್ತದೆ ಎನ್ನುವ ವಾದವನ್ನು ಮುಂದೊಡ್ಡಲಾಯಿತು. ಇದರ ನೇರ ಪರಿಣಾಮ ಎಂದರೆ ಶಿಕ್ಷಣ ಒಂದು ಸರಕಾಗಿ ಮಾರ್ಪಟ್ಟು, ವಿದ್ಯಾರ್ಥಿಗಳು ಗ್ರಾಹಕರಾಗಿ ಬದಲಾದರು. ಇಲ್ಲಿ ಜ್ಞಾನ ಎಂದರೆ ಕೌಶಲ್ಯ, ಮಾಹಿತಿ ಸಂಗ್ರಹಣೆ ಮತ್ತು ಸಂಸ್ಕರಣೆ ಮಾತ್ರ ಎಂದಾಯಿತು. ಹೊಸ ಖಾಸಗೀ ವಿವಿಗಳು ವಿಜೃಂಭಿಸತೊಡಗಿ ಒಂದು ಕಾಲಕ್ಕೆ ಹೆಸರು ಪಡೆದಿದ್ದ ಸರ್ಕಾರಿ ವಿವಿಗಳು ತಮ್ಮ ಘನತೆ ಮತ್ತು ಆಕರ್ಷಣೆಯನ್ನು ಕಳೆದು ಕೊಂಡವು. ಕಾಲೇಜು ಮತ್ತು ವಿವಿಗಳಲ್ಲಿ ಕೆಲಸ ಮಾಡುವವರಲ್ಲಿ ಅರೆಕಾಲಿಕ ಅಥವಾ ತಾತ್ಕಾಲಿಕ ಹುದ್ದೆಗಳಲ್ಲಿರುವವರ ಸಂಖ್ಯೆ ಹೆಚ್ಚಾಯಿತು. ಹೆಚ್ಚಿನ ಸಂಬಳ ಸಿಗದ ಕಾರಣ ಪ್ರತಿಭಾವಂತರು ಶಿಕ್ಷಣ ಕ್ಷೇತ್ರದಿಂದ ವಿಮುಖರಾದರು.

ಜ್ಞಾನದ ಹಸಿವು, ಬೆಳವಣಿಗೆ, ಹೊಸಜ್ಞಾನ ಶಾಖೆಗಳ ಆವಿಷ್ಕಾರ ಎಲ್ಲವೂ ಕುಸಿಯುತ್ತಾ ಹೋಯಿತು. ಉನ್ನತ ಶಿಕ್ಷಣದ ಬಗ್ಗೆ ಮಹತ್ವದ ಧ್ಯೇಯಗಳನ್ನು ರೂಪಿಸಿದ್ದ ರಾಧಾಕೃಷ್ಣನ್, ಕೊಠಾರಿ ಇತ್ಯಾದಿ ಕಮಿಷನ್‌ಗಳ ವರದಿಯನ್ನು ಕಾರ್ಪೊರೇಟ್ ಬಂಡವಾಳಶಾಹಿಗೆ ಒಪ್ಪಿಸಲಾಗಿದೆ. ರಾಧಾಕೃಷ್ಣನ್, ಕೊಠಾರಿಗಳ ಬದಲು, ಅಂಬಾನಿ, ಬಿರ್ಲಾ ಮತ್ತು ನಾರಾಯಣಮೂರ್ತಿಗಳು ಉನ್ನತ ಶಿಕ್ಷಣದ ಯೋಜನಾ ಆಯೋಗದಲ್ಲಿ ಪ್ರವೇಶ ಪಡೆದಿದ್ದಾರೆ. ಲಾಭದಾಯಕವಾದ ಶಿಕ್ಷಣ ಸಂಸ್ಥೆಗಳನ್ನು ನಡೆಸುವುದು ಸಂವಿಧಾನದ ಮೂಲ ಆಶಯಕ್ಕೆ ವಿರುದ್ಧವಾದರೂ, ಈಗ ಅದೇ ಮೇಲುಗೈ ಸಾಧಿಸಿದೆ. ಸಧ್ಯದಲ್ಲಿ ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಖಾಸಗೀ ಸಂಸ್ಥೆಗಳ ಪಾಲು ಶೇ.59ರಷ್ಟಾಗಿದೆ.

ಇವೆಲ್ಲಾ ಬೆಳವಣಿಗೆಗಳ ಹಿಂದೆ ಉನ್ನತ ಶಿಕ್ಷಣ ಸಾರ್ವಜನಿಕ ಸೇವೆ ಅಲ್ಲ ಎನ್ನುವ ತತ್ವ ಅಡಗಿದೆ. ಇದರರ್ಥ ಈಗ ಅದೊಂದು ಮೌಲ್ಯಾಧಾರಿತ ಸರಕು. ಅಂದರೆ, ಅದನ್ನು ಬಳಸುವವರು ಅದಕ್ಕೆ ತಕ್ಕನಾದ ಶುಲ್ಕ ನಿಡಿ ಅದನ್ನು ಉಪಯೋಗಿಸಬೇಕು. ಉನ್ನತ ಶಿಕ್ಷಣಕ್ಕೆ ನಾಲ್ಕು ಮೂಲಭೂತ ಲಕ್ಷಣಗಳು ಇರ

ಬೇಕು. ಇಂದು, ಹೊಸ ಜ್ಞಾನದ ಅನ್ವೇಷಣೆ. ಎರಡು, ಅದಕ್ಕೆ ಬೇಕಾದ ತರಗತಿ, ಮೂರು, ಸಾಮಾಜಿಕ ಸೇವೆಗಳಿಗೆ ಶಿಕ್ಷಣವನ್ನು ಬಳಸಿಕೊಳ್ಳುವುದು ಹೇಗೆ ಎನ್ನುವ ವಿವೇಕ; ನಾಲ್ಕು, ವಿಮರ್ಶಾತ್ಮಕ ಧೋರಣೆಯನ್ನು ಬೆಳೆಸುವುದು. ಇದರಲ್ಲಿ ಕಡೆಯದು ಅತ್ಯಂತ ಪ್ರಮುಖವಾದ ಸಾಮಾಜಿಕ ನೈತಿಕತೆಯನ್ನು ಬೆಳೆಸುವುದೂ ಸೇರಿದೆ.
ಆದರೆ ಉನ್ನತ ಶಿಕ್ಷಣವನ್ನು ಒಂದು

 ವ್ಯಾಪಾರವನ್ನಾಗಿಸಿದಾಗ ಈ ನಾಲ್ಕು ಅಂಶಗಳೂ ಮರೆಯಾಗುತ್ತವೆ. ಜ್ಞಾನದ ಅನ್ವೇಷಣೆ ಅಂದರೆ ಇಲ್ಲಿ ಹೊಸ ಬಂಡವಾಳವನ್ನು ಸ್ಥಾಪಿಸಲು ಅಥವಾ ಇರುವ ಹುಡಿಕೆಯನ್ನು ವೃದ್ಧಿಸಲು ಬೇಕಾದ ಕೌಶಲ್ಯವಾಗಿಬಿಡುತ್ತದೆ. ತರಬೇತಿ ಎಂದರೆ, ಕೌಶಲ್ಯ ಪಾಠ ಮಾಡುವ, ಕಲಿಯುವ ತಂತ್ರಜ್ಞಾನಕ್ಕೆ ಸೀಮಿತವಾಗುತ್ತದೆ. ಸಾಮಾಜಿಕ ಸೇವೆಗಳ ಬದಲು ಹೊಸ ಸರಕನ್ನು ಸೃಷ್ಟಿಸುವುದೇ ಮುಖ್ಯವಾಗುತ್ತದೆ. ವಿಮರ್ಶಾತ್ಮಕ ಧೋರಣೆ ಬೆಳೆಸುವುದಂತೂ ನವ ಶಿಕ್ಷಣ ನೀತಿಯಲ್ಲಿ ಸಂಪೂರ್ಣ ನಿಷೇಧಕ್ಕೆ ಒಳಪಡುತ್ತದೆ.

ಇತ್ತೀಚೆಗೆ ಯುಜಿಸಿ ಹೊರಡಿಸಿರುವ ಸುತ್ತೋಲೆ ಪ್ರಕಾರ ಇನ್ನು ಮುಂದೆ ವಿವಿ ಅಧ್ಯಾಪಕರು ಸರ್ಕಾರದ ನೀತಿಗಳನ್ನು ಕುರಿತು ವಿಮರ್ಶೆ ಮಾಡುವಂತಿಲ್ಲ. ಇದರಿಂದ ಈಗಾಗಲೇ ಸೊಂಟ ಬಗ್ಗಿರುವ ಅಧ್ಯಾಪಕರು ಇನ್ನು ಮುಂದೆ ತೆವಳುವಂತಾಗುತ್ತದೆ. ಈ ನೀತಿ ಕೇವಲ ಅಧ್ಯಾಪಕರ ಧ್ವನಿಯನ್ನು ದಮನಮಾಡುವುದಿಲ್ಲ; ವಿದ್ಯಾರ್ಥಿಗಳ ಯೋಜನಾ ಶಕ್ತಿಯನ್ನೇ ಕುಂಠಿಸುತ್ತದೆ.

ಇದಕ್ಕಿಂತಲೂ ದೊಡ್ಡ ಹೊಡೆತವೆಂದರೆ, ಈ ಖಾಸಗೀಕರಣ ಉಳ್ಳವರಿಗಾಗಿ ಮಾತ್ರ ತೆರೆದುಕೊಳ್ಳುವುದರಿಂದ ದೇಶದ ಬಹುತೇಕ ಯುವಜನತೆ ಉನ್ನತ ಶಿಕ್ಷಣದಿಂದ ಹೊರಗುಳಿಯುತ್ತಾರೆ ಅಥವಾ ಕಳಪೆ ಕಾಲೇಜು/ವಿವಿಗಳಲ್ಲಿ ಮಾತ್ರ ಕಲಿಯುವಂತಾಗುತ್ತದೆ. ಕಾಲೇಜು/ವಿವಿಗಳ ಸ್ವಾಯತ್ತತೆ ಮೇಲೆ ಈಗ ವಿಶೇಷ ಗಮನ ನೀಡಲಾಗುತ್ತಿದೆ. ಅದನ್ನು ಬಯಸದೇ ಇದ್ದ ಸಂಸ್ಥೆಗಳ ಮೇಲೂ ಸ್ವಾಯತ್ತತೆಯನ್ನು ಹೇರಲಾಗುತ್ತಿದೆ. ಸ್ವಾಯತ್ತ ಶಿಕ್ಷಣ ಸಂಸ್ಥೆಗಳು ತಮಗಿಷ್ಟ ಬಂದ ಶಿಕ್ಷಣ ಕ್ರಮ, ಸೇವಾ ನಿಯಮ, ಶುಲ್ಕ ಇತ್ಯಾದಿಗಳನ್ನು ಅಳವಡಿಸಿಕೊಳ್ಳಬಹುದಾದ್ದರಿಂದ ಶಿಕ್ಷಣದ ಮೂಲ ಧ್ಯೇಯಗಳಲ್ಲಿ ಒಂದಾದ ಒಳಗೊಳ್ಳುವಿಕೆಗೆ ಧಕ್ಕೆ ಬರುತ್ತದೆ.

ಇವೆಲ್ಲಕ್ಕೂ ಬರೆ ಇಟ್ಟಂತೆ ಇದೇ ವರ್ಷದ ಜೂನ್ 27ರಂದು ಯುಜಿಸಿಯನ್ನು ವಿಸರ್ಜಿಸಿ ಅದರ ಜಾಗದಲ್ಲಿ ‘ಭಾರತೀಯ ಉನ್ನತ ಶಿಕ್ಷಣ ಆಯೋಗ’ವನ್ನು ಸ್ಥಾಪಿಸುವ ಹೊಸ ಮಸೂದೆಯನ್ನು ಕೇಂದ್ರ ಸರ್ಕಾರ ಮುಂದಿಟ್ಟಿದೆ. ಇದರಿಂದ ಉನ್ನತ ಶಿಕ್ಷಣ ಮತ್ತಷ್ಟು ಬಲಗೊಂಡು ಹೆಚ್ಚಿನ ಸ್ವಾಯತ್ತತೆಯನ್ನು ಪಡೆದುಕೊಳ್ಳುತ್ತದೆ ಎಂದು ಹೇಳಲಾಗಿದೆ. ಆದರೆ ಒಂದು ಕಡೆ ಸ್ವಾಯತ್ತತೆಯ ಮಾತನ್ನಾಡುತ್ತಲೇ ಇನ್ನೊಂದು ಕಡೆ ಇಡೀ ಉನ್ನತ ಶಿಕ್ಷಣವನ್ನು ಒಂದು ಕೇಂದ್ರೀಕೃತ ವ್ಯವಸ್ಥೆಗೆ ತರುವ ಹುನ್ನಾರ ಇದು. ಇದರಲ್ಲಿ ರಾಜ್ಯದ ವಿವಿಗಳು ಮಾತ್ರ ಕಾಲೇಜು ಆಡಳಿತ ಮಂಡಳಿಗಳಿಗೆ ಯಾವ ಅಧಿಕಾರವೂ ಇರುವುದಿಲ್ಲ. ಇಲ್ಲಿಯವರೆಗೆ ಆಡಳಿತ ಮಾತ್ರ ಹಣಕಾಸಿನ ನಿರ್ವಹಣೆ-ಇವೆರಡನ್ನು ಯುಜಿಸಿ ನೋಡಿಕೊಳ್ಳುತ್ತಿತ್ತು. ಈಗ ಅದನ್ನು ಬೇರ್ಪಡಿಸಲಾಗಿದೆ. ಹಣಕಾಸಿನ ನಿರ್ವಹಣೆ ಇನ್ನುಮುಂದೆ ನೇರವಾಗಿ ಕೇಂದ್ರದ ಮಾನವ ಸಂಪನ್ಮೂಲ ಇಲಾಖೆ ನೋಡಿಕೊಳ್ಳುತ್ತದೆ. ಅರ್ಥಾತ್ ಉನ್ನತ ಶಿಕ್ಷಣ ಸಂಸ್ಥೆಗಳು ಇನ್ನು ಮುಂದೆ ನೇರವಾಗಿ ಕೇಂದ್ರ ಮಾನವ ಸಂಪನ್ಮೂಲ ಇಲಾಖೆಯ ಮರ್ಜಿಯಲ್ಲಿರಬೇಕಾಗುತ್ತದೆ. ಇದು ಶಿಕ್ಷಣದಲ್ಲಿ ರಾಜಕೀಯ ಪಕ್ಷಗಳು ಮೂಗು ತೂರಿಸಲು ದಾರಿಯನ್ನು ಸುಗಮಗೊಳಿಸುತ್ತದೆ.

47ರಿಂದ ಇಲ್ಲಿಯವರೆಗೆ ಉನ್ನತ ಶಿಕ್ಷಣ ಕುರಿತು ಬಂದಿರುವ ವಿವಿಧ ಆಯೋಗಗಳ ವರದಿಗಳು ಹೊಸ ಶಿಕ್ಷಣ ನೀತಿಗಳು, ಮಸೂದೆಗಳನ್ನು ನೋಡಿದರೆ ದೊಡ್ಡ ಗೊಂದಲ ಎದ್ದು ಕಾಣುತ್ತದೆ. ಇಷ್ಟೆಲ್ಲಾ ಅಧ್ಯಯನ ವಿಶೇಷ ವರದಿಗಳಿದ್ದರೂ ನಮ್ಮ ದೇಶದ ಉನ್ನತ ಶಿಕ್ಷಣದ ಮಟ್ಟ ಕುಸಿಯುತ್ತಿದೆ. ಸೋಲಿಗೆ ಕೇವಲ ರಾಜಕೀಯ ಇಚ್ಛಾಶಕ್ತಿಯ ಕೊರತೆ ಕಾರಣ ಎಂದು ಹೇಳಿದರೆ ಏನನ್ನೂ ಹೇಳಿದಂತಾಗುವುದಿಲ್ಲ. ರಾಜಕೀಯ ಇಚ್ಛಾಶಕ್ತಿ ಖಾಸಗೀಕರಣದ ಕಡೆಗೆ ಒಂದಿರುವುದರಿಂದಲೇ ಶಿಕ್ಷಣದಲ್ಲಿ ಯಾವುದೇ ಕ್ರಾಂತಿಕಾರಕ ಬದಲಾವಣೆ ಆಗಿಲ್ಲ ಇಂದು ದೇಶದ ಕೆಲವು ಪ್ರಮುಖ ಶಿಕ್ಷಣ ಸಂಸ್ಥೆಗಳಾದ ಜೆಎನ್‌ಯು, ಹೈದರಾಬಾದ್, ದೆಹಲಿ ವಿವಿಗಳಲ್ಲಿ ವಿದ್ಯಾರ್ಥಿ ಸಮೂಹ ಎಚ್ಚೆತ್ತುಕೊಂಡಿದ್ದರೆ, ಪ್ರಭುತ್ವಕ್ಕೆ ಹೊಸ ಪ್ರಶ್ನೆಗಳನ್ನು ಕೇಳುತ್ತಿದೆ ಎಂದಾದರೆ, ಅದು ಅಲ್ಲಿನ ಪಠ್ಯಕ್ರಮ ಅಥವಾ ಕಲಿಕಾ ಪದ್ದತಿಯಿಂದ ಪಡೆದ ಎಚ್ಚರವಲ್ಲ ಬದಲಿಗೆ ವಿದ್ಯಾರ್ಥಿಗಳು ತರಗತಿಯ ಹೊರಗಡೆ ಜನಸಮುದಾಯವನ್ನು ನೋಡಿ ಕಲಿತದ್ದರಿಂದ ಮೂಡಿಬಂದ ಎಚ್ಚರ. ಹೀಗಾಗಿ ಉನ್ನತ ಶಿಕ್ಷಣ ತನ್ನ ಮೂಲ ಧ್ಯೇಯೋದ್ದೇಶಗಳನ್ನು ಮರಳಿ ಪಡೆದು, ಸರಕಿನಿಂದ ಸೇವೆಗೆ ಪಲ್ಲಟಗೊಳ್ಳಬೇಕಾದರೆ ಅದು ವಿದ್ಯಾರ್ಥಿ ಮತ್ತು ಅಧ್ಯಾಪಕರ ಸಂಘಟಿತ ಹೋರಾಟದಿಂದ ಮಾತ್ರ ಸಾಧ್ಯ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು ಬಿಸಿಯೂಟ ಯೋಜನೆಯಿಂದ ಹೊರಕ್ಕೆ : ಸಂಸತ್ತಿಗೆ ತಿಳಿಸಿದ ಕೇಂದ್ರ

ಕಳೆದ ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು 'ಪ್ರಧಾನಮಂತ್ರಿ ಪೋಷಣ್ ಯೋಜನೆ'ಯಿಂದ (ಮಧ್ಯಾಹ್ನದ ಬಿಸಿಯೂಟ) ಹೊರ ಬಿದ್ದಿವೆ. 2020-21ರಲ್ಲಿ 11.19 ಲಕ್ಷ ಇದ್ದ ಶಾಲೆಗಳ ಸಂಖ್ಯೆ 2024-25ರಲ್ಲಿ 10.35ಕ್ಕೆ ಕುಸಿದಿದೆ ಎಂದು...

ಭೀಮಾ ಕೋರೆಗಾಂವ್ ಪ್ರಕರಣ: ಗೌತಮ್ ನವಲಖಾಗೆ ಜಾಮೀನಿನ ಮೇಲೆ ದೆಹಲಿಗೆ ತೆರಳಲು ಅನುಮತಿ ನೀಡಿದ ಬಾಂಬೆ ಹೈಕೋರ್ಟ್

ಭೀಮಾ ಕೋರೆಗಾಂವ್ ಯುಎಪಿಎ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಮಾನವ ಹಕ್ಕುಗಳ ಕಾರ್ಯಕರ್ತ ಗೌತಮ್ ನವಲಖಾ ಅವರಿಗೆ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ನವದೆಹಲಿಯಲ್ಲಿ ವಾಸಿಸಲು ಬಾಂಬೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ. ಆದಾಗಲೂ, ಮಾನವ...

ಕಾರವಾರ ನೌಕಾ ಪ್ರದೇಶದ ಸುತ್ತಮುತ್ತ ಆತಂಕ ಮೂಡಿಸಿದ ‘ಸೀಗಲ್‌’ ಪಕ್ಷಿ; ಚೀನಾ ನಿರ್ಮಿತ ಜಿಪಿಎಸ್ ಸಾಧನ ಪತ್ತೆ

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕರಾವಳಿ ಪ್ರದೇಶದ ಬಳಿ, ಸೂಕ್ಷ್ಮ ನೌಕಾ ವಲಯದ ಬಳಿ ಚೀನಾ ನಿರ್ಮಿತ ಜಿಪಿಎಸ್ ಟ್ರ್ಯಾಕಿಂಗ್ ಸಾಧನವೊಂದು 'ಸೀಗಲ್' (ಸಮುದ್ರಹಕ್ಕಿ) ಪಕ್ಷಿಗೆ ಅಳವಡಿಸಿರುವುದು ಕಂಡುಬಂದ ನಂತರ ಭದ್ರತಾ ಸಂಸ್ಥೆಗಳು...

ಅಣು ಶಕ್ತಿಯ ಖಾಸಗೀಕರಣ : ‘ಶಾಂತಿ’ ಮಸೂದೆಗೆ ಲೋಕಸಭೆ ಅಸ್ತು

ಭಾರತದ ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ವಲಯದ ಪ್ರವೇಶಕ್ಕೆ ದಾರಿ ಮಾಡಿಕೊಡುವ, 'ಭಾರತದ ಪ್ರಗತಿಗಾಗಿ ಅಣು ಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ) ಮಸೂದೆಯನ್ನು ಲೋಕಸಭೆ ಬುಧವಾರ (ಡಿ.17) ಅಂಗೀಕರಿಸಿತು. ವಿಪಕ್ಷಗಳ ಸದಸ್ಯರು...

ಮಾದಕ ದ್ರವ್ಯ ಸೇವನೆ, ಲೈಂಗಿಕ ಕಿರುಕುಳಕ್ಕೆ 3 ಲಕ್ಷ ರೂ. ದಂಡ ವಸೂಲಿ: ಬೆಂಗಳೂರಿನ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ​​ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಪಶ್ಚಿಮ ಬೆಂಗಳೂರಿನ ದೊಡ್ಡಬೆಲೆ ಬಳಿಯ ವಸತಿ ಸಂಕೀರ್ಣವೊಂದರ ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ವಿರುದ್ಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ನಿವಾಸಿಗಳಿಂದ ದಂಡ ವಸೂಲಿ ಮಾಡಿದ ಮತ್ತು ಅಪರಾಧಗಳನ್ನು ಮುಚ್ಚಿಟ್ಟ ಆರೋಪದ ಮೇಲೆ ಕುಂಬಳಗೋಡು...

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...