Homeಎಂಟರ್ತೈನ್ಮೆಂಟ್ರಾಜ್ - ಎಂದೂ ಮಾಸದ ನೆನಪು: ಭವಾನಿ ಕ್ಯಾಮರಾ ಕಣ್ಣಲ್ಲಿ ರಾಜ್!

ರಾಜ್ – ಎಂದೂ ಮಾಸದ ನೆನಪು: ಭವಾನಿ ಕ್ಯಾಮರಾ ಕಣ್ಣಲ್ಲಿ ರಾಜ್!

- Advertisement -
- Advertisement -

ವರನಟ ಡಾ.ರಾಜಕುಮಾರ್ ಅಗಲಿ ಇಂದಿಗೆ ಹದಿನಾಲ್ಕು ವರ್ಷ. ಏಕೀಕರಣದ ನಂತರ ಕನ್ನಡ ನಾಡು-ನುಡಿಯ ಬಗ್ಗೆ ಕನ್ನಡಿಗರಲ್ಲಿ ಒಲವು ಮೂಡಿಸಿದ ಸಾಂಸ್ಕೃತಿಕ ವ್ಯಕ್ತಿತ್ವ ರಾಜ್. ಹಿರಿಯ ಸ್ಥಿರಚಿತ್ರ ಛಾಯಾಗ್ರಾಹಕ ಭವಾನಿ ಲಕ್ಷ್ಮೀನಾರಾಯಣ ಅವರು ರಾಜ್ ಅವರ ಆತ್ಮೀಯರೊಲ್ಲಬ್ಬರು. ತಾವು ಕಂಡ ನಟನನ್ನು ಅಪರೂಪದ ಸಂದರ್ಭಗಳೊಂದಿಗೆ ಅವರಿಲ್ಲಿ ಸ್ಮರಿಸಿಕೊಂಡಿದ್ದಾರೆ.

ನಾನು ರಾಜ್‌ರ ನೂರಾರು ಫೋಟೋಗಳನ್ನು ಸೆರೆಹಿಡಿದ್ದೇನೆ. ಸೂಕ್ಷ್ಮವಾಗಿ ಗಮನಿಸಿ ನೋಡಿದರೆ, ಪ್ರತೀ ಚಿತ್ರದಲ್ಲೂ ಅವರಲ್ಲಿನ ಸರಳತೆ ಕಾಣಿಸುತ್ತದೆ. ನಾನು ಹತ್ತಾರು ವರ್ಷಗಳ ಕಾಲ ಕಂಡಂತೆ ಸೆಟ್‌ನಲ್ಲೂ ಅವರು ಎಲ್ಲರೊಂದಿಗೂ ಸರಳವಾಗಿ ಬೆರೆಯುತ್ತಿದ್ದರು. ಸಹಕಲಾವಿದರೊಂದಿಗೆ ಅವರದು ಉತ್ತಮ ಬಾಂಧವ್ಯ. ಹಿರಿಯರನ್ನು ಗೌರವಿಸುತ್ತಿದ್ದ ರಾಜ್, ಕಿರಿಯರಿಗೆ ಸಲಹೆ – ಸೂಚನೆ ಕೊಡುತ್ತಿದ್ದರು. ಕ್ಯಾಮರಾ ಎದುರು ಕೂಡ ಅವರು ಅಷ್ಟೇ ಸಂಯಮಿ. ಟೇಕ್ ಹೆಚ್ಚಾದರೆ ಒಂದಿಷ್ಟೂ ಬೇಸರಿಸಿಕೊಳ್ಳದೆ ಮತ್ತೊಂದು ಟೇಕ್‌ಗೆ ರೆಡಿಯಾಗುತ್ತಿದ್ದರು. ತಪ್ಪನ್ನು ಒಪ್ಪಿಕೊಳ್ಳುವ ಗುಣ ಅವರದು. ಸನ್ನಿವೇಶ ಮತ್ತಷ್ಟು ಚೆನ್ನಾಗಿ ಮೂಡಿಬರಬೇಕೆಂದು ನಿರ್ದೇಶಕರ ಸಲಹೆಯನ್ನು ಕ್ರೀಡಾಮನೋಭಾವದಿಂದ ಸ್ವೀಕರಿಸುತ್ತಿದ್ದರು. ಅವರು ನಿರ್ದೇಶಕರಿಗೆ ಎದುರಾಡಿದ್ದನ್ನು ನಾನಂತೂ ಒಮ್ಮೆಯೂ ನೋಡಿಲ್ಲ. ಶೂಟಿಂಗ್ ಬಿಡುವಿನ ವೇಳೆಯಲ್ಲಿ ನಾನು ಕೊಡುತ್ತಿದ್ದ ತೊಂದರೆಗೂ ಅವರು ಬೇಸರ ಮಾಡಿಕೊಂಡವರಲ್ಲ. ಒಳ್ಳೆಯ ಮೂಡ್‌ನ ನಿರೀಕ್ಷೆಯಲ್ಲಿರುವ ಛಾಯಾಗ್ರಾಹಕನಿಗೆ ಮತ್ತೇನು ಬೇಕು ಹೇಳಿ?

ಕೂಸು ಮರಿ

ನಾನು ನೋಡಿದಂತೆ ರಾಜ್ ಮತ್ತು ಚಿತ್ರಸಾಹಿತಿ ಚಿ.ಉದಯಶಂಕರ್ ಅಪರೂಪದ ಸ್ನೇಹಿತರು. ಇಬ್ಬರಿಗೂ ಪರಸ್ಪರರಲ್ಲಿ ಅಪಾರ ಪ್ರೀತಿ, ಗೌರವ. ಒಂದು ಹಂತದ ಸಲಿಗೆಯೂ ಇತ್ತು. ಉದಯಶಂಕರ್ ಚಿತ್ರಕಥೆ, ಸಂಭಾಷಣೆಯಲ್ಲಿಯೇ ಅಲ್ಲವೇ ರಾಜ್ ಜನರನ್ನು ಸೆಳೆದದ್ದು? ರಾಜ್‌ರನ್ನು ಹತ್ತಿರದಿಂದ ಒಡನಾಡಿದ್ದರಿಂದ ಅವರ ಇಮೇಜ್‌ಗೆ ಸರಿಹೊಂದುವಂತೆ ಬರೆಯಲು ಉದಯಶಂಕರ್ ಅವರಿಗೆ ಸಾಧ್ಯವಾಗಿರಬಹುದು. ರಾಜ್ ಸಿನಿಮಾಗಳ ಚಿತ್ರೀಕರಣಗಳಿಗೆ ಹೋದ ಬಹಳಷ್ಟು ಸಂದರ್ಭಗಳಲ್ಲಿ ಚಿ.ಉದಯಶಂಕರ್ ಅವರನ್ನು ಭೇಟಿಯಾಗಿದ್ದೇನೆ. ಸಾಕಷ್ಟು ಬಾರಿ ಅವರು ನನ್ನ ಕ್ಯಾಮರಾಗೆ ರೂಪದರ್ಶಿಯಾಗಿದ್ದಾರೆ.

ನಂದಿಬೆಟ್ಟದಲ್ಲೊಮ್ಮೆ ರಾಜ್ ಮತ್ತು ಉದಯಶಂಕರ್ ಜೋಡಿಯ ಚಿತ್ರ ತೆಗೆದದ್ದು ನನಗೆ ಬಹುವಾಗಿ ಕಾಡುತ್ತದೆ. ರಾಜ್‌ರ ಚಿತ್ರವೊಂದಕ್ಕೆ ನಂದಿಬೆಟ್ಟದ ಟಿಪ್ಪು ಡ್ರಾಪ್‌ನಲ್ಲಿ ಶೂಟಿಂಗ್ ನಡೆಯುತ್ತಿತ್ತು. ಚಿ.ಉದಯಶಂಕರ್ ಕೂಡ ಸೆಟ್‌ನಲ್ಲಿದ್ದರು. ನಾನಲ್ಲಿಗೆ ಹೋದಾಗ ಇಬ್ಬರೂ ಸನ್ನಿವೇಶವೊಂದರ ಬಗ್ಗೆ ಚರ್ಚಿಸುತ್ತಿದ್ದರೆಂದು ಕಾಣುತ್ತದೆ. ಅವರ ಗಂಭೀರ ಮಾತುಕತೆ ಮುಗಿಯುತ್ತಿದ್ದಂತೆ ನಾನಲ್ಲಿಗೆ ಹೋದೆ. ಅಪರೂಪದ ಪೋಸ್ ಬೇಕೆಂದಾಗ, ಉತ್ಸಾಹಿ ರಾಜ್ ಕ್ಷಣಕಾಲ ಯೋಚಿಸಿದರು.ಉದಯಶಂಕರ್‌ರನ್ನು ಕೂಸು ಮರಿ ಮಾಡಿದರೆ ಹೇಗೆ?’ ಎಂದು ಕೇಳಿದ ರಾಜ್, ಅದಕ್ಕೆ ಸಜ್ಜಾದರು. ಚಿ.ಉದಯಶಂಕರ್ ನಗುತ್ತಲೇ ರಾಜ್ ಬೆನ್ನೇರಿದರು. ಸ್ಥೂಲಕಾಯದ ಅವರನ್ನು ಹೊರುತ್ತಲೇ ರಾಜ್ ಒಂದೆಡೆ ಕೊಂಚ ವಾಲಿದರು. ಆಕಸ್ಮಾತ್ ಇಬ್ಬರೂ ಬಿದ್ದರೇನು ಗತಿ ಎಂದು ನನಗೆ ಗಾಬರಿಯಾಯ್ತು. ಯಾಕಾದರೂ ಭಿನ್ನ ಪೋಸ್ ಕೊಡಿ ಎಂದು ಕೇಳಿದೆನೋ ಎಂದು ಪರಿತಪಿಸಿದೆ. ಹಾಗೇನೂ ಆಗಲಿಲ್ಲ. ರಾಜ್ ತಮ್ಮ ಸ್ನೇಹಿತನನ್ನು ಕೂಸು ಮರಿ ಮಾಡುವ ಅಪರೂಪದ ಪೋಸ್ ನನ್ನ ಕ್ಯಾಮರಾಗೆ ದಕ್ಕಿತು. ಮುಂದೆ ಈ ಫೋಟೋ ನೋಡಿ ಅವರಿಬ್ಬರೂ ತುಂಬಾ ಖುಷಿಪಟ್ಟಿದ್ದರು.

ರಾಜ್ ನೃತ್ಯಕ್ಕೆ ಮನಸೋತ ಹನುಮ!

ನಂದಿಬೆಟ್ಟದಲ್ಲಿ ರಾಜ್ ಸಿನಿಮಾಗೆ ಚಿತ್ರೀಕರಣ ನಡೆಯಲಿದೆ ಎನ್ನುವ ವಿಷಯ ಕಿವಿಗೆ ಬಿದ್ದಿತ್ತು. ಯಾವ ಸಿನಿಮಾ ಎನ್ನುವ ಕುತೂಹಲದಿಂದಲೇ ಹೋಗಿದ್ದೆ. ಸೆಟ್‌ಗೆ ಹೋಗುತ್ತಿದ್ದಂತೆ ನೃತ್ಯ ನಿರ್ದೇಶಕ ಉಡುಪಿ ಜಯರಾಂ ಎದುರಾದರು. `ಓ, ನೀವು ಬಂದ್ಬಿಟ್ರಾ, ಇನ್ನು ಅಣ್ಣಾವ್ರು ನಮಗೆ ಸಿಗೋಲ್ಲ ಬಿಡಿ..’ ಎಂದು ನಗುತ್ತಲೇ ನನ್ನನ್ನು ಸ್ವಾಗತಿಸಿದರು. ಅವರೊಂದಿಗೆ ಲೋಕಾಭಿರಾಮವಾಗಿ ಮಾತನಾಡುತ್ತಿರುವಾಗ ನಿರ್ದೇಶಕ ಗೀತಪ್ರಿಯ ಅವರ ಪದಾರ್ಪಣೆಯಾಯ್ತು. ರಾಜ್ ಅಭಿನಯದ `ಭೂಪತಿ ರಂಗ’ ಸಿನಿಮಾ ಹಾಡಿನ ಚಿತ್ರೀಕರಣ ಎನ್ನುವುದು ಗೊತ್ತಾಯಿತು. ಕೊಂಚ ಹೊತ್ತಿನಲ್ಲಿಯೇ ಶಾಟ್‌ಗೆ ಸಿದ್ಧರಾಗಿ ರಾಜ್ ನನ್ನೆಡೆ ಕೈಬೀಸುತ್ತಾ ಬಂದರು.
ತಮಿಳಿನಲ್ಲಿ ಆಗ ಹೆಸರು ಮಾಡಿದ್ದ ಉದಯ ಚಂದ್ರಿಕಾ ಈ ಚಿತ್ರದ ನಾಯಕಿ. ರಾಜ್ – ಉದಯ ಚಂದ್ರಿಕಾ ಜೋಡಿಯ `ಓಹೋ ಮುದ್ದಿನ ಮಲ್ಲಿಗೆ..’ ಯುಗಳ ಗೀತೆಗೆ ಅಂದು ಚಿತ್ರೀಕರಣ ನಡೆದದ್ದು. ಮಧ್ಯಾಹ್ನದಿಂದ ಸಂಜೆ ನಾಲ್ಕರವರೆಗೆ ಸತತವಾಗಿ ಚಿತ್ರೀಕರಣ ನಡೆಸಿದರು. ಕೊನೆಯಲ್ಲೊಂದು ತಮಾಷೆ ನಡೆಯಿತು. ಆಗ ನಂದಿ ಬೆಟ್ಟದಲ್ಲಿ ಕೋತಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದವು. ರಾಜ್ ಮುಂದಿನ ಶಾಟ್‌ಗೆಂದು ಕ್ಯಾಮರಾ ಎದುರು ಬರುತ್ತಿದ್ದಂತೆ ಕೋತಿಯೊಂದು ಅವರ ಬಳಿ ಓಡಿಬಂತು. ಚಿತ್ರತಂಡದ ಹುಡುಗರು ಓಡಿಸಿದರೂ ಅದು ಹೋಗಲೊಲ್ಲದು. ತಮ್ಮ ಕಾಲ ಬಳಿಯೇ ಸುಳಿದಾಡುತ್ತಿದ್ದ ಕೋತಿಯನ್ನು ರಾಜ್ ಪ್ರೀತಿಯಿಂದ ಮಾತನಾಡಿಸತೊಡಗಿದರು. ಕ್ಯಾಮರಾಮನ್ ಪಿ.ಎಸ್.ಪ್ರಕಾಶ್ ತಮ್ಮ ಕ್ಯಾಮರಾ ಆಫ್ ಮಾಡಿ ನಗುತ್ತಾ ಕುಳಿತರು. ನಾನು ಕ್ಯಾಮರಾ ಎತ್ತಿಕೊಂಡು ಅಲ್ಲಿಗೆ ಓಡಿದೆ. ಕೋತಿ ಎದುರು ರಾಜ್ ನೃತ್ಯದ ಬಂಗಿಯಲ್ಲಿ ಕೊಟ್ಟ ಪೋಸುಗಳನ್ನು ಕ್ಲಿಕ್ಕಿಸಿಕೊಂಡೆ. ಹೀಗೆ, ರಾಜ್ ಅವರೊಂದಿಗಿನ ಒಡನಾಟ ನನ್ನ ಬದುಕಿನ ಮಧುರ ನೆನಪುಗಳಾಗಿ ಉಳಿದಿವೆ.

ನಿರೂಪಣೆ: ಶಶಿಧರ ಚಿತ್ರದುರ್ಗ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...