“ಪೂರ್ವಗ್ರಹಪೀಡಿತ, ದುರಹಂಕಾರವಿರುವ ಕನ್ನಡ ನ್ಯೂಸ್ ಚಾನೆಲ್ಗಳ ಬಂದ್ ಮಾಡಿ” ಎಂಬ ಘೋಷಣೆಯೊಂದಿಗೆ ಕೊರೊನಾ ವಿರುದ್ಧ ಸಮರ, ನಾಡಿನ ಹಿತಕ್ಕಾಗಿ, ದ್ವೇಷ ಪ್ರಚಾರ ವಿರೋಧಿಸಿ ಏಪ್ರಿಲ್ 12ರ ಭಾನುವಾರ ರಾತ್ರಿ 8ರಿಂದ 10 ಗಂಟೆಯವರೆಗೆ ಕನ್ನಡ ಟಿವಿ ನ್ಯೂಸ್ ಚಾನೆಲ್ ವೀಕ್ಷಣೆ ಬಂದ್ ಮಾಡೋಣ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಕರೆ ನೀಡಲಾಗಿದೆ.
ದುಷ್ಟದನಿಗಳ ವಿರುದ್ಧ ಜನದನಿ ಎಂಬ ಹೆಸರಿನಡಿಯಲ್ಲಿ ಪೋಸ್ಟರ್ಗಳನ್ನು ಬಿಡುಗಡೆ ಮಾಡಿದ್ದು #LockdownKannadaNewsChannels ಎಂಬ ಹ್ಯಾಸ್ಟ್ಯಾಗ್ ನೀಡಲಾಗಿದೆ. ಪಬ್ಲಿಕ್ ಟಿವಿಯ ಎಚ್.ಆರ್ ರಂಗನಾಥ್, ದಿಗ್ವಿಜಯ ಚಾನೆಲ್ನ ವಿಜಯ ಸಂಕೇಶ್ವರ ಮತ್ತು ಸುವರ್ಣ ಟಿವಿಯ ಅಜಿತ್ ಹನುಮಕ್ಕರ್ ರವರ ಫೋಟೊ ಹಾಕಿ ಟಿವಿ ಬಂದ್ ಮಾಡಿ ಎನ್ನಲಾಗಿದೆ.
ಸಾಮರಸ್ಯ ಮತ್ತು ಸಹಬಾಳ್ವೆಗಾಗಿ ದನಿಗೂಡಿಸೋಣ. ದಯವಿಟ್ಟು ಈ ಮಾಹಿತಿ ಹಂಚಿ, ಇತರರನ್ನೂ ಜೊತೆಗೂಡಿಸಿ. ಕನ್ನಡ ನಾಡಿನ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಈ ಕಾರ್ಯಕ್ರಮಕ್ಕೆ ಚಾಲನೆ ನೀಡೋಣ ಎಂದು ಕರೆ ನೀಡಲಾಗಿದೆ.
ಈ ಕುರಿತು ಇನ್ನು ಕೆಲವರು ಕೋಮುವಾದಿಗಳನ್ನು ಸೋಲಿಸಬೇಕಾದರೆ ಒಂದೆರೆಡು ಗಂಟೆಯಲ್ಲ, ಸಂಪೂರ್ಣವಾಗಿ ಈ ಚಾನೆಲ್ಗಳನ್ನು ಬಂದ್ ಮಾಡಬೇಕು. ನಮಗೆ ನ್ಯೂಸ್ ಬೇಕಾದರೆ ಸಾಮಾಜಿಕ ಜಾಲತಾಣದಲ್ಲಿ ಸಿಗುತ್ತದೆ. ನಾನು ಈಗಾಗಲೇ ಈ ಕೆಲಸ ಮಾಡಿದ್ದೇನೆ ಮುಂದಿನ ಸರದಿ ನಿಮ್ಮದು ಎಂದು ಅಶ್ರಫ್ ಎಂ ಸಾಲೆತ್ತುರ್ರವರು ತಿಳಿಸಿದ್ದಾರೆ.
ಇದು ಸ್ವಾಗತಾರ್ಹ. ಆದರೆ ಇದಿಷ್ಟೇ ಸಾಲದು. ಇವರು ಕೊಡುತ್ತಿರುವ ಸುದ್ದಿಗಳನ್ನು ವಿಮರ್ಶೆ ಮಾಡುವ ಸಾಮರ್ಥ್ಯ ಇಲ್ಲದ ಅನೇಕ ಜನಸಾಮಾನ್ಯರು, ಇವರು ತೊರಿಸುತ್ತಿರುವುದೇ ಸತ್ಯ ಎಂದು ತಿಳಿದು ಕೋಮು ವಿಶಕ್ಕೆ ಬಲಿಯಾಗುತ್ತಿದ್ದಾರೆ. ಸುಳ್ಳು ಸುದ್ದಿಗಳನ್ನು ಮತ್ತು ಕೊಮುವಿಶವನ್ನು ಬಿತ್ತುತ್ತಿರುವ ಇವರ ವಿರುದ್ಧ ಪೊಲೀಸ್ ಟಾಣೆಯಲ್ಲಿ ದೂರು ದಾಕಲಾಗುವಂತಾಗಬೇಕು.
ಟಿವಿಯ ವರದಿಗಾರು ತಮ್ಮ ಹೊಟ್ಟೆಪಾಡಿಗಾಗಿ ಮತ್ತು ಅಸ್ತಿತ್ವಕ್ಕಾಗಿ ಈ ರೀತಿಯ ಅತಿರೇಕಗಳನ್ನು ಮಾಡುತ್ತಾರೆ…ಹಿಡಿಯಬೇಕಾಗಿರುವುದು ಮಾಲೀಕರನ್ನು…ಚಾನೆಲ್ ಬಂದ್ ಮಾಡಿದರೇ ಮಾಧ್ಯಮ ಸ್ವಾತಂತ್ರ್ಯದ ಕತೆ ಏನು…ಇದಕ್ಕೆಲ್ಲಾ IBF(Indian Broadcasting Foundation) ಬಳಿ ಪರಿಹಾರವಿಲ್ಲವೇ?
Idakke nanna bembalavilla. Nanu ajith hanumakkar paravagi iddene.
It’s not enough for healthy society They used to do simply thing as big issue
3 news channels only?
ಜನತೆಯ ಹಸಿವಿನ ನರಳಾಟ.
ಚಾನಲ್ಸ್ ಗಳಿಗೆ ಹಬ್ಬದುಟ.
ಸರಕಾರದ ಚೆಲ್ಲಾಟ.
ಕೊಮುವಾದಿಗಳ ಆಟವೆ ಆಟ.
ಕೊರೊನ ವೈರಸ್ ಹುಡುಕಾಟ.
ಸಾವು-ನೊವಿನ ಸಂಖ್ಯೆ ಏಣಿಯಾಟ.
ಭಾರತದ ಬಡವರ ಗೊಳಾಟ.
ಏನಿದು…..ಅಬ್ಬಾಬ್ಬ…ಮೊದಿ ಮೊಡಿಯಾಟ….
ಜಗವೆಲ್ಲ….ಸಂಕಟ….ಸಂಕಟ….MG.