Homeಮುಖಪುಟಶಿವಮೊಗ್ಗದ ಸೋಷಲಿಸ್ಟ್ ಶಿವಣ್ಣ ನಿಧನ

ಶಿವಮೊಗ್ಗದ ಸೋಷಲಿಸ್ಟ್ ಶಿವಣ್ಣ ನಿಧನ

- Advertisement -
- Advertisement -

| ಬಿ.ಚಂದ್ರೇಗೌಡ |

ಶಿವಮೊಗ್ಗದ ಸೋಷಲಿಸ್ಟ್ ಶಿವಣ್ಣ ನಿಧನರಾಗಿದ್ದಾರೆ. ಶಿವಮೊಗ್ಗದಲ್ಲಿ ಜೆಡಿಎಸ್‍ಗೆ ನೆಲೆ ಇಲ್ಲದಿದ್ದರೂ ದೇವೇಗೌಡರು ಆರೇಳು ವರ್ಷ ಅವರನ್ನು ಜೆಡಿಎಸ್ ಅಧ್ಯಕ್ಷರನ್ನಾಗಿ ನೇಮಿಸಿದ್ದಲ್ಲದೆ, ಶ್ರೀಕಾಂತರನ್ನು ಇಲ್ಲಿಗೆ ತಂದು ಜೆಡಿಎಸ್ ನಾಯಕರಾಗುವಂತೆ ಮಾಡಿದ್ದರು. ಶ್ರೀಕಾಂತ್ ದಳದ ಪಾರ್ಟಿ ಕಟ್ಟುವುದರ ಜೊತೆಗೆ ಶಿವಣ್ಣನವರ ಆರೋಗ್ಯದ ಜವಾಬ್ದಾರಿಯನ್ನು ಹೊತ್ತಿದ್ದರು.

ಶಿವಣ್ಣನವರು ಸಮಾಜವಾದಿಗಳು ಉತ್ತುಂಗದಲ್ಲಿದ್ದ ಕಾಲದವರು. ಪಟೇಲರಾದಿಯಾಗಿ ಅಂದಿನ ಘಟಾನುಘಟಿಗಳು ಚರ್ಚಿಸುತ್ತಿದ್ದ ಕಾಲದಲ್ಲಿ ಅವರ ಮಾತುಗಳಿಗೆ ಸಾಕ್ಷಿಯಾಗಿದ್ದವರು. ಆದ್ದರಿಂದ ಅವರನ್ನು ಭೇಟಿಯಾದರೆ ಸಾಕು ಲೋಹಿಯಾ, ಕಿಷನ್ ಪಟ್ನಾಯಕ್, ಪಟೇಲರು ಮತ್ತು ಅಂದಿನ ಕರ್ನಾಟಕದ ಸೋಷಿಲಿಸ್ಟರ ಚರಿತ್ರೆಯೇ ತೆರೆದುಕೊಳ್ಳುತ್ತಿತ್ತು. ಅಲ್ಲದೆ ಲೋಹಿಯಾ ಗೆದ್ದು ಪಾರ್ಲಿಮೆಂಟಿಗೆ ಹೋದಾಗ ಬಂದ ಪತ್ರಿಕಾ ವರದಿಗಳು, ಸಂಪಾದಕೀಯಗಳು, ಅವರ ಬಾಯಲ್ಲೇ ಇದ್ದವು. ಖಾದ್ರಿ ಶಾಮಣ್ಣನ ಸಂಪಾದಕೀಯವಂತೂ ಬಾಯಿಪಾಠವಾಗಿದ್ದವು. ಇದು ರಾಜಕಾರಣದ ಮಾತಾಯಿತು. ಇನ್ನ ಆಧ್ಯಾತ್ಮದ ವಿಷಯಕ್ಕೆ ಬಂದರೆ ಅಕ್ಕನ ವಚನಗಳು ಸಂದರ್ಭೋಚಕವಾಗಿ ಅವರ ಬಾಯಿಂದ ಬರುತ್ತಿದ್ದವು. ಅಲ್ಲದೆ ಬಸವಣ್ಣ, ಅಲ್ಲಮರ ವಚನಗಳೂ ಬರುತ್ತಿದ್ದವು. ಕೇವಲ ಒಂದು ಸಿಕ್ಸ್‍ಟಿಗೆ ಸಮಾಜವಾದದ ಚರ್ಚೆ ಹೊರಬಂದರೆ, ಎರಡು ಸಿಕ್ಸ್‍ಟಿಗೆ ಹನ್ನೆರಡನೇ ಶತಮಾನಕ್ಕೆ ಹೊರಳುತ್ತಿದ್ದರು. ಜಾತ್ಯಾತೀತ ಜನತಾದಳವೆಂಬ ಪಾರ್ಟಿಗೆ ನಿಷ್ಟರಾಗಿದ್ದ ಶಿವಣ್ಣ, ಅದರ ಜೋತಿಷ್ಯ ಯಜ್ಞ ಹೋಮ ಹವನದ ವಿರೋಧಿಯಾಗಿದ್ದರು. ಅದನ್ನೆಲ್ಲಾ ಅವರವರ ವೈಯಕ್ತಿಕ ವಿಷಯಕ್ಕೆ ಬಿಟ್ಟಿದ್ದರು.

ಶಿವಣ್ಣ ಅಜಾತಶತ್ರು, ಎಲ್ಲಾ ಪಾರ್ಟಿಯಲ್ಲೂ ಅವರ ಗೆಳೆಯರಿದ್ದರು. ಅವರಿಗೆ ತುಂಬ ಒಲವಿದ್ದುದು ರೈತ ಸಂಘದ ಕಡೆಗೆ, ಆದ್ದರಿಂದ ಮಣ್ಣಿನ ಮಗ ದೇವೇಗೌಡರ ಪಾರ್ಟಿ ಅಧ್ಯಕ್ಷರಾಗಿದ್ದರು. ಜೆಡಿಎಸ್ ಬಿಜೆಪಿ ಜತೆಗೂಡಿ ಸರಕಾರ ಮಾಡಿದಾಗ ಶಿವಣ್ಣನಿಗೆ ಅದೊಂದು ಅನೈತಿಕ ಸಂಬಂಧದಂತೆ ಕಂಡಿತ್ತು. ಹಾಗಾಗಿ ಎಡೂರಪ್ಪನವರು ಉಪಮುಖ್ಯಮಂತ್ರಿಯಾಗಿ ಶಿವಮೊಗ್ಗಕ್ಕೆ ಬಂದಾಗ, ಅವರು ಜೆಡಿಎಸ್ ಪಾರ್ಟಿ ಆಫೀಸಿಗೆ ಬಂದಾರೆಂದು ಪಾರ್ಟಿ ಆಫೀಸಿನ ಬಾಗಿಲಿಗೆ ಬೀಗ ಜಡಿದು ಪರಾರಿಯಾಗಿದ್ದರು. ಶಿವಣ್ಣ ಮೂಲತಃ ಶಿವಮೊಗ್ಗದವರಲ್ಲ. ಹಾಸನ ಕಡೆಯವರು. ಅಲ್ಲಿಂದ ಬಂದ ವ್ಯಕ್ತಿ ಶಿವಮೊಗ್ಗದಲ್ಲಿ ಬೇರೂರಿದ ಪರಿ ಅಚ್ಚರಿ ಹುಟ್ಟಿಸುವಂತದ್ದು. ಯಾಕೆಂದರೆ ಅವರ ಜಾತಿ ಯಾವುದೆಂಬುದೇ ಹಲವರಿಗೆ ಗೊತ್ತಿಲ್ಲ. ಹೀಗೆ ಜಾತಿ, ವರ್ಗಗಳ ಚೌಕಟ್ಟಿಗೆ ನಿಲುಕದೆ ಎಲ್ಲಾ ಜನರ ವಿಶ್ವಾಸ ಗಳಿಸಿಕೊಂಡಿದ್ದರು. ಬಹಳ ದಿನಗಳಿಂದ ಡಯಾಲಿಸಿಸ್‍ಗೆ ತುತ್ತಾಗಿದ್ದ ಶಿವಣ್ಣನವರನ್ನು ಚೆನ್ನಾಗಿ ನೋಡಿಕೊಂಡವರು ಶ್ರೀಕಾಂತ್ ಎಂದೇ ಹೇಳಬೇಕು. ಯಾಕೊ ದೇವೇಗೌಡರ ಪಾರ್ಟಿ ಅಧ್ಯಕ್ಷರಾದವರಿಗೆ ಆಯಸ್ಸಿಲ್ಲ ಅಂತ ಕಾಣಿಸುತ್ತೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮಾದಕ ದ್ರವ್ಯ ಸೇವನೆ, ಲೈಂಗಿಕ ಕಿರುಕುಳಕ್ಕೆ 3 ಲಕ್ಷ ರೂ. ದಂಡ ವಸೂಲಿ: ಬೆಂಗಳೂರಿನ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ​​ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಪಶ್ಚಿಮ ಬೆಂಗಳೂರಿನ ದೊಡ್ಡಬೆಲೆ ಬಳಿಯ ವಸತಿ ಸಂಕೀರ್ಣವೊಂದರ ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ವಿರುದ್ಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ನಿವಾಸಿಗಳಿಂದ ದಂಡ ವಸೂಲಿ ಮಾಡಿದ ಮತ್ತು ಅಪರಾಧಗಳನ್ನು ಮುಚ್ಚಿಟ್ಟ ಆರೋಪದ ಮೇಲೆ ಕುಂಬಳಗೋಡು...

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...