Homeಮುಖಪುಟಸಕ್ಕರೆ ದಾಹಕ್ಕೆ ಕಾರ್ಮಿಕರಿಗೇ ಬೆಂಕಿಯಿಟ್ಟ ನಿರಾಣಿ!

ಸಕ್ಕರೆ ದಾಹಕ್ಕೆ ಕಾರ್ಮಿಕರಿಗೇ ಬೆಂಕಿಯಿಟ್ಟ ನಿರಾಣಿ!

- Advertisement -
- Advertisement -

 ಮಹಾಲಿಂಗಪ್ಪ ಆಲಬಾಳ |

ಬಾಗಲಕೋಟೆ ಜಿಲ್ಲೆಯ ಮುಧೋಳ ನಗರಕ್ಕೆ ಹೊಂದಿಕೊಂಡಿರುವ ಬಿಜೆಪಿಯ ಮಾಜಿ ಮಂತ್ರಿ ಹಾಲಿ ಬೀಳಗಿಯ ಶಾಸಕ ಮುರುಗೇಶ್ ನಿರಾಣಿ ಒಡೆತನದ ನಿರಾಣಿ ಶುಗರ್ಸ್ ಕಾರ್ಖಾನೆಯಲ್ಲಿ ನಡೆದ ದುರಂತದಲ್ಲಿ ಹಲವಾರು ಅಮಾಯಕ ಜನ ಪ್ರಾಣ ಕಳೆದುಕೊಂಡಿದ್ದಾರೆ. ಕಾರ್ಖಾನೆಯ ಮಾಲೀಕರು ಮತ್ತು ಸರಕಾರದ ಅಧಿಕಾರಿಗಳು ನಾಲ್ಕು ಜನ ಕಾರ್ಮಿಕರು ಸಾವಿಗೀಡಾಗಿ ಮೂರು ಜನ ತೀವ್ರವಾಗಿ ಗಾಯಗೊಂಡಿದ್ದಾರೆಂದು ಹೇಳುತ್ತಿದ್ದರಾದರೂ ಅಲ್ಲಿನ ದುರಂತದ ತೀವ್ರತೆ ಈ ಅಂಕಿಸಂಖ್ಯೆಗಳ ಬಗ್ಗೆಯೇ ಸಂಶಯ ಮೂಡುವಂತೆ ಮಾಡಿದೆ.
ವಾಸ್ತವದಲ್ಲಿ ಇದು ಮುರುಗೇಶ ನಿರಾಣಿಯ ಹಪಾಹಪಿ ಮತ್ತು ನಿರ್ಲಕ್ಷತನ ಪರಿಣಾಮ. ಅಂದು ಎಂದಿನಂತೆ ಕಾರ್ಖಾನೆ ನೂರಾರು ಕಾರ್ಮಿಕರು ಮತ್ತು ರೈತರಿಂದ ತುಂಬಿಹೋಗಿದೆ. ಕಾರ್ಖಾನೆಯಿಂದ ಸುಮಾರು 300 ಮೀಟರ್ ಅಂತರದಲ್ಲಿ ಸ್ಪಿರಿಟ್ ತಯಾರಿಸುವ ಘಟಕ ಇದೆ. ಸಕ್ಕರೆ ತಯಾರಿಸುವಾಗ ಹೊರಬರುವ ಮೊಲ್ಯಾಸಿಸ್ ಎಂಬ ಕಚ್ಚಾವಸ್ತುವಿನಿಂದ ಸ್ಪಿರಿಟ್ ತಯಾರಿಸುವ ಘಟಕ ಇದೆ. ಈ ಸ್ಪಿರಿಟ್ ಅನ್ನು ಸರಾಯಿ ತಯಾರಿಕೆಗೆ ಬಳಸಲಾಗುತ್ತದೆ.
ಈ ಸ್ಪಿರಿಟ್ ತಯಾರಿಕೆಯ ನಂತರ ಅದನ್ನು ನೀರಿನಿಂದ ಶುದ್ಧಿಕರಿಸಿ ಮತ್ತೇ ಅದೇ ನೀರನ್ನು ಮರುಬಳಕೆ ಮಾಡಲಾಗುತ್ತದೆ. ಈ ಸ್ಪಿರಿಟ್‍ನ್ನು ಶುದ್ಧಿಕರಿಸಿದ ನೀರಿನಲ್ಲಿ ಮಿಥೇನ್ ಅಂಶ ಉಳಿದಿರುತ್ತದೆ. ಈ ಮಿಥೇನ್‍ಅನ್ನು ಪ್ರತ್ಯೇಕಗೊಳಿಸಿ ಅದನ್ನು ವಿದ್ಯುತ್ ತಯಾರಿಕೆಗೆ ಬಳಸುವ ಘಟಕವೊಂದು ಸಮೀಪದಲ್ಲಿದೆ. ಅಂದು 16ರ ಮಧ್ಯಾಹ್ನ 12 ಗಂಟೆಗೆ ಈ ಮಿಥೇನ್‍ನ್ನು ಪ್ರತ್ಯೇಕಿಸುವ ಘಟಕದಲ್ಲಿನ ಬಾಯ್ಲರ್ ಸ್ಪೋಟಗೊಂಡಿದೆ. ಈ ಸ್ಫೋಟದ ತೀವ್ರತೆ ಎಷ್ಟಿತ್ತೆಂದರೆ ಇಡೀ ಮೂರಂತಸ್ತಿನ ಕಟ್ಟಡ ನೆಲಸಮವಾಗಿ ಅದರ ಅವಶೇಷಗಳು ನೂರಾರು ಮೀಟರ್ ದೂರದವರೆಗೂ ಚದುರಿಹೋಗಿವೆ. ಸ್ಫೋಟದ ಶಬ್ದ ಕಿಲೋ ಮೀಟರ್‍ವರೆಗೂ ಕೇಳಿ ಅಕ್ಕ-ಪಕ್ಕದ ಹಳ್ಳಿಗಳ ನೆಲ ನಡುಗಿದ ಅನುಭವವಾಗಿದೆ. ಇವರು ಹೇಳುವ ಪ್ರಕಾರ ಅಂಥ ದೊಡ್ಡ ಘಟಕ ಕೇವಲ ಏಳುಜನ ಕಾರ್ಮಿಕರಿಂದ ನಡೆಯಲು ಸಾಧ್ಯವಿಲ್ಲ. ಅಲ್ಲಿನ ಪರಿಸ್ಥಿತಿ ಗಮನಿಸಿದರೆ ಅದರಲ್ಲಿರುವವರ್ಯಾರೂ ಬದುಕಿ ಉಳಿದಿರುವ ಸಾಧ್ಯತೆಗಳೇ ಇಲ್ಲ.
ಹಾಗೆ ನೋಡಿದರೆ ಈ ಮುರುಗೇಶ ನಿರಾಣಿಯ ಎಡವಟ್ಟುಗಳು ಒಂದೆರಡಲ್ಲ ಈತನ ಶ್ರೀಮಂತಿಕೆಯ ದಾಹಕ್ಕೆ ಬಲಿಯಾಗಿ ಬದುಕು ಕಳೆದುಕೊಂಡವರ ಸಂಖ್ಯೆ ಬಹಳ ದೊಡ್ಡದಿದೆ.
ಮೂಲತಃ ಬೀಳಗಿ ತಾಲ್ಲೂಕಿನ ಇನಾಮ ಹಂಚನಾಳ ಗ್ರಾಮದ ರುದ್ರಪ್ಪ ಎಂಬುವವರಿಗೆ ಮುರುಗೇಶ ನಿರಾಣಿ ಸೇರಿದಂತೆ ಐದುಜನ ಮಕ್ಕಳು ಸುಮಾರು 100 ಎಕರೆಯಷ್ಟು ಜಮೀನು ಹೊಂದಿದ್ದ ಈ ರುದ್ರಪ್ಪ ಈ ಭಾಗದ ಕುಖ್ಯಾತ “ಬಡ್ಡಿಕುಳ” ಜನರ ಕಪ್ಪಕ್ಕೆ ಹಣ ನೀಡಿ ದೊಡ್ಡಮಟ್ಟದ ಬಡ್ಡಿ ಸುಲುಗೆ ಮಾಡುವ ಈ ಹಣದ ಹಪಾಹಪಿ ಮಕ್ಕಳಿಗೂ ಬಳುವಳಿಯಾಗಿ ಬಂದಿದೆ. ಡಿಪ್ಲೊಮಾ ಪದವಿ ಪಡೆದು ಬಂದ ಮುರುಗೇಶ ನಿರಾಣಿ ಆರಂಭದಲ್ಲಿ ತೊಡಗಿಸಿ ಕೊಂಡದ್ದು ಟ್ರ್ಯಾಕ್ಟರ್ ಟ್ರೇಲರ್ ತಯಾರಿಕೆ ದಂಧೆಯಲ್ಲಿ ಎಂಆರ್‍ಎನ್ ಹೆಸರಿನ ಟ್ರೇಲರ್ ತಯಾರಿಸಿ ರೈತರಿಗೆ ಮಾರುತ್ತ ಒಂದಷ್ಟು ಹಣ ಕೂಡಿದ ಮೇಲೆ ಕೈ ಹಾಕಿದ್ದು ಈ ಸಕ್ಕರೆ ಉದ್ಯಮಕ್ಕೆ ಶ್ರೀಕಾಂತ ಬಾಹೋತಿ ಎಂಬ ಮಹಾರಾಷ್ಟ್ರದ ವ್ಯಾಪಾರಿಯೊಬ್ಬನನ್ನು ಪಾಲುದಾರಿಕೆಗೆ ಒಪ್ಪಿಸಿ ಮುಧೋಳ ನಗರದ ಸಮೀಪ ತನ್ನ ಚಿಕ್ಕಪ್ಪನ ಮಗ ಶಿವಪ್ಪ ಅವರಿಗೆ ಸೇರಿದ್ದ ಜಮೀನಿನಲ್ಲಿ ಸಣ್ಣದೊಂದು ಕಚ್ಚಾ ಸಕ್ಕರೆ ತಯಾರಿಕೆ ಘಟಕವನ್ನು ಪಾಲುದಾರಿಕೆಯಲ್ಲಿ ಶುರುಮಾಡಿದ ಮೊದಲಿನಿಂದಲೂ ಬಿಜೆಪಿ ಸಂಘಪರಿವಾರ ಅಂತ ಓಡಾಡಿಕೊಂಡಿದ್ದ ಈತ 2004ರಲ್ಲಿ ಬೀಳಗಿ ಕ್ಷೇತ್ರದಿಂದ ಎಂಎಲ್‍ಎ ಆಗಿಬಿಟ್ಟ. ಅಧಿಕಾರ ಸಿಕ್ಕಿದ್ದೇ ತಡ ಪಾಲುದಾರ ಬಾಹೇತಿಯನ್ನು ಕೊಡಬಾರದ ಕಿರುಕುಳ ಕೊಟ್ಟು ಹೊರಹಾಕಿ ಕಾರ್ಖಾನೆಯನ್ನು ಸ್ವಂತ ಮಾಡಿಕೊಂಡು ನಂತರ ರಾಜಕೀಯದಲ್ಲಿ ನುಂಗಿದ್ದನೆಲ್ಲ ಅದಕ್ಕೆ ಸುರಿದು ವಿಸ್ತರಣೆ ಮಾಡುತ್ತ ಹೋದ,. 2008ರಲ್ಲಿ ಮತ್ತೊಮ್ಮೆ ಗೆದ್ದು ಯಡಿಯೂರಪ್ಪ ಸಂಪುಟದಲ್ಲಿ ಭಾರಿ ಕೈಗಾರಿಕಾ ಸಚಿವನಾಗಿದದ್ದೇ ಈತನ ಕುಟುಂಬದ ಖದರ್ರೇ ಬದಲಾಗಿಹೋಯಿತು. ಹಣದ ಹೊಳೆ ಹರಿದು ಬರಲಾರಂಭಿಸಿತು. ಒಂದರತ್ತೆಲ್ಲ ಕಾರ್ಖಾನೆ ದೇಶದ ಅತೀ ದೊಡ್ಡ ಕಾರ್ಖಾನೆಗಳ ಸಾಲಿಗೆ ಬಂದು ನಿಂತಿದ್ದಲ್ಲದೆ, ಜಮಖಂಡಿ ತಾಲ್ಲೂಕಿನ ಹಿಪ್ಪರಗಿ ಗ್ರಾಮದಲ್ಲಿ ಸಾಂಬಿಪ್ರಿಯಾ ಶುಗರ್ಸ್, ಬದಾಮಿ ತಾಲ್ಲೂಕಿನ ಕುಳಗೇರಿ ಕ್ರಾಸ್ ಬಳಿ ಸಂಗಮೇಶ ಶುಗರ್ಸ್, ಸಿಮೆಂಟ್ ಕಾರ್ಖಾನೆ ಹೀಗೆ ಹಲವಾರು ಕಾರ್ಖಾನೆಗಳು ತಲೆಎತ್ತಿ ನಿಂತವು.
ಹೀಗೆ ನೋಡನೋಡುತ್ತಿದ್ದಂತೆ ಕೆಲವೇ ವರ್ಷಗಳಲ್ಲಿ ಜಿಲ್ಲೆಯ ಸಕ್ಕರೆ ಸಾಮ್ರಾಜ್ಯವನ್ನೇ ನಿಯಂತ್ರಿಸುವ ಮಟ್ಟಕ್ಕೆ ಬೆಳೆದು ನಿಂತ ಮುರುಗೇಶ ನಿರಾಣಿಯ ಹಸಿವು ಮಾತ್ರ ತಣಿಸಲೇ ಇಲ್ಲ. ಮಾಡಬಾರದ ಕೆಲಸಗಳು, ಹಿಡಿಯಬಾರದ ಅಡ್ಡದಾರಿಗಳನ್ನೆಲ್ಲ ಹಿಡಿದು ಜನರನ್ನು ಪೀಡಿಸತೊಡಗಿದ, ರೈತರನ್ನು ಮೋಸಗೊಳಿಸತೊಡಗಿದ ಎಂಬ ಪ್ರಾಮಾಣಿಕ ರೈತ ನಾಯಕನ ನೇತೃತ್ವದಲ್ಲಿ ಆರಂಭವಾದ ಈತನ ಅನಾವಾರಗಳ ವಿರುದ್ಧದ ಹೋರಾಟ ಎಷ್ಟು ತೀವ್ರವಾಗಿತ್ತೆಂದರೆ ಈ ಕಾರ್ಖಾನೆ ನಡೆಯುವುದೇ ದುಸ್ತರವಾಯಿತು.
ಕಾರ್ಖಾನೆಯಿಂದಾಗುವ ಪರಿಸರ ಮಾಲಿನ್ಯ ರೈತರ ಕಬ್ಬು ತೂಕದಲ್ಲಿನ ಮೋಸ, ಕಾರ್ಮಿಕರ ಕೆಲಸದ ಒತ್ತಡ, ಕಬ್ಬಿನ ಬೆಲೆ, ಈತನ ಗೂಂಡಾಗಿರಿ ಎಲ್ಲದರ ವಿರುದ್ಧ ರೈತಸಂಘ ನಿರ್ಣಾಯಕ ಹೋರಾಟ ನಡೆಸಿತ್ತು. ಆಗಲೂ ರೈತ ಮುಖಂಡರನ್ನು ಹೆಸರಿಸುವುದು, ಖರೀದಿಸುವುದು ಎಲ್ಲ ಪ್ರಯತ್ನಗಳನ್ನು ನಡೆಸಿದ್ದ ಈತ ಅದರಲ್ಲಿ ವಿಫಲನಾಗಿದ್ದ. ಆದರೆ ಈ ಭಾಗದ ರೈತರು ಜನರ ದುರದೃಷ್ಟವೆಂಬಂತೆ ರಮೇಶ್ ಗಡದನ್ನವರ ತೀರಿಹೋದರು. ಆಗ ಮತ್ತೆ ಈತನ ಅಂಧ ದರ್ಬಾರ್ ಶುರುವಾಯಿತು. ಸ್ವನತಿ ಜನರನ್ನು ಬೆನ್ನಿಗಿಟ್ಟು ಕೊಂಡು ತನ್ನನ್ನು ವಿರೋಧಿಸುವವರನ್ನೆಲ್ಲ ಹೆದರಿಸುವುದು ಕಾರ್ಖಾನೆಯ ಅಕ್ಕಪಕ್ಕದ ಜಮೀನುಗಳನ್ನೆಲ್ಲ ಪುಡಿಗಾಸಿಗೆ ಖರೀದಿಸುವುದು ಕೊಡಲು ಒಪ್ಪದವರನ್ನು ಕಿರುಕುಳ ನೀಡಿ ನೆಮ್ಮದಿಯಿಂದ ಬದುಕದಂತೆ ಮಾಡುವುದು ಇದೆಲ್ಲ ಮಾಮೂಲಿಯಾಗಿ ಹೋಯ್ತು. ಮುಧೋಳ ನಗರಕ್ಕೆ ಹೊಂದಿಕೊಂಡೇ ಇರುವುದರಿಂದ ಜಾರುವ ಬೂದಿ ಇಡೀ ನಗರ ತುಂಬ ಹರಡುತ್ತಿದ್ದರೂ ಜನ ಸಹಿಸಿಕೊಂಡು ಬದುಕುವ ಸ್ಥಿತಿ ನಿರ್ಮಾಣವಾಯಿತು.
Image result for niraniಕಳೆದ ಸಾರಿ ಬೀಳಗಿ ಕ್ಷೇತ್ರದಿಂದ ಜೆ.ಟಿ.ಪಾಟೀಲ ವಿರುದ್ಧ ಸೋತು ಹೋದಾಗ ಮುಧೋಳದ ಈ ಕಾರ್ಖಾನೆಯ ಸ್ಥಳಾಂತರದ ಬಗ್ಗೆ ಕೂಡ ಚರ್ಚೆ ನಡೆದಿತ್ತು. ಆದರೆ ಈ ಸಾರಿ ಮತ್ತೆ ಬೀಳಗಿಯಿಂದ ಶಾಸಕನಾಗಿ ಆರಿಸಿ ಬಂದ ನಂತರ ಮತ್ತೇ ಇಲ್ಲಿ ಕಾರ್ಖಾನೆಯ ವಿಸ್ತರಣೆಯನ್ನು ಆರಂಭಿಸಿದ್ದಾನೆ. ಈಗ ನಡೆದ ದುರಂತ ಕೂಡ ಹಪಾಹಪಿಗೆ ಬಿದ್ದು ಅದನ್ನು ವಿಸ್ತರಿಸುತ್ತಿರುವ ಕಾರಣಕ್ಕಾಗಿಯೇ ನಡೆದದ್ದು, ಕಡಿಮೆ ಕಾರ್ಮಿಕರನ್ನು ನೇಮಕ ಮಾಡಿಕೊಂಡು ಕೆಲಸ ತೆಗೆಯುವ ಕುತಂತ್ರದಿಂದಾಗಿ ಕಾರ್ಮಿಕರು ಜೀವ ಕಳೆದುಕೊಳ್ಳುವಂತಾಗಿದೆ. ಮಿಥೇನ್‍ನಂಥ ಸ್ಪೋಟಕ ವಸ್ತುವನ್ನು ಸಂಗ್ರಹಿಸುವ ಘಟಕದಲ್ಲಿ ಕೇವಲ ಏಳು ಜನ ಕಾರ್ಮಿಕರು ಮಾತ್ರ ಕೆಲಸ ಮಾಡುತ್ತಿದ್ದರು ಎಂದರೆ ನಂಬಲು ಸಾಧ್ಯವೇ? ಸ್ಥಳೀಯರ ಮಾಹಿತಿ ಪ್ರಕಾರ ಹೊರರಾಜ್ಯದ ಹಲವಾರು ಕಾರ್ಮಿಕರು ಅಲ್ಲಿ ಕೆಲಸ ಮಾಡುತ್ತಿದ್ದು ಅವರ ಬಗ್ಗೆ ಈವರೆಗೂ ಸರಿಯಾದ ಮಾಹಿತಿ ಸಿಗುತ್ತಿಲ್ಲ. ಸ್ಥಳೀಯರನ್ನು ಮಾತ್ರ ಗುರುತಿಸಿ ಹೊರರಾಜ್ಯ ಕಾರ್ಮಿಕರ ಸಾವನ್ನು ಮುಚ್ಚಿಡುತ್ತಿದ್ದಾರೆ ಎಂಬ ಗುಮಾನಿ ಕೂಡ ದಟ್ಟವಾಗಿದೆ. ಒಟ್ಟಾರೆ ಸರಿಯಾದ ತಾಂತ್ರಿಕ ಸಿಬ್ಬಂದಿಯನ್ನು ನೇಮಿಸಿಕೊಳ್ಳದೇ ಲಾಭ ಹೆಚ್ಚಿಸಿಕೊಳ್ಳುವ ದಾಹಕ್ಕೆ ಅಮಾಯಕ ಜೀವಗಳು ಬಲಿಯಾಗುವಂತಾಗಿದೆ.
ಆಶ್ಚರ್ಯವೆಂದರೆ ಈ ಘಟನೆಯ ಬಗ್ಗೆ ಸರಿಯಾದ ತನಿಖೆ ನಡೆಸಿ, ಮಾಹಿತಿ ಸಂಗ್ರಹಿಸಿ ಅಮಾಯಕರ ಸಾವಿಗೆ ಕಾರಣನಾದ ನಿರಾಣಿಯನ್ನು ಕಾನೂನಾತ್ಮಕವಾಗಿ ಶಿಕ್ಷೆ ಅನುಭವಿಸುವಂತೆ ಮಾಡಬೇಕಿರುವ ಜಿಲ್ಲಾಡಳಿತ, ಕಾರ್ಮಿಕರ ಹಾಗೂ ಪೊಲೀಸ್ ಇಲಾಖೆಯ ಅಧಿಕಾರಿಗಳು ಈತನ ಆಣತಿಗೆ ಕುಣಿಯುತ್ತಿದ್ದಾರೆ. ಯಾವುದೇ ನಗರ ಅಥವಾ ಜನವಸತಿ ಪ್ರದೇಶದಿಂದ ಚಿಷ ಸೂಸುವ ಅಪಾಯಕಾರಿ ವಸ್ತುಗಳನ್ನು ಉತ್ಪಾದಿಸುವ, ಪರಿಸರ ಮಾಲಿನ್ಯಕ್ಕೆ ಕಾರಣವಾಗಿ ಜನರ ಆರೋಗ್ಯ ಅಥವಾ ಬದುಕಿಗೆ ಅಪಾಯ ತರಬಲ್ಲ ಕಾರ್ಖಾನೆಗಳು ದೂರವಿರಬೇಕೆಂಬ ಕಾನೂನು ಇದೆ. ಈ ಕಾರ್ಖಾನೆ ಮುಧೋಳ ನಗರಕ್ಕೆ ಹೊಂದಿಕೊಂಡಿದೆ. ಇಡೀ ಮುಧೋಳ ನಗರದ ಜನತೆ ಪರಿಸರ ಮಾಲಿನ್ಯದಿಂದಾಗಿ ಕಲುಷಿತ ಗಾಳಿಗೆ ಉಸಿರಾಟದಿಂದಾಗಿ ಹಲವಾರು ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಜೊತೆಗೆ ಈ ಕಾರ್ಖಾನೆಯಿಂದ ಕೆಲವೇ ದೂರದ ಅಂತರದಲ್ಲಿ ಘಟಪ್ರಭ ನದಿ ಹರಿಯುತ್ತಿದೆ. ಇದು ಹಲವಾರು ಹಳ್ಳಿಗಳ ಜನರಿಗೆ ಜಾನುವಾರುಗಳಿಗೆ ಕುಡಿಯುವ ನೀರಿಗೆ ಆಧಾರ. ಈ ಕಾರ್ಖಾನೆಯಿಂದ ಹಾರುವ ಬೂದಿ ಮತ್ತು ಕಲುಷಿತ ನೀರು ನದಿಯನ್ನು ಸೇರುತ್ತಿದೆ. ರೈತ ಸಂಘದವರು, ನಾಗರಿಕರು ಸಾಕಷ್ಟು ಹೋರಾಟ ಮಾಡಿ ಗಮನ ಸೆಳೆದರೂ ಅಧಿಕಾರಿಗಳ ಕಾಯ್ದೆಗೆ ವಿರುದ್ಧವಾಗಿ ನಿಂತಿರುವ ಕಾರ್ಖಾನೆಯ ಮೇಲೆ ಕ್ರಮ ಕೈಗೊಳ್ಳುವ ನದಲು ಮಾಲಿಕರೊಂದಿಗೆ ಶಾಮಿಲಾಗಿ ತೇಪೆ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ಪರಿಸರ ಮಾಲಿನ್ಯ ತಡೆಗಟ್ಟುವ ಸಲಹೆಗಳನ್ನು ಕೊಡುತ್ತಿದ್ದಾರೆ ಹೊರತು ಕ್ರಮಕ್ಕೆ ಮುಂದಾಗುತ್ತಿಲ್ಲ. ಈ ರೀತಿ ತ್ಯಾಜ್ಯ ವಸ್ತುವಿನ ಉಪ ಉತ್ಪನ್ನ ತಯಾರಿಸಿ ಕಾರ್ಖಾನೆ ಉಳಿಸಿಕೊಳ್ಳುವ ಈತನ ಅಡ್ಡ ಮಾರ್ಗವೇ ಈಗ ಕಾರ್ಮಿಕರ ಸಾವಿಗೆ ಕಾರಣವಾಗಿದೆ. ಇಲ್ಲಿ ಇನ್ನೂ ಒಂದು ಮುಖ್ಯವಾದ ಅಂಶವೆಂದರೆ ಕೃಷಿ ವಲಯವಿರುವ ಪ್ರದೇಶದಲ್ಲಿ ಕೈಗಾರಿಕೆಗಳು ಇರಬಾರದೆಂಬ ನೀತಿ ಇದ್ದರೂ ಇಲ್ಲಿ ಅದನ್ನು ಗಾಳಿಗೆ ತೂರಲಾಗಿದೆ. ಈ ಕಾರ್ಖಾನೆ ಯ ಸುತ್ತಮುತ್ತ ಫಲವತ್ತಾದ ಕೃಷಿ ಜಮೀನು ಇದೆ. ಈ ಕಾರ್ಖಾನೆಯಿಂದಾಗಿ ಸುತ್ತಮುತ್ತಲಿರುವ ರೈತರ ಬದುಕು ನರಕ ಸದೃಶವಾಗಿದೆ. ಗಾಳಿಯ ತುಂಬ ಕಾರ್ಬನ್ ತುಂಬಿಹೋಗಿರುವುದರಿಂದ ಕುಡಿಯುವ ನೀರಿಗೂ ಆಹಾಕಾರವಿದೆ. ಬೂದಿ ಬೀಳುವುದರಿಂದ ಯಾವ ಬೆಳೆ ಬೆಳೆದರೂ ಮೊಳಕೆಯೊಡೆಯುವ ಹಂತದಲ್ಲಿಯೇ ಅದು ಸುಟ್ಟುಹೋಗುತ್ತಿದೆ. ಈ ಅಸಹಾಯಕತೆಯನ್ನು ಬಳಸಿಕೊಳ್ಳುತ್ತಿರುವ ನಿರಾಣಿ ಅಂಥವರ ಜಮೀನುಗಳನ್ನು ಪುಡಿಗಳನ್ನು ಪುಡಿಗಾಸಿಗೆ ಖರೀದಿಸಿ ಕಾರ್ಖಾನೆಯ ವಿಸ್ತರಣೆಯಲ್ಲಿ ತೊಡಗಿದ್ದಾನೆ. ತಾನು ಮಂತ್ರಿಯಾಗಿದ್ದಾಗ ನಡೆಸಿದ ಲೂಟಿಯಿಂದ ಬಂದ ಹಣವನ್ನೆಲ್ಲ ಬೇನಾಮಿ ಆಸ್ತಿ ಮತ್ತು ಕಾರ್ಖಾನೆಗಳಲ್ಲಿ ಸುರಿಯುತ್ತ ಇಂದು ಜಿಲ್ಲೆಯಲ್ಲಿ ತನ್ನದೇ ಅಧಿಪತ್ಯ ಸ್ಥಾಪಿಸಿಕೊಂಡಿದ್ದಾನೆ. ಅದನ್ನು ಬಳಸಿಕೊಂಡು ರಾಜಕೀಯದಲ್ಲಿ ಪ್ರಭಾವ ಬೆಳೆಸಿಕೊಂಡಿದ್ದಾನೆ. ಅಧಿಕಾರಿಗಳನ್ನು ನಿಯಂತ್ರಣದಲ್ಲಿಟ್ಟುಕೊಂಡಿದ್ದಾನೆ.
ಒಟ್ಟಾರೆ ಈತನ ಅಧಿಕಾರ ಹಾಗೂ ಹಣದ ಹಪಾಹಪಿ ಮತ್ತು ಕಾರ್ಖಾನೆಗಳ ವಿಸ್ತರಣೆಯ ದಾಹಕ್ಕೆ ಅಮಾಯಕ ಕಾರ್ಮಿಕ ಜೀವಗಳು ಬಲಿಯಾಗಿವೆ. ಕೇಳಬೇಕಾದ ಅಧಿಕಾರಿಗಳು ಹಾಗೂ ಸ್ಥಳೀಯ ವಿರೋಧ ಪಕ್ಷದ ನಾಯಕರು ಈತನ ಋಣಭಾರದಲ್ಲಿ ಬದುಕುತ್ತಿದ್ದಾರೆ. ಇನ್ನು ಈ ಸಾವುಗಳ ಬಗ್ಗೆ ಕೇಳುವವರ್ಯಾರು?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪಂಜಾಬ್‌| ಎಲ್‌ಪಿಜಿ ಸಿಲಿಂಡರ್‌ಗಾಗಿ ಸರತಿ ಸಾಲಿನಲ್ಲಿ ನಿಂತಿದ್ದಾಗಲೇ ಕುಸಿದು ಬಿದ್ದು ಸಾವನ್ನಪ್ಪಿದ ವೃದ್ಧ

ಪಂಜಾಬ್‌ನ ಬರ್ನಾಲಾ ಜಿಲ್ಲೆಯಲ್ಲಿ, ಎಲ್‌ಪಿಜಿ ಸಿಲಿಂಡರ್‌ಗಾಗಿ ಸರತಿ ಸಾಲಿನಲ್ಲಿ ಕಾಯುತ್ತಿದ್ದಾಗ 66 ವರ್ಷದ ವ್ಯಕ್ತಿಯೊಬ್ಬರು ಹೃದಯಾಘಾತದಿಂದ ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ಶುಕ್ರವಾರ ನಡೆದಿದೆ. ದೇಶದಲ್ಲಿ ಪ್ರಸ್ತುತ ನಡೆಯುತ್ತಿರುವ ಅನಿಲ ಕೊರತೆಯಿಂದ ಉಂಟಾಗುತ್ತಿರುವ...

ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಪದಚ್ಯುತಿಗೆ ಉಭಯ ಸದನಗಳಲ್ಲಿ ನೋಟಿಸ್ ಸಲ್ಲಿಸಿದ ವಿಪಕ್ಷಗಳು

ನವದೆಹಲಿ: ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಜ್ಞಾನೇಶ್ ಕುಮಾರ್ ಅವರನ್ನು ಪದಚ್ಯುತಗೊಳಿಸುವಂತೆ ಕೋರಿ ವಿರೋಧ ಪಕ್ಷದ ಸಂಸದರು ಸಂಸತ್ತಿನ ಉಭಯ ಸದನಗಳಲ್ಲಿ ನೋಟಿಸ್ ಸಲ್ಲಿಸಿರುವುದಾಗಿ ಶುಕ್ರವಾರ ವರದಿಯಾಗಿದೆ.  ಈ ನೋಟಿಸ್‌ಗೆ 130 ಲೋಕಸಭಾ ಸದಸ್ಯರು...

ಹಿಂದೂಯೇತರರಿಗೆ ದೇಗುಲ ಪ್ರವೇಶಕ್ಕೆ ನಿಷೇಧ ಹೇರಿದ ಬದರೀನಾಥ್-ಕೇದಾರನಾಥ ದೇವಾಲಯಗಳ ಸಮಿತಿ

ಮುಂಬರುವ ತೀರ್ಥಯಾತ್ರೆಯ ಋತುವಿನಿಂದ ಜಾರಿಗೆ ಬರುವಂತೆ ಬದರೀನಾಥ್ ಮತ್ತು ಕೇದಾರನಾಥ ದೇವಾಲಯಗಳು ಸೇರಿದಂತೆ ಅದರ ವ್ಯಾಪ್ತಿಯಲ್ಲಿರುವ 47 ಇತರ ದೇವಾಲಯಗಳಿಗೆ ಹಿಂದೂಯೇತರರ ಪ್ರವೇಶವನ್ನು ನಿಷೇಧಿಸುವ ನಿರ್ಣಯವನ್ನು ಸರ್ವಾನುಮತದಿಂದ ದೇವಾಲಯ ಸಮಿತಿಯು ಅಂಗೀಕರಿಸಿದೆ. ಬಿಕೆಟಿಸಿ ಅಧ್ಯಕ್ಷ...

‘ಮಹಿಳೆಯರನ್ನು ಯಾರೂ ಕೆಲಸಕ್ಕೆ ನೇಮಿಸಿಕೊಳ್ಳುವುದಿಲ್ಲ..’; ಕಡ್ಡಾಯ ಮುಟ್ಟಿನ ರಜೆ ಕುರಿತ ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್ 

ಮಹಿಳೆಯರಿಗೆ ಕಡ್ಡಾಯ ಮುಟ್ಟಿನ ರಜೆ 'ಅವರ ಉದ್ಯೋಗದ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು'. ಏಕೆಂದರೆ, ನಾವು ಅಂತಹ ಕಾನೂನನ್ನು ಜಾರಿಗೆ ತಂದರೆ ಉದ್ಯೋಗದಾತರು ಮಹಿಳೆಯರನ್ನು ಕೆಲಸಕ್ಕೆ ನೇಮಿಸಿಕೊಳ್ಳುವುದಿಲ್ಲ' ಎಂದು ಸುಪ್ರೀಂ ಕೋರ್ಟ್‌ ಮುಖ್ಯ...

ಪ್ಯಾಲೆಸ್ತೀನಿಯನ್ ಬಂಧಿತನ ಮೇಲೆ ಲೈಂಗಿಕ ದೌರ್ಜನ್ಯ; ಇಸ್ರೇಲ್ ಸೈನಿಕರ ವಿರುದ್ಧದ ಆರೋಪ ಕೈಬಿಟ್ಟ ಸೇನೆ

ಕ್ಯಾಮೆರಾದಲ್ಲಿ ಭಾಗಶಃ ಸೆರೆಹಿಡಿಯಲಾದ ಹಲ್ಲೆಯಲ್ಲಿ, ಬಂಧಿತ ಪ್ಯಾಲೆಸ್ತೀನಿಯನ್ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಹೊತ್ತಿರುವ ಐದು ಸೈನಿಕರ ವಿರುದ್ಧದ ಆರೋಪಗಳನ್ನು ಕೈಬಿಡುತ್ತಿರುವುದಾಗಿ ಇಸ್ರೇಲ್ ಸೇನೆ (ಮಾರ್ಚ್ 12) ತಿಳಿಸಿದೆ. ಈ ಘೋಷಣೆಯನ್ನು ಪ್ರಧಾನಿ...

‘ಇರಾನ್ ಸರ್ವೋಚ್ಚ ನಾಯಕ ಜೀವಂತವಾಗಿರಬಹುದು, ಆದರೆ ಗಂಭೀರವಾಗಿ ಗಾಯಗೊಂಡಿದ್ದಾರೆ’: ಡೊನಾಲ್ಡ್ ಟ್ರಂಪ್

ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಮೊಜ್ತಬಾ ಖಮೇನಿ(56) "ಬಹುಶಃ ಜೀವಂತವಾಗಿದ್ದಾರೆ ಆದರೆ ಗಂಭೀರವಾಗಿ ಗಾಯಗೊಂಡಿದ್ದಾರೆ" ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಶುಕ್ರವಾರ ಪ್ರಸಾರವಾದ ಫಾಕ್ಸ್ ನ್ಯೂಸ್ ರೇಡಿಯೋದ ಬ್ರಿಯಾನ್ ಕಿಲ್ಮೀಡ್ ಅವರ...

ಬಾಗಲಕೋಟೆ| ಜನರ ಮೇಲೆ ಕಲ್ಲು ಎಸೆದ ಆರೋಪ; ಸಾವಳಗಿಯಲ್ಲಿ ದಲಿತ ಯುವಕನನ್ನು ಕೊಂದ ಗುಂಪು

ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲ್ಲೂಕಿನ ಸಾವಳಗಿ ಗ್ರಾಮದಲ್ಲಿ ದಲಿತ ದೌರ್ಜನ್ಯದ ಆಘಾತಕಾರಿ ಘಟನೆಯೊಂದು ನಡೆದಿದೆ. ಶಾಲಾ ಕಾರ್ಯಕ್ರಮವೊಂದರಲ್ಲಿ ಜನರ ಮಲೆ ಸಣ್ಣ ಕಲ್ಲು ಎಸೆದ ಎಂಬ ಆರೋಪದ ಮೇಲೆ ದಲಿತ ಯುವಕನನ್ನು ಕ್ರೂರವಾಗಿ...

ಒಳಮೀಸಲಾತಿ ಇಲ್ಲದೆ 56 ಸಾವಿರ ಹುದ್ದೆಗಳ ನೇಮಕಾತಿ ಇಲ್ಲ: ಸಚಿವ ಮುನಿಯಪ್ಪ

“ಒಳಮೀಸಲಾತಿ ಇಲ್ಲದೆ ಒಂದೇ ಒಂದು ಹುದ್ದೆಯನ್ನೂ ನೇಮಕ ಮಾಡಲು ಬಿಡುವುದಿಲ್ಲ, ಮುಖ್ಯಮಂತ್ರಿಗಳು ಈ ಬಗ್ಗೆ ಒಪ್ಪಿಕೊಂಡಿದ್ದಾರೆ. 27ರಂದು ನಡೆಯುವ ಸಚಿವ ಸಂಪುಟ ಸಭೆ ನಮಗೆ ಚಾರಿತ್ರಿಕವಾಗಲಿದೆ. ಮುಖ್ಯಮಂತ್ರಿಗಳ ಮೇಲೆ ವಿಶ್ವಾಸ ಇರಲಿ” ಎಂದು...

ಪಶ್ಚಿಮ ಏಷ್ಯಾ ಸಂಘರ್ಷ| ‘ಈ ಯುದ್ಧವನ್ನು ಕೊನೆಗೊಳಿಸಲು ಒಂದೇ ಮಾರ್ಗ…’: ಮೂರು ಷರತ್ತುಗಳನ್ನು ಮುಂದಿಟ್ಟ ಇರಾನ್

ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಅವರು ಅಮೆರಿಕ ಮತ್ತು ಇಸ್ರೇಲ್ ಜೊತೆಗಿನ ನಡೆಯುತ್ತಿರುವ ಸಂಘರ್ಷವನ್ನು ಕೊನೆಗೊಳಿಸಲು ಮೂರು ಷರತ್ತುಗಳನ್ನು ನಿಗದಿಪಡಿಸಿದ್ದಾರೆ. ಇದರಲ್ಲಿ ದೇಶವು ಭವಿಷ್ಯದ ದಾಳಿಗಳನ್ನು ಎದುರಿಸುವುದಿಲ್ಲ ಎಂಬ ಖಾತರಿಗಳು ಸೇರಿವೆ. ಬುಧವಾರ ತಮ್ಮ...

ಖಾಸಗಿ ಜಾಗದ ನಮಾಝ್‌ಗೆ ಅಧಿಕಾರಿಗಳಿಂದ ಅಡ್ಡಿ : ಮುಸ್ಲಿಂ ವ್ಯಕ್ತಿಗೆ ಭದ್ರತೆ ಒದಗಿಸಲು ಕೋರ್ಟ್ ಆದೇಶ

ಉತ್ತರ ಪ್ರದೇಶದ ಬರೇಲಿ ಜಿಲ್ಲೆಯ ಮುಸ್ಲಿಂ ವ್ಯಕ್ತಿಯೊಬ್ಬರು ತಮ್ಮ ಖಾಸಗಿ ಜಾಗದಲ್ಲಿ ಇತರರೊಂದಿಗೆ ನಮಾಝ್ ಮಾಡುವುದಕ್ಕೆ ಅಡ್ಡಿಪಡಿಸಲಾಗಿದೆ ಎಂದು ಆರೋಪಿಸಿದ ಹಿನ್ನೆಲೆ, ಅವರಿಗೆ ದಿನದ 24 ಗಂಟೆಯೂ ರಕ್ಷಣೆ ನೀಡಲು ಇಬ್ಬರು ಭದ್ರತಾ...