Homeಮುಖಪುಟಸಕ್ಕರೆ ದಾಹಕ್ಕೆ ಕಾರ್ಮಿಕರಿಗೇ ಬೆಂಕಿಯಿಟ್ಟ ನಿರಾಣಿ!

ಸಕ್ಕರೆ ದಾಹಕ್ಕೆ ಕಾರ್ಮಿಕರಿಗೇ ಬೆಂಕಿಯಿಟ್ಟ ನಿರಾಣಿ!

- Advertisement -
- Advertisement -

 ಮಹಾಲಿಂಗಪ್ಪ ಆಲಬಾಳ |

ಬಾಗಲಕೋಟೆ ಜಿಲ್ಲೆಯ ಮುಧೋಳ ನಗರಕ್ಕೆ ಹೊಂದಿಕೊಂಡಿರುವ ಬಿಜೆಪಿಯ ಮಾಜಿ ಮಂತ್ರಿ ಹಾಲಿ ಬೀಳಗಿಯ ಶಾಸಕ ಮುರುಗೇಶ್ ನಿರಾಣಿ ಒಡೆತನದ ನಿರಾಣಿ ಶುಗರ್ಸ್ ಕಾರ್ಖಾನೆಯಲ್ಲಿ ನಡೆದ ದುರಂತದಲ್ಲಿ ಹಲವಾರು ಅಮಾಯಕ ಜನ ಪ್ರಾಣ ಕಳೆದುಕೊಂಡಿದ್ದಾರೆ. ಕಾರ್ಖಾನೆಯ ಮಾಲೀಕರು ಮತ್ತು ಸರಕಾರದ ಅಧಿಕಾರಿಗಳು ನಾಲ್ಕು ಜನ ಕಾರ್ಮಿಕರು ಸಾವಿಗೀಡಾಗಿ ಮೂರು ಜನ ತೀವ್ರವಾಗಿ ಗಾಯಗೊಂಡಿದ್ದಾರೆಂದು ಹೇಳುತ್ತಿದ್ದರಾದರೂ ಅಲ್ಲಿನ ದುರಂತದ ತೀವ್ರತೆ ಈ ಅಂಕಿಸಂಖ್ಯೆಗಳ ಬಗ್ಗೆಯೇ ಸಂಶಯ ಮೂಡುವಂತೆ ಮಾಡಿದೆ.
ವಾಸ್ತವದಲ್ಲಿ ಇದು ಮುರುಗೇಶ ನಿರಾಣಿಯ ಹಪಾಹಪಿ ಮತ್ತು ನಿರ್ಲಕ್ಷತನ ಪರಿಣಾಮ. ಅಂದು ಎಂದಿನಂತೆ ಕಾರ್ಖಾನೆ ನೂರಾರು ಕಾರ್ಮಿಕರು ಮತ್ತು ರೈತರಿಂದ ತುಂಬಿಹೋಗಿದೆ. ಕಾರ್ಖಾನೆಯಿಂದ ಸುಮಾರು 300 ಮೀಟರ್ ಅಂತರದಲ್ಲಿ ಸ್ಪಿರಿಟ್ ತಯಾರಿಸುವ ಘಟಕ ಇದೆ. ಸಕ್ಕರೆ ತಯಾರಿಸುವಾಗ ಹೊರಬರುವ ಮೊಲ್ಯಾಸಿಸ್ ಎಂಬ ಕಚ್ಚಾವಸ್ತುವಿನಿಂದ ಸ್ಪಿರಿಟ್ ತಯಾರಿಸುವ ಘಟಕ ಇದೆ. ಈ ಸ್ಪಿರಿಟ್ ಅನ್ನು ಸರಾಯಿ ತಯಾರಿಕೆಗೆ ಬಳಸಲಾಗುತ್ತದೆ.
ಈ ಸ್ಪಿರಿಟ್ ತಯಾರಿಕೆಯ ನಂತರ ಅದನ್ನು ನೀರಿನಿಂದ ಶುದ್ಧಿಕರಿಸಿ ಮತ್ತೇ ಅದೇ ನೀರನ್ನು ಮರುಬಳಕೆ ಮಾಡಲಾಗುತ್ತದೆ. ಈ ಸ್ಪಿರಿಟ್‍ನ್ನು ಶುದ್ಧಿಕರಿಸಿದ ನೀರಿನಲ್ಲಿ ಮಿಥೇನ್ ಅಂಶ ಉಳಿದಿರುತ್ತದೆ. ಈ ಮಿಥೇನ್‍ಅನ್ನು ಪ್ರತ್ಯೇಕಗೊಳಿಸಿ ಅದನ್ನು ವಿದ್ಯುತ್ ತಯಾರಿಕೆಗೆ ಬಳಸುವ ಘಟಕವೊಂದು ಸಮೀಪದಲ್ಲಿದೆ. ಅಂದು 16ರ ಮಧ್ಯಾಹ್ನ 12 ಗಂಟೆಗೆ ಈ ಮಿಥೇನ್‍ನ್ನು ಪ್ರತ್ಯೇಕಿಸುವ ಘಟಕದಲ್ಲಿನ ಬಾಯ್ಲರ್ ಸ್ಪೋಟಗೊಂಡಿದೆ. ಈ ಸ್ಫೋಟದ ತೀವ್ರತೆ ಎಷ್ಟಿತ್ತೆಂದರೆ ಇಡೀ ಮೂರಂತಸ್ತಿನ ಕಟ್ಟಡ ನೆಲಸಮವಾಗಿ ಅದರ ಅವಶೇಷಗಳು ನೂರಾರು ಮೀಟರ್ ದೂರದವರೆಗೂ ಚದುರಿಹೋಗಿವೆ. ಸ್ಫೋಟದ ಶಬ್ದ ಕಿಲೋ ಮೀಟರ್‍ವರೆಗೂ ಕೇಳಿ ಅಕ್ಕ-ಪಕ್ಕದ ಹಳ್ಳಿಗಳ ನೆಲ ನಡುಗಿದ ಅನುಭವವಾಗಿದೆ. ಇವರು ಹೇಳುವ ಪ್ರಕಾರ ಅಂಥ ದೊಡ್ಡ ಘಟಕ ಕೇವಲ ಏಳುಜನ ಕಾರ್ಮಿಕರಿಂದ ನಡೆಯಲು ಸಾಧ್ಯವಿಲ್ಲ. ಅಲ್ಲಿನ ಪರಿಸ್ಥಿತಿ ಗಮನಿಸಿದರೆ ಅದರಲ್ಲಿರುವವರ್ಯಾರೂ ಬದುಕಿ ಉಳಿದಿರುವ ಸಾಧ್ಯತೆಗಳೇ ಇಲ್ಲ.
ಹಾಗೆ ನೋಡಿದರೆ ಈ ಮುರುಗೇಶ ನಿರಾಣಿಯ ಎಡವಟ್ಟುಗಳು ಒಂದೆರಡಲ್ಲ ಈತನ ಶ್ರೀಮಂತಿಕೆಯ ದಾಹಕ್ಕೆ ಬಲಿಯಾಗಿ ಬದುಕು ಕಳೆದುಕೊಂಡವರ ಸಂಖ್ಯೆ ಬಹಳ ದೊಡ್ಡದಿದೆ.
ಮೂಲತಃ ಬೀಳಗಿ ತಾಲ್ಲೂಕಿನ ಇನಾಮ ಹಂಚನಾಳ ಗ್ರಾಮದ ರುದ್ರಪ್ಪ ಎಂಬುವವರಿಗೆ ಮುರುಗೇಶ ನಿರಾಣಿ ಸೇರಿದಂತೆ ಐದುಜನ ಮಕ್ಕಳು ಸುಮಾರು 100 ಎಕರೆಯಷ್ಟು ಜಮೀನು ಹೊಂದಿದ್ದ ಈ ರುದ್ರಪ್ಪ ಈ ಭಾಗದ ಕುಖ್ಯಾತ “ಬಡ್ಡಿಕುಳ” ಜನರ ಕಪ್ಪಕ್ಕೆ ಹಣ ನೀಡಿ ದೊಡ್ಡಮಟ್ಟದ ಬಡ್ಡಿ ಸುಲುಗೆ ಮಾಡುವ ಈ ಹಣದ ಹಪಾಹಪಿ ಮಕ್ಕಳಿಗೂ ಬಳುವಳಿಯಾಗಿ ಬಂದಿದೆ. ಡಿಪ್ಲೊಮಾ ಪದವಿ ಪಡೆದು ಬಂದ ಮುರುಗೇಶ ನಿರಾಣಿ ಆರಂಭದಲ್ಲಿ ತೊಡಗಿಸಿ ಕೊಂಡದ್ದು ಟ್ರ್ಯಾಕ್ಟರ್ ಟ್ರೇಲರ್ ತಯಾರಿಕೆ ದಂಧೆಯಲ್ಲಿ ಎಂಆರ್‍ಎನ್ ಹೆಸರಿನ ಟ್ರೇಲರ್ ತಯಾರಿಸಿ ರೈತರಿಗೆ ಮಾರುತ್ತ ಒಂದಷ್ಟು ಹಣ ಕೂಡಿದ ಮೇಲೆ ಕೈ ಹಾಕಿದ್ದು ಈ ಸಕ್ಕರೆ ಉದ್ಯಮಕ್ಕೆ ಶ್ರೀಕಾಂತ ಬಾಹೋತಿ ಎಂಬ ಮಹಾರಾಷ್ಟ್ರದ ವ್ಯಾಪಾರಿಯೊಬ್ಬನನ್ನು ಪಾಲುದಾರಿಕೆಗೆ ಒಪ್ಪಿಸಿ ಮುಧೋಳ ನಗರದ ಸಮೀಪ ತನ್ನ ಚಿಕ್ಕಪ್ಪನ ಮಗ ಶಿವಪ್ಪ ಅವರಿಗೆ ಸೇರಿದ್ದ ಜಮೀನಿನಲ್ಲಿ ಸಣ್ಣದೊಂದು ಕಚ್ಚಾ ಸಕ್ಕರೆ ತಯಾರಿಕೆ ಘಟಕವನ್ನು ಪಾಲುದಾರಿಕೆಯಲ್ಲಿ ಶುರುಮಾಡಿದ ಮೊದಲಿನಿಂದಲೂ ಬಿಜೆಪಿ ಸಂಘಪರಿವಾರ ಅಂತ ಓಡಾಡಿಕೊಂಡಿದ್ದ ಈತ 2004ರಲ್ಲಿ ಬೀಳಗಿ ಕ್ಷೇತ್ರದಿಂದ ಎಂಎಲ್‍ಎ ಆಗಿಬಿಟ್ಟ. ಅಧಿಕಾರ ಸಿಕ್ಕಿದ್ದೇ ತಡ ಪಾಲುದಾರ ಬಾಹೇತಿಯನ್ನು ಕೊಡಬಾರದ ಕಿರುಕುಳ ಕೊಟ್ಟು ಹೊರಹಾಕಿ ಕಾರ್ಖಾನೆಯನ್ನು ಸ್ವಂತ ಮಾಡಿಕೊಂಡು ನಂತರ ರಾಜಕೀಯದಲ್ಲಿ ನುಂಗಿದ್ದನೆಲ್ಲ ಅದಕ್ಕೆ ಸುರಿದು ವಿಸ್ತರಣೆ ಮಾಡುತ್ತ ಹೋದ,. 2008ರಲ್ಲಿ ಮತ್ತೊಮ್ಮೆ ಗೆದ್ದು ಯಡಿಯೂರಪ್ಪ ಸಂಪುಟದಲ್ಲಿ ಭಾರಿ ಕೈಗಾರಿಕಾ ಸಚಿವನಾಗಿದದ್ದೇ ಈತನ ಕುಟುಂಬದ ಖದರ್ರೇ ಬದಲಾಗಿಹೋಯಿತು. ಹಣದ ಹೊಳೆ ಹರಿದು ಬರಲಾರಂಭಿಸಿತು. ಒಂದರತ್ತೆಲ್ಲ ಕಾರ್ಖಾನೆ ದೇಶದ ಅತೀ ದೊಡ್ಡ ಕಾರ್ಖಾನೆಗಳ ಸಾಲಿಗೆ ಬಂದು ನಿಂತಿದ್ದಲ್ಲದೆ, ಜಮಖಂಡಿ ತಾಲ್ಲೂಕಿನ ಹಿಪ್ಪರಗಿ ಗ್ರಾಮದಲ್ಲಿ ಸಾಂಬಿಪ್ರಿಯಾ ಶುಗರ್ಸ್, ಬದಾಮಿ ತಾಲ್ಲೂಕಿನ ಕುಳಗೇರಿ ಕ್ರಾಸ್ ಬಳಿ ಸಂಗಮೇಶ ಶುಗರ್ಸ್, ಸಿಮೆಂಟ್ ಕಾರ್ಖಾನೆ ಹೀಗೆ ಹಲವಾರು ಕಾರ್ಖಾನೆಗಳು ತಲೆಎತ್ತಿ ನಿಂತವು.
ಹೀಗೆ ನೋಡನೋಡುತ್ತಿದ್ದಂತೆ ಕೆಲವೇ ವರ್ಷಗಳಲ್ಲಿ ಜಿಲ್ಲೆಯ ಸಕ್ಕರೆ ಸಾಮ್ರಾಜ್ಯವನ್ನೇ ನಿಯಂತ್ರಿಸುವ ಮಟ್ಟಕ್ಕೆ ಬೆಳೆದು ನಿಂತ ಮುರುಗೇಶ ನಿರಾಣಿಯ ಹಸಿವು ಮಾತ್ರ ತಣಿಸಲೇ ಇಲ್ಲ. ಮಾಡಬಾರದ ಕೆಲಸಗಳು, ಹಿಡಿಯಬಾರದ ಅಡ್ಡದಾರಿಗಳನ್ನೆಲ್ಲ ಹಿಡಿದು ಜನರನ್ನು ಪೀಡಿಸತೊಡಗಿದ, ರೈತರನ್ನು ಮೋಸಗೊಳಿಸತೊಡಗಿದ ಎಂಬ ಪ್ರಾಮಾಣಿಕ ರೈತ ನಾಯಕನ ನೇತೃತ್ವದಲ್ಲಿ ಆರಂಭವಾದ ಈತನ ಅನಾವಾರಗಳ ವಿರುದ್ಧದ ಹೋರಾಟ ಎಷ್ಟು ತೀವ್ರವಾಗಿತ್ತೆಂದರೆ ಈ ಕಾರ್ಖಾನೆ ನಡೆಯುವುದೇ ದುಸ್ತರವಾಯಿತು.
ಕಾರ್ಖಾನೆಯಿಂದಾಗುವ ಪರಿಸರ ಮಾಲಿನ್ಯ ರೈತರ ಕಬ್ಬು ತೂಕದಲ್ಲಿನ ಮೋಸ, ಕಾರ್ಮಿಕರ ಕೆಲಸದ ಒತ್ತಡ, ಕಬ್ಬಿನ ಬೆಲೆ, ಈತನ ಗೂಂಡಾಗಿರಿ ಎಲ್ಲದರ ವಿರುದ್ಧ ರೈತಸಂಘ ನಿರ್ಣಾಯಕ ಹೋರಾಟ ನಡೆಸಿತ್ತು. ಆಗಲೂ ರೈತ ಮುಖಂಡರನ್ನು ಹೆಸರಿಸುವುದು, ಖರೀದಿಸುವುದು ಎಲ್ಲ ಪ್ರಯತ್ನಗಳನ್ನು ನಡೆಸಿದ್ದ ಈತ ಅದರಲ್ಲಿ ವಿಫಲನಾಗಿದ್ದ. ಆದರೆ ಈ ಭಾಗದ ರೈತರು ಜನರ ದುರದೃಷ್ಟವೆಂಬಂತೆ ರಮೇಶ್ ಗಡದನ್ನವರ ತೀರಿಹೋದರು. ಆಗ ಮತ್ತೆ ಈತನ ಅಂಧ ದರ್ಬಾರ್ ಶುರುವಾಯಿತು. ಸ್ವನತಿ ಜನರನ್ನು ಬೆನ್ನಿಗಿಟ್ಟು ಕೊಂಡು ತನ್ನನ್ನು ವಿರೋಧಿಸುವವರನ್ನೆಲ್ಲ ಹೆದರಿಸುವುದು ಕಾರ್ಖಾನೆಯ ಅಕ್ಕಪಕ್ಕದ ಜಮೀನುಗಳನ್ನೆಲ್ಲ ಪುಡಿಗಾಸಿಗೆ ಖರೀದಿಸುವುದು ಕೊಡಲು ಒಪ್ಪದವರನ್ನು ಕಿರುಕುಳ ನೀಡಿ ನೆಮ್ಮದಿಯಿಂದ ಬದುಕದಂತೆ ಮಾಡುವುದು ಇದೆಲ್ಲ ಮಾಮೂಲಿಯಾಗಿ ಹೋಯ್ತು. ಮುಧೋಳ ನಗರಕ್ಕೆ ಹೊಂದಿಕೊಂಡೇ ಇರುವುದರಿಂದ ಜಾರುವ ಬೂದಿ ಇಡೀ ನಗರ ತುಂಬ ಹರಡುತ್ತಿದ್ದರೂ ಜನ ಸಹಿಸಿಕೊಂಡು ಬದುಕುವ ಸ್ಥಿತಿ ನಿರ್ಮಾಣವಾಯಿತು.
Image result for niraniಕಳೆದ ಸಾರಿ ಬೀಳಗಿ ಕ್ಷೇತ್ರದಿಂದ ಜೆ.ಟಿ.ಪಾಟೀಲ ವಿರುದ್ಧ ಸೋತು ಹೋದಾಗ ಮುಧೋಳದ ಈ ಕಾರ್ಖಾನೆಯ ಸ್ಥಳಾಂತರದ ಬಗ್ಗೆ ಕೂಡ ಚರ್ಚೆ ನಡೆದಿತ್ತು. ಆದರೆ ಈ ಸಾರಿ ಮತ್ತೆ ಬೀಳಗಿಯಿಂದ ಶಾಸಕನಾಗಿ ಆರಿಸಿ ಬಂದ ನಂತರ ಮತ್ತೇ ಇಲ್ಲಿ ಕಾರ್ಖಾನೆಯ ವಿಸ್ತರಣೆಯನ್ನು ಆರಂಭಿಸಿದ್ದಾನೆ. ಈಗ ನಡೆದ ದುರಂತ ಕೂಡ ಹಪಾಹಪಿಗೆ ಬಿದ್ದು ಅದನ್ನು ವಿಸ್ತರಿಸುತ್ತಿರುವ ಕಾರಣಕ್ಕಾಗಿಯೇ ನಡೆದದ್ದು, ಕಡಿಮೆ ಕಾರ್ಮಿಕರನ್ನು ನೇಮಕ ಮಾಡಿಕೊಂಡು ಕೆಲಸ ತೆಗೆಯುವ ಕುತಂತ್ರದಿಂದಾಗಿ ಕಾರ್ಮಿಕರು ಜೀವ ಕಳೆದುಕೊಳ್ಳುವಂತಾಗಿದೆ. ಮಿಥೇನ್‍ನಂಥ ಸ್ಪೋಟಕ ವಸ್ತುವನ್ನು ಸಂಗ್ರಹಿಸುವ ಘಟಕದಲ್ಲಿ ಕೇವಲ ಏಳು ಜನ ಕಾರ್ಮಿಕರು ಮಾತ್ರ ಕೆಲಸ ಮಾಡುತ್ತಿದ್ದರು ಎಂದರೆ ನಂಬಲು ಸಾಧ್ಯವೇ? ಸ್ಥಳೀಯರ ಮಾಹಿತಿ ಪ್ರಕಾರ ಹೊರರಾಜ್ಯದ ಹಲವಾರು ಕಾರ್ಮಿಕರು ಅಲ್ಲಿ ಕೆಲಸ ಮಾಡುತ್ತಿದ್ದು ಅವರ ಬಗ್ಗೆ ಈವರೆಗೂ ಸರಿಯಾದ ಮಾಹಿತಿ ಸಿಗುತ್ತಿಲ್ಲ. ಸ್ಥಳೀಯರನ್ನು ಮಾತ್ರ ಗುರುತಿಸಿ ಹೊರರಾಜ್ಯ ಕಾರ್ಮಿಕರ ಸಾವನ್ನು ಮುಚ್ಚಿಡುತ್ತಿದ್ದಾರೆ ಎಂಬ ಗುಮಾನಿ ಕೂಡ ದಟ್ಟವಾಗಿದೆ. ಒಟ್ಟಾರೆ ಸರಿಯಾದ ತಾಂತ್ರಿಕ ಸಿಬ್ಬಂದಿಯನ್ನು ನೇಮಿಸಿಕೊಳ್ಳದೇ ಲಾಭ ಹೆಚ್ಚಿಸಿಕೊಳ್ಳುವ ದಾಹಕ್ಕೆ ಅಮಾಯಕ ಜೀವಗಳು ಬಲಿಯಾಗುವಂತಾಗಿದೆ.
ಆಶ್ಚರ್ಯವೆಂದರೆ ಈ ಘಟನೆಯ ಬಗ್ಗೆ ಸರಿಯಾದ ತನಿಖೆ ನಡೆಸಿ, ಮಾಹಿತಿ ಸಂಗ್ರಹಿಸಿ ಅಮಾಯಕರ ಸಾವಿಗೆ ಕಾರಣನಾದ ನಿರಾಣಿಯನ್ನು ಕಾನೂನಾತ್ಮಕವಾಗಿ ಶಿಕ್ಷೆ ಅನುಭವಿಸುವಂತೆ ಮಾಡಬೇಕಿರುವ ಜಿಲ್ಲಾಡಳಿತ, ಕಾರ್ಮಿಕರ ಹಾಗೂ ಪೊಲೀಸ್ ಇಲಾಖೆಯ ಅಧಿಕಾರಿಗಳು ಈತನ ಆಣತಿಗೆ ಕುಣಿಯುತ್ತಿದ್ದಾರೆ. ಯಾವುದೇ ನಗರ ಅಥವಾ ಜನವಸತಿ ಪ್ರದೇಶದಿಂದ ಚಿಷ ಸೂಸುವ ಅಪಾಯಕಾರಿ ವಸ್ತುಗಳನ್ನು ಉತ್ಪಾದಿಸುವ, ಪರಿಸರ ಮಾಲಿನ್ಯಕ್ಕೆ ಕಾರಣವಾಗಿ ಜನರ ಆರೋಗ್ಯ ಅಥವಾ ಬದುಕಿಗೆ ಅಪಾಯ ತರಬಲ್ಲ ಕಾರ್ಖಾನೆಗಳು ದೂರವಿರಬೇಕೆಂಬ ಕಾನೂನು ಇದೆ. ಈ ಕಾರ್ಖಾನೆ ಮುಧೋಳ ನಗರಕ್ಕೆ ಹೊಂದಿಕೊಂಡಿದೆ. ಇಡೀ ಮುಧೋಳ ನಗರದ ಜನತೆ ಪರಿಸರ ಮಾಲಿನ್ಯದಿಂದಾಗಿ ಕಲುಷಿತ ಗಾಳಿಗೆ ಉಸಿರಾಟದಿಂದಾಗಿ ಹಲವಾರು ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಜೊತೆಗೆ ಈ ಕಾರ್ಖಾನೆಯಿಂದ ಕೆಲವೇ ದೂರದ ಅಂತರದಲ್ಲಿ ಘಟಪ್ರಭ ನದಿ ಹರಿಯುತ್ತಿದೆ. ಇದು ಹಲವಾರು ಹಳ್ಳಿಗಳ ಜನರಿಗೆ ಜಾನುವಾರುಗಳಿಗೆ ಕುಡಿಯುವ ನೀರಿಗೆ ಆಧಾರ. ಈ ಕಾರ್ಖಾನೆಯಿಂದ ಹಾರುವ ಬೂದಿ ಮತ್ತು ಕಲುಷಿತ ನೀರು ನದಿಯನ್ನು ಸೇರುತ್ತಿದೆ. ರೈತ ಸಂಘದವರು, ನಾಗರಿಕರು ಸಾಕಷ್ಟು ಹೋರಾಟ ಮಾಡಿ ಗಮನ ಸೆಳೆದರೂ ಅಧಿಕಾರಿಗಳ ಕಾಯ್ದೆಗೆ ವಿರುದ್ಧವಾಗಿ ನಿಂತಿರುವ ಕಾರ್ಖಾನೆಯ ಮೇಲೆ ಕ್ರಮ ಕೈಗೊಳ್ಳುವ ನದಲು ಮಾಲಿಕರೊಂದಿಗೆ ಶಾಮಿಲಾಗಿ ತೇಪೆ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ಪರಿಸರ ಮಾಲಿನ್ಯ ತಡೆಗಟ್ಟುವ ಸಲಹೆಗಳನ್ನು ಕೊಡುತ್ತಿದ್ದಾರೆ ಹೊರತು ಕ್ರಮಕ್ಕೆ ಮುಂದಾಗುತ್ತಿಲ್ಲ. ಈ ರೀತಿ ತ್ಯಾಜ್ಯ ವಸ್ತುವಿನ ಉಪ ಉತ್ಪನ್ನ ತಯಾರಿಸಿ ಕಾರ್ಖಾನೆ ಉಳಿಸಿಕೊಳ್ಳುವ ಈತನ ಅಡ್ಡ ಮಾರ್ಗವೇ ಈಗ ಕಾರ್ಮಿಕರ ಸಾವಿಗೆ ಕಾರಣವಾಗಿದೆ. ಇಲ್ಲಿ ಇನ್ನೂ ಒಂದು ಮುಖ್ಯವಾದ ಅಂಶವೆಂದರೆ ಕೃಷಿ ವಲಯವಿರುವ ಪ್ರದೇಶದಲ್ಲಿ ಕೈಗಾರಿಕೆಗಳು ಇರಬಾರದೆಂಬ ನೀತಿ ಇದ್ದರೂ ಇಲ್ಲಿ ಅದನ್ನು ಗಾಳಿಗೆ ತೂರಲಾಗಿದೆ. ಈ ಕಾರ್ಖಾನೆ ಯ ಸುತ್ತಮುತ್ತ ಫಲವತ್ತಾದ ಕೃಷಿ ಜಮೀನು ಇದೆ. ಈ ಕಾರ್ಖಾನೆಯಿಂದಾಗಿ ಸುತ್ತಮುತ್ತಲಿರುವ ರೈತರ ಬದುಕು ನರಕ ಸದೃಶವಾಗಿದೆ. ಗಾಳಿಯ ತುಂಬ ಕಾರ್ಬನ್ ತುಂಬಿಹೋಗಿರುವುದರಿಂದ ಕುಡಿಯುವ ನೀರಿಗೂ ಆಹಾಕಾರವಿದೆ. ಬೂದಿ ಬೀಳುವುದರಿಂದ ಯಾವ ಬೆಳೆ ಬೆಳೆದರೂ ಮೊಳಕೆಯೊಡೆಯುವ ಹಂತದಲ್ಲಿಯೇ ಅದು ಸುಟ್ಟುಹೋಗುತ್ತಿದೆ. ಈ ಅಸಹಾಯಕತೆಯನ್ನು ಬಳಸಿಕೊಳ್ಳುತ್ತಿರುವ ನಿರಾಣಿ ಅಂಥವರ ಜಮೀನುಗಳನ್ನು ಪುಡಿಗಳನ್ನು ಪುಡಿಗಾಸಿಗೆ ಖರೀದಿಸಿ ಕಾರ್ಖಾನೆಯ ವಿಸ್ತರಣೆಯಲ್ಲಿ ತೊಡಗಿದ್ದಾನೆ. ತಾನು ಮಂತ್ರಿಯಾಗಿದ್ದಾಗ ನಡೆಸಿದ ಲೂಟಿಯಿಂದ ಬಂದ ಹಣವನ್ನೆಲ್ಲ ಬೇನಾಮಿ ಆಸ್ತಿ ಮತ್ತು ಕಾರ್ಖಾನೆಗಳಲ್ಲಿ ಸುರಿಯುತ್ತ ಇಂದು ಜಿಲ್ಲೆಯಲ್ಲಿ ತನ್ನದೇ ಅಧಿಪತ್ಯ ಸ್ಥಾಪಿಸಿಕೊಂಡಿದ್ದಾನೆ. ಅದನ್ನು ಬಳಸಿಕೊಂಡು ರಾಜಕೀಯದಲ್ಲಿ ಪ್ರಭಾವ ಬೆಳೆಸಿಕೊಂಡಿದ್ದಾನೆ. ಅಧಿಕಾರಿಗಳನ್ನು ನಿಯಂತ್ರಣದಲ್ಲಿಟ್ಟುಕೊಂಡಿದ್ದಾನೆ.
ಒಟ್ಟಾರೆ ಈತನ ಅಧಿಕಾರ ಹಾಗೂ ಹಣದ ಹಪಾಹಪಿ ಮತ್ತು ಕಾರ್ಖಾನೆಗಳ ವಿಸ್ತರಣೆಯ ದಾಹಕ್ಕೆ ಅಮಾಯಕ ಕಾರ್ಮಿಕ ಜೀವಗಳು ಬಲಿಯಾಗಿವೆ. ಕೇಳಬೇಕಾದ ಅಧಿಕಾರಿಗಳು ಹಾಗೂ ಸ್ಥಳೀಯ ವಿರೋಧ ಪಕ್ಷದ ನಾಯಕರು ಈತನ ಋಣಭಾರದಲ್ಲಿ ಬದುಕುತ್ತಿದ್ದಾರೆ. ಇನ್ನು ಈ ಸಾವುಗಳ ಬಗ್ಗೆ ಕೇಳುವವರ್ಯಾರು?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪ.ಬಂಗಾಳ ಎಸ್‌ಐಆರ್‌ : ದೇಶ ಕಾದ ಯೋಧನಿಂದ ತೀರ್ಪು ಕೊಟ್ಟ ನ್ಯಾಯಾಧೀಶರವರೆಗೆ.. ಮತ ಹಕ್ಕು ಕಳೆದುಕೊಂಡ ಲಕ್ಷಾಂತರ ಜನರು

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ದೇಶದಲ್ಲಿ ಪ್ರಸ್ತುತ ಚರ್ಚೆಯಲ್ಲಿರುವ ಪ್ರಮುಖ ವಿಚಾರ. ಹಲವು ಗೊಂದಲಗಳ ನಡುವೆ ಮೊದಲ ಹಂತದಲ್ಲಿ ಬಿಹಾರದಲ್ಲಿ ಎಸ್‌ಐಆರ್‌ ಪೂರ್ತಿಗೊಳಿಸಿದ ಚುನಾವಣಾ ಆಯೋಗ, ನಂತರ ಅಲ್ಲಿ ವಿಧಾನಸಭಾ...

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...

ಫ್ಯಾಕ್ಟ್‌ಚೆಕ್ : ಅತ್ಯಾಚಾರ ಅಪರಾಧಿ ಪರ ವಕೀಲೆಗೆ ಟಿಎಂಸಿಯಿಂದ ರಾಜ್ಯಸಭೆ ಸೀಟ್; ಬಿಜೆಪಿ ಆರೋಪದ ಸತ್ಯಾಸತ್ಯತೆ ಏನು?

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಪಾಣಿಹತಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಆರ್‌ಜಿ ಕರ್‌ ಸಂತ್ರಸ್ತೆಯ ತಾಯಿ ಮತ್ತು ವಕೀಲೆ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯಸಭಾ ಸದಸ್ಯೆ ಮೇನಕಾ ಗುರುಸ್ವಾಮಿ ಅವರ ಎಐ-ರಚಿತ...