Homeಅಂಕಣಗಳುಕಂಡದ್ದನ್ನು ಕಂಡಹಾಗೆ ಹೇಳಿದವರು....

ಕಂಡದ್ದನ್ನು ಕಂಡಹಾಗೆ ಹೇಳಿದವರು….

- Advertisement -
- Advertisement -

 ಗೌರಿ ಲಂಕೇಶ್
ಅಕ್ಟೋಬರ್ 26, 2005 (`ಕಂಡಹಾಗೆ’ ಸಂಪಾದಕೀಯದಿಂದ) |

ಅಮೆರಿಕಾ ಸರ್ಕಾರ ಕೊತಕೊತ ಕುದಿಯುತ್ತಿದೆ. ಯಾವ ದೇಶದ ಮೇಲೆ ಬೇಕಾದರು ದಾಳಿ ಮಾಡಿ ಮಾಡುವ ದೈವಾಜ್ಞೆ ತನಗಿದೆ ಎಂದು ಹೇಳುವ ಅದರ ಅಧ್ಯಕ್ಷ ಜಾರ್ಜ್ ಬುಷ್‍ಗೆ ಕಪಾಳಮೋಕ್ಷವಾಗಿದೆ.
ಸ್ವೀಡನ್ ದೇಶದಲ್ಲಿನ ನೊಬೆಲ್ ಸಮಿತಿ ಈ ವರ್ಷ ಮೊಹ್ಮದ್ ಎಲ್‍ಬರದೈಗೆ ಶಾಂತಿ ಪ್ರಶಸ್ತಿ ಪ್ರಕಟಿಸಿ ಬುಷ್‍ಗೆ ಸೆಡ್ಡು ಹೊಡೆದಿತ್ತಲ್ಲದೆ, ಈ ವಾರ ಹೆರಾಲ್ಡ್ ಪಿಂಟರ್ ಎಂಬ ಬ್ರಿಟಿಷ್ ನಾಟಕಕಾರನಿಗೆ ಪ್ರಶಸ್ತಿ ನೀಡಿ ಅಮೆರಿಕಕ್ಕೆ ಅವಮಾನಿಸಿದೆ. ನೊಬೆಲ್ ಪ್ರಶಸ್ತಿಗಳು ರಾಜಕೀಯ ಪ್ರೇರಿತಗೊಂಡು ಹಲವು ದಶಕಗಳೇ ಕಳೆದಿವೆ. ಹಾಗಾಗಿ ಅಮೆರಿಕಾಕ್ಕೆ ಎದುರಾಗಿ ಈ ಪ್ರಶಸ್ತಿಗಳನ್ನು ಘೋಷಿಸಿರುವುದು ರಾಜಕೀಯ ಕಾರಣಕ್ಕೂ ವಿಪರೀತ ಕುತೂಹಲ ಮೂಡಿಸಿವೆ.
2003ರಲ್ಲಿ ಇರಾಕ್‍ನಲ್ಲಿ weapons of mass destruction ಇದೆ ಎಂಬ ನೆಪವೊಡ್ಡಿ, ಸದ್ದಾಂ ಹುಸೇನ್‍ನಿಂದ ಜಗತ್ತನ್ನೇ ರಕ್ಷಿಸಬೇಕಿದೆ ಎಂದುಹೇಳಿ ಆ ದೇಶದ ಮೇಲೆ ಅಮೆರಿಕಾ ಹರಿಹಾಯ್ದುಹೋಗಲು ಸಜ್ಜಾಗುತ್ತಿದ್ದಾಗ, ಇಂಟರ್‍ನ್ಯಾಶನಲ್ ಅಟೋಮಿಕ್ ಎನರ್ಜಿ ಅಸೋಸಿಯೇಷನ್‍ನ ಮುಖ್ಯಸ್ಥರಾಗಿರುವ ಬರದೈರವರು `ಇರಾಕ್‍ನಲ್ಲಿ ಯಾವ weapons of mass destruction ಇಲ್ಲ’ ಎಂದೇಳಿ ಬುಷ್‍ಗೆ ಸವಾಲೊಡ್ಡಿದ್ದರು. ಆದರೂ ಬುಷ್ ಇರಾಕ್ ಮೇಲೆ ದಾಳಿಯಿಟ್ಟು ಬ್ರಿಟಿಷ್ ಸೈನ್ಯದ ಜೊತೆಗೂಡಿ ಸಾವಿರಾರು ಇರಾಕಿಗಳನ್ನು ಕೊಂದುಹಾಕಿ, ಆ ದೇಶದ ಆತ್ಮವನ್ನೇ ಸರ್ವನಾಶ ಮಾಡಿದ ತರುವಾಯ ಬುಷ್ ಮತ್ತು ಬ್ರಿಟನ್ನಿನ ಬ್ಲೇರ್ ಹೇಳಿದ್ದು ಅಪ್ಪಟ ಸುಳ್ಳು, ಬರದೈ ಹೇಳಿದ್ದೇ ಸತ್ಯ ಎಂದು ಇಡೀ ಜಗತ್ತಿಗೇ ಗೊತ್ತಾಗಿತ್ತು. ತನ್ನ ಕಪಟತನವನ್ನು ಬಹಿರಂಗಪಡಿಸಿದ ಬರದೈಗೆ ಶಾಂತಿ ಪ್ರಶಸ್ತಿ ಸಿಕ್ಕರೆ ಬುಷ್ ಸರ್ಕಾರಕ್ಕೆ ಅವಮಾನವಾಗದೇ ಮತ್ತಿನ್ನೇನು?
ಇನ್ನು ತನ್ನ ಬರಹಗಳಲ್ಲಿ ಪ್ರಸ್ತುತ ಸಾಮಾಜಿಕ ಮತ್ತು ರಾಜಕೀಯ ಅನ್ಯಾಯವನ್ನು ವಿಶ್ಲೇಷಿಸುವ ನಾಟಕಕಾರ ಹೆರಾಲ್ಡ್ ಪಿಂಟರ್ ಅದೆಂತಹ ಅಗ್ರಸ್ಥಾನದಲ್ಲಿದ್ದಾರೆಂದರೆ ಶೇಕ್ಸ್‍ಪಿರಿಯನ್, ಶೆಕಾವಿಯನ್ ಎಂಬ ಪದಗಳು ಗುಣವಾಚಕಗಳಾಗಿವೆಯೋ ಹಾಗೆ ಪಿಂಟರೆಸ್ಕ್ ಎಂಬ ಪದವೂ ಇಂಗ್ಲಿಷ್ ಭಾಷೆಯ ಅಂಗವಾಗಿ ಹೋಗಿದೆ. ಇವರು ಕಳೆದ ಮೂರು ವರ್ಷದಿಂದ ಬುಷ್‍ರನ್ನು ತರಾಟೆಗೆ ತೆಗೆದುಕೊಂಡಿದ್ದಲ್ಲದೆ ಬುಷ್ ಹೇಳಿದ್ದಕ್ಕೆಲ್ಲ ತಲೆದೂಗುವ ತನ್ನ ದೇಶದ ಪ್ರಧಾನಿ ಬ್ಲೇರ್‍ಗೂ ಕ್ಯಾಕರಿಸಿ ಉಗಿದಿದ್ದಾರೆ. ಅಮೆರಿಕಾದಲ್ಲಿ ಅಧಿಕಾರ ಹಿಡಿದಿರುವವರನ್ನು ಕ್ರಿಮಿನಲ್‍ಗಳ ಗ್ಯಾಂಗ್ ಎಂದೂ, ಬ್ಲೇರ್ ಅನ್ನು ಅಮೆರಿಕಾ ಸರ್ಕಾರದ ಬಾಡಿಗೆಗೆ ಹಿಡಿದಿರುವ ಕ್ರಿಶ್ಚಿಯನ್ ಗೂಂಡಾ ಎಂದೂ ಲೇವಡಿ ಮಾಡಿದ್ದರು. ಅಮೆರಿಕಾ ಮತ್ತು ಬ್ರಿಟನ್ ಸರ್ಕಾರಗಳಿಗೆ ಕಡಿವಾಣ ಹಾಕದಿದ್ದರೆ ಇಡೀ ಜಗತ್ತನ್ನೇ ಮುಳುಗಿಸಿಬಿಡುತ್ತಾರೆ ಎಂಬುದು ಅವರ ಪ್ರಾಮಾಣಿಕ ಆತಂಕ.
ಇಲ್ಲಿ ಬುಷ್ ಮತ್ತು ಬ್ಲೇರ್ ಬಗ್ಗೆ ಪಿಂಟರ್‍ರವರು ನೀಡಿರುವ ಹೇಳಿಕೆಯ ಸ್ಯಾಂಪಲ್‍ಗಳಿವೆ ನೋಡಿ; “ಇರಾಕ್ ಮೇಲೆ ನಡೆದದ್ದು ಭಯೋತ್ಪಾದನೆ. ಆದ್ದರಿಂದ ಬುಷ್ ಮತ್ತು ಬ್ಲೇರ್ ಭಯೋತ್ಪಾದಕರು. ಅವರಿಬ್ಬರನ್ನು ಬಂಧಿಸಿ ಯುದ್ಧಕೋರರೆಂದು ವಿಚಾರಣೆಗೊಳಪಡಿಸಿ ಶಿಕ್ಷಿಸಬೇಕು…..”, “ಅಮೆರಿಕಾ ಈಗ ನಾಜಿಗಳ ಜರ್ಮನಿಯನ್ನು ಹೋಲುತ್ತಿದೆ”, “ಜಗತ್ತಿನ ಅತಿ ಅನಾಹುತಕಾರಿ ಅಸ್ತ್ರಗಳು ಅತಿ ಅನಾಹುತಕಾರಿ ನಾಯಕರ ಕೈಯಲ್ಲಿರದಂತೆ ನೋಡಿಕೊಳ್ಳುತ್ತೇನೆ ಎಂದಿದ್ದಾನೆ ಬುಷ್. ಆದ್ದರಿಂದ ಅತಿ ಅನಾಹುತಕಾರಿ ನಾಯಕ ಯಾರೆಂದು ತಿಳಿದುಕೊಳ್ಳಲು ಆತ ಒಮ್ಮೆ ಕನ್ನಡಿಯಲ್ಲಿ ತನ್ನ ಮುಖವನ್ನು ನೋಡಿಕೊಳ್ಳಲಿ”, “ಸ್ವಾತಂತ್ರ್ಯ, ಪ್ರಜಾಪ್ರಭುತ್ವ ಮತ್ತು ಬಿಡುಗಡೆಯ ಬಗ್ಗೆ ಮಾತಾಡುವ ಬುಷ್ ಹಾಗೂ ಬ್ಲೇರ್ ನಿಜವಾಗಲೂ ಹೇಳುತ್ತಿರುವುದು ಸಾವು, ನಾಶ ಮತ್ತು ಅಭದ್ರತೆಯ ಬಗ್ಗೆ”…..
ಇವೆಲ್ಲ ಇಂದು ಅಮೆರಿಕಾ ಸರ್ಕಾರ ಕೊತಕೊತ ಕುದಿಯುವಂತೆ ಮಾಡಿರುವುದು ಅಚ್ಚರಿಯೇನಲ್ಲ. ಭಿನ್ನಮತ, ವಾಕ್ ಸ್ವಾತಂತ್ರ್ಯ, ಮಾನವಹಕ್ಕುಗಳು, ದಬ್ಬಾಳಿಕೆ ವಿರೋಧಗಳು ನಿಜಕ್ಕೂ, `ನೋಬಲ್’, ಅಲ್ಲವೇ!?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ದೆಹಲಿ ವಿವಿ ಚುನಾವಣಾ ಫಲಿತಾಂಶ: ABVPಯನ್ನು ಸೋಲಿಸಬಹುದಾಗಿದ್ದ ಚುನಾವಣೆಯಲ್ಲಿ ಕಾಂಗ್ರೆಸ್ ಮಾಡಿಕೊಂಡ ಎಡವಟ್ಟು

ಜಂತರ್ ಮಂತರ್‌ನಲ್ಲಿ ಲಕ್ಷಾಂತರ ವಿದ್ಯಾರ್ಥಿಗಳು ಬೀದಿಗಿಳಿದು ನಡೆಸಿದ ಧರಣಿ ಹಾಗೂ ಇನ್‌ಸ್ಟಾಗ್ರಾಮ್‌ ನಂತಹ ಡಿಜಿಟಲ್ ವೇದಿಕೆಗಳಲ್ಲಿ ಹರಿದಾಡಿದ ರೀಲ್ಸ್‌ಗಳು ಬಿಜೆಪಿಯ ಜನಪ್ರಿಯತೆ ಕುಸಿದಿರುವುದನ್ನು ಬಿಂಬಿಸಿದ್ದವು. ಕ್ಯಾಂಪಸ್‌ಗಳಲ್ಲಿ ಬಿಜೆಪಿ ಮತ್ತು ಎಬಿವಿಪಿ ಕಾರ್ಯಕರ್ತರ ದಬ್ಬಾಳಿಕೆ,...

ಐಐಟಿ ಬಾಂಬೆ ವಿದ್ಯಾರ್ಥಿ ಸಾಹಿಲ್ ವಕೋಡ್ ಆತ್ಮಹತ್ಯೆ ಪ್ರಕರಣ: ಜಾತಿ ನಿಂದನೆ, ಬೆದರಿಕೆ ಆರೋಪ: ಪ್ರಾಧ್ಯಾಪಕರ ವಿರುದ್ಧವೂ ಎಫ್‌ಐಆರ್

ಮುಂಬೈ: ಐಐಟಿ ಬಾಂಬೆ ಕ್ಯಾಂಪಸ್‌ನಲ್ಲಿ ಎರಡನೇ ವರ್ಷದ ವಿದ್ಯಾರ್ಥಿ ಸಾಹಿಲ್ ವಕೋಡ್ ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಇದೀಗ ಗಂಭೀರ ತಿರುವು ಪಡೆದುಕೊಂಡಿದ್ದು, ವಿದ್ಯಾರ್ಥಿಯ ಕುಟುಂಬ ಮಾಡಿರುವ ಜಾತಿ ಆಧಾರಿತ ನಿಂದನೆ, ಕಿರುಕುಳ ಮತ್ತು...

SIR : ಕೇಜ್ರಿವಾಲ್, ಧನಕರ್, ಅಡ್ವಾಣಿಗೂ ಬಂತು ಚುನಾವಣಾ ಆಯೋಗದ ನೋಟಿಸ್

ದೇಶದ ರಾಜಧಾನಿ ದೆಹಲಿಯಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯು ಭಾರೀ ವಿವಾದಕ್ಕೆ ಹಾಗೂ ಸಾರ್ವಜನಿಕ ಆತಂಕಕ್ಕೆ ಕಾರಣವಾಗಿದೆ. ದೆಹಲಿಯ ಒಟ್ಟು ಮತದಾರರ ಪೈಕಿ ಬರೋಬ್ಬರಿ ಶೇಕಡಾ 50ರಷ್ಟು...

SIR: ನೋಟಿಸ್ ನೀಡಿದರೆ ಸಾಲದು, ಹೊರಗಿಟ್ಟ ಮತದಾರರ ಲೆಕ್ಕ ಕೊಡಿ ಚುನಾವಣಾ ಆಯೋಗಕ್ಕೆ ಜಾಗೃತ ಕರ್ನಾಟಕ ಒತ್ತಾಯ

ರಾಜ್ಯದಲ್ಲಿ ಪ್ರಸ್ತುತ ನಡೆಯುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯ ಭಾಗವಾಗಿ ಲಕ್ಷಾಂತರ ಮತದಾರರಿಗೆ ನೋಟಿಸ್ ಜಾರಿ ಮಾಡಿ ವಿಚಾರಣೆಗಳನ್ನು ನಡೆಸಿದ ನಂತರ, ಅಂತಿಮವಾಗಿ ಎಷ್ಟು ಜನರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಕೈಬಿಡಲಾಗಿದೆ...

ಗಣೇಶ ಮೆರವಣಿಗೆ ಡಿಜೆ ವಿಚಾರಕ್ಕೆ ಗಲಾಟೆ : ದಲಿತರ ಮೇಲೆ ಹಲ್ಲೆ, ಜಾತಿ ನಿಂದನೆ; 31 ಜನರ ಮೇಲೆ ಎಫ್‌ಐಆರ್

ಗಣೇಶ ಮೆರವಣಿಗೆಯ ಡಿಜೆ ವಿಚಾರಕ್ಕೆ ನಡೆದ ಗಲಾಟೆಯಲ್ಲಿ ದಲಿತರ ಮೇಲೆ ಹಲ್ಲೆ ನಡೆಸಿ, ಜಾತಿ ನಿಂದನೆ ಮಾಡಿದ ಆರೋಪದ ಮೇಲೆ 31 ಜನರ ವಿರುದ್ಧ ಕೊಪ್ಪಳದ ಮುನಿರಾಬಾದ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ....

ಚಿಕ್ಕಬಳ್ಳಾಪುರ: ಮೂಲ ಗಣಿತ, ಕನ್ನಡ ಬಾರದ 7ನೇ ತರಗತಿ ವಿದ್ಯಾರ್ಥಿಗಳು: 180 ಶಿಕ್ಷಕರಿಗೆ ನೋಟಿಸ್‌ ಜಾರಿ

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 7ನೇ ತರಗತಿಯ ಕೆಲವು ವಿದ್ಯಾರ್ಥಿಗಳಿಗೆ ಮೂಲ ಗಣಿತದ ಲೆಕ್ಕಗಳನ್ನು ಮಾಡಲು ಮತ್ತು ಕನ್ನಡ ಅಕ್ಷರಗಳನ್ನು ಬರೆಯಲು ಬರುವುದಿಲ್ಲ ಎಂಬುದು ತಿಳಿದುಬಂದ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆಯು 180 ಸರ್ಕಾರಿ ಶಾಲೆಗಳ ಶಿಕ್ಷಕರಿಗೆ...

ಕರಾವಳಿಯನ್ನು ‘ಕೋಮುವಾದದ ಪ್ರಯೋಗಶಾಲೆ’ ಮಾಡಿದ್ದ ಬಿಜೆಪಿಗೆ ನಮ್ಮ ಅಭಿವೃದ್ಧಿ ಕಂಡು ಅಸ್ತಿತ್ವದ ಭಯ: ಪ್ರಿಯಾಂಕ್ ಖರ್ಗೆ

ಮಂಗಳೂರಿನಲ್ಲಿ ನಡೆದ ವಿಶೇಷ ಸಚಿವ ಸಂಪುಟ ಸಭೆ ಹಾಗೂ ಕರಾವಳಿಯ ಮೂರು ಜಿಲ್ಲೆಗಳಿಗೆ ₹32,611 ಕೋಟಿ ಮೊತ್ತದ ಅಭಿವೃದ್ಧಿ ಯೋಜನೆಗಳಿಗೆ ಅನುಮೋದನೆ ನೀಡಿರುವುದನ್ನು ಬಿಜೆಪಿ ಟೀಕಿಸಿರುವ ಬೆನ್ನಲ್ಲೇ, ಗೃಹ ಸಚಿವ ಪ್ರಿಯಾಂಕ್ ಖರ್ಗೆ...

KPSC ಅಕ್ರಮ: ಮೀಟರ್ ಬಡ್ಡಿ ದಂಧೆಯಿಂದ ಕೆಪಿಎಸ್‌ಸಿ ಅಧ್ಯಕ್ಷ ಸ್ಥಾನದವರೆಗೆ – ಅಧ್ಯಕ್ಷ ಸಾಹುಕಾರ್ ಬಿಜೆಪಿ ಅವಧಿಯಲ್ಲಿ ನೇಮಕ, ಕಾಂಗ್ರೆಸ್ ಆಡಳಿತದಲ್ಲಿ ರಕ್ಷಣೆ

ಶಿವಶಂಕರಪ್ಪ ಸಾಹುಕಾರ್ ಅವರ ಈ ಇಡೀ ಕಥನವು ಕರ್ನಾಟಕದ ಕಾರ್ಯಾಂಗ ಮತ್ತು ರಾಜಕೀಯ ವ್ಯವಸ್ಥೆಯಲ್ಲಿ ಭ್ರಷ್ಟಾಚಾರ ಎಷ್ಟು ಆಳವಾಗಿ ಬೇರೂರಿದೆ ಎಂಬುದಕ್ಕೆ ಸಾಕ್ಷಿಯಾಗಿದೆ. ಬಿಜೆಪಿ ಸರ್ಕಾರವು ನಿಯಮಗಳನ್ನು ಗಾಳಿಗೆ ತೂರಿ, ಒಬ್ಬ ಕನಿಷ್ಠ...

ಟಿಎಂಸಿ ಪಕ್ಷದ ಹೆಸರು, ಚಿಹ್ನೆ ಫ್ರೀಝ್ : ಚು. ಆಯೋಗದ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಮಮತಾ ಬ್ಯಾನರ್ಜಿ

ತೃಣಮೂಲಕ ಕಾಂಗ್ರೆಸ್ (ಟಿಎಂಸಿ) ಪಕ್ಷದ ಚಿಹ್ನೆ ಮತ್ತು ಹೆಸರನ್ನು ಭಾರತೀಯ ಚುನಾವಣಾ ಆಯೋಗ ಫ್ರೀಝ್ ಮಾಡಿರುವುದನ್ನು ಪ್ರಶ್ನಿಸಿ, ಪಕ್ಷದ ಸಂಸ್ಥಾಪಕಿ ಹಾಗೂ ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸುಪ್ರೀಂ ಕೋರ್ಟ್‌...

ನಂದಿಗ್ರಾಮದ ಬೆನ್ನಲ್ಲೇ ರೆಜಿನಗರ ಅಭ್ಯರ್ಥಿಯಿಂದಲೂ ನಾಮಪತ್ರ ವಾಪಸ್ : ಬಂಗಾಳ ಉಪ ಚುನಾವಣೆ ಕಣದಲ್ಲಿ ಮಮತಾ ಬ್ಯಾನರ್ಜಿ ಬಣಕ್ಕೆ ಮತ್ತೊಂದು ಹಿನ್ನಡೆ

ಪಶ್ಚಿಮ ಬಂಗಾಳದ ಉಪಚುನಾವಣಾ ಕಣದಲ್ಲಿ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಮತ್ತೊಂದು ಹಿನ್ನಡೆಯಾಗಿದೆ. ನಂದಿಗ್ರಾಮದ ಬಳಿಕ ರೆಜಿನಗರ ವಿಧಾನಸಭಾ ಕ್ಷೇತ್ರದಲ್ಲೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಅಭ್ಯರ್ಥಿ ತನ್ನ ನಾಮಪತ್ರವನ್ನು ವಾಪಸ್ ಪಡೆದಿದ್ದಾರೆ...