Homeಅಂಕಣಗಳುಸಮಾಜ ಬದಲಾವಣೆಯಲ್ಲಿ ಯುವಜನರ ಪಾತ್ರ

ಸಮಾಜ ಬದಲಾವಣೆಯಲ್ಲಿ ಯುವಜನರ ಪಾತ್ರ

- Advertisement -
ನಮ್ಮ  ಸಮಾಜ ನಿಂತ ನೀರಿನಂತೆ ಗಬ್ಬು ಹೊಡೆಯುತ್ತಿದೆ. ವಿಷಪೂರಿತವಾಗಿದೆ. ಅನೇಕ ಸಾಮಾಜಿಕ ಕಾಯಿಲೆಗಳ ಆವಾಸಸ್ಥಾನವಾಗಿದೆ. ಸ್ವಾತಂತ್ರ್ಯ ಬಂದು 70ವರ್ಷಗಳೇ ಆದರೂ ಬಡವರು ಬಡವರಾಗಿಯೇ ಉಳಿದಿದ್ದಾರೆ. ಕೆಲವೇ ಶ್ರೀಮಂತರು ಸಹಸ್ರಾರು ಕೋಟಿಗಳ ಒಡೆಯರಾಗುತ್ತಿದ್ದಾರೆ. ಪಕ್ಷ ರಾಜಕೀಯ ಹೊಲಸಾಗಿದೆ. ವಿದ್ಯೆ ಮಾರಾಟದ ವಸ್ತುವಾಗಿದೆ. ಶಾಸಕರು, ಮಂತ್ರಿಗಳಿಂದ ಮೊದಲುಗೊಂಡು ಪಂಚಾಯ್ತಿ ಸದಸ್ಯರವರೆಗೆ ದುರ್ಲಾಭಕ್ಕೋಸ್ಕರ ವಿದ್ಯಾಸಂಸ್ಥೆಗಳನ್ನು ನಡೆಸುತ್ತಿದ್ದಾರೆ. ಮಠಾಧಿಪತಿಗಳೂ ಈ ಸ್ಪರ್ಧೆಯಲ್ಲಿದ್ದಾರೆ.
ಇದನ್ನೆಲ್ಲ ಮೂಕಪ್ರೇಕ್ಷಕರಂತೆ ನಮ್ಮ ಯುವಕರು ನೋಡಿಕೊಂಡು ಕುಳಿತಿದ್ದಾರೆ. ನಮ್ಮದು ಪ್ರಜಾರಾಜ್ಯ, ಪ್ರಜೆಗಳೇ ನಮ್ಮ ದೇಶದ ಪ್ರಭುಗಳು ಎಂದು ನಮ್ಮ ರಾಜ್ಯಾಂಗ ಹೇಳುತ್ತದೆ. ಆದರೆ ನಾವು ಮಾತ್ರ ಆಡಳಿತಕ್ಕೂ ನಮಗೂ ಸಂಬಂಧವಿಲ್ಲವೇನೋ ಎಂಬಂತೆ ಹೊಣೆಗೇಡಿಗಳಾಗಿ ನಡೆದುಕೊಳ್ಳುತ್ತಿದ್ದೇವೆ. ಇಂಥಾ ಮನೋಭಾವ ಯುವಕರಿಗೆ ತರವಲ್ಲ. ಗಾಢನಿದ್ರೆಯಲ್ಲಿರುವ ಯುವಕರು ಮೈಕೊಡವಿಕೊಂಡು ಏಳಬೇಕು. ದೇಶದ ಸಮಸ್ಯೆಗಳನ್ನೆಲ್ಲ ಒಂದೊಂದಾಗಿ ಬಗೆಹರಿಸಬೇಕು. ಅದಕ್ಕೆ ಮೊದಲು ನಾವು ದೇಶದ ಇಂದಿನ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳಬೇಕು. ಸಮಸ್ಯೆಗೆ ಪರಿಹಾರ ಕಂಡುಕೊಂಡು ಬದಲಾವಣೆಗೆ ಸಂಘಟಿತರಾಗಿ ಹೋರಾಡಬೇಕು. ಯುವಕರು ನಮ್ಮ ಆಶಾಕಿರಣ, ನಮ್ಮ ಮುಂದೆ ಇರುವ ಪ್ರಮುಖ ಸಮಸ್ಯೆಗಳಿವು :-
1. ಪ್ರಜಾಪ್ರಭುತ್ವಕ್ಕೆ ಕುತ್ತು ಬಂದಿದೆ.
2. ನಮ್ಮ ಮೂಲಭೂತ ಸಮಸ್ಯೆಗಳಾದ ಬಡತನ, ನಿರುದ್ಯೋಗ, ಭ್ರಷ್ಟಾಚಾರ, ಆಡಳಿತದ ದುರ್ಬಳಕೆ ಇವುಗಳಿಗೆ ಪರಿಹಾರ ಕಂಡುಹಿಡಿದುಕೊಳ್ಳಬೇಕಿದೆ.
3. ಲೋಕಸಭೆ, ಶಾಸನಸಭೆಗಳು ಜನರ ಸಮಸ್ಯೆಗಳನ್ನು ಚರ್ಚಿಸಿ ಬಗೆಹರಿಸುವುದುದನ್ನು ಬಿಟ್ಟು ಜಗಳ, ಗದ್ದಲ, ವಾಕ್‍ಔಟ್, ದೊಂಬಿ, ಗಲಾಟೆ ಇವುಗಳಲ್ಲೇ ಕಾಲಕಳೆದು, ಚರ್ಚೆಯಿಲ್ಲದೆ ಮಸೂದೆಗಳು ಪಾಸಾಗುತ್ತಿವೆ.
4. ಹಣ, ಜಾತಿ, ಧರ್ಮ, ತೋಳ್ಬಲ ಇರುವವರು ನಮ್ಮ ಪ್ರತಿನಿಧಿಗಳಾಗಿ ಆಯ್ಕೆಯಾಗುತ್ತಿದ್ದಾರೆ.
ಇಂತಹ ಅನೇಕ ಸಮಸ್ಯೆಗಳು ನಮ್ಮನ್ನು ಕಾಡುತ್ತಿವೆ. ಮೊದಲು ಈ ಸಮಸ್ಯೆಗಳನ್ನು ಬಗೆ ಹರಿಸಲು ಯುವಕರು ತೊಡಗಬೇಕು.
ನಮ್ಮ ಸಮಾಜವನ್ನು ನಾವು ಸತ್ಯ ಮತ್ತು ಅಹಿಂಸೆಯ ಆಧಾರದ ಮೇಲೆ ಕಟ್ಟಬೇಕು. ಯುವಕರಿಗೆ ಕೋಪತಾಪಗಳಿರಬಾರದು. ಹೋರಾಟ ಮಾಡುವಾಗ ಯುವಕರು ಥರ್ಮಾಮೀಟರ್‍ನಂತೆ ಇರಬೇಕು. ಥರ್ಮಾಮೀಟರ್‍ಗೆ ಜ್ವರ ಬರಬಾರದು. ಅದಕ್ಕೆ ಜ್ವರ ಬಂದರೆ ಅದು ಇತರರ ಜ್ವರವನ್ನು ಕಂಡುಹಿಡಿಯುವುದಾದರೂ ಹೇಗೆ? ಶ್ರೀ ಕೃಷ್ಣ ಭಗವದ್ಗೀತೆಯಲ್ಲಿ ಹೇಳುತ್ತಾನೆ, ಯುದ್ಧಸ್ಯವಿಗತ ಜ್ವರ: ಎಂದು ತಲೆ ಬಿಸಿಮಾಡಿಕೊಳ್ಳದೆ, ಶಾಂತಿಚಿತ್ತದಿಂದ ಯುದ್ಧದಲ್ಲಿ ತೊಡಗಿಕೊ ಎಂಬುದು ಇದರರ್ಥ.
ನಾವು ಹೋರಾಡಬೇಕಾಗಿರುವುದು ಸರ್ವರಿಗೂ ಸುಖ ಸಂತೋಷ ಸಿಗಲೆಂದು. ಅಂದರೆ ಜನರಲ್ಲಿ ಹಸಿವು, ಬಡತನ, ಅಜ್ಞಾನ, ಅಸಮಾನತೆ ಇವು ಇರಬಾರದು. ಅಹಿಂಸಾ ಹೋರಾಟದ ಮೂಲಕ ಈ ಬದಲಾವಣೆಯನ್ನು ಸಮಾಜದಲ್ಲಿ ತರಬೇಕು. ಈಗ ಯಾವ ರಾಜಕೀಯ ಪಕ್ಷಕ್ಕೂ ಸಿದ್ಧಾಂತಗಳೇ ಇಲ್ಲ. ಇಂಥಾ ಸನ್ನಿವೇಶದ ದುರ್ಲಾಭ ಮಾಡಿಕೊಳ್ಳಲು ಭಾರತೀಯ ಜನತಾ ಪಕ್ಷ ‘ಹಿಂದೂರಾಷ್ಟ್ರ ನಿರ್ಮಾಣ’ ಎಂಬ ಡೋಂಗಿ ರಾಷ್ಟ್ರವಾದವೊಂದನ್ನು ಮುಂದೆ ತರುತ್ತಿದೆ. ಅದು ಅತ್ಯಂತ ಅಪಾಯಕಾರಿ. ಸಮಾಜದಲ್ಲಿ ಮೌಲ್ಯಗಳ ಅಧಃಪತನವೇ ಇಂದಿನ ನಮ್ಮ ಈ ಅಧೋಗತಿಗೆ ಕಾರಣ. ಮಾನವೀಯ ಮೌಲ್ಯಗಳಾದ ಸೋದರತ್ವ, ಸಮಾನತೆಗಳ ಆಧಾರದ ಮೇಲೆ ನಮ್ಮ ಸಮಾಜ ರೂಪಿತವಾಗಬೇಕು. ಜಾತಿ, ಧರ್ಮಗಳನ್ನು ರಾಜಕೀಯಕ್ಕೆ ಬೆರೆಸಬಾರದು. ಆದರೆ ಈಗ ಕ್ರಿಮಿನಲ್‍ಗಳು ಎಲ್ಲಾ ರಾಜಕೀಯ ಪಕ್ಷಗಳಿಂದಲೂ ಆರಿಸಿ ಬರುತ್ತಿದ್ದಾರೆ. ಈ ಸಾರಿ ಚುನಾವಣೆಯಲ್ಲಿ ಬಿಜೆಪಿಯಿಂದ 27, ಜನತಾದಳದಿಂದ 23, ಕಾಂಗ್ರೆಸ್ಸಿನಿಂದ 15 ಕ್ರಿಮಿನಲ್ ಹಿನ್ನೆಲೆಯವರು ಆರಿಸಿ ಬಂದಿದ್ದಾರೆ. ಮತದಾರರಿಗೆ ಇಂತಹವರನ್ನು ಆಯ್ಕೆ ಮಾಡಬೇಡಿ, ಇಂಥವರಿಗೆ ಮತ ಹಾಕಬೇಡಿ ಎಂದು ಗಟ್ಟಿದನಿಯಲ್ಲಿ ಹೇಳುವವರು ಬೇಕಾಗಿದ್ದಾರೆ.
ಯುವಕರ ಇತ್ತೀಚಿನ ಸಾಧನೆ ಕುರಿತು ಎರಡು ನಿದರ್ಶನಗಳನ್ನು ಕೊಡುತ್ತೇನೆ. ಅಸ್ಸಾಂನಲ್ಲಿ ವಿದ್ಯಾರ್ಥಿಗಳು ಸಂಘಟನೆ ಮಾಡಿಕೊಂಡರು. ಆಗ ಅಸ್ಸಾಂನಲ್ಲಿ ಅಧಿಕಾರಿಗಳಾಗಿದ್ದವರೆಲ್ಲ ಬಂಗಾಳಿಗಳು. ‘ಅಸ್ಸಾಂ ಅಸ್ಸಾಮಿಯರಿಗೆ’ ಎಂಬ ಚಳವಳಿ ಆರಂಭಿಸಿದರು. ಅಸ್ಸಾಂ ಗಣತಂತ್ರ ಪರಿಷತ್ ಎಂಬ ಸಂಸ್ಥೆ ಸ್ಥಾಪಿಸಿದರು. ಹೋರಾಟದಲ್ಲಿ ಭಾಗವಹಿಸಿದ್ದಕ್ಕಾಗಿ ಲಾಠಿಚಾರ್ಜ್ ನಡೆದವು, ಅರೆಸ್ಟು, ಜೈಲುವಾಸಗಳಾದವು. ಆದರೆ ವಿದ್ಯಾರ್ಥಿ ಹೋರಾಟಗಾರರು ಶಾಂತಿಯುತವಾಗಿ ಚಳವಳಿ ಮುಂದುವರೆಸಿದರು. ಚಳುವಳಿಯ ನಾಯಕರು ಬಂದ್ ಘೋಷಣೆ ಮಾಡಿದರು. ಬಂದ್ ಯಶಸ್ವಿಯಾಯಿತು. ಪೊಲೀಸ್ ಕಫ್ರ್ಯೂ ಹಾಕಿದರು. ಜನರು ಯಾರೂ ಮನೆಬಿಟ್ಟು ಹೊರಬರಲೇ ಇಲ್ಲ. ಸರ್ಕಾರಿ ಕೆಲಸವೆಲ್ಲ ಸ್ಥಗಿತವಾಯಿತು. ಮುಂದೆ ವಿಧಾನಸಭೆಗೆ ಚುನಾವಣೆ ಘೋಷಣೆಯಾಯಿತು. ಚುನಾವಣೆ ನಡೆಸುವ ಅಧಿಕಾರಿಗಳನ್ನು ಇಂದಿರಾಗಾಂಧಿ ದೆಹಲಿಯಿಂದಲೇ ಕಳುಹಿಸಿದರು. ವಿದಾರ್ಥಿ ನಾಯಕರು ಚುನಾವಣೆಯನ್ನು ಬಹಿಷ್ಕರಿಸಲು ಅಸ್ಸಾಮಿಯರಿಗೆ ಕರೆಕೊಟ್ಟರು. ಚುನಾವಣೆ ನಡೆದೇ ನಡೆಯಿತು. ಶೇ.10ರಷ್ಟು ಮತದಾನ ಆಯಿತು. ಆದರೂ ಎಣಿಕೆ ನಡೆಯಿತು. ಕಾಂಗ್ರೆಸ್‍ಗೆ ಬಹುಮತ ಬಂತು ಎಂದು ಚುನಾವಣಾ ಆಯೋಗ ಘೋಷಣೆ ಮಾಡಿತು. ಆದರೆ ಆ ಸರ್ಕಾರ ಬಹಳ ಕಾಲ ನಡೆಯಲಿಲ್ಲ. ಮತ್ತೆ ಚುನಾವಣೆ ಘೋಷಣೆಯಾಯಿತು. ‘ಅಸ್ಸಾಂ ಗಣ ಪರಿಷತ್’ ಪರವಾಗಿ ಅಭ್ಯರ್ಥಿಗಳನ್ನು ನಿಲ್ಲಿಸಲಾಯಿತು. ಅವರು ಬಹುಮತ ಗಳಿಸಿದರು. ಅಧಿಕಾರ ಅವರ ಕೈಗೆ ಹೋಯಿತು. ಯುವಕರು ಸಂಘಟಿತರಾಗಿ ಜನತೆಯ ಹಿತಕ್ಕಾಗಿ ದುಡಿದರೆ, ಅವರೂ ಅಧಿಕಾರಕ್ಕೆ ಬರಬಹುದು ಎಂಬುದಕ್ಕೆ ಇದು ಒಂದು ಉದಾಹರಣೆ.
ಬಿಹಾರದಲ್ಲಿ ಜಯಪ್ರಕಾಶ್ ನಾರಾಯಣ್‍ರವರ ನೇತೃತ್ವದಲ್ಲಿ ಸರ್ಕಾರದ ಭ್ರಷ್ಟಾಚಾರದ ವಿರುದ್ಧವಾಗಿ ದೀರ್ಘಕಾಲದ ಚಳುವಳಿ ನಡೆಯಿತು. ಸರ್ಕಾರ ನಡೆಸುವವರು ಭ್ರಷ್ಟರಾಗಿರುವುದರಿಂದ ರಾಜೀನಾಮೆ ಕೊಟ್ಟು ಹೋಗಬೇಕು ಎಂದು ಘೋಷಿಸುತ್ತಾ ಒಂದು ಲಕ್ಷ ಸಹಿಮಾಡಿದ ಸಹಿಸಂಗ್ರಹದ ಕಡತಗಳನ್ನು ಲಾರಿಯಲ್ಲಿಟ್ಟುಕೊಂಡು ವಿದ್ಯಾರ್ಥಿಗಳು ಮೆರವಣಿಗೆ ಹೊರಟರು. ಜಯಪ್ರಕಾಶರ ತಲೆಗೇ ಪೊಲೀಸರು ಲಾಠಿಯಿಂದ ಹೊಡೆದರು. ವಿದ್ಯಾರ್ಥಿಗಳ ದಸ್ತಗಿರಿ ಆಯಿತು. ಮುಂದಿನ ಚುನಾವಣೆಯಲ್ಲಿ ಮುಖ್ಯಮಂತ್ರಿಗಳು ಸೋತರು.
ಯುವಕರು ಮನಸ್ಸು ಮಾಡಿದರೆ ಭ್ರಷ್ಟಾಚಾರ ತಪ್ಪಿಸಬಹುದು. ಆಡಳಿತ ನಡೆಸುವ ಭ್ರಷ್ಟ ಸರ್ಕಾರವನ್ನು ಕಿತ್ತೆಸೆಯಬಹುದು ಎಂಬುದಕ್ಕೆ ಯುವಕರ ಈ ಎರಡು ಹೋರಾಟಗಳು ಉದಾಹರಣೆ.
ಸಮಾಜ ಪೂರ್ತಿ ಕೆಟ್ಟುಹೋಗಿದೆ. ಸರ್ಕಾರ ನಡೆಸುವವರು ಭ್ರಷ್ಟರಾಗಿದ್ದಾರೆ, ಸರ್ಕಾರಿ ಅಧಿಕಾರಿಗಳು ಲಂಚಕೋರರು; ಇವನ್ನೆಲ್ಲ ನೋಡಿಕೊಂಡು ಮೂಕಪ್ರೇಕ್ಷರಂತೆ ಕುಳಿತಿದ್ದಾರೆ ಯುವಜನತೆ. ಈ ಮನೋಭಾವ ತ್ಯಜಿಸಿ ಕ್ರಾಂತಿಯನ್ನು ತರಬೇಕೆಂದು ಯುವಕರು ಮನಸ್ಸು ಮಾಡಬೇಕು. ಕ್ರಾಂತಿ ಎಂದರೆ ರಕ್ತಕ್ರಾಂತಿ ಎಂದು ಯುವಕರು ಭಾವಿಸುತ್ತಾರೆ. ಕ್ರಾಂತಿ ಎಂದರೆ ಸಮಾಜದ ಸಂಪೂರ್ಣ ಬದಲಾವಣೆ. ಈ ಕ್ರಾಂತಿಯನ್ನು ಯುವಕರು ಜನರ ತಲೆಯಲ್ಲಿ ಕ್ರಾಂತಿಯ ಬೀಜಗಳನ್ನು ಬಿತ್ತುವ ಮೂಲಕ ಸಾಧಿಸಬೇಕು. ಕ್ರಾಂತಿಯ ಬೀಜ ಎಲ್ಲರ ತಲೆಯಲ್ಲಿ ಸ್ಫೋಟವಾಗಬೇಕು. ಇದನ್ನು ವಿಚಾರಕ್ರಾಂತಿ ಎಂದು ಹೇಳುತ್ತಾರೆ. ಅಂತಹ ವಿಚಾರಕ್ರಾಂತಿ ಯುವಕರ ಮನಸ್ಸಿನಲ್ಲಿ ಮೂಡಬೇಕು. ಯುವಕರು ಕ್ರಾಂತಿವಾಹಕರಾಗಿ ಜನಜಾಗೃತಿಯ ಕೆಲಸದಲ್ಲಿ ತೊಡಗಿಸಿಕೊಂಡಲ್ಲಿ ಜನಜಾಗೃತಿಯ ಮೂಲಕ ಸಾಮಾಜಿಕ ಕ್ರಾಂತಿ ಸಾಧಿಸಬಹುದು; ಹೊಸ ಮೌಲ್ಯಗಳಿರುವ ನವಸಮಾಜವನ್ನು ಸೃಷ್ಟಿ ಮಾಡಬಹುದು.
                             – ಹೆಚ್.ಎಸ್.ದೊರೆಸ್ವಾಮಿ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಲಂಚ ಪಡೆಯುವಾಗ ಸಿಕ್ಕಿಬಿದ್ದ ಬಿಜೆಪಿ ಶಾಸಕ; ಲೋಕಾಯುಕ್ತ ಪೊಲೀಸರಿಂದ ಚಂದ್ರು ಲಮಾಣಿ ಬಂಧನ

ಲಂಚ ಪಡೆಯುವಾಗಲೇ ಲೋಕಾಯುಕ್ತ ಪೊಲೀಸರು ಬಿಜೆಪಿ ಶಾಸಕ ಚಂದ್ರು ಲಮಾಣಿ ಅವರನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ. ಗುತ್ತಿಗೆದಾರ ವಿಜಯ್ ಪೂಜಾರ್ ಅವರ ದೂರಿನ ಮೇರೆಗೆ ಗದಗ ಲೋಕಾಯುಕ್ತ ಪೊಲೀಸರು ನಡೆಸಿದ...

ಎಐ ಶೃಂಗಸಭೆಯಲ್ಲಿ ಪ್ರತಿಭಟನೆ : ನಾಲ್ವರು ಯುವ ಕಾಂಗ್ರೆಸ್‌ ಕಾರ್ಯಕರ್ತರು 5 ದಿನ ಪೊಲೀಸ್ ಕಸ್ಟಡಿಗೆ

ನವದೆಹಲಿಯ ಭಾರತ ಮಂಟಪದಲ್ಲಿ ಆಯೋಜಿಸಿದ್ದ ಎಐ ಶೃಂಗಸಭೆಯಲ್ಲಿ ಶರ್ಟ್ ಬಿಚ್ಚಿ ಪ್ರತಿಭಟಿಸಿದ್ದ ನಾಲ್ವರು ಯುವ ಕಾಂಗ್ರೆಸ್ ಕಾರ್ಯಕರ್ತರನ್ನು ದೆಹಲಿ ನ್ಯಾಯಾಲಯ ಶನಿವಾರ (ಫೆ.21) 5 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿದೆ. ದೆಹಲಿ ಪೊಲೀಸರು...

ಮೈಮೇಲೆ ದೇವರು ಬಂದಂತೆ ನಟಿಸಿ ದಲಿತ ನವದಂಪತಿ ದೇವಸ್ಥಾನ ಪ್ರವೇಶ ನಿರಾಕರಣೆ: ವ್ಯಕ್ತಿ ಬಂಧನ

ಮೈಮೇಲೆ ದೇವರು ಬಂದಂತೆ ನಾಟಕವಾಡಿದ ವ್ಯಕ್ತಿಯೊಬ್ಬ, ದೇವಸ್ಥಾನಕ್ಕೆ ಬಂದಿದ್ದ ದಲಿತ ನವದಂಪತಿಯನ್ನು ಹೊರಗೆ ಕಳುಹಿಸುವ ಮೂಲಕ ಅಸ್ಪೃಶ್ಯತೆ ಆಚರಣೆ ಮಾಡಿರುವ ಘಟನೆ ತುಮಕೂರು ಜಿಲ್ಲೆಯ ತುರುವೇಕೆರೆ ತಾಲೂಕಿನ ಗೋಣಿ ತುಮಕೂರಿನಲ್ಲಿ (ಫೆ.20) ನಡೆದಿದೆ. ಗೃಹ...

ಜಾತಿವಾದಿ ಹೇಳಿಕೆ: ಜೆಎನ್‌ಯು ಉಪಕುಲಪತಿ ರಾಜೀನಾಮೆಗೆ ವಿದ್ಯಾರ್ಥಿ ಸಂಘ ಆಗ್ರಹ

ದೆಹಲಿಯ ಜವಾಹರಲಾಲ್ ನೆಹರು ವಿಶ್ವ ವಿದ್ಯಾಲಯದ (ಜೆಎನ್‌ಯು) ಉಪಕುಲಪತಿ ಶಾಂತಿಶ್ರೀ ಧೂಳಿಪುಡಿ ಪಂಡಿತ್ ಅವರು 'ದ ಸಂಡೇ ಗಾರ್ಡಿಯನ್' ಯೂಟ್ಯೂಬ್‌ ಚಾನೆಲ್‌ನ ಪಾಡ್‌ಕಾಸ್ಟ್‌ನಲ್ಲಿ 'ಜಾತಿ ಮತ್ತು ವಿಕ್ಟಿಮ್ ಕಾರ್ಡ್' ಕುರಿತು ನೀಡಿದ ಹೇಳಿಕೆ...

10 ವರ್ಷಗಳಲ್ಲಿ 33 ಬಾಲಕರ ಮೇಲೆ ಲೈಂಗಿಕ ದೌರ್ಜನ್ಯ : ದಂಪತಿಗೆ ಮರಣದಂಡನೆ

ಸುಮಾರು 10 ವರ್ಷಗಳಲ್ಲಿ 33 ಬಾಲಕರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣದಲ್ಲಿ ದಂಪತಿಗೆ ಮರಣದಂಡನೆ ವಿಧಿಸಿ ಉತ್ತರ ಪ್ರದೇಶದ ಬಂಡಾ ವಿಶೇಷ ಪೋಕ್ಸೋ ನ್ಯಾಯಾಲಯ ಶುಕ್ರವಾರ (ಫೆ.20) ಆದೇಶಿಸಿದೆ. ಉತ್ತರ ಪ್ರದೇಶದ...

ರಾಜ್ಯಸಭೆ ಚುನಾವಣೆ : ಬಿಹಾರದಲ್ಲಿ ಕಿಂಗ್ ಮೇಕರ್ ಆದ ಓವೈಸಿ ಪಕ್ಷ

ಮಾರ್ಚ್ 16ರಂದು ನಡೆಯಲಿರುವ ಬಿಹಾರದ ಐದು ರಾಜ್ಯಸಭಾ ಸ್ಥಾನಗಳ ಚುನಾವಣೆಯಲ್ಲಿ ಹೈದರಾಬಾದ್ ಸಂಸದ ಅಸಾದುದ್ದೀನ್ ಓವೈಸಿ ಅವರ ಎಐಎಂಐಎಂ ಪಕ್ಷವು 'ಕಿಂಗ್ ಮೇಕರ್' ಆಗಿ ಹೊರಹೊಮ್ಮಿದೆ. ಬಿಹಾರದಲ್ಲಿ ಒಂದು ರಾಜ್ಯಸಭಾ ಸ್ಥಾನ ಗೆಲ್ಲಲು ಕನಿಷ್ಠ...

ದೆಹಲಿ : ಪ್ರಧಾನಿ ಮನೆ ಬಳಿಯ ಕೊಳಗೇರಿಗಳ 717 ಕುಟುಂಬಗಳಿಗೆ ಮನೆ ಖಾಲಿ ಮಾಡುವಂತೆ ನೋಟಿಸ್

ನವದೆಹಲಿಯ ಪ್ರಧಾನಿ ನಿವಾಸದ ಬಳಿಯ ಮೂರು ಕೊಳಗೇರಿಗಳಲ್ಲಿ ವಾಸಿಸುತ್ತಿರುವ ಏಳುನೂರ ಹದಿನೇಳು ಕುಟುಂಬಗಳು ಮಾರ್ಚ್ 6ರೊಳಗೆ ತಮ್ಮ ಮನೆಗಳನ್ನು ಖಾಲಿ ಮಾಡುವಂತೆ ಸೂಚಿಸಲಾಗಿದೆ. ಇಲ್ಲದಿದ್ದರೆ ಕಾನೂನು ಕ್ರಮ ಎದುರಿಸಲು ಸಿದ್ದರಾಗುವಂತೆ ಎಚ್ಚರಿಕೆ ನೀಡಲಾಗಿದೆ...

ಹೊಸ ಅಸ್ತ್ರ ಪ್ರಯೋಗಿಸಿದ ಟ್ರಂಪ್ : ಎಲ್ಲಾ ರಾಷ್ಟ್ರಗಳ ಆಮದು ಮೇಲೆ ಶೇ.10ರಷ್ಟು ಜಾಗತಿಕ ಸುಂಕ ಘೋಷಣೆ

ಎಲ್ಲಾ ದೇಶಗಳ ಆಮದುಗಳ ಮೇಲೆ ಹೊಸದಾಗಿ ಶೇಕಡ 10 ಸುಂಕ ವಿಧಿಸುವ ಕಾರ್ಯನಿರ್ವಾಹಕ ಆದೇಶಕ್ಕೆ ಸಹಿ ಹಾಕಿರುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶುಕ್ರವಾರ (ಫೆ.20) ಘೋಷಿಸಿದ್ದಾರೆ. ಇದಕ್ಕೂ ಕೆಲ ಗಂಟೆಗಳ ಮೊದಲು,...

ಭಾರತದೊಂದಿಗಿನ ವ್ಯಾಪಾರ ಒಪ್ಪಂದದಲ್ಲಿ ಯಾವುದೇ ಬದಲಾವಣೆ ಇಲ್ಲ: ಸುಪ್ರೀಂ ಕೋರ್ಟ್ ತೀರ್ಪಿನ ಬಳಿಕ ಟ್ರಂಪ್ ಹೇಳಿಕೆ

ಅಮೆರಿಕ ಸುಪ್ರೀಂ ಕೋರ್ಟ್ ಪ್ರತಿ ಸುಂಕ (Reciprocal tariffs) ನೀತಿಯನ್ನು ರದ್ದುಗೊಳಿಸಿದರೂ, ಭಾರತ-ಅಮೆರಿಕ ನಡುವಿನ ವ್ಯಾಪಾರ ಒಪ್ಪಂದದಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶುಕ್ರವಾರ (ಫೆ.20) ತಿಳಿಸಿದ್ದಾರೆ. ಶ್ವೇತಭವನದಲ್ಲಿ...

ಗುಜರಾತ್: ‘ಲವ್ ಜಿಹಾದ್’ ತಡೆಗೆ ವಿವಾಹ ನೋಂದಣಿ ಪ್ರಕ್ರಿಯೆಯಲ್ಲಿ ಗಮನಾರ್ಹ ಬದಲಾವಣೆಗಳನ್ನು ಮಾಡುತ್ತೇವೆ; ಡಿಸಿಎಂ ಹರ್ಷ ಸಾಂಘವಿ ಘೋಷಣೆ

ಅಹಮದಾಬಾದ್: ಗುಜರಾತ್‌ನ ಉಪಮುಖ್ಯಮಂತ್ರಿ ಹರ್ಷ ಸಾಂಘವಿ ಶುಕ್ರವಾರ, ರಾಜ್ಯ ಸರ್ಕಾರವು ವಿವಾಹ ನೋಂದಣಿ ಕಾರ್ಯವಿಧಾನದಲ್ಲಿ ಬದಲಾವಣೆಗಳನ್ನು ತರಲಿದೆ ಎಂದು ಘೋಷಿಸಿದ್ದು, "ಸಮಾಜ ವಿರೋಧಿ ಶಕ್ತಿಗಳು", ವಿಶೇಷವಾಗಿ ಗುಜರಾತ್‌ನ ಹೆಣ್ಣುಮಕ್ಕಳನ್ನು "ಲವ್ ಜಿಹಾದ್" ಗಾಗಿ...