Homeಅಂಕಣಗಳುಸಮಾಜ ಬದಲಾವಣೆಯಲ್ಲಿ ಯುವಜನರ ಪಾತ್ರ

ಸಮಾಜ ಬದಲಾವಣೆಯಲ್ಲಿ ಯುವಜನರ ಪಾತ್ರ

- Advertisement -
ನಮ್ಮ  ಸಮಾಜ ನಿಂತ ನೀರಿನಂತೆ ಗಬ್ಬು ಹೊಡೆಯುತ್ತಿದೆ. ವಿಷಪೂರಿತವಾಗಿದೆ. ಅನೇಕ ಸಾಮಾಜಿಕ ಕಾಯಿಲೆಗಳ ಆವಾಸಸ್ಥಾನವಾಗಿದೆ. ಸ್ವಾತಂತ್ರ್ಯ ಬಂದು 70ವರ್ಷಗಳೇ ಆದರೂ ಬಡವರು ಬಡವರಾಗಿಯೇ ಉಳಿದಿದ್ದಾರೆ. ಕೆಲವೇ ಶ್ರೀಮಂತರು ಸಹಸ್ರಾರು ಕೋಟಿಗಳ ಒಡೆಯರಾಗುತ್ತಿದ್ದಾರೆ. ಪಕ್ಷ ರಾಜಕೀಯ ಹೊಲಸಾಗಿದೆ. ವಿದ್ಯೆ ಮಾರಾಟದ ವಸ್ತುವಾಗಿದೆ. ಶಾಸಕರು, ಮಂತ್ರಿಗಳಿಂದ ಮೊದಲುಗೊಂಡು ಪಂಚಾಯ್ತಿ ಸದಸ್ಯರವರೆಗೆ ದುರ್ಲಾಭಕ್ಕೋಸ್ಕರ ವಿದ್ಯಾಸಂಸ್ಥೆಗಳನ್ನು ನಡೆಸುತ್ತಿದ್ದಾರೆ. ಮಠಾಧಿಪತಿಗಳೂ ಈ ಸ್ಪರ್ಧೆಯಲ್ಲಿದ್ದಾರೆ.
ಇದನ್ನೆಲ್ಲ ಮೂಕಪ್ರೇಕ್ಷಕರಂತೆ ನಮ್ಮ ಯುವಕರು ನೋಡಿಕೊಂಡು ಕುಳಿತಿದ್ದಾರೆ. ನಮ್ಮದು ಪ್ರಜಾರಾಜ್ಯ, ಪ್ರಜೆಗಳೇ ನಮ್ಮ ದೇಶದ ಪ್ರಭುಗಳು ಎಂದು ನಮ್ಮ ರಾಜ್ಯಾಂಗ ಹೇಳುತ್ತದೆ. ಆದರೆ ನಾವು ಮಾತ್ರ ಆಡಳಿತಕ್ಕೂ ನಮಗೂ ಸಂಬಂಧವಿಲ್ಲವೇನೋ ಎಂಬಂತೆ ಹೊಣೆಗೇಡಿಗಳಾಗಿ ನಡೆದುಕೊಳ್ಳುತ್ತಿದ್ದೇವೆ. ಇಂಥಾ ಮನೋಭಾವ ಯುವಕರಿಗೆ ತರವಲ್ಲ. ಗಾಢನಿದ್ರೆಯಲ್ಲಿರುವ ಯುವಕರು ಮೈಕೊಡವಿಕೊಂಡು ಏಳಬೇಕು. ದೇಶದ ಸಮಸ್ಯೆಗಳನ್ನೆಲ್ಲ ಒಂದೊಂದಾಗಿ ಬಗೆಹರಿಸಬೇಕು. ಅದಕ್ಕೆ ಮೊದಲು ನಾವು ದೇಶದ ಇಂದಿನ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳಬೇಕು. ಸಮಸ್ಯೆಗೆ ಪರಿಹಾರ ಕಂಡುಕೊಂಡು ಬದಲಾವಣೆಗೆ ಸಂಘಟಿತರಾಗಿ ಹೋರಾಡಬೇಕು. ಯುವಕರು ನಮ್ಮ ಆಶಾಕಿರಣ, ನಮ್ಮ ಮುಂದೆ ಇರುವ ಪ್ರಮುಖ ಸಮಸ್ಯೆಗಳಿವು :-
1. ಪ್ರಜಾಪ್ರಭುತ್ವಕ್ಕೆ ಕುತ್ತು ಬಂದಿದೆ.
2. ನಮ್ಮ ಮೂಲಭೂತ ಸಮಸ್ಯೆಗಳಾದ ಬಡತನ, ನಿರುದ್ಯೋಗ, ಭ್ರಷ್ಟಾಚಾರ, ಆಡಳಿತದ ದುರ್ಬಳಕೆ ಇವುಗಳಿಗೆ ಪರಿಹಾರ ಕಂಡುಹಿಡಿದುಕೊಳ್ಳಬೇಕಿದೆ.
3. ಲೋಕಸಭೆ, ಶಾಸನಸಭೆಗಳು ಜನರ ಸಮಸ್ಯೆಗಳನ್ನು ಚರ್ಚಿಸಿ ಬಗೆಹರಿಸುವುದುದನ್ನು ಬಿಟ್ಟು ಜಗಳ, ಗದ್ದಲ, ವಾಕ್‍ಔಟ್, ದೊಂಬಿ, ಗಲಾಟೆ ಇವುಗಳಲ್ಲೇ ಕಾಲಕಳೆದು, ಚರ್ಚೆಯಿಲ್ಲದೆ ಮಸೂದೆಗಳು ಪಾಸಾಗುತ್ತಿವೆ.
4. ಹಣ, ಜಾತಿ, ಧರ್ಮ, ತೋಳ್ಬಲ ಇರುವವರು ನಮ್ಮ ಪ್ರತಿನಿಧಿಗಳಾಗಿ ಆಯ್ಕೆಯಾಗುತ್ತಿದ್ದಾರೆ.
ಇಂತಹ ಅನೇಕ ಸಮಸ್ಯೆಗಳು ನಮ್ಮನ್ನು ಕಾಡುತ್ತಿವೆ. ಮೊದಲು ಈ ಸಮಸ್ಯೆಗಳನ್ನು ಬಗೆ ಹರಿಸಲು ಯುವಕರು ತೊಡಗಬೇಕು.
ನಮ್ಮ ಸಮಾಜವನ್ನು ನಾವು ಸತ್ಯ ಮತ್ತು ಅಹಿಂಸೆಯ ಆಧಾರದ ಮೇಲೆ ಕಟ್ಟಬೇಕು. ಯುವಕರಿಗೆ ಕೋಪತಾಪಗಳಿರಬಾರದು. ಹೋರಾಟ ಮಾಡುವಾಗ ಯುವಕರು ಥರ್ಮಾಮೀಟರ್‍ನಂತೆ ಇರಬೇಕು. ಥರ್ಮಾಮೀಟರ್‍ಗೆ ಜ್ವರ ಬರಬಾರದು. ಅದಕ್ಕೆ ಜ್ವರ ಬಂದರೆ ಅದು ಇತರರ ಜ್ವರವನ್ನು ಕಂಡುಹಿಡಿಯುವುದಾದರೂ ಹೇಗೆ? ಶ್ರೀ ಕೃಷ್ಣ ಭಗವದ್ಗೀತೆಯಲ್ಲಿ ಹೇಳುತ್ತಾನೆ, ಯುದ್ಧಸ್ಯವಿಗತ ಜ್ವರ: ಎಂದು ತಲೆ ಬಿಸಿಮಾಡಿಕೊಳ್ಳದೆ, ಶಾಂತಿಚಿತ್ತದಿಂದ ಯುದ್ಧದಲ್ಲಿ ತೊಡಗಿಕೊ ಎಂಬುದು ಇದರರ್ಥ.
ನಾವು ಹೋರಾಡಬೇಕಾಗಿರುವುದು ಸರ್ವರಿಗೂ ಸುಖ ಸಂತೋಷ ಸಿಗಲೆಂದು. ಅಂದರೆ ಜನರಲ್ಲಿ ಹಸಿವು, ಬಡತನ, ಅಜ್ಞಾನ, ಅಸಮಾನತೆ ಇವು ಇರಬಾರದು. ಅಹಿಂಸಾ ಹೋರಾಟದ ಮೂಲಕ ಈ ಬದಲಾವಣೆಯನ್ನು ಸಮಾಜದಲ್ಲಿ ತರಬೇಕು. ಈಗ ಯಾವ ರಾಜಕೀಯ ಪಕ್ಷಕ್ಕೂ ಸಿದ್ಧಾಂತಗಳೇ ಇಲ್ಲ. ಇಂಥಾ ಸನ್ನಿವೇಶದ ದುರ್ಲಾಭ ಮಾಡಿಕೊಳ್ಳಲು ಭಾರತೀಯ ಜನತಾ ಪಕ್ಷ ‘ಹಿಂದೂರಾಷ್ಟ್ರ ನಿರ್ಮಾಣ’ ಎಂಬ ಡೋಂಗಿ ರಾಷ್ಟ್ರವಾದವೊಂದನ್ನು ಮುಂದೆ ತರುತ್ತಿದೆ. ಅದು ಅತ್ಯಂತ ಅಪಾಯಕಾರಿ. ಸಮಾಜದಲ್ಲಿ ಮೌಲ್ಯಗಳ ಅಧಃಪತನವೇ ಇಂದಿನ ನಮ್ಮ ಈ ಅಧೋಗತಿಗೆ ಕಾರಣ. ಮಾನವೀಯ ಮೌಲ್ಯಗಳಾದ ಸೋದರತ್ವ, ಸಮಾನತೆಗಳ ಆಧಾರದ ಮೇಲೆ ನಮ್ಮ ಸಮಾಜ ರೂಪಿತವಾಗಬೇಕು. ಜಾತಿ, ಧರ್ಮಗಳನ್ನು ರಾಜಕೀಯಕ್ಕೆ ಬೆರೆಸಬಾರದು. ಆದರೆ ಈಗ ಕ್ರಿಮಿನಲ್‍ಗಳು ಎಲ್ಲಾ ರಾಜಕೀಯ ಪಕ್ಷಗಳಿಂದಲೂ ಆರಿಸಿ ಬರುತ್ತಿದ್ದಾರೆ. ಈ ಸಾರಿ ಚುನಾವಣೆಯಲ್ಲಿ ಬಿಜೆಪಿಯಿಂದ 27, ಜನತಾದಳದಿಂದ 23, ಕಾಂಗ್ರೆಸ್ಸಿನಿಂದ 15 ಕ್ರಿಮಿನಲ್ ಹಿನ್ನೆಲೆಯವರು ಆರಿಸಿ ಬಂದಿದ್ದಾರೆ. ಮತದಾರರಿಗೆ ಇಂತಹವರನ್ನು ಆಯ್ಕೆ ಮಾಡಬೇಡಿ, ಇಂಥವರಿಗೆ ಮತ ಹಾಕಬೇಡಿ ಎಂದು ಗಟ್ಟಿದನಿಯಲ್ಲಿ ಹೇಳುವವರು ಬೇಕಾಗಿದ್ದಾರೆ.
ಯುವಕರ ಇತ್ತೀಚಿನ ಸಾಧನೆ ಕುರಿತು ಎರಡು ನಿದರ್ಶನಗಳನ್ನು ಕೊಡುತ್ತೇನೆ. ಅಸ್ಸಾಂನಲ್ಲಿ ವಿದ್ಯಾರ್ಥಿಗಳು ಸಂಘಟನೆ ಮಾಡಿಕೊಂಡರು. ಆಗ ಅಸ್ಸಾಂನಲ್ಲಿ ಅಧಿಕಾರಿಗಳಾಗಿದ್ದವರೆಲ್ಲ ಬಂಗಾಳಿಗಳು. ‘ಅಸ್ಸಾಂ ಅಸ್ಸಾಮಿಯರಿಗೆ’ ಎಂಬ ಚಳವಳಿ ಆರಂಭಿಸಿದರು. ಅಸ್ಸಾಂ ಗಣತಂತ್ರ ಪರಿಷತ್ ಎಂಬ ಸಂಸ್ಥೆ ಸ್ಥಾಪಿಸಿದರು. ಹೋರಾಟದಲ್ಲಿ ಭಾಗವಹಿಸಿದ್ದಕ್ಕಾಗಿ ಲಾಠಿಚಾರ್ಜ್ ನಡೆದವು, ಅರೆಸ್ಟು, ಜೈಲುವಾಸಗಳಾದವು. ಆದರೆ ವಿದ್ಯಾರ್ಥಿ ಹೋರಾಟಗಾರರು ಶಾಂತಿಯುತವಾಗಿ ಚಳವಳಿ ಮುಂದುವರೆಸಿದರು. ಚಳುವಳಿಯ ನಾಯಕರು ಬಂದ್ ಘೋಷಣೆ ಮಾಡಿದರು. ಬಂದ್ ಯಶಸ್ವಿಯಾಯಿತು. ಪೊಲೀಸ್ ಕಫ್ರ್ಯೂ ಹಾಕಿದರು. ಜನರು ಯಾರೂ ಮನೆಬಿಟ್ಟು ಹೊರಬರಲೇ ಇಲ್ಲ. ಸರ್ಕಾರಿ ಕೆಲಸವೆಲ್ಲ ಸ್ಥಗಿತವಾಯಿತು. ಮುಂದೆ ವಿಧಾನಸಭೆಗೆ ಚುನಾವಣೆ ಘೋಷಣೆಯಾಯಿತು. ಚುನಾವಣೆ ನಡೆಸುವ ಅಧಿಕಾರಿಗಳನ್ನು ಇಂದಿರಾಗಾಂಧಿ ದೆಹಲಿಯಿಂದಲೇ ಕಳುಹಿಸಿದರು. ವಿದಾರ್ಥಿ ನಾಯಕರು ಚುನಾವಣೆಯನ್ನು ಬಹಿಷ್ಕರಿಸಲು ಅಸ್ಸಾಮಿಯರಿಗೆ ಕರೆಕೊಟ್ಟರು. ಚುನಾವಣೆ ನಡೆದೇ ನಡೆಯಿತು. ಶೇ.10ರಷ್ಟು ಮತದಾನ ಆಯಿತು. ಆದರೂ ಎಣಿಕೆ ನಡೆಯಿತು. ಕಾಂಗ್ರೆಸ್‍ಗೆ ಬಹುಮತ ಬಂತು ಎಂದು ಚುನಾವಣಾ ಆಯೋಗ ಘೋಷಣೆ ಮಾಡಿತು. ಆದರೆ ಆ ಸರ್ಕಾರ ಬಹಳ ಕಾಲ ನಡೆಯಲಿಲ್ಲ. ಮತ್ತೆ ಚುನಾವಣೆ ಘೋಷಣೆಯಾಯಿತು. ‘ಅಸ್ಸಾಂ ಗಣ ಪರಿಷತ್’ ಪರವಾಗಿ ಅಭ್ಯರ್ಥಿಗಳನ್ನು ನಿಲ್ಲಿಸಲಾಯಿತು. ಅವರು ಬಹುಮತ ಗಳಿಸಿದರು. ಅಧಿಕಾರ ಅವರ ಕೈಗೆ ಹೋಯಿತು. ಯುವಕರು ಸಂಘಟಿತರಾಗಿ ಜನತೆಯ ಹಿತಕ್ಕಾಗಿ ದುಡಿದರೆ, ಅವರೂ ಅಧಿಕಾರಕ್ಕೆ ಬರಬಹುದು ಎಂಬುದಕ್ಕೆ ಇದು ಒಂದು ಉದಾಹರಣೆ.
ಬಿಹಾರದಲ್ಲಿ ಜಯಪ್ರಕಾಶ್ ನಾರಾಯಣ್‍ರವರ ನೇತೃತ್ವದಲ್ಲಿ ಸರ್ಕಾರದ ಭ್ರಷ್ಟಾಚಾರದ ವಿರುದ್ಧವಾಗಿ ದೀರ್ಘಕಾಲದ ಚಳುವಳಿ ನಡೆಯಿತು. ಸರ್ಕಾರ ನಡೆಸುವವರು ಭ್ರಷ್ಟರಾಗಿರುವುದರಿಂದ ರಾಜೀನಾಮೆ ಕೊಟ್ಟು ಹೋಗಬೇಕು ಎಂದು ಘೋಷಿಸುತ್ತಾ ಒಂದು ಲಕ್ಷ ಸಹಿಮಾಡಿದ ಸಹಿಸಂಗ್ರಹದ ಕಡತಗಳನ್ನು ಲಾರಿಯಲ್ಲಿಟ್ಟುಕೊಂಡು ವಿದ್ಯಾರ್ಥಿಗಳು ಮೆರವಣಿಗೆ ಹೊರಟರು. ಜಯಪ್ರಕಾಶರ ತಲೆಗೇ ಪೊಲೀಸರು ಲಾಠಿಯಿಂದ ಹೊಡೆದರು. ವಿದ್ಯಾರ್ಥಿಗಳ ದಸ್ತಗಿರಿ ಆಯಿತು. ಮುಂದಿನ ಚುನಾವಣೆಯಲ್ಲಿ ಮುಖ್ಯಮಂತ್ರಿಗಳು ಸೋತರು.
ಯುವಕರು ಮನಸ್ಸು ಮಾಡಿದರೆ ಭ್ರಷ್ಟಾಚಾರ ತಪ್ಪಿಸಬಹುದು. ಆಡಳಿತ ನಡೆಸುವ ಭ್ರಷ್ಟ ಸರ್ಕಾರವನ್ನು ಕಿತ್ತೆಸೆಯಬಹುದು ಎಂಬುದಕ್ಕೆ ಯುವಕರ ಈ ಎರಡು ಹೋರಾಟಗಳು ಉದಾಹರಣೆ.
ಸಮಾಜ ಪೂರ್ತಿ ಕೆಟ್ಟುಹೋಗಿದೆ. ಸರ್ಕಾರ ನಡೆಸುವವರು ಭ್ರಷ್ಟರಾಗಿದ್ದಾರೆ, ಸರ್ಕಾರಿ ಅಧಿಕಾರಿಗಳು ಲಂಚಕೋರರು; ಇವನ್ನೆಲ್ಲ ನೋಡಿಕೊಂಡು ಮೂಕಪ್ರೇಕ್ಷರಂತೆ ಕುಳಿತಿದ್ದಾರೆ ಯುವಜನತೆ. ಈ ಮನೋಭಾವ ತ್ಯಜಿಸಿ ಕ್ರಾಂತಿಯನ್ನು ತರಬೇಕೆಂದು ಯುವಕರು ಮನಸ್ಸು ಮಾಡಬೇಕು. ಕ್ರಾಂತಿ ಎಂದರೆ ರಕ್ತಕ್ರಾಂತಿ ಎಂದು ಯುವಕರು ಭಾವಿಸುತ್ತಾರೆ. ಕ್ರಾಂತಿ ಎಂದರೆ ಸಮಾಜದ ಸಂಪೂರ್ಣ ಬದಲಾವಣೆ. ಈ ಕ್ರಾಂತಿಯನ್ನು ಯುವಕರು ಜನರ ತಲೆಯಲ್ಲಿ ಕ್ರಾಂತಿಯ ಬೀಜಗಳನ್ನು ಬಿತ್ತುವ ಮೂಲಕ ಸಾಧಿಸಬೇಕು. ಕ್ರಾಂತಿಯ ಬೀಜ ಎಲ್ಲರ ತಲೆಯಲ್ಲಿ ಸ್ಫೋಟವಾಗಬೇಕು. ಇದನ್ನು ವಿಚಾರಕ್ರಾಂತಿ ಎಂದು ಹೇಳುತ್ತಾರೆ. ಅಂತಹ ವಿಚಾರಕ್ರಾಂತಿ ಯುವಕರ ಮನಸ್ಸಿನಲ್ಲಿ ಮೂಡಬೇಕು. ಯುವಕರು ಕ್ರಾಂತಿವಾಹಕರಾಗಿ ಜನಜಾಗೃತಿಯ ಕೆಲಸದಲ್ಲಿ ತೊಡಗಿಸಿಕೊಂಡಲ್ಲಿ ಜನಜಾಗೃತಿಯ ಮೂಲಕ ಸಾಮಾಜಿಕ ಕ್ರಾಂತಿ ಸಾಧಿಸಬಹುದು; ಹೊಸ ಮೌಲ್ಯಗಳಿರುವ ನವಸಮಾಜವನ್ನು ಸೃಷ್ಟಿ ಮಾಡಬಹುದು.
                             – ಹೆಚ್.ಎಸ್.ದೊರೆಸ್ವಾಮಿ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮಹಾರಾಷ್ಟ್ರದ ಉಪ ಮುಖ್ಯಮಂತ್ರಿಯಾಗಿ ಅಜಿತ್ ಪವಾರ್ ಪತ್ನಿ ಸುನೇತ್ರಾ ಪವಾರ್ ಪ್ರಮಾಣ ವಚನ ಸ್ವೀಕಾರ

ಜನವರಿ 28ರಂದು ವಿಮಾನ ಅಪಘಾತದಲ್ಲಿ ನಿಧನರಾದ ಎನ್‌ಸಿಪಿ ನಾಯಕ ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ ಅವರು ಮಹಾರಾಷ್ಟ್ರದ ಉಪಮುಖ್ಯಮಂತ್ರಿಯಾಗಿ ಶನಿವಾರ (ಜ.31) ಪ್ರಮಾಣವಚನ ಸ್ವೀಕರಿಸಿದರು. ಮುಂಬೈನ ಲೋಕಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ...

ಡೊನಾಲ್ಡ್ ಟ್ರಂಪ್, ಎಲಾನ್ ಮಸ್ಕ್‌ನಿಂದ ಬಿಲ್ ಗೇಟ್ಸ್‌ವರೆಗೆ : ಅಂತಿಮ ಎಪ್‌ಸ್ಟೀನ್‌ ಫೈಲ್‌ಗಳಲ್ಲಿ ಹಲವು ಪ್ರಮುಖರ ಹೆಸರು

ಅಮೆರಿಕದ ಸಂಸತ್ತು ಅಂಗೀಕರಿಸಿದ ಎಪ್‌ಸ್ಟೀನ್ ಫೈಲ್ಸ್ ಟ್ರಾನ್ಸ್‌ಪೆರೆನ್ಸಿ ಆಕ್ಟ್ (Epstein Files Transparency Act) ನಿಯಮದಂತೆ ಅಮೆರಿಕದ ನ್ಯಾಯ ಇಲಾಖೆ (ಡಿಒಜಿ) ಲೈಂಗಿಕ ದೌರ್ಜನ್ಯ ಪ್ರಕರಣದ ಅಪರಾಧಿ ಜೆಫ್ರಿ ಎಪ್‌ಸ್ಟೀನ್‌ಗೆ ಸಂಬಂಧಿಸಿದ ಅಂತಿಮ...

ಲಂಚ ಪ್ರಕರಣ : ಎಸ್‌ಇಸಿ ಸಮನ್ಸ್ ಸ್ವೀಕರಿಸಲು ಅದಾನಿ ಒಪ್ಪಿಗೆ

ಲಂಚ ಪ್ರಕರಣದಲ್ಲಿ ಅಮೆರಿಕದ ಸೆಕ್ಯುರಿಟೀಸ್ ಆ್ಯಂಡ್ ಎಕ್ಸ್‌ಚೇಂಜ್ ಕಮಿಷನ್ (ಎಸ್‌ಇಸಿ) ನ ಸಮನ್ಸ್‌ಗಳನ್ನು ಸ್ವೀಕರಿಸಲು ಉದ್ಯಮಿ ಗೌತಮ್ ಅದಾನಿ ಮತ್ತು ಅವರ ಸೋದರಳಿಯ ಸಾಗರ್ ಅದಾನಿ ಒಪ್ಪಿಕೊಂಡಿದ್ದಾರೆ ಎಂದು ವರದಿಯಾಗಿದೆ. ನ್ಯೂಯಾರ್ಕ್‌ನ ಬ್ರೂಕ್ಲಿನ್‌ನಲ್ಲಿರುವ ಫೆಡರಲ್...

ಬೀದರ್‌ : ಮೊಳಕೇರಾ ಗ್ರಾಮದಲ್ಲಿ ಸ್ಫೋಟ ಪ್ರಕರಣ ; ಸಮಗ್ರ ತನಿಖೆಗೆ ಸಚಿವ ಈಶ್ವರ್ ಖಂಡ್ರೆ ಆದೇಶ

ಬೀದರ್ ಜಿಲ್ಲೆ ಹುಮನಾಬಾದ್ ತಾಲೂಕಿನ ಮೊಳಕೇರಾ ಗ್ರಾಮದ ಮೋಳಗಿ ಮಾರಯ್ಯ ದೇವಸ್ಥಾನ ರಸ್ತೆಯಲ್ಲಿ ಅನುಮಾನಾಸ್ಪದ ವಸ್ತು ಸ್ಫೋಟಗೊಂಡು, ಶಾಲೆಗೆ ತೆರಳುತ್ತಿದ್ದ ಮಕ್ಕಳೂ ಸೇರಿ 6 ಜನರು ಗಾಯಗೊಂಡಿರುವ ಘಟನೆ ಬಗ್ಗೆ ಆಘಾತ ವ್ಯಕ್ತಪಡಿಸಿರುವ...

ಜೈಲಿನಲ್ಲಿರುವ ಹೋರಾಟಗಾರ ಸೋನಮ್ ವಾಂಗ್‌ಚುಕ್‌ಗೆ ಅನಾರೋಗ್ಯ : ಜೋಧ್‌ಪುರದ ಏಮ್ಸ್‌ನಲ್ಲಿ ವೈದ್ಯಕೀಯ ಪರೀಕ್ಷೆ

ನ್ಯಾಯಾಂಗ ಬಂಧನದಲ್ಲಿರುವ ಲಡಾಖ್‌ನ ಹೋರಾಟಗಾರ ಹಾಗೂ ವಿಜ್ಞಾನಿ ಸೋನಮ್ ವಾಂಗ್‌ಚುಕ್ ಅವರ ಆರೋಗ್ಯ ಹದೆಗೆಟ್ಟಿದ್ದು, ಸುಪ್ರೀಂ ಕೋರ್ಟ್ ನಿರ್ದೇಶನ ಅನುಸಾರ ಜೋಧ್‌ಪುರದ ಏಮ್ಸ್‌ನಲ್ಲಿ ಅವರಿಗೆ ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ. ಪೊಲೀಸರು ವಾಂಗ್‌ಚುಕ್ ಅವರನ್ನು ಜೋಧ್‌ಪುರ...

ಉತ್ತರಾಖಂಡ ಏಕರೂಪ ನಾಗರಿಕ ಸಂಹಿತೆ ತಿದ್ದುಪಡಿ : ಬಲವಂತದ ವಿವಾಹ, ಲಿವ್‌ಇನ್ ಸಂಬಂಧಕ್ಕೆ 7 ವರ್ಷ ಜೈಲು

ಉತ್ತರಾಖಂಡ ಏಕರೂಪ ನಾಗರಿಕ ಸಂಹಿತೆ (ತಿದ್ದುಪಡಿ) ಸುಗ್ರೀವಾಜ್ಞೆಗೆ ರಾಜ್ಯಪಾಲ ಹಾಗೂ ನಿವೃತ್ತ ಲೆಫ್ಟಿನೆಂಟ್ ಜನರಲ್ ಗುರ್ಮೀತ್ ಸಿಂಗ್ ಅವರು ಅಂಕಿತ ಹಾಕಿದ್ದಾರೆ. ಈ ತಿದ್ದುಪಡಿಯ ಪರಿಣಾಮ, ರಾಜ್ಯದಲ್ಲಿ ವಿವಾಹ ಹಾಗೂ ಲಿವ್‌ಇನ್ ಸಂಬಂಧಗಳಿಗೆ...

ಮಹಾರಾಷ್ಟ್ರದ ಡಿಸಿಎಂ ಆಗಿ ಅಜಿತ್ ಪವಾರ್ ಪತ್ನಿ ಸುನೇತ್ರಾ ಪವಾರ್ ಆಯ್ಕೆ : ಇಂದು ಸಂಜೆ ಪ್ರಮಾಣ ವಚನ ಸ್ವೀಕಾರ; ವರದಿ

ಅಜಿತ್ ಪವಾರ್ ಅವರ ಅಕಾಲಿಕ ಸಾವಿನಿಂದ ತೆರವಾದ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಸ್ಥಾನಕ್ಕೆ ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ ಅವರನ್ನು ನೇಮಿಸಲು ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ) ನಿರ್ಧರಿಸಿದೆ ಎಂದು ವರದಿಯಾಗಿದೆ....

ಶೂಟ್ ಮಾಡಿಕೊಂಡು ಪ್ರಾಣ ಬಿಟ್ಟ ಕಾನ್ಫಿಡೆಂಟ್ ಗ್ರೂಪ್ ಸಂಸ್ಥಾಪಕ ಸಿ.ಜೆ. ರಾಯ್: ಐಟಿ ದಾಳಿ ಒತ್ತಡದಿಂದ ಆತ್ಮಹತ್ಯೆ ಶಂಕೆ

ಬೆಂಗಳೂರು: ಖ್ಯಾತ ರಿಯಲ್ ಎಸ್ಟೇಟ್ ಉದ್ಯಮಿ, ಕಾನ್ಫಿಡೆಂಟ್ ಗ್ರೂಪ್ (Confident Group) ಅಧ್ಯಕ್ಷ ಡಾ. ಸಿ.ಜೆ. ರಾಯ್ ಅವರು ಶುಕ್ರವಾರ ಬೆಂಗಳೂರಿನ ತಮ್ಮ ಕಚೇರಿಯಲ್ಲಿ ಗನ್ ನಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.  ಕೇರಳ...

ಕಾಂಗ್ರೆಸ್ ಆಳ್ವಿಕೆಯಲ್ಲಿ ನುಸುಳಲುಕೋರರು ಬಹುಸಂಖ್ಯಾತರಾದರು; ನುಸುಳುಕೋರರಿಂದ ಅಸ್ಸಾಂ ರಕ್ಷಿಸಲು ಬಿಜೆಪಿಗೆ ಮತ ಹಾಕಿ: ಅಮಿತ್ ಶಾ

ಧೇಮಾಜಿ (ಅಸ್ಸಾಂ): ಕಾಂಗ್ರೆಸ್ ಆಳ್ವಿಕೆಯಲ್ಲಿ ಅಸ್ಸಾಂನ ಜನಸಂಖ್ಯಾಶಾಸ್ತ್ರ ಬದಲಾಗಿದೆ ಎಂದು ಹೇಳಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ , ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ನೇತೃತ್ವದ ಸರ್ಕಾರ ಈ ಪ್ರವೃತ್ತಿಯನ್ನು...

ಕೊಲ್ಕತ್ತಾ ಅಗ್ನಿ ಅವಘಡ| ಈವರೆಗೆ ವಾವ್ ಮೊಮೋ ಕಂಪನಿ ಗೋದಾಮು ಸೇರಿದಂತೆ ಇತರೆಡೆ 21 ಜನರು ಸಾವನ್ನಪ್ಪಿರುವ ಮಾಹಿತಿ ಲಭ್ಯ  

ಜನವರಿ 26 ರ ಮುಂಜಾನೆ ಕೋಲ್ಕತ್ತಾದ ಆನಂದಪುರ ಪ್ರದೇಶದಲ್ಲಿ ಸಂಭವಿಸಿದ ಭೀಕರ ಬೆಂಕಿ ಅಪಘಾತದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಗುರುವಾರ 21 ಕ್ಕೆ ಏರಿದ್ದು, 28 ಜನರು ಇನ್ನೂ ನಾಪತ್ತೆಯಾಗಿದ್ದಾರೆ.  ಬೆಂಕಿಯ ಅವಘಡದಲ್ಲಿ ಎರಡು ಗೋದಾಮುಗಳು...