Homeಸಿನಿಮಾಸಿನಿ ಸುದ್ದಿಹಲೋ ಐ ಆಮ್ ಅಂಬಿ

ಹಲೋ ಐ ಆಮ್ ಅಂಬಿ

- Advertisement -
- Advertisement -

ಸಂಗ್ರಹ ನಿರೂಪಣೆ: ಗಿರೀಶ್ ತಾಳಿಕಟ್ಟೆ |

ಇತ್ತೀಚೆಗೆ ನಿಧನರಾದ ಅಂಬರೀಷ್‍ರು ತಮ್ಮ ಬದುಕಿನ ಕುರಿತು ತಾವೇ ಆಪ್ತರ ಬಳಿ ಹೇಳಿಕೊಂಡಿದ್ದ ಕೆಲ ಸ್ವಾರಸ್ಯ ಘಟನೆಗಳ ಮೆಲುಕು ಇಲ್ಲಿದೆ.

 

ಬಾಡಿಗೆ ಅಣ್ಣ, ಬಾಯ್ತುಂಬ ಬೈಗುಳ

“ನಾನು ಪಿಯುಸಿ ಓದಿದ್ದು ಮೈಸೂರಿನ ಶಾರದಾ ವಿಲಾಸ ಕಾಲೇಜಿನಲ್ಲಿ. ಕಾಲೇಜಿನ ಪ್ರಿನ್ಸಿಪಾಲ್ ನಾರಾಯಣ ರಾವ್ ಅಂತ. ಬಲು ಸ್ಟ್ರಿಕ್ಟ್ ಮನುಷ್ಯ. ಒಮ್ಮೆ ತಪ್ಪು ಮಾಡಿದ ಅಂತ ತಮ್ಮ ಮಗನನ್ನೇ ಕಾಲೇಜಿಂದ ಸಸ್ಪೆಂಡು ಮಾಡಿಬಿಟ್ಟಿದ್ದ್ರು. ಅಂತಾ ಆಸಾಮಿ. ಎಸ್ಸೆಲ್ಸಿವರೆಗೂ ನಂ.1 ಸ್ಟೂಡೆಂಟಾಗಿದ್ದ ನಾನು ಪಿಯುಸಿನಲ್ಲಿ ಫಸ್ಟ್ ಟೈಮು ಕೆಮಿಸ್ಟ್ರಿ ಸಬ್ಜೆಕ್ಟ್‍ನಲ್ಲಿ ಫೇಲಾಗ್ಬಿಟ್ಟೆ. ತಕೋಳ್ಳಿ, ಆ ಪ್ರಿನ್ಸಿಪಾಲು ಅಪ್ಪನಿಗೆ ಲೆಟರು ಬರೆದುಬಿಟ್ರು. ಅಪ್ಪನಿಗೆ ವಿಷಯ ಗೊತ್ತಾದ್ರೆ, ನನ್ನ ಕಥೆ ಅಷ್ಟೇ ಅಂತ, ದಿನಾ ಬೆಳಿಗ್ಗೆ ಮನೆ ಮುಂದೆ ಪೋಸ್ಟ್‍ಮ್ಯಾನಿಗೋಸ್ಕರ ಕಾಯ್ಕೊಂಡು ನಿಂತ್ಕಂತಿದ್ದೆ. ಒಂದು ದಿನ ಆ ಲೆಟ್ರು ಬಂತು. ಅದುನ್ನ ನಾನೇ ಈಸ್ಕೊಂಡು ಹರಿದು ಹಾಕ್ಬುಟ್ಟೆ. ಅಲ್ಲಿಗೆ ಪ್ರಾಬ್ಲಂ ಸಾಲ್ವ್ ಆಯ್ತು ಅಂದ್ಕಂಡೆ. ಆದ್ರೆ ಒಂದಿನ ಇದ್ದುಕ್ಕಿದ್ದಂಗೆ ಪ್ರಿನ್ಸಿಪಾಲು ನನ್ನನ್ನು ಕರೆಯೋಕ್ಕೆ ಕಳ್ಸಿದ್ರು. ಅವರ ಚೇಂಬರಿಗೆ ಹೋಗ್ತಿದ್ದಂಗೆ, `ಯಾಕೋ ಲೆಟರ್ ಹರಿದು ಹಾಕ್ದೆ? ನಿಮ್ಮಪ್ಪನಿಗೆ ಯಾಕೆ ತೋರಿಸ್ಲಿಲ್ಲ?’ ಅಂತ ಕೇಳಿಬುಟ್ರು. ನನಿಗೆ ಶಾಕ್. ಇವರಿಗೆ ಹೆಂಗೆ ಗೊತ್ತಾಯ್ತು ಅಂತ. `ನಾಳೆ ನಿಮ್ಮಪ್ಪುನ್ನೇ ಕರ್ಕೊಂಡು ಬಾ’ ಅಂತ ಹೇಳಿದ್ರು. ನನ್ನ ಕೈಕಾಲೆಲ್ಲ ಗಡಗಡ ನಡುಗೋಕ್ಕೆ ಶುರುವಾದ್ವು. ಕೊನೆಗೆ ನನ್ನ ಫ್ರೆಂಡ್ಸ್ ಬಡ್ಡಿಮಕ್ಕಳು ಒಂದು ಐಡಿಯಾ ಕೊಟ್ರು. ನನ್ನ ಅಣ್ಣನ ಹೈಟು, ಪರ್ಸನಾಲ್ಟಿ ಇರೋ ಒಬ್ಬ ಬಾಡಿಗೆ ಅಣ್ಣನನ್ನು ರೆಡಿ ಮಾಡಿಕೊಂಡು ಮಾರನೇ ದಿನ ಪ್ರಿನ್ಸಿಯ ಬಳಿ ಕರೆದೊಯ್ದೆ. ಅವನು ನಿಜಕ್ಕೂ ನನ್ನ ಅಣ್ಣನೆಂದೇ ನಂಬಿದ ಅವರು ನನ್ನನ್ನು ಚೆನ್ನಾಗಿಯೇ ಬಯ್ದರು. ಸಿಕ್ಕಿದ್ದೇ ಚಾನ್ಸು ಅಂತ ನನ್ನ ಬಾಡಿಗೆ ಅಣ್ಣನೂ, `ನೋಡಿ ಸಾ, ಅಪ್ಪ ಇವುನನ್ನ ಡಾಕ್ಟ್ರು ಮಾಡ್ಬೇಕು ಅಂತ ಆಸೆ ಇಟ್ಟುಗೊಂಡವುರೆ. ಇವನು ಹಿಂಗೆ ಪೋಲಿ ಬಿದ್ದವುನೆ’ ಅಂತ ಬಯ್ದ. ಅವನ ರೇಗಾಟ ಕಂಡು ಪ್ರಾಂಶುಪಾಲರಿಗೇ ಅಯ್ಯೋ ಪಾಪಾ ಅನ್ನಿಸಿ, `ಪರವಾಗಿಲ್ಲ ಬಿಡಿ. ನಿಮ್ಮ ತಂದೆಯವರಿಗೆ ಇದನ್ನು ತಿಳಿಸಿ ಅವರನ್ನು ಕರೆದುಕೊಂಡು ಬರೋದೇನೂ ಬೇಡ. ಆದ್ರೆ ಇನ್ಮುಂದೆ ಇವನ ಮೇಲೆ ಗಮನ ಇರಿಸಿ’ ಅಂತ ಹೇಳಿದ್ರು. ನಾನು ತಲೆ ತಗ್ಗಿಸಿಕೊಂಡೇ ನಿಂತಿದ್ದೆ. ಯಾಕಂದ್ರೆ, ತಲೆ ಎತ್ತಿ ಪ್ರಿನ್ಸಿಯ ಮುಖವನ್ನೇನಾದರು ನೋಡಿದ್ದರೆ, ನನಗೆ ನಗು ತಡೆದುಕೊಳ್ಳಲಾಗುತ್ತಿರಲಿಲ್ಲ”

ಸೆಕೆಂಡ್ ಹ್ಯಾಂಡ್ ಕಾರು ಯಾಮಾರಿಸಿದ್ದು

“ನನಿಗೆ ಕಾರು ತಗೋಬೇಕು ಅನ್ನೋ ಹುಚ್ಚಿತ್ತು. ಅಪ್ಪನ್ನ ಕೇಳಿದೆ. ಅದುಕ್ಕವುರು `ಕಾರು ಕೊಡ್ಸಿದ್ರೆ, ಆಮೇಲೆ ಪೆಟ್ರೋಲಿಗೂ ನನ್ನಾತ್ರನೇ ಕಾಸು ಕೇಳ್ತೀಯಾ. ಸುಮ್ಕಿರು ಮಾರಾಯಾ’ ಅಂತ ರೇಗಿದ್ರು. ಆದ್ರೆ ನಾನು ಹಠ ಬಿಡ್ಲಿಲ್ಲ. ಕೊನೆಗೆ `ಸರಿ ಒಂದು ಸೆಕೆಂಡ್ ಹ್ಯಾಂಡ್ ಕೊಡುಸ್ತೀನಿ. ಎಲ್ಲಾದ್ರು ಇದ್ದ್ರೆ ನೋಡು’ ಅಂತಂದ್ರು. ಸಿಕ್ಕಿದ್ದೇ ಚಾನ್ಸು ಅಂತ, ಕಾರು ಹುಡಿಕ್ಕ್ಯಂಡು ಮದ್ರಾಸಿಗೆ ಹೋಗಿ ಐದು ಸಾವಿರ ಖರ್ಚು ಮಾಡಿಬಂದೆ. ಆ ಕಾಲಕ್ಕೆ ಬರೀ ಕಾರು ಹುಡುಕೋಕ್ಕೇ ಐದು ಸಾವುರ ಖರ್ಚು ಮಾಡಿವ್ನಿ ಅಂದ್ರೆ ಬಡ್ಡೇತದು ನನ್ನ ಶೋಕಿ ಅದಿನ್ನೆಂತದ್ದಿರಬೇಡ ನೋಡಿ. ಕೊನೆಗೆ ನಮ್ಮ ಪರಿಚಯಸ್ತ ಡಾಕ್ಟ್ರು ಒಬ್ಬ್ರು ತಮ್ಮ ಫಿಯೆಟ್ ಕಾರು ಮಾರ್ತಾರೆ ಅನ್ನೋ ವಿಚಾರ ಗೊತ್ತಾಯ್ತು. ಹೋಗಿ ಕೇಳಿದೆ. `ಇದು ನನ್ನ ಹೆಂಡ್ತಿ ಗಿಫ್ಟ್ ಕೊಟ್ಟಿದ್ದು, ಅಲ್ಲದೇ ನನ್ನ ಮಗನಿಗೂ ಈ ಕಾರು ಅಂದ್ರೆ ತುಂಬಾ ಇಷ್ಟ. ಹಾಗಾಗಿ ಮೈಸೂರಿನಲ್ಲಿ ಇರೋರಿಗೆ ಮಾರಲ್ಲ. ಬೇರೆ ಊರಿನವರಿಗೆ ಮಾತ್ರ ಮಾರೋದು’ ಅಂದುಬಿಟ್ಟ್ರು. ಒಂದ್ ಸ್ವಲ್ಪ ದಿನ ಸುಮ್ಕಿದ್ದೆ. ಮತ್ತೆ ಅವುರತ್ರ ಹೋಗಿ `ಬೆಂಗಳೂರಿನಲ್ಲಿರೋ ವೀರಾಸ್ವಾಮಿಯವುರಿಗೆ ಬೇಕಂತೆ ಕೊಡ್ತೀರಾ’ ಅಂತ ಕೇಳಿದೆ. ಒಪ್ಕೊಂಡು ಒಂದು ಲಕ್ಷಕ್ಕೆ ವ್ಯಾಪಾರನೂ ಮುಗೀತು. ನಾನೇ ಕಾರನ್ನ ತಕೊಂಡು ಬೆಂಗಳೂರಿನ ಕೆಸಿಎನ್ ಚಂದ್ರು ಮನೇಲ್ಲಿ ಸ್ವಲ್ಪ ದಿನ ಬಿಟ್ಟಿದ್ದೆ. ಒಂದು ತಿಂಗಳಾದ ಮೇಲೆ ವಾಪಾಸು ಮೈಸೂರಿಗೆ ತಗೊಂಡೋಗಿ `ಸಾರ್ ಅವುರಿಗ್ಯಾಕೋ ಕಾರಿನ ರೇಟು ಜಾಸ್ತಿ ಆಯ್ತಂತೆ. ಅದುಕ್ಕೆ ಬೇಡ ಅಂತಿದಾರೆ. ನೀವು ವಾಪಾಸ್ ತಗೊಂಡು ಅವುರ ದುಡ್ಡು ಕೊಡ್ಬೇಕಂತೆ’ ಅಂದೆ. ಆದ್ರೆ ಅವರು ವಾಪಾಸ್ ತಗೋಳಕ್ಕೆ ಒಪ್ಪಲಿಲ್ಲ. ಆಗ `ಸರಿ, ನಿಮಗೆ ದುಡ್ಡು ಕೊಡೋಕೆ ಆಗಲ್ಲ ಅನ್ನೋದಾದ್ರೆ, ಈ ಕಾರನ್ನ ನಾನೇ ಇಟ್ಕೊಂಡು, ಅವುರಿಗೆ ನಾನೇ ದುಡ್ಡು ಕೊಡ್ತೀನಿ ಬಿಡಿ’ ಅಂದೆ. ಒಪ್ಕೊಂಡ್ರು. ಹೀಗೆ ಅವುರಿಗೆ ಯಾಮಾರಿಸಿ ನನ್ನ ಆಸೆ ಪಟ್ಟಿದ್ದ ಕಾರು ಕೊಂಡ್ಕೊಂಡೆ ಕಣ್ರೀ”

ರಾಜಣ್ಣನ ನಮಸ್ಕಾರ, ಅಮ್ಮನ ಬೈಗುಳ

“1975ರಲ್ಲಿ `ದೇವರ ಕಣ್ಣು’ ಸಿನಿಮಾಗಾಗಿ ನನಿಗೆ ಅತ್ಯುತ್ತಮ ಖಳನಟನ ಪ್ರಶಸ್ತಿ ಬಂತು. ಅಮ್ಮನೂ ನೋಡಿ ಖುಷಿಪಡ್ಲಿ ಅಂತ ಟೌನ್‍ಹಾಲ್‍ನ ಕಾರ್ಯಕ್ರಮಕ್ಕೆ ಆಕೆಯನ್ನೂ ಕರೆದೊಯ್ದು ಮೊದಲ ಲೈನಿನಲ್ಲೇ ಕುಂತೆ. ಅಷ್ಟರಲ್ಲಾಗಲೇ ರಾಜ್‍ಕುಮಾರ್ ಮೊದಲಾದ ಅತಿಥಿಗಳೆಲ್ಲ ಸ್ಟೇಜ್ ಮ್ಯಾಲೆ ಕುಂತ್ಕಂಡಿದ್ದ್ರು. ನಮ್ಮಮ್ಮ ಭಾಳ ಮುಗ್ಧ ಹೆಂಗಸು. ರಾಜಣ್ಣನ್ನ ನೋಡಿದ್ದೇ ತಡ, ನನಗೆ ತಿವಿದು, `ಹೋಗು, ರಾಜ್‍ಕುಮಾರ್‍ರಿಗೆ ನಮುಸ್ಕಾರ ಮಾಡಿ ಬಾ’ ಅಂದ್ರು. ನಾನು ಸುಮ್ನಿರಮ್ಮ ಹಂಗೆಲ್ಲ ಸ್ಟೇಜ್ ಮೇಲೆ ಹೋಗಿ ಅವುರಿಗೆ ಕಿರಿಕಿರಿ ಮಾಡೋದು ಬೇಡ ಅಂತ ಹೇಳಿದ್ರೂ ಕೇಳದೆ ಹೋಗು, ಹೋಗು ಅಂತ ತಿವೀತಾನೆ ಇದ್ದರು. ಅಷ್ಟರಲ್ಲಿ ನನ್ನ ದುರಾದೃಷ್ಟಕ್ಕೆ ಯಾರಿಗೋ ಹಾರ ಹಾಕಿ ಸನ್ಮಾನ ಮಾಡೋಕೆ ಅಂತ ವೇದಿಕೆ ಮುಂದಕ್ಕೆ ಎದ್ದು ಬಂದ ರಾಜಣ್ಣ ನನ್ನನ್ನ ನೋಡಿ, `ಹಲೋ ಅಂಬರೀಷ್ ನಮಸ್ಕಾರ, ಹ್ಯೇಗಿದೀರಾ’ ಅಂತ ಕೇಳಿಬಿಟ್ಟ್ರು. ನಾನು ಚೆನ್ನಾಗಿದೀನಿ ಸರ್ ಅಂತ ಹೇಳಿ ಮುಜುಗರದ ಮುದ್ದೆಯಾದೆ. ತಗೋಳ್ಳಿ ನಮ್ಮಮ್ಮನ ಪಿತ್ತ ನೆತ್ತಿಗೇರಿತು. ಮನೆಗೆ ಹೊರಡಲು ಕಾರು ಹತ್ತಿದ್ದೇ ತಡ, `ಅಂಥಾ ದೊಡ್ಡೋರಿಗೆ ನೀನೇ ಹೋಗಿ ನಮಸ್ಕಾರ ಹೇಳಿಕ್ಕೆ ಆಗಲಿಲ್ಲವಾ, ಅವುರೇ ನಿನಿಗೆ ನಮುಸ್ಕಾರ ಹೇಳ್ಬೇಕಾ?’ ಅಂತ ಮನೆ ಮುಟ್ಟೋವರೆಗೂ ಬೈದು ಬಿಟ್ಟ್ರು”.

ಗುಂಡು, ತುಂಡು ಇಲ್ಲದ ಊಟಕ್ಕೆ ಚಕ್ಕರ್

“ಒಂದ್ಸಾರಿ ಎಂಪಿ ಪ್ರಕಾಶ್ ಮಗಳ ಮದುವೆಗೆ ಹೋಗಿದ್ದೆ. ಅರ್ಜೆಂಟ್ ಇದ್ದಿದ್ದ್ರಿಂದ ಊಟ ಮಾಡದೆ ಬಂದುಬಿಟ್ಟೆ. ಅದು ಹೆಂಗೋ ಆ ಮನುಷ್ಯನಿಗೆ ಗೊತ್ತಾಗಿಬಿಟ್ಟಿದೆ. ಎರಡು ದಿನ ಆದ್ಮೇಲೆ ಒಂದು ಫೋನ್ ಬಂತು, `ಹಲೋ ನಾನು ಎಂಪಿ ಪ್ರಕಾಶ್ ಮಾತಾಡ್ತಾ ಇರೋದು. ಮದುವೆಗೆ ಬಂದು ಊಟ ಮಾಡದೆ ಹೋಗಿಬಿಟ್ಟ್ರಲ್ಲಾ ನೀವು ಖಂಡಿತ ನಮ್ಮ ಮನಿಗೆ ಊಟಕ್ಕೆ ಬರ್ಬೇಕು’ ಅಂದ್ರು. ಖಂಡಿತ ಬರ್ತೀನಿ, ನಾನೇ ನಿಮಗೆ ಫೋನ್ ಮಾಡ್ತೀನಿ ಅಂತ ಹೇಳಿದೆ. ನನಿಗೆ ಅಷ್ಟಾಗಿ ಅವರ ಪರಿಚಯ ಇರ್ಲಿಲ್ಲ. ಒಬ್ಬರನ್ನು ಕರೆದು ಈ ಎಂಪಿ ಪ್ರಕಾಶ್ ಹೆಂಗೆ, ಅಭ್ಯಾಸ ಏನಾದ್ರು (ಗುಂಡು, ಮಟನ್) ಉಂಟಾ ಅಂತ ಕೇಳಿದೆ. ಅದಕ್ಕವುರು `ಇಲ್ಲಾ ಸಾರ್ ಭಾರೀ ಸಿಂಪಲ್. ಗುಂಡು ಹಾಕೋಲ್ಲ, ಮಟನ್ ಚಿಕನ್ ಅಂದ್ರೇನೂ ಗೊತ್ತಿಲ್ಲ. ಸಾತ್ವಿಕ ಮನುಷ್ಯ’ ಅಂದ್ರು. ಓಹ್ ನನಿಗ್ಯಾಕೋ ಸರಿ ಬರಲ್ಲ ಅನ್ನಿಸ್ತು. ಗುಂಡು, ತುಂಡು ಇಲ್ಲದಿದ್ದ್ರೆ ಅದೂ ಒಂದು ಊಟಾನಾ? ವಾಪಾಸ್ ಫೋನ್ ಮಾಡಿದೆ. ಸಾರ್ ನಾನು ತುಂಬಾ ಬ್ಯುಸಿ, ಶೂಟಿಂಗ್ ಮುಗಿಸ್ಕೊಂಡು ರಾತ್ರಿ ಎಷ್ಟೊತ್ತಿಗೋ ಬರ್ತೀನಿ. ಅಲ್ಲದೇ ಜೊತೆಗೆ ಯಾರ್ಯಾರೋ ಇರ್ತಾರೆ. ನನಿಗೋಸ್ಕರ ನೀವು ಕಾದು ನಿರಾಸೆ ಆಗೋದು ಬೇಡ ಅಂತ ರೀಲು ಬಿಟ್ಟೆ. ಆದ್ರೂ ಬಲವಂತ ಮಾಡಿದ್ರು. ಸರಿ ಸಾರ್. ಊಟಕ್ಕೆ ಬರೋಲ್ಲ, ಆದ್ರೆ ತಿಂಡಿಗೆ ಬರ್ತೀನಿ ಅಂತ ಒಪ್ಕೊಂಡೆ. ಮಾರನೇ ದಿನ ಮುಖ್ಯಮಂತ್ರಿ ಚಂದ್ರೂನ ಕರ್ಕೊಂಡು ತಿಂಡಿಗೆ ಹೋದೆ. ಆಮೇಲೆ ಅವರಿಂದ ನಾನು ತುಂಬಾ ಪಾಠ ಕಲಿತೆ. ಅವರಿಂದಾನೇ ನಾನೊಬ್ಬ ಮನುಷ್ಯ ಅಂತಾದೆ. ಬೆಂಗಳೂರಲ್ಲಿ ಮನೆ ಕಟ್ಟಿಸಿದ್ದು ಕೂಡಾ ಅವರ ಸಹಕಾರದಿಂದಲೇ”

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...