Homeಸಿನಿಮಾಸಿನಿ ಸುದ್ದಿಹಲೋ ಐ ಆಮ್ ಅಂಬಿ

ಹಲೋ ಐ ಆಮ್ ಅಂಬಿ

- Advertisement -
- Advertisement -

ಸಂಗ್ರಹ ನಿರೂಪಣೆ: ಗಿರೀಶ್ ತಾಳಿಕಟ್ಟೆ |

ಇತ್ತೀಚೆಗೆ ನಿಧನರಾದ ಅಂಬರೀಷ್‍ರು ತಮ್ಮ ಬದುಕಿನ ಕುರಿತು ತಾವೇ ಆಪ್ತರ ಬಳಿ ಹೇಳಿಕೊಂಡಿದ್ದ ಕೆಲ ಸ್ವಾರಸ್ಯ ಘಟನೆಗಳ ಮೆಲುಕು ಇಲ್ಲಿದೆ.

 

ಬಾಡಿಗೆ ಅಣ್ಣ, ಬಾಯ್ತುಂಬ ಬೈಗುಳ

“ನಾನು ಪಿಯುಸಿ ಓದಿದ್ದು ಮೈಸೂರಿನ ಶಾರದಾ ವಿಲಾಸ ಕಾಲೇಜಿನಲ್ಲಿ. ಕಾಲೇಜಿನ ಪ್ರಿನ್ಸಿಪಾಲ್ ನಾರಾಯಣ ರಾವ್ ಅಂತ. ಬಲು ಸ್ಟ್ರಿಕ್ಟ್ ಮನುಷ್ಯ. ಒಮ್ಮೆ ತಪ್ಪು ಮಾಡಿದ ಅಂತ ತಮ್ಮ ಮಗನನ್ನೇ ಕಾಲೇಜಿಂದ ಸಸ್ಪೆಂಡು ಮಾಡಿಬಿಟ್ಟಿದ್ದ್ರು. ಅಂತಾ ಆಸಾಮಿ. ಎಸ್ಸೆಲ್ಸಿವರೆಗೂ ನಂ.1 ಸ್ಟೂಡೆಂಟಾಗಿದ್ದ ನಾನು ಪಿಯುಸಿನಲ್ಲಿ ಫಸ್ಟ್ ಟೈಮು ಕೆಮಿಸ್ಟ್ರಿ ಸಬ್ಜೆಕ್ಟ್‍ನಲ್ಲಿ ಫೇಲಾಗ್ಬಿಟ್ಟೆ. ತಕೋಳ್ಳಿ, ಆ ಪ್ರಿನ್ಸಿಪಾಲು ಅಪ್ಪನಿಗೆ ಲೆಟರು ಬರೆದುಬಿಟ್ರು. ಅಪ್ಪನಿಗೆ ವಿಷಯ ಗೊತ್ತಾದ್ರೆ, ನನ್ನ ಕಥೆ ಅಷ್ಟೇ ಅಂತ, ದಿನಾ ಬೆಳಿಗ್ಗೆ ಮನೆ ಮುಂದೆ ಪೋಸ್ಟ್‍ಮ್ಯಾನಿಗೋಸ್ಕರ ಕಾಯ್ಕೊಂಡು ನಿಂತ್ಕಂತಿದ್ದೆ. ಒಂದು ದಿನ ಆ ಲೆಟ್ರು ಬಂತು. ಅದುನ್ನ ನಾನೇ ಈಸ್ಕೊಂಡು ಹರಿದು ಹಾಕ್ಬುಟ್ಟೆ. ಅಲ್ಲಿಗೆ ಪ್ರಾಬ್ಲಂ ಸಾಲ್ವ್ ಆಯ್ತು ಅಂದ್ಕಂಡೆ. ಆದ್ರೆ ಒಂದಿನ ಇದ್ದುಕ್ಕಿದ್ದಂಗೆ ಪ್ರಿನ್ಸಿಪಾಲು ನನ್ನನ್ನು ಕರೆಯೋಕ್ಕೆ ಕಳ್ಸಿದ್ರು. ಅವರ ಚೇಂಬರಿಗೆ ಹೋಗ್ತಿದ್ದಂಗೆ, `ಯಾಕೋ ಲೆಟರ್ ಹರಿದು ಹಾಕ್ದೆ? ನಿಮ್ಮಪ್ಪನಿಗೆ ಯಾಕೆ ತೋರಿಸ್ಲಿಲ್ಲ?’ ಅಂತ ಕೇಳಿಬುಟ್ರು. ನನಿಗೆ ಶಾಕ್. ಇವರಿಗೆ ಹೆಂಗೆ ಗೊತ್ತಾಯ್ತು ಅಂತ. `ನಾಳೆ ನಿಮ್ಮಪ್ಪುನ್ನೇ ಕರ್ಕೊಂಡು ಬಾ’ ಅಂತ ಹೇಳಿದ್ರು. ನನ್ನ ಕೈಕಾಲೆಲ್ಲ ಗಡಗಡ ನಡುಗೋಕ್ಕೆ ಶುರುವಾದ್ವು. ಕೊನೆಗೆ ನನ್ನ ಫ್ರೆಂಡ್ಸ್ ಬಡ್ಡಿಮಕ್ಕಳು ಒಂದು ಐಡಿಯಾ ಕೊಟ್ರು. ನನ್ನ ಅಣ್ಣನ ಹೈಟು, ಪರ್ಸನಾಲ್ಟಿ ಇರೋ ಒಬ್ಬ ಬಾಡಿಗೆ ಅಣ್ಣನನ್ನು ರೆಡಿ ಮಾಡಿಕೊಂಡು ಮಾರನೇ ದಿನ ಪ್ರಿನ್ಸಿಯ ಬಳಿ ಕರೆದೊಯ್ದೆ. ಅವನು ನಿಜಕ್ಕೂ ನನ್ನ ಅಣ್ಣನೆಂದೇ ನಂಬಿದ ಅವರು ನನ್ನನ್ನು ಚೆನ್ನಾಗಿಯೇ ಬಯ್ದರು. ಸಿಕ್ಕಿದ್ದೇ ಚಾನ್ಸು ಅಂತ ನನ್ನ ಬಾಡಿಗೆ ಅಣ್ಣನೂ, `ನೋಡಿ ಸಾ, ಅಪ್ಪ ಇವುನನ್ನ ಡಾಕ್ಟ್ರು ಮಾಡ್ಬೇಕು ಅಂತ ಆಸೆ ಇಟ್ಟುಗೊಂಡವುರೆ. ಇವನು ಹಿಂಗೆ ಪೋಲಿ ಬಿದ್ದವುನೆ’ ಅಂತ ಬಯ್ದ. ಅವನ ರೇಗಾಟ ಕಂಡು ಪ್ರಾಂಶುಪಾಲರಿಗೇ ಅಯ್ಯೋ ಪಾಪಾ ಅನ್ನಿಸಿ, `ಪರವಾಗಿಲ್ಲ ಬಿಡಿ. ನಿಮ್ಮ ತಂದೆಯವರಿಗೆ ಇದನ್ನು ತಿಳಿಸಿ ಅವರನ್ನು ಕರೆದುಕೊಂಡು ಬರೋದೇನೂ ಬೇಡ. ಆದ್ರೆ ಇನ್ಮುಂದೆ ಇವನ ಮೇಲೆ ಗಮನ ಇರಿಸಿ’ ಅಂತ ಹೇಳಿದ್ರು. ನಾನು ತಲೆ ತಗ್ಗಿಸಿಕೊಂಡೇ ನಿಂತಿದ್ದೆ. ಯಾಕಂದ್ರೆ, ತಲೆ ಎತ್ತಿ ಪ್ರಿನ್ಸಿಯ ಮುಖವನ್ನೇನಾದರು ನೋಡಿದ್ದರೆ, ನನಗೆ ನಗು ತಡೆದುಕೊಳ್ಳಲಾಗುತ್ತಿರಲಿಲ್ಲ”

ಸೆಕೆಂಡ್ ಹ್ಯಾಂಡ್ ಕಾರು ಯಾಮಾರಿಸಿದ್ದು

“ನನಿಗೆ ಕಾರು ತಗೋಬೇಕು ಅನ್ನೋ ಹುಚ್ಚಿತ್ತು. ಅಪ್ಪನ್ನ ಕೇಳಿದೆ. ಅದುಕ್ಕವುರು `ಕಾರು ಕೊಡ್ಸಿದ್ರೆ, ಆಮೇಲೆ ಪೆಟ್ರೋಲಿಗೂ ನನ್ನಾತ್ರನೇ ಕಾಸು ಕೇಳ್ತೀಯಾ. ಸುಮ್ಕಿರು ಮಾರಾಯಾ’ ಅಂತ ರೇಗಿದ್ರು. ಆದ್ರೆ ನಾನು ಹಠ ಬಿಡ್ಲಿಲ್ಲ. ಕೊನೆಗೆ `ಸರಿ ಒಂದು ಸೆಕೆಂಡ್ ಹ್ಯಾಂಡ್ ಕೊಡುಸ್ತೀನಿ. ಎಲ್ಲಾದ್ರು ಇದ್ದ್ರೆ ನೋಡು’ ಅಂತಂದ್ರು. ಸಿಕ್ಕಿದ್ದೇ ಚಾನ್ಸು ಅಂತ, ಕಾರು ಹುಡಿಕ್ಕ್ಯಂಡು ಮದ್ರಾಸಿಗೆ ಹೋಗಿ ಐದು ಸಾವಿರ ಖರ್ಚು ಮಾಡಿಬಂದೆ. ಆ ಕಾಲಕ್ಕೆ ಬರೀ ಕಾರು ಹುಡುಕೋಕ್ಕೇ ಐದು ಸಾವುರ ಖರ್ಚು ಮಾಡಿವ್ನಿ ಅಂದ್ರೆ ಬಡ್ಡೇತದು ನನ್ನ ಶೋಕಿ ಅದಿನ್ನೆಂತದ್ದಿರಬೇಡ ನೋಡಿ. ಕೊನೆಗೆ ನಮ್ಮ ಪರಿಚಯಸ್ತ ಡಾಕ್ಟ್ರು ಒಬ್ಬ್ರು ತಮ್ಮ ಫಿಯೆಟ್ ಕಾರು ಮಾರ್ತಾರೆ ಅನ್ನೋ ವಿಚಾರ ಗೊತ್ತಾಯ್ತು. ಹೋಗಿ ಕೇಳಿದೆ. `ಇದು ನನ್ನ ಹೆಂಡ್ತಿ ಗಿಫ್ಟ್ ಕೊಟ್ಟಿದ್ದು, ಅಲ್ಲದೇ ನನ್ನ ಮಗನಿಗೂ ಈ ಕಾರು ಅಂದ್ರೆ ತುಂಬಾ ಇಷ್ಟ. ಹಾಗಾಗಿ ಮೈಸೂರಿನಲ್ಲಿ ಇರೋರಿಗೆ ಮಾರಲ್ಲ. ಬೇರೆ ಊರಿನವರಿಗೆ ಮಾತ್ರ ಮಾರೋದು’ ಅಂದುಬಿಟ್ಟ್ರು. ಒಂದ್ ಸ್ವಲ್ಪ ದಿನ ಸುಮ್ಕಿದ್ದೆ. ಮತ್ತೆ ಅವುರತ್ರ ಹೋಗಿ `ಬೆಂಗಳೂರಿನಲ್ಲಿರೋ ವೀರಾಸ್ವಾಮಿಯವುರಿಗೆ ಬೇಕಂತೆ ಕೊಡ್ತೀರಾ’ ಅಂತ ಕೇಳಿದೆ. ಒಪ್ಕೊಂಡು ಒಂದು ಲಕ್ಷಕ್ಕೆ ವ್ಯಾಪಾರನೂ ಮುಗೀತು. ನಾನೇ ಕಾರನ್ನ ತಕೊಂಡು ಬೆಂಗಳೂರಿನ ಕೆಸಿಎನ್ ಚಂದ್ರು ಮನೇಲ್ಲಿ ಸ್ವಲ್ಪ ದಿನ ಬಿಟ್ಟಿದ್ದೆ. ಒಂದು ತಿಂಗಳಾದ ಮೇಲೆ ವಾಪಾಸು ಮೈಸೂರಿಗೆ ತಗೊಂಡೋಗಿ `ಸಾರ್ ಅವುರಿಗ್ಯಾಕೋ ಕಾರಿನ ರೇಟು ಜಾಸ್ತಿ ಆಯ್ತಂತೆ. ಅದುಕ್ಕೆ ಬೇಡ ಅಂತಿದಾರೆ. ನೀವು ವಾಪಾಸ್ ತಗೊಂಡು ಅವುರ ದುಡ್ಡು ಕೊಡ್ಬೇಕಂತೆ’ ಅಂದೆ. ಆದ್ರೆ ಅವರು ವಾಪಾಸ್ ತಗೋಳಕ್ಕೆ ಒಪ್ಪಲಿಲ್ಲ. ಆಗ `ಸರಿ, ನಿಮಗೆ ದುಡ್ಡು ಕೊಡೋಕೆ ಆಗಲ್ಲ ಅನ್ನೋದಾದ್ರೆ, ಈ ಕಾರನ್ನ ನಾನೇ ಇಟ್ಕೊಂಡು, ಅವುರಿಗೆ ನಾನೇ ದುಡ್ಡು ಕೊಡ್ತೀನಿ ಬಿಡಿ’ ಅಂದೆ. ಒಪ್ಕೊಂಡ್ರು. ಹೀಗೆ ಅವುರಿಗೆ ಯಾಮಾರಿಸಿ ನನ್ನ ಆಸೆ ಪಟ್ಟಿದ್ದ ಕಾರು ಕೊಂಡ್ಕೊಂಡೆ ಕಣ್ರೀ”

ರಾಜಣ್ಣನ ನಮಸ್ಕಾರ, ಅಮ್ಮನ ಬೈಗುಳ

“1975ರಲ್ಲಿ `ದೇವರ ಕಣ್ಣು’ ಸಿನಿಮಾಗಾಗಿ ನನಿಗೆ ಅತ್ಯುತ್ತಮ ಖಳನಟನ ಪ್ರಶಸ್ತಿ ಬಂತು. ಅಮ್ಮನೂ ನೋಡಿ ಖುಷಿಪಡ್ಲಿ ಅಂತ ಟೌನ್‍ಹಾಲ್‍ನ ಕಾರ್ಯಕ್ರಮಕ್ಕೆ ಆಕೆಯನ್ನೂ ಕರೆದೊಯ್ದು ಮೊದಲ ಲೈನಿನಲ್ಲೇ ಕುಂತೆ. ಅಷ್ಟರಲ್ಲಾಗಲೇ ರಾಜ್‍ಕುಮಾರ್ ಮೊದಲಾದ ಅತಿಥಿಗಳೆಲ್ಲ ಸ್ಟೇಜ್ ಮ್ಯಾಲೆ ಕುಂತ್ಕಂಡಿದ್ದ್ರು. ನಮ್ಮಮ್ಮ ಭಾಳ ಮುಗ್ಧ ಹೆಂಗಸು. ರಾಜಣ್ಣನ್ನ ನೋಡಿದ್ದೇ ತಡ, ನನಗೆ ತಿವಿದು, `ಹೋಗು, ರಾಜ್‍ಕುಮಾರ್‍ರಿಗೆ ನಮುಸ್ಕಾರ ಮಾಡಿ ಬಾ’ ಅಂದ್ರು. ನಾನು ಸುಮ್ನಿರಮ್ಮ ಹಂಗೆಲ್ಲ ಸ್ಟೇಜ್ ಮೇಲೆ ಹೋಗಿ ಅವುರಿಗೆ ಕಿರಿಕಿರಿ ಮಾಡೋದು ಬೇಡ ಅಂತ ಹೇಳಿದ್ರೂ ಕೇಳದೆ ಹೋಗು, ಹೋಗು ಅಂತ ತಿವೀತಾನೆ ಇದ್ದರು. ಅಷ್ಟರಲ್ಲಿ ನನ್ನ ದುರಾದೃಷ್ಟಕ್ಕೆ ಯಾರಿಗೋ ಹಾರ ಹಾಕಿ ಸನ್ಮಾನ ಮಾಡೋಕೆ ಅಂತ ವೇದಿಕೆ ಮುಂದಕ್ಕೆ ಎದ್ದು ಬಂದ ರಾಜಣ್ಣ ನನ್ನನ್ನ ನೋಡಿ, `ಹಲೋ ಅಂಬರೀಷ್ ನಮಸ್ಕಾರ, ಹ್ಯೇಗಿದೀರಾ’ ಅಂತ ಕೇಳಿಬಿಟ್ಟ್ರು. ನಾನು ಚೆನ್ನಾಗಿದೀನಿ ಸರ್ ಅಂತ ಹೇಳಿ ಮುಜುಗರದ ಮುದ್ದೆಯಾದೆ. ತಗೋಳ್ಳಿ ನಮ್ಮಮ್ಮನ ಪಿತ್ತ ನೆತ್ತಿಗೇರಿತು. ಮನೆಗೆ ಹೊರಡಲು ಕಾರು ಹತ್ತಿದ್ದೇ ತಡ, `ಅಂಥಾ ದೊಡ್ಡೋರಿಗೆ ನೀನೇ ಹೋಗಿ ನಮಸ್ಕಾರ ಹೇಳಿಕ್ಕೆ ಆಗಲಿಲ್ಲವಾ, ಅವುರೇ ನಿನಿಗೆ ನಮುಸ್ಕಾರ ಹೇಳ್ಬೇಕಾ?’ ಅಂತ ಮನೆ ಮುಟ್ಟೋವರೆಗೂ ಬೈದು ಬಿಟ್ಟ್ರು”.

ಗುಂಡು, ತುಂಡು ಇಲ್ಲದ ಊಟಕ್ಕೆ ಚಕ್ಕರ್

“ಒಂದ್ಸಾರಿ ಎಂಪಿ ಪ್ರಕಾಶ್ ಮಗಳ ಮದುವೆಗೆ ಹೋಗಿದ್ದೆ. ಅರ್ಜೆಂಟ್ ಇದ್ದಿದ್ದ್ರಿಂದ ಊಟ ಮಾಡದೆ ಬಂದುಬಿಟ್ಟೆ. ಅದು ಹೆಂಗೋ ಆ ಮನುಷ್ಯನಿಗೆ ಗೊತ್ತಾಗಿಬಿಟ್ಟಿದೆ. ಎರಡು ದಿನ ಆದ್ಮೇಲೆ ಒಂದು ಫೋನ್ ಬಂತು, `ಹಲೋ ನಾನು ಎಂಪಿ ಪ್ರಕಾಶ್ ಮಾತಾಡ್ತಾ ಇರೋದು. ಮದುವೆಗೆ ಬಂದು ಊಟ ಮಾಡದೆ ಹೋಗಿಬಿಟ್ಟ್ರಲ್ಲಾ ನೀವು ಖಂಡಿತ ನಮ್ಮ ಮನಿಗೆ ಊಟಕ್ಕೆ ಬರ್ಬೇಕು’ ಅಂದ್ರು. ಖಂಡಿತ ಬರ್ತೀನಿ, ನಾನೇ ನಿಮಗೆ ಫೋನ್ ಮಾಡ್ತೀನಿ ಅಂತ ಹೇಳಿದೆ. ನನಿಗೆ ಅಷ್ಟಾಗಿ ಅವರ ಪರಿಚಯ ಇರ್ಲಿಲ್ಲ. ಒಬ್ಬರನ್ನು ಕರೆದು ಈ ಎಂಪಿ ಪ್ರಕಾಶ್ ಹೆಂಗೆ, ಅಭ್ಯಾಸ ಏನಾದ್ರು (ಗುಂಡು, ಮಟನ್) ಉಂಟಾ ಅಂತ ಕೇಳಿದೆ. ಅದಕ್ಕವುರು `ಇಲ್ಲಾ ಸಾರ್ ಭಾರೀ ಸಿಂಪಲ್. ಗುಂಡು ಹಾಕೋಲ್ಲ, ಮಟನ್ ಚಿಕನ್ ಅಂದ್ರೇನೂ ಗೊತ್ತಿಲ್ಲ. ಸಾತ್ವಿಕ ಮನುಷ್ಯ’ ಅಂದ್ರು. ಓಹ್ ನನಿಗ್ಯಾಕೋ ಸರಿ ಬರಲ್ಲ ಅನ್ನಿಸ್ತು. ಗುಂಡು, ತುಂಡು ಇಲ್ಲದಿದ್ದ್ರೆ ಅದೂ ಒಂದು ಊಟಾನಾ? ವಾಪಾಸ್ ಫೋನ್ ಮಾಡಿದೆ. ಸಾರ್ ನಾನು ತುಂಬಾ ಬ್ಯುಸಿ, ಶೂಟಿಂಗ್ ಮುಗಿಸ್ಕೊಂಡು ರಾತ್ರಿ ಎಷ್ಟೊತ್ತಿಗೋ ಬರ್ತೀನಿ. ಅಲ್ಲದೇ ಜೊತೆಗೆ ಯಾರ್ಯಾರೋ ಇರ್ತಾರೆ. ನನಿಗೋಸ್ಕರ ನೀವು ಕಾದು ನಿರಾಸೆ ಆಗೋದು ಬೇಡ ಅಂತ ರೀಲು ಬಿಟ್ಟೆ. ಆದ್ರೂ ಬಲವಂತ ಮಾಡಿದ್ರು. ಸರಿ ಸಾರ್. ಊಟಕ್ಕೆ ಬರೋಲ್ಲ, ಆದ್ರೆ ತಿಂಡಿಗೆ ಬರ್ತೀನಿ ಅಂತ ಒಪ್ಕೊಂಡೆ. ಮಾರನೇ ದಿನ ಮುಖ್ಯಮಂತ್ರಿ ಚಂದ್ರೂನ ಕರ್ಕೊಂಡು ತಿಂಡಿಗೆ ಹೋದೆ. ಆಮೇಲೆ ಅವರಿಂದ ನಾನು ತುಂಬಾ ಪಾಠ ಕಲಿತೆ. ಅವರಿಂದಾನೇ ನಾನೊಬ್ಬ ಮನುಷ್ಯ ಅಂತಾದೆ. ಬೆಂಗಳೂರಲ್ಲಿ ಮನೆ ಕಟ್ಟಿಸಿದ್ದು ಕೂಡಾ ಅವರ ಸಹಕಾರದಿಂದಲೇ”

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...