Homeಸಿನಿಮಾಸಿನಿ ಸುದ್ದಿಹಲೋ ಐ ಆಮ್ ಅಂಬಿ

ಹಲೋ ಐ ಆಮ್ ಅಂಬಿ

- Advertisement -
- Advertisement -

ಸಂಗ್ರಹ ನಿರೂಪಣೆ: ಗಿರೀಶ್ ತಾಳಿಕಟ್ಟೆ |

ಇತ್ತೀಚೆಗೆ ನಿಧನರಾದ ಅಂಬರೀಷ್‍ರು ತಮ್ಮ ಬದುಕಿನ ಕುರಿತು ತಾವೇ ಆಪ್ತರ ಬಳಿ ಹೇಳಿಕೊಂಡಿದ್ದ ಕೆಲ ಸ್ವಾರಸ್ಯ ಘಟನೆಗಳ ಮೆಲುಕು ಇಲ್ಲಿದೆ.

 

ಬಾಡಿಗೆ ಅಣ್ಣ, ಬಾಯ್ತುಂಬ ಬೈಗುಳ

“ನಾನು ಪಿಯುಸಿ ಓದಿದ್ದು ಮೈಸೂರಿನ ಶಾರದಾ ವಿಲಾಸ ಕಾಲೇಜಿನಲ್ಲಿ. ಕಾಲೇಜಿನ ಪ್ರಿನ್ಸಿಪಾಲ್ ನಾರಾಯಣ ರಾವ್ ಅಂತ. ಬಲು ಸ್ಟ್ರಿಕ್ಟ್ ಮನುಷ್ಯ. ಒಮ್ಮೆ ತಪ್ಪು ಮಾಡಿದ ಅಂತ ತಮ್ಮ ಮಗನನ್ನೇ ಕಾಲೇಜಿಂದ ಸಸ್ಪೆಂಡು ಮಾಡಿಬಿಟ್ಟಿದ್ದ್ರು. ಅಂತಾ ಆಸಾಮಿ. ಎಸ್ಸೆಲ್ಸಿವರೆಗೂ ನಂ.1 ಸ್ಟೂಡೆಂಟಾಗಿದ್ದ ನಾನು ಪಿಯುಸಿನಲ್ಲಿ ಫಸ್ಟ್ ಟೈಮು ಕೆಮಿಸ್ಟ್ರಿ ಸಬ್ಜೆಕ್ಟ್‍ನಲ್ಲಿ ಫೇಲಾಗ್ಬಿಟ್ಟೆ. ತಕೋಳ್ಳಿ, ಆ ಪ್ರಿನ್ಸಿಪಾಲು ಅಪ್ಪನಿಗೆ ಲೆಟರು ಬರೆದುಬಿಟ್ರು. ಅಪ್ಪನಿಗೆ ವಿಷಯ ಗೊತ್ತಾದ್ರೆ, ನನ್ನ ಕಥೆ ಅಷ್ಟೇ ಅಂತ, ದಿನಾ ಬೆಳಿಗ್ಗೆ ಮನೆ ಮುಂದೆ ಪೋಸ್ಟ್‍ಮ್ಯಾನಿಗೋಸ್ಕರ ಕಾಯ್ಕೊಂಡು ನಿಂತ್ಕಂತಿದ್ದೆ. ಒಂದು ದಿನ ಆ ಲೆಟ್ರು ಬಂತು. ಅದುನ್ನ ನಾನೇ ಈಸ್ಕೊಂಡು ಹರಿದು ಹಾಕ್ಬುಟ್ಟೆ. ಅಲ್ಲಿಗೆ ಪ್ರಾಬ್ಲಂ ಸಾಲ್ವ್ ಆಯ್ತು ಅಂದ್ಕಂಡೆ. ಆದ್ರೆ ಒಂದಿನ ಇದ್ದುಕ್ಕಿದ್ದಂಗೆ ಪ್ರಿನ್ಸಿಪಾಲು ನನ್ನನ್ನು ಕರೆಯೋಕ್ಕೆ ಕಳ್ಸಿದ್ರು. ಅವರ ಚೇಂಬರಿಗೆ ಹೋಗ್ತಿದ್ದಂಗೆ, `ಯಾಕೋ ಲೆಟರ್ ಹರಿದು ಹಾಕ್ದೆ? ನಿಮ್ಮಪ್ಪನಿಗೆ ಯಾಕೆ ತೋರಿಸ್ಲಿಲ್ಲ?’ ಅಂತ ಕೇಳಿಬುಟ್ರು. ನನಿಗೆ ಶಾಕ್. ಇವರಿಗೆ ಹೆಂಗೆ ಗೊತ್ತಾಯ್ತು ಅಂತ. `ನಾಳೆ ನಿಮ್ಮಪ್ಪುನ್ನೇ ಕರ್ಕೊಂಡು ಬಾ’ ಅಂತ ಹೇಳಿದ್ರು. ನನ್ನ ಕೈಕಾಲೆಲ್ಲ ಗಡಗಡ ನಡುಗೋಕ್ಕೆ ಶುರುವಾದ್ವು. ಕೊನೆಗೆ ನನ್ನ ಫ್ರೆಂಡ್ಸ್ ಬಡ್ಡಿಮಕ್ಕಳು ಒಂದು ಐಡಿಯಾ ಕೊಟ್ರು. ನನ್ನ ಅಣ್ಣನ ಹೈಟು, ಪರ್ಸನಾಲ್ಟಿ ಇರೋ ಒಬ್ಬ ಬಾಡಿಗೆ ಅಣ್ಣನನ್ನು ರೆಡಿ ಮಾಡಿಕೊಂಡು ಮಾರನೇ ದಿನ ಪ್ರಿನ್ಸಿಯ ಬಳಿ ಕರೆದೊಯ್ದೆ. ಅವನು ನಿಜಕ್ಕೂ ನನ್ನ ಅಣ್ಣನೆಂದೇ ನಂಬಿದ ಅವರು ನನ್ನನ್ನು ಚೆನ್ನಾಗಿಯೇ ಬಯ್ದರು. ಸಿಕ್ಕಿದ್ದೇ ಚಾನ್ಸು ಅಂತ ನನ್ನ ಬಾಡಿಗೆ ಅಣ್ಣನೂ, `ನೋಡಿ ಸಾ, ಅಪ್ಪ ಇವುನನ್ನ ಡಾಕ್ಟ್ರು ಮಾಡ್ಬೇಕು ಅಂತ ಆಸೆ ಇಟ್ಟುಗೊಂಡವುರೆ. ಇವನು ಹಿಂಗೆ ಪೋಲಿ ಬಿದ್ದವುನೆ’ ಅಂತ ಬಯ್ದ. ಅವನ ರೇಗಾಟ ಕಂಡು ಪ್ರಾಂಶುಪಾಲರಿಗೇ ಅಯ್ಯೋ ಪಾಪಾ ಅನ್ನಿಸಿ, `ಪರವಾಗಿಲ್ಲ ಬಿಡಿ. ನಿಮ್ಮ ತಂದೆಯವರಿಗೆ ಇದನ್ನು ತಿಳಿಸಿ ಅವರನ್ನು ಕರೆದುಕೊಂಡು ಬರೋದೇನೂ ಬೇಡ. ಆದ್ರೆ ಇನ್ಮುಂದೆ ಇವನ ಮೇಲೆ ಗಮನ ಇರಿಸಿ’ ಅಂತ ಹೇಳಿದ್ರು. ನಾನು ತಲೆ ತಗ್ಗಿಸಿಕೊಂಡೇ ನಿಂತಿದ್ದೆ. ಯಾಕಂದ್ರೆ, ತಲೆ ಎತ್ತಿ ಪ್ರಿನ್ಸಿಯ ಮುಖವನ್ನೇನಾದರು ನೋಡಿದ್ದರೆ, ನನಗೆ ನಗು ತಡೆದುಕೊಳ್ಳಲಾಗುತ್ತಿರಲಿಲ್ಲ”

ಸೆಕೆಂಡ್ ಹ್ಯಾಂಡ್ ಕಾರು ಯಾಮಾರಿಸಿದ್ದು

“ನನಿಗೆ ಕಾರು ತಗೋಬೇಕು ಅನ್ನೋ ಹುಚ್ಚಿತ್ತು. ಅಪ್ಪನ್ನ ಕೇಳಿದೆ. ಅದುಕ್ಕವುರು `ಕಾರು ಕೊಡ್ಸಿದ್ರೆ, ಆಮೇಲೆ ಪೆಟ್ರೋಲಿಗೂ ನನ್ನಾತ್ರನೇ ಕಾಸು ಕೇಳ್ತೀಯಾ. ಸುಮ್ಕಿರು ಮಾರಾಯಾ’ ಅಂತ ರೇಗಿದ್ರು. ಆದ್ರೆ ನಾನು ಹಠ ಬಿಡ್ಲಿಲ್ಲ. ಕೊನೆಗೆ `ಸರಿ ಒಂದು ಸೆಕೆಂಡ್ ಹ್ಯಾಂಡ್ ಕೊಡುಸ್ತೀನಿ. ಎಲ್ಲಾದ್ರು ಇದ್ದ್ರೆ ನೋಡು’ ಅಂತಂದ್ರು. ಸಿಕ್ಕಿದ್ದೇ ಚಾನ್ಸು ಅಂತ, ಕಾರು ಹುಡಿಕ್ಕ್ಯಂಡು ಮದ್ರಾಸಿಗೆ ಹೋಗಿ ಐದು ಸಾವಿರ ಖರ್ಚು ಮಾಡಿಬಂದೆ. ಆ ಕಾಲಕ್ಕೆ ಬರೀ ಕಾರು ಹುಡುಕೋಕ್ಕೇ ಐದು ಸಾವುರ ಖರ್ಚು ಮಾಡಿವ್ನಿ ಅಂದ್ರೆ ಬಡ್ಡೇತದು ನನ್ನ ಶೋಕಿ ಅದಿನ್ನೆಂತದ್ದಿರಬೇಡ ನೋಡಿ. ಕೊನೆಗೆ ನಮ್ಮ ಪರಿಚಯಸ್ತ ಡಾಕ್ಟ್ರು ಒಬ್ಬ್ರು ತಮ್ಮ ಫಿಯೆಟ್ ಕಾರು ಮಾರ್ತಾರೆ ಅನ್ನೋ ವಿಚಾರ ಗೊತ್ತಾಯ್ತು. ಹೋಗಿ ಕೇಳಿದೆ. `ಇದು ನನ್ನ ಹೆಂಡ್ತಿ ಗಿಫ್ಟ್ ಕೊಟ್ಟಿದ್ದು, ಅಲ್ಲದೇ ನನ್ನ ಮಗನಿಗೂ ಈ ಕಾರು ಅಂದ್ರೆ ತುಂಬಾ ಇಷ್ಟ. ಹಾಗಾಗಿ ಮೈಸೂರಿನಲ್ಲಿ ಇರೋರಿಗೆ ಮಾರಲ್ಲ. ಬೇರೆ ಊರಿನವರಿಗೆ ಮಾತ್ರ ಮಾರೋದು’ ಅಂದುಬಿಟ್ಟ್ರು. ಒಂದ್ ಸ್ವಲ್ಪ ದಿನ ಸುಮ್ಕಿದ್ದೆ. ಮತ್ತೆ ಅವುರತ್ರ ಹೋಗಿ `ಬೆಂಗಳೂರಿನಲ್ಲಿರೋ ವೀರಾಸ್ವಾಮಿಯವುರಿಗೆ ಬೇಕಂತೆ ಕೊಡ್ತೀರಾ’ ಅಂತ ಕೇಳಿದೆ. ಒಪ್ಕೊಂಡು ಒಂದು ಲಕ್ಷಕ್ಕೆ ವ್ಯಾಪಾರನೂ ಮುಗೀತು. ನಾನೇ ಕಾರನ್ನ ತಕೊಂಡು ಬೆಂಗಳೂರಿನ ಕೆಸಿಎನ್ ಚಂದ್ರು ಮನೇಲ್ಲಿ ಸ್ವಲ್ಪ ದಿನ ಬಿಟ್ಟಿದ್ದೆ. ಒಂದು ತಿಂಗಳಾದ ಮೇಲೆ ವಾಪಾಸು ಮೈಸೂರಿಗೆ ತಗೊಂಡೋಗಿ `ಸಾರ್ ಅವುರಿಗ್ಯಾಕೋ ಕಾರಿನ ರೇಟು ಜಾಸ್ತಿ ಆಯ್ತಂತೆ. ಅದುಕ್ಕೆ ಬೇಡ ಅಂತಿದಾರೆ. ನೀವು ವಾಪಾಸ್ ತಗೊಂಡು ಅವುರ ದುಡ್ಡು ಕೊಡ್ಬೇಕಂತೆ’ ಅಂದೆ. ಆದ್ರೆ ಅವರು ವಾಪಾಸ್ ತಗೋಳಕ್ಕೆ ಒಪ್ಪಲಿಲ್ಲ. ಆಗ `ಸರಿ, ನಿಮಗೆ ದುಡ್ಡು ಕೊಡೋಕೆ ಆಗಲ್ಲ ಅನ್ನೋದಾದ್ರೆ, ಈ ಕಾರನ್ನ ನಾನೇ ಇಟ್ಕೊಂಡು, ಅವುರಿಗೆ ನಾನೇ ದುಡ್ಡು ಕೊಡ್ತೀನಿ ಬಿಡಿ’ ಅಂದೆ. ಒಪ್ಕೊಂಡ್ರು. ಹೀಗೆ ಅವುರಿಗೆ ಯಾಮಾರಿಸಿ ನನ್ನ ಆಸೆ ಪಟ್ಟಿದ್ದ ಕಾರು ಕೊಂಡ್ಕೊಂಡೆ ಕಣ್ರೀ”

ರಾಜಣ್ಣನ ನಮಸ್ಕಾರ, ಅಮ್ಮನ ಬೈಗುಳ

“1975ರಲ್ಲಿ `ದೇವರ ಕಣ್ಣು’ ಸಿನಿಮಾಗಾಗಿ ನನಿಗೆ ಅತ್ಯುತ್ತಮ ಖಳನಟನ ಪ್ರಶಸ್ತಿ ಬಂತು. ಅಮ್ಮನೂ ನೋಡಿ ಖುಷಿಪಡ್ಲಿ ಅಂತ ಟೌನ್‍ಹಾಲ್‍ನ ಕಾರ್ಯಕ್ರಮಕ್ಕೆ ಆಕೆಯನ್ನೂ ಕರೆದೊಯ್ದು ಮೊದಲ ಲೈನಿನಲ್ಲೇ ಕುಂತೆ. ಅಷ್ಟರಲ್ಲಾಗಲೇ ರಾಜ್‍ಕುಮಾರ್ ಮೊದಲಾದ ಅತಿಥಿಗಳೆಲ್ಲ ಸ್ಟೇಜ್ ಮ್ಯಾಲೆ ಕುಂತ್ಕಂಡಿದ್ದ್ರು. ನಮ್ಮಮ್ಮ ಭಾಳ ಮುಗ್ಧ ಹೆಂಗಸು. ರಾಜಣ್ಣನ್ನ ನೋಡಿದ್ದೇ ತಡ, ನನಗೆ ತಿವಿದು, `ಹೋಗು, ರಾಜ್‍ಕುಮಾರ್‍ರಿಗೆ ನಮುಸ್ಕಾರ ಮಾಡಿ ಬಾ’ ಅಂದ್ರು. ನಾನು ಸುಮ್ನಿರಮ್ಮ ಹಂಗೆಲ್ಲ ಸ್ಟೇಜ್ ಮೇಲೆ ಹೋಗಿ ಅವುರಿಗೆ ಕಿರಿಕಿರಿ ಮಾಡೋದು ಬೇಡ ಅಂತ ಹೇಳಿದ್ರೂ ಕೇಳದೆ ಹೋಗು, ಹೋಗು ಅಂತ ತಿವೀತಾನೆ ಇದ್ದರು. ಅಷ್ಟರಲ್ಲಿ ನನ್ನ ದುರಾದೃಷ್ಟಕ್ಕೆ ಯಾರಿಗೋ ಹಾರ ಹಾಕಿ ಸನ್ಮಾನ ಮಾಡೋಕೆ ಅಂತ ವೇದಿಕೆ ಮುಂದಕ್ಕೆ ಎದ್ದು ಬಂದ ರಾಜಣ್ಣ ನನ್ನನ್ನ ನೋಡಿ, `ಹಲೋ ಅಂಬರೀಷ್ ನಮಸ್ಕಾರ, ಹ್ಯೇಗಿದೀರಾ’ ಅಂತ ಕೇಳಿಬಿಟ್ಟ್ರು. ನಾನು ಚೆನ್ನಾಗಿದೀನಿ ಸರ್ ಅಂತ ಹೇಳಿ ಮುಜುಗರದ ಮುದ್ದೆಯಾದೆ. ತಗೋಳ್ಳಿ ನಮ್ಮಮ್ಮನ ಪಿತ್ತ ನೆತ್ತಿಗೇರಿತು. ಮನೆಗೆ ಹೊರಡಲು ಕಾರು ಹತ್ತಿದ್ದೇ ತಡ, `ಅಂಥಾ ದೊಡ್ಡೋರಿಗೆ ನೀನೇ ಹೋಗಿ ನಮಸ್ಕಾರ ಹೇಳಿಕ್ಕೆ ಆಗಲಿಲ್ಲವಾ, ಅವುರೇ ನಿನಿಗೆ ನಮುಸ್ಕಾರ ಹೇಳ್ಬೇಕಾ?’ ಅಂತ ಮನೆ ಮುಟ್ಟೋವರೆಗೂ ಬೈದು ಬಿಟ್ಟ್ರು”.

ಗುಂಡು, ತುಂಡು ಇಲ್ಲದ ಊಟಕ್ಕೆ ಚಕ್ಕರ್

“ಒಂದ್ಸಾರಿ ಎಂಪಿ ಪ್ರಕಾಶ್ ಮಗಳ ಮದುವೆಗೆ ಹೋಗಿದ್ದೆ. ಅರ್ಜೆಂಟ್ ಇದ್ದಿದ್ದ್ರಿಂದ ಊಟ ಮಾಡದೆ ಬಂದುಬಿಟ್ಟೆ. ಅದು ಹೆಂಗೋ ಆ ಮನುಷ್ಯನಿಗೆ ಗೊತ್ತಾಗಿಬಿಟ್ಟಿದೆ. ಎರಡು ದಿನ ಆದ್ಮೇಲೆ ಒಂದು ಫೋನ್ ಬಂತು, `ಹಲೋ ನಾನು ಎಂಪಿ ಪ್ರಕಾಶ್ ಮಾತಾಡ್ತಾ ಇರೋದು. ಮದುವೆಗೆ ಬಂದು ಊಟ ಮಾಡದೆ ಹೋಗಿಬಿಟ್ಟ್ರಲ್ಲಾ ನೀವು ಖಂಡಿತ ನಮ್ಮ ಮನಿಗೆ ಊಟಕ್ಕೆ ಬರ್ಬೇಕು’ ಅಂದ್ರು. ಖಂಡಿತ ಬರ್ತೀನಿ, ನಾನೇ ನಿಮಗೆ ಫೋನ್ ಮಾಡ್ತೀನಿ ಅಂತ ಹೇಳಿದೆ. ನನಿಗೆ ಅಷ್ಟಾಗಿ ಅವರ ಪರಿಚಯ ಇರ್ಲಿಲ್ಲ. ಒಬ್ಬರನ್ನು ಕರೆದು ಈ ಎಂಪಿ ಪ್ರಕಾಶ್ ಹೆಂಗೆ, ಅಭ್ಯಾಸ ಏನಾದ್ರು (ಗುಂಡು, ಮಟನ್) ಉಂಟಾ ಅಂತ ಕೇಳಿದೆ. ಅದಕ್ಕವುರು `ಇಲ್ಲಾ ಸಾರ್ ಭಾರೀ ಸಿಂಪಲ್. ಗುಂಡು ಹಾಕೋಲ್ಲ, ಮಟನ್ ಚಿಕನ್ ಅಂದ್ರೇನೂ ಗೊತ್ತಿಲ್ಲ. ಸಾತ್ವಿಕ ಮನುಷ್ಯ’ ಅಂದ್ರು. ಓಹ್ ನನಿಗ್ಯಾಕೋ ಸರಿ ಬರಲ್ಲ ಅನ್ನಿಸ್ತು. ಗುಂಡು, ತುಂಡು ಇಲ್ಲದಿದ್ದ್ರೆ ಅದೂ ಒಂದು ಊಟಾನಾ? ವಾಪಾಸ್ ಫೋನ್ ಮಾಡಿದೆ. ಸಾರ್ ನಾನು ತುಂಬಾ ಬ್ಯುಸಿ, ಶೂಟಿಂಗ್ ಮುಗಿಸ್ಕೊಂಡು ರಾತ್ರಿ ಎಷ್ಟೊತ್ತಿಗೋ ಬರ್ತೀನಿ. ಅಲ್ಲದೇ ಜೊತೆಗೆ ಯಾರ್ಯಾರೋ ಇರ್ತಾರೆ. ನನಿಗೋಸ್ಕರ ನೀವು ಕಾದು ನಿರಾಸೆ ಆಗೋದು ಬೇಡ ಅಂತ ರೀಲು ಬಿಟ್ಟೆ. ಆದ್ರೂ ಬಲವಂತ ಮಾಡಿದ್ರು. ಸರಿ ಸಾರ್. ಊಟಕ್ಕೆ ಬರೋಲ್ಲ, ಆದ್ರೆ ತಿಂಡಿಗೆ ಬರ್ತೀನಿ ಅಂತ ಒಪ್ಕೊಂಡೆ. ಮಾರನೇ ದಿನ ಮುಖ್ಯಮಂತ್ರಿ ಚಂದ್ರೂನ ಕರ್ಕೊಂಡು ತಿಂಡಿಗೆ ಹೋದೆ. ಆಮೇಲೆ ಅವರಿಂದ ನಾನು ತುಂಬಾ ಪಾಠ ಕಲಿತೆ. ಅವರಿಂದಾನೇ ನಾನೊಬ್ಬ ಮನುಷ್ಯ ಅಂತಾದೆ. ಬೆಂಗಳೂರಲ್ಲಿ ಮನೆ ಕಟ್ಟಿಸಿದ್ದು ಕೂಡಾ ಅವರ ಸಹಕಾರದಿಂದಲೇ”

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಅಸ್ಪೃಶ್ಯ ಅಲೆಮಾರಿ ಸಮುದಾಯಗಳನ್ನು ಪ್ರವರ್ಗ ಸಿಗೆ ಸೇರಿಸಿದ್ದನ್ನು ಕೋರ್ಟ್‌ನಲ್ಲಿ ಸಮರ್ಥಿಸಿಕೊಂಡ ರಾಜ್ಯ ಸರ್ಕಾರ

ಆಗಸ್ಟ್‌ 18 2025ರಂದು ರಾಜ್ಯ ಸರ್ಕಾರ ಒಳಮೀಸಲಾತಿ ವರ್ಗೀಕರಣ ಆದೇಶ ಹೊರಡಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಅಸ್ಪೃಶ್ಯ ಅಲೆಮಾರಿ ಸಮುದಾಯಗಳ ಮಹಾ ಒಕ್ಕೂಟವು ಕರ್ನಾಟಕ ಹೈಕೋರ್ಟ್‌ನಲ್ಲಿ ರಿಟ್‌ ಅರ್ಜಿಯನ್ನು ದಾಖಲಿಸಿತ್ತು. ರಾಜ್ಯ ಸರ್ಕಾರ...

ಐದು ವರ್ಷಗಳಲ್ಲಿ ಸುಮಾರು ಒಂಬತ್ತು ಲಕ್ಷ ಜನರು ಪೌರತ್ವ ತ್ಯಜಿಸಿದ್ದಾರೆ: ಎಂಇಎ

ಕಳೆದ ಐದು ವರ್ಷಗಳಲ್ಲಿ ಸುಮಾರು ಒಂಬತ್ತು ಲಕ್ಷ ಜನರು ತಮ್ಮ ಭಾರತೀಯ ಪೌರತ್ವವನ್ನು ತ್ಯಜಿಸಿದ್ದಾರೆ. ಜಾಗತಿಕ ಚಲನಶೀಲತೆ ಹೆಚ್ಚಾದಂತೆ ಮತ್ತು ವೈಯಕ್ತಿಕ ಆಯ್ಕೆಗಳು ವಲಸೆ ಪ್ರವೃತ್ತಿಯನ್ನು ರೂಪಿಸುತ್ತಿರುವುದರಿಂದ ವಾರ್ಷಿಕವಾಗಿ ಸಂಖ್ಯೆಗಳು ಗಮನಾರ್ಹವಾಗಿ ಬದಲಾಗಿವೆ...

ನಟ ದಿಲೀಪ್ ಖುಲಾಸೆ: ನ್ಯಾಯಾಲಯದ ಕಲಾಪವನ್ನು ವಿರೂಪಗೊಳಿಸಬೇಡಿ ಎಂದು ಮಾಧ್ಯಮ ಮತ್ತು ವಕೀಲರಿಗೆ ಎಚ್ಚರಿಕೆ ನೀಡಿದ ನ್ಯಾಯಾದೀಶೆ ಹನಿ ವರ್ಗೀಸ್ 

2017 ರಲ್ಲಿ ದಕ್ಷಿಣ ಭಾರತದ ನಟಿಯ ಮೇಲೆ ನಡೆದ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಮಲಯಾಳಂ ನಟ ದಿಲೀಪ್ ಅವರನ್ನು ಖುಲಾಸೆಗೊಳಿಸಿದ ಎರ್ನಾಕುಲಂ ಪ್ರಧಾನ ಸೆಷನ್ಸ್ ನ್ಯಾಯಾಧೀಶೆ ಹನಿ ಎಂ ವರ್ಗೀಸ್, ತಮ್ಮ ತೀರ್ಪಿನ...

ರಾಜ್‌ಕೋಟ್‌ ಬಾಲಕಿ ಅತ್ಯಾಚಾರ ಪ್ರಕರಣ; ಆಕ್ರೋಶ ಹೊರಹಾಕಿದ ಶಾಸಕ ಜಿಗ್ನೇಶ್‌ ಮೇವಾನಿ; ಕಠಿಣ ಶಿಕ್ಷೆಗೆ ಆಗ್ರಹ

ಗುಜರಾತ್‌ನ ರಾಜ್‌ಕೋಟ್‌ನಲ್ಲಿ ಏಳು ವರ್ಷದ ಬಾಲಕಿ ಅತ್ಯಾಚಾರ ಹಾಗೂ ಗಂಭೀರ ಹಲ್ಲೆ ಪ್ರಕರಣಕ್ಕೆ ಸಂಬಧಿಸಿದಂತೆ ಆಕ್ರೋಶ ಹೊರಹಾಕಿರುವ ಕಾಂಗ್ರೆಸ್ ಶಾಸಕ ಜಿಗ್ನೇಶ್‌ ಮೇವಾನಿ; ಆರೋಪಿಯನ್ನು ಕಠಿಣ ಶಿಕ್ಷೆಗೆ ಗುರಿಪಡಿಸಬೇಕು ಎಂದು ಆಗ್ರಹಿಸಿದ್ದಾರೆ. ಘಟನೆ ಕುರಿತು...

ಯುವ ರೈತರನ್ನು ಮದುವೆಯಾಗುವ ಯುವತಿಯರಿಗೆ ₹5 ಲಕ್ಷ ಪ್ರೋತ್ಸಾಹಧನ ನೀಡಲು BJP ಕಾರ್ಯಕರ್ತರ ಮನವಿ

ಮಂಡ್ಯ:  ಕರ್ನಾಟಕ ಸರ್ಕಾರ ಜಾರಿಗೆ ತಂದಿರುವ ‘ಶಾದಿ ಭಾಗ್ಯ’ದಂತೆ ರೈತರನ್ನು ಮದುವೆಯಾಗುವ ಯುವತಿಯರಿಗೆ ಸರ್ಕಾರದ ವತಿಯಿಂದ ರೂ.5ಲಕ್ಷ ಪ್ರೋತ್ಸಾಹಧನ ನೀಡಬೇಕು ಎಂದು ಬಿಜೆಪಿ ಕಾರ್ಯಕರ್ತರು ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಸಿ. ಶಿವಾನಂದಮೂರ್ತಿ ಅವರ ಮೂಲಕ...

ನಿವೃತ್ತಿ ನಿರ್ಧಾರ ಹಿಂತೆಗೆದುಕೊಂಡ ವಿನೇಶ್ ಫೋಗಟ್; ಲಾಸ್ ಏಂಜಲೀಸ್ ಒಲಿಂಪಿಕ್ಸ್‌ಗೆ ತಯಾರಿ

ಕುಸ್ತಿಪಟು ವಿನೇಶ್ ಫೋಗಟ್ ಸ್ಪರ್ಧಾತ್ಮಕ ಕ್ರೀಡೆಗೆ ಮರಳುವುದಾಗಿ ಘೋಷಿಸುವ ಮೂಲಕ ತಮ್ಮ ನಿವೃತ್ತಿ ನಿರ್ಧಾರವನ್ನು ಹಿಂತೆಗೆದುಕೊಂಡಿದ್ದಾರೆ. 2028 ರ ಲಾಸ್ ಏಂಜಲೀಸ್ ಒಲಿಂಪಿಕ್ಸ್ ಅನ್ನು ಗುರಿಯಾಗಿಸಿಕೊಂಡಿರುವುದಾಗಿ ತಿಳಿಸಿದ್ದಾರೆ. ಈ ಕುರಿತ ಹೇಳಿಕೆ ಬಿಡುಗಡೆ ಮಾಡಿರುವ...

ಗುಜರಾತ್‌ನ ವಲ್ಸಾದ್‌ನಲ್ಲಿ ನಿರ್ಮಾಣ ಹಂತದ ಸೇತುವೆ ಕುಸಿದು ಐವರು ಕಾರ್ಮಿಕರಿಗೆ ಗಾಯ

ಗುಜರಾತ್‌ನ ವಲ್ಸಾದ್ ಜಿಲ್ಲೆಯಲ್ಲಿ ಔರಂಗ ನದಿಗೆ ನಿರ್ಮಾಣ ಹಂತದಲ್ಲಿರುವ ಸೇತುವೆಯ ಮೇಲಿನ ಗಿರ್ಡರ್ ಕುಸಿದಿದ್ದು, ಐವರು ಕಾರ್ಮಿಕರು ಗಾಯಗೊಂಡಿದ್ದಾರೆ.  ಹಳೆಯ ಸೇತುವೆಗೆ ಸಮಾನಾಂತರವಾಗಿ ಹೊಸ ಸೇತುವೆಯನ್ನು ನಿರ್ಮಿಸಲಾಗುತ್ತಿರುವ ಕೈಲಾಶ್ ರಸ್ತೆಯಲ್ಲಿ ಶುಕ್ರವಾರ ಬೆಳಿಗ್ಗೆ 8...

ಆಮದು ಸುಂಕ ಹೆಚ್ಚಿಸಿದ ಮೆಕ್ಸಿಕೊ: ಭಾರತದ ವಾಹನ-ಉಕ್ಕು ರಫ್ತಿನ ವೆಚ್ಚ ಹೆಚ್ಚಳ ಸಾಧ್ಯತೆ

ಸ್ಥಳೀಯ ಕೈಗಾರಿಕೆಗಳನ್ನು ರಕ್ಷಿಸುವ ಗುರಿಯ ಭಾಗವಾಗಿ, ಭಾರತ, ಚೀನಾ ಮತ್ತು ದಕ್ಷಿಣ ಕೊರಿಯಾ ಸೇರಿದಂತೆ ಏಷ್ಯಾದ ದೇಶಗಳಿಂದ ಆಮದು ಮಾಡಿಕೊಳ್ಳುವ ವಸ್ತುಗಳ ಮೇಲಿನ ಹೆಚ್ಚಿನ ಸುಂಕ ಹೆಚ್ಚಳ ನಿರ್ಧಾರವನ್ನು ಮೆಕ್ಸಿಕೋ ಅನುಮೋದಿಸಿದೆ. ಮೆಕ್ಸಿಕನ್...

Cognizant ಕಂಪನಿಗೆ 99 ಪೈಸೆಗೆ ಒಂದು ಎಕರೆ ಭೂಮಿ: ವಿಶಾಖಪಟ್ಟಣದಲ್ಲಿ ತಾತ್ಕಾಲಿಕ ಕಛೇರಿ ಉದ್ಘಾಟನೆ

ಕಳೆದ ಜೂನ್‌ ನಲ್ಲಿ ಸುದ್ದಿಗೆ ಗ್ರಾಸವಾಗಿದ್ದ ಆಂಧ್ರ ಪ್ರದೇಶದ ವಿಶಾಖಪಟ್ಟಣದಲ್ಲಿ Cognizant ಕಂಪನಿಯು 1582 ಕೋಟಿ ಹೂಡಿಕೆ ಮಾಡಿ 8 ಸಾವಿರ ಉದ್ಯೋಗ ಸೃಷ್ಠಿ ಮಾಡಲಾಗುವುದೆಂದು ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಸರ್ಕಾರ ಘೋಷಿಸಿತ್ತು....

ಅಲ್ಪಸಂಖ್ಯಾತ ಶಾಲೆಗಳಿಗೆ ಆರ್.ಟಿ.ಇ ಕಾಯ್ದೆಯಿಂದ ವಿನಾಯಿತಿ ತೀರ್ಪಿನ ವಿರುದ್ಧ ಅರ್ಜಿ; ಎನ್.ಜಿ.ಒಗೆ ದಂಡ ವಿಧಿಸಿದ ಸುಪ್ರೀಂ  

ಶಿಕ್ಷಣ ಹಕ್ಕು ಕಾಯ್ದೆಯ (ಆರ್‌ಟಿಇ) ನಿಬಂಧನೆಗಳಿಂದ ಅಲ್ಪಸಂಖ್ಯಾತ ಶಾಲೆಗಳಿಗೆ ವಿನಾಯಿತಿ ನೀಡಿದ್ದ, ತನ್ನ ಹಿಂದಿನ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಲಾದ ರಿಟ್ ಅರ್ಜಿಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ತೀವ್ರವಾಗಿ ಖಂಡಿಸಿದೆ.  ಜಸ್ಟೀಸ್ ಬಿ.ವಿ. ನಾಗರತ್ನ ಮತ್ತು...