Homeಆರೋಗ್ಯ2017ರಲ್ಲಿ ಅನಾರೋಗ್ಯದಿಂದ ಸತ್ತವರ ಸಂಖ್ಯೆ 99 ಲಕ್ಷ. ಎಲ್ಲಿದ್ದಾರೆ ದೇಶಪ್ರೇಮಿಗಳು?

2017ರಲ್ಲಿ ಅನಾರೋಗ್ಯದಿಂದ ಸತ್ತವರ ಸಂಖ್ಯೆ 99 ಲಕ್ಷ. ಎಲ್ಲಿದ್ದಾರೆ ದೇಶಪ್ರೇಮಿಗಳು?

ಅನಾರೋಗ್ಯಕ್ಕೆ ಬಲಿಯಾದವರ ಸಂಖ್ಯೆ ಭಯೋತ್ಪಾದನೆಗೆ ಸತ್ತವರ ಸಂಖ್ಯೆಗಿಂತಲೂ 8,000 ಪಟ್ಟು ಹೆಚ್ಚು

- Advertisement -
- Advertisement -

| ಜಿ.ಆರ್ ವಿದ್ಯಾರಣ್ಯ |

ನಮ್ಮೆಲ್ಲರಿಗೂ ತಿಳಿದಂತೆ 2019ರ ಚುನಾವಣೆ ಚರ್ಚೆ ದೇಶಪ್ರೇಮ. ಆತಂಕವಾದ, ಮುಂತಾದವುಗಳ ಮೇಲೆಯೇ ಹೆಚ್ಚಾಗಿ ನಡೆಯಿತು. ದೇಶದ ಆರ್ಥಿಕ ಪರಿಸ್ಥಿತಿ ಅಥವಾ ನಿರುದ್ಯೋಗ ಸಮಸ್ಯೆ, ಕುಡಿಯುವ ನೀರು, ಸ್ವಚ್ಛ ಗಾಳಿ, ಪರ್ಯಾವರಣ, ರೈತ ಸಂಕಷ್ಟ, ಹಣದುಬ್ಬರ, ಬೆಲೆವಾಸಿ, ಇವುಗಳ ಮೇಲಿನ ಚರ್ಚೆಯನ್ನು ಯಾವ ರಾಜಕೀಯ ಪಕ್ಷವಾಗಲೀ, ನಾಯಕರಾಗಲೀ, ಪ್ರಜೆಗಳಾಗಲೀ ಅವಶ್ಯಕ ಎಂದು ಪರಿಗಣಿಸಲಿಲ್ಲ.

ದೇಶಪ್ರೇಮ ಮುಖ್ಯವೇನೋ ಸರಿ, ಅವಶ್ಯಕತೆ ಬಿದ್ದಲ್ಲಿ ದೇಶಕ್ಕೋಸ್ಕರ ಹೋರಾಡಲು ಅಥವಾ ಪ್ರಾಣತ್ಯಾಗಕ್ಕೂ ಸಿದ್ಧರಾಗಿರಬೇಕು, ಆದರೆ ಪ್ರಾಣತ್ಯಾಗಕ್ಕೆ ಮುಂಚೆ ದೇಶಪ್ರೇಮಿ ಜೀವಂತವಾಗಿರಬೇಕು, ಅಲ್ಲವೇ? 2017ರಲ್ಲಿ ಭಯೋತ್ಪಾದನೆಗೆ ಬಲಿಯಾದವರ ಸಂಖ್ಯೆ 766 ಅಂದರೆ ಆ ವರ್ಷ ಸತ್ತವರ ಒಟ್ಟು ಸಂಖ್ಯೆಯ 0.007%. ಆದರೆ ಆರೋಗ್ಯ ಸಂಬಂಧಿ ಕಾರಣದಿಂದ ಸತ್ತವರ ಸಂಖ್ಯೆ 66 ಲಕ್ಷ ಅಥವಾ ಒಟ್ಟು ಸತ್ತವರ ಸಂಖ್ಯೆಯ 90%. 2017ರಲ್ಲಿ ಸಮಾನಾಂತರವಾಗಿ ಪರಿಶೀಲಿಸಬಲ್ಲ ಸರಕಾರಿ ಅಂಕಿ-ಅಂಶಗಳ ಆಧಾರದ ಮೇಲೆ ಹೇಳುವುದಾದರೆ ನಮ್ಮ ರಕ್ಷಣಾ ಬಜೆಟ್ ನಮ್ಮ ಜನರ ಸ್ವಾಸ್ಥ್ಯ ಮುಂಗಡಪತ್ರದ ದುಪ್ಪಟ್ಟು.

ಸಾರ್ವಜನಿಕ ಸ್ವಾಸ್ಥ್ಯ ಮತ್ತು ಶಿಕ್ಷಣದ ಮೇಲೆ ದೇಶದ ಹೂಡುವಳಿ ಕಡಿಮೆಯಾಗುತ್ತಿದ್ದು ಇದು ನೇರವಾಗಿ ನೇರವಾಗಿ ಔದ್ಯೋಗಿಕ ಮತ್ತು ಆರ್ಥಿಕ ಪ್ರಗತಿಯ ಮೇಲೆ ಪರಿಣಾಮ ಬೀರುತ್ತಿದೆ. ಭಾರತೀಯರ ಅತ್ತ್ಯುತ್ತಮ ಉತ್ಪನ್ನಕಾರಕ ಸಾಮರ್ಥ್ಯ ಕೇವಲ ಆರೂವರೆ ವರ್ಷ ಮಾತ್ರ ಆದರೆ ಚೀನಾ ದೇಶದ ಜನರ ಸಾಮರ್ಥ್ಯ 20 ವರ್ಷ, ಅಂದರೆ ನಮ್ಮ ಮೂರು ಪಟ್ಟು. ಬ್ರೆಜಿಲ್ ದೇಶದಲ್ಲಿ 16 ವರ್ಷ ಮತ್ತು ಶ್ರೀಲಂಕಾದಲ್ಲಿ 13 ವರ್ಷ ಎಂದರೆ ಆಶ್ಚರ್ಯವಲ್ಲವೇ? 195 ದೇಶಗಳ ಮಾನವ ಬಂಡವಾಳ ಶ್ರೇಯಾಂಕ ಪಟ್ಟಿಯಲ್ಲಿ ಭಾರತದ ಸ್ಥಾನ 158. ಇದನ್ನು ಸೆಪ್ಟೆಂಬರ್ 2018ರಲ್ಲಿ “ಇಂಡಿಯಾಸ್ಪೆಂಡ್” ಸಂಸ್ಥೆ ಪ್ರಕಟಿಸಿದೆ.

ಅನಾರೋಗ್ಯಕ್ಕೆ ಬಲಿಯಾದವರ ಸಂಖ್ಯೆ ಭಯೋತ್ಪಾದನೆಗೆ ಸತ್ತವರ ಸಂಖ್ಯೆಗಿಂತಲೂ 8,000 ಪಟ್ಟು ಹೆಚ್ಚು

2017ರಲ್ಲಿ ಸತ್ತವರು ಒಟ್ಟು 99 ಲಕ್ಷ, ಅದರಲ್ಲಿ ಡಯಾಬಿಟೀಸ್ನಿಂದ ಸತ್ತವರು 2,54,500, ಆತ್ಮಹತ್ಯೆ ಮಾಡಿಕೊಂಡವರು 2,10,800, ಸಾಂಕ್ರಮಿಕ ರೋಗಕ್ಕೆ ತುತ್ತಾದವರು 20 ಲಕ್ಷ, ಸಾಂಕ್ರಮಿಕವಲ್ಲದ ರೋಗದಿಂದ ಸತ್ತವರು 62 ಲಕ್ಷ. ಇವೆಲ್ಲವನ್ನು ಒಟ್ಟುಗೂಡಿಸಿದಲ್ಲಿ ಆತಂಕವಾದಕ್ಕೆ ಬಲಿಯದವರ ಸಂಖ್ಯೆಯ 8,000 ಪಟ್ಟು ಜನ ಆರೋಗ್ಯ ಸಂಬಂಧಿ ಕಾರಣಕ್ಕೆ ಜೀವ ಕಳೆದು ಕೊಂಡಿದ್ದಾರೆ.

ಹಾಗಾದರೆ ನಮ್ಮ ಸರಕಾರದ ಆದ್ಯತೆ ಯಾವ ವಿಷಯಕ್ಕೆ ಇರಬೇಕು, ಚುನಾವಣೆಯ ಸಮಯದಲ್ಲಿ ಚರ್ಚೆ ಯಾವ ವಿಷಯದ ಮೇಲಿರಬೇಕು ಅಥವಾ ಈ ವಿಷಯದಲ್ಲಿ ಮಾತನಾಡುವ ಹಕ್ಕು ಜನಸಾಮಾನ್ಯರಿಗಿದೆಯೇ? ನಮ್ಮ ಮುಖ್ಯ ವಾಹಿನಿ ಮಾಧ್ಯಮ ಇಂತಹ ವಿಷಯದ ಚರ್ಚೆ ಇತ್ತೀಚೆಗೆ ಏರ್ಪಡಿಸಿರುವುದು ನಿಮಗೆ ನೆನಪಿದೆಯೇ ನೀವೇ ಯೋಚಿಸಿ.

 

 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಲೋಕಸಭಾ ಸ್ಪೀಕರ್ ಓಂ ಬಿರ್ಲಾ ವಿರುದ್ಧದ ಅವಿಶ್ವಾಸ ನಿರ್ಣಯಕ್ಕೆ ಟಿಎಂಸಿ ಬೆಂಬಲ

ಮಾರ್ಚ್ 9 ರ ಸೋಮವಾರ ಸಂಸತ್ತಿನ ಬಜೆಟ್ ಅಧಿವೇಶನ ಪುನರಾರಂಭವಾದಾಗ ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧ ಮಂಡಿಸಲಾಗುವ ಅವಿಶ್ವಾಸ ನಿರ್ಣಯಕ್ಕೆ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಬೆಂಬಲ ನೀಡಲಿದೆ ಎಂದು ಪಕ್ಷದ ನಾಯಕರು...

ಹೊಸ ರಾಜ್ಯಪಾಲ ರವಿ ಬಿಜೆಪಿ ಕೇಡರ್, ಆದರೆ ಬಂಗಾಳ ಟಫ್ ಟರ್ಫ್ : ಮಮತಾ ಬ್ಯಾನರ್ಜಿ

ನೂತನ ರಾಜ್ಯಪಾಲ ಆರ್.ಎನ್ ರವಿ ಅವರನ್ನು 'ಬಿಜೆಪಿ ಕೇಡರ್' ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಶನಿವಾರ ಲೇವಡಿ ಮಾಡಿದ್ದು, ಮುಂಬರುವ ದಿನಗಳಲ್ಲಿ ರಾಜ್ಯ ಸಚಿವಾಲಯ 'ನಬನ್ನಾ' ಮತ್ತು ರಾಜ್ಯಪಾಲರ ನಿವಾಸ...

ಕರ್ನಾಟಕ ಬಜೆಟ್ 2026| ಶಿಕ್ಷಣ ಕ್ಷೇತ್ರಕ್ಕೆ ಅನುದಾನ ಹಂಚಿಕೆ ನಿರಾಶದಾಯಕ

ಶಿಕ್ಷಣಕ್ಕೆ 47,224 ಕೋಟಿ (ಶೇ.10) ಹಂಚಿಕೆ ಮಾಡಿದ್ದಾರೆ. ಇದು ತುಂಬಾ ಕಡಿಮೆ ಅನುದಾನವಾಗಿದೆ. ವಾಸ್ತವದಲ್ಲಿ ಬಜೆಟ್ ವೆಚ್ಚದ ಶೇ.20-24ರಷ್ಟು ಹಣವನ್ನು ಶಿಕ್ಷಣಕ್ಕೆ ಮೀಸಲಿಡಬೇಕು. ಆದರೆ ಇದು ಸಾಧ್ಯವಾಗುತ್ತಿಲ್ಲ. ಶಿಕ್ಷಣವನ್ನು ಅನುತ್ಪಾದಕ ವಲಯ ಎಂದು...

ಕೇರಳ : ಪ್ರಧಾನಿ ಮೋದಿ ‘ದೇಶದ್ರೋಹಿ’ ಎಂದ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲು

ಪ್ರಧಾನಿ ನರೇಂದ್ರ ಮೋದಿ 'ದೇಶದ್ರೋಹಿ' ಎಂದು ಸಾಮಾಜಿಕ ಮಾಧ್ಯಮದಲ್ಲಿ ಕಾಮೆಂಟ್ ಹಾಕಿದ ಆರೋಪದ ಮೇಲೆ ಕೇರಳದ ಕಣ್ಣೂರಿನ ಶ್ರೀಕಂಡಪುರಂ ಪೊಲೀಸರು ವ್ಯಕ್ತಿಯೊಬ್ಬರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ ಎಂದು ಹಿಂದೂ ಶನಿವಾರ (ಮಾ.7) ವರದಿ...

ಕೋಲ್ಕತ್ತಾ| ಮತದಾರರ ಪಟ್ಟಿಯಿಂದ ಹೆಸರು ಅಳಿಸುವಿಕೆ ವಿರೋಧಿಸಿ ಅಹೋರಾತ್ರಿ ಧರಣಿ ಮುಂದುವರೆಸಿದ ಮಮತಾ

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಶನಿವಾರ ಸತತ ಎರಡನೇ ದಿನವಾದ ಶನಿವಾರವೂ ತಮ್ಮ ಪ್ರತಿಭಟನೆಯನ್ನು ಮುಂದುವರೆಸಿದ್ದಾರೆ, ಅವರು ಅಹೋರಾತ್ರಿ ಧರಣಿ ಸ್ಥಳದಲ್ಲಿ ರಾತ್ರಿ ಕಳೆದರು. ಮುಂಬರುವ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ "ಬಂಗಾಳದ ಮತದಾರರ...

ಇಂಡೋನೇಷ್ಯಾ | ನಾಲ್ವರು ಪ್ರಮುಖ ಹೋರಾಟಗಾರರು ಖುಲಾಸೆ : ಪ್ರತಿಭಟನೆಯ ಹಕ್ಕಿಗೆ ಹೊಸ ಭರವಸೆ ಎಂದ ಆಮ್ನೆಸ್ಟಿ

2025ರ ಆಗಸ್ಟ್ ಮತ್ತು ಸೆಪ್ಟೆಂಬರ್‌ನಲ್ಲಿ ನಡೆದ ಹಿಂಸಾತ್ಮಕ ವಿದ್ಯಾರ್ಥಿ ಪ್ರತಿಭಟನೆಗಳಿಗೆ ಪ್ರಚೋದನೆ ನೀಡಿದ ಆರೋಪ ಎದುರಿಸುತ್ತಿದ್ದ ನಾಲ್ವರು ಪ್ರಮುಖ ಹೋರಾಟಗಾರರನ್ನು ಇಂಡೋನೇಷ್ಯಾದ ಕೇಂದ್ರ ಜಕಾರ್ತಾ ಜಿಲ್ಲಾ ನ್ಯಾಯಾಲಯವು ಶುಕ್ರವಾರ (ಮಾ.6) ಖುಲಾಸೆಗೊಳಿಸಿದೆ. ದೇಶದಲ್ಲಿ ನಾಗರಿಕ ಸ್ವಾತಂತ್ರ್ಯಕ್ಕೆ...

‘ಆಕ್ರಮಣ ಮಾಡುವ ಉದ್ದೇಶವಿಲ್ಲ..’; ಗಲ್ಫ್ ರಾಷ್ಟ್ರಗಳ ಮೇಲಿನ ದಾಳಿಗೆ ಕ್ಷಮೆಯಾಚಿಸಿದ ಇರಾನ್ ಅಧ್ಯಕ್ಷರು

ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಅವರು ನೆರೆಯ ರಾಷ್ಟ್ರಗಳಿಗೆ ಶನಿವಾರ ಕ್ಷಮೆಯಾಚಿಸಿದ್ದಾರೆ. ಉಲ್ಬಣಗೊಳ್ಳುತ್ತಿರುವ ಪ್ರಾದೇಶಿಕ ಸಂಘರ್ಷಕ್ಕೆ ಸಂಬಂಧಿಸಿದ ಇತ್ತೀಚಿನ ದಾಳಿಗಳಿಗೆ ಟೆಹ್ರಾನ್ ಇತರ ರಾಷ್ಟ್ರಗಳನ್ನು ಆಕ್ರಮಿಸುವ ಉದ್ದೇಶವನ್ನು ಹೊಂದಿಲ್ಲ ಎಂದು ಹೇಳಿದ್ದಾರೆ. ಇರಾನ್ ಸಾರ್ವಜನಿಕರನ್ನು...

ತೈಲ ಆಮದು ವಿಚಾರದಲ್ಲಿ ಅಮೆರಿಕದ ಒಪ್ಪಿಗೆ ಪಡೆಯುವುದು ‘ಅತಿರೇಕದ’ ಸಂಗತಿ: ಪಿಣರಾಯಿ ವಿಜಯನ್

ತೈಲ ಆಮದುಗಳಂತಹ ನಿರ್ಧಾರಗಳಿಗೆ ಭಾರತವು ಅಮೆರಿಕದ ಅನುಮೋದನೆಯನ್ನು ಪಡೆಯುವಂತೆ ಬಿಂಬಿತವಾಗುತ್ತಿರುವುದು 'ಅತಿರೇಕದ' ಸಂಗತಿ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಶುಕ್ರವಾರ ಹೇಳಿದ್ದಾರೆ. ಭಾರತದ ಸಾರ್ವಭೌಮತ್ವವು ವಿದೇಶಿ ಅನುಮತಿಗೆ ಒಳಪಡುವುದಿಲ್ಲ ಎಂದು ವಿಜಯನ್ ಸಾಮಾಜಿಕ...

ಪತ್ರಕರ್ತನ ಹತ್ಯೆ ಪ್ರಕರಣ : ಡೇರಾ ಮುಖ್ಯಸ್ಥ ರಾಮ್ ರಹೀಂ ಸಿಂಗ್ ಖುಲಾಸೆ

ಪತ್ರಕರ್ತ ಛತ್ರಪತಿ ಹತ್ಯೆ ಪ್ರಕರಣದಲ್ಲಿ ಸಿರ್ಸಾದ ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಂ ಸಿಂಗ್ ಅನ್ನು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಶನಿವಾರ (ಮಾ.7) ಖುಲಾಸೆಗೊಳಿಸಿರುವುದಾಗಿ livelaw.in ಎಂದು ವರದಿ...

ಗೃಹ ಬಳಕೆಯ ಎಲ್‌ಪಿಜಿ ದರ 60 ರೂ. ಹೆಚ್ಚಳ : 11 ತಿಂಗಳಲ್ಲಿ ಎರಡನೇ ಬಾರಿ ಬೆಲೆ ಏರಿಕೆ

ತೈಲ ಮಾರುಕಟ್ಟೆ ಕಂಪನಿಗಳು ಶನಿವಾರ (ಮಾ.7) ದೇಶದಲ್ಲಿ ಗೃಹ ಬಳಕೆಯ ಮತ್ತು ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು ಕ್ರಮವಾಗಿ ರೂ. 60 ಮತ್ತು ರೂ. 115 ಹೆಚ್ಚಿಸಿವೆ. ಈ ಹೆಚ್ಚಳದ ನಂತರ ರಾಷ್ಟ್ರ ರಾಜಧಾನಿ...