Homeಮುಖಪುಟನೊಬೆಲ್ ಸಾಹಿತ್ಯ 2022; ಅಕ್ಷರ ಲೋಕದ ಪುರಾತತ್ವಜ್ಞೆ ಆನಿ ಎರ್ನೊ

ನೊಬೆಲ್ ಸಾಹಿತ್ಯ 2022; ಅಕ್ಷರ ಲೋಕದ ಪುರಾತತ್ವಜ್ಞೆ ಆನಿ ಎರ್ನೊ

- Advertisement -
- Advertisement -

ಎಡುವರ್ಡೋ ಗೆಲಿಯಾನೊ ಲ್ಯಾಟಿನ್ ಅಮೆರಿಕದ ಶ್ರೇಷ್ಠ ಬರಹಗಾರ. ಆತನನ್ನು ಕನ್ನಡಕ್ಕೆ ತಂದು ಪರಿಚಯಿಸಿದ್ದು ಕೆ ಪಿ ಸುರೇಶ್. ಬೆಂಕಿಯ ನೆನಪು ಎಂಬ ಪುಟ್ಟ ಪುಸ್ತಕದ ಇತಿಹಾಸ ಮತ್ತು ಜನರ ಸ್ಮೃತಿಯ ಕುರಿತು ಹೊಸ ಚಿಂತನೆಯ ಕಿಡಿ ಹೊತ್ತಿಸಿತ್ತು.

ನಾಲ್ಕು ದಿನಗಳ ಹಿಂದೆ 2022ರ ನೊಬೆಲ್ ಸಾಹಿತ್ಯ ಪುರಸ್ಕಾರ ಘೋಷಣೆಯಾದಾಗ ನನಗೆ ಗೆಲಿಯಾನೊ ನೆನಪಾದ. ಫ್ರೆಂಚ್ ಕಾದಂಬರಿಕಾರ್ತಿ, ಲೇಖಕಿ ಆನಿ ಎರ್ನೊಗೆ ಈ ಬಾರಿಯ ಪ್ರಶಸ್ತಿ ಲಭಿಸಿದೆ. ಪ್ರಶಸ್ತಿ ಘೋಷಿಸುತ್ತಾ, ಸ್ವೀಡಿಷ್ ಅಕಾಡೆಮಿ, ವ್ಯಕ್ತಿಗತ ನೆನಪುಗಳನ್ನು ದಾಖಲಿಸುವ ವಿಶಿಷ್ಟ ಬರವಣಿಗೆ ಕುರಿತು ಮೆಚ್ಚುಗೆ ವ್ಯಕ್ತಪಡಿಸಿತ್ತು.

ಹಿಂದೆ ನಡೆದಿದ್ದನ್ನು ನಾವು ನೆನಪಿಸಿಕೊಳ್ಳುತ್ತೇವೆ. ಇತಿಹಾಸದ ಹೆಸರಿನಲ್ಲಿ ದಾಖಲಾಗುವ ಹಲವು ಹಿತಾಸಕ್ತಿಗಳು ಆ ನೆನಪುಗಳ ಹಿಂದಿರುತ್ತವೆ. ಹಾಗಾಗಿ ಆ ಇತಿಹಾಸಕ್ಕೆ ಬಹು ಆಯಾಮಗಳಿರುತ್ತವೆಯೇ ಎಂಬ ಅನುಮಾನ ಎಂದಿಗೂ ಉಳಿದಿರುತ್ತದೆ. ಅದಕ್ಕೆ ಗೆಲಿಯಾನೊ, ಜನರ ಇತಿಹಾಸ ದಾಖಲಾಗಬೇಕೆಂದು ವಾದಿಸಿ, ಅದನ್ನು ’ಮೆಮೊರಿ ಆಫ್ ಫೈರ್’, ’ಮಿರರ್’ ಪುಸ್ತಕಗಳಲ್ಲಿ ಗಟ್ಟಿಯಾಗಿ ಪ್ರತಿಪಾದಿಸಿದ.

ಗೆಲಿಯಾನೊ ಹೇಳಿದ ಆ ಜನರ ಇತಿಹಾಸಕ್ಕೂ, ಆನಿ ಅವರು ತಮ್ಮ ವ್ಯಕ್ತಿಗತ ನೆನಪುಗಳನ್ನು ದಾಖಲಿಸುವುದಕ್ಕೂ ಸಾಮ್ಯತೆ ಇರಬಹುದೆ ಎಂಬ ಕುತೂಹಲ ನನ್ನನ್ನು ಕಾಡಲಾರಂಭಿಸಿತ್ತು. ಏಳು ದಶಕಗಳ ಕಾಲ ಫ್ರಾನ್ಸಿನ ಬದುಕುಗಳನ್ನು ನೋಡುತ್ತಾ, ಅಲ್ಲಿನ ಆಗು ಹೋಗುಗಳನ್ನು ದಾಖಲಿಸಿರುವ ಆನಿ ಸಾಮಾನ್ಯರ ಚರಿತ್ರೆಯನ್ನೇ ದಾಖಲಿಸಿದ್ದಾರೆಂದು ಹೇಳುವುದರಲ್ಲಿ ತಪ್ಪಿಲ್ಲ ಅನ್ನಿಸುತ್ತದೆ. ಅದಕ್ಕೆ ಆಕೆಯನ್ನು ಫ್ರಾನ್ಸಿನ ಸಮುದಾಯಗಳ ಸ್ಮೃತಿಗಳ ರಕ್ಷಕಿ ಎಂದು ಕರೆದಿರುವುದು.

ಸಂದರ್ಶನವೊಂದರಲ್ಲಿ ಮಾತನಾಡುತ್ತಾ, ಕಾಲಘಟ್ಟದ ಕಥನದಲ್ಲಿ ತಾನಿದ್ದೂ ಇಲ್ಲದಂತೆ ದಾಖಲಿಸುವ ಈ ವಿಶಿಷ್ಟ ಬರವಣಿಗೆಯ ಕುರಿತು ಮಾತನಾಡುತ್ತಾ ಆನಿ, “ಒಂದು ಕಾಲಘಟ್ಟದಲ್ಲಿ ಬದುಕಿನ ಹೆಣ್ಣಿನ ಕಥೆಯನ್ನ ಹೇಳಬೇಕೆಂದುಕೊಂಡಿದ್ದೆ. ಆದರೆ ಅದನ್ನು ಹೇಗೆ ಹೇಳುವುದು ಎಂದು ತಿಳಿದಿರಲಿಲ್ಲ. ಆಕೆಯನ್ನು ಹೊರಗಿಟ್ಟು ಕತೆ ಹೇಳಲು ಹೊರಟಿದ್ದರೆ, ಅದು ಇತಿಹಾಸವಾಗುತ್ತಿತ್ತು. ನಾನು ಬರೆಯುವ ಕಥನದಲ್ಲಿ ಅಂತಃಶಕ್ತಿ ಇರಬೇಕು ಎಂದು ನನಗೆ ಗಟ್ಟಿಯಾಗಿ ಅನ್ನಿಸುತ್ತಿತ್ತು. ನಾನು ಚಿತ್ರಗಳನ್ನು, ವ್ಯಕ್ತಿಗತವಾದ ಮತ್ತು ವ್ಯಕ್ತಿಗತವಲ್ಲದ ನೆನಪುಗಳನ್ನು ಸಂಗ್ರಹಿಸಲಾರಂಭಿಸಿದೆ. ಸಿನಿಮಾ, ಪುಸ್ತಕ, ಭಾವಗೀತೆಗಳು ಎಲ್ಲವನ್ನೂ ಸಂಗ್ರಹಿಸಲಾರಂಭಿಸಿದೆ. ಯಾರದ್ದು ಎಂದು ಹೇಳಲಿಲ್ಲ. ನಾನು ಈ ಜಗತ್ತಿಗೆ ಕಾಲಿಟ್ಟ ಸಂದರ್ಭದಿಂದ ಆರಂಭಿಸಿದೆ. ನನ್ನ ಬಗ್ಗೆ ನಾನು ಬರೆಯುತ್ತಿರಲಿಲ್ಲ. ನಿರೂಪಣೆಗಳ ಮೂಲಕ, ನನ್ನದೇ ಆದ ರೀತಿಯಲ್ಲಿ ತಿಳಿಯುವ ಮೂಲಕ, ನನ್ನದೇ ಆದ ರೀತಿಯಲ್ಲಿ ಜಗತ್ತನ್ನು ಎದುರುಗೊಳ್ಳುವ ಮೂಲಕ ಆದ ಅನುಭವಗಳನ್ನು ದಾಖಲಿಸಲಾರಂಭಿಸಿದೆ. ಒಬ್ಬ ವ್ಯಕ್ತಿಯ ಅನುಭವವಾಗಿರಲಿಲ್ಲ. ಇದು ಜನರ, ಕಾರ್ಮಿಕರ, ಹಳೆಯ ದಿನಗಳ ಇತಿಹಾಸವಾಗಿತ್ತು” ಎಂದು ವಿವರಿಸಿದ್ದರು.

ಆನಿ, ಕಾರ್ಮಿಕ ವರ್ಗದ ಕುಟುಂಬವೊಂದರಲ್ಲಿ ಜನಿಸಿದಾಕೆ. ತಂದೆ ತಾಯಿಯರಿಬ್ಬರು ಕೆಫೆ ಮತ್ತು ತರಕಾರಿ ಅಂಗಡಿ ನಡೆಸುತ್ತಿದ್ದರು. ಇಪ್ಪತ್ತನೆಯ ವಯಸ್ಸಿಗೆ ಲಂಡನ್ನಿಗೆ ಬಂದ ಆನಿ ಸಹಾಯಕಿಯಾಗಿ ಕೆಲಸ ಮಾಡಿದ್ದರು. ಈ ಸಂದರ್ಭದ ಅನುಭವಗಳನ್ನು ತನ್ನ ’ಎ ಗರ್ಲ್ಸ್ ಸ್ಟೋರಿ’ ಕಾದಂಬರಿಯಲ್ಲಿ ವಿವರಿಸಿದ್ದಾರೆ. ಫ್ರಾನ್ಸಿಗೆ ಮರಳಿ ವಿದ್ಯಾಭ್ಯಾಸ ಮುಂದುವರಿಸಿದ ಆನಿ, ಶಿಕ್ಷಕಿಯಾಗಿ ವೃತ್ತಿ ಆರಂಭಿಸಿದ್ದರು. ಓದು ಅಧ್ಯಯನ ಮುಂದುವರಿಸಿ, ನ್ಯಾಷನಲ್ ಸೆಂಟರ್ ಫಾರ್ ಡಿಸ್ಟನ್ಸ್ ಎಜುಕೇಷನ್ ಸೇರಿಕೊಂಡರು. ಇಲ್ಲಿಯೇ ಎರಡೂವರೆ ದಶಕಗಳ ಕಾಲ ಸೇವೆ ಸಲ್ಲಿಸಿದರು.

ಜೀವನದ ಈ ಎಲ್ಲ ಓಡಾಟಗಳ ನಡುವೆ ಬರವಣಿಗೆಯ ಹುಕಿ ಉಸಿರು ತುಂಬಿಕೊಂಡು ಬಂದಿದ್ದ ಆನಿಯವರ 34ನೇ ವಯಸ್ಸಿಗೆ. ಆಗ ಮೊದಲ ಕಾದಂಬರಿಯನ್ನು ಪ್ರಕಟಿಸಿದರು. ಬರವಣಿಗೆಯನ್ನೇ ತನ್ನ ಜೀವನದುದ್ದಕ್ಕೂ ಆರಿಸಿಕೊಳ್ಳಲಿರುವ ದಾರಿಯ ಸೂಚನೆ ಈ ಮೊದಲ ಕೃತಿಯಲ್ಲಿಯೇ ಇತ್ತು. ’ಕ್ಲೀನ್ಡ್ ಔಟ್’ ಹೆಸರಿನ ಈ ಮೊದಲ ಪ್ರಕಟಿತ ಪುಸ್ತಕ ಆತ್ಮಕಥಾ ಶೈಲಿಯ ಕಾದಂಬರಿಯಾಗಿತ್ತು. ನಂತರ ಬಂದ ’ಎ ಮ್ಯಾನ್ಸ್ ಲೈಫ್’ ಫ್ರಾನ್ಸಿನ ಪುಟ್ಟ ಪಟ್ಟಣದಲ್ಲಿ ತಂದೆಯೊಂದಿಗಿನ ಯುವತಿಯೊಬ್ಬಳ ಸಂಬಂಧವನ್ನು ಕಟ್ಟಿಕೊಟ್ಟರು. ಇಲ್ಲೂ ಆತ್ಮಕಥಾನಕ ಅಂಶಗಳೇ ಇದ್ದವು. ಶೈಲಿ ಮತ್ತು ಭಾಷೆಯ ಕಾರಣಕ್ಕೆ ಮೆಚ್ಚುಗೆ ಪಡೆದ ಈ ಕೃತಿ ಆನಿಯ ಸೃಜನಶೀಲ ಪ್ರಯೋಗವನ್ನು ಗಟ್ಟಿಯಾಗಿ ದಾಖಲಿಸಿತು.

ತನ್ನ ಪೋಷಕರ ಸಾಮಾಜಿಕ ಪ್ರಗತಿ, ಹರೆಯದ ದಿನಗಳು, ಮದುವೆ, ಪೂರ್ವ ಯುರೋಪಿನ ವ್ಯಕ್ತಿಯೊಂದಿಗೆ ಸಂಬಂಧ, ಗರ್ಭಪಾತ, ತನ್ನ ತಾಯಿಯ ಸಾವು, ಸ್ತನ ಕ್ಯಾನ್ಸರ್, ಹೀಗೆ ತನ್ನ ಬದುಕಿನ ಘಟ್ಟದ ತೀವ್ರ ಅನುಭವಗಳನ್ನು ಕಥನದ ಮೂಸೆಯಲ್ಲಿ ಕರಗಿಸಿ ಎರಕ ಹೊಯ್ದ ಆನಿ ನೆನಪುಗಳ ದಟ್ಟ ಅನುಭವವನ್ನು, ಬರವಣಿಗೆಯ ಮೂಲಕ ಆ ಕಾಲ, ಸಮಾಜದ ಅನುಭವವನ್ನಾಗಿಸಿ ಜಗತ್ತಿಗೆ ದಾಟಿಸಲಾರಂಭಿಸಿದರು. ಹೀಗೆ ವ್ಯಕ್ತಿಗತ ಅನುಭವಗಳನ್ನು ಬರೆಯುತ್ತಲೇ ದನಿಯಿಲ್ಲದ, ದಾಖಲಾದ ಎಷ್ಟೋ ಕತೆಗಳಿಗೆ ದನಿಯಾದರು.

ಆದರೆ ಹೀಗೆ ತನ್ನ ಬದುಕಿನ ಮೂಲಕ ಲೋಕದ ನೆನಪುಗಳನ್ನು ಹೆಕ್ಕಿ ತೆಗೆದು ದಾಖಲಿಸಿದ ಮೇಲೆ ಅವುಗಳನ್ನೇ ಅನುಮಾನಿಸುವುದು ಆನಿಯ ಇನ್ನೊಂದು ವೈಶಿಷ್ಟ್ಯ. ಇಪ್ಪತ್ತು ಕೃತಿಗಳನ್ನು ನೀಡಿರುವ ಆನಿ ವ್ಯಕ್ತಿಗತವಾದ ಬದುಕನ್ನು ದಾಖಲಿಸುತ್ತಿದ್ದರೂ, ಸಾಮಾಜಿಕ, ರಾಜಕೀಯ ಪರಿಸರವನ್ನು ಕಟ್ಟಿಕೊಟ್ಟಿದ್ದಾರೆ. ಉತ್ಖನನದಲ್ಲಿ ಸಿಕ್ಕುವ ಪ್ರತಿ ವಸ್ತುವು ಐತಿಹಾಸಿಕ ಕಾಲಘಟ್ಟದ ಹೊಸ ಮಗ್ಗಲನ್ನು ಅರಿಯುವಂತೆ ಮಾಡುವ ರೀತಿಯಲ್ಲೇ, ಆನಿಯ ಕಥನಗಳು ಬಿಚ್ಚಿಕೊಳ್ಳುತ್ತವೆ. ಹಾಗಾಗಿ ಆಕೆಯನ್ನು ಅಕ್ಷರ ಲೋಕದ ಪುರಾತತ್ವಶಾಸ್ತ್ರಜ್ಞೆ ಎಂದಿರುವುದು.

ಬರವಣಿಗೆಯ ಮೂಲಕ ಮುಕ್ತಿ ಹೊಂದುವ ಕ್ರಿಯೆ ಅತ್ಯಂತ ಸಂಕೀರ್ಣವಾದದ್ದು ಎನ್ನುವ ಆನಿ, ವ್ಯಕ್ತಿಗತ ಸತ್ಯದ ಹುಡುಕಾಟದ ಬಗ್ಗೆ ಅಪಾರ ಆಸ್ಥೆ, ಕುತೂಹಲದಿಂದ ತೊಡಗಿಸಿಕೊಳ್ಳುತ್ತಾ ಬಂದಿದ್ದಾರೆ. ಅವರ ಒಟ್ಟು ಸೃಜನಶೀಲ ಪಯಣದ ಹಿಂದಿರುವ ಚೈತನ್ಯ, ಸ್ಫೂರ್ತಿ ಈ ಕುತೂಹಲವೇ ಆಗಿದೆ.

ಎಸ್ ಕುಮಾರ್

ಎಸ್ ಕುಮಾರ್
ಸಂಪಾದಕರು ಈದಿನ.ಕಾಂ


ಇದನ್ನೂ ಓದಿ: ಅಲೈನ್ ಆಸ್ಪೆಕ್ಟ್, ಜಾನ್ ಎಫ್. ಕ್ಲೌಸರ್, ಆಂಟನ್ ಝೈಲಿಂಗರ್‌ರವರಿಗೆ 2022ರ ಭೌತಶಾಸ್ತ್ರದ ನೊಬೆಲ್ ಪ್ರಶಸ್ತಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂಪೂರ್ಣ ಒಳಮೀಸಲಾತಿ ಜಾರಿಗೆ ಆಗ್ರಹಿಸಿ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಬೃಹತ್ ಪ್ರತಿಭಟನೆ

ಈ ವರ್ಷದ ಬಜೆಟ್ ಅಧಿವೇಶನದಲ್ಲಿ ಬಹುಕಾಲದ ಸಂಪೂರ್ಣ ಒಳಮೀಸಲಾತಿ ಜಾರಿಗೆ ಆಗ್ರಹಿಸಿ ಪರಿಶಿಷ್ಟ ಜಾತಿ (ಎಸ್‌ಸಿ) ಎಡಗೈ ಸಂಬಂಧಿತ ಜಾತಿ ಮುಖಂಡರು ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಮೆರವಣಿಗೆ ನಡೆಸಿ, ಜಿಲ್ಲಾಧಿಕಾರಿಗಳು ಮತ್ತು...

“ಇಲ್ಲಿ 60 ವರ್ಷ ವಾಸಿಸಿದ್ದೆವು, ಒಂದೇ ದಿನದಲ್ಲಿ ನಿರಾಶ್ರಿತರಾದೆವು”: ಅಜಿ ನದಿ ದಡದ ಅಕ್ರಮ ಅತಿಕ್ರಮಣ ತೆರವಿನಲ್ಲಿ ಮನೆ ಕಳೆದುಕೊಂಡವರ ಮಾತು

ಗುಜರಾತ್‌ನ ರಾಜ್‌ಕೋಟ್ ಮುನ್ಸಿಪಲ್ ಕಾರ್ಪೊರೇಷನ್ (ಆರ್‌ಎಂಸಿ) ಜಂಗಲೇಶ್ವರದಲ್ಲಿ ನೂರಾರು ವಸತಿ ರಚನೆಗಳನ್ನು ನೆಲಸಮಗೊಳಿಸಿ ಹಲವಾರು ಕುಟುಂಬಗಳನ್ನು ನಿರಾಶ್ರಿತರನ್ನಾಗಿ ಮಾಡಿರುವ ಅಜಿ ನದಿಯ ದಡದಲ್ಲಿ ಅಕ್ರಮ ಅತಿಕ್ರಮಣಗಳನ್ನು ತೆಗೆದುಹಾಕಲು ದೊಡ್ಡ ಪ್ರಮಾಣದ ನೆಲಸಮ ಕಾರ್ಯಾಚರಣೆಯ...

ಇಂಡಿಯಾ ಬಣದ ಸಂಚಾಲಕರಾಗಲು ಸ್ಟಾಲಿನ್ ಸೂಕ್ತ: ಮಣಿಶಂಕರ್ ಅಯ್ಯರ್

"ಡಿಎಂಕೆ ಮುಖ್ಯಸ್ಥ ಎಂಕೆ ಸ್ಟಾಲಿನ್ ಅವರು ಇಂಡಿಯಾ ಬಣದ ಸಂಚಾಲಕರಾಗಲು ಸೂಕ್ತ" ಎಂದು ಹಿರಿಯ ಕಾಂಗ್ರೆಸ್ ನಾಯಕ ಮಣಿಶಂಕರ್ ಅಯ್ಯರ್ ಪ್ರತಿಪಾದಿಸಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಅಯ್ಯರ್, ತಮಿಳುನಾಡು ಮುಖ್ಯಮಂತ್ರಿ ಇಂಡಿಯಾ ಬಣದ ಸಂಚಾಲಕರಾಗಲು ಉತ್ತಮ...

ಬೆಂಗಳೂರು: ಮತ್ತು ಬೆರೆಸಿದ ಪಾನೀಯ ನೀಡಿ ಗೆಳೆಯ ಮತ್ತು ಆತನ ಸ್ನೇಹಿತನಿಂದ ಅತ್ಯಾಚಾರ, ಬೆದರಿಕೆ: ಕಾಲೇಜು ವಿದ್ಯಾರ್ಥಿನಿಯಿಂದ ದೂರು

19 ವರ್ಷದ ಖಾಸಗಿ ಕಾಲೇಜು ವಿದ್ಯಾರ್ಥಿನಿಯೊಬ್ಬಳು ತನ್ನ ಗೆಳೆಯ ಮತ್ತು ಅವನ ಸ್ನೇಹಿತನ ವಿರುದ್ಧ ಮಾದಕ ದ್ರವ್ಯ ಸೇವಿಸಿ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ದೂರು ದಾಖಲಿಸಿದ್ದಾಳೆ. ಜಕ್ಕೂರಿನಲ್ಲಿ ಈ ಘಟನೆ ನಡೆದಿದ್ದು, ವಿದ್ಯಾರ್ಥಿನಿಗೆ...

ಮಕ್ಕಳಲ್ಲಿ ಹಿಂಸಾತ್ಮಕ ಪ್ರವೃತ್ತಿ ತಡೆಯಲು ಮೀನು-ಮಾಂಸ ಮಾರಾಟ ನಿಷೇಧ: ಬಿಹಾರ ಉಪಮುಖ್ಯಮಂತ್ರಿ

ಮಕ್ಕಳಲ್ಲಿ 'ಹಿಂಸಾತ್ಮಕ ಪ್ರವೃತ್ತಿ'ಗಳನ್ನು ನಿಲ್ಲಿಸುವ ಪ್ರಯತ್ನದಲ್ಲಿ ಧಾರ್ಮಿಕ ಸ್ಥಳಗಳು, ಶಿಕ್ಷಣ ಸಂಸ್ಥೆಗಳು ಅಥವಾ ಜನದಟ್ಟಣೆಯ ಸ್ಥಳಗಳ ಬಳಿ ಮಾಂಸ ಮತ್ತು ಮೀನು ಮಾರಾಟವನ್ನು ನಿಷೇಧಿಸುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಬಿಹಾರ ಉಪಮುಖ್ಯಮಂತ್ರಿ ವಿಜಯ್...

ದೆಹಲಿಯಲ್ಲಿ ಅರುಣಾಚಲದ ಮಹಿಳೆಯರಿಗೆ ಜನಾಂಗೀಯ ನಿಂದನೆ : ಪ್ರಕರಣ ದಾಖಲು

ದೆಹಲಿಯ ಮಾಳವೀಯ ನಗರದಲ್ಲಿ ಅರುಣಾಚಲ ಪ್ರದೇಶದ ಮೂವರು ಮಹಿಳೆಯರಿಗೆ ಜನಾಂಗೀಯ ನಿಂದನೆ ಮಾಡಿ, ಕಿರುಕುಳ ನೀಡಿದ ಆರೋಪ ಕೇಳಿ ಬಂದಿದೆ. ಫೆಬ್ರವರಿ 20 ಎಸಿ ದುರಸ್ತಿ ಸಂದರ್ಭದಲ್ಲಿ ಉಂಟಾದ ಸಣ್ಣ ಜಗಳವೊಂದು ಜನಾಂಗೀಯ ನಿಂದನೆಗೆ...

ಹಿಂದುತ್ವ ಗುಂಪಿನಿಂದ ಮುಸ್ಲಿಂ ವ್ಯಕ್ತಿಯನ್ನು ರಕ್ಷಿಸಿದ್ದ ಜಿಮ್ ಟ್ರೈನರ್ ‘ಮೊಹಮ್ಮದ್ ದೀಪಕ್’ ಅವರನ್ನು ಭೇಟಿಯಾದ ರಾಹುಲ್ ಗಾಂಧಿ 

ನವದೆಹಲಿ: ಕಳೆದ ತಿಂಗಳು ಕೋಟ್ದ್ವಾರದಲ್ಲಿರುವ ಅಹ್ಮದ್ ಅವರ ಬಾಬಾ ಸ್ಕೂಲ್ ಡ್ರೆಸ್ & ಮ್ಯಾಚಿಂಗ್ ಸೆಂಟರ್‌ನ ರಕ್ಷಣೆಗೆ ಬಂದು ಸುದ್ದಿಯಲ್ಲಿದ್ದ ಜಿಮ್ ತರಬೇತುದಾರ ದೀಪಕ್ ಅವರನ್ನು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್...

‘ಸಂಘದವರ ಚಡ್ಡಿಗಳನ್ನು ತಲೆ ಮೇಲೆ ಹೊರುವುದು ದಲಿತತ್ವವಲ್ಲ..’; ಛಲವಾದಿಗೆ ಸಚಿವ ಪ್ರಿಯಾಂಕ್‌ ತಿರುಗೇಟು

"ಸಂವಿಧಾನ ವಿರೋಧಿಸಿ ಕರಡು ಪ್ರತಿಯನ್ನು ಸುಟ್ಟಿದ್ದ ಸಂಘದವರ ಚಡ್ಡಿಗಳನ್ನು ತಲೆ ಮೇಲೆ ಹೊರುವುದು ದಲಿತತ್ವವಲ್ಲ" ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರಿಗೆ ಸಚಿವ ಪ್ರಿಯಾಂಕ್‌ ಖರ್ಗೆ ತಿರುಗೇಟು ನೀಡಿದ್ದಾರೆ. ಈ ಬಗ್ಗೆ...

ಅಮೆರಿಕದಿಂದ ದಾಳಿ ಬೆದರಿಕೆ : ಇರಾನ್ ತೊರೆಯುವಂತೆ ಭಾರತೀಯ ಪ್ರಜೆಗಳಿಗೆ ಸೂಚನೆ

ಅಮೆರಿಕದ ದಾಳಿ ಬೆದರಿಕೆ ಹಾಗೂ ಮತ್ತೆ ಪ್ರತಿಭಟನೆಗಳು ಭುಗಿಲೆದ್ದಿರುವ ಕಾರಣ, ಇರಾನ್‌ನಲ್ಲಿರುವ ಎಲ್ಲಾ ಭಾರತೀಯರು ವಾಣಿಜ್ಯ ವಿಮಾನಗಳು ಸೇರಿದಂತೆ ಲಭ್ಯವಿರುವ ಸಾರಿಗೆ ವ್ಯವಸ್ಥೆಯ ಮೂಲಕ ತಕ್ಷಣ ದೇಶ ತೊರೆಯುವಂತೆ ತೆಹ್ರಾನ್‌ನಲ್ಲಿರುವ ಭಾರತೀಯ ರಾಯಭಾರ...

ಆರ್‌ಟಿಐ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ವಿರುದ್ಧ ಮತ್ತೊಂದು ಎಫ್‌ಐಆರ್

ಕೇಂದ್ರ ಅಪರಾಧ ಶಾಖೆ (ಸಿಸಿಬಿ) ವಶಕ್ಕೆ ಪಡೆದು ವಿಚಾರಣೆ ನಡೆಸಿದ ಕೆಲವು ದಿನಗಳ ನಂತರ, ಆರ್‌ಟಿಐ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ವಿರುದ್ಧ ಮತ್ತೊಂದು ಎಫ್‌ಐಆರ್ ದಾಖಲಾಗಿದೆ.  ಪವಿತ್ರಾ ಬಿ.ಎನ್ ಸಲ್ಲಿಸಿದ ದೂರಿನ ಆಧಾರದ ಮೇಲೆ...