Homeಮುಖಪುಟನೊಬೆಲ್ ಸಾಹಿತ್ಯ 2022; ಅಕ್ಷರ ಲೋಕದ ಪುರಾತತ್ವಜ್ಞೆ ಆನಿ ಎರ್ನೊ

ನೊಬೆಲ್ ಸಾಹಿತ್ಯ 2022; ಅಕ್ಷರ ಲೋಕದ ಪುರಾತತ್ವಜ್ಞೆ ಆನಿ ಎರ್ನೊ

- Advertisement -
- Advertisement -

ಎಡುವರ್ಡೋ ಗೆಲಿಯಾನೊ ಲ್ಯಾಟಿನ್ ಅಮೆರಿಕದ ಶ್ರೇಷ್ಠ ಬರಹಗಾರ. ಆತನನ್ನು ಕನ್ನಡಕ್ಕೆ ತಂದು ಪರಿಚಯಿಸಿದ್ದು ಕೆ ಪಿ ಸುರೇಶ್. ಬೆಂಕಿಯ ನೆನಪು ಎಂಬ ಪುಟ್ಟ ಪುಸ್ತಕದ ಇತಿಹಾಸ ಮತ್ತು ಜನರ ಸ್ಮೃತಿಯ ಕುರಿತು ಹೊಸ ಚಿಂತನೆಯ ಕಿಡಿ ಹೊತ್ತಿಸಿತ್ತು.

ನಾಲ್ಕು ದಿನಗಳ ಹಿಂದೆ 2022ರ ನೊಬೆಲ್ ಸಾಹಿತ್ಯ ಪುರಸ್ಕಾರ ಘೋಷಣೆಯಾದಾಗ ನನಗೆ ಗೆಲಿಯಾನೊ ನೆನಪಾದ. ಫ್ರೆಂಚ್ ಕಾದಂಬರಿಕಾರ್ತಿ, ಲೇಖಕಿ ಆನಿ ಎರ್ನೊಗೆ ಈ ಬಾರಿಯ ಪ್ರಶಸ್ತಿ ಲಭಿಸಿದೆ. ಪ್ರಶಸ್ತಿ ಘೋಷಿಸುತ್ತಾ, ಸ್ವೀಡಿಷ್ ಅಕಾಡೆಮಿ, ವ್ಯಕ್ತಿಗತ ನೆನಪುಗಳನ್ನು ದಾಖಲಿಸುವ ವಿಶಿಷ್ಟ ಬರವಣಿಗೆ ಕುರಿತು ಮೆಚ್ಚುಗೆ ವ್ಯಕ್ತಪಡಿಸಿತ್ತು.

ಹಿಂದೆ ನಡೆದಿದ್ದನ್ನು ನಾವು ನೆನಪಿಸಿಕೊಳ್ಳುತ್ತೇವೆ. ಇತಿಹಾಸದ ಹೆಸರಿನಲ್ಲಿ ದಾಖಲಾಗುವ ಹಲವು ಹಿತಾಸಕ್ತಿಗಳು ಆ ನೆನಪುಗಳ ಹಿಂದಿರುತ್ತವೆ. ಹಾಗಾಗಿ ಆ ಇತಿಹಾಸಕ್ಕೆ ಬಹು ಆಯಾಮಗಳಿರುತ್ತವೆಯೇ ಎಂಬ ಅನುಮಾನ ಎಂದಿಗೂ ಉಳಿದಿರುತ್ತದೆ. ಅದಕ್ಕೆ ಗೆಲಿಯಾನೊ, ಜನರ ಇತಿಹಾಸ ದಾಖಲಾಗಬೇಕೆಂದು ವಾದಿಸಿ, ಅದನ್ನು ’ಮೆಮೊರಿ ಆಫ್ ಫೈರ್’, ’ಮಿರರ್’ ಪುಸ್ತಕಗಳಲ್ಲಿ ಗಟ್ಟಿಯಾಗಿ ಪ್ರತಿಪಾದಿಸಿದ.

ಗೆಲಿಯಾನೊ ಹೇಳಿದ ಆ ಜನರ ಇತಿಹಾಸಕ್ಕೂ, ಆನಿ ಅವರು ತಮ್ಮ ವ್ಯಕ್ತಿಗತ ನೆನಪುಗಳನ್ನು ದಾಖಲಿಸುವುದಕ್ಕೂ ಸಾಮ್ಯತೆ ಇರಬಹುದೆ ಎಂಬ ಕುತೂಹಲ ನನ್ನನ್ನು ಕಾಡಲಾರಂಭಿಸಿತ್ತು. ಏಳು ದಶಕಗಳ ಕಾಲ ಫ್ರಾನ್ಸಿನ ಬದುಕುಗಳನ್ನು ನೋಡುತ್ತಾ, ಅಲ್ಲಿನ ಆಗು ಹೋಗುಗಳನ್ನು ದಾಖಲಿಸಿರುವ ಆನಿ ಸಾಮಾನ್ಯರ ಚರಿತ್ರೆಯನ್ನೇ ದಾಖಲಿಸಿದ್ದಾರೆಂದು ಹೇಳುವುದರಲ್ಲಿ ತಪ್ಪಿಲ್ಲ ಅನ್ನಿಸುತ್ತದೆ. ಅದಕ್ಕೆ ಆಕೆಯನ್ನು ಫ್ರಾನ್ಸಿನ ಸಮುದಾಯಗಳ ಸ್ಮೃತಿಗಳ ರಕ್ಷಕಿ ಎಂದು ಕರೆದಿರುವುದು.

ಸಂದರ್ಶನವೊಂದರಲ್ಲಿ ಮಾತನಾಡುತ್ತಾ, ಕಾಲಘಟ್ಟದ ಕಥನದಲ್ಲಿ ತಾನಿದ್ದೂ ಇಲ್ಲದಂತೆ ದಾಖಲಿಸುವ ಈ ವಿಶಿಷ್ಟ ಬರವಣಿಗೆಯ ಕುರಿತು ಮಾತನಾಡುತ್ತಾ ಆನಿ, “ಒಂದು ಕಾಲಘಟ್ಟದಲ್ಲಿ ಬದುಕಿನ ಹೆಣ್ಣಿನ ಕಥೆಯನ್ನ ಹೇಳಬೇಕೆಂದುಕೊಂಡಿದ್ದೆ. ಆದರೆ ಅದನ್ನು ಹೇಗೆ ಹೇಳುವುದು ಎಂದು ತಿಳಿದಿರಲಿಲ್ಲ. ಆಕೆಯನ್ನು ಹೊರಗಿಟ್ಟು ಕತೆ ಹೇಳಲು ಹೊರಟಿದ್ದರೆ, ಅದು ಇತಿಹಾಸವಾಗುತ್ತಿತ್ತು. ನಾನು ಬರೆಯುವ ಕಥನದಲ್ಲಿ ಅಂತಃಶಕ್ತಿ ಇರಬೇಕು ಎಂದು ನನಗೆ ಗಟ್ಟಿಯಾಗಿ ಅನ್ನಿಸುತ್ತಿತ್ತು. ನಾನು ಚಿತ್ರಗಳನ್ನು, ವ್ಯಕ್ತಿಗತವಾದ ಮತ್ತು ವ್ಯಕ್ತಿಗತವಲ್ಲದ ನೆನಪುಗಳನ್ನು ಸಂಗ್ರಹಿಸಲಾರಂಭಿಸಿದೆ. ಸಿನಿಮಾ, ಪುಸ್ತಕ, ಭಾವಗೀತೆಗಳು ಎಲ್ಲವನ್ನೂ ಸಂಗ್ರಹಿಸಲಾರಂಭಿಸಿದೆ. ಯಾರದ್ದು ಎಂದು ಹೇಳಲಿಲ್ಲ. ನಾನು ಈ ಜಗತ್ತಿಗೆ ಕಾಲಿಟ್ಟ ಸಂದರ್ಭದಿಂದ ಆರಂಭಿಸಿದೆ. ನನ್ನ ಬಗ್ಗೆ ನಾನು ಬರೆಯುತ್ತಿರಲಿಲ್ಲ. ನಿರೂಪಣೆಗಳ ಮೂಲಕ, ನನ್ನದೇ ಆದ ರೀತಿಯಲ್ಲಿ ತಿಳಿಯುವ ಮೂಲಕ, ನನ್ನದೇ ಆದ ರೀತಿಯಲ್ಲಿ ಜಗತ್ತನ್ನು ಎದುರುಗೊಳ್ಳುವ ಮೂಲಕ ಆದ ಅನುಭವಗಳನ್ನು ದಾಖಲಿಸಲಾರಂಭಿಸಿದೆ. ಒಬ್ಬ ವ್ಯಕ್ತಿಯ ಅನುಭವವಾಗಿರಲಿಲ್ಲ. ಇದು ಜನರ, ಕಾರ್ಮಿಕರ, ಹಳೆಯ ದಿನಗಳ ಇತಿಹಾಸವಾಗಿತ್ತು” ಎಂದು ವಿವರಿಸಿದ್ದರು.

ಆನಿ, ಕಾರ್ಮಿಕ ವರ್ಗದ ಕುಟುಂಬವೊಂದರಲ್ಲಿ ಜನಿಸಿದಾಕೆ. ತಂದೆ ತಾಯಿಯರಿಬ್ಬರು ಕೆಫೆ ಮತ್ತು ತರಕಾರಿ ಅಂಗಡಿ ನಡೆಸುತ್ತಿದ್ದರು. ಇಪ್ಪತ್ತನೆಯ ವಯಸ್ಸಿಗೆ ಲಂಡನ್ನಿಗೆ ಬಂದ ಆನಿ ಸಹಾಯಕಿಯಾಗಿ ಕೆಲಸ ಮಾಡಿದ್ದರು. ಈ ಸಂದರ್ಭದ ಅನುಭವಗಳನ್ನು ತನ್ನ ’ಎ ಗರ್ಲ್ಸ್ ಸ್ಟೋರಿ’ ಕಾದಂಬರಿಯಲ್ಲಿ ವಿವರಿಸಿದ್ದಾರೆ. ಫ್ರಾನ್ಸಿಗೆ ಮರಳಿ ವಿದ್ಯಾಭ್ಯಾಸ ಮುಂದುವರಿಸಿದ ಆನಿ, ಶಿಕ್ಷಕಿಯಾಗಿ ವೃತ್ತಿ ಆರಂಭಿಸಿದ್ದರು. ಓದು ಅಧ್ಯಯನ ಮುಂದುವರಿಸಿ, ನ್ಯಾಷನಲ್ ಸೆಂಟರ್ ಫಾರ್ ಡಿಸ್ಟನ್ಸ್ ಎಜುಕೇಷನ್ ಸೇರಿಕೊಂಡರು. ಇಲ್ಲಿಯೇ ಎರಡೂವರೆ ದಶಕಗಳ ಕಾಲ ಸೇವೆ ಸಲ್ಲಿಸಿದರು.

ಜೀವನದ ಈ ಎಲ್ಲ ಓಡಾಟಗಳ ನಡುವೆ ಬರವಣಿಗೆಯ ಹುಕಿ ಉಸಿರು ತುಂಬಿಕೊಂಡು ಬಂದಿದ್ದ ಆನಿಯವರ 34ನೇ ವಯಸ್ಸಿಗೆ. ಆಗ ಮೊದಲ ಕಾದಂಬರಿಯನ್ನು ಪ್ರಕಟಿಸಿದರು. ಬರವಣಿಗೆಯನ್ನೇ ತನ್ನ ಜೀವನದುದ್ದಕ್ಕೂ ಆರಿಸಿಕೊಳ್ಳಲಿರುವ ದಾರಿಯ ಸೂಚನೆ ಈ ಮೊದಲ ಕೃತಿಯಲ್ಲಿಯೇ ಇತ್ತು. ’ಕ್ಲೀನ್ಡ್ ಔಟ್’ ಹೆಸರಿನ ಈ ಮೊದಲ ಪ್ರಕಟಿತ ಪುಸ್ತಕ ಆತ್ಮಕಥಾ ಶೈಲಿಯ ಕಾದಂಬರಿಯಾಗಿತ್ತು. ನಂತರ ಬಂದ ’ಎ ಮ್ಯಾನ್ಸ್ ಲೈಫ್’ ಫ್ರಾನ್ಸಿನ ಪುಟ್ಟ ಪಟ್ಟಣದಲ್ಲಿ ತಂದೆಯೊಂದಿಗಿನ ಯುವತಿಯೊಬ್ಬಳ ಸಂಬಂಧವನ್ನು ಕಟ್ಟಿಕೊಟ್ಟರು. ಇಲ್ಲೂ ಆತ್ಮಕಥಾನಕ ಅಂಶಗಳೇ ಇದ್ದವು. ಶೈಲಿ ಮತ್ತು ಭಾಷೆಯ ಕಾರಣಕ್ಕೆ ಮೆಚ್ಚುಗೆ ಪಡೆದ ಈ ಕೃತಿ ಆನಿಯ ಸೃಜನಶೀಲ ಪ್ರಯೋಗವನ್ನು ಗಟ್ಟಿಯಾಗಿ ದಾಖಲಿಸಿತು.

ತನ್ನ ಪೋಷಕರ ಸಾಮಾಜಿಕ ಪ್ರಗತಿ, ಹರೆಯದ ದಿನಗಳು, ಮದುವೆ, ಪೂರ್ವ ಯುರೋಪಿನ ವ್ಯಕ್ತಿಯೊಂದಿಗೆ ಸಂಬಂಧ, ಗರ್ಭಪಾತ, ತನ್ನ ತಾಯಿಯ ಸಾವು, ಸ್ತನ ಕ್ಯಾನ್ಸರ್, ಹೀಗೆ ತನ್ನ ಬದುಕಿನ ಘಟ್ಟದ ತೀವ್ರ ಅನುಭವಗಳನ್ನು ಕಥನದ ಮೂಸೆಯಲ್ಲಿ ಕರಗಿಸಿ ಎರಕ ಹೊಯ್ದ ಆನಿ ನೆನಪುಗಳ ದಟ್ಟ ಅನುಭವವನ್ನು, ಬರವಣಿಗೆಯ ಮೂಲಕ ಆ ಕಾಲ, ಸಮಾಜದ ಅನುಭವವನ್ನಾಗಿಸಿ ಜಗತ್ತಿಗೆ ದಾಟಿಸಲಾರಂಭಿಸಿದರು. ಹೀಗೆ ವ್ಯಕ್ತಿಗತ ಅನುಭವಗಳನ್ನು ಬರೆಯುತ್ತಲೇ ದನಿಯಿಲ್ಲದ, ದಾಖಲಾದ ಎಷ್ಟೋ ಕತೆಗಳಿಗೆ ದನಿಯಾದರು.

ಆದರೆ ಹೀಗೆ ತನ್ನ ಬದುಕಿನ ಮೂಲಕ ಲೋಕದ ನೆನಪುಗಳನ್ನು ಹೆಕ್ಕಿ ತೆಗೆದು ದಾಖಲಿಸಿದ ಮೇಲೆ ಅವುಗಳನ್ನೇ ಅನುಮಾನಿಸುವುದು ಆನಿಯ ಇನ್ನೊಂದು ವೈಶಿಷ್ಟ್ಯ. ಇಪ್ಪತ್ತು ಕೃತಿಗಳನ್ನು ನೀಡಿರುವ ಆನಿ ವ್ಯಕ್ತಿಗತವಾದ ಬದುಕನ್ನು ದಾಖಲಿಸುತ್ತಿದ್ದರೂ, ಸಾಮಾಜಿಕ, ರಾಜಕೀಯ ಪರಿಸರವನ್ನು ಕಟ್ಟಿಕೊಟ್ಟಿದ್ದಾರೆ. ಉತ್ಖನನದಲ್ಲಿ ಸಿಕ್ಕುವ ಪ್ರತಿ ವಸ್ತುವು ಐತಿಹಾಸಿಕ ಕಾಲಘಟ್ಟದ ಹೊಸ ಮಗ್ಗಲನ್ನು ಅರಿಯುವಂತೆ ಮಾಡುವ ರೀತಿಯಲ್ಲೇ, ಆನಿಯ ಕಥನಗಳು ಬಿಚ್ಚಿಕೊಳ್ಳುತ್ತವೆ. ಹಾಗಾಗಿ ಆಕೆಯನ್ನು ಅಕ್ಷರ ಲೋಕದ ಪುರಾತತ್ವಶಾಸ್ತ್ರಜ್ಞೆ ಎಂದಿರುವುದು.

ಬರವಣಿಗೆಯ ಮೂಲಕ ಮುಕ್ತಿ ಹೊಂದುವ ಕ್ರಿಯೆ ಅತ್ಯಂತ ಸಂಕೀರ್ಣವಾದದ್ದು ಎನ್ನುವ ಆನಿ, ವ್ಯಕ್ತಿಗತ ಸತ್ಯದ ಹುಡುಕಾಟದ ಬಗ್ಗೆ ಅಪಾರ ಆಸ್ಥೆ, ಕುತೂಹಲದಿಂದ ತೊಡಗಿಸಿಕೊಳ್ಳುತ್ತಾ ಬಂದಿದ್ದಾರೆ. ಅವರ ಒಟ್ಟು ಸೃಜನಶೀಲ ಪಯಣದ ಹಿಂದಿರುವ ಚೈತನ್ಯ, ಸ್ಫೂರ್ತಿ ಈ ಕುತೂಹಲವೇ ಆಗಿದೆ.

ಎಸ್ ಕುಮಾರ್

ಎಸ್ ಕುಮಾರ್
ಸಂಪಾದಕರು ಈದಿನ.ಕಾಂ


ಇದನ್ನೂ ಓದಿ: ಅಲೈನ್ ಆಸ್ಪೆಕ್ಟ್, ಜಾನ್ ಎಫ್. ಕ್ಲೌಸರ್, ಆಂಟನ್ ಝೈಲಿಂಗರ್‌ರವರಿಗೆ 2022ರ ಭೌತಶಾಸ್ತ್ರದ ನೊಬೆಲ್ ಪ್ರಶಸ್ತಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...