Homeಮುಖಪುಟನೊಬೆಲ್ ಸಾಹಿತ್ಯ 2022; ಅಕ್ಷರ ಲೋಕದ ಪುರಾತತ್ವಜ್ಞೆ ಆನಿ ಎರ್ನೊ

ನೊಬೆಲ್ ಸಾಹಿತ್ಯ 2022; ಅಕ್ಷರ ಲೋಕದ ಪುರಾತತ್ವಜ್ಞೆ ಆನಿ ಎರ್ನೊ

- Advertisement -
- Advertisement -

ಎಡುವರ್ಡೋ ಗೆಲಿಯಾನೊ ಲ್ಯಾಟಿನ್ ಅಮೆರಿಕದ ಶ್ರೇಷ್ಠ ಬರಹಗಾರ. ಆತನನ್ನು ಕನ್ನಡಕ್ಕೆ ತಂದು ಪರಿಚಯಿಸಿದ್ದು ಕೆ ಪಿ ಸುರೇಶ್. ಬೆಂಕಿಯ ನೆನಪು ಎಂಬ ಪುಟ್ಟ ಪುಸ್ತಕದ ಇತಿಹಾಸ ಮತ್ತು ಜನರ ಸ್ಮೃತಿಯ ಕುರಿತು ಹೊಸ ಚಿಂತನೆಯ ಕಿಡಿ ಹೊತ್ತಿಸಿತ್ತು.

ನಾಲ್ಕು ದಿನಗಳ ಹಿಂದೆ 2022ರ ನೊಬೆಲ್ ಸಾಹಿತ್ಯ ಪುರಸ್ಕಾರ ಘೋಷಣೆಯಾದಾಗ ನನಗೆ ಗೆಲಿಯಾನೊ ನೆನಪಾದ. ಫ್ರೆಂಚ್ ಕಾದಂಬರಿಕಾರ್ತಿ, ಲೇಖಕಿ ಆನಿ ಎರ್ನೊಗೆ ಈ ಬಾರಿಯ ಪ್ರಶಸ್ತಿ ಲಭಿಸಿದೆ. ಪ್ರಶಸ್ತಿ ಘೋಷಿಸುತ್ತಾ, ಸ್ವೀಡಿಷ್ ಅಕಾಡೆಮಿ, ವ್ಯಕ್ತಿಗತ ನೆನಪುಗಳನ್ನು ದಾಖಲಿಸುವ ವಿಶಿಷ್ಟ ಬರವಣಿಗೆ ಕುರಿತು ಮೆಚ್ಚುಗೆ ವ್ಯಕ್ತಪಡಿಸಿತ್ತು.

ಹಿಂದೆ ನಡೆದಿದ್ದನ್ನು ನಾವು ನೆನಪಿಸಿಕೊಳ್ಳುತ್ತೇವೆ. ಇತಿಹಾಸದ ಹೆಸರಿನಲ್ಲಿ ದಾಖಲಾಗುವ ಹಲವು ಹಿತಾಸಕ್ತಿಗಳು ಆ ನೆನಪುಗಳ ಹಿಂದಿರುತ್ತವೆ. ಹಾಗಾಗಿ ಆ ಇತಿಹಾಸಕ್ಕೆ ಬಹು ಆಯಾಮಗಳಿರುತ್ತವೆಯೇ ಎಂಬ ಅನುಮಾನ ಎಂದಿಗೂ ಉಳಿದಿರುತ್ತದೆ. ಅದಕ್ಕೆ ಗೆಲಿಯಾನೊ, ಜನರ ಇತಿಹಾಸ ದಾಖಲಾಗಬೇಕೆಂದು ವಾದಿಸಿ, ಅದನ್ನು ’ಮೆಮೊರಿ ಆಫ್ ಫೈರ್’, ’ಮಿರರ್’ ಪುಸ್ತಕಗಳಲ್ಲಿ ಗಟ್ಟಿಯಾಗಿ ಪ್ರತಿಪಾದಿಸಿದ.

ಗೆಲಿಯಾನೊ ಹೇಳಿದ ಆ ಜನರ ಇತಿಹಾಸಕ್ಕೂ, ಆನಿ ಅವರು ತಮ್ಮ ವ್ಯಕ್ತಿಗತ ನೆನಪುಗಳನ್ನು ದಾಖಲಿಸುವುದಕ್ಕೂ ಸಾಮ್ಯತೆ ಇರಬಹುದೆ ಎಂಬ ಕುತೂಹಲ ನನ್ನನ್ನು ಕಾಡಲಾರಂಭಿಸಿತ್ತು. ಏಳು ದಶಕಗಳ ಕಾಲ ಫ್ರಾನ್ಸಿನ ಬದುಕುಗಳನ್ನು ನೋಡುತ್ತಾ, ಅಲ್ಲಿನ ಆಗು ಹೋಗುಗಳನ್ನು ದಾಖಲಿಸಿರುವ ಆನಿ ಸಾಮಾನ್ಯರ ಚರಿತ್ರೆಯನ್ನೇ ದಾಖಲಿಸಿದ್ದಾರೆಂದು ಹೇಳುವುದರಲ್ಲಿ ತಪ್ಪಿಲ್ಲ ಅನ್ನಿಸುತ್ತದೆ. ಅದಕ್ಕೆ ಆಕೆಯನ್ನು ಫ್ರಾನ್ಸಿನ ಸಮುದಾಯಗಳ ಸ್ಮೃತಿಗಳ ರಕ್ಷಕಿ ಎಂದು ಕರೆದಿರುವುದು.

ಸಂದರ್ಶನವೊಂದರಲ್ಲಿ ಮಾತನಾಡುತ್ತಾ, ಕಾಲಘಟ್ಟದ ಕಥನದಲ್ಲಿ ತಾನಿದ್ದೂ ಇಲ್ಲದಂತೆ ದಾಖಲಿಸುವ ಈ ವಿಶಿಷ್ಟ ಬರವಣಿಗೆಯ ಕುರಿತು ಮಾತನಾಡುತ್ತಾ ಆನಿ, “ಒಂದು ಕಾಲಘಟ್ಟದಲ್ಲಿ ಬದುಕಿನ ಹೆಣ್ಣಿನ ಕಥೆಯನ್ನ ಹೇಳಬೇಕೆಂದುಕೊಂಡಿದ್ದೆ. ಆದರೆ ಅದನ್ನು ಹೇಗೆ ಹೇಳುವುದು ಎಂದು ತಿಳಿದಿರಲಿಲ್ಲ. ಆಕೆಯನ್ನು ಹೊರಗಿಟ್ಟು ಕತೆ ಹೇಳಲು ಹೊರಟಿದ್ದರೆ, ಅದು ಇತಿಹಾಸವಾಗುತ್ತಿತ್ತು. ನಾನು ಬರೆಯುವ ಕಥನದಲ್ಲಿ ಅಂತಃಶಕ್ತಿ ಇರಬೇಕು ಎಂದು ನನಗೆ ಗಟ್ಟಿಯಾಗಿ ಅನ್ನಿಸುತ್ತಿತ್ತು. ನಾನು ಚಿತ್ರಗಳನ್ನು, ವ್ಯಕ್ತಿಗತವಾದ ಮತ್ತು ವ್ಯಕ್ತಿಗತವಲ್ಲದ ನೆನಪುಗಳನ್ನು ಸಂಗ್ರಹಿಸಲಾರಂಭಿಸಿದೆ. ಸಿನಿಮಾ, ಪುಸ್ತಕ, ಭಾವಗೀತೆಗಳು ಎಲ್ಲವನ್ನೂ ಸಂಗ್ರಹಿಸಲಾರಂಭಿಸಿದೆ. ಯಾರದ್ದು ಎಂದು ಹೇಳಲಿಲ್ಲ. ನಾನು ಈ ಜಗತ್ತಿಗೆ ಕಾಲಿಟ್ಟ ಸಂದರ್ಭದಿಂದ ಆರಂಭಿಸಿದೆ. ನನ್ನ ಬಗ್ಗೆ ನಾನು ಬರೆಯುತ್ತಿರಲಿಲ್ಲ. ನಿರೂಪಣೆಗಳ ಮೂಲಕ, ನನ್ನದೇ ಆದ ರೀತಿಯಲ್ಲಿ ತಿಳಿಯುವ ಮೂಲಕ, ನನ್ನದೇ ಆದ ರೀತಿಯಲ್ಲಿ ಜಗತ್ತನ್ನು ಎದುರುಗೊಳ್ಳುವ ಮೂಲಕ ಆದ ಅನುಭವಗಳನ್ನು ದಾಖಲಿಸಲಾರಂಭಿಸಿದೆ. ಒಬ್ಬ ವ್ಯಕ್ತಿಯ ಅನುಭವವಾಗಿರಲಿಲ್ಲ. ಇದು ಜನರ, ಕಾರ್ಮಿಕರ, ಹಳೆಯ ದಿನಗಳ ಇತಿಹಾಸವಾಗಿತ್ತು” ಎಂದು ವಿವರಿಸಿದ್ದರು.

ಆನಿ, ಕಾರ್ಮಿಕ ವರ್ಗದ ಕುಟುಂಬವೊಂದರಲ್ಲಿ ಜನಿಸಿದಾಕೆ. ತಂದೆ ತಾಯಿಯರಿಬ್ಬರು ಕೆಫೆ ಮತ್ತು ತರಕಾರಿ ಅಂಗಡಿ ನಡೆಸುತ್ತಿದ್ದರು. ಇಪ್ಪತ್ತನೆಯ ವಯಸ್ಸಿಗೆ ಲಂಡನ್ನಿಗೆ ಬಂದ ಆನಿ ಸಹಾಯಕಿಯಾಗಿ ಕೆಲಸ ಮಾಡಿದ್ದರು. ಈ ಸಂದರ್ಭದ ಅನುಭವಗಳನ್ನು ತನ್ನ ’ಎ ಗರ್ಲ್ಸ್ ಸ್ಟೋರಿ’ ಕಾದಂಬರಿಯಲ್ಲಿ ವಿವರಿಸಿದ್ದಾರೆ. ಫ್ರಾನ್ಸಿಗೆ ಮರಳಿ ವಿದ್ಯಾಭ್ಯಾಸ ಮುಂದುವರಿಸಿದ ಆನಿ, ಶಿಕ್ಷಕಿಯಾಗಿ ವೃತ್ತಿ ಆರಂಭಿಸಿದ್ದರು. ಓದು ಅಧ್ಯಯನ ಮುಂದುವರಿಸಿ, ನ್ಯಾಷನಲ್ ಸೆಂಟರ್ ಫಾರ್ ಡಿಸ್ಟನ್ಸ್ ಎಜುಕೇಷನ್ ಸೇರಿಕೊಂಡರು. ಇಲ್ಲಿಯೇ ಎರಡೂವರೆ ದಶಕಗಳ ಕಾಲ ಸೇವೆ ಸಲ್ಲಿಸಿದರು.

ಜೀವನದ ಈ ಎಲ್ಲ ಓಡಾಟಗಳ ನಡುವೆ ಬರವಣಿಗೆಯ ಹುಕಿ ಉಸಿರು ತುಂಬಿಕೊಂಡು ಬಂದಿದ್ದ ಆನಿಯವರ 34ನೇ ವಯಸ್ಸಿಗೆ. ಆಗ ಮೊದಲ ಕಾದಂಬರಿಯನ್ನು ಪ್ರಕಟಿಸಿದರು. ಬರವಣಿಗೆಯನ್ನೇ ತನ್ನ ಜೀವನದುದ್ದಕ್ಕೂ ಆರಿಸಿಕೊಳ್ಳಲಿರುವ ದಾರಿಯ ಸೂಚನೆ ಈ ಮೊದಲ ಕೃತಿಯಲ್ಲಿಯೇ ಇತ್ತು. ’ಕ್ಲೀನ್ಡ್ ಔಟ್’ ಹೆಸರಿನ ಈ ಮೊದಲ ಪ್ರಕಟಿತ ಪುಸ್ತಕ ಆತ್ಮಕಥಾ ಶೈಲಿಯ ಕಾದಂಬರಿಯಾಗಿತ್ತು. ನಂತರ ಬಂದ ’ಎ ಮ್ಯಾನ್ಸ್ ಲೈಫ್’ ಫ್ರಾನ್ಸಿನ ಪುಟ್ಟ ಪಟ್ಟಣದಲ್ಲಿ ತಂದೆಯೊಂದಿಗಿನ ಯುವತಿಯೊಬ್ಬಳ ಸಂಬಂಧವನ್ನು ಕಟ್ಟಿಕೊಟ್ಟರು. ಇಲ್ಲೂ ಆತ್ಮಕಥಾನಕ ಅಂಶಗಳೇ ಇದ್ದವು. ಶೈಲಿ ಮತ್ತು ಭಾಷೆಯ ಕಾರಣಕ್ಕೆ ಮೆಚ್ಚುಗೆ ಪಡೆದ ಈ ಕೃತಿ ಆನಿಯ ಸೃಜನಶೀಲ ಪ್ರಯೋಗವನ್ನು ಗಟ್ಟಿಯಾಗಿ ದಾಖಲಿಸಿತು.

ತನ್ನ ಪೋಷಕರ ಸಾಮಾಜಿಕ ಪ್ರಗತಿ, ಹರೆಯದ ದಿನಗಳು, ಮದುವೆ, ಪೂರ್ವ ಯುರೋಪಿನ ವ್ಯಕ್ತಿಯೊಂದಿಗೆ ಸಂಬಂಧ, ಗರ್ಭಪಾತ, ತನ್ನ ತಾಯಿಯ ಸಾವು, ಸ್ತನ ಕ್ಯಾನ್ಸರ್, ಹೀಗೆ ತನ್ನ ಬದುಕಿನ ಘಟ್ಟದ ತೀವ್ರ ಅನುಭವಗಳನ್ನು ಕಥನದ ಮೂಸೆಯಲ್ಲಿ ಕರಗಿಸಿ ಎರಕ ಹೊಯ್ದ ಆನಿ ನೆನಪುಗಳ ದಟ್ಟ ಅನುಭವವನ್ನು, ಬರವಣಿಗೆಯ ಮೂಲಕ ಆ ಕಾಲ, ಸಮಾಜದ ಅನುಭವವನ್ನಾಗಿಸಿ ಜಗತ್ತಿಗೆ ದಾಟಿಸಲಾರಂಭಿಸಿದರು. ಹೀಗೆ ವ್ಯಕ್ತಿಗತ ಅನುಭವಗಳನ್ನು ಬರೆಯುತ್ತಲೇ ದನಿಯಿಲ್ಲದ, ದಾಖಲಾದ ಎಷ್ಟೋ ಕತೆಗಳಿಗೆ ದನಿಯಾದರು.

ಆದರೆ ಹೀಗೆ ತನ್ನ ಬದುಕಿನ ಮೂಲಕ ಲೋಕದ ನೆನಪುಗಳನ್ನು ಹೆಕ್ಕಿ ತೆಗೆದು ದಾಖಲಿಸಿದ ಮೇಲೆ ಅವುಗಳನ್ನೇ ಅನುಮಾನಿಸುವುದು ಆನಿಯ ಇನ್ನೊಂದು ವೈಶಿಷ್ಟ್ಯ. ಇಪ್ಪತ್ತು ಕೃತಿಗಳನ್ನು ನೀಡಿರುವ ಆನಿ ವ್ಯಕ್ತಿಗತವಾದ ಬದುಕನ್ನು ದಾಖಲಿಸುತ್ತಿದ್ದರೂ, ಸಾಮಾಜಿಕ, ರಾಜಕೀಯ ಪರಿಸರವನ್ನು ಕಟ್ಟಿಕೊಟ್ಟಿದ್ದಾರೆ. ಉತ್ಖನನದಲ್ಲಿ ಸಿಕ್ಕುವ ಪ್ರತಿ ವಸ್ತುವು ಐತಿಹಾಸಿಕ ಕಾಲಘಟ್ಟದ ಹೊಸ ಮಗ್ಗಲನ್ನು ಅರಿಯುವಂತೆ ಮಾಡುವ ರೀತಿಯಲ್ಲೇ, ಆನಿಯ ಕಥನಗಳು ಬಿಚ್ಚಿಕೊಳ್ಳುತ್ತವೆ. ಹಾಗಾಗಿ ಆಕೆಯನ್ನು ಅಕ್ಷರ ಲೋಕದ ಪುರಾತತ್ವಶಾಸ್ತ್ರಜ್ಞೆ ಎಂದಿರುವುದು.

ಬರವಣಿಗೆಯ ಮೂಲಕ ಮುಕ್ತಿ ಹೊಂದುವ ಕ್ರಿಯೆ ಅತ್ಯಂತ ಸಂಕೀರ್ಣವಾದದ್ದು ಎನ್ನುವ ಆನಿ, ವ್ಯಕ್ತಿಗತ ಸತ್ಯದ ಹುಡುಕಾಟದ ಬಗ್ಗೆ ಅಪಾರ ಆಸ್ಥೆ, ಕುತೂಹಲದಿಂದ ತೊಡಗಿಸಿಕೊಳ್ಳುತ್ತಾ ಬಂದಿದ್ದಾರೆ. ಅವರ ಒಟ್ಟು ಸೃಜನಶೀಲ ಪಯಣದ ಹಿಂದಿರುವ ಚೈತನ್ಯ, ಸ್ಫೂರ್ತಿ ಈ ಕುತೂಹಲವೇ ಆಗಿದೆ.

ಎಸ್ ಕುಮಾರ್

ಎಸ್ ಕುಮಾರ್
ಸಂಪಾದಕರು ಈದಿನ.ಕಾಂ


ಇದನ್ನೂ ಓದಿ: ಅಲೈನ್ ಆಸ್ಪೆಕ್ಟ್, ಜಾನ್ ಎಫ್. ಕ್ಲೌಸರ್, ಆಂಟನ್ ಝೈಲಿಂಗರ್‌ರವರಿಗೆ 2022ರ ಭೌತಶಾಸ್ತ್ರದ ನೊಬೆಲ್ ಪ್ರಶಸ್ತಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಧಾರವಾಡ | ಪ್ರಕಾಶ್ ರಾಜ್ ಭಾಗವಹಿಸಿದ್ದ ಸಮುದಾಯ ಕಾರ್ಯಕ್ರಮಕ್ಕೆ ಅಡ್ಡಿಪಡಿಸಲು ಯತ್ನ : ದೂರು ದಾಖಲು

ಭಾನುವಾರ (ಆ.30) ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ ಸಭಾ ಭವನದಲ್ಲಿ ಆಯೋಜಿಸಿದ್ದ ಸಮುದಾಯ ಸಂಘಟನೆಯ ಕಾರ್ಯಕ್ರಮಕ್ಕೆ ಅಡ್ಡಿಪಡಿಸಲು ಯತ್ನಿಸಿ ಗಲಾಟೆ ಎಬ್ಬಿಸಿದ ಬಿಜೆಪಿ-ಸಂಘಪರಿವಾರದ ಬೆಂಬಲಿಗರ ವಿರುದ್ಧ ದೂರು ದಾಖಲಿಸಲಾಗಿದೆ. ಸಮುದಾಯ ಸಂಘಟನೆಯ ಧಾರವಾಡದ...

ಚಲಿಸುತ್ತಿದ್ದ ಸ್ಲೀಪರ್ ಬಸ್‌ನಲ್ಲಿ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ : ಚಾಲಕ, ಕಂಡಕ್ಟರ್ ಬಂಧನ

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 2012ರಲ್ಲಿ ನಡೆದ ನಿರ್ಭಯಾ ಪ್ರಕರಣವನ್ನು ನೆನಪಿಸುವಂತಹ ಆಘಾತಕಾರಿ ಘಟನೆಯೊಂದು ನಡೆದಿದೆ. ಸ್ಲೀಪರ್‌ ಬಸ್‌ನಲ್ಲಿ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಲಾಗಿದೆ. indiatoday.in ವರದಿಯ ಪ್ರಕಾರ, ಈ ಘಟನೆಯು ಆಗಸ್ಟ್ 4ರ...

ಜಗತ್ತಿನ ಪ್ರತಿಯೊಬ್ಬರಿಗೂ ಲ್ಯಾಪ್‌ಟಾಪ್ ಕೊಳ್ಳುವಷ್ಟು ಕಪ್ಪು ಹಣ ಪ್ರಪಂಚದಲ್ಲಿದೆ: ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್

ಅಕ್ರಮ ಹಣ ವರ್ಗಾವಣೆ (Money Laundering) ಮತ್ತು 'ಡಿಜಿಟಲ್ ಅರೆಸ್ಟ್' ನಂತಹ ಆನ್‌ಲೈನ್ ವಂಚನೆಗಳ ಪ್ರಮಾಣದ ಕುರಿತು ಭಾರತದ ಮುಖ್ಯ ನ್ಯಾಯಮೂರ್ತಿ (CJI) ಸೂರ್ಯ ಕಾಂತ್ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಈ ರೀತಿಯ...

ಪೆಟ್ರೋಲ್‌ನಲ್ಲಿ ಎಥನಾಲ್ ಪ್ರಮಾಣ ಬಹಿರಂಗಪಡಿಸುವಂತೆ ಕೋರಿದ್ದ ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್

ಪೆಟ್ರೋಲ್‌ನಲ್ಲಿ ಬೆರೆಸಲಾಗುವ ಎಥನಾಲ್ ಪ್ರಮಾಣವನ್ನು ಕಡ್ಡಾಯವಾಗಿ ನಮೂದಿಸಬೇಕು ಮತ್ತು ವಾಹನಗಳಿಗೆ ಎಥನಾಲ್ ಮಿಶ್ರಿತ ಇಂಧನದ ಹೊಂದಾಣಿಕೆಯ ಬಗ್ಗೆ ಹೆಚ್ಚಿನ ಪಾರದರ್ಶಕತೆ ತರಬೇಕು ಎಂದು ಕೋರಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್‌) ವಿಚಾರಣೆ...

ದೆಹಲಿ| ಜಮಾ ಮಸೀದಿ ಸುತ್ತಮುತ್ತಲಿನ ಅಕ್ರಮ ಒತ್ತುವರಿ ತೆರವು ಕಾರ್ಯಾಚರಣೆ ಆರಂಭಿಸಿದ ಎಂಸಿಡಿ

ದೆಹಲಿ ಹೈಕೋರ್ಟ್ ನಿರ್ದೇಶನದಂತೆ, ಮೊಘಲರ ಕಾಲದ ಐತಿಹಾಸಿಕ ಜಮಾ ಮಸೀದಿ ಸುತ್ತಮುತ್ತಲಿನ ಅಕ್ರಮ ನಿರ್ಮಾಣಗಳನ್ನು ಸಮೀಕ್ಷೆ ಮಾಡಿ, ಒತ್ತುವರಿಯನ್ನು ತೆರವುಗೊಳಿಸುವ ಬೃಹತ್ ಕಾರ್ಯಾಚರಣೆಯನ್ನು ದೆಹಲಿ ಮಹಾನಗರ ಪಾಲಿಕೆ (ಎಂಸಿಡಿ) ಸೋಮವಾರ (ಆ.31) ಪ್ರಾರಂಭಿಸಿದೆ...

ವೆನೆಜುವೆಲಾ ಮತ್ತೆ ಎದ್ದು ನಿಲ್ಲಲಿದೆ: ಬಂಧನದಲ್ಲಿರುವ ವೆನೆಜುವೆಲಾ ಮಾಜಿ ಅಧ್ಯಕ್ಷ ಮಡುರೊ ಮೊದಲ ಫೋಟೋ ಹಂಚಿಕೆ

ಜನವರಿಯಲ್ಲಿ ಅಮೆರಿಕ ಪಡೆಗಳಿಂದ ಬಂಧನಕ್ಕೊಳಗಾಗಿದ್ದ ವೆನೆಜುವೆಲಾದ ಮಾಜಿ ಅಧ್ಯಕ್ಷ ನಿಕೋಲಸ್ ಮಡುರೊ, ಅಮೆರಿಕದ ಬಂಧನ ಕೇಂದ್ರದಿಂದ ತಮ್ಮ ಎರಡು ಛಾಯಾಚಿತ್ರಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ. ಬಂಧನದ ಬಳಿಕ ಮಡುರೊ ಅವರ ಫೋಟೋಗಳು ಹೊರಬಂದಿರುವುದು...

‘ಮಹಿಳೆಯರು ಆಭರಣದಂತೆ ಮನೆಯಲ್ಲೇ ಇರಬೇಕು’ ಮುಸ್ಲಿಂ ಧರ್ಮಗುರು ವಿವಾದಾತ್ಮಕ ಹೇಳಿಕೆ

ಮಹಿಳೆಯರು ಮನೆಯಲ್ಲೇ ಇರಬೇಕು ಮತ್ತು ಸಾರ್ವಜನಿಕ ಕ್ಷೇತ್ರಕ್ಕೆ ಪ್ರವೇಶಿಸಬಾರದು ಎಂದು ಕೇರಳದ ಪ್ರಭಾವಿ ಮುಸ್ಲಿಂ ಧರ್ಮಗುರು ಶೇಖ್ ಅಬೂಬಕರ್ ಅಹ್ಮದ್ ನೀಡಿದ ಹೇಳಿಕೆ ಸಾಮಾಜಿಕ ಮಾಧ್ಯಮಗಳಲ್ಲಿ ಹಾಗೂ ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆ...

ಹಲ್ದ್ವಾನಿ ‘ಶುದ್ಧೀಕರಣ’ ವಿವಾದ : ರಾಹುಲ್ ಗಾಂಧಿ ವಿರುದ್ಧ ಎಫ್‌ಐಆರ್

ಉತ್ತರಾಖಂಡದ ಹಲ್ದ್ವಾನಿಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ರ್‍ಯಾಲಿ ನಡೆದ ಸ್ಥಳದಲ್ಲಿ ಬಿಜೆಪಿ ಬೆಂಬಲಿಗರು 'ಶುದ್ಧೀಕರಣ' ನಡೆಸಿದ ವಿವಾದ ಹೊಸ ರಾಜಕೀಯ ಮತ್ತು ಕಾನೂನು ತಿರುವು ಪಡೆದುಕೊಂಡಿದೆ. ಜಾತಿ ನಿಂದನೆಗೆ ಸಂಬಂಧಿಸಿದಂತೆ...

ಜೈಲಿನಲ್ಲಿದ್ದ KPSC ಅಧ್ಯಕ್ಷರ ಭೇಟಿಯಾಗಿದ್ದೇಕೆ HDK? ಪ್ರಿಯಾಂಕ್ ಖರ್ಗೆ ಪ್ರಶ್ನೆ

ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ನೇಮಕಾತಿ ವಿಚಾರವಾಗಿ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ವಿರುದ್ಧ ಕೇಳಿಬಂದಿರುವ ಗಂಭೀರ ಆರೋಪಗಳಿಗೆ ಅವರು ತಾರ್ಕಿಕ ಸ್ಪಷ್ಟನೆ ನೀಡುವ ಬದಲು, ಜಾರಿಕೊಳ್ಳುವ ರೀತಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ್ದಾರೆ ಎಂದು...

ನೇಪಾಳ: ಶಿಕ್ಷಕನ ಸಮಯಪ್ರಜ್ಞೆಯಿಂದ ಉಳಿಯಿತು 1643 ಮಕ್ಕಳ ಪ್ರಾಣ

ನೇಪಾಳದ ರಸುವಾ ಜಿಲ್ಲೆಯಲ್ಲಿ ಸಂಭವಿಸಿದ ಭೀಕರ ಜಲಪ್ರಳಯಕ್ಕೆ ಬಲಿಯಾದವರ ಸಂಖ್ಯೆ 700ರ ಗಡಿ ದಾಟಿದೆ. 2,000ಕ್ಕೂ ಹೆಚ್ಚು ಜನರು ಇಂದಿಗೂ ನಾಪತ್ತೆಯಾಗಿದ್ದು, ರಕ್ಷಣಾ ಪಡೆಗಳು ಅವಿಶ್ರಾಂತವಾಗಿ ಶೋಧ ಕಾರ್ಯ ನಡೆಸುತ್ತಿವೆ. ಪ್ರಕೃತಿ ತನ್ನ...