Homeಮುಖಪುಟನೊಬೆಲ್ ಸಾಹಿತ್ಯ 2022; ಅಕ್ಷರ ಲೋಕದ ಪುರಾತತ್ವಜ್ಞೆ ಆನಿ ಎರ್ನೊ

ನೊಬೆಲ್ ಸಾಹಿತ್ಯ 2022; ಅಕ್ಷರ ಲೋಕದ ಪುರಾತತ್ವಜ್ಞೆ ಆನಿ ಎರ್ನೊ

- Advertisement -
- Advertisement -

ಎಡುವರ್ಡೋ ಗೆಲಿಯಾನೊ ಲ್ಯಾಟಿನ್ ಅಮೆರಿಕದ ಶ್ರೇಷ್ಠ ಬರಹಗಾರ. ಆತನನ್ನು ಕನ್ನಡಕ್ಕೆ ತಂದು ಪರಿಚಯಿಸಿದ್ದು ಕೆ ಪಿ ಸುರೇಶ್. ಬೆಂಕಿಯ ನೆನಪು ಎಂಬ ಪುಟ್ಟ ಪುಸ್ತಕದ ಇತಿಹಾಸ ಮತ್ತು ಜನರ ಸ್ಮೃತಿಯ ಕುರಿತು ಹೊಸ ಚಿಂತನೆಯ ಕಿಡಿ ಹೊತ್ತಿಸಿತ್ತು.

ನಾಲ್ಕು ದಿನಗಳ ಹಿಂದೆ 2022ರ ನೊಬೆಲ್ ಸಾಹಿತ್ಯ ಪುರಸ್ಕಾರ ಘೋಷಣೆಯಾದಾಗ ನನಗೆ ಗೆಲಿಯಾನೊ ನೆನಪಾದ. ಫ್ರೆಂಚ್ ಕಾದಂಬರಿಕಾರ್ತಿ, ಲೇಖಕಿ ಆನಿ ಎರ್ನೊಗೆ ಈ ಬಾರಿಯ ಪ್ರಶಸ್ತಿ ಲಭಿಸಿದೆ. ಪ್ರಶಸ್ತಿ ಘೋಷಿಸುತ್ತಾ, ಸ್ವೀಡಿಷ್ ಅಕಾಡೆಮಿ, ವ್ಯಕ್ತಿಗತ ನೆನಪುಗಳನ್ನು ದಾಖಲಿಸುವ ವಿಶಿಷ್ಟ ಬರವಣಿಗೆ ಕುರಿತು ಮೆಚ್ಚುಗೆ ವ್ಯಕ್ತಪಡಿಸಿತ್ತು.

ಹಿಂದೆ ನಡೆದಿದ್ದನ್ನು ನಾವು ನೆನಪಿಸಿಕೊಳ್ಳುತ್ತೇವೆ. ಇತಿಹಾಸದ ಹೆಸರಿನಲ್ಲಿ ದಾಖಲಾಗುವ ಹಲವು ಹಿತಾಸಕ್ತಿಗಳು ಆ ನೆನಪುಗಳ ಹಿಂದಿರುತ್ತವೆ. ಹಾಗಾಗಿ ಆ ಇತಿಹಾಸಕ್ಕೆ ಬಹು ಆಯಾಮಗಳಿರುತ್ತವೆಯೇ ಎಂಬ ಅನುಮಾನ ಎಂದಿಗೂ ಉಳಿದಿರುತ್ತದೆ. ಅದಕ್ಕೆ ಗೆಲಿಯಾನೊ, ಜನರ ಇತಿಹಾಸ ದಾಖಲಾಗಬೇಕೆಂದು ವಾದಿಸಿ, ಅದನ್ನು ’ಮೆಮೊರಿ ಆಫ್ ಫೈರ್’, ’ಮಿರರ್’ ಪುಸ್ತಕಗಳಲ್ಲಿ ಗಟ್ಟಿಯಾಗಿ ಪ್ರತಿಪಾದಿಸಿದ.

ಗೆಲಿಯಾನೊ ಹೇಳಿದ ಆ ಜನರ ಇತಿಹಾಸಕ್ಕೂ, ಆನಿ ಅವರು ತಮ್ಮ ವ್ಯಕ್ತಿಗತ ನೆನಪುಗಳನ್ನು ದಾಖಲಿಸುವುದಕ್ಕೂ ಸಾಮ್ಯತೆ ಇರಬಹುದೆ ಎಂಬ ಕುತೂಹಲ ನನ್ನನ್ನು ಕಾಡಲಾರಂಭಿಸಿತ್ತು. ಏಳು ದಶಕಗಳ ಕಾಲ ಫ್ರಾನ್ಸಿನ ಬದುಕುಗಳನ್ನು ನೋಡುತ್ತಾ, ಅಲ್ಲಿನ ಆಗು ಹೋಗುಗಳನ್ನು ದಾಖಲಿಸಿರುವ ಆನಿ ಸಾಮಾನ್ಯರ ಚರಿತ್ರೆಯನ್ನೇ ದಾಖಲಿಸಿದ್ದಾರೆಂದು ಹೇಳುವುದರಲ್ಲಿ ತಪ್ಪಿಲ್ಲ ಅನ್ನಿಸುತ್ತದೆ. ಅದಕ್ಕೆ ಆಕೆಯನ್ನು ಫ್ರಾನ್ಸಿನ ಸಮುದಾಯಗಳ ಸ್ಮೃತಿಗಳ ರಕ್ಷಕಿ ಎಂದು ಕರೆದಿರುವುದು.

ಸಂದರ್ಶನವೊಂದರಲ್ಲಿ ಮಾತನಾಡುತ್ತಾ, ಕಾಲಘಟ್ಟದ ಕಥನದಲ್ಲಿ ತಾನಿದ್ದೂ ಇಲ್ಲದಂತೆ ದಾಖಲಿಸುವ ಈ ವಿಶಿಷ್ಟ ಬರವಣಿಗೆಯ ಕುರಿತು ಮಾತನಾಡುತ್ತಾ ಆನಿ, “ಒಂದು ಕಾಲಘಟ್ಟದಲ್ಲಿ ಬದುಕಿನ ಹೆಣ್ಣಿನ ಕಥೆಯನ್ನ ಹೇಳಬೇಕೆಂದುಕೊಂಡಿದ್ದೆ. ಆದರೆ ಅದನ್ನು ಹೇಗೆ ಹೇಳುವುದು ಎಂದು ತಿಳಿದಿರಲಿಲ್ಲ. ಆಕೆಯನ್ನು ಹೊರಗಿಟ್ಟು ಕತೆ ಹೇಳಲು ಹೊರಟಿದ್ದರೆ, ಅದು ಇತಿಹಾಸವಾಗುತ್ತಿತ್ತು. ನಾನು ಬರೆಯುವ ಕಥನದಲ್ಲಿ ಅಂತಃಶಕ್ತಿ ಇರಬೇಕು ಎಂದು ನನಗೆ ಗಟ್ಟಿಯಾಗಿ ಅನ್ನಿಸುತ್ತಿತ್ತು. ನಾನು ಚಿತ್ರಗಳನ್ನು, ವ್ಯಕ್ತಿಗತವಾದ ಮತ್ತು ವ್ಯಕ್ತಿಗತವಲ್ಲದ ನೆನಪುಗಳನ್ನು ಸಂಗ್ರಹಿಸಲಾರಂಭಿಸಿದೆ. ಸಿನಿಮಾ, ಪುಸ್ತಕ, ಭಾವಗೀತೆಗಳು ಎಲ್ಲವನ್ನೂ ಸಂಗ್ರಹಿಸಲಾರಂಭಿಸಿದೆ. ಯಾರದ್ದು ಎಂದು ಹೇಳಲಿಲ್ಲ. ನಾನು ಈ ಜಗತ್ತಿಗೆ ಕಾಲಿಟ್ಟ ಸಂದರ್ಭದಿಂದ ಆರಂಭಿಸಿದೆ. ನನ್ನ ಬಗ್ಗೆ ನಾನು ಬರೆಯುತ್ತಿರಲಿಲ್ಲ. ನಿರೂಪಣೆಗಳ ಮೂಲಕ, ನನ್ನದೇ ಆದ ರೀತಿಯಲ್ಲಿ ತಿಳಿಯುವ ಮೂಲಕ, ನನ್ನದೇ ಆದ ರೀತಿಯಲ್ಲಿ ಜಗತ್ತನ್ನು ಎದುರುಗೊಳ್ಳುವ ಮೂಲಕ ಆದ ಅನುಭವಗಳನ್ನು ದಾಖಲಿಸಲಾರಂಭಿಸಿದೆ. ಒಬ್ಬ ವ್ಯಕ್ತಿಯ ಅನುಭವವಾಗಿರಲಿಲ್ಲ. ಇದು ಜನರ, ಕಾರ್ಮಿಕರ, ಹಳೆಯ ದಿನಗಳ ಇತಿಹಾಸವಾಗಿತ್ತು” ಎಂದು ವಿವರಿಸಿದ್ದರು.

ಆನಿ, ಕಾರ್ಮಿಕ ವರ್ಗದ ಕುಟುಂಬವೊಂದರಲ್ಲಿ ಜನಿಸಿದಾಕೆ. ತಂದೆ ತಾಯಿಯರಿಬ್ಬರು ಕೆಫೆ ಮತ್ತು ತರಕಾರಿ ಅಂಗಡಿ ನಡೆಸುತ್ತಿದ್ದರು. ಇಪ್ಪತ್ತನೆಯ ವಯಸ್ಸಿಗೆ ಲಂಡನ್ನಿಗೆ ಬಂದ ಆನಿ ಸಹಾಯಕಿಯಾಗಿ ಕೆಲಸ ಮಾಡಿದ್ದರು. ಈ ಸಂದರ್ಭದ ಅನುಭವಗಳನ್ನು ತನ್ನ ’ಎ ಗರ್ಲ್ಸ್ ಸ್ಟೋರಿ’ ಕಾದಂಬರಿಯಲ್ಲಿ ವಿವರಿಸಿದ್ದಾರೆ. ಫ್ರಾನ್ಸಿಗೆ ಮರಳಿ ವಿದ್ಯಾಭ್ಯಾಸ ಮುಂದುವರಿಸಿದ ಆನಿ, ಶಿಕ್ಷಕಿಯಾಗಿ ವೃತ್ತಿ ಆರಂಭಿಸಿದ್ದರು. ಓದು ಅಧ್ಯಯನ ಮುಂದುವರಿಸಿ, ನ್ಯಾಷನಲ್ ಸೆಂಟರ್ ಫಾರ್ ಡಿಸ್ಟನ್ಸ್ ಎಜುಕೇಷನ್ ಸೇರಿಕೊಂಡರು. ಇಲ್ಲಿಯೇ ಎರಡೂವರೆ ದಶಕಗಳ ಕಾಲ ಸೇವೆ ಸಲ್ಲಿಸಿದರು.

ಜೀವನದ ಈ ಎಲ್ಲ ಓಡಾಟಗಳ ನಡುವೆ ಬರವಣಿಗೆಯ ಹುಕಿ ಉಸಿರು ತುಂಬಿಕೊಂಡು ಬಂದಿದ್ದ ಆನಿಯವರ 34ನೇ ವಯಸ್ಸಿಗೆ. ಆಗ ಮೊದಲ ಕಾದಂಬರಿಯನ್ನು ಪ್ರಕಟಿಸಿದರು. ಬರವಣಿಗೆಯನ್ನೇ ತನ್ನ ಜೀವನದುದ್ದಕ್ಕೂ ಆರಿಸಿಕೊಳ್ಳಲಿರುವ ದಾರಿಯ ಸೂಚನೆ ಈ ಮೊದಲ ಕೃತಿಯಲ್ಲಿಯೇ ಇತ್ತು. ’ಕ್ಲೀನ್ಡ್ ಔಟ್’ ಹೆಸರಿನ ಈ ಮೊದಲ ಪ್ರಕಟಿತ ಪುಸ್ತಕ ಆತ್ಮಕಥಾ ಶೈಲಿಯ ಕಾದಂಬರಿಯಾಗಿತ್ತು. ನಂತರ ಬಂದ ’ಎ ಮ್ಯಾನ್ಸ್ ಲೈಫ್’ ಫ್ರಾನ್ಸಿನ ಪುಟ್ಟ ಪಟ್ಟಣದಲ್ಲಿ ತಂದೆಯೊಂದಿಗಿನ ಯುವತಿಯೊಬ್ಬಳ ಸಂಬಂಧವನ್ನು ಕಟ್ಟಿಕೊಟ್ಟರು. ಇಲ್ಲೂ ಆತ್ಮಕಥಾನಕ ಅಂಶಗಳೇ ಇದ್ದವು. ಶೈಲಿ ಮತ್ತು ಭಾಷೆಯ ಕಾರಣಕ್ಕೆ ಮೆಚ್ಚುಗೆ ಪಡೆದ ಈ ಕೃತಿ ಆನಿಯ ಸೃಜನಶೀಲ ಪ್ರಯೋಗವನ್ನು ಗಟ್ಟಿಯಾಗಿ ದಾಖಲಿಸಿತು.

ತನ್ನ ಪೋಷಕರ ಸಾಮಾಜಿಕ ಪ್ರಗತಿ, ಹರೆಯದ ದಿನಗಳು, ಮದುವೆ, ಪೂರ್ವ ಯುರೋಪಿನ ವ್ಯಕ್ತಿಯೊಂದಿಗೆ ಸಂಬಂಧ, ಗರ್ಭಪಾತ, ತನ್ನ ತಾಯಿಯ ಸಾವು, ಸ್ತನ ಕ್ಯಾನ್ಸರ್, ಹೀಗೆ ತನ್ನ ಬದುಕಿನ ಘಟ್ಟದ ತೀವ್ರ ಅನುಭವಗಳನ್ನು ಕಥನದ ಮೂಸೆಯಲ್ಲಿ ಕರಗಿಸಿ ಎರಕ ಹೊಯ್ದ ಆನಿ ನೆನಪುಗಳ ದಟ್ಟ ಅನುಭವವನ್ನು, ಬರವಣಿಗೆಯ ಮೂಲಕ ಆ ಕಾಲ, ಸಮಾಜದ ಅನುಭವವನ್ನಾಗಿಸಿ ಜಗತ್ತಿಗೆ ದಾಟಿಸಲಾರಂಭಿಸಿದರು. ಹೀಗೆ ವ್ಯಕ್ತಿಗತ ಅನುಭವಗಳನ್ನು ಬರೆಯುತ್ತಲೇ ದನಿಯಿಲ್ಲದ, ದಾಖಲಾದ ಎಷ್ಟೋ ಕತೆಗಳಿಗೆ ದನಿಯಾದರು.

ಆದರೆ ಹೀಗೆ ತನ್ನ ಬದುಕಿನ ಮೂಲಕ ಲೋಕದ ನೆನಪುಗಳನ್ನು ಹೆಕ್ಕಿ ತೆಗೆದು ದಾಖಲಿಸಿದ ಮೇಲೆ ಅವುಗಳನ್ನೇ ಅನುಮಾನಿಸುವುದು ಆನಿಯ ಇನ್ನೊಂದು ವೈಶಿಷ್ಟ್ಯ. ಇಪ್ಪತ್ತು ಕೃತಿಗಳನ್ನು ನೀಡಿರುವ ಆನಿ ವ್ಯಕ್ತಿಗತವಾದ ಬದುಕನ್ನು ದಾಖಲಿಸುತ್ತಿದ್ದರೂ, ಸಾಮಾಜಿಕ, ರಾಜಕೀಯ ಪರಿಸರವನ್ನು ಕಟ್ಟಿಕೊಟ್ಟಿದ್ದಾರೆ. ಉತ್ಖನನದಲ್ಲಿ ಸಿಕ್ಕುವ ಪ್ರತಿ ವಸ್ತುವು ಐತಿಹಾಸಿಕ ಕಾಲಘಟ್ಟದ ಹೊಸ ಮಗ್ಗಲನ್ನು ಅರಿಯುವಂತೆ ಮಾಡುವ ರೀತಿಯಲ್ಲೇ, ಆನಿಯ ಕಥನಗಳು ಬಿಚ್ಚಿಕೊಳ್ಳುತ್ತವೆ. ಹಾಗಾಗಿ ಆಕೆಯನ್ನು ಅಕ್ಷರ ಲೋಕದ ಪುರಾತತ್ವಶಾಸ್ತ್ರಜ್ಞೆ ಎಂದಿರುವುದು.

ಬರವಣಿಗೆಯ ಮೂಲಕ ಮುಕ್ತಿ ಹೊಂದುವ ಕ್ರಿಯೆ ಅತ್ಯಂತ ಸಂಕೀರ್ಣವಾದದ್ದು ಎನ್ನುವ ಆನಿ, ವ್ಯಕ್ತಿಗತ ಸತ್ಯದ ಹುಡುಕಾಟದ ಬಗ್ಗೆ ಅಪಾರ ಆಸ್ಥೆ, ಕುತೂಹಲದಿಂದ ತೊಡಗಿಸಿಕೊಳ್ಳುತ್ತಾ ಬಂದಿದ್ದಾರೆ. ಅವರ ಒಟ್ಟು ಸೃಜನಶೀಲ ಪಯಣದ ಹಿಂದಿರುವ ಚೈತನ್ಯ, ಸ್ಫೂರ್ತಿ ಈ ಕುತೂಹಲವೇ ಆಗಿದೆ.

ಎಸ್ ಕುಮಾರ್

ಎಸ್ ಕುಮಾರ್
ಸಂಪಾದಕರು ಈದಿನ.ಕಾಂ


ಇದನ್ನೂ ಓದಿ: ಅಲೈನ್ ಆಸ್ಪೆಕ್ಟ್, ಜಾನ್ ಎಫ್. ಕ್ಲೌಸರ್, ಆಂಟನ್ ಝೈಲಿಂಗರ್‌ರವರಿಗೆ 2022ರ ಭೌತಶಾಸ್ತ್ರದ ನೊಬೆಲ್ ಪ್ರಶಸ್ತಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬಂಗಾಳ SIR : ನ್ಯಾಯಮಂಡಳಿಗಳಿಂದ ಪರಿಹಾರ ಪಡೆದವರು ಕೇವಲ 0.01% ಜನ

ಪಶ್ಚಿಮ ಬಂಗಾಳದಲ್ಲಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆಯ ನಂತರ ಮತದಾರರ ಪಟ್ಟಿಯಲ್ಲಿ ಉಂಟಾದ ವಿವಾದಗಳನ್ನು ಬಗೆಹರಿಸಲು ಮೇಲ್ಮನವಿ ನ್ಯಾಯಮಂಡಳಿಗಳನ್ನು ಸ್ಥಾಪಿಸಲಾಗಿದೆ. ಎಸ್‌ಐಆರ್ ಪ್ರಕ್ರಿಯೆಯ ನಂತರ ಮತದಾರರ ಪಟ್ಟಿಯಿಂದ ಹೆಸರುಗಳನ್ನು ಕೈಬಿಟ್ಟಿರುವುದರ ಅಥವಾ...

ಪ.ಬಂಗಾಳ ಎಸ್‌ಐಆರ್‌ : ದೇಶ ಕಾದ ಯೋಧನಿಂದ ತೀರ್ಪು ಕೊಟ್ಟ ನ್ಯಾಯಾಧೀಶರವರೆಗೆ.. ಮತ ಹಕ್ಕು ಕಳೆದುಕೊಂಡ ಲಕ್ಷಾಂತರ ಜನರು

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ದೇಶದಲ್ಲಿ ಪ್ರಸ್ತುತ ಚರ್ಚೆಯಲ್ಲಿರುವ ಪ್ರಮುಖ ವಿಚಾರ. ಹಲವು ಗೊಂದಲಗಳ ನಡುವೆ ಮೊದಲ ಹಂತದಲ್ಲಿ ಬಿಹಾರದಲ್ಲಿ ಎಸ್‌ಐಆರ್‌ ಪೂರ್ತಿಗೊಳಿಸಿದ ಚುನಾವಣಾ ಆಯೋಗ, ನಂತರ ಅಲ್ಲಿ ವಿಧಾನಸಭಾ...

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...