Homeಚಳವಳಿ2021 ರಲ್ಲಿ 31 ಸಾವಿರ ಮಹಿಳಾ ದೌರ್ಜನ್ಯದ ದೂರುಗಳು ದಾಖಲು: ಅರ್ಧದಷ್ಟು ಯುಪಿಯಿಂದ ವರದಿ

2021 ರಲ್ಲಿ 31 ಸಾವಿರ ಮಹಿಳಾ ದೌರ್ಜನ್ಯದ ದೂರುಗಳು ದಾಖಲು: ಅರ್ಧದಷ್ಟು ಯುಪಿಯಿಂದ ವರದಿ

- Advertisement -
- Advertisement -

ದೇಶದಲ್ಲಿ ಮಹಿಳೆಯರ ಮೇಲೆ ನಡೆದ ದೌರ್ಜನ್ಯ, ಅಪರಾಧಗಳಿಗೆ ಸಂಬಂಧಿಸಿದಂತೆ 2021 ರಲ್ಲಿ ಸುಮಾರು 31,000 ದೂರುಗಳನ್ನು ಸ್ವೀಕರಿಸಿರುವುದಾಗಿ ಎಂದು ರಾಷ್ಟ್ರೀಯ ಮಹಿಳಾ ಆಯೋಗ (NCW) ಹೇಳಿದೆ. ದಾಖಲಾಗಿರುವ ದೂರುಗಳಲ್ಲಿಅರ್ಧದಷ್ಟು ಉತ್ತರ ಪ್ರದೇಶದಿಂದ ವರದಿಯಾಗಿವೆ ಎಂದು ಎನ್‌ಸಿಡಬ್ಲ್ಯೂ ಹೇಳಿದೆ.

2020 ರಲ್ಲಿ ಮಹಿಳಾ ಆಯೋಗವು 23,722 ದೂರುಗಳನ್ನು ಸ್ವೀಕರಿಸಿತ್ತು. ಕಳೆದ ವರ್ಷ (2021) ಮಹಿಳೆಯರ ವಿರುದ್ಧದ ಅಪರಾಧಗಳ ಸಂಬಂಧಿಸಿದ ದೂರುಗಳ ಸಂಖ್ಯೆ ಶೇ.30 ರಷ್ಟು ಏರಿಕೆಯಾಗಿದೆ.

ರಾಷ್ಟ್ರೀಯ ಮಹಿಳಾ ಆಯೋಗದ ಅಧಿಕೃತ ಡೇಟಾ ಪ್ರಕಾರ, 2021 ರಲ್ಲಿ ಸ್ವೀಕರಿಸಲಾಗಿರುವ 30,864 ದೂರುಗಳಲ್ಲಿ, ಗರಿಷ್ಠ 11,013 ಮಹಿಳೆಯರ ಭಾವನಾತ್ಮಕ ನಿಂದನೆಯನ್ನು ಗಣನೆಗೆ ತೆಗೆದುಕೊಳ್ಳುವ ಘನತೆಯಿಂದ ಬದುಕುವ ಹಕ್ಕಿಗೆ ಸಂಬಂಧಿಸಿವೆ. 6,633 ಕೌಟುಂಬಿಕ ಹಿಂಸೆ ಮತ್ತು 4,589 ವರದಕ್ಷಿಣೆ ಕಿರುಕುಳಕ್ಕೆ ಸಂಬಂಧಿಸಿವೆ.

ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಉತ್ತರ ಪ್ರದೇಶ ರಾಜ್ಯವು ಮಹಿಳೆಯರ ವಿರುದ್ಧದ ಅಪರಾಧಗಳ ದೂರುಗಳಲ್ಲಿ ಅಗ್ರಸ್ಥಾನ ಪಡೆದುಕೊಂಡಿದೆ. ಉತ್ತರ ಪ್ರದೇಶದಲ್ಲಿ 15,828, ದೆಹಲಿಯಲ್ಲಿ 3,336, ಮಹಾರಾಷ್ಟ್ರದಲ್ಲಿ 1,504, ಹರಿಯಾಣದಲ್ಲಿ 1,460 ಮತ್ತು ಬಿಹಾರದಲ್ಲಿ 1,456 ದೂರುಗಳು ದಾಖಲಾಗಿವೆ.

ಇದನ್ನೂ ಓದಿ: 204ನೇ ವರ್ಷದ ಭೀಮಾ ಕೋರೆಗಾಂವ್ ಸ್ಮರಣೆ: ಸಾವಿರಾರು ಜನರಿಂದ ಗೌರವ ಸಮರ್ಪಣೆ

ಅಂಕಿ ಅಂಶಗಳ ಪ್ರಕಾರ, ಘನತೆಯಿಂದ ಬದುಕುವ ಹಕ್ಕು ಮತ್ತು ಕೌಟುಂಬಿಕ ಹಿಂಸಾಚಾರಕ್ಕೆ ಸಂಬಂಧಿಸಿದ ಹೆಚ್ಚಿನ ದೂರುಗಳು ಉತ್ತರ ಪ್ರದೇಶದಿಂದ ಬಂದಿವೆ. ಎನ್‌ಸಿಡಬ್ಲ್ಯು ಸ್ವೀಕರಿಸಿದ ದೂರುಗಳ ಸಂಖ್ಯೆ 2014ರ ನಂತರ, ಇದೇ ಮೊದಲು ಅತಿ ಹೆಚ್ಚು ದೂರುಗಳು ದಾಖಲಾಗಿವೆ. 2014ರಲ್ಲಿ ಒಟ್ಟು 33,906 ದೂರುಗಳು ಬಂದಿದ್ದವು ಎಂದು ಅದು ಹೇಳಿದೆ.

ಎನ್‌ಸಿಡಬ್ಲ್ಯೂ ಮುಖ್ಯಸ್ಥೆ ರೇಖಾ ಶರ್ಮಾ ಈ ಹಿಂದೆ ಆಯೋಗವು ತನ್ನ ಕೆಲಸದ ಬಗ್ಗೆ ಜನರಿಗೆ ಹೆಚ್ಚು ಅರಿವು ಮೂಡಿಸುತ್ತಿರುವುದರಿಂದ ದೂರುಗಳಲ್ಲಿ ಏರಿಕೆ ಕಂಡುಬಂದಿದೆ ಎಂದು ಹೇಳಿದ್ದರು.

“ಆಯೋಗವು ಮಹಿಳೆಯರಿಗೆ ಸಹಾಯ ಮಾಡಲು ಹೊಸ ಕ್ರಮಗಳನ್ನು ಪ್ರಾರಂಭಿಸಸಿದ್ದು ಅದಕ್ಕಾಗಿ, ಅಗತ್ಯವಿರುವ ಮಹಿಳೆಯರಿಗೆ ಬೆಂಬಲ ಸೇವೆಗಳನ್ನು ಒದಗಿಸಲು ನಾವು ಸಹಾಯವಾಣಿಯನ್ನು ಪ್ರಾರಂಭಿಸಿದ್ದೇವೆ” ಎಂದು ರೇಖಾ ಶರ್ಮಾ ಹೇಳಿದ್ದಾರೆ.

2021ರ ಜುಲೈನಿಂದ ಸೆಪ್ಟೆಂಬರ್‌ವರೆಗೆ, ಪ್ರತಿ ತಿಂಗಳು 3,100 ಕ್ಕೂ ಹೆಚ್ಚು ದೂರುಗಳನ್ನು ಸ್ವೀಕರಿಸಲಾಗಿದೆ. 2018 ರ ನವೆಂಬರ್‌ನಲ್ಲಿ 3,000 ಕ್ಕೂ ಹೆಚ್ಚು ದೂರುಗಳನ್ನು ಸ್ವೀಕರಿಸಲಾಗಿತ್ತು. ಆ ಸಂದರ್ಭದಲ್ಲಿ #MeToo ಆಂದೋಲನವು ಉತ್ತುಂಗದಲ್ಲಿತ್ತು.

“ಈ ಹಿಂದೆ ಮಹಿಳೆಯರು ದೂರು ನೀಡಲು ಮುಂದೆ ಬರುತ್ತಿರಲಿಲ್ಲ. ಅವರು ಕಿರುಕುಳದಿಂದ ಏನು ಅನುಭವಿಸುತ್ತಿದ್ದಾರೆಂದು ಅವರಿಗೆ ತಿಳಿದಿರಲಿಲ್ಲ. ಆದರೆ ಈಗ ಅವರು ದೂರು ನೀಡಲು ಮುಂದೆ ಬರುತ್ತಿದ್ದಾರೆ. ಅವರು ತಮ್ಮ ಮೇಲಾಗುತ್ತಿರುವ ಕಿರುಕುಳಗಳನ್ನು ವರದಿ ಮಾಡಲು ಮುಂದೆ ಬರುತ್ತಿರುವುದು ಒಳ್ಳೆಯದು” ಎಂದು ಎನ್‌ಸಿಡಬ್ಲ್ಯೂ ಮುಖ್ಯಸ್ಥೆ ರೇಖಾ ಶರ್ಮಾ ತಿಳಿಸಿದ್ದಾರೆ.


ಇದನ್ನೂ ಓದಿ: ನಾಗಾಲ್ಯಾಂಡ್‌ AFSPA ವಿವಾದ; 45 ದಿನಗಳಲ್ಲಿ ‘ಸಕಾರಾತ್ಮಕ ಬೆಳವಣಿಗೆ’: ಅಸ್ಸಾಂ ಸಿಎಂ ಭರವಸೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ಸರ್ಕಾರ 5ಜಿ ಮೆಗಾ ಹಗರಣವನ್ನು ರೂಪಿಸುತ್ತಿದೆ: ಎಎಪಿ ಮುಖಂಡ ಸಂಜಯ್ ಸಿಂಗ್

0
2ಜಿ ಸ್ಪೆಕ್ಟ್ರಮ್ ಪ್ರಕರಣದಲ್ಲಿ 2012ರ ತೀರ್ಪನ್ನು ಮಾರ್ಪಾಡು ಮಾಡುವಂತೆ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಮನವಿ ಸಲ್ಲಿಸಿದ ನಂತರ ಆಮ್ ಆದ್ಮಿ ಪಕ್ಷದ (ಎಎಪಿ) ಸಂಸದ ಸಂಜಯ್ ಸಿಂಗ್ ಅವರು ಪ್ರಧಾನಿ ನರೇಂದ್ರ...