Homeಮುಖಪುಟಖಾಸಗಿ ವಲಯದ ಶೇ.50 ರಷ್ಟು ಲಸಿಕೆ  9 ಕಾರ್ಪೋರೇಟ್‍ ಆಸ್ಪತ್ರೆಗಳ ಪಾಲು: ಸಣ್ಣ ನಗರಗಳಲ್ಲಿ ಲಸಿಕೆ...

ಖಾಸಗಿ ವಲಯದ ಶೇ.50 ರಷ್ಟು ಲಸಿಕೆ  9 ಕಾರ್ಪೋರೇಟ್‍ ಆಸ್ಪತ್ರೆಗಳ ಪಾಲು: ಸಣ್ಣ ನಗರಗಳಲ್ಲಿ ಲಸಿಕೆ ಕೊರತೆ

- Advertisement -
- Advertisement -

ದೇಶದ 9 ಕಾರ್ಪೋರೇಟ್‍ ಅಂದರೆ ಬೃಹತ್‍ ಆಸ್ಪತ್ರೆ ಸಮೂಹಗಳು ಖಾಸಗಿ ಆಸ್ಪತ್ರೆಗಳು ಖರೀದಿಸಿದ ಒಟ್ಟು ಲಸಿಕೆಗಳಲ್ಲಿ ಅರ್ಧದಷ್ಟನ್ನು ಖರೀದಿಸಿ ಸ್ಟಾಕ್ ಮಾಡಿಕೊಂಡಿವೆ ಎಂದು ಇಂಡಿಯನ್‍ ಎಕ್ಸ್‌ಪ್ರೆಸ್‍ ವರದಿ ಮಾಡಿದೆ.

ಕೇಂದ್ರ ಸರ್ಕಾರವು ತನ್ನ ಲಸಿಕಾ ನೀತಿಯನ್ನು ಪರಿಷ್ಕರಿಸಿ ಮುಕ್ತ ಮಾರುಕಟ್ಟೆಗೆ ಬಿಟ್ಟಿದ್ದರ ಪರಿಣಾಮ ಇದಾಗಿದೆ. ಮೊದಲ ತಿಂಗಳೊಂದರಲ್ಲೇ ಖಾಸಗಿ ಆಸ್ಪತ್ರೆಗಳು ಖರೀದಿಸಿದ 1.20 ಕೋಟಿ ಡೋಸ್‍ ಲಸಿಕೆಗಳಲ್ಲಿ 9 ಕಾರ್ಪೋರೇಟ್‍ ಆಸ್ಪತ್ರೆಗಳು 60.57 ಲಕ್ಷ ಡೋಸ್‍ಗಳನ್ನು ಖರೀದಿಸಿವೆ. ಈ ಪಂಚತಾರಾ ಆಸ್ಪತ್ರೆಗಳು ಹೆಚ್ಚಾಗಿ ಮಹಾನಗರಗಳಲ್ಲೇ ಇದ್ದು, ದೇಶದ ಎರಡನೇ ಹಂತದ ನಗರ-ಪಟ್ಟಣಗಳ ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆಯ ಕೊರತೆಯಾಗಿದೆ. ಬೆಂಗಳೂರಿನ ಮಧ್ಯಮ ಗಾತ್ರದ ಆಸ್ಪತ್ರೆಗಳಲ್ಲೂ ಲಸಿಕೆ ಪ್ರಮಾಣ ಕಡಿಮೆಯಿದೆ.

ಇದು ಲಸಿಕಾ ನೀತಿ ಸೃಷ್ಟಿಸಿರುವ ಅಸಮಾನ ಹಂಚಿಕೆ ಮತ್ತು ಅಸಮಾನ ಲಭ್ಯತೆಗೆ ದಾರಿ ಮಾಡಿಕೊಟ್ಟಿದೆ. ಮೇ ತಿಂಗಳಲ್ಲಿ ಖಾಸಗಿ ವಲಯಕ್ಕೆ ಮೀಸಲಾದ ಕೋವಿಡ್‍ ಲಸಿಕೆಗಳಲ್ಲಿ ಶೇ, 50ರಷ್ಟು ಈ 9 ಕಾರ್ಪೋರೇಟ್‍ ಆಸ್ಪತ್ರೆ ಸಮೂಹಗಳ ಕೈಸೇರಿದೆ.

ಉಳಿದ ಶೇ.50ರಷ್ಟು ಲಸಿಕೆಗಳು ಸುಮಾರು 300 ಆಸ್ಪತ್ರೆಗಳಿಗೆ ವಿತರಣೆಯಾಗಿದೆ. ಈ ಯಾವ ಆಸ್ಪತ್ರೆಗಳೂ  ಎರಡನೇ ಶ್ರೇಣಿಯ ನಗರಗಳಲ್ಲಿ ಕೆಲಸ ನಿರ್ವಹಿಸುತ್ತಿಲ್ಲ.

ಖಾಸಗಿ ಆಸ್ಪತ್ರೆಗಳು ಮೇ ತಿಂಗಳಿನಲ್ಲಿ 1.20 ಕೋಟಿ ಡೋಸ್‍ ಖರೀದಿಸಿದ್ದು, ಈ ತಿಂಗಳಲ್ಲಿ ಖರೀದಿಯಾದ ಲಸಿಕೆಗಳ ಶೇ.15.6ರಷ್ಟಾಗಿದೆ. ರಾಜ್ಯ ಸರ್ಕಾರಗಳು ಶೇ 33.5 (2.66 ಕೋಟಿ ಡೋಸ್‍) ಮತ್ತು ಕೇಂದ್ರ ಸರ್ಕಾರವು ಶೇ. 50.9 (4.03 ಕೋಟಿ ಡೋಸ್‍) ಲಸಿಕೆ ದಾಸ್ತಾನು ಮಾಡಿವೆ.

ಅಪೊಲೋ ಆಸ್ಪತ್ರೆ ಸಮೂಹದ 9 ಆಸ್ಪತ್ರೆಗಳು 16.1 ಲಕ್ಷ ಡೋಸ್‍, ಮ್ಯಾಕ್ಸ್‌ ಕೇರ್‌ನ 6 ಆಸ್ಪತ್ರೆಗಳು 12.97 ಲಕ್ಷ ಡೋಸ್‍, ರಿಲಾಯನ್ಸ್‌ ಫೌಂಡೇಶನ್‍ ನಡೆಸುವ ಎಚ್‍ಎನ್‍ ಟ್ರಸ್ಟ್ ಸಮೂಹ 9.89 ಲಕ್ಷ ಡೋಸ್‍, ಮೆಡಿಕಾ ಸಮೂಹವು 6.26 ಲಕ್ಷ ಡೋಸ್‍, ಪೋರ್ಟಿಸ್‍ ಹೆಲ್ತ್‍ಕೇರ್‌ನ ಎಂಟು ಆಸ್ಪತ್ರೆಗಳು 4.48 ಲಕ್ಷ ಡೋಸ್‍, ಗೋದ್ರೇಜ್‍ ಸಮೂಹ ಆಸ್ಪತ್ರೆಗಳು 3.35 ಲಕ್ಷ, ಮಣಿಪಾಲ್‍ ಹೆಲ್ತ್ ಕೇರ್ ಸಮೂಹ 3.24 ಲಕ್ಷ ಡೋಸ್‍, ನಾರಾಯಣ ಹೃದಯಾಲಯ 2.02 ಲಕ್ಷ ಡೋಸ್‍ ಮತ್ತು ಟೆಕ್ನೋ ಇಂಡಿಯಾ ಸಮೂಹ 2 ಲಕ್ಷ ಡೋಸ್‍ ಖರೀದಿ ಮಾಡಿವೆ.

ಈ ಆಸ್ಪತ್ರೆಗಳು ಮೆಟ್ರೋ, ರಾಜ್ಯ ರಾಜಧಾನಿ ಮತ್ತು ಒಂದನೇ ಶ್ರೇಣಿಯ ನಗರಗಳಲ್ಲಿ ತಮ್ಮ ಘಟಕಗಳನ್ನು ಹೊಂದಿವೆ. ಸೀರಂ ಕಂಪನಿಯ ಕೋವಿಶೀಲ್ಡ್ ಅನ್ನು 600 ರೂ.ಗಳಿಗೆ ಮತ್ತು ಭಾರತ್‍ ಬಯೋಟೆಕ್‍ನ ಕೊವ್ಯಾಕ್ಸಿನ್‍ ಅನ್ನು 1,200 ರೂ,ಗಳಿಗೆ ಈ ಆಸ್ಪತ್ರೆಗಳು ಖರೀದಿಸಿವೆ.

ಬೆಂಗಳೂರಿನ ನ್ಯಾಷನಲ್‍ ಇನ್ಸಿಟ್ಯೂಟ್‍ ಆಫ್‍ ಅಡ್ವಾನ್ಸ್ ಸ್ಟಡೀಸ್‍ನ  ಪ್ರಾಧ್ಯಾಪಕ ತೇಜಲ್‍ ಕಾಂಟಿಕರ್, “ಲಸಿಕಾ ತಯಾರಕ ಕಂಪನಿಗಳು ಹೆಚ್ಚಿನ ದರ ಸಿಗುವ ಕಾರ್ಪೋರೇಟ್‍ ಆಸ್ಪತ್ರೆಗಳಿಗೆ ಲಸಿಕೆ ಮಾರಲು ಆಸಕ್ತಿ ತೋರಿವೆ’’ ಎನ್ನುತ್ತಾರೆ. ಅಂದರೆ ನಿಗದಿತ ದರಕ್ಕಿಂತಲೂ ಹೆಚ್ಚಿನ ದರಕ್ಕೂ ಲಸಿಕೆ ಖರೀದಿಸಿರಬಹುದು ಮತ್ತು ಶ್ರೀಮಂತರಿಗೆ ಅವನ್ನು ಇನ್ನೂ ಹೆಚ್ಚಿನ ದರದಲ್ಲಿ ನೀಡಿರಬಹುದು.

ಈ ಆಸ್ಪತ್ರೆಗಳು ಗ್ರಾಹಕರಿಗೆ ಕೋವಿಶೀಲ್ಡ್ ಅನ್ನು 850-1000 ರೂಗೆ ಮತ್ತು ಕೋವ್ಯಾಕ್ಸಿನ್‍ ಅನ್ನು 1,250 ರೂಗೆ ಒದಗಿಸುತ್ತಿವೆ. ಇದು ನಗರ ನಿವಾಸಿಗಳ ಒಂದು ವರ್ಗಕ್ಕೆ ಮಾತ್ರ ಅನುಕೂಲಕರವಾಗಿದ್ದು, ಕೆಳ ಮಧ್ಯಮ ವರ್ಗದವರ ಕೈಗೆ ಎಟುಕದ ದರವಾಗಿದೆ.

ನಿಮ್ಮಲ್ಲಿರುವ ಲಸಿಕೆಗಳನ್ನು ಸಣ್ಣ ನಗರಗಳಿಗೆ ವಿತರಿಸುತ್ತೀದ್ದೀರಾ ಎಂದು ಇಂಡಿಯನ್  ಎಕ್ಸ್ ಪ್ರೆಸ್‍ ಕೇಳಿದ ಪ್ರಶ್ನೆಗಳಿಗೆ ಈ ಆಸ್ಪತ್ರೆಗಳು ಇನ್ನೂ ಉತ್ತರಿಸಿಲ್ಲ.

ಕೇಂದ್ರದ ಲಸಿಕಾ ನೀತಿಯನ್ನು ಈಗಾಗಲೇ ಸುಪ್ರೀಂಕೋರ್ಟ್ ಪ್ರಶ್ನಿಸಿದೆ. ರಾಜ್ಯ ಸರ್ಕಾರಗಳು ಲಸಿಕೆಯ ಅಸಮಾನ ಹಂಚಿಕೆಯ ಬಗ್ಗೆ ದೂರುತ್ತಿವೆ. ಇದೇ ಹೊತ್ತಲ್ಲಿ ಖಾಸಗಿ ವಲಯಕ್ಕೆ ನಿಗದಿಯಾದ ಲಸಿಕೆಗಳಲ್ಲಿ ಶೇ. 50 ರಷ್ಟು ಕೇವಲ 9 ಸಮೂಹ ಆಸ್ಪತ್ರೆಗಳ ಪಾಲಾಗಿವೆ.

ಉಚಿತ ಲಸಿಕೆ ನೀಡಬೇಕಾದ ಹೊಣೆಯಿಂದ ತಪ್ಪಿಸಿಕೊಂಡ ಕೇಂದ್ರ ಸರ್ಕಾರ ತಯಾರಕ ಕಂಪನಿಗಳು, ದೊಡ್ಡ ಆಸ್ಪತ್ರೆ ಸಮೂಹಗಳ ಪರ ನಿಂತಿದೆಯೇ ಎಂಬ ಪ್ರಶ್ನೆ ಕಾಡುತ್ತಿದೆ.


ಇದನ್ನೂ ಓದಿ: ಕೋವಿಡ್-19; ಆದ ಎಡವಟ್ಟುಗಳು ಮತ್ತು ಬೇಕಿರುವ ಎಚ್ಚರ: ಡಾ. ಜಿ ಎನ್ ಮಲ್ಲಿಕಾರ್ಜುನಪ್ಪ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...

ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು ಬಿಸಿಯೂಟ ಯೋಜನೆಯಿಂದ ಹೊರಕ್ಕೆ : ಸಂಸತ್ತಿಗೆ ತಿಳಿಸಿದ ಕೇಂದ್ರ

ಕಳೆದ ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು 'ಪ್ರಧಾನಮಂತ್ರಿ ಪೋಷಣ್ ಯೋಜನೆ'ಯಿಂದ (ಮಧ್ಯಾಹ್ನದ ಬಿಸಿಯೂಟ) ಹೊರ ಬಿದ್ದಿವೆ. 2020-21ರಲ್ಲಿ 11.19 ಲಕ್ಷ ಇದ್ದ ಶಾಲೆಗಳ ಸಂಖ್ಯೆ 2024-25ರಲ್ಲಿ 10.35ಕ್ಕೆ ಕುಸಿದಿದೆ ಎಂದು...

ಭೀಮಾ ಕೋರೆಗಾಂವ್ ಪ್ರಕರಣ: ಗೌತಮ್ ನವಲಖಾಗೆ ಜಾಮೀನಿನ ಮೇಲೆ ದೆಹಲಿಗೆ ತೆರಳಲು ಅನುಮತಿ ನೀಡಿದ ಬಾಂಬೆ ಹೈಕೋರ್ಟ್

ಭೀಮಾ ಕೋರೆಗಾಂವ್ ಯುಎಪಿಎ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಮಾನವ ಹಕ್ಕುಗಳ ಕಾರ್ಯಕರ್ತ ಗೌತಮ್ ನವಲಖಾ ಅವರಿಗೆ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ನವದೆಹಲಿಯಲ್ಲಿ ವಾಸಿಸಲು ಬಾಂಬೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ. ಆದಾಗಲೂ, ಮಾನವ...

ಕಾರವಾರ ನೌಕಾ ಪ್ರದೇಶದ ಸುತ್ತಮುತ್ತ ಆತಂಕ ಮೂಡಿಸಿದ ‘ಸೀಗಲ್‌’ ಪಕ್ಷಿ; ಚೀನಾ ನಿರ್ಮಿತ ಜಿಪಿಎಸ್ ಸಾಧನ ಪತ್ತೆ

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕರಾವಳಿ ಪ್ರದೇಶದ ಬಳಿ, ಸೂಕ್ಷ್ಮ ನೌಕಾ ವಲಯದ ಬಳಿ ಚೀನಾ ನಿರ್ಮಿತ ಜಿಪಿಎಸ್ ಟ್ರ್ಯಾಕಿಂಗ್ ಸಾಧನವೊಂದು 'ಸೀಗಲ್' (ಸಮುದ್ರಹಕ್ಕಿ) ಪಕ್ಷಿಗೆ ಅಳವಡಿಸಿರುವುದು ಕಂಡುಬಂದ ನಂತರ ಭದ್ರತಾ ಸಂಸ್ಥೆಗಳು...

ಅಣು ಶಕ್ತಿಯ ಖಾಸಗೀಕರಣ : ‘ಶಾಂತಿ’ ಮಸೂದೆಗೆ ಲೋಕಸಭೆ ಅಸ್ತು

ಭಾರತದ ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ವಲಯದ ಪ್ರವೇಶಕ್ಕೆ ದಾರಿ ಮಾಡಿಕೊಡುವ, 'ಭಾರತದ ಪ್ರಗತಿಗಾಗಿ ಅಣು ಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ) ಮಸೂದೆಯನ್ನು ಲೋಕಸಭೆ ಬುಧವಾರ (ಡಿ.17) ಅಂಗೀಕರಿಸಿತು. ವಿಪಕ್ಷಗಳ ಸದಸ್ಯರು...

ಮಾದಕ ದ್ರವ್ಯ ಸೇವನೆ, ಲೈಂಗಿಕ ಕಿರುಕುಳಕ್ಕೆ 3 ಲಕ್ಷ ರೂ. ದಂಡ ವಸೂಲಿ: ಬೆಂಗಳೂರಿನ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ​​ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಪಶ್ಚಿಮ ಬೆಂಗಳೂರಿನ ದೊಡ್ಡಬೆಲೆ ಬಳಿಯ ವಸತಿ ಸಂಕೀರ್ಣವೊಂದರ ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ವಿರುದ್ಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ನಿವಾಸಿಗಳಿಂದ ದಂಡ ವಸೂಲಿ ಮಾಡಿದ ಮತ್ತು ಅಪರಾಧಗಳನ್ನು ಮುಚ್ಚಿಟ್ಟ ಆರೋಪದ ಮೇಲೆ ಕುಂಬಳಗೋಡು...

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...