Homeಮುಖಪುಟಖಾಸಗಿ ವಲಯದ ಶೇ.50 ರಷ್ಟು ಲಸಿಕೆ  9 ಕಾರ್ಪೋರೇಟ್‍ ಆಸ್ಪತ್ರೆಗಳ ಪಾಲು: ಸಣ್ಣ ನಗರಗಳಲ್ಲಿ ಲಸಿಕೆ...

ಖಾಸಗಿ ವಲಯದ ಶೇ.50 ರಷ್ಟು ಲಸಿಕೆ  9 ಕಾರ್ಪೋರೇಟ್‍ ಆಸ್ಪತ್ರೆಗಳ ಪಾಲು: ಸಣ್ಣ ನಗರಗಳಲ್ಲಿ ಲಸಿಕೆ ಕೊರತೆ

- Advertisement -
- Advertisement -

ದೇಶದ 9 ಕಾರ್ಪೋರೇಟ್‍ ಅಂದರೆ ಬೃಹತ್‍ ಆಸ್ಪತ್ರೆ ಸಮೂಹಗಳು ಖಾಸಗಿ ಆಸ್ಪತ್ರೆಗಳು ಖರೀದಿಸಿದ ಒಟ್ಟು ಲಸಿಕೆಗಳಲ್ಲಿ ಅರ್ಧದಷ್ಟನ್ನು ಖರೀದಿಸಿ ಸ್ಟಾಕ್ ಮಾಡಿಕೊಂಡಿವೆ ಎಂದು ಇಂಡಿಯನ್‍ ಎಕ್ಸ್‌ಪ್ರೆಸ್‍ ವರದಿ ಮಾಡಿದೆ.

ಕೇಂದ್ರ ಸರ್ಕಾರವು ತನ್ನ ಲಸಿಕಾ ನೀತಿಯನ್ನು ಪರಿಷ್ಕರಿಸಿ ಮುಕ್ತ ಮಾರುಕಟ್ಟೆಗೆ ಬಿಟ್ಟಿದ್ದರ ಪರಿಣಾಮ ಇದಾಗಿದೆ. ಮೊದಲ ತಿಂಗಳೊಂದರಲ್ಲೇ ಖಾಸಗಿ ಆಸ್ಪತ್ರೆಗಳು ಖರೀದಿಸಿದ 1.20 ಕೋಟಿ ಡೋಸ್‍ ಲಸಿಕೆಗಳಲ್ಲಿ 9 ಕಾರ್ಪೋರೇಟ್‍ ಆಸ್ಪತ್ರೆಗಳು 60.57 ಲಕ್ಷ ಡೋಸ್‍ಗಳನ್ನು ಖರೀದಿಸಿವೆ. ಈ ಪಂಚತಾರಾ ಆಸ್ಪತ್ರೆಗಳು ಹೆಚ್ಚಾಗಿ ಮಹಾನಗರಗಳಲ್ಲೇ ಇದ್ದು, ದೇಶದ ಎರಡನೇ ಹಂತದ ನಗರ-ಪಟ್ಟಣಗಳ ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆಯ ಕೊರತೆಯಾಗಿದೆ. ಬೆಂಗಳೂರಿನ ಮಧ್ಯಮ ಗಾತ್ರದ ಆಸ್ಪತ್ರೆಗಳಲ್ಲೂ ಲಸಿಕೆ ಪ್ರಮಾಣ ಕಡಿಮೆಯಿದೆ.

ಇದು ಲಸಿಕಾ ನೀತಿ ಸೃಷ್ಟಿಸಿರುವ ಅಸಮಾನ ಹಂಚಿಕೆ ಮತ್ತು ಅಸಮಾನ ಲಭ್ಯತೆಗೆ ದಾರಿ ಮಾಡಿಕೊಟ್ಟಿದೆ. ಮೇ ತಿಂಗಳಲ್ಲಿ ಖಾಸಗಿ ವಲಯಕ್ಕೆ ಮೀಸಲಾದ ಕೋವಿಡ್‍ ಲಸಿಕೆಗಳಲ್ಲಿ ಶೇ, 50ರಷ್ಟು ಈ 9 ಕಾರ್ಪೋರೇಟ್‍ ಆಸ್ಪತ್ರೆ ಸಮೂಹಗಳ ಕೈಸೇರಿದೆ.

ಉಳಿದ ಶೇ.50ರಷ್ಟು ಲಸಿಕೆಗಳು ಸುಮಾರು 300 ಆಸ್ಪತ್ರೆಗಳಿಗೆ ವಿತರಣೆಯಾಗಿದೆ. ಈ ಯಾವ ಆಸ್ಪತ್ರೆಗಳೂ  ಎರಡನೇ ಶ್ರೇಣಿಯ ನಗರಗಳಲ್ಲಿ ಕೆಲಸ ನಿರ್ವಹಿಸುತ್ತಿಲ್ಲ.

ಖಾಸಗಿ ಆಸ್ಪತ್ರೆಗಳು ಮೇ ತಿಂಗಳಿನಲ್ಲಿ 1.20 ಕೋಟಿ ಡೋಸ್‍ ಖರೀದಿಸಿದ್ದು, ಈ ತಿಂಗಳಲ್ಲಿ ಖರೀದಿಯಾದ ಲಸಿಕೆಗಳ ಶೇ.15.6ರಷ್ಟಾಗಿದೆ. ರಾಜ್ಯ ಸರ್ಕಾರಗಳು ಶೇ 33.5 (2.66 ಕೋಟಿ ಡೋಸ್‍) ಮತ್ತು ಕೇಂದ್ರ ಸರ್ಕಾರವು ಶೇ. 50.9 (4.03 ಕೋಟಿ ಡೋಸ್‍) ಲಸಿಕೆ ದಾಸ್ತಾನು ಮಾಡಿವೆ.

ಅಪೊಲೋ ಆಸ್ಪತ್ರೆ ಸಮೂಹದ 9 ಆಸ್ಪತ್ರೆಗಳು 16.1 ಲಕ್ಷ ಡೋಸ್‍, ಮ್ಯಾಕ್ಸ್‌ ಕೇರ್‌ನ 6 ಆಸ್ಪತ್ರೆಗಳು 12.97 ಲಕ್ಷ ಡೋಸ್‍, ರಿಲಾಯನ್ಸ್‌ ಫೌಂಡೇಶನ್‍ ನಡೆಸುವ ಎಚ್‍ಎನ್‍ ಟ್ರಸ್ಟ್ ಸಮೂಹ 9.89 ಲಕ್ಷ ಡೋಸ್‍, ಮೆಡಿಕಾ ಸಮೂಹವು 6.26 ಲಕ್ಷ ಡೋಸ್‍, ಪೋರ್ಟಿಸ್‍ ಹೆಲ್ತ್‍ಕೇರ್‌ನ ಎಂಟು ಆಸ್ಪತ್ರೆಗಳು 4.48 ಲಕ್ಷ ಡೋಸ್‍, ಗೋದ್ರೇಜ್‍ ಸಮೂಹ ಆಸ್ಪತ್ರೆಗಳು 3.35 ಲಕ್ಷ, ಮಣಿಪಾಲ್‍ ಹೆಲ್ತ್ ಕೇರ್ ಸಮೂಹ 3.24 ಲಕ್ಷ ಡೋಸ್‍, ನಾರಾಯಣ ಹೃದಯಾಲಯ 2.02 ಲಕ್ಷ ಡೋಸ್‍ ಮತ್ತು ಟೆಕ್ನೋ ಇಂಡಿಯಾ ಸಮೂಹ 2 ಲಕ್ಷ ಡೋಸ್‍ ಖರೀದಿ ಮಾಡಿವೆ.

ಈ ಆಸ್ಪತ್ರೆಗಳು ಮೆಟ್ರೋ, ರಾಜ್ಯ ರಾಜಧಾನಿ ಮತ್ತು ಒಂದನೇ ಶ್ರೇಣಿಯ ನಗರಗಳಲ್ಲಿ ತಮ್ಮ ಘಟಕಗಳನ್ನು ಹೊಂದಿವೆ. ಸೀರಂ ಕಂಪನಿಯ ಕೋವಿಶೀಲ್ಡ್ ಅನ್ನು 600 ರೂ.ಗಳಿಗೆ ಮತ್ತು ಭಾರತ್‍ ಬಯೋಟೆಕ್‍ನ ಕೊವ್ಯಾಕ್ಸಿನ್‍ ಅನ್ನು 1,200 ರೂ,ಗಳಿಗೆ ಈ ಆಸ್ಪತ್ರೆಗಳು ಖರೀದಿಸಿವೆ.

ಬೆಂಗಳೂರಿನ ನ್ಯಾಷನಲ್‍ ಇನ್ಸಿಟ್ಯೂಟ್‍ ಆಫ್‍ ಅಡ್ವಾನ್ಸ್ ಸ್ಟಡೀಸ್‍ನ  ಪ್ರಾಧ್ಯಾಪಕ ತೇಜಲ್‍ ಕಾಂಟಿಕರ್, “ಲಸಿಕಾ ತಯಾರಕ ಕಂಪನಿಗಳು ಹೆಚ್ಚಿನ ದರ ಸಿಗುವ ಕಾರ್ಪೋರೇಟ್‍ ಆಸ್ಪತ್ರೆಗಳಿಗೆ ಲಸಿಕೆ ಮಾರಲು ಆಸಕ್ತಿ ತೋರಿವೆ’’ ಎನ್ನುತ್ತಾರೆ. ಅಂದರೆ ನಿಗದಿತ ದರಕ್ಕಿಂತಲೂ ಹೆಚ್ಚಿನ ದರಕ್ಕೂ ಲಸಿಕೆ ಖರೀದಿಸಿರಬಹುದು ಮತ್ತು ಶ್ರೀಮಂತರಿಗೆ ಅವನ್ನು ಇನ್ನೂ ಹೆಚ್ಚಿನ ದರದಲ್ಲಿ ನೀಡಿರಬಹುದು.

ಈ ಆಸ್ಪತ್ರೆಗಳು ಗ್ರಾಹಕರಿಗೆ ಕೋವಿಶೀಲ್ಡ್ ಅನ್ನು 850-1000 ರೂಗೆ ಮತ್ತು ಕೋವ್ಯಾಕ್ಸಿನ್‍ ಅನ್ನು 1,250 ರೂಗೆ ಒದಗಿಸುತ್ತಿವೆ. ಇದು ನಗರ ನಿವಾಸಿಗಳ ಒಂದು ವರ್ಗಕ್ಕೆ ಮಾತ್ರ ಅನುಕೂಲಕರವಾಗಿದ್ದು, ಕೆಳ ಮಧ್ಯಮ ವರ್ಗದವರ ಕೈಗೆ ಎಟುಕದ ದರವಾಗಿದೆ.

ನಿಮ್ಮಲ್ಲಿರುವ ಲಸಿಕೆಗಳನ್ನು ಸಣ್ಣ ನಗರಗಳಿಗೆ ವಿತರಿಸುತ್ತೀದ್ದೀರಾ ಎಂದು ಇಂಡಿಯನ್  ಎಕ್ಸ್ ಪ್ರೆಸ್‍ ಕೇಳಿದ ಪ್ರಶ್ನೆಗಳಿಗೆ ಈ ಆಸ್ಪತ್ರೆಗಳು ಇನ್ನೂ ಉತ್ತರಿಸಿಲ್ಲ.

ಕೇಂದ್ರದ ಲಸಿಕಾ ನೀತಿಯನ್ನು ಈಗಾಗಲೇ ಸುಪ್ರೀಂಕೋರ್ಟ್ ಪ್ರಶ್ನಿಸಿದೆ. ರಾಜ್ಯ ಸರ್ಕಾರಗಳು ಲಸಿಕೆಯ ಅಸಮಾನ ಹಂಚಿಕೆಯ ಬಗ್ಗೆ ದೂರುತ್ತಿವೆ. ಇದೇ ಹೊತ್ತಲ್ಲಿ ಖಾಸಗಿ ವಲಯಕ್ಕೆ ನಿಗದಿಯಾದ ಲಸಿಕೆಗಳಲ್ಲಿ ಶೇ. 50 ರಷ್ಟು ಕೇವಲ 9 ಸಮೂಹ ಆಸ್ಪತ್ರೆಗಳ ಪಾಲಾಗಿವೆ.

ಉಚಿತ ಲಸಿಕೆ ನೀಡಬೇಕಾದ ಹೊಣೆಯಿಂದ ತಪ್ಪಿಸಿಕೊಂಡ ಕೇಂದ್ರ ಸರ್ಕಾರ ತಯಾರಕ ಕಂಪನಿಗಳು, ದೊಡ್ಡ ಆಸ್ಪತ್ರೆ ಸಮೂಹಗಳ ಪರ ನಿಂತಿದೆಯೇ ಎಂಬ ಪ್ರಶ್ನೆ ಕಾಡುತ್ತಿದೆ.


ಇದನ್ನೂ ಓದಿ: ಕೋವಿಡ್-19; ಆದ ಎಡವಟ್ಟುಗಳು ಮತ್ತು ಬೇಕಿರುವ ಎಚ್ಚರ: ಡಾ. ಜಿ ಎನ್ ಮಲ್ಲಿಕಾರ್ಜುನಪ್ಪ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಒಳಮೀಸಲಾತಿ ಇಲ್ಲದೆ 56 ಸಾವಿರ ಹುದ್ದೆಗಳ ನೇಮಕಾತಿ ಇಲ್ಲ: ಸಚಿವ ಮುನಿಯಪ್ಪ

“ಒಳಮೀಸಲಾತಿ ಇಲ್ಲದೆ ಒಂದೇ ಒಂದು ಹುದ್ದೆಯನ್ನೂ ನೇಮಕ ಮಾಡಲು ಬಿಡುವುದಿಲ್ಲ, ಮುಖ್ಯಮಂತ್ರಿಗಳು ಈ ಬಗ್ಗೆ ಒಪ್ಪಿಕೊಂಡಿದ್ದಾರೆ. 27ರಂದು ನಡೆಯುವ ಸಚಿವ ಸಂಪುಟ ಸಭೆ ನಮಗೆ ಚಾರಿತ್ರಿಕವಾಗಲಿದೆ. ಮುಖ್ಯಮಂತ್ರಿಗಳ ಮೇಲೆ ವಿಶ್ವಾಸ ಇರಲಿ” ಎಂದು...

ಪಶ್ಚಿಮ ಏಷ್ಯಾ ಸಂಘರ್ಷ| ‘ಈ ಯುದ್ಧವನ್ನು ಕೊನೆಗೊಳಿಸಲು ಒಂದೇ ಮಾರ್ಗ…’: ಮೂರು ಷರತ್ತುಗಳನ್ನು ಮುಂದಿಟ್ಟ ಇರಾನ್

ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಅವರು ಅಮೆರಿಕ ಮತ್ತು ಇಸ್ರೇಲ್ ಜೊತೆಗಿನ ನಡೆಯುತ್ತಿರುವ ಸಂಘರ್ಷವನ್ನು ಕೊನೆಗೊಳಿಸಲು ಮೂರು ಷರತ್ತುಗಳನ್ನು ನಿಗದಿಪಡಿಸಿದ್ದಾರೆ. ಇದರಲ್ಲಿ ದೇಶವು ಭವಿಷ್ಯದ ದಾಳಿಗಳನ್ನು ಎದುರಿಸುವುದಿಲ್ಲ ಎಂಬ ಖಾತರಿಗಳು ಸೇರಿವೆ. ಬುಧವಾರ ತಮ್ಮ...

ಖಾಸಗಿ ಜಾಗದ ನಮಾಝ್‌ಗೆ ಅಧಿಕಾರಿಗಳಿಂದ ಅಡ್ಡಿ : ಮುಸ್ಲಿಂ ವ್ಯಕ್ತಿಗೆ ಭದ್ರತೆ ಒದಗಿಸಲು ಕೋರ್ಟ್ ಆದೇಶ

ಉತ್ತರ ಪ್ರದೇಶದ ಬರೇಲಿ ಜಿಲ್ಲೆಯ ಮುಸ್ಲಿಂ ವ್ಯಕ್ತಿಯೊಬ್ಬರು ತಮ್ಮ ಖಾಸಗಿ ಜಾಗದಲ್ಲಿ ಇತರರೊಂದಿಗೆ ನಮಾಝ್ ಮಾಡುವುದಕ್ಕೆ ಅಡ್ಡಿಪಡಿಸಲಾಗಿದೆ ಎಂದು ಆರೋಪಿಸಿದ ಹಿನ್ನೆಲೆ, ಅವರಿಗೆ ದಿನದ 24 ಗಂಟೆಯೂ ರಕ್ಷಣೆ ನೀಡಲು ಇಬ್ಬರು ಭದ್ರತಾ...

‘ಒಳಮೀಸಲಾತಿ ಜಾರಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬಿಡುತ್ತಿಲ್ಲ’: ಮಂದಕೃಷ್ಣ ಮಾದಿಗ ಆರೋಪ

‘ಒಳಮೀಸಲಾತಿ ಜಾರಿಗೆ ತರುತ್ತೇವೆಂದು ಹೇಳಿದ್ದ ಕಾಂಗ್ರೆಸ್, ಈಗ ಒಳಮೀಸಲಾತಿ ಅನುಷ್ಠಾನದಲ್ಲಿ ಮೀನಾಮೇಷ ಎಣಿಸುತ್ತಿದೆ. ಕಾಂಗ್ರೆಸ್ ನ ಹೈಕಮಾಂಡ್ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ. ಈ ಮೂವರನ್ನು ನಿಯಂತ್ರಿಸುವವರು ಕಾಂಗ್ರೆಸ್...

ಸಾವರ್ಕರ್ ಕುರಿತು ಹೇಳಿಕೆ : ರಾಹುಲ್ ಗಾಂಧಿ ವಿರುದ್ಧದ ಮಾನನಷ್ಟ ಮೊಕದ್ದಮೆ ರದ್ದು

ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ (2022ರಲ್ಲಿ) ಹಿಂದುತ್ವ ಸಿದ್ಧಾಂತವಾದಿ ವಿನಾಯಕ ದಾಮೋದರ್ ಸಾವರ್ಕರ್ ಕುರಿತು ನೀಡಿದ್ದ ಹೇಳಿಕೆಗೆ ಸಂಬಂಧಿಸಿದಂತೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿದ್ದ ಮಾನನಷ್ಟ ಮೊಕದ್ದಮೆಯನ್ನು...

‘ಒಳಮೀಸಲಾತಿ ಜಾರಿಯಲ್ಲಿ ಸರ್ಕಾರ ನಿರ್ಲಕ್ಷ್ಯ ಧೋರಣೆ ತೋರಿದರೆ ಹೋರಾಟ ವಿಧಾನಸೌಧಕ್ಕೆ ಸ್ಥಳಾಂತರವಾಗುತ್ತದೆ’: ಮಾದರ ಚೆನ್ನಯ್ಯ ಸ್ವಾಮೀಜಿ

ಕಳೆದ 35 ವರ್ಷಗಳಿಂದ ಹಲವಾರು ಹೋರಾಟಗಾರರು ತಮ್ಮ ಜೀವ-ಜೀವನವನ್ನು ಅರ್ಪಿಸಿ, ಮನೆ-ಮಠವನ್ನು ಬಿಟ್ಟು ಒಳಮೀಸಲಾತಿ ಹೋರಾಟವನ್ನು ಅಂತಿಮ ಘಟ್ಟಕ್ಕೆ ತಂದಿದ್ದಾರೆ. ಅನೇಕರು ಬದುಕನ್ನು ಮಾತ್ರವಲ್ಲ, ಪ್ರಾಣವನ್ನೂ ಕಳೆದುಕೊಂಡಿದ್ದಾರೆ. ಇದು 2ನೇ ಸ್ವಾತಂತ್ರ್ಯ ಹೋರಾಟವಾಗಿದೆ....

ಎಸ್‌ಎನ್‌ಡಿಪಿ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ವೆಳ್ಳಾಪ್ಪಳ್ಳಿ ನಟೇಶನ್ ಅನರ್ಹ

ಶ್ರೀ ನಾರಾಯಣ ಧರ್ಮ ಪರಿಪಾಲನ ಯೋಗಂ (ಎಸ್‌ಎನ್‌ಡಿಪಿ ಯೋಗಂ) ನ ಪ್ರಧಾನ ಕಾರ್ಯದರ್ಶಿ ಮತ್ತು ಮತ್ತು ಎಸ್‌ಎನ್ ಟ್ರಸ್ಟ್‌ನ ಕಾರ್ಯದರ್ಶಿ ಸ್ಥಾನದಿಂದ ವೆಳ್ಳಾಪ್ಪಳ್ಳಿ ನಟೇಶನ್ ಅವರನ್ನು ಕೇರಳ ಹೈಕೋರ್ಟ್ ಗುರುವಾರ (ಮಾ.12) ಅನರ್ಹಗೊಳಿಸಿದ್ದು,...

‘ಫಾರೂಕ್ ಅಬ್ದುಲ್ಲಾರನ್ನು ಕೊಲ್ಲುವುದು ಸರ್ಕಾರದ ಉದ್ದೇಶವೇ?’..ರಾಜ್ಯ ಸಭೆಯಲ್ಲಿ ಖರ್ಗೆ ಪ್ರಶ್ನೆ

ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಹಾಗೂ ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ) ಪಕ್ಷದ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ ಅವರ ಹತ್ಯೆ ಯತ್ನ ವಿಚಾರವನ್ನು ವಿಪಕ್ಷ ಸದಸ್ಯರು ಗುರುವಾರ (ಮಾ.12) ರಾಜ್ಯಸಭೆಯಲ್ಲಿ ಪ್ರಸ್ತಾಪಿಸಿದರು. ಘಟನೆ ಬಗ್ಗೆ...

56 ಸಾವಿರ ಹುದ್ದೆಗಳ ನೇಮಕಾತಿಯಲ್ಲಿ ಒಳಮೀಸಲಾತಿ ಅನ್ವಯಕ್ಕೆ ಆಗ್ರಹಿಸಿ ಎಡಗೈ ಸಮುದಾಯದಿಂದ ಬೃಹತ್ ಪ್ರತಿಭಟನೆ 

ಸರ್ಕಾರವು ಒಳ ಮೀಸಲಾತಿಯನ್ನು ತಪ್ಪಿಸುವ ಹುನ್ನಾರದಿಂದ ತರಾತುರಿಯಲ್ಲಿ 56,432 ಹುದ್ದೆಗಳ ನೇಮಕಾತಿಗೆ ಆದೇಶ ಹೊರಡಿಸಿದೆ. ನೇಮಕಾತಿಯಲ್ಲಿ ಒಳಮೀಸಲಾತಿ ಅಳವಡಿಸದೆ, ಎಡಗೈ ಸಮುದಾಯಗಳಿಗೆ ಸರ್ಕಾರ ಮತ್ತೆ ವಂಚಿಸುತ್ತಿದೆ ಎಂದು ‘ಒಳಮೀಸಲಾತಿ ಹೋರಾಟ ಸಮಿತಿ’ ಆರೋಪಿಸಿದೆ....

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧದ ಅವಿಶ್ವಾಸ ನಿರ್ಣಯಕ್ಕೆ ಸೋಲು

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧ ವಿರೋಧ ಪಕ್ಷಗಳು ಮಂಡಿಸಿದ್ದ ಅವಿಶ್ವಾಸ ನಿರ್ಣಯವು ಬುಧವಾರ (ಮಾ.11) ಧ್ವನಿ ಮತದ ಮೂಲಕ ತಿರಸ್ಕಾರಗೊಂಡಿದೆ. ಸದನದಲ್ಲಿ ವಿರೋಧ ಪಕ್ಷಗಳ ತೀವ್ರ ಗದ್ದಲ ಮತ್ತು ಘೋಷಣೆಗಳ ನಡುವೆಯೇ ಸ್ಪೀಕರ್...