Homeಕರ್ನಾಟಕಊರೂರು ನುಂಗುತ್ತಿರುವ ಕಡಲ ಮುಂದೆ ಆಡಳಿತಗಾರರ ಪಿಟೀಲು!

ಊರೂರು ನುಂಗುತ್ತಿರುವ ಕಡಲ ಮುಂದೆ ಆಡಳಿತಗಾರರ ಪಿಟೀಲು!

- Advertisement -
- Advertisement -

 ಶುದ್ದೋಧನ|

ಅರಬ್ಬೀ ಸಮುದ್ರದ ತೀರದಲ್ಲಿರುವ ಉತ್ತರ ಕನ್ನಡದ ಐದೂ ತಾಲ್ಲೂಕುಗಳಲ್ಲಿ ಕಡಲು ಕೊರೆತ ಭೂತ ಬೆನ್ನಿಗೆ ಬಿದ್ದು ಕಾಡುತ್ತಿದೆ. ಮಳೆಗಾಲ ಬಂತೆಂದರೆ ಸಾಕು; ಕಡಲತಡಿಯ ಮಂದಿ ಜೀವಭಯದಿಂದ ತತ್ತರಿಸುತ್ತಾರೆ. ಕಡಲಿನ ಹೆಬ್ಬಲೆಗಳು ಯಾವ ಗಳಿಗೆಯಲ್ಲಿ ತೋಟ-ಮನೆಗೆ ನುಗ್ಗಿ ಆಪೋಷನ ಪಡೆಯುತ್ತವೆಯೋ ಎಂಬ ಚಡಪಡಿಕೆ ಶುರುವಾಗುತ್ತದೆ. ರಾತ್ರಿಯಿಡೀ ನಿದ್ದೆ ಮಾಡದೆ ಎದ್ದು ಕೂರುವ ಪರಿಸ್ಥಿತಿ. ಮಳೆಗಾಲ ಎಂದರೆ ಸಮುದ್ರ ದಂಡೆಯ ಜನರ ಪಾಲಿಗೆ ಬದುಕು ಬರ್ಬಾದ್ ಆಗುವ ಆತಂಕದ ಕಾಲ!! ಈ ಕಡಲುಕೊರೆತವನ್ನು ಜಿಲ್ಲೆಯ ಆಳುವ ವರ್ಗ ಗಂಭೀರವಾಗಿ ಪರಿಗಣಿಸಿಲ್ಲ. ಈ ಎರಡು ದಶಕದಲ್ಲಿ ಕಡಲುಕೊರೆತ ಕಾಮಗಾರಿ ಹೆಸರಲ್ಲಿ ಕೋಟಿಕೋಟಿ ನುಂಗಿ ಕುಬೇರರಾದ ಗುತ್ತಿಗೆದಾರ-ಇಂಜಿನಿಯರ್-ರಾಜಕಾರಣಿಗಳ ದೊಡ್ಡ ದಂಡೇ ಇದೆ.

ಜಿಲ್ಲೆಯ ಮಂತ್ರಿ, ಸಂಸದ-ಶಾಸಕರಿಗೆ ತಂತಮ್ಮ ಕ್ಷೇತ್ರದ ಕಡಲು ಕೊರೆತ ಶಾಶ್ವತವಾಗಿ ನಿಲ್ಲಿಸಿ ಜನರಿಗೆ ನೆಮ್ಮದಿ ಕೊಡಬೇಕೆಂಬ ಕನಿಷ್ಠ ಕಾಳಜಿಯೂ ಇಲ್ಲ. ಬೇಸಿಗೆಯಲ್ಲೇ ಸಮುದ್ರ ದಾಳಿ ಆಗಬಹುದಾದ ಏರಿಯಾದ ಸ್ಪಷ್ಟ ಕಲ್ಪನೆ, ಮಾಹಿತಿಯಿದ್ದರೂ ಜಿಲ್ಲಾಡಳಿತ ಉದಾಸೀನದಿಂದಲೇ ಉಳಿದುಬಿಡುತ್ತದೆ. ಯಾವಾಗ ಮಳೆ ಜೋರಾಗುತ್ತದೋ ಆಗ ಅಲೆಗಳ ಅಬ್ಬರ ಕಡಲತಡಿಯವರನ್ನು ದಿಕ್ಕೆಡಿಸುತ್ತದೆ. ಜನರ ಚೀತ್ಕಾರ ಆರಂಭವಾದಾಗ ಸಂಬಂಧಿಸಿದ ಅಧಿಕಾರಿ-ಶಾಸಕ-ಮಂತ್ರಿಗಳು ಕಣ್ಣೊರೆಸುವ “ಆಟ” ಆರಂಭಿಸುತ್ತಾರೆ. ಸಮುದ್ರಕ್ಕೆ ಕಲ್ಲುಹಾಕುವ ಬೋಗಸ್ ಕಾಮಗಾರಿ ಮಾಡಿ ಸಿಕ್ಕಷ್ಟು ಸ್ವಾಹಾ ಮಾಡುತ್ತಾರೆ. ಮುಂದಿನ ವರ್ಷಕ್ಕೆ ಪಿಡುಗು ಹಾಗೇ ಉಳಿಸುತ್ತಾರೆ.
ಪಕ್ಕದ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಕಡಲ್ಕೊರೆತದ ಹಾವಳಿ ಇಲ್ಲವೆಂದಲ್ಲ. ಆದರೆ ಅಲ್ಲಿಯ ಆಳುವವರ್ಗ ಸವiಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುತ್ತಿದ್ದಾರೆ. ವಿಶೇಷ ಅನುದಾನ ತಂದು ತೊಂದರೆ ಮರುಕಳಿಸದಂತೆ ನಿಗಾ ವಹಿಸುತ್ತಿದೆ. ಇಂಥ ಇಚ್ಛಾಶಕ್ತಿ ಉತ್ತರಕನ್ನಡವು ಹೆತ್ತ ಜನಪ್ರತಿನಿಧಿ ಭೂಪರಿಗಿಲ್ಲ! ಹೀಗಾಗಿ ಜನಸಾಮಾನ್ಯರ ಜೀವನಕ್ಕಾಧಾರವಾದ ಗದ್ದೆ-ತೋಟ-ಬಾವಿ-ಕಸುಬಿಗೆಲ್ಲಾ ಉಪ್ಪು ನೀರು ನುಗ್ಗಿ ಬಂಜರಾಗುತ್ತಿದೆ; ಮನೆಗಳು ಕಣ್ಣೆದುರೇ ಕಡಲಲ್ಲಿ ಕರಗುತ್ತಿವೆ. ಕಲ್ಲು ಹೃದಯದ ಪಡಪೋಸಿ ಜನಪ್ರತಿನಿಧಿಗಳು ಏನೂ ಆಗಿಲ್ಲ ಎಂಬಂತೆ ಆರಾಮಾಗಿದ್ದರೆ.

ಆಳುವ ಮಂದಿಯ ಉದಾಸೀನ-ಹೊಣೆಗೇಡಿತನದಿಂದ ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ ಹಾಗೂ ಭಟ್ಕಳದಲ್ಲಿ ಕಡಲ್ಕೊರೆತದ ಆರ್ಭಟ ಜೋರಾಗುತ್ತಲೇ ಇದೆ. ಕಳೆದ ಮೂರು ವರ್ಷದಿಂದ ಅಂದಿನ-ಇಂದಿನ ಸಿಎಂಗಳು, ಸಂಸದರು, ಮಂತ್ರಿಗಳು, ಎಮ್ಮೆಲ್ಲೆಗಳಿಗೆಲ್ಲಾ ತಮ್ಮನ್ನು ಸಮುದ್ರದ ಬಾಯಿಂದ ಬಚಾವು ಮಾಡಿರೆಂದು ಮನವಿ ಮೇಲೆ ಮನವಿ ಮಾಡಿಕೊಳ್ಳುತ್ತಲೇ ಬಂದಿರುವ ಹೊನ್ನಾವರ ತಾಲ್ಲೂಕಿನ ಕರ್ಕಿ ಗ್ರಾಮದ ತೊಪ್ಪಲಕೇರಿ ಕಡಲು ಕಿನಾರೆಯ ಮಂದಿ ಅಳಲು ಅರಣ್ಯ ರೋದನದಂತೆ ಆಗಿರುವುದು ವ್ಯವಸ್ಥೆಯ ಕ್ರೌರ್ಯಕ್ಕೆ ಹಿಡಿದ ಕನ್ನಡಿಯಂತಿದೆ.

ತೊಪ್ಪಲಕೇರಿಯ ಮನೆ-ಮರ-ಬಾವಿಗಳನ್ನೆಲ್ಲ ಸಮುದ್ರ ಒಂದೊಂದಾಗಿ ನುಂಗಲು ಶುರುಮಾಡಿ ಹಲವು ವರ್ಷವಾಗಿದೆ. ಮೂರು ವರ್ಷದ ಹಿಂದೆ ಅಲೆಗಳ ಆರ್ಭಟಕ್ಕೆ ಆ ಪುಟ್ಟ ಕೇರಿ ತತ್ತರಿಸಿಹೋಯಿತು. ಕಂಗಾಲಾದ ಜನ ಕಾಪಾಡಿ ಎಂದು ಜಿಲ್ಲಾಧಿಕಾರಿ, ಅಂದಿನ ಶಾಸಕಿ ಶಾರದಾ ಶೆಟ್ಟಿ, ಇಂದಿನ ಶಾಸಕ ದಿನಕರ ಶೆಟ್ಟಿ, ಸಂಸದ ಅನಂತ್ಮಾಣಿ, ಮಂತ್ರಿ ಮಹಾಶಯ ದೇಶ್‍ಪಾಂಡೆ, ಹಿಂದಿನ ಸಿಎಂ ಸಿದ್ಧು, ಇಂದಿನ ಸಿಎಂ ಕುಮ್ಮಿ ಕೈ-ಕಾಲು ಹಿಡಿದು ಅಂಗಲಾಚಿದರೂ ಪ್ರಯೋಜನವೇನೂ ಆಗಲಿಲ್ಲ. ರಾಜ್ಯದ ಮಾನವ ಹಕ್ಕು ಆಯೋಗಕ್ಕೆ ಪರಿಸ್ಥಿತಿಯ ಗಂಭೀರತೆ ಬಗ್ಗೆ ಮನವಿ ಕಳಿಸಿದರು. ದುರಂತವೆಂದರೆ ಮಾನವಹಕ್ಕು ಆಯೋಗಕ್ಕೂ ಈ ಮಂದಿಯ ಸಾವುಬದುಕಿನ ಹೋರಾಟ ಅರ್ಥವಾಗಲಿಲ್ಲ.

ತೊಪ್ಪಲಕೇರಿಯ ಜನರ ದೂರು ಸರ್ಕಾರಿ ಕಚೇರಿಗಳ ಟೇಬಲ್‍ನಿಂದ ಟೇಬಲ್‍ಗೆ ಹಾರಾಡಿತೇ ಹೊರತು ಜನಪರವಾಗಿ ಯಾರೂ ಚಿಂತಿಸಲಿಲ್ಲ. ಕೊನೆಗೊಮ್ಮೆ ಶಾಸಕ, ಎಸಿ, ತಹಸೀಲ್ದಾರ್ ತೊಪ್ಪಲಕೇರಿಗೆ ಬರುವುದು ಅನಿವಾರ್ಯವಾಯ್ತು. ಬಂದವರು ಜನರಿಗೆ ಸಾಂತ್ವನ ಹೇಳಲಿಲ್ಲ; ಪುನರ್ವಸತಿ ಬಗ್ಗೆ ಮಾತಾಡಲಿಲ್ಲ; ಸಮುದ್ರ ಕೊರೆತ ತಡೆಯುವ ಕಾಮಗಾರಿ ಆರಂಭಿಸುವ ಬಗ್ಗೆಯೂ ಭರವಸೆ ಕೊಡಲಿಲ್ಲ. ಬದಲಿಗೆ ನೊಂದವರನ್ನು ಇನ್ನಷ್ಟು ಧೃತಿಗೆಡಿಸುವ ಮಾತಾಡಿದರು. ಕಾಮಗಾರಿಗೆ ಹಣಕಾಸಿನ ಅಡಚಣೆಯಿದೆ; ಬಜೆಟ್‍ನಲ್ಲಿ ತೊಪ್ಪಲಕೇರಿ ಕಡಲ್‍ಕೊರೆತ ಸೇರಿಲ್ಲ ಎಂದು ಹೊಣೆಗೇಡಿತನ ಪ್ರದರ್ಶಿಸಿ ಹೋದರು.

ತೊಪ್ಪಲಕೇರಿಯ ಮಂದಿಯ ಅಳಲು ಹೃದಯವಿದ್ರಾವಕವಾಗಿದೆ. ರಾತ್ರಿ ಮಲಗಿದಾಗ ಮನೆ ಎಷ್ಟೊತ್ತಿಗೆ ಅಲೆಗಳ ಹೊಡೆತಕ್ಕೆ ಉರುಳುತ್ತದೋ ಗೊತ್ತಾಗುತ್ತಿಲ್ಲ. ಇಂಥ ಭಯದಲ್ಲಿ ಹೆಂಗಸರು, ಮಕ್ಕಳನ್ನು ಇಟ್ಟುಕೊಂಡು ರಾತ್ರಿ ಹೇಗೆ ಕಳೆಯಬೇಕು? ಪತ್ರಿಕೆ-ಟಿವಿಯಲ್ಲಿ ನಮ್ಮ ಪರಿಸ್ಥಿತಿ ಸುದ್ದಿಯಾದರೂ ಜಿಲ್ಲಾಡಳಿತಕ್ಕೆ, ಶಾಸಕನಿಗೆ, ಕನಿಷ್ಟ ಮಾನವ ಹಕ್ಕು ಆಯೋಗಕ್ಕೂ ಎಚ್ಚರ ಆಗಿಲ್ಲ ಎಂದು ಕಂಗೆಟ್ಟಿರುವ ಮಂದಿ ಹೇಳುತ್ತಾರೆ. ಮಾನವ ಹಕ್ಕು ಆಯೋಗದ ನಿರ್ಲಕ್ಷ ಧೋರಣೆಗೆ ಬೇಸತ್ತರೂ ನೊಂದವರು ಸರಣಿ ಪತ್ರ ಬರೆಯುತ್ತಲೇ ಇದ್ದರು. ಕೊನೆಗೊಂದು ದಿನ “ನಾವೆಲ್ಲ ಸತ್ತ ನಂತರ ಲೆಕ್ಕ ಮಾಡಲು ಬರ್ತೀರಾ, ಸರ್…” ಎಂದೂ ಪತ್ರ ಬರೆದರು. ಆದರೂ ಎಮ್ಮೆಲ್ಲೆಯಿಂದ ಹಿಡಿದು ಮುಖ್ಯಮಂತ್ರಿವರೆಗಿನ ಎಲ್ಲರೂ ಕಣ್ಣು-ಬಾಯಿ ಮುಚ್ಚಿಕೊಂಡೇ ಇದ್ದಾರೆ.

ಈಗ ತೊಪ್ಪಲಕೇರಿಯ ಕಡಲ ಗುಮ್ಮದ ಅಂಜಿಕೆಯಲ್ಲೇ ದಿನ ಕಳೆಯುತ್ತಿರುವ ಮಂದಿ ಕೊನೇ ಪ್ರಯತ್ನವೆಂದು ಪ್ರಧಾನಿ ಮೋದಿಗೆ ಕಾಪಾಡುವಂತೆ ಟ್ವೀಟ್ ಮಾಡಿದ್ದಾರೆ. ನಮೋ ಆ್ಯಪ್ ಮೂಲಕ ದೂರು ಕಳಿಸಿದ್ದಾರೆ. ಸಿಎಂ ಆಫೀಸಿನಲ್ಲೂ ಆ ಟ್ವೀಟ್‍ಗೆ ಸ್ಪಂದನೆ ಬಂದಿಲ್ಲ. ಕಡಲು ಮಾತ್ರ ಮುನ್ನುಗ್ಗಿ ಬರುತ್ತಲೇ ಇದೆ.

 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...