Homeಕರ್ನಾಟಕಊರೂರು ನುಂಗುತ್ತಿರುವ ಕಡಲ ಮುಂದೆ ಆಡಳಿತಗಾರರ ಪಿಟೀಲು!

ಊರೂರು ನುಂಗುತ್ತಿರುವ ಕಡಲ ಮುಂದೆ ಆಡಳಿತಗಾರರ ಪಿಟೀಲು!

- Advertisement -
- Advertisement -

 ಶುದ್ದೋಧನ|

ಅರಬ್ಬೀ ಸಮುದ್ರದ ತೀರದಲ್ಲಿರುವ ಉತ್ತರ ಕನ್ನಡದ ಐದೂ ತಾಲ್ಲೂಕುಗಳಲ್ಲಿ ಕಡಲು ಕೊರೆತ ಭೂತ ಬೆನ್ನಿಗೆ ಬಿದ್ದು ಕಾಡುತ್ತಿದೆ. ಮಳೆಗಾಲ ಬಂತೆಂದರೆ ಸಾಕು; ಕಡಲತಡಿಯ ಮಂದಿ ಜೀವಭಯದಿಂದ ತತ್ತರಿಸುತ್ತಾರೆ. ಕಡಲಿನ ಹೆಬ್ಬಲೆಗಳು ಯಾವ ಗಳಿಗೆಯಲ್ಲಿ ತೋಟ-ಮನೆಗೆ ನುಗ್ಗಿ ಆಪೋಷನ ಪಡೆಯುತ್ತವೆಯೋ ಎಂಬ ಚಡಪಡಿಕೆ ಶುರುವಾಗುತ್ತದೆ. ರಾತ್ರಿಯಿಡೀ ನಿದ್ದೆ ಮಾಡದೆ ಎದ್ದು ಕೂರುವ ಪರಿಸ್ಥಿತಿ. ಮಳೆಗಾಲ ಎಂದರೆ ಸಮುದ್ರ ದಂಡೆಯ ಜನರ ಪಾಲಿಗೆ ಬದುಕು ಬರ್ಬಾದ್ ಆಗುವ ಆತಂಕದ ಕಾಲ!! ಈ ಕಡಲುಕೊರೆತವನ್ನು ಜಿಲ್ಲೆಯ ಆಳುವ ವರ್ಗ ಗಂಭೀರವಾಗಿ ಪರಿಗಣಿಸಿಲ್ಲ. ಈ ಎರಡು ದಶಕದಲ್ಲಿ ಕಡಲುಕೊರೆತ ಕಾಮಗಾರಿ ಹೆಸರಲ್ಲಿ ಕೋಟಿಕೋಟಿ ನುಂಗಿ ಕುಬೇರರಾದ ಗುತ್ತಿಗೆದಾರ-ಇಂಜಿನಿಯರ್-ರಾಜಕಾರಣಿಗಳ ದೊಡ್ಡ ದಂಡೇ ಇದೆ.

ಜಿಲ್ಲೆಯ ಮಂತ್ರಿ, ಸಂಸದ-ಶಾಸಕರಿಗೆ ತಂತಮ್ಮ ಕ್ಷೇತ್ರದ ಕಡಲು ಕೊರೆತ ಶಾಶ್ವತವಾಗಿ ನಿಲ್ಲಿಸಿ ಜನರಿಗೆ ನೆಮ್ಮದಿ ಕೊಡಬೇಕೆಂಬ ಕನಿಷ್ಠ ಕಾಳಜಿಯೂ ಇಲ್ಲ. ಬೇಸಿಗೆಯಲ್ಲೇ ಸಮುದ್ರ ದಾಳಿ ಆಗಬಹುದಾದ ಏರಿಯಾದ ಸ್ಪಷ್ಟ ಕಲ್ಪನೆ, ಮಾಹಿತಿಯಿದ್ದರೂ ಜಿಲ್ಲಾಡಳಿತ ಉದಾಸೀನದಿಂದಲೇ ಉಳಿದುಬಿಡುತ್ತದೆ. ಯಾವಾಗ ಮಳೆ ಜೋರಾಗುತ್ತದೋ ಆಗ ಅಲೆಗಳ ಅಬ್ಬರ ಕಡಲತಡಿಯವರನ್ನು ದಿಕ್ಕೆಡಿಸುತ್ತದೆ. ಜನರ ಚೀತ್ಕಾರ ಆರಂಭವಾದಾಗ ಸಂಬಂಧಿಸಿದ ಅಧಿಕಾರಿ-ಶಾಸಕ-ಮಂತ್ರಿಗಳು ಕಣ್ಣೊರೆಸುವ “ಆಟ” ಆರಂಭಿಸುತ್ತಾರೆ. ಸಮುದ್ರಕ್ಕೆ ಕಲ್ಲುಹಾಕುವ ಬೋಗಸ್ ಕಾಮಗಾರಿ ಮಾಡಿ ಸಿಕ್ಕಷ್ಟು ಸ್ವಾಹಾ ಮಾಡುತ್ತಾರೆ. ಮುಂದಿನ ವರ್ಷಕ್ಕೆ ಪಿಡುಗು ಹಾಗೇ ಉಳಿಸುತ್ತಾರೆ.
ಪಕ್ಕದ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಕಡಲ್ಕೊರೆತದ ಹಾವಳಿ ಇಲ್ಲವೆಂದಲ್ಲ. ಆದರೆ ಅಲ್ಲಿಯ ಆಳುವವರ್ಗ ಸವiಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುತ್ತಿದ್ದಾರೆ. ವಿಶೇಷ ಅನುದಾನ ತಂದು ತೊಂದರೆ ಮರುಕಳಿಸದಂತೆ ನಿಗಾ ವಹಿಸುತ್ತಿದೆ. ಇಂಥ ಇಚ್ಛಾಶಕ್ತಿ ಉತ್ತರಕನ್ನಡವು ಹೆತ್ತ ಜನಪ್ರತಿನಿಧಿ ಭೂಪರಿಗಿಲ್ಲ! ಹೀಗಾಗಿ ಜನಸಾಮಾನ್ಯರ ಜೀವನಕ್ಕಾಧಾರವಾದ ಗದ್ದೆ-ತೋಟ-ಬಾವಿ-ಕಸುಬಿಗೆಲ್ಲಾ ಉಪ್ಪು ನೀರು ನುಗ್ಗಿ ಬಂಜರಾಗುತ್ತಿದೆ; ಮನೆಗಳು ಕಣ್ಣೆದುರೇ ಕಡಲಲ್ಲಿ ಕರಗುತ್ತಿವೆ. ಕಲ್ಲು ಹೃದಯದ ಪಡಪೋಸಿ ಜನಪ್ರತಿನಿಧಿಗಳು ಏನೂ ಆಗಿಲ್ಲ ಎಂಬಂತೆ ಆರಾಮಾಗಿದ್ದರೆ.

ಆಳುವ ಮಂದಿಯ ಉದಾಸೀನ-ಹೊಣೆಗೇಡಿತನದಿಂದ ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ ಹಾಗೂ ಭಟ್ಕಳದಲ್ಲಿ ಕಡಲ್ಕೊರೆತದ ಆರ್ಭಟ ಜೋರಾಗುತ್ತಲೇ ಇದೆ. ಕಳೆದ ಮೂರು ವರ್ಷದಿಂದ ಅಂದಿನ-ಇಂದಿನ ಸಿಎಂಗಳು, ಸಂಸದರು, ಮಂತ್ರಿಗಳು, ಎಮ್ಮೆಲ್ಲೆಗಳಿಗೆಲ್ಲಾ ತಮ್ಮನ್ನು ಸಮುದ್ರದ ಬಾಯಿಂದ ಬಚಾವು ಮಾಡಿರೆಂದು ಮನವಿ ಮೇಲೆ ಮನವಿ ಮಾಡಿಕೊಳ್ಳುತ್ತಲೇ ಬಂದಿರುವ ಹೊನ್ನಾವರ ತಾಲ್ಲೂಕಿನ ಕರ್ಕಿ ಗ್ರಾಮದ ತೊಪ್ಪಲಕೇರಿ ಕಡಲು ಕಿನಾರೆಯ ಮಂದಿ ಅಳಲು ಅರಣ್ಯ ರೋದನದಂತೆ ಆಗಿರುವುದು ವ್ಯವಸ್ಥೆಯ ಕ್ರೌರ್ಯಕ್ಕೆ ಹಿಡಿದ ಕನ್ನಡಿಯಂತಿದೆ.

ತೊಪ್ಪಲಕೇರಿಯ ಮನೆ-ಮರ-ಬಾವಿಗಳನ್ನೆಲ್ಲ ಸಮುದ್ರ ಒಂದೊಂದಾಗಿ ನುಂಗಲು ಶುರುಮಾಡಿ ಹಲವು ವರ್ಷವಾಗಿದೆ. ಮೂರು ವರ್ಷದ ಹಿಂದೆ ಅಲೆಗಳ ಆರ್ಭಟಕ್ಕೆ ಆ ಪುಟ್ಟ ಕೇರಿ ತತ್ತರಿಸಿಹೋಯಿತು. ಕಂಗಾಲಾದ ಜನ ಕಾಪಾಡಿ ಎಂದು ಜಿಲ್ಲಾಧಿಕಾರಿ, ಅಂದಿನ ಶಾಸಕಿ ಶಾರದಾ ಶೆಟ್ಟಿ, ಇಂದಿನ ಶಾಸಕ ದಿನಕರ ಶೆಟ್ಟಿ, ಸಂಸದ ಅನಂತ್ಮಾಣಿ, ಮಂತ್ರಿ ಮಹಾಶಯ ದೇಶ್‍ಪಾಂಡೆ, ಹಿಂದಿನ ಸಿಎಂ ಸಿದ್ಧು, ಇಂದಿನ ಸಿಎಂ ಕುಮ್ಮಿ ಕೈ-ಕಾಲು ಹಿಡಿದು ಅಂಗಲಾಚಿದರೂ ಪ್ರಯೋಜನವೇನೂ ಆಗಲಿಲ್ಲ. ರಾಜ್ಯದ ಮಾನವ ಹಕ್ಕು ಆಯೋಗಕ್ಕೆ ಪರಿಸ್ಥಿತಿಯ ಗಂಭೀರತೆ ಬಗ್ಗೆ ಮನವಿ ಕಳಿಸಿದರು. ದುರಂತವೆಂದರೆ ಮಾನವಹಕ್ಕು ಆಯೋಗಕ್ಕೂ ಈ ಮಂದಿಯ ಸಾವುಬದುಕಿನ ಹೋರಾಟ ಅರ್ಥವಾಗಲಿಲ್ಲ.

ತೊಪ್ಪಲಕೇರಿಯ ಜನರ ದೂರು ಸರ್ಕಾರಿ ಕಚೇರಿಗಳ ಟೇಬಲ್‍ನಿಂದ ಟೇಬಲ್‍ಗೆ ಹಾರಾಡಿತೇ ಹೊರತು ಜನಪರವಾಗಿ ಯಾರೂ ಚಿಂತಿಸಲಿಲ್ಲ. ಕೊನೆಗೊಮ್ಮೆ ಶಾಸಕ, ಎಸಿ, ತಹಸೀಲ್ದಾರ್ ತೊಪ್ಪಲಕೇರಿಗೆ ಬರುವುದು ಅನಿವಾರ್ಯವಾಯ್ತು. ಬಂದವರು ಜನರಿಗೆ ಸಾಂತ್ವನ ಹೇಳಲಿಲ್ಲ; ಪುನರ್ವಸತಿ ಬಗ್ಗೆ ಮಾತಾಡಲಿಲ್ಲ; ಸಮುದ್ರ ಕೊರೆತ ತಡೆಯುವ ಕಾಮಗಾರಿ ಆರಂಭಿಸುವ ಬಗ್ಗೆಯೂ ಭರವಸೆ ಕೊಡಲಿಲ್ಲ. ಬದಲಿಗೆ ನೊಂದವರನ್ನು ಇನ್ನಷ್ಟು ಧೃತಿಗೆಡಿಸುವ ಮಾತಾಡಿದರು. ಕಾಮಗಾರಿಗೆ ಹಣಕಾಸಿನ ಅಡಚಣೆಯಿದೆ; ಬಜೆಟ್‍ನಲ್ಲಿ ತೊಪ್ಪಲಕೇರಿ ಕಡಲ್‍ಕೊರೆತ ಸೇರಿಲ್ಲ ಎಂದು ಹೊಣೆಗೇಡಿತನ ಪ್ರದರ್ಶಿಸಿ ಹೋದರು.

ತೊಪ್ಪಲಕೇರಿಯ ಮಂದಿಯ ಅಳಲು ಹೃದಯವಿದ್ರಾವಕವಾಗಿದೆ. ರಾತ್ರಿ ಮಲಗಿದಾಗ ಮನೆ ಎಷ್ಟೊತ್ತಿಗೆ ಅಲೆಗಳ ಹೊಡೆತಕ್ಕೆ ಉರುಳುತ್ತದೋ ಗೊತ್ತಾಗುತ್ತಿಲ್ಲ. ಇಂಥ ಭಯದಲ್ಲಿ ಹೆಂಗಸರು, ಮಕ್ಕಳನ್ನು ಇಟ್ಟುಕೊಂಡು ರಾತ್ರಿ ಹೇಗೆ ಕಳೆಯಬೇಕು? ಪತ್ರಿಕೆ-ಟಿವಿಯಲ್ಲಿ ನಮ್ಮ ಪರಿಸ್ಥಿತಿ ಸುದ್ದಿಯಾದರೂ ಜಿಲ್ಲಾಡಳಿತಕ್ಕೆ, ಶಾಸಕನಿಗೆ, ಕನಿಷ್ಟ ಮಾನವ ಹಕ್ಕು ಆಯೋಗಕ್ಕೂ ಎಚ್ಚರ ಆಗಿಲ್ಲ ಎಂದು ಕಂಗೆಟ್ಟಿರುವ ಮಂದಿ ಹೇಳುತ್ತಾರೆ. ಮಾನವ ಹಕ್ಕು ಆಯೋಗದ ನಿರ್ಲಕ್ಷ ಧೋರಣೆಗೆ ಬೇಸತ್ತರೂ ನೊಂದವರು ಸರಣಿ ಪತ್ರ ಬರೆಯುತ್ತಲೇ ಇದ್ದರು. ಕೊನೆಗೊಂದು ದಿನ “ನಾವೆಲ್ಲ ಸತ್ತ ನಂತರ ಲೆಕ್ಕ ಮಾಡಲು ಬರ್ತೀರಾ, ಸರ್…” ಎಂದೂ ಪತ್ರ ಬರೆದರು. ಆದರೂ ಎಮ್ಮೆಲ್ಲೆಯಿಂದ ಹಿಡಿದು ಮುಖ್ಯಮಂತ್ರಿವರೆಗಿನ ಎಲ್ಲರೂ ಕಣ್ಣು-ಬಾಯಿ ಮುಚ್ಚಿಕೊಂಡೇ ಇದ್ದಾರೆ.

ಈಗ ತೊಪ್ಪಲಕೇರಿಯ ಕಡಲ ಗುಮ್ಮದ ಅಂಜಿಕೆಯಲ್ಲೇ ದಿನ ಕಳೆಯುತ್ತಿರುವ ಮಂದಿ ಕೊನೇ ಪ್ರಯತ್ನವೆಂದು ಪ್ರಧಾನಿ ಮೋದಿಗೆ ಕಾಪಾಡುವಂತೆ ಟ್ವೀಟ್ ಮಾಡಿದ್ದಾರೆ. ನಮೋ ಆ್ಯಪ್ ಮೂಲಕ ದೂರು ಕಳಿಸಿದ್ದಾರೆ. ಸಿಎಂ ಆಫೀಸಿನಲ್ಲೂ ಆ ಟ್ವೀಟ್‍ಗೆ ಸ್ಪಂದನೆ ಬಂದಿಲ್ಲ. ಕಡಲು ಮಾತ್ರ ಮುನ್ನುಗ್ಗಿ ಬರುತ್ತಲೇ ಇದೆ.

 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪ.ಬಂಗಾಳ ಎಸ್‌ಐಆರ್‌ : ದೇಶ ಕಾದ ಯೋಧನಿಂದ ತೀರ್ಪು ಕೊಟ್ಟ ನ್ಯಾಯಾಧೀಶರವರೆಗೆ.. ಮತ ಹಕ್ಕು ಕಳೆದುಕೊಂಡ ಲಕ್ಷಾಂತರ ಜನರು

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ದೇಶದಲ್ಲಿ ಪ್ರಸ್ತುತ ಚರ್ಚೆಯಲ್ಲಿರುವ ಪ್ರಮುಖ ವಿಚಾರ. ಹಲವು ಗೊಂದಲಗಳ ನಡುವೆ ಮೊದಲ ಹಂತದಲ್ಲಿ ಬಿಹಾರದಲ್ಲಿ ಎಸ್‌ಐಆರ್‌ ಪೂರ್ತಿಗೊಳಿಸಿದ ಚುನಾವಣಾ ಆಯೋಗ, ನಂತರ ಅಲ್ಲಿ ವಿಧಾನಸಭಾ...

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...

ಫ್ಯಾಕ್ಟ್‌ಚೆಕ್ : ಅತ್ಯಾಚಾರ ಅಪರಾಧಿ ಪರ ವಕೀಲೆಗೆ ಟಿಎಂಸಿಯಿಂದ ರಾಜ್ಯಸಭೆ ಸೀಟ್; ಬಿಜೆಪಿ ಆರೋಪದ ಸತ್ಯಾಸತ್ಯತೆ ಏನು?

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಪಾಣಿಹತಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಆರ್‌ಜಿ ಕರ್‌ ಸಂತ್ರಸ್ತೆಯ ತಾಯಿ ಮತ್ತು ವಕೀಲೆ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯಸಭಾ ಸದಸ್ಯೆ ಮೇನಕಾ ಗುರುಸ್ವಾಮಿ ಅವರ ಎಐ-ರಚಿತ...