Homeಅಂಕಣಗಳುಈಚೆಗೆ ಬೆಂಗಳೂರಲ್ಲಿ ಇರಕಾಗ್ತಾಯಿಲ್ಲ ಕಂಡ್ರಿ: ಯಾಹೂ ಜೊತೆ ಕುಮಾರಸ್ವಾಮಿ ಮಾತುಕತೆ

ಈಚೆಗೆ ಬೆಂಗಳೂರಲ್ಲಿ ಇರಕಾಗ್ತಾಯಿಲ್ಲ ಕಂಡ್ರಿ: ಯಾಹೂ ಜೊತೆ ಕುಮಾರಸ್ವಾಮಿ ಮಾತುಕತೆ

- Advertisement -
- Advertisement -

 

ಗಿರೀಶ್ ಕಾರ್ನಾಡ್‍ರವರ ಸಾವಿನ ನಂತರ ನಡೆದುಕೊಂಡ ರೀತಿಗೆ ಅವರ ವೈರಿಗಳೂ ಮೆಚ್ಚಿ ತಲೆದೂಗುತ್ತಿದ್ದಾರಂತಲ್ಲಾ. ಇದರ ನಡುವೆ ವೀರಶೈವರ ಜಾಲತಾಣಗಳು ಕಾರ್ನಾಡರ ಸಾವನ್ನು ಸಂಭ್ರಮಿಸಿದ್ದು ನೋಡಿದ ಲಿಂಗಾಯತರು, ‘ಥೂ ಎಷ್ಟೇ ಆಗಲಿ ಇವುರು ಅಂಥೋರೆಯ’ ಎಂದು ಉದ್ಘಾರ ತೆಗೆದರಂತಲ್ಲಾ. ಅದಿರಲಿ ಈ ವೀರಶೈವರಿಗೇಕೆ ಕಾರ್ನಾಡರ ಸಾವಿಗೆ ಸಂಭ್ರಮಿಸಿದರು ಎಂದು ನೋಡಿದರೆ, ಕಾರ್ನಾಡರ ‘ತಲೆದಂಡ’ ಕೃತಿ ಸಾಕ್ಷ್ಯಾಧಾರಗಳನ್ನು ಒದಗಿಸುತ್ತದಂತಲ್ಲಾ. ಹನ್ನೆರಡನೇ ಶತಮಾನದಲ್ಲಿ ನಡೆದ ಬಸವಣ್ಣನ ಕೊಲೆ ಇಪ್ಪತ್ತೊಂದನೆ ಶತಮಾನದಲ್ಲೂ ಕೆಲವರನ್ನು ಬೆಚ್ಚಿಸುತ್ತದೆ ಎಂದರೆ ಆಶ್ಚರ್ಯ. ಗಾಂಧೀ ಕೊಲೆಯೂ ಹಾಗೇ ಅಲ್ಲವೆ. ಕೊಂದವನು ನಮ್ಮ ಜಾತಿ ಅಲ್ಲ ಎಂದರು. ಪತ್ತೆ ಹಚ್ಚಿ ಹೇಳಿದಾಗ ನಮ್ಮ ಸಂಘದ ಸದಸ್ಯನಲ್ಲ ಎಂದರು. ಅದನ್ನೂ ಪತ್ತೆ ಹಚ್ಚಿದಾಗ ಸಂಘ ತೊರೆದು ಬಹಳ ವರ್ಷವಾಗಿತ್ತು ಎಂದರು. ಎಲ್ಲಾ ಮುಗಿದು ಮರಣ ದಂಡನೆಯಾದಾಗ ಮನುಧರ್ಮದುದ್ದಾರಕ್ಕೆ ಹುತಾತ್ಮನಾದ ಮಹಾತ್ಯಾಗಿ ಎಂದರು. ಅದೆಲ್ಲಾ ಆಗಿ ಮನುಧರ್ಮ ಗ್ರಂಥವನ್ನು ಪುನರ್ಮುದ್ರಣ ಮಾಡುವ ವ್ಯಾಪಾರಿಯಂತೆ ಕಾಣುವ ಮೋದಿ ಪ್ರಧಾನಿಯಾದ ಕೂಡಲೆ ಗೋಡ್ಸೆಗೆ ಗುಡಿಕಟ್ಟಿದರಂತಲ್ಲಾ ಥೂತ್ತೇರಿ.

*****

ಎಡೂರಪ್ಪನ ಜೊತೆ ಇಪ್ಪತ್ತು ತಿಂಗಳು ತೆಕ್ಕೆ ಬಡಿದುಕೊಂಡು ರಾಜ್ಯಾಡಳಿತ ನಡೆಸಿದ ಕುಮಾರಣ್ಣ, ಜನಾನುರಾಗಿ ಆಗಿದ್ದರು. ಅದಕ್ಕೆ ಕಾರಣ, ಅವರ ಗ್ರಾಮ ವಾಸ್ತವ್ಯವಂತೆ. ಆದರೀಗ ಕುಮಾರಣ್ಣ ಮೊದಲಿನ ವರ್ಚಸ್ಸು ಕಳೆದುಕೊಂಡಿದ್ದಾರೆ. ಮಂಡ್ಯದಲ್ಲಿ ಮಗನನ್ನ ಗೆಲ್ಲಿಸಲಾಗಿಲ್ಲ. ತುಮಕೂರಿನಲ್ಲಿ ಅಪ್ಪನನ್ನು ಉಳಿಸಿಕೊಳ್ಳಲಾಗಲಿಲ್ಲ. ಹಾಸನದಲ್ಲಿ ತನ್ನ ಮತ್ಸರಕ್ಕೆ ತುತ್ತಾಗಿರುವ ಭವಾನಿ ಪುತ್ರ ಗೆದ್ದು ಮೆರೆಯುತ್ತಿದ್ದಾನೆ. ಕಾಂಗೈಗಳು ನಂಬಿಕೆಗೆ ಯೋಗ್ಯವಾಗಿ ವರ್ತಿಸುತ್ತಿಲ್ಲ. ಸಿದ್ಧರಾಮಯ್ಯ ಕರ್ಣನಂತೆ ಮಾತನಾಡಿದರೂ ಶಕುನಿಯಾಗಿದ್ದಾರೆ. ಇಂತೆಲ್ಲಾ ತಲೆತಿನ್ನುವ ಸಂಗತಿಗಳಿಂದ ದೂರವಾಗಿ, ನೆಮ್ಮದಿಯಿಂದ ನಾಲ್ಕು ಗಂಟೆ ನಿದ್ದೆ ಮಾಡಬೇಕೆಂದರೆ, ಅದು ಗ್ರಾಮ ವಾಸ್ತವ್ಯದಿಂದ ಮಾತ್ರ ಸಾಧ್ಯ ಎಂದು ಸೂಕ್ತ ಗ್ರಾಮ ಶೋಧನೆಗೆ ತೊಡಗಿರುವಾಗ ಅವರಿಗೆ ಶುಭ ಹಾರೈಸುವುದು ನಮ್ಮ ಕರ್ತವ್ಯ. ಹಾಗಾಗಿ ಫೋನ್ ಮಾಡಿದರೆ ರಿಂಗಾಯ್ತು.
ರಿಂಗ್ ಟೋನ್: ಹಳ್ಳಿಯಾದರೇನು ಶಿವಾ ದಿಳ್ಳಿಯಾದರೇನು ಶಿವಾ ಜನರೆಲ್ಲಾ ಒಂದೇ ಶಿವಾ ಜನರೆಲ್ಲಾ…….
“ಹೇಳ್ರಿ ಯಾಹು ಏನ್ಸಮಾಚಾರ”
“ಸುಮ್ಮನೆ ಮಾತಾಡಬೇಕು ಅನ್ನುಸ್ತು ಸಾರ್.”
“ಒಂದು ಕೆಲಸ ಮಾಡಿ, ನಾನು ಕರ್ನಾಟಕದ ಅಭಿವೃದ್ಧಿ ಬಗ್ಗೆ ಚಿಂತನೆ ಮಾಡ್ತಕಂತ ಒಂದು ತೀರ್ಮಾನ ಏನು ತಗೊಂಡಿದ್ದೀನಿ. ಅದರ ಪ್ರಕಾರ ಗ್ರಾಮ ವಾಸ್ತವ್ಯವನ್ನ ಆರಂಭಿಸಬೇಕು ಅನ್ನೊ ತೀರ್ಮಾನದ ಪ್ರಕಾರ ನಡಕೊಳನಾ ಅಂತ ಇದೀನಿ.”
“ಒಳ್ಳೆ ಆಲೋಚನೆ ಸರ್, ಬೇಗ ಹೊರಡಿ.”
“ನೋಡಿ, ನಿಮ್ಮ ಬಾಯಲ್ಲೂ ಅದೇ ಬರ್ತಾಯಿದೆ. ಅಲ್ಲಿ ನಾನು ಗ್ರಾಮ ವಾಸ್ತವ್ಯದ ಜಾಗದಲ್ಲಿ ಮಾತ್ನಾಡಕ್ಕೆ ಯಾರು ಇರಲ್ಲ. ನೀವು ಬಂದ್ರೆ ಕರ್ನಾಟಕದ ಅಭಿವೃದ್ಧಿ ಬಗ್ಗೆ ಚಿಂತನೆ ಮಾಡ್ತಕಂತ ಕಾರ್ಯಕ್ರಮ ಹಾಯ್ಕಬವುದು.”
“ಸರಿ ಸಾರ್, ಆದ್ರೆ ನಿಮ್ಮ ಗ್ರಾಮ ವಾಸ್ತವ್ಯದಲ್ಲಿ ಭೋಜೇಗೌಡ ಇರ್ತನೆ, ಇನ್ನ ಶಿವರಾಮೇಗೌಡ ಈಗ ನಿರುದ್ಯೋಗಿ ಆಗಿರದ್ರಿಂದ ಅವುನೂ ಇರತನೆ, ಅಲ್ದೆ ಮಧ್ಯೆಮಧ್ಯೆ ಬಾಯಿ ಹಾಕಿ ಯಾರೂ ಮಾತಾಡಕೆ ಬಿಡಲ್ಲ. ಅಂತ ಜಾಗದಲ್ಲಿ ನಾನ್ಯಾಕೆ ಸಾರ್.”
“ನೀವು ಬನ್ನಿ, ಅವುರು ಬೇರೆ ಜಾಗದಲ್ಲಿ ಮನಗತಕ್ಕಂತ ವ್ಯವಸ್ಥೆ ಮಾಡ್ತಿನಿ.”
“ಅದರಗತ್ಯ ಇಲ್ಲ ಸಾರ್, ಶಿವರಾಮೇಗೌಡ ಅವುನ ಕಾರಲ್ಲೇ ಮನಿಕತ್ತನೆ, ಭೋಜೇ ಗೌಡನೂ ಅಂಗೆಯಾ, ಅದಿರ್ಲಿ ತಾವು ಇದ್ದಕ್ಕಿದ್ದಂಗೆ ಗ್ರಾಮ ವಾಸ್ತವ್ಯಕ್ಕೆ ಹೊಂಟಿದ್ಯಾಕೆ.”
“ಈಚೆಗೆ ಬೆಂಗಳೂರಿನಲ್ಲಿ ಇರಕ್ಕಾಗ್ತಾಯಿಲ್ಲ ಕಂಡ್ರಿ.”
“ಇದು ನಿಮ್ಮೊಬ್ಬರ ಸಮಸ್ಯೆ ಅಲ್ಲ ಸಾರ್. ಇಡೀ ಬೆಂಗಳೂರ ಜನಕ್ಕೆ ಅಂಗಾಗ್ಯದೆ.”
“ಅವುರದೇನಾದ್ರು ಆಗ್ಲಿ, ನನ್ನ ಈ ಸಂದರ್ಭದ ಪರಿಸ್ಥಿತಿಯನ್ನ ನೋಡೋದಾದ್ರೆ, ನಾನು ಎಲ್ಲಾದ್ರು ಹೊರಗೋಗಲೇಬೇಕು. ನಾನು ತುಂಬಾ ಭರವಸೆ ಇಟ್ಟಿದ್ದಂತಹ ಮಂಡ್ಯ ಜಿಲ್ಲೆ ಎಮ್ಮೆಲ್ಲೆಗಳು ಮೋಸ ಮಾಡಿದ್ರು. ನಮ್ಮ ಪಕ್ಷದವರೆ ನನಗೆ ತೊಂದರೆ ಕೊಡತಕಂತ ತೀರ್ಮಾನ ತಗೊಂಡ್ರು. ರಾತ್ರೆ ಆದ್ರು ಕೂಡ ಕಾಂಗ್ರೆಸ್‍ನವರು ಮನೆಹತ್ರ ಬಂದು ಏನೇನೊ ಕೇಳ್ತರೆ. ಅವು ಬೆದರಿಕೆ ತರ ಇರತವೆ. ಇನ್ನ ಬಿಜೆಪಿಗಳ ಭಯೋತ್ಪಾದನೆ ಬೇರೆ.”
“ಒಳ್ಳೆ ಪದ ಬಳಸಿದ್ರಿ ಸಾ. ಬಿಜೆಪಿಗಳದು ಯಾವತ್ತೂ ಭಯೋತ್ಪಾದನೆನೆ. ಸಾಬರ ಕಂಡು ಹೆದ್ರಿಕಂಡು ಅಂಗಾಡ್ತವವು.”
“ಅದೇನಾದ್ರು ಆಗ್ಲಿ. ನನ್ನ ಮನಸ್ಸು ಹಾಳಾಗಿರತಕ್ಕಂತ ಈ ಸಮಯದಲ್ಲಿ ಗ್ರಾಮ ವಾಸ್ತವ್ಯ ಸೂಕ್ತ.”
“ಆರೋಗ್ಯ ಹ್ಯಾಗಿದೆ ಸಾ.”
“ಚೆನ್ನಾಗಿದೀನಿ.”
“ಮತ್ತೆ ದೇವೇಗೌಡ್ರು ತುಂಬ ಅಪಾಯದ ಸ್ಥಿತೀಲಿದಾನೆ ಕುಮಾರ ಅಂದ್ರು.”
“ಅದು ಮಂಡ್ಯದಲ್ಲಿ ನಿಖಿಲ್ ನಿಲ್ಲಿಸಬೇಕಾದ್ರೆ, ಏನಾದ್ರು ಒಂದು ಪ್ರಮುಖವಾದ ಕಾರಣ ಬೇಕಾಗಿದ್ದ ಸನ್ನಿವೇಶದಲ್ಲಿ ನಮ್ಮ ತಂದೆ ಹಾಗಂದಿದ್ರು.”
“ಥೂ.. ಏನಾಯ್ತು ಗೊತ್ತ ಸಾರ್, ನೀವು ಕಾಂಗ್ರೆಸ್‍ನಿಂದ ಮಂಜೇಗೌಡ ಅಂತ ಕೊಂಡಕೊಂಡ್ರಲ್ಲ ಅವುನೇನು ಮಾಡಿದ ಗೊತ್ತೇ, ಕುಮಾರಣ್ಣ ಜಾಸ್ತಿ ದಿನ ಇರದಿಲ್ಲ. ನಿಖಿಲ್‍ಗೆ ಓಟು ಮಾಡಿ ಅಂತ ಇಡೀ ಜಿಲ್ಲೇಲಿ ಹೇಳಿಕಂಡು ತಿರುಗಿದ. ಅಂಗಾಗಿ ಜನ ನಿಮ್ಮ ಬಗ್ಗೆ ಕ್ಯಟ್ಟ ನಿರೀಕ್ಷೆಲವುರೆ.”
“ಇರ್ಲಿ ಬಿಡಿ, ಜನ ನಮ್ಮ ಬಗ್ಗೆ ಅಂಗನ್ನಕಂಡ್ರೆ ನನ್ನ ಆಯಸ್ಸು ಜಾಸ್ತಿಯಾಯ್ತದಂತೆ, ನಮ್ಮ ತಂದೆ ಹಾಗೇಳತಿದ್ರು.”
“ಗ್ರಾಮ ವಾಸ್ತವ್ಯದಲ್ಲಿ ಏನು ಮಾಡ್ತಿರಿ ಸಾರ್.”
“ನಮ್ಮ ಅಧಿಕಾರಿಗಳು ನಾನು ಆಯ್ಕೆ ಮಾಡಿದ ಗ್ರಾಮಕ್ಕೆ ಹೋಗಿ ಒಂದು ಮನೇನ ವಶಕ್ಕೆ ತಗೊಳ್ತರೆ. ಅಲ್ಲಿ ನನ್ನ ವಾಸ್ತವ್ಯಕ್ಕೆ ಏನೇನು ಬೇಕೊ ಅದನ್ನ ಅರೇಂಜ್ ಮಾಡ್ತರೆ. ನಾನು ಆ ಮನೆ ಜನಗಳ ಜೊತೆ ಕುಳಿತು ಊಟ ಮಾಡ್ತಿನಿ, ಚರ್ಚೆ ಮಾಡ್ತಿನಿ. ಈ ಗ್ರಾಮದ ಅಭಿವೃದ್ಧಿ ಹೇಗೆ ಮಾಡಬೇಕು ಅನತಕ್ಕಂತ ಸಲಹೆ ಕೇಳ್ತಿನಿ.”
“ಒಳ್ಳೆ ಕಾರ್ಯಕ್ರಮ ಸಾರ್, ಆದ್ರು ಕರ್ನಾಟಕದಲ್ಲಿ 28 ಸಾವಿರ ಹಳ್ಳಿಗಳಿವೆ ಅವುಗಳ ಅಭಿವೃದ್ಧಿ ಹೇಗೆ.”
“ಇಪ್ಪತ್ತೆಂಟು ಸಾವಿರ ಹಳ್ಳಿಗಳಿಗೂ ಹೋಗಿ ನಾನು ಗ್ರಾಮ ವಾಸ್ತವ್ಯ ಮಾಡಕ್ಕಾಗಲ್ಲ.”
“ಅಷ್ಟು ದಿನ ಇರಬೇಕಲ್ಲ ಸಾ ನೀವು.”
“ಇರದರ ಪ್ರಶ್ನೆ ಅಲ್ಲ. ಗ್ರಾಮಗಳನ್ನ ಹೇಗೆ ಅಭಿವೃದ್ಧಿ ಮಾಡಬೇಕು ಅನತಕ್ಕಂತ ವಿಷಯಗಳನ್ನ ವಿಧಾನಸೌಧದಲ್ಲಿ ಕುಳಿತು ಚರ್ಚೆಮಾಡದಕ್ಕಿಂತ ಗ್ರಾಮಕ್ಕೆ ಹೋದ್ರೆ ಒಳ್ಳೆದಲವೆ.”
“ಸರಿ, ವಿಧಾನಸೌಧದ ರಾಶಿ ಫೈಲ್‍ಗಳ ನೋಡದ್ಯಾವಾಗ ನೀವು.”
“ಅದಕ್ಕೆಲ್ಲಾ ಜನ ಇದಾರೆ.”
“ನಿಮ್ಮ ಕುಟುಂಬದಲ್ಲಾ.”
“ನಮ್ಮ ಕುಟುಂಬ ಅಂದ್ರು ತಪ್ಪಾಗಲಾರ್ದು. ಯಾಕೆ ಅಂದ್ರೆ ನಮ್ಮ ಕುಟುಂಬದಲ್ಲಿ ಕೆಎಎಸ್ ಅಧಿಕಾರಿಯಾಗಿದ್ದವುರು ಇದಾರೆ. ಸತತ ಮಂತ್ರಿಗಳಾಗಿದ್ದವರು ಇದಾರೆ. ಮಾಜಿ ಪ್ರಧಾನಿಗಳಿದಾರೆ. ಆದ್ರಿಂದ ಆಡಳಿತ ನಡೆಸತಕ್ಕಂತ ವಿಷಯದಲ್ಲಿ ನಮಗೆ ಯಾವ ಭಯವೂ ಇಲ್ಲ.”
“ಗ್ರಾಮಾಭಿವೃದ್ಧಿ ಬಗ್ಗೆ ಒಂದೆರಡು ಸಲಹೆ ಕೊಡ್ಳ ಸಾರ್.”
“ಕೊಡಿ, ನಾವು ದನಕಾಯೋ ಹುಡುಗನಿಂದ್ಲೂ ಸಲಹೆ ತಗೊಳ್ತಿವಿ.”
“ನಾನು ಕುರಿಕಾದಿದ್ದೆ ಸಾ.”
“ಇನ್ನೂ ಒಳ್ಳೆದಲವ, ನಾವು ದನಕಾದಿದ್ದೊ, ನೀವು ಕುರಿಕಾದಿದ್ರಿ. ಆದ್ರಿಂದ ನಾವಿಬ್ರು ಅಣ್ಣತಮ್ಮಂದಿರಿದ್ದಂಗೆ.”
“ಏನಿಲ್ಲ ಸಾರ್, ಗ್ರಾಮದ ಉದ್ದಾರ ಒಂದು ನಾಲ್ಕಾರು ಸಮಸ್ಯೆನ ಒಳಗೊಂಡದೆ ಸಾರ್. ರಸ್ತೆ, ಕರೆಂಟು, ಕುಡಿಯೋ ನೀರು, ಒಳ್ಳೆ ಸ್ಕೂಲು ಇಷ್ಟೆ ಸಾರ್.”
“ಅದಕ್ಕೆ ನಾನು ಸ್ಕೂಲಿನಲ್ಲಿ ಗ್ರಾಮ ವಾಸ್ತವ್ಯಕ್ಕೆ ಹೊರಟಿರೋದು.”
“ಒಳ್ಳೆ ತೀರ್ಮಾನ ಸಾರ್, ಒಂಥರ ಐತಿಹಾಸಿಕ ತೀರ್ಮಾನ.”
“ಐತಿಹಾಸಿಕ ಯಾಕ್ರಿ?”
“ನೀವು ಎಡೂರಪ್ಪನ ಜೊತೆ ಸರಕಾರ ಮಾಡಿದಾಗ ಗ್ರಾಮ ವಾಸ್ತವ್ಯಕ್ಕೆ ಹೊರಟಿದ್ರಿ. ಆಯ್ಕೆ ಮಾಡಿದ ಊರಿನ ಮಹಿಳೆ ನಿಮಗಾಗಿ ಬೆಡ್ ರೂಮನ ಶೃಂಗಾರ ಮಾಡಿದ್ಲು ಇದು ಗೊತ್ತಾಗಿ ನೀವು ಐಬಿಗೆ ಓಡಿದ್ರಿ ಅಲವ ಸಾರ್.”
“ಹೌದು ಕಂಡ್ರೀ.”
ಥೂತ್ತೇರಿ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮುಂಗಾರು ಮಳೆ ಕೊರತೆ: ಇಡೀ ದೇಶದಲ್ಲಿ ಆತಂಕದ ಕಾರ್ಮೋಡ

ಭಾರತದ ಆಕಾಶದಲ್ಲಿ ಸದ್ಯ ಮೂಡುತ್ತಿರುವ ಉಪಗ್ರಹ ಚಿತ್ರಗಳು ಮತ್ತು ಹವಾಮಾನ ಇಲಾಖೆಯ ದತ್ತಾಂಶಗಳು ದೇಶಕ್ಕೆ ದೊಡ್ಡ ಗಂಡಾಂತರದ ಮುನ್ಸೂಚನೆ ನೀಡುತ್ತಿವೆ. ಕೃಷಿ ಚಟುವಟಿಕೆಗಳ ಅತ್ಯಂತ ನಿರ್ಣಾಯಕ ಅವಧಿಯಾದ ಜೂನ್ ತಿಂಗಳಲ್ಲೇ ಮುಂಗಾರು ಮಳೆ...

ನೀಟ್ ಪರೀಕ್ಷೆ ಪದೇ ಪದೇ ಬರೆಯುವಂತೆ ಮಾಡಿದ್ದು ಯಾರು? : ಬಿ.ಕೆ ಹರಿಪ್ರಸಾದ್

ನೀಟ್ ಪರೀಕ್ಷೆ ಪದೇ ಪದೇ ಬರೆಯುವಂತೆ ಮಾಡಿದ್ದು ಯಾರು? ಬಿಜೆಪಿ ನಾಯಕರ ಆರೋಪಗಳನ್ನು ನೋಡಿದರೆ, ತಪ್ಪು ಮಾಡಿದವರೇ ಉಪದೇಶ ಮಾಡುವ ಸ್ಥಿತಿಗೆ ಬಂದಂತಿದೆ ಎಂದು ಕೆಪಿಸಿಸಿ ನೂತನ ಅಧ್ಯಕ್ಷ ಬಿ.ಕೆ ಹರಿಪ್ರಸಾದ್ ಹೇಳಿದರು....

ಎಸ್‌ಐಆರ್‌ನಲ್ಲಿ ಕೈಬಿಟ್ಟ ವ್ಯಕ್ತಿ ಕುರಿತು ಮಹತ್ವದ ಹೇಳಿಕೆ ನೀಡಿದ ಸುಪ್ರೀಂ ಕೋರ್ಟ್

ವಿಶೇಷ ತೀವ್ರ ಪರಿಷ್ಕರಣೆಯ (Special Intensive Revision) ಸಂದರ್ಭದಲ್ಲಿ ಮತದಾರರ ಪಟ್ಟಿಯಿಂದ ಹೆಸರು ಕೈಬಿಟ್ಟಿರುವ ಅಥವಾ ಹೊರಗಿಟ್ಟಿರುವ ಬಂಗಾಳದ ಮುರ್ಷಿದಾಬಾದ್‌ನ 75 ವರ್ಷದ ವಕೀಲರೊಬ್ಬರು "ಪಶ್ಚಿಮ ಬಂಗಾಳದ ನಿಜವಾದ ಮತ್ತು ವಿಶ್ವಾಸಾರ್ಹ ನಾಗರಿಕ" ನಂತೆ...

ನೀಟ್ ಅಕ್ರಮ, ವ್ಯವಸ್ಥೆಯ ವೈಫಲ್ಯಕ್ಕೆ ಮತ್ತೊಂದು ಬಲಿ: ಮರು ಪರೀಕ್ಷೆ ಹಿಂದಿನ ದಿನವೇ ಆತ್ಮಹತ್ಯೆಗೆ ಶರಣಾದ ಪ್ರತಿಭಾವಂತ ವಿದ್ಯಾರ್ಥಿನಿ 

ಹೈದರಾಬಾದ್: ದೇಶದಲ್ಲಿ ವೈದ್ಯಕೀಯ ಶಿಕ್ಷಣದ ಪ್ರವೇಶಾತಿಗಾಗಿ ನಡೆಯುವ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯ (NEET) ಸುತ್ತ ಹಬ್ಬಿರುವ ಅಕ್ರಮಗಳ ಜಾಲ ಮತ್ತು ವ್ಯವಸ್ಥೆಯ ನಿರಂತರ ಗೊಂದಲಗಳು ಮತ್ತೊಂದು ಯುವ ಜೀವವನ್ನು ಬಲಿಪಡೆದಿವೆ.  ಜೂನ್...

ಸತತ ಮೂರನೇ ದಿನವೂ ಜಂತರ್ ಮಂತರ್‌ನಲ್ಲಿ ಮುಂದುವರೆದ ಸಿಜೆಪಿ ಪ್ರತಿಭಟನೆ; ಪ್ರಧಾನ್ ರಾಜೀನಾಮೆಗೆ ಪಟ್ಟು

ಪರೀಕ್ಷಾ ಅಕ್ರಮಗಳು ಮತ್ತು ಮೇ 3 ರ ನೀಟ್ ಪತ್ರಿಕೆ ಸೋರಿಕೆಯ ವಿರುದ್ಧ ತಮ್ಮ ಪ್ರತಿಭಟನೆಯನ್ನು ಮುಂದುವರಿಸಿರುವ ಜಿರಳೆ ಜನತಾ ಪಕ್ಷ (ಸಿಜೆಪಿ) ಸೋಮವಾರ ಸತತ ಮೂರನೇ ದಿನವೂ ಜಂತರ್ ಮಂತರ್‌ನಲ್ಲಿಯೇ ಕುಳಿತಿದ್ದಾರೆ. ಶನಿವಾರ...

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...