Homeಕರ್ನಾಟಕಗುಂಡ್ಲುಪೇಟೆ ಅಮಾನವೀಯ ಕ್ರೌರ್ಯಕ್ಕೆ ಜಾತಿ ಕಾರಣವಲ್ಲವೇ?

ಗುಂಡ್ಲುಪೇಟೆ ಅಮಾನವೀಯ ಕ್ರೌರ್ಯಕ್ಕೆ ಜಾತಿ ಕಾರಣವಲ್ಲವೇ?

- Advertisement -
- Advertisement -

| ಅನಿಲ್ ಕುಮಾರ್ ಚಿಕ್ಕದಾಳವಟ್ಟ |

ಮಕ್ಕಳ ಕಳ್ಳರು ಬಂದಿದ್ದಾರೆ ಎಂಬ ಫೇಕ್‍ಸುದ್ದಿಗಳನ್ನು ಶೇರ್ ಮಾಡಿದ್ದನ್ನೆ ಬಲವಾಗಿ ನಂಬಿದ ಕಾರಣ ಅಮಾಯಕ ಬಡವರನ್ನು ಮಕ್ಕಳ ಕಳ್ಳರು ಎಂದು ಶಂಕಿಸಿ ಕೊಲೆ ಮಾಡಿದ ಘಟನೆಗಳು ಒಮ್ಮೆ ಸರಣಿಯಾಗಿ ನಡೆದಿದ್ದು ನಿಮಗೆ ಇನ್ನೂ ನೆನಪಿರಬಹುದು. ಇದು ಈ ಆಧುನಿಕ ಕಾಲದಲ್ಲಿ ಸೋಷಿಯಲ್ ಮೀಡಿಯಾವನ್ನು ಬಳಸಿಕೊಂಡು ನಡೆದ ವಿಕೃತ ಕೆಲಸಗಳಲ್ಲೊಂದು. ನಾವು ನಮ್ಮ ನಮ್ಮ ಹಳ್ಳಿಯ ಬಾಲ್ಯವನ್ನು ನೆನೆಸಿಕೊಂಡರೆ ಯಾರಾದರೂ ಶೋಷಿತ ಜಾತಿಯವರು, ಮೇಲ್ವರ್ಗದವರ ಮನೆ ಮುಂದೆ ಅಡ್ಡಾಡಿದರೂ ಸಾಕು ಅವರನ್ನು ಸಂಶಯದಿಂದ ನೋಡುವುದು ‘ಸಹಜ’ವಾಗಿತ್ತು. ಚುಚ್ಚಿ ಮಾತನಾಡುವುದೇ ಅಲ್ಲದೆ ಆ ಮನೆಯ ಯಜಮಾನ ಆ ವ್ಯಕ್ತಿಯನ್ನು ಹೀಯಾಳಿಸಿ ಸುತ್ತಲಿನವರಿಗೆ ಪುಕ್ಕಟ್ಟೆ ಮನರಂಜನೆ ಕೊಡುವಂತಹ ಸನ್ನಿವೇಶಗಳು ನಡೆಯುತ್ತಿದ್ದವು.

ಇತ್ತ ಅಪಹಾಸ್ಯಕ್ಕೀಡಾ ವ್ಯಕ್ತಿ ಹಸಿವಿನ ಮುಂದೆ ಸ್ವಾಭಿಮಾನವನ್ನ ಮರೆಯುತ್ತ ಒಳಗೆ ಉರಿಯಿದ್ದರೆ ಹೊರಗೆ ಮುಗುಳುನಗುತ್ತಿದ್ದ. ಹೀಗೆ ಮೇಲಿನವರು ಕೆಳಗಿನವರನ್ನು ನೋಡುವ ದೃಷ್ಟಿಯೇ ತುಂಬಾ ತುಚ್ಚವಾಗಿರುತ್ತಿತ್ತು. ಹಳ್ಳಿಗಳಲ್ಲಿ ಮಾನಸಿಕ ಸ್ಥಿಮಿತ ಕಳೆದುಕೊಂಡ ಯಾರಾದರೂ ಬಂದರೆ ಅವರ ಅಂಗಿಗೆ ಕಲ್ಲು ಕಟ್ಟುವುದು, ಅವನಿಗೆ ಕಲ್ಲು ಹೊಡೆದು ರೇಗಿಸುವುದರ ಮೂಲಕ ಮನರಂಜನೆ ತೆಗೆದುಕೊಳ್ಳುವಂತಹ ಘಟನೆಗಳು ನಡೆಯುತ್ತಲಿದ್ದವು. ಇಲ್ಲಿ ನಮಗೆ ಕಾಡಬೇಕಾದ ಪ್ರಶ್ನೆ ವ್ಯಕ್ತಿಯ ನ್ಯೂನ್ಯತೆಯನ್ನು ಇಟ್ಟುಕೊಂಡು ಕಾಡುವ ಈ ಜನಕ್ಕೆ ಎಂದಿಗೂ ಮನುಷ್ಯರನ್ನು ಮನುಷ್ಯರಂತೆ ನೋಡಲು ಸಾಧ್ಯವಾಗಿಲ್ಲ ಯಾಕೆ ಎಂಬುದು. ಇಂತಹ ಎಲ್ಲಾ ಪ್ರಶ್ನೆಗಳು ನಮಗೆ ಮೂಡುವಂತೆ ಮಾಡಿದ್ದು ದೂರದ ಯಾವುದೋ ಕಾನೂನು ಸುವ್ಯವಸ್ಥೆ ಹದಗೆಟ್ಟ ರಾಜ್ಯದ್ದೋ, ದೇಶದ್ದೋ ಕಥೆಯಲ್ಲ. ಬದಲಿಗೆ ನಮ್ಮದೇ ರಾಜ್ಯದ ಗುಂಡ್ಲುಪೇಟೆಯಲ್ಲಿ ನಡೆದ ದಲಿತ ಯುವಕನ ಬೆತ್ತಲೆ ಮೆರವಣಿಗೆ ಮತ್ತು ಹಲ್ಲೆಮಾಡಿದ ಅಮಾನವೀಯ ಘಟನೆ.
ಘಟನೆಯ ಸುತ್ತ ಕೆಲವು ಗೊಂದಲಗಳು ಉಂಟಾಗಿವೆ. ಅಥವಾ ಅವನ್ನು ಸೃಷ್ಟಿಮಾಡಲು ಗುಂಪೊಂದು ಪ್ರಯತ್ನಿಸುತ್ತಿದೆ. ತಮ್ಮ ಜಾತಿಗೆ ಸೇರಿದವರು ಮಾಡಿದ ತಪ್ಪು ಅನ್ನುವ ಕಾರಣಕ್ಕೆ ಅವರ ಹಿತಾಸಕ್ತಿ ಕಾಪಾಡಲು ಅದು ಪ್ರಯತ್ನ ಮಾಡುತ್ತಿದೆ. ಘಟನೆಯ ವಿವರ ನಿಮಗೆ ಗೊತ್ತೆ ಇದೆ.

ಪ್ರತಾಪ್ ಎಂಬ ಗುಂಡ್ಲುಪೇಟೆ ತಾಲೂಕಿನ ವೀರಾಪುರ ಗ್ರಾಮದ ದಲಿತ ಯುವಕ ಮೈಸೂರಿನಲ್ಲಿ ಐ.ಎ.ಎಸ್ ಪರೀಕ್ಷೆ ಬರೆಯಲು ಹೋಗಿದ್ದ. ಪರೀಕ್ಷೆ ಬರೆಯಲಾಗದ್ದಕ್ಕೋ, ಇನ್ನಾವುದೋ ಕಾರಣಕ್ಕೋ ಮನನೊಂದು ವಾಪಸ್ಸು ಬಂದು ಕಬ್ಬೆಕಟ್ಟೆ ಎಂಬ ಗ್ರಾಮದ ಹತ್ತಿರದ ದೇವಸ್ಥಾನದಲ್ಲಿ ಮಲಗಿದ್ದ. ಜನರು ನೋಡುವಾಗಲೇ ಆತ ಬೆತ್ತಲಾಗಿದ್ದ ಎಂದು ಕೆಲವರು (ಆತನ ಮೇಲೆ ಹಲ್ಲೆ ಮಾಡಿದ ಆರೋಪ ಹೊತ್ತಿರುವವರ ಕಡೆಯವರು) ಹೇಳುತ್ತಾರೆ. ಕಬ್ಬೆಕಟ್ಟೆ ಗ್ರಾಮದ ಕೆಲವರು ಆತನನ್ನು ಅನುಮಾನಿಸಿ, ಬೆತ್ತಲೆ ಮಾಡಿ ಮೆರವಣಿಗೆ ಮಾಡಿದ್ದಾರೆ ಎಂದು ಪ್ರತಾಪ್ ಪರವಾಗಿ ಮಾತಾಡುತ್ತಿರುವವರು ಹೇಳುತ್ತಾರೆ.

ಘಟನೆಯ ಬಗ್ಗೆ ತಿಳಿದ ನಂತರ ರಾಜ್ಯದ ಕೆಲವೆಡೆ ದಲಿತಪರ ಹೋರಾಟಗಾರರು ಪ್ರತಿಭಟನೆಗಳನ್ನು ಮಾಡಿದ್ದಾರೆ. ಸೂಕ್ತ ತನಿಖೆಯನ್ನು ನಡೆಸುವಂತೆ ಸಂಬಂಧಪಟ್ಟವರಿಗೆ ಮನವಿ ಮಾಡಿದ್ದಾರೆ. ಈ ಲೇಖನ ಬರೆಯುವ ಹೊತ್ತಿಗೆ ಗುಂಡ್ಲುಪೇಟೆಯಲ್ಲಿ ಬೃಹತ್ ಕಾಲ್ನಡಿಗೆ ಜಾಥ ಮತ್ತು ಪ್ರತಿರೋಧ ಸಮಾವೇಶವನ್ಮು ಕೂಡ ನಡೆಸಿದ್ದಾರೆ.

ಇದನ್ನು ಓದಿ: ಗುಂಡ್ಲುಪೇಟೆಯಲ್ಲಿ ದಲಿತ ಮತ್ತು ಪ್ರಗತಿಪರ ಸಂಘಟನೆಗಳಿಂದ ಬೃಹತ್ ಜಾಥ, ಪ್ರತಿರೋಧ ಸಮಾವೇಶ

ಈ ವಿಚಾರದಲ್ಲಿ ನಡೆದ ಇನ್ನೊಂದು ಬೆಳವಣಿಗೆಯೆಂದರೆ ಇದಕ್ಕೆ ನಾವು ಪ್ರತಿ ಜಾಥಾ ನಡೆಸುತ್ತೇವೆಂದು ಮೇಲ್ಜಾತಿಗೆ ಸೇರಿದ ಕೆಲವು ಜನ ಹೇಳಿದ್ದಾರೆ. ಅವರ ಪ್ರಕಾರ ಘಟನೆ ನಡೆದದ್ದೇ ಬೇರೆ ರೀತಿ. ಮಾನಸಿಕ ಅಸ್ವಸ್ಥನಾಗಿದ್ದ ಆತನಿಗೆ ಮೊದಲು ಯಾರೂ ಏನನ್ನೂ ಮಾಡಲಿಲ್ಲ. ಬದಲಿಗೆ ಸಾಧು ಇರಬೇಕೆಂದು ನಮಸ್ಕರಿಸಿದ್ದಾರೆ. ಆ ನಂತರ ಆತನೇ ಬೇರೆಯವರ ಮೇಲೆ ಹಲ್ಲೆ ನಡೆಸಿದಾಗ, ಬಹಳ ಪ್ರಯತ್ನಪಟ್ಟು ಹಿಡಿದು, ಕಟ್ಟಿ ಹಾಕಿದ್ದೇವೆ ಅಷ್ಟೇ. ಆ ನಂತರ ಪೊಲೀಸರು ಬಂದಾಗ ಅವರಿಗೆ ಒಪ್ಪಿಸಿದ್ದೇವೆ. ಜೊತೆಗೆ ಆತನ ಜಾತಿಯೂ ನಮಗೆ ಗೊತ್ತಿರಲಿಲ್ಲ. ಹಾಗಾಗಿ ಇದಕ್ಕೆ ಜಾತಿ ಬಣ್ಣ ಕಟ್ಟುವುದು ಬೇಡ ಎಂಬುದು ಅವರ ಹೇಳಿಕೆ.

ಒಂದು ವೇಳೆ ಇಷ್ಟೇ ಆಗಿದ್ದರೆ, ಅದು ಬೆತ್ತಲೆ ತಿರುಗುವ ಯಾವುದೇ ಮಾನಸಿಕ ಅಸ್ವಸ್ಥನ ಜೊತೆ ಸಮಾಜ ನಡೆದುಕೊಳ್ಳಬೇಕಾದ ರೀತಿ ಎಂದು ಬಗೆಯಬಹುದು. ಆದರೆ, ಈ ಮಾತುಗಳನ್ನು ಆಡುತ್ತಿರುವವರು ಸತ್ಯ ನುಡಿಯುತ್ತಿಲ್ಲ ಎಂಬುದಕ್ಕೆ ವಿಡಿಯೋ ಸಾಕ್ಷಿಯಾಗಿದೆ. ಆ ಹುಡುಗನನ್ನು ಬೆತ್ತಲೆಗೊಳಿಸಿ, ಕೈ ಹಿಂದಕ್ಕೆ ಕಟ್ಟಿ ನಡೆಸಿಕೊಂಡು ಬರುವುದು ಕಾಣುತ್ತಿದೆ. ಆ ರೀತಿ ನಡೆಸಿಕೊಂಡು ಬರುತ್ತಿರುವವರು ಕೈಯ್ಯಲ್ಲಿ ಕೋಲು ಹಿಡಿದಿದ್ದಾರೆ ಮತ್ತು ಇದನ್ನು ವಿಡಿಯೋ ಮಾಡಲಾಗಿದೆ. ‘ಜಾತಿ ಬಣ್ಣ ಕಟ್ಟಬೇಡಿ’ ಎನ್ನುತ್ತಿರುವವರು ಮೊದಲು ವಾಸ್ತವವನ್ನು ಮಾತಾಡಬೇಕು. ಕನಿಷ್ಠ ಇಂತಹ ಅಮಾನವೀಯವಾದ ಕೃತ್ಯವನ್ನು ಖಂಡಿಸುವ ಮಾನವೀಯತೆಯೂ ಇಲ್ಲದೇ, ಕೃತ್ಯವನ್ನು ಎಸಗಿದವರ ರಕ್ಷಣೆಗೆ ನಿಂತಿರುವುದು ಇಲ್ಲಿ ಎದ್ದು ಕಾಣುತ್ತಿದೆ.

ಅವರು ಹೇಳುವ ಹಾಗೆ ಮಾನಸಿಕ ಅಸ್ವಸ್ಥನೇ ಇರಬಹುದು (ಆ ರೀತಿ ಇಲ್ಲ, ಆತ ಐಎಎಸ್ ಪರೀಕ್ಷೆ ಬರೆಯುವಷ್ಟು ಸರಿಯಾಗಿದ್ದಾನೆಂದು ಕೇಂದ್ರ ಆಯೋಗದ ಸದಸ್ಯರು ಬಹಿರಂಗ ಹೇಳಿಕೆ ಕೊಟ್ಟಿದ್ದಾರೆ), ಬೆತ್ತಲೆಯೇ ಕೂತಿದ್ದ ಎಂದುಕೊಳ್ಳೋಣ. ಮಾನಸಿಕ ಅಸ್ವಸ್ಥನಾಗಿದ್ದು, ಬೆತ್ತಲೆ ಕೂತಿರುವ ವ್ಯಕ್ತಿಯನ್ನು ಬೀದಿಯಲ್ಲಿ ಮೆರವಣಿಗೆ ಮಾಡುವವರು ಮಾನಸಿಕವಾಗಿ ಸ್ವಸ್ಥರೇ? ಅವರ ಮಾನಸಿಕತೆಗೆ ಬಡಿದಿರುವ ರೋಗ ಯಾವುದು? ಅದು ಮಕ್ಕಳ ಕಳ್ಳರು ಇತ್ಯಾದಿ ಕಾರಣ ಹೇಳಿ, ಬಡಿದು ಕೊಲ್ಲುವ ಮಾನಸಿಕತೆಯೇ? ಅಥವಾ ಜಾತಿ ರೋಗವೂ ಬಡಿದಿತ್ತಾ? ಆರೋಪಿಗಳ ಪಟ್ಟಿಯಲ್ಲಿ ದಲಿತ ಸಮುದಾಯಕ್ಕೆ ಸೇರಿದವರಾರೂ ಇಲ್ಲ. ಬಲಾಢ್ಯ ಜಾತಿಗಳಿಗೆ ಸೇರಿದವರು ಮಾತ್ರವಿದ್ದಾರೆ. ಸಮರ್ಥನೆಗೆ ಇಳಿದವರೂ ಅವರೇ ಆಗಿದ್ದಾರೆ. ಹಾಗಾಗಿ ಇಲ್ಲಿ ಜಾತಿ ವಾಸನೆ ಬಡಿಯುತ್ತಿದೆ.

ಕೆಲವೊಮ್ಮೆ ಹೀಗೂ ಆಗುತ್ತದೆ. ಮೊದಲೇ ಹೇಳಿದ ರೀತಿಯಲ್ಲಿ ಅಪಮಾನಕ್ಕೆ ಗುರಿಯಾಗುವವರು ಸಾಮಾನ್ಯವಾಗಿ ಬಡವರು, ದುರ್ಬಲರು, ಶೋಷಿತ ಜಾತಿಗಳಿಗೆ ಸೇರಿದವರು, ಕೊಳೆಬಟ್ಟೆ ಹಾಕಿದವರು ಆಗಿರುತ್ತಾರೆ. ಬೀದಿಯಲ್ಲಿ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ, ಸರ್ಕಾರೀ ಕಚೇರಿಗಳಲ್ಲಿ ಬಂದಿರುವವರ ಬಟ್ಟೆ ಇತ್ಯಾದಿಗಳನ್ನು ನೋಡಿ ಗೌರವದ ಮಟ್ಟ ನಿರ್ಧಾರವಾಗುತ್ತದೆ ಎಂದ ಮೇಲೆ, ಉಳಿದುದನ್ನು ಊಹಿಸಬಹುದು.

ಇಷ್ಟೇ ಅಲ್ಲದೇ, ನಮ್ಮದೇ ರಾಜ್ಯದಲ್ಲಿ ದಲಿತ ಯುವಕ ಹುಡುಗಿಯನ್ನು ಮಾತನಾಡಿಸಿದ ಎಂಬ ಕಾರಣಕ್ಕೆ, ಬೆತ್ತಲೆ ಮಾಡಿ ಚೆನ್ನಾಗಿ ಹೊಡೆದು ಆತನ ಕೊರಳಿಗೆ ಬೋರ್ಡ್ ನೇತಾಕಿ ವಿಡಿಯೋ ಮಾಡಿದ ಘಟನೆ ನಡೆದು ಬಹಳ ಕಾಲವಾಗಿಲ್ಲ. ದಲಿತ ಜೀವಪರ ಸಂಘಟನೆಗಳು ಇದನ್ನು ಪ್ರತಿಭಟಿಸಿದಾಗ ದಲಿತ ಯುವಕನ ಮೇಲೆಯೇ ಕೌಂಟರ್ ಕೇಸ್ ಹಾಕಿದ ಘಟನೆ ನಮ್ಮ ಕಣ್ಣಮುಂದೆ ಇದೆ. 9ನೇ ತರಗತಿಯ ಹುಡುಗಿಯನ್ನು ಮಾತನಾಡಿಸಿದ ನಂತರ ದಲಿತ ಹುಡುಗನೊಬ್ಬ ಅನಾಥ ಶವವಾಗಿದ್ದೂ ಇತ್ತೀಚೆಗೇ. ವಿಜಾಪುರದ ದಲಿತ ಹುಡುಗಿಯನ್ನು ಅತ್ಯಾಚಾರ ಮಾಡಿ ಕೊಲೆ ಮಾಡಿದಾಗ ಆ ಹುಡುಗಿಯ ನಡತೆಯೇ ಸರಿಯಿಲ್ಲವೆಂದ ಪೋಲಿಸ್ ಅಧಿಕಾರಿಗಳ ಆಡಿಯೋ ಸಹಾ ಎಲ್ಲರೂ ಕೇಳಿದ್ದೇವೆ.

ಈ ಎಲ್ಲಾ ಘಟನೆಗಳಲ್ಲೂ ಮೇಲ್ಜಾತಿಯ ಮನಸ್ಥಿತಿಗಳು ತಮ್ಮ ತಪ್ಪನ್ನು ಒಪ್ಪಿಕೊಂಡಿಲ್ಲ. ಹೀಗಾಗಿ ಜಾತಿ ಮೇಲರಿಮೆಯೇ ಇದಕ್ಕೆ ಕಾರಣ ಎಂದು ನಂಬಲು ಕಾರಣಗಳಿವೆ. ಸುಲಭವಾಗಿ ಸಿಗುವ ಪ್ರತಾಪ್‍ನಂತಹ ಅಮಾಯಕರನ್ನು ಹಿಂಸಿಸುವುದನ್ನು ತಪ್ಪು ಎಂದು ಒಪ್ಪಿಕೊಳ್ಳದಷ್ಟು ಮಾನವೀಯತೆ ಕಳೆದುಕೊಂಡಿದ್ದೇವಾ ಎಂದು ಅವರೂ ಯೋಚಿಸಬೇಕಿದೆ. ಹಾಗೆ ಮಾಡದೇ ಸುಳ್ಳುಗಳನ್ನು ಕಟ್ಟಿದಾಗ ಇರಬಹುದಾದ ಅಲ್ಪಸ್ವಲ್ಪ ನಿಜವನ್ನೂ ನಂಬಲಾಗದು.

ಪ್ರತಿಜಾಥಾ ಇತ್ಯಾದಿ ಪ್ರಸ್ತಾಪಗಳನ್ನು ಮಾನವೀಯತೆಯಿರುವ ಜನರು ಕೈಬಿಟ್ಟು, ಆತ್ಮಾವಲೋಕನಕ್ಕೆ ಮುಂದಾಗಲಿ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪ.ಬಂಗಾಳ ಎಸ್‌ಐಆರ್‌ : ದೇಶ ಕಾದ ಯೋಧನಿಂದ ತೀರ್ಪು ಕೊಟ್ಟ ನ್ಯಾಯಾಧೀಶರವರೆಗೆ.. ಮತ ಹಕ್ಕು ಕಳೆದುಕೊಂಡ ಲಕ್ಷಾಂತರ ಜನರು

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ದೇಶದಲ್ಲಿ ಪ್ರಸ್ತುತ ಚರ್ಚೆಯಲ್ಲಿರುವ ಪ್ರಮುಖ ವಿಚಾರ. ಹಲವು ಗೊಂದಲಗಳ ನಡುವೆ ಮೊದಲ ಹಂತದಲ್ಲಿ ಬಿಹಾರದಲ್ಲಿ ಎಸ್‌ಐಆರ್‌ ಪೂರ್ತಿಗೊಳಿಸಿದ ಚುನಾವಣಾ ಆಯೋಗ, ನಂತರ ಅಲ್ಲಿ ವಿಧಾನಸಭಾ...

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...

ಫ್ಯಾಕ್ಟ್‌ಚೆಕ್ : ಅತ್ಯಾಚಾರ ಅಪರಾಧಿ ಪರ ವಕೀಲೆಗೆ ಟಿಎಂಸಿಯಿಂದ ರಾಜ್ಯಸಭೆ ಸೀಟ್; ಬಿಜೆಪಿ ಆರೋಪದ ಸತ್ಯಾಸತ್ಯತೆ ಏನು?

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಪಾಣಿಹತಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಆರ್‌ಜಿ ಕರ್‌ ಸಂತ್ರಸ್ತೆಯ ತಾಯಿ ಮತ್ತು ವಕೀಲೆ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯಸಭಾ ಸದಸ್ಯೆ ಮೇನಕಾ ಗುರುಸ್ವಾಮಿ ಅವರ ಎಐ-ರಚಿತ...