- Advertisement -
- Advertisement -
| ನಾನುಗೌರಿ ಡೆಸ್ಕ್ |
ಕಳೆದ ವಾರ ನಡೆದಿದ್ದು ದಲಿತ ಯುವಕನ ಬೆತ್ತಲೆ ಮೆರವಣಿಗೆ ಪ್ರಕರಣ ಖಂಡಿಸಿ ಇಂದು ಗುಂಡ್ಲುಪೇಟೆಯಲ್ಲಿ ಬೃಹತ್ ಜಾಥ, ಪ್ರತಿರೋಧ ಸಮಾವೇಶ ನಡೆಯುತ್ತಲಿದೆ. ಘಟನೆ ನಡೆದ ಶನಿಮಹಾತ್ಮ ದೇವಾಲಯದಿಂದ ಆರಂಭವಾದ ಜಾಥ ಗುಂಡ್ಲುಪೇಟೆಯ ಪುರಸಭೆಯ ಕಲಾಮಂದಿರವರೆಗೂ ಸಾಗಿ ಪ್ರತಿರೋಧ ಸಮಾವೇಶ ನಡೆಯುತ್ತಿದೆ. ಸುಮಾರು ಮೂರು ಸಾವಿರಕ್ಕೂ ಅಧಿಕ ಮಂದಿ ಪ್ರಜ್ಞಾವಂತರು, ಹೋರಾಟಗಾರರು ಭಾಗವಹಿಸಿ ಜಾತಿಪದ್ಧತಿಯ ವಿರುದ್ಧ ಗೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೆರವಣಿಗೆ ವಿಡಿಯೋ ನೋಡಿ:
ಪ್ರತಿರೋಧ ಸಮಾವೇಶದಲ್ಲಿ ಹಲವು ಬೌದ್ದ ಬಂಜೇಜಿಗಳು ಭಾಗವಹಿಸಿ ಹಲವು ಹೋರಾಟಗಾರರು ಅಧಿಕೃತವಾಗಿ ಬೌದ್ಧ ಧರ್ಮಕ್ಕೆ ಸೇರುವ ಮೂಲಕ ತಮ್ಮ ಪ್ರತಿಭಟನೆ ವ್ಯಕ್ತಪಡಿಸಿದ್ದಾರೆ.
ಪ್ರೊ.ಮಹೇಶ್ ಚಂದ್ರ ಗುರು, ಸಿ ಬಸವಲಿಂಗಯ್ಯ, ಎಂ.ಬಿ ಶ್ರೀನಿವಾಸ್, ಡಾ.ಕೃಷ್ಣಮೂರ್ತಿ ಚಮರಂ, ಡಾ.ವೆಂಕಟಸ್ವಾಮಿ ಸೇರಿದಂತೆ ಮತ್ತಿತರರು ಭಾಗವಹಿಸಿದ್ದಾರೆ.
ಫೋಟೊಗಳು
[…] […]