Homeಮುಖಪುಟಗಲ್ಲಿಯಲ್ಲಿ ಬೆಳೆದು ದಿಲ್ಲಿಯವರೆಗೂ ಸದ್ದು ಮಾಡಿದ ಹುಡುಗನ ಕಥೆಯೇ ಗಲ್ಲಿಬಾಯ್

ಗಲ್ಲಿಯಲ್ಲಿ ಬೆಳೆದು ದಿಲ್ಲಿಯವರೆಗೂ ಸದ್ದು ಮಾಡಿದ ಹುಡುಗನ ಕಥೆಯೇ ಗಲ್ಲಿಬಾಯ್

ಅತಿಯಾದ ಬಿಲ್ಡಪ್ ಕೊಡದೆ ಪಾತ್ರಗಳನ್ನು ನೈಜವೆನ್ನುವಂತೆ ಮೂಡಿಸಿರುವುದು ಈ ಸಿನೆಮಾದ ವಿಶೇಷ

- Advertisement -
- Advertisement -

|ಅನಿಲ್ ಕುಮಾರ್ ಚಿಕ್ಕದಾಳವಟ್ಟ |

ಬಡ ಕುಟುಂಬದಲ್ಲಿ ಜನಿಸಿದವರಿಗೂ ಸಹ ಸಾಕಷ್ಟು ಪ್ರತಿಭೆ ಇದ್ದೇ ಇರುತ್ತದೆ. ಆದರೆ ಆತ ಅಥವಾ ಆಕೆ ಏನನ್ನಾದರು ಸಾಧಿಸಬೇಕೆಂದು ನಿಂತಾಗ ಮೊದ ಮೊದಲಿಗೆ ಭಯಾನಕ ಅವಮಾನ ಮತ್ತು ಸೋಲುಗಳನ್ನು ಎದುರಿಸಬೇಕಾಗುತ್ತದೆ. ಇದರಲ್ಲಿ ಕೊನೆಯವರೆಗು ನಿಂತು ಗೆಲ್ಲುವುದು ಬೆರಳೆಣಿಕೆಯಷ್ಟು ಮಂದಿ ಮಾತ್ರ. ಅಂತಹ ಸಾಧನೆ ಮಾಡಿದ ಯುವಕನ ಕಥೆಯೇ ಗಲ್ಲಿಬಾಯ್. ಬಾಲಿವುಡ್‍ನಲ್ಲಿ ಸದ್ದು ಮಾಡಿರು ಈ ವಿಶೇಷ ಚಿತ್ರ ದೇಶಾದ್ಯಂತ ಒಳ್ಳೆಯ ಪ್ರಶಂಸೆಗಳನ್ನು ಪಡೆದಿದೆ. ಇದು ಇಬ್ಬರು ಪ್ರಚಲಿತ ರ್ಯಾಪ್ ಗಾಯನದ ತಾರೆಗಳಾದ ನೇಜಿ (ನವೀದ್ ಶೇಕ್) ಮತ್ತು ಡಿವೈನ್ (ವೀವಾನ್ ಫರ್ನಾಂಡೀಸ್)ರ ನೈಜ ಜೀವನದ ಕಥೆಯಿಂದ ಪಡೆದ ಸ್ಫೂರ್ತಿಯಿಂದ ಮಾಡಲಾಗಿದೆ.

ಮುಂಬಯಿಯ ಹೆಸರಾಂತ ಸ್ಲಂ ಧಾರವೀಯ ಗಲ್ಲಿಯ ಹುಡುಗ ಮೂರಾದ್ ಒಂದು ಬಡ ಮುಸ್ಲೀಂ ಕುಟುಂಬದಲ್ಲಿ ಹುಟ್ಟಿ ತಾನು ಒಬ್ಬ ರ್ಯಾಪ್ ಸಿಂಗರ್ ಆಗಬೇಕೆಂದು ಕನಸು ಕಾಣುತ್ತಿರುತ್ತಾನೆ. ಆದರೆ ಬಡತನ ಈತನನ್ನು ಹಿಂದೆ ಎಳೆಯುತ್ತಿರುತ್ತದೆ. ಈತನ ತಂದೆ ಒಂದು ಶ್ರೀಮಂತ ಕುಟುಂಬದಲ್ಲಿ ಕಾರ್ ಡ್ರೈವರ್ ಆಗಿ ಕೆಲಸ ಮಾಡುತ್ತಿರುತ್ತಾರೆ. ತಾಯಿ, ಅಜ್ಜಿ, ತಮ್ಮ ಹೀಗೆ ಕುಟುಂಬ ಸಾಗುತ್ತಿರಬೇಕಾದರೆ ದಿಡೀರ್ ಎಂದು ಇವರ ತಂದೆ ಮತ್ತೊಂದು ಮದುವೆಯಾಗುತ್ತಾನೆ. ಕೊನೆಯ ವರ್ಷದ ಪದವಿ ಓದುತ್ತಿರುವ ಮೂರಾದ್ ಓದನ್ನು ಮುಗಿಸಿ ಕೆಲಸಕ್ಕೆ ಹೋಗಬೇಕೆಂಬುದು ತಂದೆಯ ಬಯಕೆಯಾಗಿರುತ್ತದೆ. ಒಮ್ಮೆ ತಂದೆಯ ಕಾಲಿಗೆ ಏಟಾದಾಗ ತಂದೆಯ ಕೆಲಸಕ್ಕೆ ಈತನೆ ಹೋಗುತ್ತಾನೆ. ಕೆಲಸದ ಸಮಯದಲ್ಲೂ ಈತನ ಮನಸ್ಸು ಪೂರ್ತಿ ಸಂಗೀತದದಲ್ಲಿ ತೇಲುತಿರುತ್ತದೆ. ಇವನು ಮಾತ್ರ ಸಮಯ ಸಿಕ್ಕಾಗೆಲ್ಲ ಹಾಡುಗಳನ್ನು ಕೇಳುತ್ತಾ ಗಾಯಕನಾಗಬೇಕೆಂದು ಹುಚ್ಚು ಹಿಡಿಸಿಕೊಂಡಿರುತ್ತಾನೆ. ಇದಕ್ಕೆ ತನ್ನ ಪ್ರೀತಿಯ ಗೆಳತಿ ಸಫೀನಾ ಇವನ ಬೆಂಬಲಕ್ಕೆ ನಿಂತು ಪ್ರೋತ್ಸಾಹಿಸಿರುತ್ತಾಳೆ. ಅವಳು ಅವರ ಮನೆಯವರಿಗೆ ಸುಳ್ಳು ಹೇಳಿ ಪ್ರತಿದಿನ ಮೂರಾದ್ ನನ್ನು ಭೇಟಿಯಾಗುತ್ತಿರುತ್ತಾಳೆ.

ಈ ಮಧ್ಯೆ ಇವರ ಕಾಲೇಜಿನಲ್ಲಿ ಹಾಡಲು ಬಂದ ರ್ಯಾಪರ್ ಶೇರ್ ನನ್ನು ನಂತರ ಹುಡುಕಿಕೊಂಡು ಹೋಗಿ ಪರಿಚಯ ಮಾಡಿಕೊಳ್ಳುತ್ತಾನೆ. ಶೇರ್‍ನ ಸ್ನೇಹ ಮೂರಾದ್ ಗೆ ಹೊಸ ಭರವಸೆ ಮತ್ತು ಹೊಸ ಸ್ಫೂರ್ತಿಯನ್ನು ತರುತ್ತದೆ. ಶೇರ್ ತನ್ನ ಪಂಚ್ ಮಾತುಗಳಿಂದ ಮೂರಾದ್‍ನನ್ನು ಹುರಿದುಂಬಿಸುತ್ತಾನೆ. ನಿನ್ನಂತಹ ಕಷ್ಟದಲ್ಲಿರುವವರೇ ಏನಾದರೂ ಸಾಧನೆ ಮಾಡಲಿಕ್ಕೆ ಸಾಧ್ಯ ಎಲ್ಲಾ ಅನೂಕೂಲವಾಗಿದ್ದರೆ ಸಾಧನೆ ಮಾಡಲು ಯಾರು ಬರುವುದಿಲ್ಲ ಎಂದು ಹೇಳುತ್ತಾನೆ. ನಿನ್ನೋಳಗೆ ಅಡಗಿರುವಂತಹ ಲಾವರಸ ಹೊಡೆದು ಜ್ವಾಲಾಮುಖಿಯಾಗಿ ಹೊರಗಡೆ ಬರಲಿ ಎಂದು ಹೊಸ ಚೈತನ್ಯ ತುಂಬುತ್ತಾನೆ. ಈ ಮಧ್ಯೆ ಮೂರಾದ್ ಹತ್ತಿರ ಹಾಡಿಸಿ ಒಂದು ವಿಡಿಯೋ ಮಾಡಿ ಗಲ್ಲಿಬಾಯ್ ಹೆಸರಿನಲ್ಲಿ ಯೂಟೂಬ್ ಅಲ್ಲಿ ಬಿಡುತ್ತಾರೆ. ಅದು ಒಂದಷ್ಟು ಜನ ಗುರುತಿಸುವಂತಾಗುತ್ತದೆ. ವಿಡಿಯೋ ನೋಡಿ ಇವರನ್ನು ಬೇಟಿಯಾಗುವ ಸ್ಕೈ (ಕಲ್ಕಿ ಕೋಚ್ಲಿನ್) ಎಂಬ ಸಂಗೀತದ ಸ್ಟುಡೀಯೋ ಹೊಂದಿರುವ ಹುಡುಗಿ ಮೂರಾದ್ ಮತ್ತು ಷೇರ್ ಇಬ್ಬರನ್ನು ಸೇರಿಸಿ ಒಂದು ಆಲ್ಬಂ ಸಾಂಗ್ ಮಾಡಿ ಬಿಡುತ್ತಾರೆ. ಅದು ತುಂಬಾ ಸದ್ದು ಮಾಡುತ್ತದೆ. ಈ ಹಾಡನ್ನು ಕೇಳಿ ಮೂರಾದ್‍ನ ತಂದೆ ಕೆರಳುತ್ತಾನೆ ಇದರಿಂದ ಮನೆಯಲ್ಲಿ ಜಗಳವಾಗುತ್ತದೆ, ತಂದೆ ಈ ರ್ಯಾಪ್ ಹಾಡುವುದನ್ನು ಒಪ್ಪುವುದಿಲ್ಲ. ಮೂರಾದ್ ತನ್ನ ತಾಯಿ ತಮ್ಮನನ್ನು ಕರೆದುಕೊಂಡು ಮನೆಯಿಂದ ಹೊರಗಡೆ ಬಂದು ಬಿಡುತ್ತಾನೆ.

ಈತನ ಸ್ನೇಹಿತ ಚಿಕ್ಕಮಕ್ಕಳ ಜೊತೆ ಬೇರೆ ದಂಧೆಗಳನ್ನ ಮಾಡಿಸುವದನ್ನು ನಿಲ್ಲಿಸೆಂದು ಜಗಳ ಮಾಡುತ್ತಾನೆ ಆದರೆ ಇವೆಲ್ಲ ಮಾಡದೆ ಇದ್ದರ ಅವರಿಗೆ ತಿನ್ನಲು ಅನ್ನವು ಇರುವುದಿಲ್ಲ ಎಂದು ಹೇಳುತ್ತಾನೆ. ಮೂರಾದ್ ಮನೆಯಿಂದ ತನ್ನ ತಾಯಿ ಮತ್ತು ತಮ್ಮನನ್ನು ಕರೆದುಕೊಂಡು ಹೊರಬಂದಿರುವುದಿರಿಂದ ತನ್ನ ಕುಟುಂಬ ನಿರ್ವಹಣೆಗೆ ಹಣ ಸಾಕಾಗದೆ ಒದ್ದಾಡುತ್ತಾನೆ. ಕೊನೆಗೆ ತನ್ನ ಸ್ನೇಹಿತನ ಜೊತೆ ಸೇರಿ ಕಾರುಗಳನ್ನು ಕದ್ದು ಮಾರುವ ಕೆಲಸಕ್ಕೆ ಅನಿವಾರ್ಯವಾಗಿ ತೊಡಗಿಕೊಳ್ಳುತ್ತಾನೆ. ಕೊನಗೆ ಈತನ ಸ್ನೇಹಿತ ಪೋಲಿಸರ ಕೈಗೆ ಸಿಕ್ಕರೂ ಮೂರಾದ್ ಬಗ್ಗೆ ಮಾತ್ರ ಬಾಯಿ ಬಿಡುವುದಿಲ್ಲ. ತನ್ನ ತಾಯಿಯ ಸಹೋದರ (ಮಾವ) ಮಾಡುವ ಒತ್ತಾಯಕ್ಕೆ ಮಾವ ಕೆಲಸ ಮಾಡುವ ಖಾಸಗಿ ಕಂಪನಿಯಲ್ಲಿಯೇ ಈತನೂ ಕೆಲಸಕ್ಕೆ ಸೇರುತ್ತಾನೆ. ಆದರೆ ಈತ ಇದು ನನ್ನ ಜಾಗ ಅಲ್ಲ , ನಾನು ಮಾಡಬೇಕಾದ ಕೆಲಸ ಅಲ್ಲಾ ಎಂದು ತುಡಿಯುತ್ತಿರುತ್ತಾನೆ.

ಇದನ್ನು ಓದಿ: ಪಾ. ರಂಜಿತ್‍ನ ಐತಿಹಾಸಿಕ ಪ್ರಜ್ಞೆ ಮತ್ತು ಬೆದರಿಕೆಯ ಹುನ್ನಾರ

ಒಂದು ದೊಡ್ಡ ರ್ಯಾಪರ್ ಗಾಯಕರಿಗಾಗಿ ಸ್ಫರ್ಧೆ ಇರುವುದು ಗೊತ್ತಾಗಿ ತನ್ನ ಮಾವನಿಗೆ ರಜೆ ಕೇಳುತ್ತಾನೆ ಆದರೆ ಅವನ ಮಾವ ತಿರಸ್ಕರಿಸುತ್ತಾನೆ. ಮೂರಾದ್ ಕೆಲಸವೇ ಬಿಟ್ಟು ಸ್ಪರ್ಧೆಯಲ್ಲಿ ಭಾಗವಹಿಸುತ್ತಾನೆ. ಕೊನೆಗೂ ಕಾಂಪಿಟೇಷನ್ ಅಲ್ಲಿ ಗೆದ್ದು ಆಪ್ನಾ ಟೈಮ್ ಆಯೇಗಾ ಎಂದು ಮಿಂಚುತ್ತಾನೆ. ಹೀಗೆ ಜೀವನದ ಅನುಕ್ಷಣವು ತನ್ನ ಗುರಿಗಾಗಿ ತುಡಿದು ಗೆಲ್ಲುವ ಯುವ ಸಾಧಕರ ಕಥೆ.

ನಮ್ಮ ಸಮಾಜದಲ್ಲಿ ಸಾಕಷ್ಟು ಪ್ರತಿಭೆಗಳು ಬಡವರ ಮನೆಗಳಲ್ಲಿಯೇ ತಮ್ಮ ಬಡತನ ಕಾರಣಕ್ಕಾಗಿ ಉಳಿದು ಹೋಗಿವೆ. ಎಲ್ಲೋ ಬೆರಳೆಣಿಕೆಯಷ್ಟು ಮಂದಿ ಮಾತ್ರ ಹೊರಗಡೆ ಬಂದು ಮಿಂಚಿದ್ದಾರೆ ಮತ್ತು ಅಂತಹವರನ್ನು ಸಹ ಕೆಲವರು ಬಳಸಿಕೊಂಡು ಬಿಸಾಡಿದ ಉದಾಹರಣೆಗಳು ನಮ್ಮ ಮುಂದೆ ಇವೆ. ನಮ್ಮದೇ ರಾಜ್ಯದ ಉದಾಹರಣೆ ನೋಡುವುದಾದರೆ ಕಾಡಿನಲ್ಲಿ ವಾಸಿಸುತ್ತಿದ್ದ ಬುಡಕಟ್ಟು ಜನಾಂಗದ ರಾಜೇಶ್‍ನನ್ನು ಈ ಮಾಧ್ಯಮ ಲೋಕ ತಮ್ಮ ಟಿ.ಆರ್.ಪಿ ದಾಹಕ್ಕೆ ಹೇಗೆ ಬಳಸಿಕೊಂಡಿತು ಎಂಬದಕ್ಕೆ ನಾವು ಸಾಕ್ಷಿಯಾಗಿದ್ದೇವೆ. ಈ ಸಿನೆಮಾ ಯುವಜನರು ತಾವು ಅಂದಕೊಂಡ ಯಶಸನ್ನು ಸಾಧಿಸಲು ಧೃಢವಾದ ನಂಬಿಕೆ ಮತ್ತು ಪ್ರಯತ್ನ ಕಲಿಕೆ ಎಷ್ಟು ಮುಖ್ಯ ಮತ್ತು ಜೀವನದಲ್ಲಿ ನಮ್ಮ ಆಶಯ ಸಾಧನೆಗೆ ಬರುವ ತೊಡಕುಗಳನ್ನು ಹೇಗೆ ಧೈರ್ಯದಿಂದ ಎದುರಿಸಬೇಕು ಎಂಬದನ್ನು ಮೂರಾದ್ ನ ಗೆಲುವಿನ ಮೂಲಕ ತೋರಿಸುತ್ತದೆ. ಅತಿಯಾದ ಬಿಲ್ಡಪ್ ಕೊಡದೆ ಪಾತ್ರಗಳನ್ನು ನೈಜವೆನ್ನುವಂತೆ ಮೂಡಿಸಿರುವುದು ಈ ಸಿನೆಮಾದ ವಿಶೇಷವೆನ್ನಬಹುದು. ಈಗ ಪ್ರತಿಭೆಯನ್ನು ಗುರ್ತಿಸಿಕೊಳ್ಳಲು ಸಾಮಾಜಿಕ ಜಾಲತಾಣದ ವೇದಿಕೆಗಳಿವೆ ಅದರ ಹೊರತಾಗಿ ಬೆಳೆಯಲು ತುಂಬಾ ಅವಕಾಶಗಳಿದ್ದರೂ ಸಹ ಯುವಜನರಿಗೆ ಸರಿಯಾದ ಮಾರ್ಗದರ್ಶನದ ಕೊರತೆ ಇದೆ. ಈ ಸಿನೆಮಾದಲ್ಲಿ ಮೂರಾದ್ ಪ್ರತಿ ಸಮಯದಲ್ಲಿ ಸಾಹಿತ್ಯ ಮತ್ತು ಬೀಟ್‍ಗಳನ್ನು ಸೇರಿಸಲು ಪ್ರತಿದಿನ ತಾಲೀಮು ನಡೆಸುತ್ತಿರುತ್ತಾನೆ.

ಇದನ್ನು ಓದಿ:  ಇದು ಸಿನಿಮಾವಲ್ಲ, ಹೆಣ್ತನದ ಮುಖಾಮುಖಿ ನಾತಿಚರಾಮಿ

ಇದು ಈ ಸಿನೆಮಾದ ಕಥೆ ಮಧ್ಯೆ ನಡೆಯುವ ಮೂರಾದ್ ಮತ್ತು ಸಫೀನಾ ಪ್ರೀತಿ, ಜಗಳ ತಮಾಷೆ ತುಂಬಾ ಆಪ್ತವಾಗುತ್ತವೆ. ಮೂರಾದ್ ಪಾತ್ರವನ್ನು ರಣವೀರ್ ಸಿಂಗ್ ತನ್ನ ಒಳಗಡೆ ಇಳಿಸಿಕೊಂಡು ನಟಿಸಿದ್ದಾನೆ. ಮೂರಾದ್ ಪ್ರೀತಿಸುವ ಹಡುಗಿ ಸಫೀನಾ ಪಾತ್ರದಲ್ಲಿ ಆಲೀಯಾ ಭಟ್ ಕೂಡ ಉತ್ತಮವಾದ ಅಭಿನಯ ನೀಡಿದ್ದಾರೆ. ತಾವು ಜೀವನದಲ್ಲಿ ಗೆದ್ದೆ ಗೆಲ್ಲುತ್ತೇವೆ ಎಂದು ಮನಸ್ಸು ತುಂಬ ತುಂಬಿಕೊಂಡು ಜೊತೆಗಿರುವವರನ್ನು ಹುರಿದುಂಬಿಸುವ ಶೇರ್ ಪಾತ್ರದಲ್ಲಿ ಸಿದ್ದಾರ್ಥ ಚತುರ್ವೇದಿ ಚನ್ನಾಗಿ ಅಭಿನಯಿಸಿದ್ದಾರೆ. ಜೋಯಾ ಅಖ್ತರ್ ಈ ಸಿನೆಮಾವನ್ನು ನೋಡುಗರು ಸಿನೆಮಾದಲ್ಲಿಯೇ ಮುಳುಗಿರುವಂತೆ ನಿರ್ದೇಶಿಸಿದ್ದಾರೆ. ಸರಾಗವಾಗಿ ಸಾಗುವ ಕಥೆ ಪ್ರೇಕ್ಷಕರನ್ನು ಸಿನಾಮಾದ ಪಾತ್ರಗಳಜೊತೆ ಬೆಸೆಯುತ್ತದೆ. ಇದಕ್ಕೆ ಪೂರಕವಾದಂತಹ ಸಂಗೀತವನ್ನು ಕರ್ಷನ್ ಕಾಲೆ ಮಾಡಿದ್ದಾರೆ. ಈ ಸಿನೆಮಾ ಬರ್ಲಿನ್ ಸಿನೆಮಾ ಉತ್ಸವದಲ್ಲಿ ಪ್ರದರ್ಶನ ಖಂಡಿದೆ. ಇಂತಹ ಸ್ಫೂರ್ತಿಧಾಯಕ ಸಿನೆಮಾಗಳು ಬರಲಿ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...