Homeಮುಖಪುಟಗಲ್ಲಿಯಲ್ಲಿ ಬೆಳೆದು ದಿಲ್ಲಿಯವರೆಗೂ ಸದ್ದು ಮಾಡಿದ ಹುಡುಗನ ಕಥೆಯೇ ಗಲ್ಲಿಬಾಯ್

ಗಲ್ಲಿಯಲ್ಲಿ ಬೆಳೆದು ದಿಲ್ಲಿಯವರೆಗೂ ಸದ್ದು ಮಾಡಿದ ಹುಡುಗನ ಕಥೆಯೇ ಗಲ್ಲಿಬಾಯ್

ಅತಿಯಾದ ಬಿಲ್ಡಪ್ ಕೊಡದೆ ಪಾತ್ರಗಳನ್ನು ನೈಜವೆನ್ನುವಂತೆ ಮೂಡಿಸಿರುವುದು ಈ ಸಿನೆಮಾದ ವಿಶೇಷ

- Advertisement -
- Advertisement -

|ಅನಿಲ್ ಕುಮಾರ್ ಚಿಕ್ಕದಾಳವಟ್ಟ |

ಬಡ ಕುಟುಂಬದಲ್ಲಿ ಜನಿಸಿದವರಿಗೂ ಸಹ ಸಾಕಷ್ಟು ಪ್ರತಿಭೆ ಇದ್ದೇ ಇರುತ್ತದೆ. ಆದರೆ ಆತ ಅಥವಾ ಆಕೆ ಏನನ್ನಾದರು ಸಾಧಿಸಬೇಕೆಂದು ನಿಂತಾಗ ಮೊದ ಮೊದಲಿಗೆ ಭಯಾನಕ ಅವಮಾನ ಮತ್ತು ಸೋಲುಗಳನ್ನು ಎದುರಿಸಬೇಕಾಗುತ್ತದೆ. ಇದರಲ್ಲಿ ಕೊನೆಯವರೆಗು ನಿಂತು ಗೆಲ್ಲುವುದು ಬೆರಳೆಣಿಕೆಯಷ್ಟು ಮಂದಿ ಮಾತ್ರ. ಅಂತಹ ಸಾಧನೆ ಮಾಡಿದ ಯುವಕನ ಕಥೆಯೇ ಗಲ್ಲಿಬಾಯ್. ಬಾಲಿವುಡ್‍ನಲ್ಲಿ ಸದ್ದು ಮಾಡಿರು ಈ ವಿಶೇಷ ಚಿತ್ರ ದೇಶಾದ್ಯಂತ ಒಳ್ಳೆಯ ಪ್ರಶಂಸೆಗಳನ್ನು ಪಡೆದಿದೆ. ಇದು ಇಬ್ಬರು ಪ್ರಚಲಿತ ರ್ಯಾಪ್ ಗಾಯನದ ತಾರೆಗಳಾದ ನೇಜಿ (ನವೀದ್ ಶೇಕ್) ಮತ್ತು ಡಿವೈನ್ (ವೀವಾನ್ ಫರ್ನಾಂಡೀಸ್)ರ ನೈಜ ಜೀವನದ ಕಥೆಯಿಂದ ಪಡೆದ ಸ್ಫೂರ್ತಿಯಿಂದ ಮಾಡಲಾಗಿದೆ.

ಮುಂಬಯಿಯ ಹೆಸರಾಂತ ಸ್ಲಂ ಧಾರವೀಯ ಗಲ್ಲಿಯ ಹುಡುಗ ಮೂರಾದ್ ಒಂದು ಬಡ ಮುಸ್ಲೀಂ ಕುಟುಂಬದಲ್ಲಿ ಹುಟ್ಟಿ ತಾನು ಒಬ್ಬ ರ್ಯಾಪ್ ಸಿಂಗರ್ ಆಗಬೇಕೆಂದು ಕನಸು ಕಾಣುತ್ತಿರುತ್ತಾನೆ. ಆದರೆ ಬಡತನ ಈತನನ್ನು ಹಿಂದೆ ಎಳೆಯುತ್ತಿರುತ್ತದೆ. ಈತನ ತಂದೆ ಒಂದು ಶ್ರೀಮಂತ ಕುಟುಂಬದಲ್ಲಿ ಕಾರ್ ಡ್ರೈವರ್ ಆಗಿ ಕೆಲಸ ಮಾಡುತ್ತಿರುತ್ತಾರೆ. ತಾಯಿ, ಅಜ್ಜಿ, ತಮ್ಮ ಹೀಗೆ ಕುಟುಂಬ ಸಾಗುತ್ತಿರಬೇಕಾದರೆ ದಿಡೀರ್ ಎಂದು ಇವರ ತಂದೆ ಮತ್ತೊಂದು ಮದುವೆಯಾಗುತ್ತಾನೆ. ಕೊನೆಯ ವರ್ಷದ ಪದವಿ ಓದುತ್ತಿರುವ ಮೂರಾದ್ ಓದನ್ನು ಮುಗಿಸಿ ಕೆಲಸಕ್ಕೆ ಹೋಗಬೇಕೆಂಬುದು ತಂದೆಯ ಬಯಕೆಯಾಗಿರುತ್ತದೆ. ಒಮ್ಮೆ ತಂದೆಯ ಕಾಲಿಗೆ ಏಟಾದಾಗ ತಂದೆಯ ಕೆಲಸಕ್ಕೆ ಈತನೆ ಹೋಗುತ್ತಾನೆ. ಕೆಲಸದ ಸಮಯದಲ್ಲೂ ಈತನ ಮನಸ್ಸು ಪೂರ್ತಿ ಸಂಗೀತದದಲ್ಲಿ ತೇಲುತಿರುತ್ತದೆ. ಇವನು ಮಾತ್ರ ಸಮಯ ಸಿಕ್ಕಾಗೆಲ್ಲ ಹಾಡುಗಳನ್ನು ಕೇಳುತ್ತಾ ಗಾಯಕನಾಗಬೇಕೆಂದು ಹುಚ್ಚು ಹಿಡಿಸಿಕೊಂಡಿರುತ್ತಾನೆ. ಇದಕ್ಕೆ ತನ್ನ ಪ್ರೀತಿಯ ಗೆಳತಿ ಸಫೀನಾ ಇವನ ಬೆಂಬಲಕ್ಕೆ ನಿಂತು ಪ್ರೋತ್ಸಾಹಿಸಿರುತ್ತಾಳೆ. ಅವಳು ಅವರ ಮನೆಯವರಿಗೆ ಸುಳ್ಳು ಹೇಳಿ ಪ್ರತಿದಿನ ಮೂರಾದ್ ನನ್ನು ಭೇಟಿಯಾಗುತ್ತಿರುತ್ತಾಳೆ.

ಈ ಮಧ್ಯೆ ಇವರ ಕಾಲೇಜಿನಲ್ಲಿ ಹಾಡಲು ಬಂದ ರ್ಯಾಪರ್ ಶೇರ್ ನನ್ನು ನಂತರ ಹುಡುಕಿಕೊಂಡು ಹೋಗಿ ಪರಿಚಯ ಮಾಡಿಕೊಳ್ಳುತ್ತಾನೆ. ಶೇರ್‍ನ ಸ್ನೇಹ ಮೂರಾದ್ ಗೆ ಹೊಸ ಭರವಸೆ ಮತ್ತು ಹೊಸ ಸ್ಫೂರ್ತಿಯನ್ನು ತರುತ್ತದೆ. ಶೇರ್ ತನ್ನ ಪಂಚ್ ಮಾತುಗಳಿಂದ ಮೂರಾದ್‍ನನ್ನು ಹುರಿದುಂಬಿಸುತ್ತಾನೆ. ನಿನ್ನಂತಹ ಕಷ್ಟದಲ್ಲಿರುವವರೇ ಏನಾದರೂ ಸಾಧನೆ ಮಾಡಲಿಕ್ಕೆ ಸಾಧ್ಯ ಎಲ್ಲಾ ಅನೂಕೂಲವಾಗಿದ್ದರೆ ಸಾಧನೆ ಮಾಡಲು ಯಾರು ಬರುವುದಿಲ್ಲ ಎಂದು ಹೇಳುತ್ತಾನೆ. ನಿನ್ನೋಳಗೆ ಅಡಗಿರುವಂತಹ ಲಾವರಸ ಹೊಡೆದು ಜ್ವಾಲಾಮುಖಿಯಾಗಿ ಹೊರಗಡೆ ಬರಲಿ ಎಂದು ಹೊಸ ಚೈತನ್ಯ ತುಂಬುತ್ತಾನೆ. ಈ ಮಧ್ಯೆ ಮೂರಾದ್ ಹತ್ತಿರ ಹಾಡಿಸಿ ಒಂದು ವಿಡಿಯೋ ಮಾಡಿ ಗಲ್ಲಿಬಾಯ್ ಹೆಸರಿನಲ್ಲಿ ಯೂಟೂಬ್ ಅಲ್ಲಿ ಬಿಡುತ್ತಾರೆ. ಅದು ಒಂದಷ್ಟು ಜನ ಗುರುತಿಸುವಂತಾಗುತ್ತದೆ. ವಿಡಿಯೋ ನೋಡಿ ಇವರನ್ನು ಬೇಟಿಯಾಗುವ ಸ್ಕೈ (ಕಲ್ಕಿ ಕೋಚ್ಲಿನ್) ಎಂಬ ಸಂಗೀತದ ಸ್ಟುಡೀಯೋ ಹೊಂದಿರುವ ಹುಡುಗಿ ಮೂರಾದ್ ಮತ್ತು ಷೇರ್ ಇಬ್ಬರನ್ನು ಸೇರಿಸಿ ಒಂದು ಆಲ್ಬಂ ಸಾಂಗ್ ಮಾಡಿ ಬಿಡುತ್ತಾರೆ. ಅದು ತುಂಬಾ ಸದ್ದು ಮಾಡುತ್ತದೆ. ಈ ಹಾಡನ್ನು ಕೇಳಿ ಮೂರಾದ್‍ನ ತಂದೆ ಕೆರಳುತ್ತಾನೆ ಇದರಿಂದ ಮನೆಯಲ್ಲಿ ಜಗಳವಾಗುತ್ತದೆ, ತಂದೆ ಈ ರ್ಯಾಪ್ ಹಾಡುವುದನ್ನು ಒಪ್ಪುವುದಿಲ್ಲ. ಮೂರಾದ್ ತನ್ನ ತಾಯಿ ತಮ್ಮನನ್ನು ಕರೆದುಕೊಂಡು ಮನೆಯಿಂದ ಹೊರಗಡೆ ಬಂದು ಬಿಡುತ್ತಾನೆ.

ಈತನ ಸ್ನೇಹಿತ ಚಿಕ್ಕಮಕ್ಕಳ ಜೊತೆ ಬೇರೆ ದಂಧೆಗಳನ್ನ ಮಾಡಿಸುವದನ್ನು ನಿಲ್ಲಿಸೆಂದು ಜಗಳ ಮಾಡುತ್ತಾನೆ ಆದರೆ ಇವೆಲ್ಲ ಮಾಡದೆ ಇದ್ದರ ಅವರಿಗೆ ತಿನ್ನಲು ಅನ್ನವು ಇರುವುದಿಲ್ಲ ಎಂದು ಹೇಳುತ್ತಾನೆ. ಮೂರಾದ್ ಮನೆಯಿಂದ ತನ್ನ ತಾಯಿ ಮತ್ತು ತಮ್ಮನನ್ನು ಕರೆದುಕೊಂಡು ಹೊರಬಂದಿರುವುದಿರಿಂದ ತನ್ನ ಕುಟುಂಬ ನಿರ್ವಹಣೆಗೆ ಹಣ ಸಾಕಾಗದೆ ಒದ್ದಾಡುತ್ತಾನೆ. ಕೊನೆಗೆ ತನ್ನ ಸ್ನೇಹಿತನ ಜೊತೆ ಸೇರಿ ಕಾರುಗಳನ್ನು ಕದ್ದು ಮಾರುವ ಕೆಲಸಕ್ಕೆ ಅನಿವಾರ್ಯವಾಗಿ ತೊಡಗಿಕೊಳ್ಳುತ್ತಾನೆ. ಕೊನಗೆ ಈತನ ಸ್ನೇಹಿತ ಪೋಲಿಸರ ಕೈಗೆ ಸಿಕ್ಕರೂ ಮೂರಾದ್ ಬಗ್ಗೆ ಮಾತ್ರ ಬಾಯಿ ಬಿಡುವುದಿಲ್ಲ. ತನ್ನ ತಾಯಿಯ ಸಹೋದರ (ಮಾವ) ಮಾಡುವ ಒತ್ತಾಯಕ್ಕೆ ಮಾವ ಕೆಲಸ ಮಾಡುವ ಖಾಸಗಿ ಕಂಪನಿಯಲ್ಲಿಯೇ ಈತನೂ ಕೆಲಸಕ್ಕೆ ಸೇರುತ್ತಾನೆ. ಆದರೆ ಈತ ಇದು ನನ್ನ ಜಾಗ ಅಲ್ಲ , ನಾನು ಮಾಡಬೇಕಾದ ಕೆಲಸ ಅಲ್ಲಾ ಎಂದು ತುಡಿಯುತ್ತಿರುತ್ತಾನೆ.

ಇದನ್ನು ಓದಿ: ಪಾ. ರಂಜಿತ್‍ನ ಐತಿಹಾಸಿಕ ಪ್ರಜ್ಞೆ ಮತ್ತು ಬೆದರಿಕೆಯ ಹುನ್ನಾರ

ಒಂದು ದೊಡ್ಡ ರ್ಯಾಪರ್ ಗಾಯಕರಿಗಾಗಿ ಸ್ಫರ್ಧೆ ಇರುವುದು ಗೊತ್ತಾಗಿ ತನ್ನ ಮಾವನಿಗೆ ರಜೆ ಕೇಳುತ್ತಾನೆ ಆದರೆ ಅವನ ಮಾವ ತಿರಸ್ಕರಿಸುತ್ತಾನೆ. ಮೂರಾದ್ ಕೆಲಸವೇ ಬಿಟ್ಟು ಸ್ಪರ್ಧೆಯಲ್ಲಿ ಭಾಗವಹಿಸುತ್ತಾನೆ. ಕೊನೆಗೂ ಕಾಂಪಿಟೇಷನ್ ಅಲ್ಲಿ ಗೆದ್ದು ಆಪ್ನಾ ಟೈಮ್ ಆಯೇಗಾ ಎಂದು ಮಿಂಚುತ್ತಾನೆ. ಹೀಗೆ ಜೀವನದ ಅನುಕ್ಷಣವು ತನ್ನ ಗುರಿಗಾಗಿ ತುಡಿದು ಗೆಲ್ಲುವ ಯುವ ಸಾಧಕರ ಕಥೆ.

ನಮ್ಮ ಸಮಾಜದಲ್ಲಿ ಸಾಕಷ್ಟು ಪ್ರತಿಭೆಗಳು ಬಡವರ ಮನೆಗಳಲ್ಲಿಯೇ ತಮ್ಮ ಬಡತನ ಕಾರಣಕ್ಕಾಗಿ ಉಳಿದು ಹೋಗಿವೆ. ಎಲ್ಲೋ ಬೆರಳೆಣಿಕೆಯಷ್ಟು ಮಂದಿ ಮಾತ್ರ ಹೊರಗಡೆ ಬಂದು ಮಿಂಚಿದ್ದಾರೆ ಮತ್ತು ಅಂತಹವರನ್ನು ಸಹ ಕೆಲವರು ಬಳಸಿಕೊಂಡು ಬಿಸಾಡಿದ ಉದಾಹರಣೆಗಳು ನಮ್ಮ ಮುಂದೆ ಇವೆ. ನಮ್ಮದೇ ರಾಜ್ಯದ ಉದಾಹರಣೆ ನೋಡುವುದಾದರೆ ಕಾಡಿನಲ್ಲಿ ವಾಸಿಸುತ್ತಿದ್ದ ಬುಡಕಟ್ಟು ಜನಾಂಗದ ರಾಜೇಶ್‍ನನ್ನು ಈ ಮಾಧ್ಯಮ ಲೋಕ ತಮ್ಮ ಟಿ.ಆರ್.ಪಿ ದಾಹಕ್ಕೆ ಹೇಗೆ ಬಳಸಿಕೊಂಡಿತು ಎಂಬದಕ್ಕೆ ನಾವು ಸಾಕ್ಷಿಯಾಗಿದ್ದೇವೆ. ಈ ಸಿನೆಮಾ ಯುವಜನರು ತಾವು ಅಂದಕೊಂಡ ಯಶಸನ್ನು ಸಾಧಿಸಲು ಧೃಢವಾದ ನಂಬಿಕೆ ಮತ್ತು ಪ್ರಯತ್ನ ಕಲಿಕೆ ಎಷ್ಟು ಮುಖ್ಯ ಮತ್ತು ಜೀವನದಲ್ಲಿ ನಮ್ಮ ಆಶಯ ಸಾಧನೆಗೆ ಬರುವ ತೊಡಕುಗಳನ್ನು ಹೇಗೆ ಧೈರ್ಯದಿಂದ ಎದುರಿಸಬೇಕು ಎಂಬದನ್ನು ಮೂರಾದ್ ನ ಗೆಲುವಿನ ಮೂಲಕ ತೋರಿಸುತ್ತದೆ. ಅತಿಯಾದ ಬಿಲ್ಡಪ್ ಕೊಡದೆ ಪಾತ್ರಗಳನ್ನು ನೈಜವೆನ್ನುವಂತೆ ಮೂಡಿಸಿರುವುದು ಈ ಸಿನೆಮಾದ ವಿಶೇಷವೆನ್ನಬಹುದು. ಈಗ ಪ್ರತಿಭೆಯನ್ನು ಗುರ್ತಿಸಿಕೊಳ್ಳಲು ಸಾಮಾಜಿಕ ಜಾಲತಾಣದ ವೇದಿಕೆಗಳಿವೆ ಅದರ ಹೊರತಾಗಿ ಬೆಳೆಯಲು ತುಂಬಾ ಅವಕಾಶಗಳಿದ್ದರೂ ಸಹ ಯುವಜನರಿಗೆ ಸರಿಯಾದ ಮಾರ್ಗದರ್ಶನದ ಕೊರತೆ ಇದೆ. ಈ ಸಿನೆಮಾದಲ್ಲಿ ಮೂರಾದ್ ಪ್ರತಿ ಸಮಯದಲ್ಲಿ ಸಾಹಿತ್ಯ ಮತ್ತು ಬೀಟ್‍ಗಳನ್ನು ಸೇರಿಸಲು ಪ್ರತಿದಿನ ತಾಲೀಮು ನಡೆಸುತ್ತಿರುತ್ತಾನೆ.

ಇದನ್ನು ಓದಿ:  ಇದು ಸಿನಿಮಾವಲ್ಲ, ಹೆಣ್ತನದ ಮುಖಾಮುಖಿ ನಾತಿಚರಾಮಿ

ಇದು ಈ ಸಿನೆಮಾದ ಕಥೆ ಮಧ್ಯೆ ನಡೆಯುವ ಮೂರಾದ್ ಮತ್ತು ಸಫೀನಾ ಪ್ರೀತಿ, ಜಗಳ ತಮಾಷೆ ತುಂಬಾ ಆಪ್ತವಾಗುತ್ತವೆ. ಮೂರಾದ್ ಪಾತ್ರವನ್ನು ರಣವೀರ್ ಸಿಂಗ್ ತನ್ನ ಒಳಗಡೆ ಇಳಿಸಿಕೊಂಡು ನಟಿಸಿದ್ದಾನೆ. ಮೂರಾದ್ ಪ್ರೀತಿಸುವ ಹಡುಗಿ ಸಫೀನಾ ಪಾತ್ರದಲ್ಲಿ ಆಲೀಯಾ ಭಟ್ ಕೂಡ ಉತ್ತಮವಾದ ಅಭಿನಯ ನೀಡಿದ್ದಾರೆ. ತಾವು ಜೀವನದಲ್ಲಿ ಗೆದ್ದೆ ಗೆಲ್ಲುತ್ತೇವೆ ಎಂದು ಮನಸ್ಸು ತುಂಬ ತುಂಬಿಕೊಂಡು ಜೊತೆಗಿರುವವರನ್ನು ಹುರಿದುಂಬಿಸುವ ಶೇರ್ ಪಾತ್ರದಲ್ಲಿ ಸಿದ್ದಾರ್ಥ ಚತುರ್ವೇದಿ ಚನ್ನಾಗಿ ಅಭಿನಯಿಸಿದ್ದಾರೆ. ಜೋಯಾ ಅಖ್ತರ್ ಈ ಸಿನೆಮಾವನ್ನು ನೋಡುಗರು ಸಿನೆಮಾದಲ್ಲಿಯೇ ಮುಳುಗಿರುವಂತೆ ನಿರ್ದೇಶಿಸಿದ್ದಾರೆ. ಸರಾಗವಾಗಿ ಸಾಗುವ ಕಥೆ ಪ್ರೇಕ್ಷಕರನ್ನು ಸಿನಾಮಾದ ಪಾತ್ರಗಳಜೊತೆ ಬೆಸೆಯುತ್ತದೆ. ಇದಕ್ಕೆ ಪೂರಕವಾದಂತಹ ಸಂಗೀತವನ್ನು ಕರ್ಷನ್ ಕಾಲೆ ಮಾಡಿದ್ದಾರೆ. ಈ ಸಿನೆಮಾ ಬರ್ಲಿನ್ ಸಿನೆಮಾ ಉತ್ಸವದಲ್ಲಿ ಪ್ರದರ್ಶನ ಖಂಡಿದೆ. ಇಂತಹ ಸ್ಫೂರ್ತಿಧಾಯಕ ಸಿನೆಮಾಗಳು ಬರಲಿ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ವಿಮಾನ ಪತನ : ಸಂಸದ ಸೇರಿ 15 ಜನರು ಸಾವು

ಬುಧವಾರ (ಜ.28) ಸರ್ಕಾರಿ ಸ್ವಾಮ್ಯದ ವಿಮಾನಯಾನ ಸಂಸ್ಥೆ ಸಟೇನಾ ನಿರ್ವಹಿಸುತ್ತಿದ್ದ ಸಣ್ಣ ಪ್ರಯಾಣಿಕ ವಿಮಾನವು ಈಶಾನ್ಯ ಕೊಲಂಬಿಯಾದ ಪರ್ವತ ಪ್ರದೇಶದಲ್ಲಿ ಪತನಗೊಂಡು ಎಲ್ಲಾ 15 ಪ್ರಯಾಣಿಕರು ಜನರು ಸಾವಿಗೀಡಾಗಿದ್ದಾರೆ. ದುರಂತದ ಕಾರಣ ಇನ್ನೂ ಸ್ಪಷ್ಟವಾಗಿಲ್ಲ....

‘ವಿಳಂಬವಾದರೂ ಸ್ವಾಗತಾರ್ಹ ಹೆಜ್ಜೆ..’; ಕೇಂದ್ರದ ಯುಜಿಸಿ ನಿಯಮಗಳನ್ನು ಪ್ರಶಂಸಿದ ಸಿಎಂ ಸ್ಟಾಲಿನ್

ಯುಜಿಸಿ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಈಕ್ವಿಟಿ ಪ್ರಚಾರ) ನಿಯಮಗಳು, 2026 "ಆಳವಾಗಿ ಬೇರೂರಿರುವ ತಾರತಮ್ಯ ಮತ್ತು ಸಾಂಸ್ಥಿಕ ನಿರಾಸಕ್ತಿಯಿಂದ ಬಳಲುತ್ತಿರುವ ಉನ್ನತ ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸುವಲ್ಲಿ ವಿಳಂಬವಾದರೂ ಸ್ವಾಗತಾರ್ಹ ಹೆಜ್ಜೆಯಾಗಿದೆ" ಎಂದು ತಮಿಳುನಾಡು...

ಹಿರಿಯ ಕಾರ್ಮಿಕ ಮುಖಂಡ ಅನಂತ ಸುಬ್ಬರಾವ್ ನಿಧನ

ಕಳೆದ ನಾಲ್ಕು ದಶಕಗಳಿಂದ ಸಾರಿಗೆ ಕ್ಷೇತ್ರದ ಕಾರ್ಮಿಕರ ಪರವಾಗಿ ಧ್ವನಿ ಎತ್ತುತ್ತಿದ್ದ, ಕಾರ್ಮಿಕರ ಹಿತರಕ್ಷಣೆಗಾಗಿ ನಿರಂತರ ಹೋರಾಟ ನಡೆಸುತ್ತಿದ್ದ ಹಿರಿಯ ಕಾರ್ಮಿಕ ಮುಖಂಡ ಎಚ್‌.ವಿ ಅನಂತ ಸುಬ್ಬರಾವ್ ಅವರು ಜನವರಿ 28ರಂದು, ನಿಧನರಾಗಿದ್ದಾರೆ....

ಮುಡಾ ಪ್ರಕರಣ: ಸಿದ್ದರಾಮಯ್ಯಗೆ ಬಿಗ್ ರಿಲೀಫ್, ಲೋಕಾಯುಕ್ತ ಬಿ ರಿಪೋರ್ಟ್ ಪುರಸ್ಕರಿಸಿದ ಕೋರ್ಟ್

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಕುಟುಂಬದ ವಿರುದ್ಧ ಪುರಾವೆಗಳಿಲ್ಲ ಎಂದು ಹೇಳಿ ‘ಕ್ಲೀನ್ ಚೀಟ್’ ನೀಡಿ ‘ಬಿ’ ರಿಪೋರ್ಟ್ ಅನ್ನು ಸಲ್ಲಿಸಿತ್ತು....

ಪಿಟಿಸಿಎಲ್‌ ಕಾಯ್ದೆ ತಿದ್ದುಪಡಿ- ಕೋರ್ಟ್‌ಗಳಲ್ಲಿ ದಲಿತರಿಗೆ ಆಗುತ್ತಿರುವ ಅನ್ಯಾಯ ಖಂಡಿಸಿ ರಾಜ್ಯದಾದ್ಯಂತ ಪ್ರತಿಭಟನೆ

ಪಿಟಿಸಿಎಲ್‌ ಕಾಯ್ದೆ, 1978ರ 2023ರ ತಿದ್ದುಪಡಿ ಕಾಯ್ದೆಯ ವಿರೋಧಿಸಿ ಹಾಗೂ ಕಂದಾಯ ಇಲಾಖೆಯ ಎಸಿ, ಡಿಸಿ ನ್ಯಾಯಾಲಯಗಳು ಹಾಗೂ ಹೈಕೋರ್ಟ್, ಸುಪ್ರೀಂ ಕೋರ್ಟ್‌ಗಳಲ್ಲಿ ಆಗುತ್ತಿರುವ ಅನ್ಯಾಯವನ್ನು ಖಂಡಿಸಿ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ...

ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಉಚ್ಚಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಮ್‌ಕೂಟತಿಲ್‌ಗೆ ಜಾಮೀನು

ಪತ್ತನಂತಿಟ್ಟ: ಈ ತಿಂಗಳ ಆರಂಭದಲ್ಲಿ ಬಂಧಿಸಲ್ಪಟ್ಟ ಮೂರನೇ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಉಚ್ಚಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಮ್‌ಕೂಟತಿಲ್ ಅವರಿಗೆ ಕೇರಳ ನ್ಯಾಯಾಲಯ ಬುಧವಾರ ಜಾಮೀನು ನೀಡಿದೆ. ಶಾಸಕರು ಸಲ್ಲಿಸಿದ್ದ ಮೇಲ್ಮನವಿಯನ್ನು ಪರಿಗಣಿಸಿದ್ದ ಪತ್ತನಂತಿಟ್ಟ...

ವಿಮಾನ ಅಪಘಾತದಲ್ಲಿ ಅಜಿತ್ ಪವಾರ್ ಸಾವು : ಪಿತೂರಿ ಶಂಕೆ ವ್ಯಕ್ತಪಡಿಸಿದ ಮಮತಾ ಬ್ಯಾನರ್ಜಿ, ಉನ್ನತ ಮಟ್ಟದ ತನಿಖೆಗೆ ಒತ್ತಾಯಿಸಿದ ರಾಜಕೀಯ ನಾಯಕರು

ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರ ಸಾವಿಗೆ ಕಾರಣವಾದ ಬಾರಾಮತಿ ವಿಮಾನ ಪತನದ ಕುರಿತು ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಸಬೇಕೆಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬುಧವಾರ (ಜ.28) ಒತ್ತಾಯಿಸಿದ್ದಾರೆ....

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ತಾರತಮ್ಯ ತಡೆಯಲು ಯುಜಿಸಿ ಹೊಸ ನಿಯಮ; ಮುಂದುವರೆದ ಪ್ರಬಲಜಾತಿ ಗುಂಪಿನ ವಿರೋಧ

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ಪರಿಹರಿಸುವ ಗುರಿಯನ್ನು ಹೊಂದಿರುವ ವಿಶ್ವವಿದ್ಯಾಲಯ ಅನುದಾನ ಆಯೋಗದ (ಯುಜಿಸಿ) ಪರಿಷ್ಕೃತ ನಿಯಮಗಳ ಕುರಿತು ದೇಶದಲ್ಲಿ ಭಾರಿ ರಾಜಕೀಯ ವಾಗ್ವಾದ ಭುಗಿಲೆದ್ದಿದೆ. ಹೊಸ ಮಾರ್ಗಸೂಚಿಗಳ ಕುರಿತು...

ಜನಸೇನಾ ಶಾಸಕನಿಂದ ಅತ್ಯಾಚಾರ, ಬಲವಂತದ ಗರ್ಭಪಾತ : ಮಹಿಳೆ ಆರೋಪ

ಆಂಧ್ರ ಪ್ರದೇಶದ ರೈಲ್ವೆ ಕೊಡೂರು ವಿಧಾನಸಭಾ ಕ್ಷೇತ್ರದ ಜನ ಸೇನಾ ಶಾಸಕ ಮತ್ತು ಸರ್ಕಾರಿ ಸಚೇತಕ ಅರವ ಶ್ರೀಧರ್ ವಿರುದ್ಧ ಮಹಿಳೆಯೊಬ್ಬರು ಅತ್ಯಾಚಾರ ಮತ್ತು ಬಲವಂತದ ಗರ್ಭಪಾತ ಆರೋಪ ಮಾಡಿದ್ದಾರೆ. ಈ ಕುರಿತು ವಿಡಿಯೋ...

ಬಾರಾಮತಿ ವಿಮಾನ ಅಪಘಾತದಲ್ಲಿ ಅಜಿತ್ ಪವಾರ್ ನಿಧನ; ಸಂತಾಪ ಸೂಚಿಸಿದ ಪ್ರಮುಖರು

ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಮತ್ತು ಇತರ ಐವರು ಜನರು ಪ್ರಯಾಣಿಸುತ್ತಿದ್ದ ವಿಮಾನ ಬುಧವಾರ ಬೆಳಿಗ್ಗೆ ಪುಣೆ ಜಿಲ್ಲೆಯಲ್ಲಿ ಪತನಗೊಂಡು ಸಾವನ್ನಪ್ಪಿದ್ದಾರೆ. ಎನ್‌ಸಿಪಿ ನಾಯಕರಾದ ಅಜಿತ್ ಪವಾರ್ (66) ಮತ್ತು ಇತರರನ್ನು ಹೊತ್ತೊಯ್ಯುತ್ತಿದ್ದ...