Homeಮುಖಪುಟಗಲ್ಲಿಯಲ್ಲಿ ಬೆಳೆದು ದಿಲ್ಲಿಯವರೆಗೂ ಸದ್ದು ಮಾಡಿದ ಹುಡುಗನ ಕಥೆಯೇ ಗಲ್ಲಿಬಾಯ್

ಗಲ್ಲಿಯಲ್ಲಿ ಬೆಳೆದು ದಿಲ್ಲಿಯವರೆಗೂ ಸದ್ದು ಮಾಡಿದ ಹುಡುಗನ ಕಥೆಯೇ ಗಲ್ಲಿಬಾಯ್

ಅತಿಯಾದ ಬಿಲ್ಡಪ್ ಕೊಡದೆ ಪಾತ್ರಗಳನ್ನು ನೈಜವೆನ್ನುವಂತೆ ಮೂಡಿಸಿರುವುದು ಈ ಸಿನೆಮಾದ ವಿಶೇಷ

- Advertisement -
- Advertisement -

|ಅನಿಲ್ ಕುಮಾರ್ ಚಿಕ್ಕದಾಳವಟ್ಟ |

ಬಡ ಕುಟುಂಬದಲ್ಲಿ ಜನಿಸಿದವರಿಗೂ ಸಹ ಸಾಕಷ್ಟು ಪ್ರತಿಭೆ ಇದ್ದೇ ಇರುತ್ತದೆ. ಆದರೆ ಆತ ಅಥವಾ ಆಕೆ ಏನನ್ನಾದರು ಸಾಧಿಸಬೇಕೆಂದು ನಿಂತಾಗ ಮೊದ ಮೊದಲಿಗೆ ಭಯಾನಕ ಅವಮಾನ ಮತ್ತು ಸೋಲುಗಳನ್ನು ಎದುರಿಸಬೇಕಾಗುತ್ತದೆ. ಇದರಲ್ಲಿ ಕೊನೆಯವರೆಗು ನಿಂತು ಗೆಲ್ಲುವುದು ಬೆರಳೆಣಿಕೆಯಷ್ಟು ಮಂದಿ ಮಾತ್ರ. ಅಂತಹ ಸಾಧನೆ ಮಾಡಿದ ಯುವಕನ ಕಥೆಯೇ ಗಲ್ಲಿಬಾಯ್. ಬಾಲಿವುಡ್‍ನಲ್ಲಿ ಸದ್ದು ಮಾಡಿರು ಈ ವಿಶೇಷ ಚಿತ್ರ ದೇಶಾದ್ಯಂತ ಒಳ್ಳೆಯ ಪ್ರಶಂಸೆಗಳನ್ನು ಪಡೆದಿದೆ. ಇದು ಇಬ್ಬರು ಪ್ರಚಲಿತ ರ್ಯಾಪ್ ಗಾಯನದ ತಾರೆಗಳಾದ ನೇಜಿ (ನವೀದ್ ಶೇಕ್) ಮತ್ತು ಡಿವೈನ್ (ವೀವಾನ್ ಫರ್ನಾಂಡೀಸ್)ರ ನೈಜ ಜೀವನದ ಕಥೆಯಿಂದ ಪಡೆದ ಸ್ಫೂರ್ತಿಯಿಂದ ಮಾಡಲಾಗಿದೆ.

ಮುಂಬಯಿಯ ಹೆಸರಾಂತ ಸ್ಲಂ ಧಾರವೀಯ ಗಲ್ಲಿಯ ಹುಡುಗ ಮೂರಾದ್ ಒಂದು ಬಡ ಮುಸ್ಲೀಂ ಕುಟುಂಬದಲ್ಲಿ ಹುಟ್ಟಿ ತಾನು ಒಬ್ಬ ರ್ಯಾಪ್ ಸಿಂಗರ್ ಆಗಬೇಕೆಂದು ಕನಸು ಕಾಣುತ್ತಿರುತ್ತಾನೆ. ಆದರೆ ಬಡತನ ಈತನನ್ನು ಹಿಂದೆ ಎಳೆಯುತ್ತಿರುತ್ತದೆ. ಈತನ ತಂದೆ ಒಂದು ಶ್ರೀಮಂತ ಕುಟುಂಬದಲ್ಲಿ ಕಾರ್ ಡ್ರೈವರ್ ಆಗಿ ಕೆಲಸ ಮಾಡುತ್ತಿರುತ್ತಾರೆ. ತಾಯಿ, ಅಜ್ಜಿ, ತಮ್ಮ ಹೀಗೆ ಕುಟುಂಬ ಸಾಗುತ್ತಿರಬೇಕಾದರೆ ದಿಡೀರ್ ಎಂದು ಇವರ ತಂದೆ ಮತ್ತೊಂದು ಮದುವೆಯಾಗುತ್ತಾನೆ. ಕೊನೆಯ ವರ್ಷದ ಪದವಿ ಓದುತ್ತಿರುವ ಮೂರಾದ್ ಓದನ್ನು ಮುಗಿಸಿ ಕೆಲಸಕ್ಕೆ ಹೋಗಬೇಕೆಂಬುದು ತಂದೆಯ ಬಯಕೆಯಾಗಿರುತ್ತದೆ. ಒಮ್ಮೆ ತಂದೆಯ ಕಾಲಿಗೆ ಏಟಾದಾಗ ತಂದೆಯ ಕೆಲಸಕ್ಕೆ ಈತನೆ ಹೋಗುತ್ತಾನೆ. ಕೆಲಸದ ಸಮಯದಲ್ಲೂ ಈತನ ಮನಸ್ಸು ಪೂರ್ತಿ ಸಂಗೀತದದಲ್ಲಿ ತೇಲುತಿರುತ್ತದೆ. ಇವನು ಮಾತ್ರ ಸಮಯ ಸಿಕ್ಕಾಗೆಲ್ಲ ಹಾಡುಗಳನ್ನು ಕೇಳುತ್ತಾ ಗಾಯಕನಾಗಬೇಕೆಂದು ಹುಚ್ಚು ಹಿಡಿಸಿಕೊಂಡಿರುತ್ತಾನೆ. ಇದಕ್ಕೆ ತನ್ನ ಪ್ರೀತಿಯ ಗೆಳತಿ ಸಫೀನಾ ಇವನ ಬೆಂಬಲಕ್ಕೆ ನಿಂತು ಪ್ರೋತ್ಸಾಹಿಸಿರುತ್ತಾಳೆ. ಅವಳು ಅವರ ಮನೆಯವರಿಗೆ ಸುಳ್ಳು ಹೇಳಿ ಪ್ರತಿದಿನ ಮೂರಾದ್ ನನ್ನು ಭೇಟಿಯಾಗುತ್ತಿರುತ್ತಾಳೆ.

ಈ ಮಧ್ಯೆ ಇವರ ಕಾಲೇಜಿನಲ್ಲಿ ಹಾಡಲು ಬಂದ ರ್ಯಾಪರ್ ಶೇರ್ ನನ್ನು ನಂತರ ಹುಡುಕಿಕೊಂಡು ಹೋಗಿ ಪರಿಚಯ ಮಾಡಿಕೊಳ್ಳುತ್ತಾನೆ. ಶೇರ್‍ನ ಸ್ನೇಹ ಮೂರಾದ್ ಗೆ ಹೊಸ ಭರವಸೆ ಮತ್ತು ಹೊಸ ಸ್ಫೂರ್ತಿಯನ್ನು ತರುತ್ತದೆ. ಶೇರ್ ತನ್ನ ಪಂಚ್ ಮಾತುಗಳಿಂದ ಮೂರಾದ್‍ನನ್ನು ಹುರಿದುಂಬಿಸುತ್ತಾನೆ. ನಿನ್ನಂತಹ ಕಷ್ಟದಲ್ಲಿರುವವರೇ ಏನಾದರೂ ಸಾಧನೆ ಮಾಡಲಿಕ್ಕೆ ಸಾಧ್ಯ ಎಲ್ಲಾ ಅನೂಕೂಲವಾಗಿದ್ದರೆ ಸಾಧನೆ ಮಾಡಲು ಯಾರು ಬರುವುದಿಲ್ಲ ಎಂದು ಹೇಳುತ್ತಾನೆ. ನಿನ್ನೋಳಗೆ ಅಡಗಿರುವಂತಹ ಲಾವರಸ ಹೊಡೆದು ಜ್ವಾಲಾಮುಖಿಯಾಗಿ ಹೊರಗಡೆ ಬರಲಿ ಎಂದು ಹೊಸ ಚೈತನ್ಯ ತುಂಬುತ್ತಾನೆ. ಈ ಮಧ್ಯೆ ಮೂರಾದ್ ಹತ್ತಿರ ಹಾಡಿಸಿ ಒಂದು ವಿಡಿಯೋ ಮಾಡಿ ಗಲ್ಲಿಬಾಯ್ ಹೆಸರಿನಲ್ಲಿ ಯೂಟೂಬ್ ಅಲ್ಲಿ ಬಿಡುತ್ತಾರೆ. ಅದು ಒಂದಷ್ಟು ಜನ ಗುರುತಿಸುವಂತಾಗುತ್ತದೆ. ವಿಡಿಯೋ ನೋಡಿ ಇವರನ್ನು ಬೇಟಿಯಾಗುವ ಸ್ಕೈ (ಕಲ್ಕಿ ಕೋಚ್ಲಿನ್) ಎಂಬ ಸಂಗೀತದ ಸ್ಟುಡೀಯೋ ಹೊಂದಿರುವ ಹುಡುಗಿ ಮೂರಾದ್ ಮತ್ತು ಷೇರ್ ಇಬ್ಬರನ್ನು ಸೇರಿಸಿ ಒಂದು ಆಲ್ಬಂ ಸಾಂಗ್ ಮಾಡಿ ಬಿಡುತ್ತಾರೆ. ಅದು ತುಂಬಾ ಸದ್ದು ಮಾಡುತ್ತದೆ. ಈ ಹಾಡನ್ನು ಕೇಳಿ ಮೂರಾದ್‍ನ ತಂದೆ ಕೆರಳುತ್ತಾನೆ ಇದರಿಂದ ಮನೆಯಲ್ಲಿ ಜಗಳವಾಗುತ್ತದೆ, ತಂದೆ ಈ ರ್ಯಾಪ್ ಹಾಡುವುದನ್ನು ಒಪ್ಪುವುದಿಲ್ಲ. ಮೂರಾದ್ ತನ್ನ ತಾಯಿ ತಮ್ಮನನ್ನು ಕರೆದುಕೊಂಡು ಮನೆಯಿಂದ ಹೊರಗಡೆ ಬಂದು ಬಿಡುತ್ತಾನೆ.

ಈತನ ಸ್ನೇಹಿತ ಚಿಕ್ಕಮಕ್ಕಳ ಜೊತೆ ಬೇರೆ ದಂಧೆಗಳನ್ನ ಮಾಡಿಸುವದನ್ನು ನಿಲ್ಲಿಸೆಂದು ಜಗಳ ಮಾಡುತ್ತಾನೆ ಆದರೆ ಇವೆಲ್ಲ ಮಾಡದೆ ಇದ್ದರ ಅವರಿಗೆ ತಿನ್ನಲು ಅನ್ನವು ಇರುವುದಿಲ್ಲ ಎಂದು ಹೇಳುತ್ತಾನೆ. ಮೂರಾದ್ ಮನೆಯಿಂದ ತನ್ನ ತಾಯಿ ಮತ್ತು ತಮ್ಮನನ್ನು ಕರೆದುಕೊಂಡು ಹೊರಬಂದಿರುವುದಿರಿಂದ ತನ್ನ ಕುಟುಂಬ ನಿರ್ವಹಣೆಗೆ ಹಣ ಸಾಕಾಗದೆ ಒದ್ದಾಡುತ್ತಾನೆ. ಕೊನೆಗೆ ತನ್ನ ಸ್ನೇಹಿತನ ಜೊತೆ ಸೇರಿ ಕಾರುಗಳನ್ನು ಕದ್ದು ಮಾರುವ ಕೆಲಸಕ್ಕೆ ಅನಿವಾರ್ಯವಾಗಿ ತೊಡಗಿಕೊಳ್ಳುತ್ತಾನೆ. ಕೊನಗೆ ಈತನ ಸ್ನೇಹಿತ ಪೋಲಿಸರ ಕೈಗೆ ಸಿಕ್ಕರೂ ಮೂರಾದ್ ಬಗ್ಗೆ ಮಾತ್ರ ಬಾಯಿ ಬಿಡುವುದಿಲ್ಲ. ತನ್ನ ತಾಯಿಯ ಸಹೋದರ (ಮಾವ) ಮಾಡುವ ಒತ್ತಾಯಕ್ಕೆ ಮಾವ ಕೆಲಸ ಮಾಡುವ ಖಾಸಗಿ ಕಂಪನಿಯಲ್ಲಿಯೇ ಈತನೂ ಕೆಲಸಕ್ಕೆ ಸೇರುತ್ತಾನೆ. ಆದರೆ ಈತ ಇದು ನನ್ನ ಜಾಗ ಅಲ್ಲ , ನಾನು ಮಾಡಬೇಕಾದ ಕೆಲಸ ಅಲ್ಲಾ ಎಂದು ತುಡಿಯುತ್ತಿರುತ್ತಾನೆ.

ಇದನ್ನು ಓದಿ: ಪಾ. ರಂಜಿತ್‍ನ ಐತಿಹಾಸಿಕ ಪ್ರಜ್ಞೆ ಮತ್ತು ಬೆದರಿಕೆಯ ಹುನ್ನಾರ

ಒಂದು ದೊಡ್ಡ ರ್ಯಾಪರ್ ಗಾಯಕರಿಗಾಗಿ ಸ್ಫರ್ಧೆ ಇರುವುದು ಗೊತ್ತಾಗಿ ತನ್ನ ಮಾವನಿಗೆ ರಜೆ ಕೇಳುತ್ತಾನೆ ಆದರೆ ಅವನ ಮಾವ ತಿರಸ್ಕರಿಸುತ್ತಾನೆ. ಮೂರಾದ್ ಕೆಲಸವೇ ಬಿಟ್ಟು ಸ್ಪರ್ಧೆಯಲ್ಲಿ ಭಾಗವಹಿಸುತ್ತಾನೆ. ಕೊನೆಗೂ ಕಾಂಪಿಟೇಷನ್ ಅಲ್ಲಿ ಗೆದ್ದು ಆಪ್ನಾ ಟೈಮ್ ಆಯೇಗಾ ಎಂದು ಮಿಂಚುತ್ತಾನೆ. ಹೀಗೆ ಜೀವನದ ಅನುಕ್ಷಣವು ತನ್ನ ಗುರಿಗಾಗಿ ತುಡಿದು ಗೆಲ್ಲುವ ಯುವ ಸಾಧಕರ ಕಥೆ.

ನಮ್ಮ ಸಮಾಜದಲ್ಲಿ ಸಾಕಷ್ಟು ಪ್ರತಿಭೆಗಳು ಬಡವರ ಮನೆಗಳಲ್ಲಿಯೇ ತಮ್ಮ ಬಡತನ ಕಾರಣಕ್ಕಾಗಿ ಉಳಿದು ಹೋಗಿವೆ. ಎಲ್ಲೋ ಬೆರಳೆಣಿಕೆಯಷ್ಟು ಮಂದಿ ಮಾತ್ರ ಹೊರಗಡೆ ಬಂದು ಮಿಂಚಿದ್ದಾರೆ ಮತ್ತು ಅಂತಹವರನ್ನು ಸಹ ಕೆಲವರು ಬಳಸಿಕೊಂಡು ಬಿಸಾಡಿದ ಉದಾಹರಣೆಗಳು ನಮ್ಮ ಮುಂದೆ ಇವೆ. ನಮ್ಮದೇ ರಾಜ್ಯದ ಉದಾಹರಣೆ ನೋಡುವುದಾದರೆ ಕಾಡಿನಲ್ಲಿ ವಾಸಿಸುತ್ತಿದ್ದ ಬುಡಕಟ್ಟು ಜನಾಂಗದ ರಾಜೇಶ್‍ನನ್ನು ಈ ಮಾಧ್ಯಮ ಲೋಕ ತಮ್ಮ ಟಿ.ಆರ್.ಪಿ ದಾಹಕ್ಕೆ ಹೇಗೆ ಬಳಸಿಕೊಂಡಿತು ಎಂಬದಕ್ಕೆ ನಾವು ಸಾಕ್ಷಿಯಾಗಿದ್ದೇವೆ. ಈ ಸಿನೆಮಾ ಯುವಜನರು ತಾವು ಅಂದಕೊಂಡ ಯಶಸನ್ನು ಸಾಧಿಸಲು ಧೃಢವಾದ ನಂಬಿಕೆ ಮತ್ತು ಪ್ರಯತ್ನ ಕಲಿಕೆ ಎಷ್ಟು ಮುಖ್ಯ ಮತ್ತು ಜೀವನದಲ್ಲಿ ನಮ್ಮ ಆಶಯ ಸಾಧನೆಗೆ ಬರುವ ತೊಡಕುಗಳನ್ನು ಹೇಗೆ ಧೈರ್ಯದಿಂದ ಎದುರಿಸಬೇಕು ಎಂಬದನ್ನು ಮೂರಾದ್ ನ ಗೆಲುವಿನ ಮೂಲಕ ತೋರಿಸುತ್ತದೆ. ಅತಿಯಾದ ಬಿಲ್ಡಪ್ ಕೊಡದೆ ಪಾತ್ರಗಳನ್ನು ನೈಜವೆನ್ನುವಂತೆ ಮೂಡಿಸಿರುವುದು ಈ ಸಿನೆಮಾದ ವಿಶೇಷವೆನ್ನಬಹುದು. ಈಗ ಪ್ರತಿಭೆಯನ್ನು ಗುರ್ತಿಸಿಕೊಳ್ಳಲು ಸಾಮಾಜಿಕ ಜಾಲತಾಣದ ವೇದಿಕೆಗಳಿವೆ ಅದರ ಹೊರತಾಗಿ ಬೆಳೆಯಲು ತುಂಬಾ ಅವಕಾಶಗಳಿದ್ದರೂ ಸಹ ಯುವಜನರಿಗೆ ಸರಿಯಾದ ಮಾರ್ಗದರ್ಶನದ ಕೊರತೆ ಇದೆ. ಈ ಸಿನೆಮಾದಲ್ಲಿ ಮೂರಾದ್ ಪ್ರತಿ ಸಮಯದಲ್ಲಿ ಸಾಹಿತ್ಯ ಮತ್ತು ಬೀಟ್‍ಗಳನ್ನು ಸೇರಿಸಲು ಪ್ರತಿದಿನ ತಾಲೀಮು ನಡೆಸುತ್ತಿರುತ್ತಾನೆ.

ಇದನ್ನು ಓದಿ:  ಇದು ಸಿನಿಮಾವಲ್ಲ, ಹೆಣ್ತನದ ಮುಖಾಮುಖಿ ನಾತಿಚರಾಮಿ

ಇದು ಈ ಸಿನೆಮಾದ ಕಥೆ ಮಧ್ಯೆ ನಡೆಯುವ ಮೂರಾದ್ ಮತ್ತು ಸಫೀನಾ ಪ್ರೀತಿ, ಜಗಳ ತಮಾಷೆ ತುಂಬಾ ಆಪ್ತವಾಗುತ್ತವೆ. ಮೂರಾದ್ ಪಾತ್ರವನ್ನು ರಣವೀರ್ ಸಿಂಗ್ ತನ್ನ ಒಳಗಡೆ ಇಳಿಸಿಕೊಂಡು ನಟಿಸಿದ್ದಾನೆ. ಮೂರಾದ್ ಪ್ರೀತಿಸುವ ಹಡುಗಿ ಸಫೀನಾ ಪಾತ್ರದಲ್ಲಿ ಆಲೀಯಾ ಭಟ್ ಕೂಡ ಉತ್ತಮವಾದ ಅಭಿನಯ ನೀಡಿದ್ದಾರೆ. ತಾವು ಜೀವನದಲ್ಲಿ ಗೆದ್ದೆ ಗೆಲ್ಲುತ್ತೇವೆ ಎಂದು ಮನಸ್ಸು ತುಂಬ ತುಂಬಿಕೊಂಡು ಜೊತೆಗಿರುವವರನ್ನು ಹುರಿದುಂಬಿಸುವ ಶೇರ್ ಪಾತ್ರದಲ್ಲಿ ಸಿದ್ದಾರ್ಥ ಚತುರ್ವೇದಿ ಚನ್ನಾಗಿ ಅಭಿನಯಿಸಿದ್ದಾರೆ. ಜೋಯಾ ಅಖ್ತರ್ ಈ ಸಿನೆಮಾವನ್ನು ನೋಡುಗರು ಸಿನೆಮಾದಲ್ಲಿಯೇ ಮುಳುಗಿರುವಂತೆ ನಿರ್ದೇಶಿಸಿದ್ದಾರೆ. ಸರಾಗವಾಗಿ ಸಾಗುವ ಕಥೆ ಪ್ರೇಕ್ಷಕರನ್ನು ಸಿನಾಮಾದ ಪಾತ್ರಗಳಜೊತೆ ಬೆಸೆಯುತ್ತದೆ. ಇದಕ್ಕೆ ಪೂರಕವಾದಂತಹ ಸಂಗೀತವನ್ನು ಕರ್ಷನ್ ಕಾಲೆ ಮಾಡಿದ್ದಾರೆ. ಈ ಸಿನೆಮಾ ಬರ್ಲಿನ್ ಸಿನೆಮಾ ಉತ್ಸವದಲ್ಲಿ ಪ್ರದರ್ಶನ ಖಂಡಿದೆ. ಇಂತಹ ಸ್ಫೂರ್ತಿಧಾಯಕ ಸಿನೆಮಾಗಳು ಬರಲಿ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...