Homeಕರ್ನಾಟಕಪ್ರಶಸ್ತಿಗಾಗಿ ಬರಹ: ಬೇಕೊ, ಬೇಡವೋ ಎಂಬುದರ ಕುರಿತು ಒಂದು ಆರೋಗ್ಯಪೂರ್ಣ ಸಂವಾದ

ಪ್ರಶಸ್ತಿಗಾಗಿ ಬರಹ: ಬೇಕೊ, ಬೇಡವೋ ಎಂಬುದರ ಕುರಿತು ಒಂದು ಆರೋಗ್ಯಪೂರ್ಣ ಸಂವಾದ

- Advertisement -
- Advertisement -

ಕಳೆದೊಂದು ವಾರದಿಂದ ಯುವ ಬರಹಗಾರರು ಫೇಸ್ ಬುಕ್ ನಲ್ಲಿ ಪ್ರಶಸ್ತಿಗಾಗಿ ಬರಹ: ಬೇಕೊ, ಬೇಡವೋ ಎಂಬುದರ ಕುರಿತು ಆರೋಗ್ಯಪೂರ್ಣ ಸಂವಾದವೊಂದನ್ನು ನಡೆಸುತ್ತಿದ್ದಾರೆ. ಹಲವು ಆಯಾಮಗಳಿಂದ ಬಂದಿರುವ ಪ್ರತಿಕ್ರಿಯೆಗಳು ಕುತೂಹಲಕಾರಿಯಾಗಿವೆ ಮತ್ತು ಅವರವರ ನೆಲೆಗಳಿಂದ ಸಮಂಜಸವಾಗಿವೆ. ಆಯ್ದ ಕೆಲವನ್ನು ಒಟ್ಟಿಗೆ ಓದಿಗಾಗಿ ಇಲ್ಲಿ ಪ್ರಕಟಿಸುತ್ತಿದ್ದೇವೆ.

ಯಾವುದೇ ಬರಹವನ್ನು ಸ್ಪರ್ಧೆಗಾಗಿ ಬರೆಯದೆ, ಪ್ರಕಟಿತ ಪುಸ್ತಕಗಳನ್ನು ಯಾವುದೇ ಪ್ರಶಸ್ತಿಗೆ ಕಳಿಸದೆ, ಪುಸ್ತಕ ಪ್ರಕಟಿಸಿದ ಪ್ರಕಾಶಕರಿಗೂ ಯಾವ ಪ್ರಶಸ್ತಿಗೂ ಪುಸ್ತಕ ಕಳಿಸಬೇಡಿ ಎಂದು ಹೇಳಿ, ಮತ್ಯಾರದೋ ಶಿಫಾರಸ್ಸಿನ ಆಧಾರದ ಮೇಲೆ ನಮಗೆ ಪ್ರಶಸ್ತಿ ಕೊಡುವ ಪ್ರಸ್ತಾಪ ಬಂದಾಗ ಅವರ ಅಭಿಮಾನವನ್ನು ಗೌರವಿಸುತ್ತಲೇ..ಯಾವುದೇ ಪ್ರಶಸ್ತಿಗೆ ನಾನು ಬರೆದಿಲ್ಲ ಎಂದು ನಯವಾಗಿ ಪ್ರಶಸ್ತಿಗಳನ್ನು ನಿರಾಕರಿಸುತ್ತಾ ಬರೆಯಲು ಸಾಧ್ಯವೇ..??

ಅಂತದ್ದೊಂದು ಅಭಿಯಾನಕ್ಕೆ ಎಷ್ಟು ಜನ ಬರಹಗಾರ್ತಿ/ಗಾರರು ಜೊತೆಯಾಗಬಹುದು…

#ಜಸ್ಟ್ #ಕುತೂಹಲಕ್ಕೆ
#ಪ್ರಶಸ್ತಿಗಳ
#ನೆಲೆನಿಲುವುಗಳ
#ಸ್ಪಷ್ಟತೆ

ಪ್ರಶಸ್ತಿ ಕುರಿತ ನನ್ನ ಸ್ಟೇಟಸ್ ಗೆ ಪಾಸಿಟಿವ್  ನೆಗೆಟಿವ್ ಎರಡೂ ಬಗೆಯ ಅಭಿಪ್ರಾಯಗಳು ಸಹಜವಾಗಿ ಬಂದಿವೆ. ಈ ಬಗ್ಗೆ ಇನ್ನಷ್ಟು ಸ್ಪಷ್ಟನೆ ಕೊಡುವುದು ಉಚಿತ. ಬೆಜವಾಡ ವಿಲ್ಸನ್ ಅವರಿಗೆ ಮೆಗ್ಸೆಸೆ ಪ್ರಶಸ್ತಿ ಕೊಡಲು ತೀರ್ಮಾನಿಸಿದ ಸಂಸ್ಥೆ ಬೆಜವಾಡರನ್ನು ಸಂಪರ್ಕಿಸುತ್ತೆ. ಆಗ ಬೆಜವಾಡ  ಈ ಪ್ರಶಸ್ತಿಯನ್ನು ತಗೋಬೇಕೋ ಬೇಡವೋ ಎಂದು ತೀರ್ಮಾನಿಸಲು ಸ್ವಲ್ಪ ದಿನ ಸಮಯಾವಕಾಶ ಕೇಳುತ್ತಾರೆ. ನಂತರ ತಮ್ಮ ಒಡನಾಡಿ ಸಂಗಾತಿಗಳ ಜತೆ ಈ ಬಗ್ಗೆ ಚರ್ಚೆ ಮಾಡುತ್ತಾರೆ. ಕೊನೆಗೆ ಈ ಪ್ರಶಸ್ತಿಯಿಂದ ಸಿಗುವ ಜನಪ್ರಿಯತೆ ಮತ್ತು ಹಣವನ್ನು ಅವರು ಸಫಾಯಿ ಕರ್ಮಚಾರಿ ಹೋರಾಟಕ್ಕೆ ನೆರವಾಗಬಹುದೆಂದೂ, ಅಲಕ್ಷಿತವಾದ ವಿಷಯ ಮೇನ್ ಸ್ಟ್ರೀಮ್ ಚರ್ಚೆಗೆ ಬರುತ್ತದೆಂದು ತೀರ್ಮಾನಿಸಿ ನಂತರ ಮೆಗ್ಸೆಸೆ ಪ್ರಶಸ್ತಿಯನ್ನು ಸ್ವೀಕರಿಸುತ್ತಾರೆ.

ಅವರು ಅಂದುಕೊಂಡಂತೆ ಈ ಪ್ರಶಸ್ತಿ ಅವರ ಹೋರಾಟವನ್ನು ವಿಸ್ತರಿಸಲು ನೆರವಾಗುತ್ತದೆ. ಆ ತನಕ ಸ್ವತಃ ಕರ್ನಾಟಕದವರೆ ಆದ ಬೆಜವಾಡ ಅವರು ಕರ್ನಾಟಕದ  ಚಳವಳಿಗಾರರಿಗೆ ಚಿಂತಕರಿಗೆ ಅಪರಿಚಿತರಂತಿದ್ದವರು ಮೆಗ್ಸೆಸೆ ಅವಾರ್ಡ್ ಬಂದಂದಿನಿಂದ ಬಹುಶಃ ಅವರ ಕರ್ನಾಟಕದ ಪ್ರವಾಸ ಹೆಚ್ಚಾಗಿದೆ. ದೇಶವ್ಯಾಪಿ ಸಫಾಯಿ ಕರ್ಮಚಾರಿ ಹೋರಾಟಕ್ಕೆ ಒಂದು ಜನಾಭಿಪ್ರಾಯ ರೂಪಿಸಲು ಈ ಮ್ಯಾಗ್ಸಸೆ ಪ್ರಶಸ್ತಿ ನೆರವಾಗಿದೆ. ಅಂತೆಯೇ ಕಷ್ಟದಲ್ಲಿದ್ದ ಮರಿಯಮ್ಮನಹಳ್ಳಿ ನಾಗರತ್ಮಮ್ಮನಿಗೆ ವಾಲ್ಮೀಕಿ ಪ್ರಶಸ್ತಿ ಬಂದಾಗ ನಿಜಕ್ಕೂ ಆ ಹಣ ಅವರ ಬದುಕಿಗೆ ತುಂಬಾ ನೆರವಾಯಿತು.

ಹೀಗೆ ಜಾನಪದ ಕಲಾವಿದರಿಗೆ, ಅಲಕ್ಷಿತರಿಗೆ  ದುರ್ಬಲರಿಗೆ ಕೊಡುವ ಪ್ರಶಸ್ತಿಗಳ ಹಣ ಅವರ ಬದುಕಿಗೆ ಖಂಡಿತಾ ನೆರವಾಗುತ್ತದೆ., ಅಂತೆಯೇ ಪ್ರಶಸ್ತಿಯ ಗೌರವವನ್ನು ಸ್ವೀಕರಿಸಿ ಅದರ ಹಣವನ್ನು ಪ್ರಾಮಾಣಿಕವಾಗಿ ಹೋರಾಟ ಚಳವಳಿ ಮಾಡುವ ಸಂಗಾತಿಗಳಿಗೆ ಕೊಡುವ ಒಂದು ಗುಂಪಿದೆ. ಹೀಗೆ ಪ್ರಶಸ್ತಿ ವಯಕ್ತಿಕ ನೆಲೆಯಲ್ಲಿಯೂ, ಸಾಮಾಜಿಕ ನೆಲೆಯಲ್ಲಿಯೂ ಅದರಿಂದಾಗಿ ನೆರವಾಗುವಂತಿದ್ದರೆ, ಆ ನೆರವಿನ ಅಗತ್ಯವಿದ್ದವರು ಖಂಡಿತಾ ಪ್ರಶಸ್ತಿ ಸ್ವೀಕರಿಸುವುದು ಸರಿ. ಈ ಎರಡೂ ಆಯಾಮಗಳಿಲ್ಲದವರು ತಮ್ಮ ಕಲೆ, ಬರಹ, ಪ್ರತಿಭೆಯನ್ನು ಪ್ರಶಸ್ತಿಗಳಿಗೆ ಮಾನದಂಡಗಳನ್ನಾಗಿ ಮಾಡುವ ಅಗತ್ಯವಿಲ್ಲ ಎನ್ನುವುದು ನನ್ನ ವಯಕ್ತಿಕ ಅಭಿಪ್ರಾಯ.

ಎಂ.ಎಂ.ಕಲಬುರ್ಗಿಯವರ ಕೊಲೆಯ ತನಿಕೆಯ ವಿಳಂಬ ವಿರೋಧಿಸಿ ಪ್ರಶಸ್ತಿ ವಾಪಸಾತಿ ಚಳವಳಿಯಲ್ಲಿ ನನಗೆ ಬಂದಿದ್ದ  ಕ.ಸಾ.ಪ ದ ಅರಳು ಪ್ರಶಸ್ತಿಯನ್ನು ಮರಳಿಸಿದ್ದೆ. ಅಲ್ಲಿಂದ ಈತನಕ ನನ್ನೊಳಗೇ ಪ್ರಶಸ್ತಿಗಳ ತೆಗೆದುಕೊಳ್ಳುವ ಸರಿ ತಪ್ಪುಗಳ ಬಗೆಗೆ ಒಂದು ಯೋಚನೆ ಆಗಾಗ ಕೊರೆಯುತ್ತಿತ್ತು. ಇದೀಗ ಒಂದು ಸ್ಪಷ್ಟತೆಗೆ ಬಂದಿರುವೆ. ಮುಂದೆಂದಾದರೂ ಪ್ರಶಸ್ತಿಯ ಗೌರವ ವಯಕ್ತಿಕವಾಗಿ ನನಗೂ.. ಪರೋಕ್ಷವಾಗಿ ಸಮಾಜಕ್ಕೂ.. ಒಳಿತಾಗುವಂತಿದ್ದರೆ, ಮತ್ತು ಆ ನೆಪದಲ್ಲಿ ಸಿಗುವ ಹಣದ ಅಗತ್ಯ ನನ್ನ ಬದುಕಿಗೆ ಇದೆ ಅನ್ನಿಸಿದ ಅನಿವಾರ್ಯ ಸಂದರ್ಭ ಬಂದೊದಗುವ ತನಕ ಬರಹವನ್ನು ಯಾವುದೇ ಪ್ರಶಸ್ತಿಯ ಮಾನದಂಡಕ್ಕೆ ಸಿಕ್ಕಿಸಬಾರದು ಅನ್ನಿಸಿದೆ. ಇದೊಂದು ತೀರಾ ಖಾಸಗಿಯಾದ ನನ್ನ ವಯಕ್ತಿಕ ನಿಲುವು. ಯಾರನ್ನು ಮೆಚ್ಚಿಸುವ ಅಥವಾ ಪ್ರಶಸ್ತಿ ಸ್ವೀಕರಿಸುವವರನ್ನು ಅವಮಾನಿಸುವ ಉದ್ದೇಶ ಖಂಡಿತಾ ನನಗಿಲ್ಲ. ಅವರವರ ನಿಲುವು ತಿಳಿವುಗಳನ್ನು ಗೌರವಿಸುವೆ. ಈ ನಿಲುವು ತೆಗೆದುಕೊಳ್ಳುವಲ್ಲಿ ಪರೋಕ್ಷವಾಗಿ Peer Bavaji (ಬಿ. ಪೀರ್ ಭಾಷಾ) ಅವರ ಪ್ರಭಾವವಿದೆ.

ಈ ನಿಲುವನ್ನು ಸಾರ್ವಜನಿಕಗೊಳಿಸುವ ಬಗ್ಗೆ ಇದೂ ಪ್ರಚಾರವಲ್ಲವೇ ಎನ್ನುವ ಅರ್ಥದಲ್ಲಿ ಹಿಂದೊಮ್ಮೆ Humchadakatte Akshatha (ಅಕ್ಷತಾ ಹುಂಚದಕಟ್ಟೆ) ಹೇಳಿದ್ದರು. ಇಂತಹದ್ದೊಂದು ನಿಲುವು ಸಾರ್ವಜನಿಕ ಚರ್ಚೆಗೆ ಬರುವ ಅಗತ್ಯವಿದೆ ಅನ್ನಿಸಿತು. ಇಂತಹದ್ದೇ ಆಲೋಚನೆ ಇರುವವರಾದರೂ ಜೊತೆಯಾಗಲಿ ಎನ್ನುವ ಉದ್ದೇಶದಿಂದ ಈ ನಿಲುವನ್ನು ಸಾರ್ವಜನಿಕ ಚರ್ಚೆಗೆ ತರಲಾಯಿತು. ಹಾಗಾಗಿ ಅನ್ಯಥಾ ಭಾವಿಸಬಾರದು. ಇದನ್ನು ಎಲ್ಲರೂ ಒಪ್ಪಬೇಕೆಂದಾಗಲಿ, ಒಪ್ಪದೆ ಇರುವವರು ಪ್ರಶಸ್ತಿಯ ಆಸೆಯನ್ನಿಟ್ಟುಕೊಂಡಿದ್ದಾರೆ ಎನ್ನುವುದಾಗಲಿ ಎರಡೂ ಬಾಲಿಷವೆ. ಕಾರಣ ಹಿಂದೆ ನಾನು ಸ್ಪರ್ಧೆಗೆ ಬರೆದು ಪ್ರಶಸ್ತಿ ತೆಗೆದುಕೊಂಡಿರುವೆ. ಸಂಡೂರು ಭೂಹೋರಾಟ ಪುಸ್ತಕಕ್ಕೆ ಪ್ರಶಸ್ತಿಯನ್ನೂ ಪಡೆದಿರುವೆ. ಹಾಗಾಗಿ ಇದು ದಿಢೀರ್ ನಿಲುವು ಖಂಡಿತಾ ಅಲ್ಲ.  ಅನ್ಯರಿಗೆ ಇದು ಸರಿಯೋ ತಪ್ಪೋ ಆಗಿ ಕಾಣಬಹುದು. ಆದರೆ ನಾನಿಲ್ಲಿ ನನ್ನ ಖಚಿತ ನಿಲುವನ್ನು ಹಂಚಿಕೊಂಡಿರುವೆ.

ಮೇಲಿನ ಇವಿಷ್ಟು ಪೋಸ್ಟ್ ಗಳು ಸಂವಾದವನ್ನು ಆರಂಭಿಸಿದ ಅರುಣ್ ಜೋಳದ ಕೂಡ್ಲಿಗಿಯವರದ್ದಾಗಿವೆ.

ಪ್ರಶಸ್ತಿಯ ಥ್ರಿಲ್ ಇಲ್ಲಿನ ಗುಡ್ಡಗಾಡು ಮತ್ತು ತಳಸಮುದಾಯಗಳ ಹುಡುಗ ಹುಡುಗಿಯರ ಬರೆಹಗಳಿಗೆ ಸಿಗಬೇಕು…ಅದರಿಂದ ಸ್ಫೂರ್ತಿಗೊಂಡ ಅವರು ಮತ್ತಷ್ಟು ಮಗದಷ್ಟು ಬರೀಬೇಕು…ಅವರು ಕಂಡುಂಡ  ಲೋಕದ ಅನಾವರಣ ಆಗಬೇಕು….ಆಮೇಲೆ ಅವರೆ ಸಾಕಪ್ಪ ಇನ್ನು ಪ್ರಶಸ್ತಿ…ನಮ್ಮಲ್ಲಿ ನೂರಾರು ಲೇಖಕರಿಗೆ ಬಂದು ಬಿಟ್ಟದೆ ಇದರಲ್ಲೇನೂ ವಿಶೇಷವಿಲ್ಲ ಎನ್ನಬೇಕು….. ಇಷ್ಟು ಸದ್ಯಕ್ಕೆ…ಇನ್ನೂ ಸ್ವಲ್ಪ ಉಳ್ಕಂಡಿದೆ…. ಮುಂದೆ ಹೇಳಕೆ ಆದಾಗ ಹೇಳುವೆ… ಎಂದು ಅಕ್ಷತಾ ಹುಂಚದಕಟ್ಟೆ ಕಮೆಂಟ್ ನಲ್ಲಿ ತಮ್ಮ ಅಭಿಪ್ರಾಯ ದಾಖಲಿಸಿದ್ದಾರೆ.

ಪ್ರಶಸ್ತಿಗಾಗಿ ಬರೀಬಾರದು ನಿಜ.. ಆದರೆ ನಾವು ಬರೆದದ್ದಕ್ಕೆ ಪ್ರಶಸ್ತಿಯಿಂದ ಮೌಲ್ಯ ಹಾಗೂ ಐಡೆಂಟಿಟಿ ಸಿಗುತ್ತದೆ ಎಂದಾದರೆ ಪ್ರಶಸ್ತಿಗಾಗಿ ಪುಸ್ತಕಗಳನ್ನು ಕಳಿಸಬೇಕು. ಇಲ್ಲದೇ ಹೋದರೆ ಕಳಪೆ ಬರೆಯುವುವವರೇ ಸಮಾಜದಲ್ಲಿ ಸಾಹಿತಿಗಳಾಗಿ ಐಡೆಂಟಿಟಿ ಪಡೆದು ಬೂಸಾ ಸಾಹಿತ್ಯದ ಹೆಚ್ಚಳಕ್ಕೆ ನಾವೂ ಕಾರಣವಾಗುತ್ತೇವೆ… ನಾವು ಒಪ್ಪದಿರಬಹುದು ಆದರೆ ಪ್ರಶಸ್ತಿಗಳ ಮೂಲಕ ಸಾಹಿತಿಯನ್ನು, ಸಾಹಿತ್ಯವನ್ನು ಅಳೆಯುವ ಮೌಲ್ಯ ವ್ಯವಸ್ಥೆ ಈಗಾಗಲೇ ರೂಪಿತವಾಗಿದೆ. ಇದನ್ನು ದಿಡೀರ್ ನಿರಾಕರಿಸಿ ಹೊಸ ಮೌಲ್ಯ ವ್ಯವಸ್ಥೆ ರೂಪಿಸಿ ಬಿಡಲಾಗದು.

ಹಾಗಂತ ಪ್ರಶಸ್ತಿಗಾಗಿ ಮಾಡಬಾರದ ಅನಾಚಾರ, ಭ್ರಷ್ಟಾಚಾರವನ್ನು ಮಾಡಬೇಕಿಲ್ಲ… ಆಯ್ಕೆ ಸಮಿತಿಗಳಲ್ಲಿ ಗುಣಮಟ್ಟಕ್ಕೆ ಬೆಲೆ ನೀಡುವವರು ಇದ್ದರೂ ಇರಬಹುದು ಎಂಬ ಆಶಯವಿದ್ದರೆ ಸಾಕು…

ಇನ್ನು ಅರುಣ ಹೇಳುವ “ಕಮ್ಯುನಿಸಂ” ಸಧ್ಯ ಕ್ರೋನಿ ಕ್ಯಾಪಿಟಲಿಸಂ ಕಾಲಘಟ್ಟದಲ್ಲಿ ಬಹಳ ದೂರದ ಮಾತು….. ಇದಕ್ಕಾಗಿ ಬಹಳ ಸೈಕಲ್ ಹೊಡೆಯೋದಿದೆ. ಎಂದು ಹರ್ಷಕುಮಾರ್ ಕುಗ್ವೆ ಪ್ರತಿಕ್ರಿಯೆ ನೀಡಿದ್ದಾರೆ.

Arun Joladkudligi ಅವರ ಪ್ರಶಸ್ತಿ ನಿರಾಕರಿಸುತ್ತಾ ಬರೆಯಲು ಸಾಧ್ಯವೇ? ಎಂಬ ಅಭಿಯಾನದಲ್ಲಿ #ನಾನು ಇದ್ದೇನೆ ಎಂಬುದಾಗಿ ಅವತ್ತು ಉತ್ಸಾಹದಲ್ಲಿ ಕಾಮೆಂಟಿಸಿದೆ.

ಇವತ್ತು ಪತ್ರಿಕೆಯಲ್ಲಿ ಮುದ್ದಣ ಕಾವ್ಯಪ್ರಶಸ್ತಿಗೆ ಹಸ್ತಪ್ರತಿಗಳನ್ನು ಆಹ್ವಾನಿಸಿದ್ದನ್ನು ಓದಿದ ಮೇಲೆ ಅವತ್ತಿನ ನನ್ನ ಪ್ರತಿಕ್ರಿಯೆ ಆತುರದ್ದು ಅನಿಸಿತು.

ಯಾಕೆಂದರೆ,
ಪ್ರಶಸ್ತಿಗಳನ್ನ ಪಡೆದು ಸಾಹಿತಿಯ ಪಟ್ಟವನ್ನೇರಿದ ಗುಂಪುಗಳಾಚೆಗೆ ನಾನೂ ಸಾಹಿತಿ ಅನ್ನಿಸಿಕೊಳ್ಳಬೇಕಾದರೆ ಯಾವುದಾದರೂ ಪ್ರಶಸ್ತಿ ಪಡೆದ ಬೋರ್ಡ್ ತಗಲಾಕಂಡಿರ್ಬೇಕು. ನನ್ನ ಗೆಳೆಯನೊಬ್ಬ ಹದಿನೈದಿಪ್ಪತ್ತು ಪುಸ್ತಕ ಪ್ರಕಟಿಸಿದ್ದಾನೆ. ಆದರೆ ಅವನಿಗೆ ಯಾವುದೇ ರಾಜ್ಯಮಟ್ಟದ ಅಥವಾ ಗುರುತು ಹೇಳಿಕೊಳ್ಳಬಹುದಾದ ಒಂದೂ ಪ್ರಶಸ್ತಿ ಬಾರದೆ ಅಷ್ಟು ಬರೆದರೂ ಸಾಹಿತಿಪಟ್ಟ ಅವನಿಗೆ ಒಲಿದಂತಿಲ್ಲ.

ಕಡೇಪಕ್ಷ ಮುಂದೆ ಯಾವತ್ತಾದರೂ ಪ್ರಶಸ್ತಿ ವಾಪಸಾತಿ ಚಳುವಳಿ ನಡೆದರೆ, ವಾಪಾಸು ಮಾಡಲಿಕ್ಕಾದರೂ ಒಂದು ಪ್ರಶಸ್ತಿ ಬೇಕಲ್ಲ. ಅದಕ್ಕಾಗಿಯಾದರೂ ಒಂದು ಪ್ರಶಸ್ತಿ ಬರಬೇಕು.

ಹೀಗೆ ಯಾಕೆ ಮನಸ್ಸಿಗೆ ಬಂತೆಂದರೆ, ಕನ್ನಡದ ಪ್ರಖ್ಯಾತರೊಬ್ಬರ ಬಳಿ ನನ್ನ ಪುಸ್ತಕಕ್ಕೆ ಮುನ್ನುಡಿ ಬರೆದುಕೊಡುವಿರಾ? ಎಂದಾಗ ‘ಮುನ್ನುಡಿ ಯಾಕೆ, ಮುನ್ನುಡಿ ಇಲ್ಲದೆಯೆ ಪುಸ್ತಕ ತರಬಾರದು ಅಂತೇನಾದ್ರೂ ಇದೆಯಾ, ನಾನು ಮುನ್ನುಡಿ ಬರೆಯುವುದನ್ನ ನಿಲ್ಲಿಸಬೇಕಂತ ಯೋಚಿಸುತ್ತಿದ್ದೇನೆ’ ಎಂಬ ಹಾರಿಕೆಯ ಉತ್ತರ ನೀಡಿ ನನ್ನ ಪುಸ್ತಕದ ಮುನ್ನುಡಿಯಿಂದ ತಪ್ಪಿಸಿಕೊಂಡರು.

ಆಯ್ತು ಪುಸ್ತಕವೂ ಬಂತು. ಬಿಡುಗಡೆಗೆ ಇನ್ನೊಬ್ಬ ಪ್ರಖ್ಯಾತರು ಪುಸ್ತಕದ ಬಗ್ಗೆ ಮಾತನಾಡಲು ಬಂದಿದ್ದರು. ಕನ್ನಡದ ಬಿಕ್ಕಟ್ಟುಗಳ ಬಗ್ಗೆ ಮಾತಾಡಿದರೆ ಹೊರತು ನನ್ನ ಕತೆಗಳ ಕುರಿತು ಒಂದು ಸಾಲೂ ಮಾತಾಡದೆ “ಅಂದು ಬಿಡುಗಡೆಗೊಳ್ಳುವ ಪುಸ್ತಕದ ಬಗ್ಗೆ” ಮಾತಾಡಿದರಪ್ಪ.

ಪುಸ್ತಕ ಬಿಡುಗಡೆ ಆಯ್ತು. ಪತ್ರಿಕೆಗಳಿಗೆ ವಿಮರ್ಶೆಗೆ ಕಳಿಸಿದರೆ ಎಲ್ಲೂ ಬರದಂತಾಯಿತು. ನನ್ನ ಬಹುತೇಕ ಕತೆಗಳು ಪ್ರಕಟವಾದ ಪ್ರಜಾವಾಣಿಯಲ್ಲೂ ಒಂದು ಸಾಲೂ ಬರಲಿಲ್ಲ.

ಇಷ್ಟೆಲ್ಲ ಆದ ಮೇಲೆ ನನಗೆ ಅನಿಸಿದ್ದು, ನನ್ನ ಬರಹಗಳು ಇವೆಲ್ಲಕ್ಕೂ ಅರ್ಹವಾಗಿಲ್ಲವೇನೋ ಅಂತ. ಹಾಗಾಗಿ ನನಗೆ ಪ್ರಶಸ್ತಿಗಳು ಬರುವುದಿಲ್ಲವೇನೋ ಅಂತ. ಅದಕ್ಕಾಗಿಯೇ ಅವತ್ತು ಅರುಣಣ್ಣನ ಅಭಿಯಾನಕ್ಕೆ #ನಾನು ಅಂತ ಕಾಮೆಂಟಿಸಿದ್ದು. ಪ್ರಶಸ್ತಿಗಳೇ ಬರದಿದ್ದ ಮೇಲೆ ನಿರಾಕರಣೆಯು ಹೆಮ್ಮೆ ಆಗಬಹುದಲ್ವೆ.

ಹಾಗಂತ ಪ್ರಶಸ್ತಿಗೆ ನಾನು ಅರ್ಜಿ ಹಾಕಲೇ ಇಲ್ಲ ಅಂತಲ್ಲ. ಆ ವರ್ಷ ರಾಜ್ಯ ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನ, ಕರ್ನಾಟಕ ಸಂಘ ಶಿವಮೊಗ್ಗ, ಕೇಂದ್ರ ಸಾ. ಅಕಾಡೆಮಿ ಯುವ ಪ್ರಶಸ್ತಿ (ವಯೋಮಿತಿ ಮೀರಿದ್ದರೂ ಮೊದಲ ಪುಸ್ತಕ ಅಂತ ಕುಶಿಯಲ್ಲಿ)ಗೆ ಕಳಿಸಿದ್ದೆ.

ಯಾವ ಪ್ರಶಸ್ತಿಯೂ ಬರಲಿಲ್ಲ, ನಂತರ ನನ್ನ ಹೊಸ ಪುಸ್ತಕವೂ ಬರಲಿಲ್ಲ. ಎಂದು ಪ್ರಸಿದ್ದ ರಂಗಕರ್ಮಿ ಮತ್ತು ಶಿಕ್ಷಕರಾದ ಸಂತೋಷ್ ಗುಡ್ಡಿಯಂಗಡಿ ಪೋಸ್ಟ್ ಹಾಕಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...