Homeಮುಖಪುಟಅಗ್ನಿಪಥ ಯೋಜನೆ ಬೀರಬಹುದಾದ ಪರಿಣಾಮಗಳು

ಅಗ್ನಿಪಥ ಯೋಜನೆ ಬೀರಬಹುದಾದ ಪರಿಣಾಮಗಳು

- Advertisement -
- Advertisement -

2016 ರಿಂದ 2019ರವರೆಗೆ ಮೂರು ವರ್ಷಗಳಲ್ಲಿ ಭಾರತೀಯ ಸೇನೆಗೆ 1.54 ಲಕ್ಷ ಯುವಜನರು ಸೇರಿದ್ದಾರೆ. ಅಂದರೆ ವರ್ಷಕ್ಕೆ ಸರಾಸರಿ 51 ಸಾವಿರ ಜನರು ಸೇನೆಗೆ ಆಯ್ಕೆಯಾಗುತ್ತಿದ್ದರು. ಆದರೆ ಕೋವಿಡ್ ಕಾರಣದಿಂದ ಕಳೆದ 2 ವರ್ಷಗಳಿಂದ ಸೇನಾ ನೇಮಕಾತಿ ನಡೆದಿಲ್ಲ. ಒಂದು ವೇಳೆ ನಡೆದಿದ್ದಲ್ಲಿ 1 ಲಕ್ಷಕ್ಕೂ ಅಧಿಕ ಮಂದಿ ಸೇನೆಯಲ್ಲಿ ಉದ್ಯೋಗ ಪಡೆದಿರುತ್ತಿದ್ದರು. ಹಾಗಾಗಿ ಹಲವು ಲಕ್ಷ ಯುವಜನರು ನೇಮಕಾತಿಗಾಗಿ ಕಾದು ಕುಳಿತಿದ್ದರು. ಇಂತಹ ಸಂದರ್ಭದಲ್ಲಿ ಜೂನ್ 14 ರಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್‌ಸಿಂಗ್ ಮತ್ತು ಮೂವರು ಸೇನಾ ಮುಖ್ಯಸ್ಥರು ಕೇಂದ್ರ ಸರ್ಕಾರದ ನೂತನ ’ಅಗ್ನಿಪಥ್’ ಎಂಬ ರಕ್ಷಣಾ ನೇಮಕಾತಿಯ ಯೋಜನೆ ಘೋಷಿಸಿದರು. ಭೂಸೇನೆ, ವಾಯುಸೇನೆ ಮತ್ತು ನೌಕಾಸೇನೆಗೆ ನಾಲ್ಕು ವರ್ಷಗಳ ಅಲ್ಪ ಅವಧಿಗೆ ಈ ವರ್ಷ ’ಅಗ್ನಿವೀರ್’ ಹೆಸರಿನ ಯೋಜನೆಯಡಿ 46,000 ಯುವ ಸೈನಿಕರನ್ನು ನೇಮಕ ಮಾಡಿಕೊಳ್ಳುವುದಾಗಿ ತಿಳಿಸಿದರು. 17.5ರಿಂದ 21 ವರ್ಷದವರೆಗಿನ ಬುದ್ಧಿವಂತ, ತಂತ್ರಜ್ಞಾನ ತಿಳಿವಳಿಕೆಯುಳ್ಳ ಯುವಜನರು ಸೇನೆಗೆ ಸೇರ್ಪಡೆಯಾಗುವ ಮೂಲಕ ಭಾರತೀಯ ಸೇನೆಗೆ ತಾರುಣ್ಯ ತಂದುಕೊಡಲಿದ್ದಾರೆ ಎಂದರು.

ಸದ್ಯದ ಭಾರತೀಯ ಸೈನಿಕರ ಸರಾಸರಿ ವಯಸ್ಸು 32 ವರ್ಷ ಇದ್ದು, ಅದನ್ನು 24-26 ವರ್ಷಕ್ಕೆ ಇಳಿಸುವ ಮತ್ತು ಪಿಂಚಣಿ-ಗ್ರಾಚ್ಯುಟಿ, ಸಂಬಳ ಸೇರಿದಂತೆ ಇತರ ಭತ್ಯೆಗಳನ್ನು ಕಡಿತಗೊಳಿಸುವುದು ಈ ಯೋಜನೆಯ ಗುರಿ ಎಂದು ಸರ್ಕಾರ ಹೇಳಿಕೊಂಡಿದೆ.

ಮತ್ತೊಂದೆಡೆ ಈ ಘೋಷಣೆಯಾದಾಗಿನಿಂದ ಸೇನೆ ಸೇರುವ ಆಕಾಂಕ್ಷಿಗಳು ದುಃಖಿತರಾಗಿದ್ದಾರೆ ಮತ್ತು ಆಕ್ರೋಶಗೊಂಡಿದ್ದಾರೆ. ಸೇನೆ ಸೇರಿ ದೀರ್ಘಾವಧಿ ರಾಷ್ಟ್ರಸೇವೆ ಮಾಡಬೇಕೆಂಬ ಅವರು ಕನಸು ನುಚ್ಚುನೂರಾಗಿದೆ. ಕಾಯಂ ಉದ್ಯೋಗದ ನಿರೀಕ್ಷೆಯಲ್ಲಿದ್ದ ಲಕ್ಷಾಂತರ ಯುವಜನರು ಆಕ್ರೋಶಿತರಾಗಿ ದೇಶಾದ್ಯಂತ ಬೀದಿಗಿಳಿದು ತೀವ್ರರೂಪದಲ್ಲಿ ಪ್ರತಿಭಟಿಸುತ್ತಿದ್ದಾರೆ. 8 ರಾಜ್ಯಗಳಲ್ಲಿ ಸತತ ಒಂದು ವಾರದಿಂದ ನಿರಂತರವಾಗಿ ನಡೆಯುತ್ತಿರುವ ಪ್ರತಿಭಟನೆಗಳು ತಾರಕಕ್ಕೇರಿ ಹಿಂಸಾಚಾರಕ್ಕೆ ತಿರುಗಿದೆ. ಯುವಜನರು ಭಾರತ್ ಬಂದ್ ಆಚರಿಸಿ ಸರ್ಕಾರಕ್ಕೆ ಸವಾಲೆಸೆದಿದ್ದಾರೆ. ಪ್ರತಿಪಕ್ಷಗಳು ಮತ್ತು ನಿವೃತ್ತ ಸೈನ್ಯಾಧಿಕಾರಿಗಳು ಸಹ ಅಗ್ನಿಪಥ್ ಯೋಜನೆಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದು ಸೈನಿಕರ ವೃತ್ತಿಪರತೆ, ನೈತಿಕತೆ ಮತ್ತು ಹೋರಾಟದ ಮನೋಭಾವವನ್ನು ಛಿದ್ರಗೊಳಿಸಬಹುದು ಮತ್ತು ನಾಗರಿಕ ಸಮಾಜದ ಮಿಲಿಟರೀಕರಣಕ್ಕೆ ಕಾರಣವಾಗಬಹುದು ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಸರ್ಕಾರದ ಸಮರ್ಥನೆಯೇನು?

2022ರ ವರ್ಷದಲ್ಲಿ ಅಗ್ನಿವೀರರ ವಯೋಮಿತಿಯನ್ನು 23 ವರ್ಷದವರೆಗೆ ವಿಸ್ತರಿಸಿದ್ದೇವೆ; 6 ತಿಂಗಳ ತರಬೇತಿಯೊಂದಿಗೆ 4 ವರ್ಷ ಸೇವೆ ಸಲ್ಲಿಸಲು ಅವಕಾಶವಿದೆ; ಆ ನಂತರ ಅಗತ್ಯಕ್ಕೆ ತಕ್ಕಂತೆ ಶೇ.25ರವರೆಗೆ ಅಗ್ನಿವೀರರು ರೆಗ್ಯುಲರ್ ಕೇಡರ್ ಆಗಿ ಮುಂದಿನ 15 ವರ್ಷಗಳಿಗೆ ಆಯ್ಕೆಯಾಗಲು ಅರ್ಜಿ ಸಲ್ಲಿಸಬಹುದು.

ಉಳಿದ 75% ಅಗ್ನಿವೀರರು ನಿವೃತ್ತಿಯಾಗುತ್ತಾರೆ. ಅವರಿಗೆ 11.71 ಲಕ್ಷ ರೂ ಸೇವಾ ನಿಧಿ ಪ್ಯಾಕೇಜ್ ನೀಡಲಾಗುತ್ತದೆ. ಅದು ತೆರಿಗೆಯಿಂದ ವಿನಾಯಿತಿ ಪಡೆಯುತ್ತದೆ. (ಪ್ರತಿ ತಿಂಗಳು ಅಗ್ನಿವೀರರ ಸಂಬಳದಿಂದ 30% ಹಣವನ್ನು ಕಡಿತ ಮಾಡಿ ಅಷ್ಟೇ ಪ್ರಮಾಣದ ಹಣವನ್ನು ಸರ್ಕಾರದಿಂದ ಹಾಕಿ ಅದಕ್ಕೆ ಬಡ್ಡಿ ಸೇರಿಸಿ ಕೊನೆಯಲ್ಲಿ ಕೊಡುವುದೆ ಸೇವಾನಿಧಿ ಪ್ಯಾಕೇಜ್ ಆಗಿದೆ. ಇದಕ್ಕೆ ಹತ್ತಾರು ಷರತ್ತುಗಳಿವೆ)

ಅಗ್ನಿವೀರರು ಶಿಸ್ತು, ಸ್ಫೂರ್ತಿ, ಸ್ಕಿಲ್ ಮತ್ತು ದೈಹಿಕ ಸ್ಥಿರತೆ ಪಡೆಯುತ್ತಾರೆ. ಅವರಿಗೆ ಪಿಯುಸಿಗೆ ಸಮನಾದ ಶೈಕ್ಷಣಿಕ ಕೋರ್ಸ್ ಸರ್ಟಿಫಿಕೇಟ್ ನೀಡಲಾಗುತ್ತದೆ.

ಅಗ್ನಿವೀರರಿಗೆ 48 ಲಕ್ಷ ರೂಗಳ ಜೀವವಿಮೆ ಇರುತ್ತದೆ. ಸೇನಾಕರ್ತವ್ಯದಲ್ಲಿ ವೈ ಮತ್ತು ಝಡ್ ವರ್ಗದ ಅಗ್ನಿವೀರರು ಮೃತಪಟ್ಟರೆ 44 ಲಕ್ಷ ರೂಗಳ ಪರಿಹಾರ ನೀಡಲಾಗುತ್ತದೆ. (ಎಕ್ಸ್ ವರ್ಗದವರಿಗೆ ಇಲ್ಲ.)

ಮಾಜಿ ಅಗ್ನಿವೀರರಿಗೆ ಸ್ವಯಂ ಉದ್ಯೋಗ ಮಾಡಲು ಬ್ಯಾಂಕ್ ಸಾಲ ಸೌಲಭ್ಯ ನೀಡಲಾಗುತ್ತದೆ. ಸರ್ಕಾರದ ಇತರ ಉದ್ಯೋಗಗಳಲ್ಲಿ ಅಗ್ನಿವೀರರಿಗೆ ಆದ್ಯತೆ ನೀಡಲಾಗುತ್ತದೆ.

ಪ್ರತಿಭಟನಾನಿರತ ಯುವಜನರ ಆಕ್ರೋಶವೇನು?

ಮೊದಲ ವರ್ಷ ಅಗ್ನಿವೀರರಿಗೆ ಕೇವಲ 21,000 ರೂ ಸಂಬಳ (9,000 ರೂ ಸೇವಾನಿಧಿಗೆ ಕಡಿತ) ನೀಡಲಾಗುತ್ತದೆ. ಕೇವಲ 4 ವರ್ಷ ಸೇವೆ ಇದ್ದು, 21 ವರ್ಷಕ್ಕೆ ನಿವೃತ್ತರಾದ ನಂತರ ಮಾಜಿ ಅಗ್ನಿವೀರರು ಏನು ಮಾಡಬೇಕು? ಒಂದು ಕಡೆ ಸಮರ್ಪಕ ಶಿಕ್ಷಣವೂ ಇಲ್ಲದ, ಸುಭದ್ರ ಉದ್ಯೋಗವು ಇಲ್ಲದೆ ಅಲೆಯಬೇಕಾಗುತ್ತದೆ.

ಯುವಜನರ ಬೇಡಿಕೆಯೇನು?

ಅಗ್ನಿಪಥ್ ಯೋಜನೆ ಕೈಬಿಟ್ಟು ಈ ಹಿಂದೆ ಜಾರಿಯಲ್ಲಿದ್ದ ಕಾಯಂ ಸೈನಿಕರ ನೇಮಕಾತಿ ವಿಧಾನವನ್ನೇ ಜಾರಿಗೊಳಿಸಬೇಕು;

ಕೊರೊನಾ ನೆಪದಲ್ಲಿ ಎರಡು ವರ್ಷದಿಂದ ನೇಮಕಾತಿ ನಡೆದಿಲ್ಲ. ಹಾಗಾಗಿ ಕೂಡಲೇ ಹೆಚ್ಚಿನ ಸೈನಿಕರ ನೇಮಕಾತಿ ಮಾಡಿಕೊಳ್ಳಬೇಕು. ಪೂರ್ಣಾವಧಿ ಸೈನಿಕರಾಗಿ ಕೆಲಸ ಮಾಡಲು ಅವಕಾಶ ನೀಡಬೇಕು. ಯೋಧರಿಗೆ, ಮಾಜಿ ಯೋಧರಿಗೆ ಸಿಗುವ ಸೌಲಭ್ಯಗಳು ತಮಗೂ ಸಿಗಬೇಕು.

ನಿವೃತ್ತ ಸೈನ್ಯಾಧಿಕಾರಿಗಳ ಆತಂಕವೇನು?

ಪಿಂಚಣಿ ಮತ್ತು ಗ್ರಾಚ್ಯುಟಿಯಂತಹ ಹಣ ಉಳಿಸಲು ದೇಶದ ಭದ್ರತೆಯ ವಿಚಾರದಲ್ಲಿ ರಾಜಿ ಮಾಡಿಕೊಳ್ಳುವುದು ಸರಿಯಲ್ಲ.

ಈ ಯೋಜನೆಯಿಂದ ಅಗ್ನಿವೀರರ ಮುಂದಿನ ಭವಿಷ್ಯ ಅನಿಶ್ಚಿತತೆಯಿಂದ ಕೂಡಿರುವುದರಿಂದ ಸೈನಿಕರ ದಕ್ಷತೆ, ಕಾರ್ಯಕ್ಷಮತೆ, ಹೋರಾಟದ ಮನೋಭಾವವನ್ನು ಕುಂದಿಸುತ್ತದೆ. ಅವರು ಸದಾ ತಮ್ಮ ಮುಂದಿನ ಉದ್ಯೋಗದ ಬಗ್ಗೆ ಯೋಚಿಸುವುದರಿಂದ ನಿಶ್ಚಿಂತೆಯಿಂದ ಪೂರ್ಣಪ್ರಮಾಣದಲ್ಲಿ ದೇಶಸೇವೆ ಮಾಡಲು ಸಾಧ್ಯವಿಲ್ಲ.

ಮುಂದೊಂದು ದಿನ ಸೇನೆಯಲ್ಲಿ ಶೇ.75ರಷ್ಟು ಗುತ್ತಿಗೆ ಸೈನಿಕರು ಮತ್ತು ಯುವಜನರೆ ತುಂಬಿರುತ್ತಾರೆ. ಆಗ ಅನುಭವಿಗಳ ಮತ್ತು ವೃತ್ತಿಪರರ ಕೊರತೆ ಬೀಳುತ್ತದೆ. ಪಾಕ್ ಮತ್ತು ಚೀನಾದಂತಹ ಎದುರಾಳಿಗಳ ಜೊತೆ ಗಡಿ ಹಂಚಿಕೊಂಡಿರುವ ಭಾರತಕ್ಕೆ ಇದು ಒಳ್ಳೆಯದಲ್ಲ.

ಸೇನೆಯಲ್ಲಿ ಎರಡು ವರ್ಗಗಳು ರೂಪುಗೊಂಡು ಅಸಮಾನತೆ ಬೆಳೆಯುತ್ತದೆ. ಶೇ.25ರ ರೆಗ್ಯುಲರ್ ಕೇಡರ್ ಆಗಿ ಆಯ್ಕೆಯಾಗಲು ಅಗ್ನಿವೀರರಲ್ಲೆ ಪೈಪೋಟಿ ನಡೆಯುತ್ತದೆ. ಇದು ಅವರಲ್ಲಿನ ಐಕ್ಯತೆ, ತ್ಯಾಗ, ಪರಸ್ಪರ ಬದ್ಧತೆಯನ್ನು ಹಾಳು ಮಾಡಬಹುದು.

ತರಬೇತಿ ಪಡೆದು ನಿವೃತ್ತಿಯಾದ ಭಾರೀ ನಿರುದ್ಯೋಗ ಪಡೆಯನ್ನು ಸಂಭಾಳಿಸುವುದು ಕಷ್ಟ. ಅವರನ್ನು ಆಡಳಿತ ಪಕ್ಷಗಳು, ಕೆಲ ಸಂಘಟನೆಗಳು ದುರುಪಯೋಗಪಡಿಸಿಕೊಳ್ಳಬಹುದು. ಇದು ನಾಗರಿಕ ಸಮಾಜದ ಮಿಲಿಟರೀಕರಣಕ್ಕೆ, ದೇಶದಲ್ಲಿ ಆಂತರಿಕ ಗಲಭೆಗೆ ಕಾರಣವಾಗಬಹುದು.

ಇತರ ದೇಶಗಳಲ್ಲಿ ನೇಮಕಾತಿ ಪದ್ಧತಿ ಹೀಗಿದೆ

ಸರ್ಕಾರವು ಅಗ್ನಿಪಥ ಯೋಜನೆ ಘೋಷಿಸುವ ವೇಳೆ ರಷ್ಯಾ, ಅಮೆರಿಕ, ಚೀನಾ, ಇಸ್ರೇಲ್, ಇಂಗ್ಲೆಂಡ್ ಮತ್ತು ಫ್ರಾನ್ಸ್ ದೇಶಗಳಲ್ಲಿಯೂ ಇದೇ ಮಾದರಿ ಅನುಸರಿಸಲಾಗುತ್ತಿದೆ ಎಂದು ಹೇಳಿದೆ. ಆದರೆ ಆ ಎಲ್ಲಾ ದೇಶಗಳಿಗಿಂತ ಭಾರತವು ಅತಿ ಹೆಚ್ಚಿನ ಜನಸಂಖ್ಯೆ ಮತ್ತು ಮಿತಿ ಮೀರಿದ ನಿರುದ್ಯೋಗದ ಸಮಸ್ಯೆ ಎದುರಿಸುತ್ತಿದೆ ಎಂಬುದನ್ನು ಸರ್ಕಾರ ಮರೆಮಾಚುತ್ತಿದೆ. ಭಾರತದಲ್ಲಿ ಅಗ್ನಿಪಥ ಯೋಜನೆಗೆ ವಿರೋಧ ಬರುವುದಕ್ಕೆ ಮೂಲ ಕಾರಣ ಇದುವರೆಗೂ ಸಮರ್ಪಕವಾಗಿ ಉದ್ಯೋಗ ಸೃಷ್ಟಿಸದಿರುವುದೇ ಆಗಿದೆ.

ಅಮೆರಿಕ: 4 ವರ್ಷಗಳಿಗೆ ಸೈನಿಕರನ್ನು ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ಜೊತೆಗೆ ನಾಲ್ಕು ವರ್ಷಗಳ ಮೀಸಲು ಕರ್ತವ್ಯ ಪದ್ಧತಿ ಇರುತ್ತದೆ. ಆ ನಂತರ ಸೈನಿಕರು ಪೂರ್ಣಾವಧಿ ಸೇವೆಯನ್ನು ಆಯ್ಕೆ ಮಾಡಿಕೊಳ್ಳಬಹುದು. (ಇಲ್ಲಿ ಅವರನ್ನು ತೆಗೆಯುವುದಿಲ್ಲ ಬದಲಿಗೆ ಪೂರ್ಣಾವಧಿಗೆ ಮುಂದುವರೆಯಲು ಉತ್ತೇಜಿಸಲಾಗುತ್ತದೆ.) 20 ವರ್ಷ ಸೇವೆ ಸಲ್ಲಿಸಿದವರಿಗೆ ಪಿಂಚಣಿ ಮತ್ತಿತರ ಸೌಲಭ್ಯಗಳು ದೊರಕುತ್ತವೆ.

ಚೀನಾ: ಚೀನಾದಲ್ಲಿ ಸೇನೆಗೆ ಸೇರುವ ಕಡ್ಡಾಯ ಪದ್ದತಿಯಿದೆ. ಪ್ರತಿ ವರ್ಷ 4.5 ಲಕ್ಷ ಕಡ್ಡಾಯ ಸೈನಿಕರನ್ನು ನೇಮಿಸಿಕೊಂಡು ಒಂದು ವರ್ಷದ ತರಬೇತಿ ನೀಡಲಾಗುತ್ತದೆ. ಅವರು ಕನಿಷ್ಟ 2 ವರ್ಷ ಕಡ್ಡಾಯ ಸೇವೆ ನೀಡಬೇಕಿದೆ. ಇಸ್ರೇಲ್ ಕೂಡ ಇದೇ ಮಾದರಿಯನ್ನು ಅನುಸರಿಸುತ್ತಿದೆ.

ರಷ್ಯಾ: ರಷ್ಯಾದಲ್ಲಿ ಹೈಬ್ರಿಡ್ ಕಡ್ಡಾಯ ಮಾದರಿಯ ಕಾಂಟ್ರಾಕ್ಟ್ ಪದ್ದತಿ ಅಳವಡಿಸಿಕೊಂಡಿದೆ. ಕಡ್ಡಾಯ ಪದ್ಧತಿಯಡಿ ನೇಮಕಗೊಂಡವರಿಗೆ ಒಂದು ವರ್ಷದ ತರಬೇತಿ ನೀಡಿ ಅವರನ್ನು ಮೀಸಲಾಗಿರಿಸುತ್ತದೆ. ಅವರಿಂದಲೇ ಸೈನ್ಯಕ್ಕೆ ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ಸೈನಿಕರು ಕಾಲೇಜಿಗೆ ದಾಖಲಾಗಲು, ಮಿಲಿಟರಿ ಸಂಸ್ಥೆಗಳಲ್ಲಿ ಶಿಕ್ಷಣ ಪಡೆಯಲು ಅವಕಾಶವಿದೆ.

ಫ್ರಾನ್ಸ್: ಇಲ್ಲಿ ಗುತ್ತಿಗೆ ಆಧಾರದಲ್ಲಿ ಹಲವಾರು ವಿಧಾನಗಳಲ್ಲಿ ಸೈನಿಕರನ್ನು ನೇಮಕ ಮಾಡಿಕೊಳ್ಳಲಾಗುತ್ತದೆ. ಒಂದು ವರ್ಷದಿಂದ 5 ವರ್ಷದವರೆಗೆ ವಿಸ್ತರಿಸಬಹುದಾದ ಪದ್ಧತಿ ಅಲ್ಲಿದೆ.

ಈ ಎಲ್ಲಾ ದೇಶಗಳಲ್ಲಿ ನಿರುದ್ಯೋಗ ಸಮಸ್ಯೆ ಕೂಡ ಭಾರತಕ್ಕಿಂತ ತೀರಾ ಕಡಿಮೆಯಿದೆ. ಅಲ್ಲಿ ಸೈನಿಕರಾಗಲು ಪ್ರೋತ್ಸಾಹ ನೀಡಲಾಗುತ್ತಿದೆಯೆ ಹೊರತು ಬೇಡ ಎನ್ನುತ್ತಿಲ್ಲ. ಬದಲಿಗೆ ಭಾರತದಲ್ಲಿ ಲಕ್ಷಾಂತರ ಜನರು ಸೈನ್ಯಕ್ಕೆ ಸೇರಲು ದಂಡು ನೆರೆದಿದ್ದಾಗಲೂ ಕೆಲವರನ್ನಷ್ಟೇ ಕೇವಲ 4 ವರ್ಷಗಳ ಅವಧಿಗೆ ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳಲು ಮುಂದಾಗಿರುವುದು ಅಸಮಾಧಾನಕ್ಕೆ ಕಾರಣವಾಗಿದೆ.

ಉಳಿದುಹೋದ ಪ್ರಶ್ನೆಗಳು

ಈಗಿನ ಭಾರತೀಯ ಸೇನೆಯ ಸರಾಸರಿ ವಯಸ್ಸು 32 ಇರುವುದು ತಾರುಣ್ಯ, ಯೌವ್ವನದ ಸಂಕೇತವಲ್ಲವೇ?

ಬಿಜೆಪಿಯಲ್ಲಿ ಅಧಿಕಾರಕ್ಕೆ 75 ವರ್ಷಕ್ಕೆ ನಿವೃತ್ತಿಯಿದೆ. ಉಳಿದಂತೆ ಸರ್ಕಾರಿ ಹುದ್ದೆಗಳಲ್ಲಿ ಸರಾಸರಿ ನಿವೃತ್ತಿ ವಯಸ್ಸು 60 ಇದೆ. ನಮಗೆ ಮಾತ್ರ 25 ವರ್ಷದ ಒಳಗೆ ನಿವೃತ್ತಿ ಏಕೆ? ಇದು ಯಾವ ನ್ಯಾಯ ಎನ್ನುವುದು ಯುವಜನರ ಪ್ರಶ್ನೆ

ಆರ್ಥಿಕ ಮುಗ್ಗಟ್ಟು ಇದ್ದರೆ ಶಾಸಕರು, ಸಂಸದರು ತಮ್ಮ ಪಿಂಚಣಿ ಬಿಡಲಿ. ಪ್ರಾಣದ ಹಂಗು ತೊರೆದು ಹೋರಾಡುವ ಸೈನಿಕರ ಜೇಬಿಗೆ ಕತ್ತರಿ ಹಾಕುವುದು ಏಕೆ?

ನಿಜವಾಗಿಯೂ ಆರ್ಥಿಕ ಸಂಕಷ್ಟವಿದ್ದರೆ ಅದಾನಿ, ಅಂಬಾನಿ ಥರದ ದೊಡ್ಡ ಬಂಡವಾಳಿಗರಿಗೆ ಲಕ್ಷಾಂತರ ಕೋಟಿ ರೂ ರೈಟ್ ಆಫ್, ಎನ್‌ಪಿಎ (ಸಾಲ ಮನ್ನ) ಮಾಡುವುದೇಕೆ? ಇಂತಹ 1% ಅತಿ ದೊಡ್ಡ ಶ್ರೀಮಂತರಿಗೆ ಹೆಚ್ಚಿನ ತೆರಿಗೆ ವಿಧಿಸಬಾರದೇಕೆ?


ಇದನ್ನೂ ಓದಿ: ಅಗ್ನಿಪಥ್‌ ಹಿಂಪಡೆಯುವ ಪ್ರಶ್ನೆಯೆ ಇಲ್ಲ: ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ದೋವಲ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...